Homeಕರ್ನಾಟಕಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

ಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

- Advertisement -
- Advertisement -

ರೋಹಿತ್ ಚಕ್ರತೀರ್ಥ ನಾಡಗೀತೆಗೆ ಮಾಡಿದ ಅವಮಾನ ರಸಋಷಿ ಕವಿ ಕುವೆಂಪುರವರಿಗೆ ಮಾಡಿದ ಅವಮಾನವಾಗಿ ಕಂಡ ಕೂಡಲೇ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಕವಿಶೈಲದಿಂದ ತೀರ್ಥಹಳ್ಳಿಗೆ ಪ್ರತಿಭಟನಾ
ಜಾಥಾವನ್ನು ಘೋಷಿಸಿದರು. ಜೊತೆಗೆ, ಹಿಂದಿನ ಸರಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಅವರಿಗೆ ಪಠ್ಯ ಪುಸ್ತಕ ಪರಿಷ್ಕರಣೆಯು ಒಂದು ಹಗರಣವಾಗಿ ಕಂಡಿತ್ತು. ಮೊದಲು ಅದರ ಕೂಲಂಕುಷ ಅಧ್ಯಯನ ಮಾಡಿದರು. ಸರಕಾರ ಮಾಡಿರುವ ನಯವಂಚನೆಯ ಕೆಲಸಗಳು ಮತ್ತು ಎಡವಟ್ಟುಗಳನ್ನು ಜನರಿಗೆ ಹೇಳುತ್ತಾ ಬಂದರು. ಇನ್ನೊಂದು ಮುಖ್ಯವಾದ ವಿಷಯವೆಂದರೆ ಕಿಮ್ಮನೆ ರತ್ನಾಕರ್ ಕೇವಲ ರಾಜಕಾರಣಿಯಾಗಿರದೆ ಗಂಭೀರ ಅಧ್ಯಯನಶೀಲ ವಿದ್ವಾಂಸರು. ಅವರು ಕರ್ನಾಟಕ ಸರಕಾರ ಈವರೆಗೆ ಮಂಡಿಸಿರುವ ಎಲ್ಲಾ ಬಜೆಟ್‌ಗಳ ಒಳಹೊರಗಗಳನ್ನು ಅಧ್ಯಯನ ಮಾಡಿರುವ ರಾಜಕಾರಣಿ. ಅವರು ಸಾರ್ವಜನಿಕರಿಗೆ ವಿಧಾನಸೌಧದ ಲೈಬ್ರರಿಯಲ್ಲಿ ಸಿಗುತ್ತಿದ್ದುದೇ ಹೆಚ್ಚು. ಮತ್ತೊಂದು ವಿಶೇಷವೆಂದರೆ ಅವರು ಕೋಣಂದೂರು ಲಿಂಗಪ್ಪನವರು ಶಾಸಕರಾಗಿದ್ದ ಅವಧಿಯಲ್ಲಿ ಅವರ ಸಹಾಯಕರಾಗಿದ್ದು. ಆಗಿನಿಂದಲೇ ವಿಧಾನಸೌಧದ ಗ್ರಂಥಾಲಯವನ್ನ ಉಪಯೋಗಿಸಿಕೊಂಡವರು. ಮತ್ತೊಬ್ಬ ಜನನಾಯಕ ಶಾಂತವೇರಿ ಗೋಪಾಲಗೌಡರ ಕಾರ್ಯಕ್ಷೇತ್ರವಾದ ತೀರ್ಥಹಳ್ಳಿಯಿಂದ ಆರಿಸಿಬಂದರು. ದುರಂತವೆಂದರೆ ಗೋಪಾಲಗೌಡರು ಊರಾದ ಆರಗದಿಂದಲೇ ಆರಸಿಬಂದ ಆರಗ ಜ್ಞಾನೇಂದ್ರರ ಮತೀಯವಾದಿ ರಾಜಕಾರಣ ಎದುರಿಸುವುದು ತುಂಬ ದುಸ್ತರವಾಯಿತು. ಕಿಮ್ಮನೆ ನೈತಿಕ ಜವಾಬ್ದಾರಿಯಿಂದ ರಾಜಕಾರಣ ಮಾಡಿದರೆ, ಆರಗ ಮತೀಯ ಮತ್ತು ಒಡೆಯುವ ರಾಜಕಾರಣ ಮಾಡುತ್ತ ಬಂದರು. ಕ್ರಮೇಣ ಗೋಪಾಲಗೌಡರ ತಲೆಮಾರು ಕರಗುತ್ತ ಬಂದರೆ, ಇತ್ತ ಮತೀಯವಾದ ತಲೆ ಎತ್ತುತ್ತಾ ಬಲಗೊಳ್ಳುತ್ತಾ ಬಂತು. ವಿಚಿತ್ರವೆಂದರೆ ಆರಗ ಮತ್ತು ಕಿಮ್ಮನೆ ಇಬ್ಬರೂ ಕುವೆಂಪು ಕಾವ್ಯದ ನೆಲೆಬೀಡಿನಿಂದ ಬಂದವರೇ ಆದರೂ ಕುವೆಂಪು ಅವರಿಗೆ ಬಿಜೆಪಿ ಮಾಡಿರುವ ಅವಮಾನ ಆರಗರಿಗೆ ಇವತ್ತಿಗೂ ಆಕ್ರೋಶ ತರಿಸಿಲ್ಲ. ಕನಿಷ್ಟ ಪಕ್ಷ ಬೇಸರವೂ ಅವರ ಹತ್ತಿರ ಸುಳಿದಂತೆ ಕಂಡಿಲ್ಲ.

ಕಿಮ್ಮನೆ ರತ್ನಾಕರ್

ಕಿಮ್ಮನೆಯವರು ಕುವೆಂಪುರವರ ಸಮಗ್ರ ಸಾಹಿತ್ಯ ಓದಿಕೊಂಡಿರುವುದಲ್ಲದೆ ಕವಿಯ ವಿಚಾರ ಕ್ರಾಂತಿಯನ್ನು ಅಳವಡಿಸಿಕೊಂಡವರು. ಆದ್ದರಿಂದ, ನಾಡಗೀತೆ ತಿರುಚಿ ಆಡಿಕೊಂಡಿದ್ದೂ ಅಲ್ಲದೆ, ಸರ್ವ ಜನಾಂಗದ ಮಕ್ಕಳು ಓದುವಂತಹ ಪಠ್ಯ ತಿರುಚಿದ್ದು ಅವರನ್ನ ಸಹಜವಾಗಿ ಕೆರಳಿಸಿತು. ಕೂಡಲೇ ಈ ಸಂಬಂಧವಾದ ಪ್ರತಿಭಟನೆಯನ್ನು ಮಾಡುವ ತೀರ್ಮಾನ ತೆಗೆದುಕೊಂಡು ಬೆಂಗಳೂರಿಗೆ ಹೋದರು. ಅಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ, ನಿಮ್ಮ ಕಾರ್ಯಕ್ರಮ ಮತ್ತು ಜಾಥಾದಲ್ಲಿ ಸಾಹಿತಿ ಮತ್ತು ಕಲಾವಿದರು ಮುಂಚೂಣಿಯಲ್ಲಿದ್ದು ನೀವು ಹಿನ್ನೆಲೆಯಲ್ಲಿರಿ, ಇದು ಸಾಂಸ್ಕೃತಿಕ ಲೋಕದ ಪ್ರತಿಭಟನೆ ಆದ್ದರಿಂದ ಇಲ್ಲಿ ರಾಜಕಾರಣಿಗಳು ಹಿನ್ನೆಲೆಗೆ ಸರಿದು ಸಾಂಸ್ಕೃತಿಕ ಲೋಕದವರು ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಿ ಎಂದು ಹೇಳಿದರು. ಇದನ್ನು ಒಪ್ಪಿಕೊಂಡು ಬಂದ ಕಿಮ್ಮನೆ 15ನೇ ಜೂನ್ ಮುಂಜಾನೆ ಏಳು ಗಂಟೆಗೆ ಕವಿಶೈಲದಿಂದ ತೀರ್ಥಹಳ್ಳಿಗೆ ಜಾಥಾ ನಿಗದಿಗೊಳಿಸಿದರು. ನಾಡಿನ ಮೂಲೆಮೂಲೆಯಿಂದ ಬರಹಗಾರರು, ಕಲಾವಿದರು, ವಿದ್ವಾಂಸರು ರಾತ್ರಿಯೇ ಬಂದು ಕವಿಶೈಲದಲ್ಲಿ ತಂಗಿದ್ದು, ಜಾಥಾಗೆ ಸಿದ್ಧರಾದರು. ಕವಿಶೈಲ ಒಂದು ರೀತಿ ನಳನಳಿಸುತ್ತಿತ್ತು.

ಕವಿವರ್ಣನೆಯ ಕಗ್ಗಾಡಿನ ನಡುವೆ ತೇಜಸ್ವಿ, ಸಿದಾರ್ಥ, ಕೆ.ಟಿ ಶಿವಪ್ರಸಾದ್ ಮತ್ತು ಅಂದಿನ ಸರಕಾರದ ನೆರವಿನಿಂದ ರಚನೆಗೊಂಡ ಕವಿ ಸಮಾಧಿಯ ಸುತ್ತ ನೆರೆದಿರುವ ಸಸ್ಯರಾಶಿಯ ದೆಸೆಯಿಂದ ಇಲ್ಲೊಂದು ಆಹ್ಲಾದಕರ ತಂಪು ಆವರಿಸಿದೆ. ಇಲ್ಲಿ ಮಾತುಗಳು ಏಕಾಂತವನ್ನು ಕಲಕುವಂತೆ ಕಾಣುವುದರಿಂದ ಯಾರೂ ಮಾತನಾಡುವುದಿಲ್ಲ. ಆದ್ದರಿಂದ ಕವಿ ಸಮಾಧಿಯ ಎದುರು ಸಿಕ್ಕಿದ ಹಂಸಲೇಖ, ಎಸ್. ಜಿ. ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು, ರುದ್ರಪ್ಪ, ಅಕ್ಷತಾ, ಕಿಮ್ಮನೆ ಅಲ್ಲದೆ ಇನ್ನು ಹತ್ತಾರು ಜನ ಕವಿ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮಂಜುನಾಥ್, ದಲಿತ ಸಂಘರ್ಷ ಸಮಿತಿ ಗುರುಮೂರ್ತಿ, ರೈತ ಸಂಘದ ಕೆ.ಟಿ.ಗಂಗಾಧರ್ ಹೀಗೆ ಹಲವು ಸಂಘಟನೆಗಳ ಅಧ್ಯಕ್ಷರು-ಸಂಚಾಲಕರು ಕವಿಸಮಾಧಿಗೆ ನಮಿಸಿ ಹೊರಟಾಗ ಅದೊಂದು ನದಿಮೂಲದ ಸೆಲೆಯಂತೆ ಕಂಡಿತು. ಕವಿಶೈಲದ ಕೆಳಗಿಳಿದು ಬಂದ ಕೂಡಲೇ ಕಾಣುವ ತೇಜಸ್ವಿಯ ಸಮಾಧಿಯ ಸ್ಥಂಭಗಳು ಆಯ್ತು ಹೋಗಿ ಬನ್ನಿ ಎನ್ನುವಂತಿದ್ದವು.

ಕವಿಯ ಶತಮಾನ ಭವನದ ಎದುರು ಎಲ್ಲರೂ ತಿಂಡಿತಿಂದು ಹೊರಟರು. ಕವಿಶೈಲದಿಂದ ತೀರ್ಥಹಳ್ಳಿಗೆ ಹದಿನೆಂಟು ಕಿಲೋಮೀಟರ್ ದೂರವಿದ್ದುದರಿಂದ ಜಾಥ ಅಕ್ಷೋಹಿಣಿ ಸೈನ್ಯದಂತಾಯಿತು. ತೀರ್ಥಹಳ್ಳಿಯ ಸುತ್ತಮುತ್ತಲ ಊರಿನ ಜನರು ಜೊತೆಗೆ ಬಂದು ಸೇರಿಕೊಂಡಿದ್ದಲ್ಲದೆ ನಾಡಿನ ಮೂಲೆಮೂಲೆಯಿಂದ ಬಂದವರೆಲ್ಲಾ ಸೇರುತ್ತಾ ಕೇವಲ 50 ಜನರಿಂದ ಆರಂಭಗೊಂಡ ಜಾಥಾ ಸಾವಿರಾರು ಜನರೊಡಗೂಡಿ ಮೈಲಿಗಟ್ಟಲೆ ವಿಸ್ತರಿಸಿತು. ಕವಿಶೈಲದಿಂದ ದೇವಂಗಿವರೆಗೆ 9 ಕಿಲೋಮೀಟರ್. ಅಲ್ಲಿ ಎಲ್ಲರಿಗೂ ತಿಂಡಿ ಮತ್ತು ಕಾಫಿ ಟೀ ವ್ಯವಸ್ಥೆ ಮಾಡಿದ್ದರು. ಆ ಪ್ರದೇಶಕ್ಕೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿ.ಕೆ.ಹರಿಪ್ರಸಾದ್ ಬಂದು ಸೇರಿಕೊಂಡಿದ್ದರಿಂದ, ನಡಿಗೆಯವರ ಕಾಲಿಗೆ ಮತ್ತಷ್ಟು ಬಿರುಸು ಬಂತು. ದೇವಂಗಿಯಿಂದ ಹೊರಟವರಿಗೆ ತೀರ್ಥಹಳ್ಳಿ ಬಂದಿದ್ದೇ ತಿಳಿಯಲಿಲ್ಲ. ಕವಿ ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು ಮತ್ತು ಅಕ್ಷತಾ ಜಾಥಾ ಆರಂಭಿಸಿದಾಗಿನ ನಡಿಗೆಯ ಉತ್ಸಾಹವನ್ನು ತೀರ್ಥಹಳ್ಳಿ ತಲುಪಿದರೂ ಕಳೆದುಕೊಂಡಿರಲಿಲ್ಲ. ಕಿಮ್ಮನೆಯವರು ತೀರ್ಥಹಳ್ಳಿಯಿಂದ ಕವಿಶೈಲಕ್ಕಿರುವ ದೂರ ಮತ್ತು ಜಾಥಾ ಹೊರಡುವ ಸಮಯ ಹಾಗೂ ಚಳವಳಿಗಾರರು ತೀರ್ಥಹಳ್ಳಿ ತಲುಪಿದ ಕೂಡಲೇ ಊಟ ಮಾಡಿ ಸಭಾಂಗಣಕ್ಕೆ ಬರುವ ಸಮಯವನ್ನು ಕರಾರುವಾಕ್ಕಾಗಿ ನಿಗದಿ ಮಾಡಿದ್ದರಿಂದ ಎಲ್ಲವೂ ನಿಗದಿಯಂತೆ ನಡೆಯಿತು.

ಕವಿಶೈಲ

ಸಮಯಕ್ಕೆ ಸರಿಯಾಗಿ ಆಕಾಶ ಮಾರ್ಗದಿಂದ ಇಳಿದು ಬಂದ ಸಿದ್ದರಾಮಯ್ಯ, ತೀರ್ಥಹಳ್ಳಿ ಬಸ್ಟಾಂಡಿನಲ್ಲಿ ಜಾಥಾ ಸೇರಿಕೊಂಡರು. ಆ ಕೂಡಲೇ ಮೈಕಿನವರು ಟಗರು ಹಾಡನ್ನ ಹಾಕಿದರು. ಸಿದ್ದು ಹಿಂಬಾಲಕರು ಕುಣಿದು ಶಿಳ್ಳೆ ಹೊಡೆದರು. ತೀರ್ಥಹಳ್ಳಿ ಪಟ್ಟಣದ ಪಕ್ಕದ ಮೈದಾನದಲ್ಲಿ ಸಭೆ ಏರ್ಪಾಟಾಗಿದ್ದರಿಂದ ಎಲ್ಲಾ ಸಂಘಟನೆಯ ಲೀಡರುಗಳಲ್ಲದೆ, ನಿರಂಜನಾರಾಧ್ಯ, ವೈ.ಎಸ್.ವಿ ದತ್ತ ಬಂದು ವೇದಿಕೆ ಮೇಲೆ ಕುಳಿತಾಗ, ಜಾಥಾದ ರೂವಾರಿ ಕಿಮ್ಮನೆ ಜನರ ಮಧ್ಯೆ ಕುಳಿತಿದ್ದರು. ಅವರನ್ನ ಬಲವಂತವಾಗಿ ವೇದಿಕೆಗೆ ಕರೆದಾಗ ಪ್ರಾಸ್ತಾವಿಕವಾಗಿ ಮಾತನಾಡಿದ ಕಿಮ್ಮನೆ, ಮೊದಲ ಬಾರಿಗೆ ಭಾವುಕರಾದರು. ಜೊತೆಗೆ ಕಾರ್ಯಕ್ರಮಕ್ಕೆ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆಯದೆ ತಾನೇ ಏರ್ಪಾಟು ಮಾಡಿರುವುದರಿಂದ ಸಾಹಿತಿಗಳು-ಕಲಾವಿದರು-ಸಾಮಾಜಿಕ ಕಾರ್ಯಕರ್ತರು ಯಾವುದೇ ಅಂಜಿಕೆಯಿಲ್ಲದೆ ಮುಕ್ತವಾಗಿ ಮಾತನಾಡಬಹುದೆಂದು ಹೇಳಿದರು. ಸುಮಾರು ಮೂರು ಗಂಟೆ ನಡೆದ ಸಮಾರಂಭದಲ್ಲಿ ಎಲ್ಲ ಸಂಘಟನೆಯವರೂ ಮಾತನಾಡಿದರೆ, ನಿರಂಜನಾರಾಧ್ಯರ ಭಾಷಣ ಜಾಥಾ ಜನಗಳನ್ನ ಚಿಂತನೆಗೆ ಹಚ್ಚಿ, ಸರಕಾರ ಮತ್ತು ಪಠ್ಯ ತಿರುಚಿದವರ ಭಂಡತನವನ್ನು ಅನಾವರಣ ಮಾಡಿತು.

ಸಿದ್ದರಾಮಯ್ಯನವರು ಭಾಷಣ ಮಾಡುತ್ತ, ’ಕಿಮ್ಮನೆ ಅತ್ಯಂತ ಸಜ್ಜನ ರಾಜಕಾರಣಿ, ಅವರನ್ನು ಸಂಪುಟದಿಂದ ತೆಗೆದಾಗ ಸರಕಾರದ ಎಲ್ಲ ಸವಲತ್ತನ್ನು ತ್ಯಜಿಸಿ, ಸ್ವಂತ ಕಾರಿನಲ್ಲಿ ಮನೆಗೆ ಹೋದವರು. ನಾನು ಭೇಟಿ ಮಾಡಿ ಬೇಸರವಾಯ್ತೆ ಎಂದು ಕೇಳಿದಾಗ, ಬೇಸರವೇನು ಇಲ್ಲ ಸಾರ್, ಬೇರೆಯವರಿಗೂ ಅನುಕೂಲ ಆಯ್ತಲ್ಲ ಬಿಡಿ ಎಂದರು’ ಎಂದು ಹೇಳಿದ್ದಲ್ಲದೆ, ’ಈ ಸಮಾವೇಶವನ್ನು ಕೂಡ ಅವರು ರಾಜಕಾರಣಕ್ಕಾಗಿ ಏರ್ಪಡಿಸಿದವರಲ್ಲ. ಇದರಿಂದ ತಮ್ಮ ಚುನಾವಣೆಗೆ ಅನುಕೂಲವಾಗುತ್ತದೆಂದು ಅವರು ಭಾವಿಸಿಲ್ಲ’ ಎಂದರು.

ತೀರ್ಥಹಳ್ಳಿ ಕಾರ್ಯಕ್ರಮದ ಸಮಯದಲ್ಲೇ ಬೆಂಗಳೂರಲ್ಲಿ ನಡೆಯುವ ಪ್ರತಿಭಟನೆಗೆ ದೇವೇಗೌಡರು ಬರುತ್ತಾರೆಂಬ ಸುದ್ದಿ ಸಂಚಲನವುಂಟು ಮಾಡಿತು. ಅದರಂತೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದೇವೆಗೌಡರು, ಗೋಕಾಕ್ ಚಳವಳಿ ಮಾದರಿಯ ಹೋರಾಟದ ಅಗತ್ಯವಿದೆ ಎಂದು ಹೇಳಿದ್ದಾರೆ. ಆದ್ದರಿಂದ ನಾಡಿನ ಜನತೆ ಗೋಕಾಕ್ ಮಾದರಿಯ ಚಳವಳಿಗೆ ತಯಾರಾಗಬೇಕಿದೆ; ಅದೀಗ ಅನಿವಾರ್ಯ.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...

ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್‌ನಿಂದ ತೈಲ ಖರೀದಿಸಿದ ಭಾರತ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸರಬರಾಜಿನಲ್ಲಿ ಅಡ್ಡಿ ಉಂಟಾಗಿರುವ ಮಧ್ಯೆ, ಭಾರತೀಯ ಸಂಸ್ಕರಣಾಗಾರರು ಇರಾನ್ ತೈಲವನ್ನು ಖರೀದಿಸಿದ್ದಾರೆ ಎಂದು ತೈಲ ಸಚಿವಾಲಯ ಶನಿವಾರ (ಏ.4) ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ವಿಶ್ವದ...

ಉತ್ತರ ಪ್ರದೇಶ: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮದರಸಾ ಶಿಕ್ಷಕರ ಬಂಧನ

ಹತ್ತು ವರ್ಷದ ವಿದ್ಯಾರ್ಥಿಯೊಬ್ಬನನ್ನು ಥಳಿಸಿದ ಆರೋಪದ ಮೇಲೆ ಇಬ್ಬರು ಮದರಸಾ ಶಿಕ್ಷಕರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.  ಈ ಸಂಬಂಧ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ದಿನಾಂಕವಿಲ್ಲದ ವೀಡಿಯೊದಲ್ಲಿ ಒಬ್ಬ ಮದರಸಾ...

ಕೊಡಗು | ಚಾರಣಕ್ಕೆ ತೆರಳಿದ್ದ ಯುವತಿ ನಾಪತ್ತೆ ಪ್ರಕರಣ : 3 ದಿನ ಕಳೆದರೂ ಸಿಗದ ಸುಳಿವು, ಎಎನ್‌ಎಫ್‌ನಿಂದ ತೀವ್ರ ಶೋಧ

ಕೊಡಗು ಜಿಲ್ಲೆಯ ಕಕ್ಕಬ್ಬೆ ಸಮೀಪದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಯುವತಿಯೊಬ್ಬರು ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವ ಯುವತಿಯನ್ನು ಕೇರಳದ...

ಭವಿಷ್ಯದ ಸಂಘರ್ಷದಲ್ಲಿ ಪಾಕಿಸ್ತಾನ ಕೋಲ್ಕತ್ತಾ ಮೇಲೆ ದಾಳಿ ಮಾಡುತ್ತದೆ: ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್

 ಲಾಹೋರ್: ಭವಿಷ್ಯದಲ್ಲಿ ಯಾವುದೇ ದುಸ್ಸಾಹಸಗಳು ನಡೆದರೆ ಕೋಲ್ಕತ್ತಾದಲ್ಲಿ ದಾಳಿ ನಡೆಸುವ ಮೂಲಕ ಭಾರತಕ್ಕೆ ಪ್ರತ್ಯುತ್ತರ ನೀಡುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. "ಈ ಬಾರಿ ಭಾರತ ಯಾವುದೇ ಸುಳ್ಳು...