Homeಕರ್ನಾಟಕಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

ಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

- Advertisement -
- Advertisement -

ರೋಹಿತ್ ಚಕ್ರತೀರ್ಥ ನಾಡಗೀತೆಗೆ ಮಾಡಿದ ಅವಮಾನ ರಸಋಷಿ ಕವಿ ಕುವೆಂಪುರವರಿಗೆ ಮಾಡಿದ ಅವಮಾನವಾಗಿ ಕಂಡ ಕೂಡಲೇ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಕವಿಶೈಲದಿಂದ ತೀರ್ಥಹಳ್ಳಿಗೆ ಪ್ರತಿಭಟನಾ
ಜಾಥಾವನ್ನು ಘೋಷಿಸಿದರು. ಜೊತೆಗೆ, ಹಿಂದಿನ ಸರಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಅವರಿಗೆ ಪಠ್ಯ ಪುಸ್ತಕ ಪರಿಷ್ಕರಣೆಯು ಒಂದು ಹಗರಣವಾಗಿ ಕಂಡಿತ್ತು. ಮೊದಲು ಅದರ ಕೂಲಂಕುಷ ಅಧ್ಯಯನ ಮಾಡಿದರು. ಸರಕಾರ ಮಾಡಿರುವ ನಯವಂಚನೆಯ ಕೆಲಸಗಳು ಮತ್ತು ಎಡವಟ್ಟುಗಳನ್ನು ಜನರಿಗೆ ಹೇಳುತ್ತಾ ಬಂದರು. ಇನ್ನೊಂದು ಮುಖ್ಯವಾದ ವಿಷಯವೆಂದರೆ ಕಿಮ್ಮನೆ ರತ್ನಾಕರ್ ಕೇವಲ ರಾಜಕಾರಣಿಯಾಗಿರದೆ ಗಂಭೀರ ಅಧ್ಯಯನಶೀಲ ವಿದ್ವಾಂಸರು. ಅವರು ಕರ್ನಾಟಕ ಸರಕಾರ ಈವರೆಗೆ ಮಂಡಿಸಿರುವ ಎಲ್ಲಾ ಬಜೆಟ್‌ಗಳ ಒಳಹೊರಗಗಳನ್ನು ಅಧ್ಯಯನ ಮಾಡಿರುವ ರಾಜಕಾರಣಿ. ಅವರು ಸಾರ್ವಜನಿಕರಿಗೆ ವಿಧಾನಸೌಧದ ಲೈಬ್ರರಿಯಲ್ಲಿ ಸಿಗುತ್ತಿದ್ದುದೇ ಹೆಚ್ಚು. ಮತ್ತೊಂದು ವಿಶೇಷವೆಂದರೆ ಅವರು ಕೋಣಂದೂರು ಲಿಂಗಪ್ಪನವರು ಶಾಸಕರಾಗಿದ್ದ ಅವಧಿಯಲ್ಲಿ ಅವರ ಸಹಾಯಕರಾಗಿದ್ದು. ಆಗಿನಿಂದಲೇ ವಿಧಾನಸೌಧದ ಗ್ರಂಥಾಲಯವನ್ನ ಉಪಯೋಗಿಸಿಕೊಂಡವರು. ಮತ್ತೊಬ್ಬ ಜನನಾಯಕ ಶಾಂತವೇರಿ ಗೋಪಾಲಗೌಡರ ಕಾರ್ಯಕ್ಷೇತ್ರವಾದ ತೀರ್ಥಹಳ್ಳಿಯಿಂದ ಆರಿಸಿಬಂದರು. ದುರಂತವೆಂದರೆ ಗೋಪಾಲಗೌಡರು ಊರಾದ ಆರಗದಿಂದಲೇ ಆರಸಿಬಂದ ಆರಗ ಜ್ಞಾನೇಂದ್ರರ ಮತೀಯವಾದಿ ರಾಜಕಾರಣ ಎದುರಿಸುವುದು ತುಂಬ ದುಸ್ತರವಾಯಿತು. ಕಿಮ್ಮನೆ ನೈತಿಕ ಜವಾಬ್ದಾರಿಯಿಂದ ರಾಜಕಾರಣ ಮಾಡಿದರೆ, ಆರಗ ಮತೀಯ ಮತ್ತು ಒಡೆಯುವ ರಾಜಕಾರಣ ಮಾಡುತ್ತ ಬಂದರು. ಕ್ರಮೇಣ ಗೋಪಾಲಗೌಡರ ತಲೆಮಾರು ಕರಗುತ್ತ ಬಂದರೆ, ಇತ್ತ ಮತೀಯವಾದ ತಲೆ ಎತ್ತುತ್ತಾ ಬಲಗೊಳ್ಳುತ್ತಾ ಬಂತು. ವಿಚಿತ್ರವೆಂದರೆ ಆರಗ ಮತ್ತು ಕಿಮ್ಮನೆ ಇಬ್ಬರೂ ಕುವೆಂಪು ಕಾವ್ಯದ ನೆಲೆಬೀಡಿನಿಂದ ಬಂದವರೇ ಆದರೂ ಕುವೆಂಪು ಅವರಿಗೆ ಬಿಜೆಪಿ ಮಾಡಿರುವ ಅವಮಾನ ಆರಗರಿಗೆ ಇವತ್ತಿಗೂ ಆಕ್ರೋಶ ತರಿಸಿಲ್ಲ. ಕನಿಷ್ಟ ಪಕ್ಷ ಬೇಸರವೂ ಅವರ ಹತ್ತಿರ ಸುಳಿದಂತೆ ಕಂಡಿಲ್ಲ.

ಕಿಮ್ಮನೆ ರತ್ನಾಕರ್

ಕಿಮ್ಮನೆಯವರು ಕುವೆಂಪುರವರ ಸಮಗ್ರ ಸಾಹಿತ್ಯ ಓದಿಕೊಂಡಿರುವುದಲ್ಲದೆ ಕವಿಯ ವಿಚಾರ ಕ್ರಾಂತಿಯನ್ನು ಅಳವಡಿಸಿಕೊಂಡವರು. ಆದ್ದರಿಂದ, ನಾಡಗೀತೆ ತಿರುಚಿ ಆಡಿಕೊಂಡಿದ್ದೂ ಅಲ್ಲದೆ, ಸರ್ವ ಜನಾಂಗದ ಮಕ್ಕಳು ಓದುವಂತಹ ಪಠ್ಯ ತಿರುಚಿದ್ದು ಅವರನ್ನ ಸಹಜವಾಗಿ ಕೆರಳಿಸಿತು. ಕೂಡಲೇ ಈ ಸಂಬಂಧವಾದ ಪ್ರತಿಭಟನೆಯನ್ನು ಮಾಡುವ ತೀರ್ಮಾನ ತೆಗೆದುಕೊಂಡು ಬೆಂಗಳೂರಿಗೆ ಹೋದರು. ಅಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ, ನಿಮ್ಮ ಕಾರ್ಯಕ್ರಮ ಮತ್ತು ಜಾಥಾದಲ್ಲಿ ಸಾಹಿತಿ ಮತ್ತು ಕಲಾವಿದರು ಮುಂಚೂಣಿಯಲ್ಲಿದ್ದು ನೀವು ಹಿನ್ನೆಲೆಯಲ್ಲಿರಿ, ಇದು ಸಾಂಸ್ಕೃತಿಕ ಲೋಕದ ಪ್ರತಿಭಟನೆ ಆದ್ದರಿಂದ ಇಲ್ಲಿ ರಾಜಕಾರಣಿಗಳು ಹಿನ್ನೆಲೆಗೆ ಸರಿದು ಸಾಂಸ್ಕೃತಿಕ ಲೋಕದವರು ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಿ ಎಂದು ಹೇಳಿದರು. ಇದನ್ನು ಒಪ್ಪಿಕೊಂಡು ಬಂದ ಕಿಮ್ಮನೆ 15ನೇ ಜೂನ್ ಮುಂಜಾನೆ ಏಳು ಗಂಟೆಗೆ ಕವಿಶೈಲದಿಂದ ತೀರ್ಥಹಳ್ಳಿಗೆ ಜಾಥಾ ನಿಗದಿಗೊಳಿಸಿದರು. ನಾಡಿನ ಮೂಲೆಮೂಲೆಯಿಂದ ಬರಹಗಾರರು, ಕಲಾವಿದರು, ವಿದ್ವಾಂಸರು ರಾತ್ರಿಯೇ ಬಂದು ಕವಿಶೈಲದಲ್ಲಿ ತಂಗಿದ್ದು, ಜಾಥಾಗೆ ಸಿದ್ಧರಾದರು. ಕವಿಶೈಲ ಒಂದು ರೀತಿ ನಳನಳಿಸುತ್ತಿತ್ತು.

ಕವಿವರ್ಣನೆಯ ಕಗ್ಗಾಡಿನ ನಡುವೆ ತೇಜಸ್ವಿ, ಸಿದಾರ್ಥ, ಕೆ.ಟಿ ಶಿವಪ್ರಸಾದ್ ಮತ್ತು ಅಂದಿನ ಸರಕಾರದ ನೆರವಿನಿಂದ ರಚನೆಗೊಂಡ ಕವಿ ಸಮಾಧಿಯ ಸುತ್ತ ನೆರೆದಿರುವ ಸಸ್ಯರಾಶಿಯ ದೆಸೆಯಿಂದ ಇಲ್ಲೊಂದು ಆಹ್ಲಾದಕರ ತಂಪು ಆವರಿಸಿದೆ. ಇಲ್ಲಿ ಮಾತುಗಳು ಏಕಾಂತವನ್ನು ಕಲಕುವಂತೆ ಕಾಣುವುದರಿಂದ ಯಾರೂ ಮಾತನಾಡುವುದಿಲ್ಲ. ಆದ್ದರಿಂದ ಕವಿ ಸಮಾಧಿಯ ಎದುರು ಸಿಕ್ಕಿದ ಹಂಸಲೇಖ, ಎಸ್. ಜಿ. ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು, ರುದ್ರಪ್ಪ, ಅಕ್ಷತಾ, ಕಿಮ್ಮನೆ ಅಲ್ಲದೆ ಇನ್ನು ಹತ್ತಾರು ಜನ ಕವಿ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮಂಜುನಾಥ್, ದಲಿತ ಸಂಘರ್ಷ ಸಮಿತಿ ಗುರುಮೂರ್ತಿ, ರೈತ ಸಂಘದ ಕೆ.ಟಿ.ಗಂಗಾಧರ್ ಹೀಗೆ ಹಲವು ಸಂಘಟನೆಗಳ ಅಧ್ಯಕ್ಷರು-ಸಂಚಾಲಕರು ಕವಿಸಮಾಧಿಗೆ ನಮಿಸಿ ಹೊರಟಾಗ ಅದೊಂದು ನದಿಮೂಲದ ಸೆಲೆಯಂತೆ ಕಂಡಿತು. ಕವಿಶೈಲದ ಕೆಳಗಿಳಿದು ಬಂದ ಕೂಡಲೇ ಕಾಣುವ ತೇಜಸ್ವಿಯ ಸಮಾಧಿಯ ಸ್ಥಂಭಗಳು ಆಯ್ತು ಹೋಗಿ ಬನ್ನಿ ಎನ್ನುವಂತಿದ್ದವು.

ಕವಿಯ ಶತಮಾನ ಭವನದ ಎದುರು ಎಲ್ಲರೂ ತಿಂಡಿತಿಂದು ಹೊರಟರು. ಕವಿಶೈಲದಿಂದ ತೀರ್ಥಹಳ್ಳಿಗೆ ಹದಿನೆಂಟು ಕಿಲೋಮೀಟರ್ ದೂರವಿದ್ದುದರಿಂದ ಜಾಥ ಅಕ್ಷೋಹಿಣಿ ಸೈನ್ಯದಂತಾಯಿತು. ತೀರ್ಥಹಳ್ಳಿಯ ಸುತ್ತಮುತ್ತಲ ಊರಿನ ಜನರು ಜೊತೆಗೆ ಬಂದು ಸೇರಿಕೊಂಡಿದ್ದಲ್ಲದೆ ನಾಡಿನ ಮೂಲೆಮೂಲೆಯಿಂದ ಬಂದವರೆಲ್ಲಾ ಸೇರುತ್ತಾ ಕೇವಲ 50 ಜನರಿಂದ ಆರಂಭಗೊಂಡ ಜಾಥಾ ಸಾವಿರಾರು ಜನರೊಡಗೂಡಿ ಮೈಲಿಗಟ್ಟಲೆ ವಿಸ್ತರಿಸಿತು. ಕವಿಶೈಲದಿಂದ ದೇವಂಗಿವರೆಗೆ 9 ಕಿಲೋಮೀಟರ್. ಅಲ್ಲಿ ಎಲ್ಲರಿಗೂ ತಿಂಡಿ ಮತ್ತು ಕಾಫಿ ಟೀ ವ್ಯವಸ್ಥೆ ಮಾಡಿದ್ದರು. ಆ ಪ್ರದೇಶಕ್ಕೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿ.ಕೆ.ಹರಿಪ್ರಸಾದ್ ಬಂದು ಸೇರಿಕೊಂಡಿದ್ದರಿಂದ, ನಡಿಗೆಯವರ ಕಾಲಿಗೆ ಮತ್ತಷ್ಟು ಬಿರುಸು ಬಂತು. ದೇವಂಗಿಯಿಂದ ಹೊರಟವರಿಗೆ ತೀರ್ಥಹಳ್ಳಿ ಬಂದಿದ್ದೇ ತಿಳಿಯಲಿಲ್ಲ. ಕವಿ ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು ಮತ್ತು ಅಕ್ಷತಾ ಜಾಥಾ ಆರಂಭಿಸಿದಾಗಿನ ನಡಿಗೆಯ ಉತ್ಸಾಹವನ್ನು ತೀರ್ಥಹಳ್ಳಿ ತಲುಪಿದರೂ ಕಳೆದುಕೊಂಡಿರಲಿಲ್ಲ. ಕಿಮ್ಮನೆಯವರು ತೀರ್ಥಹಳ್ಳಿಯಿಂದ ಕವಿಶೈಲಕ್ಕಿರುವ ದೂರ ಮತ್ತು ಜಾಥಾ ಹೊರಡುವ ಸಮಯ ಹಾಗೂ ಚಳವಳಿಗಾರರು ತೀರ್ಥಹಳ್ಳಿ ತಲುಪಿದ ಕೂಡಲೇ ಊಟ ಮಾಡಿ ಸಭಾಂಗಣಕ್ಕೆ ಬರುವ ಸಮಯವನ್ನು ಕರಾರುವಾಕ್ಕಾಗಿ ನಿಗದಿ ಮಾಡಿದ್ದರಿಂದ ಎಲ್ಲವೂ ನಿಗದಿಯಂತೆ ನಡೆಯಿತು.

ಕವಿಶೈಲ

ಸಮಯಕ್ಕೆ ಸರಿಯಾಗಿ ಆಕಾಶ ಮಾರ್ಗದಿಂದ ಇಳಿದು ಬಂದ ಸಿದ್ದರಾಮಯ್ಯ, ತೀರ್ಥಹಳ್ಳಿ ಬಸ್ಟಾಂಡಿನಲ್ಲಿ ಜಾಥಾ ಸೇರಿಕೊಂಡರು. ಆ ಕೂಡಲೇ ಮೈಕಿನವರು ಟಗರು ಹಾಡನ್ನ ಹಾಕಿದರು. ಸಿದ್ದು ಹಿಂಬಾಲಕರು ಕುಣಿದು ಶಿಳ್ಳೆ ಹೊಡೆದರು. ತೀರ್ಥಹಳ್ಳಿ ಪಟ್ಟಣದ ಪಕ್ಕದ ಮೈದಾನದಲ್ಲಿ ಸಭೆ ಏರ್ಪಾಟಾಗಿದ್ದರಿಂದ ಎಲ್ಲಾ ಸಂಘಟನೆಯ ಲೀಡರುಗಳಲ್ಲದೆ, ನಿರಂಜನಾರಾಧ್ಯ, ವೈ.ಎಸ್.ವಿ ದತ್ತ ಬಂದು ವೇದಿಕೆ ಮೇಲೆ ಕುಳಿತಾಗ, ಜಾಥಾದ ರೂವಾರಿ ಕಿಮ್ಮನೆ ಜನರ ಮಧ್ಯೆ ಕುಳಿತಿದ್ದರು. ಅವರನ್ನ ಬಲವಂತವಾಗಿ ವೇದಿಕೆಗೆ ಕರೆದಾಗ ಪ್ರಾಸ್ತಾವಿಕವಾಗಿ ಮಾತನಾಡಿದ ಕಿಮ್ಮನೆ, ಮೊದಲ ಬಾರಿಗೆ ಭಾವುಕರಾದರು. ಜೊತೆಗೆ ಕಾರ್ಯಕ್ರಮಕ್ಕೆ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆಯದೆ ತಾನೇ ಏರ್ಪಾಟು ಮಾಡಿರುವುದರಿಂದ ಸಾಹಿತಿಗಳು-ಕಲಾವಿದರು-ಸಾಮಾಜಿಕ ಕಾರ್ಯಕರ್ತರು ಯಾವುದೇ ಅಂಜಿಕೆಯಿಲ್ಲದೆ ಮುಕ್ತವಾಗಿ ಮಾತನಾಡಬಹುದೆಂದು ಹೇಳಿದರು. ಸುಮಾರು ಮೂರು ಗಂಟೆ ನಡೆದ ಸಮಾರಂಭದಲ್ಲಿ ಎಲ್ಲ ಸಂಘಟನೆಯವರೂ ಮಾತನಾಡಿದರೆ, ನಿರಂಜನಾರಾಧ್ಯರ ಭಾಷಣ ಜಾಥಾ ಜನಗಳನ್ನ ಚಿಂತನೆಗೆ ಹಚ್ಚಿ, ಸರಕಾರ ಮತ್ತು ಪಠ್ಯ ತಿರುಚಿದವರ ಭಂಡತನವನ್ನು ಅನಾವರಣ ಮಾಡಿತು.

ಸಿದ್ದರಾಮಯ್ಯನವರು ಭಾಷಣ ಮಾಡುತ್ತ, ’ಕಿಮ್ಮನೆ ಅತ್ಯಂತ ಸಜ್ಜನ ರಾಜಕಾರಣಿ, ಅವರನ್ನು ಸಂಪುಟದಿಂದ ತೆಗೆದಾಗ ಸರಕಾರದ ಎಲ್ಲ ಸವಲತ್ತನ್ನು ತ್ಯಜಿಸಿ, ಸ್ವಂತ ಕಾರಿನಲ್ಲಿ ಮನೆಗೆ ಹೋದವರು. ನಾನು ಭೇಟಿ ಮಾಡಿ ಬೇಸರವಾಯ್ತೆ ಎಂದು ಕೇಳಿದಾಗ, ಬೇಸರವೇನು ಇಲ್ಲ ಸಾರ್, ಬೇರೆಯವರಿಗೂ ಅನುಕೂಲ ಆಯ್ತಲ್ಲ ಬಿಡಿ ಎಂದರು’ ಎಂದು ಹೇಳಿದ್ದಲ್ಲದೆ, ’ಈ ಸಮಾವೇಶವನ್ನು ಕೂಡ ಅವರು ರಾಜಕಾರಣಕ್ಕಾಗಿ ಏರ್ಪಡಿಸಿದವರಲ್ಲ. ಇದರಿಂದ ತಮ್ಮ ಚುನಾವಣೆಗೆ ಅನುಕೂಲವಾಗುತ್ತದೆಂದು ಅವರು ಭಾವಿಸಿಲ್ಲ’ ಎಂದರು.

ತೀರ್ಥಹಳ್ಳಿ ಕಾರ್ಯಕ್ರಮದ ಸಮಯದಲ್ಲೇ ಬೆಂಗಳೂರಲ್ಲಿ ನಡೆಯುವ ಪ್ರತಿಭಟನೆಗೆ ದೇವೇಗೌಡರು ಬರುತ್ತಾರೆಂಬ ಸುದ್ದಿ ಸಂಚಲನವುಂಟು ಮಾಡಿತು. ಅದರಂತೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದೇವೆಗೌಡರು, ಗೋಕಾಕ್ ಚಳವಳಿ ಮಾದರಿಯ ಹೋರಾಟದ ಅಗತ್ಯವಿದೆ ಎಂದು ಹೇಳಿದ್ದಾರೆ. ಆದ್ದರಿಂದ ನಾಡಿನ ಜನತೆ ಗೋಕಾಕ್ ಮಾದರಿಯ ಚಳವಳಿಗೆ ತಯಾರಾಗಬೇಕಿದೆ; ಅದೀಗ ಅನಿವಾರ್ಯ.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...