Homeಮುಖಪುಟಇದು ಹಿಂದೂ ದೇವರಲ್ಲ, ಬೌದ್ಧ ವಿಗ್ರಹ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಇದು ಹಿಂದೂ ದೇವರಲ್ಲ, ಬೌದ್ಧ ವಿಗ್ರಹ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ವಿಗ್ರಹದ ಪರಿಶೀಲನೆಯ ನಂತರ ಪುರಾತತ್ವ ಇಲಾಖೆ ನೀಡಿರುವ ವರದಿಯನ್ನು ಆಧಾರಿಸಿ ಕೋರ್ಟ್ ತೀರ್ಪು ನೀಡಿದೆ.

- Advertisement -
- Advertisement -

ಸೇಲಂ ಜಿಲ್ಲೆಯ ದೇವಾಲಯದಲ್ಲಿರುವ ಮುಖ್ಯ ದೇವತೆಯ ವಿಗ್ರಹ ಬುದ್ಧನದೇ ಹೊರತು ಹಿಂದೂ ದೇವತೆಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ದೇವಾಲಯದಲ್ಲಿರುವ ವಿಗ್ರಹವನ್ನು ಈಗ ‘ತಲೈವೆಟ್ಟಿ ಮುನಿಯಪ್ಪನ್’ ಎಂದು ಪೂಜಿಸಲಾಗುತ್ತಿದೆ. ಸೇಲಂ ಮೂಲದ ಬುದ್ಧ ಟ್ರಸ್ಟ್‌ನ ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಈ ವಿಗ್ರಹವು ಬುದ್ಧನ ವಿಗ್ರಹವಾಗಿದೆ ಎಂದು 2017ರಲ್ಲಿ ಅರ್ಜಿ ಸಲ್ಲಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜ್ಯ ಪುರಾತತ್ವ ಇಲಾಖೆ ಸಲ್ಲಿಸಿದ ವರದಿಯನ್ನು ಆಧಾರಿಸಿ ತೀರ್ಪು ನೀಡಿರುವ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.

ಏನಿದು ವಿವಾದ?

ಸೇಲಂ ಜಿಲ್ಲೆಯ ಪೆರಿಯೇರಿ ಗ್ರಾಮದ ಕೊಟ್ಟೈ ರಸ್ತೆಯಲ್ಲಿರುವ ದೇವಾಲಯದೊಳಗಿನ ವಿಗ್ರಹ ಬುದ್ಧನದ್ದಾಗಿದೆ. ಇದನ್ನು ಹಲವು ವರ್ಷಗಳಿಂದ ಬೌದ್ಧ ಧರ್ಮದ ಅನುಯಾಯಿಗಳು ಪೂಜಿಸುತ್ತಿದ್ದಾರೆ ಎಂದು ಸೇಲಂನ ಬುದ್ಧ ಟ್ರಸ್ಟ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ಕಾಲ ನಂತರದಲ್ಲಿ ಈ ವಿಗ್ರಹವನ್ನು ಹಿಂದೂ ದೇವತೆಯಾಗಿ ಪರಿವರ್ತಿಸಲಾಗಿದೆ. ಈಗ ಹಿಂದೂಗಳು ಪೂಜಿಸುತ್ತಿದ್ದಾರೆ ಎಂದು ಟ್ರಸ್ಟ್ ಮನವಿಯಲ್ಲಿ ಉಲ್ಲೇಖಿಸಿತ್ತು.

ದೇವಾಲಯದಲ್ಲಿನ ವಿಗ್ರಹದ ಸಮೀಕ್ಷೆ ಮತ್ತು ಪರಿಶೀಲನೆ ನಡೆಸುವಂತೆ ತಮಿಳುನಾಡು ಪುರಾತತ್ವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಹೈಕೋರ್ಟ್ ಸೂಚಿಸಿತ್ತು.

ವರದಿ ನೀಡಿರುವ ಪುರಾತತ್ವ ಇಲಾಖೆಯು, ‘ಈ ವಿಗ್ರಹ ಬುದ್ಧನದ್ದಾಗಿದೆ’ ಎಂದು ಸ್ಪಷ್ಟಪಡಿಸಿರುವುದಾಗಿ ಹೈಕೋರ್ಟ್ ಜುಲೈ 19ರಂದು ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದೆ. ಈ ಆದೇಶವು ಆಗಸ್ಟ್ 1 ರಂದು ಲಭ್ಯವಾಗಿದೆ.

ಪುರಾತತ್ವ ಇಲಾಖೆ ನೀಡಿದ ಆಧಾರಗಳೇನು?

ಜುಲೈ 28, 2021ರಂದು ಪುರಾತತ್ತ್ವ ಶಾಸ್ತ್ರದ ತಂಡವು ವಿಗ್ರಹವನ್ನು ಪರಿಶೀಲಿಸಿತು. ವಿಗ್ರಹವನ್ನು ಕುಂಕುಮ ಮತ್ತು ಶ್ರೀಗಂಧದ ಮೂಲಕ ಸ್ವಚ್ಛಗೊಳಿಸಿದ ನಂತರ ವಿಗ್ರಹದ ಮೇಲಿನ ಹಲವು ಚಿಹ್ನೆಗಳು ಕಂಡುಬಂದವು.

“ಕಮಲದ ಪೀಠದ ಮೇಲೆ ಅರ್ಧಪದ್ಮಾಸನದಲ್ಲಿ ಕುಳಿತಿರುವಂತೆ ಈ ವಿಗ್ರಹವನ್ನು ಕೆತ್ತಲಾಗಿದೆ. ಕೈಗಳನ್ನು ‘ಧ್ಯಾನ ಮುದ್ರೆ’ಯಲ್ಲಿ ಇರಿಸಲಾಗಿದೆ. ತಲೆಯು ಬುದ್ಧ ವಿಗ್ರಹದ ಲಕ್ಷಣಗಳಾದ ಗುಂಗುರು ಕೂದಲು, ಉದ್ದನೆಯ ಕಿವಿಯೋಲೆಗಳನ್ನು ಹೊಂದಿದೆ. ಈ ವಿಗ್ರಹವು ಬುದ್ಧನ ಹಲವಾರು ಮಹಾಲಕ್ಷಣಗಳನ್ನು (“ಶ್ರೇಷ್ಠ ಲಕ್ಷಣಗಳು”) ಸೂಚಿಸುತ್ತದೆ” ಎಂದು ತಿಳಿಸಿದೆ.

ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?

“ಶಿಲ್ಪವನ್ನು ಪರಿಶೀಲಿಸಿದ ನಂತರ, ತಮ್ಮ ಕಡತಗಳಲ್ಲಿ ಲಭ್ಯವಿರುವ ಪುರಾತತ್ವ ಮತ್ತು ಐತಿಹಾಸಿಕ ಪುರಾವೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ, ಈ ಶಿಲ್ಪವು ಬುದ್ಧನ ಹಲವಾರು ಮಹಾಲಕ್ಷಣಗಳನ್ನು (ಶ್ರೇಷ್ಠ ಲಕ್ಷಣಗಳು) ಚಿತ್ರಿಸುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ” ಎಂದು ಮದ್ರಾಸ್‌ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.

“ಇದು ದೇವಾಲಯವಾಗಿದೆ ಎಂಬ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಊಹೆಯು ಇನ್ನು ಮುಂದೆ ಸಮರ್ಥನೀಯವಲ್ಲ. ಇದರ ನಿಯಂತ್ರಣವನ್ನು ಬೇರೆಯ ಅಧಿಕಾರಿಗಳ ಕೈಗೆ ಕಡ್ಡಾಯವಾಗಿ ನೀಡಬೇಕು” ಎಂದು ಕೋರ್ಟ್ ನಿರ್ದೇಶಿಸಿದೆ.

ಇದನ್ನೂ ಓದಿರಿ: ಬುದ್ಧ ಗುರು ವಿಷ್ಣುವಿನ ಅವತಾರವಲ್ಲ, ಏಕೆ?

“ಅಂತಹ ವರದಿಯನ್ನು ಸ್ವೀಕರಿಸಿದ ನಂತರ, ಈ ಶಿಲ್ಪವನ್ನು ತಲೈವೆಟ್ಟಿ ಮುನಿಯಪ್ಪನ್ ಎಂದು ಪರಿಗಣಿಸಲು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಅನುಮತಿ ನೀಡುವುದು ಸೂಕ್ತವಲ್ಲ” ಎಂದು ನ್ಯಾಯಮೂರ್ತಿ ವೆಂಕಟೇಶ್ ಆದೇಶದಲ್ಲಿ ಬರೆದಿದ್ದಾರೆ. “ಶಿಲ್ಪವು ಬುದ್ಧನದು ಎಂಬ ತೀರ್ಮಾನಕ್ಕೆ ಬಂದ ನಂತರವೂ ಇದು ಹಿಂದೂ ದೇವರೆಂದು ಮುಂದುವರಿಯಲು ಅನುಮತಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ವಿಗ್ರಹವನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಗೆ ಹೈಕೋರ್ಟ್ ಆದೇಶಿಸಿದ್ದು, ಈ ದೇವಾಲಯದ ಒಳಗೆ ಬುದ್ಧನ ವಿಗ್ರಹ ಎಂದು ಬೋರ್ಡ್ ಹಾಕಬೇಕು ಎಂದು ಸೂಚಿಸಿದೆ.

“ಸ್ಥಳಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಅನುಮತಿ ನೀಡಬಹುದು. ಆದರೆ ಬುದ್ಧನ ಶಿಲ್ಪಕ್ಕೆ ಯಾವುದೇ ಪೂಜೆ ಅಥವಾ ಇತರ ವಿಧಿವಿಧಾನ ನಡೆಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಆದೇಶವು ನಿರ್ದೇಶಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಸೇಲಂ ದೇವಾಲಯದಲ್ಲಿ ಹಿಂದೂದೇವರೆಂದೂ ಪೂಜೆ ಮಾಡುತ್ತಿರುವುದೂ ವಿಗ್ರಹ ಬುದ್ದನ ವಿಗ್ರಹವಲ್ಲ; ಹಿಂದೂ ವಿಗ್ರಹವಲ್ಲ; ಬುದ್ದನ ವಿಗ್ರಹವೆಂದೂ ನ್ಯಾಯಾಲಯಕ್ಕೆ ಬುದ್ದ ಟ್ರಸ್ಟ್ ನವರದು ತಪ್ಪು ಗ್ರಹಿಕೆ; ಪುರಾತನ ಇಲಾಖೆಯವರು ಮೂರ್ತಿ ಕಮಲ (ತಾವರೆ ) ಮೇಲೆ ಕುಳಿತಿದೆಂದೂ ಇಲಾಖೆ ಹೇಳಿದೆ. ತಾವರೆ ಮೇಲೆ ಕುಳಿತಿದೆಂದರೆ, ಬುದ್ದನ ಮೂರ್ತಿ ಹೇಳುವುದು ನ್ಯಾಯಾಲಯದ ತೀರ್ಪು ತಪ್ಪು. ಬುದ್ದನ ಅವತಾರದಲ್ಲಿ ಇದೊಂದು ಹೇಳುವುದು ತಪ್ಪು. ಜೈನ ಧರ್ಮದಲ್ಲಿ ಸಮವಸರಣವಿದೆ. ಜೈನ ತೀರ್ಥಂಕರ ಸಮವಸರಣದಲ್ಲಿ ಕಮಲದ ಮೇಲೆ ಕುಳಿತು ಧರ್ಮ ಭೋದನೆ ಮಾಡುವ ಸನ್ನಿವೇಶ. ಹಾಗಾಗಿ ಅದು ಜೈನ ತೀರ್ಥಂಕರ ಮೂರ್ತಿ. ಮದ್ರಾಸ್ ಹೈಕೋರ್ಟು ನಲ್ಲಿ ಜೈನಧರ್ಮದ ಪರವಾಗಿ ಯಾರೂ ವಾದಿಸುವವರು ಇಲ್ಲದಿರುವುದರಿಂದ ತೀರ್ಪು ಕೊಟ್ಟಿರಬೇಕು…!

  2. ಆದರೆ, ಹಿಂದೂ ದೇವರಂತೂ ಅಲ್ಲ .ಇದು ಮುಖ್ಯವಾದ ವಿಷಯವಾಗಿರುವುದು.ಪುರಾತತ್ವ ಇಲಾಖೆಯವರು ಪರಿಶೀಲಿಸಿ ನೀಡಿರುವ ಮಾಹಿತಿ ಆಗಿರುವುದರಿಂದ ಅದು ಬುದ್ಧನ ಮೂರ್ತಿ ಎಂಬುದು ಸತ್ಯ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...