Homeಕರ್ನಾಟಕಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

ಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

- Advertisement -
- Advertisement -

ರೋಹಿತ್ ಚಕ್ರತೀರ್ಥ ನಾಡಗೀತೆಗೆ ಮಾಡಿದ ಅವಮಾನ ರಸಋಷಿ ಕವಿ ಕುವೆಂಪುರವರಿಗೆ ಮಾಡಿದ ಅವಮಾನವಾಗಿ ಕಂಡ ಕೂಡಲೇ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಕವಿಶೈಲದಿಂದ ತೀರ್ಥಹಳ್ಳಿಗೆ ಪ್ರತಿಭಟನಾ
ಜಾಥಾವನ್ನು ಘೋಷಿಸಿದರು. ಜೊತೆಗೆ, ಹಿಂದಿನ ಸರಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಅವರಿಗೆ ಪಠ್ಯ ಪುಸ್ತಕ ಪರಿಷ್ಕರಣೆಯು ಒಂದು ಹಗರಣವಾಗಿ ಕಂಡಿತ್ತು. ಮೊದಲು ಅದರ ಕೂಲಂಕುಷ ಅಧ್ಯಯನ ಮಾಡಿದರು. ಸರಕಾರ ಮಾಡಿರುವ ನಯವಂಚನೆಯ ಕೆಲಸಗಳು ಮತ್ತು ಎಡವಟ್ಟುಗಳನ್ನು ಜನರಿಗೆ ಹೇಳುತ್ತಾ ಬಂದರು. ಇನ್ನೊಂದು ಮುಖ್ಯವಾದ ವಿಷಯವೆಂದರೆ ಕಿಮ್ಮನೆ ರತ್ನಾಕರ್ ಕೇವಲ ರಾಜಕಾರಣಿಯಾಗಿರದೆ ಗಂಭೀರ ಅಧ್ಯಯನಶೀಲ ವಿದ್ವಾಂಸರು. ಅವರು ಕರ್ನಾಟಕ ಸರಕಾರ ಈವರೆಗೆ ಮಂಡಿಸಿರುವ ಎಲ್ಲಾ ಬಜೆಟ್‌ಗಳ ಒಳಹೊರಗಗಳನ್ನು ಅಧ್ಯಯನ ಮಾಡಿರುವ ರಾಜಕಾರಣಿ. ಅವರು ಸಾರ್ವಜನಿಕರಿಗೆ ವಿಧಾನಸೌಧದ ಲೈಬ್ರರಿಯಲ್ಲಿ ಸಿಗುತ್ತಿದ್ದುದೇ ಹೆಚ್ಚು. ಮತ್ತೊಂದು ವಿಶೇಷವೆಂದರೆ ಅವರು ಕೋಣಂದೂರು ಲಿಂಗಪ್ಪನವರು ಶಾಸಕರಾಗಿದ್ದ ಅವಧಿಯಲ್ಲಿ ಅವರ ಸಹಾಯಕರಾಗಿದ್ದು. ಆಗಿನಿಂದಲೇ ವಿಧಾನಸೌಧದ ಗ್ರಂಥಾಲಯವನ್ನ ಉಪಯೋಗಿಸಿಕೊಂಡವರು. ಮತ್ತೊಬ್ಬ ಜನನಾಯಕ ಶಾಂತವೇರಿ ಗೋಪಾಲಗೌಡರ ಕಾರ್ಯಕ್ಷೇತ್ರವಾದ ತೀರ್ಥಹಳ್ಳಿಯಿಂದ ಆರಿಸಿಬಂದರು. ದುರಂತವೆಂದರೆ ಗೋಪಾಲಗೌಡರು ಊರಾದ ಆರಗದಿಂದಲೇ ಆರಸಿಬಂದ ಆರಗ ಜ್ಞಾನೇಂದ್ರರ ಮತೀಯವಾದಿ ರಾಜಕಾರಣ ಎದುರಿಸುವುದು ತುಂಬ ದುಸ್ತರವಾಯಿತು. ಕಿಮ್ಮನೆ ನೈತಿಕ ಜವಾಬ್ದಾರಿಯಿಂದ ರಾಜಕಾರಣ ಮಾಡಿದರೆ, ಆರಗ ಮತೀಯ ಮತ್ತು ಒಡೆಯುವ ರಾಜಕಾರಣ ಮಾಡುತ್ತ ಬಂದರು. ಕ್ರಮೇಣ ಗೋಪಾಲಗೌಡರ ತಲೆಮಾರು ಕರಗುತ್ತ ಬಂದರೆ, ಇತ್ತ ಮತೀಯವಾದ ತಲೆ ಎತ್ತುತ್ತಾ ಬಲಗೊಳ್ಳುತ್ತಾ ಬಂತು. ವಿಚಿತ್ರವೆಂದರೆ ಆರಗ ಮತ್ತು ಕಿಮ್ಮನೆ ಇಬ್ಬರೂ ಕುವೆಂಪು ಕಾವ್ಯದ ನೆಲೆಬೀಡಿನಿಂದ ಬಂದವರೇ ಆದರೂ ಕುವೆಂಪು ಅವರಿಗೆ ಬಿಜೆಪಿ ಮಾಡಿರುವ ಅವಮಾನ ಆರಗರಿಗೆ ಇವತ್ತಿಗೂ ಆಕ್ರೋಶ ತರಿಸಿಲ್ಲ. ಕನಿಷ್ಟ ಪಕ್ಷ ಬೇಸರವೂ ಅವರ ಹತ್ತಿರ ಸುಳಿದಂತೆ ಕಂಡಿಲ್ಲ.

ಕಿಮ್ಮನೆ ರತ್ನಾಕರ್

ಕಿಮ್ಮನೆಯವರು ಕುವೆಂಪುರವರ ಸಮಗ್ರ ಸಾಹಿತ್ಯ ಓದಿಕೊಂಡಿರುವುದಲ್ಲದೆ ಕವಿಯ ವಿಚಾರ ಕ್ರಾಂತಿಯನ್ನು ಅಳವಡಿಸಿಕೊಂಡವರು. ಆದ್ದರಿಂದ, ನಾಡಗೀತೆ ತಿರುಚಿ ಆಡಿಕೊಂಡಿದ್ದೂ ಅಲ್ಲದೆ, ಸರ್ವ ಜನಾಂಗದ ಮಕ್ಕಳು ಓದುವಂತಹ ಪಠ್ಯ ತಿರುಚಿದ್ದು ಅವರನ್ನ ಸಹಜವಾಗಿ ಕೆರಳಿಸಿತು. ಕೂಡಲೇ ಈ ಸಂಬಂಧವಾದ ಪ್ರತಿಭಟನೆಯನ್ನು ಮಾಡುವ ತೀರ್ಮಾನ ತೆಗೆದುಕೊಂಡು ಬೆಂಗಳೂರಿಗೆ ಹೋದರು. ಅಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ, ನಿಮ್ಮ ಕಾರ್ಯಕ್ರಮ ಮತ್ತು ಜಾಥಾದಲ್ಲಿ ಸಾಹಿತಿ ಮತ್ತು ಕಲಾವಿದರು ಮುಂಚೂಣಿಯಲ್ಲಿದ್ದು ನೀವು ಹಿನ್ನೆಲೆಯಲ್ಲಿರಿ, ಇದು ಸಾಂಸ್ಕೃತಿಕ ಲೋಕದ ಪ್ರತಿಭಟನೆ ಆದ್ದರಿಂದ ಇಲ್ಲಿ ರಾಜಕಾರಣಿಗಳು ಹಿನ್ನೆಲೆಗೆ ಸರಿದು ಸಾಂಸ್ಕೃತಿಕ ಲೋಕದವರು ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಿ ಎಂದು ಹೇಳಿದರು. ಇದನ್ನು ಒಪ್ಪಿಕೊಂಡು ಬಂದ ಕಿಮ್ಮನೆ 15ನೇ ಜೂನ್ ಮುಂಜಾನೆ ಏಳು ಗಂಟೆಗೆ ಕವಿಶೈಲದಿಂದ ತೀರ್ಥಹಳ್ಳಿಗೆ ಜಾಥಾ ನಿಗದಿಗೊಳಿಸಿದರು. ನಾಡಿನ ಮೂಲೆಮೂಲೆಯಿಂದ ಬರಹಗಾರರು, ಕಲಾವಿದರು, ವಿದ್ವಾಂಸರು ರಾತ್ರಿಯೇ ಬಂದು ಕವಿಶೈಲದಲ್ಲಿ ತಂಗಿದ್ದು, ಜಾಥಾಗೆ ಸಿದ್ಧರಾದರು. ಕವಿಶೈಲ ಒಂದು ರೀತಿ ನಳನಳಿಸುತ್ತಿತ್ತು.

ಕವಿವರ್ಣನೆಯ ಕಗ್ಗಾಡಿನ ನಡುವೆ ತೇಜಸ್ವಿ, ಸಿದಾರ್ಥ, ಕೆ.ಟಿ ಶಿವಪ್ರಸಾದ್ ಮತ್ತು ಅಂದಿನ ಸರಕಾರದ ನೆರವಿನಿಂದ ರಚನೆಗೊಂಡ ಕವಿ ಸಮಾಧಿಯ ಸುತ್ತ ನೆರೆದಿರುವ ಸಸ್ಯರಾಶಿಯ ದೆಸೆಯಿಂದ ಇಲ್ಲೊಂದು ಆಹ್ಲಾದಕರ ತಂಪು ಆವರಿಸಿದೆ. ಇಲ್ಲಿ ಮಾತುಗಳು ಏಕಾಂತವನ್ನು ಕಲಕುವಂತೆ ಕಾಣುವುದರಿಂದ ಯಾರೂ ಮಾತನಾಡುವುದಿಲ್ಲ. ಆದ್ದರಿಂದ ಕವಿ ಸಮಾಧಿಯ ಎದುರು ಸಿಕ್ಕಿದ ಹಂಸಲೇಖ, ಎಸ್. ಜಿ. ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು, ರುದ್ರಪ್ಪ, ಅಕ್ಷತಾ, ಕಿಮ್ಮನೆ ಅಲ್ಲದೆ ಇನ್ನು ಹತ್ತಾರು ಜನ ಕವಿ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮಂಜುನಾಥ್, ದಲಿತ ಸಂಘರ್ಷ ಸಮಿತಿ ಗುರುಮೂರ್ತಿ, ರೈತ ಸಂಘದ ಕೆ.ಟಿ.ಗಂಗಾಧರ್ ಹೀಗೆ ಹಲವು ಸಂಘಟನೆಗಳ ಅಧ್ಯಕ್ಷರು-ಸಂಚಾಲಕರು ಕವಿಸಮಾಧಿಗೆ ನಮಿಸಿ ಹೊರಟಾಗ ಅದೊಂದು ನದಿಮೂಲದ ಸೆಲೆಯಂತೆ ಕಂಡಿತು. ಕವಿಶೈಲದ ಕೆಳಗಿಳಿದು ಬಂದ ಕೂಡಲೇ ಕಾಣುವ ತೇಜಸ್ವಿಯ ಸಮಾಧಿಯ ಸ್ಥಂಭಗಳು ಆಯ್ತು ಹೋಗಿ ಬನ್ನಿ ಎನ್ನುವಂತಿದ್ದವು.

ಕವಿಯ ಶತಮಾನ ಭವನದ ಎದುರು ಎಲ್ಲರೂ ತಿಂಡಿತಿಂದು ಹೊರಟರು. ಕವಿಶೈಲದಿಂದ ತೀರ್ಥಹಳ್ಳಿಗೆ ಹದಿನೆಂಟು ಕಿಲೋಮೀಟರ್ ದೂರವಿದ್ದುದರಿಂದ ಜಾಥ ಅಕ್ಷೋಹಿಣಿ ಸೈನ್ಯದಂತಾಯಿತು. ತೀರ್ಥಹಳ್ಳಿಯ ಸುತ್ತಮುತ್ತಲ ಊರಿನ ಜನರು ಜೊತೆಗೆ ಬಂದು ಸೇರಿಕೊಂಡಿದ್ದಲ್ಲದೆ ನಾಡಿನ ಮೂಲೆಮೂಲೆಯಿಂದ ಬಂದವರೆಲ್ಲಾ ಸೇರುತ್ತಾ ಕೇವಲ 50 ಜನರಿಂದ ಆರಂಭಗೊಂಡ ಜಾಥಾ ಸಾವಿರಾರು ಜನರೊಡಗೂಡಿ ಮೈಲಿಗಟ್ಟಲೆ ವಿಸ್ತರಿಸಿತು. ಕವಿಶೈಲದಿಂದ ದೇವಂಗಿವರೆಗೆ 9 ಕಿಲೋಮೀಟರ್. ಅಲ್ಲಿ ಎಲ್ಲರಿಗೂ ತಿಂಡಿ ಮತ್ತು ಕಾಫಿ ಟೀ ವ್ಯವಸ್ಥೆ ಮಾಡಿದ್ದರು. ಆ ಪ್ರದೇಶಕ್ಕೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿ.ಕೆ.ಹರಿಪ್ರಸಾದ್ ಬಂದು ಸೇರಿಕೊಂಡಿದ್ದರಿಂದ, ನಡಿಗೆಯವರ ಕಾಲಿಗೆ ಮತ್ತಷ್ಟು ಬಿರುಸು ಬಂತು. ದೇವಂಗಿಯಿಂದ ಹೊರಟವರಿಗೆ ತೀರ್ಥಹಳ್ಳಿ ಬಂದಿದ್ದೇ ತಿಳಿಯಲಿಲ್ಲ. ಕವಿ ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು ಮತ್ತು ಅಕ್ಷತಾ ಜಾಥಾ ಆರಂಭಿಸಿದಾಗಿನ ನಡಿಗೆಯ ಉತ್ಸಾಹವನ್ನು ತೀರ್ಥಹಳ್ಳಿ ತಲುಪಿದರೂ ಕಳೆದುಕೊಂಡಿರಲಿಲ್ಲ. ಕಿಮ್ಮನೆಯವರು ತೀರ್ಥಹಳ್ಳಿಯಿಂದ ಕವಿಶೈಲಕ್ಕಿರುವ ದೂರ ಮತ್ತು ಜಾಥಾ ಹೊರಡುವ ಸಮಯ ಹಾಗೂ ಚಳವಳಿಗಾರರು ತೀರ್ಥಹಳ್ಳಿ ತಲುಪಿದ ಕೂಡಲೇ ಊಟ ಮಾಡಿ ಸಭಾಂಗಣಕ್ಕೆ ಬರುವ ಸಮಯವನ್ನು ಕರಾರುವಾಕ್ಕಾಗಿ ನಿಗದಿ ಮಾಡಿದ್ದರಿಂದ ಎಲ್ಲವೂ ನಿಗದಿಯಂತೆ ನಡೆಯಿತು.

ಕವಿಶೈಲ

ಸಮಯಕ್ಕೆ ಸರಿಯಾಗಿ ಆಕಾಶ ಮಾರ್ಗದಿಂದ ಇಳಿದು ಬಂದ ಸಿದ್ದರಾಮಯ್ಯ, ತೀರ್ಥಹಳ್ಳಿ ಬಸ್ಟಾಂಡಿನಲ್ಲಿ ಜಾಥಾ ಸೇರಿಕೊಂಡರು. ಆ ಕೂಡಲೇ ಮೈಕಿನವರು ಟಗರು ಹಾಡನ್ನ ಹಾಕಿದರು. ಸಿದ್ದು ಹಿಂಬಾಲಕರು ಕುಣಿದು ಶಿಳ್ಳೆ ಹೊಡೆದರು. ತೀರ್ಥಹಳ್ಳಿ ಪಟ್ಟಣದ ಪಕ್ಕದ ಮೈದಾನದಲ್ಲಿ ಸಭೆ ಏರ್ಪಾಟಾಗಿದ್ದರಿಂದ ಎಲ್ಲಾ ಸಂಘಟನೆಯ ಲೀಡರುಗಳಲ್ಲದೆ, ನಿರಂಜನಾರಾಧ್ಯ, ವೈ.ಎಸ್.ವಿ ದತ್ತ ಬಂದು ವೇದಿಕೆ ಮೇಲೆ ಕುಳಿತಾಗ, ಜಾಥಾದ ರೂವಾರಿ ಕಿಮ್ಮನೆ ಜನರ ಮಧ್ಯೆ ಕುಳಿತಿದ್ದರು. ಅವರನ್ನ ಬಲವಂತವಾಗಿ ವೇದಿಕೆಗೆ ಕರೆದಾಗ ಪ್ರಾಸ್ತಾವಿಕವಾಗಿ ಮಾತನಾಡಿದ ಕಿಮ್ಮನೆ, ಮೊದಲ ಬಾರಿಗೆ ಭಾವುಕರಾದರು. ಜೊತೆಗೆ ಕಾರ್ಯಕ್ರಮಕ್ಕೆ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆಯದೆ ತಾನೇ ಏರ್ಪಾಟು ಮಾಡಿರುವುದರಿಂದ ಸಾಹಿತಿಗಳು-ಕಲಾವಿದರು-ಸಾಮಾಜಿಕ ಕಾರ್ಯಕರ್ತರು ಯಾವುದೇ ಅಂಜಿಕೆಯಿಲ್ಲದೆ ಮುಕ್ತವಾಗಿ ಮಾತನಾಡಬಹುದೆಂದು ಹೇಳಿದರು. ಸುಮಾರು ಮೂರು ಗಂಟೆ ನಡೆದ ಸಮಾರಂಭದಲ್ಲಿ ಎಲ್ಲ ಸಂಘಟನೆಯವರೂ ಮಾತನಾಡಿದರೆ, ನಿರಂಜನಾರಾಧ್ಯರ ಭಾಷಣ ಜಾಥಾ ಜನಗಳನ್ನ ಚಿಂತನೆಗೆ ಹಚ್ಚಿ, ಸರಕಾರ ಮತ್ತು ಪಠ್ಯ ತಿರುಚಿದವರ ಭಂಡತನವನ್ನು ಅನಾವರಣ ಮಾಡಿತು.

ಸಿದ್ದರಾಮಯ್ಯನವರು ಭಾಷಣ ಮಾಡುತ್ತ, ’ಕಿಮ್ಮನೆ ಅತ್ಯಂತ ಸಜ್ಜನ ರಾಜಕಾರಣಿ, ಅವರನ್ನು ಸಂಪುಟದಿಂದ ತೆಗೆದಾಗ ಸರಕಾರದ ಎಲ್ಲ ಸವಲತ್ತನ್ನು ತ್ಯಜಿಸಿ, ಸ್ವಂತ ಕಾರಿನಲ್ಲಿ ಮನೆಗೆ ಹೋದವರು. ನಾನು ಭೇಟಿ ಮಾಡಿ ಬೇಸರವಾಯ್ತೆ ಎಂದು ಕೇಳಿದಾಗ, ಬೇಸರವೇನು ಇಲ್ಲ ಸಾರ್, ಬೇರೆಯವರಿಗೂ ಅನುಕೂಲ ಆಯ್ತಲ್ಲ ಬಿಡಿ ಎಂದರು’ ಎಂದು ಹೇಳಿದ್ದಲ್ಲದೆ, ’ಈ ಸಮಾವೇಶವನ್ನು ಕೂಡ ಅವರು ರಾಜಕಾರಣಕ್ಕಾಗಿ ಏರ್ಪಡಿಸಿದವರಲ್ಲ. ಇದರಿಂದ ತಮ್ಮ ಚುನಾವಣೆಗೆ ಅನುಕೂಲವಾಗುತ್ತದೆಂದು ಅವರು ಭಾವಿಸಿಲ್ಲ’ ಎಂದರು.

ತೀರ್ಥಹಳ್ಳಿ ಕಾರ್ಯಕ್ರಮದ ಸಮಯದಲ್ಲೇ ಬೆಂಗಳೂರಲ್ಲಿ ನಡೆಯುವ ಪ್ರತಿಭಟನೆಗೆ ದೇವೇಗೌಡರು ಬರುತ್ತಾರೆಂಬ ಸುದ್ದಿ ಸಂಚಲನವುಂಟು ಮಾಡಿತು. ಅದರಂತೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದೇವೆಗೌಡರು, ಗೋಕಾಕ್ ಚಳವಳಿ ಮಾದರಿಯ ಹೋರಾಟದ ಅಗತ್ಯವಿದೆ ಎಂದು ಹೇಳಿದ್ದಾರೆ. ಆದ್ದರಿಂದ ನಾಡಿನ ಜನತೆ ಗೋಕಾಕ್ ಮಾದರಿಯ ಚಳವಳಿಗೆ ತಯಾರಾಗಬೇಕಿದೆ; ಅದೀಗ ಅನಿವಾರ್ಯ.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಇಂತಹ ಸೌಹಾರ್ದತೆಯ ಮಾತುಗಳನ್ನು ಅಮೆರಿಕಾದಲ್ಲಲ್ಲ, ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಹೇಳಿ!” – ಭಾಗವತ್‌ಗೆ ವಿರೋಧ ಪಕ್ಷಗಳ ಸವಾಲು

ನ್ಯೂಯಾರ್ಕ್/ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೀಡಿರುವ ಸೌಹಾರ್ದತೆಯ ಹೇಳಿಕೆ ಈಗ ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಣ್ಣಿನಲ್ಲಿ ಮುಸ್ಲಿಂ ಸಮುದಾಯದ ಪರವಾಗಿ...

ಸ್ವದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಒಳಗೊಳ್ಳುವಿಕೆ ಮಂತ್ರ : ಆರ್‌ಎಸ್‌ಎಸ್‌ ದ್ವಂದ್ವ ನಿಲುವು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

"ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ" ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ...

ಮಹಾರಾಷ್ಟ್ರ | ಬುಡಕಟ್ಟು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ...

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...

ಪಶ್ಚಿಮ ಬಂಗಾಳ| ದುರ್ಗಾಪೂಜೆ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧ ಆದೇಶ ಹೊರಡಿಸಿದ ವಿಎಚ್‌ಪಿ; ಬಲಪಂಥೀಯ ಸಂಘನೆಯ ಅಧಿಕಾರ ಪ್ರಶ್ನಿಸಿದ ವಿಪಕ್ಷಗಳು

ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಆಚರಣೆಗೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೊರಡಿಸಿರುವ ಮಾರ್ಗಸೂಚಿಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಮಂಟಪಗಳ ಸುತ್ತಮುತ್ತ ಸಸ್ಯಾಹಾರಿ ಅಲ್ಲದ ಮಾಂಸ ಮತ್ತು ಮೀನು...

ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: RSS ಮತ್ತು ಸಂಸ್ಥೆಯ ನಂಟಿನ ರಹಸ್ಯ ಬಯಲು

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ನ್ಯೂಯಾರ್ಕ್‌ನ ಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್ಸ್’ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ,...

ಮೋಹನ್ ಭಾಗವತ್ ನ್ಯೂಯಾರ್ಕ್ ಕಾರ್ಯಕ್ರಮಕ್ಕೆ ವಿರೋಧ : ಅಮೆರಿಕದ 61 ಸಂಘಟನೆಗಳಿಂದ ಪ್ರತಿಭಟನೆ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ ಮಾಡಲಿರುವ, ಶನಿವಾರ (ಆ.29) ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ 'ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್' ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರು...

ಶಿವಮೊಗ್ಗ| ಈದ್-ಎ-ಮಿಲಾದ್ ರ್‍ಯಾಲಿಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ: ಮೂವರ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಗಾಗಿ ನಿರ್ಮಿಸಲಾಗಿದ್ದ ಕಟೌಟ್ ಒಂದರ ಮೇಲೆ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಮೂವರು ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ನಿಹಾಲ್ ಉರುಫ್ ಬೆಕ್ಕು,...

ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ FIR: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ವಿದ್ಯಾರ್ಥಿ...