Homeಅಂಕಣಗಳುಕಾಶ್ಮೀರದಾಗಿನ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್...

ಕಾಶ್ಮೀರದಾಗಿನ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ?

ಈ ಸಾರೆ ಅಂತೂ ನಾವು ಕಾಶ್ಮೀರದ ಹುಡುಗಿ ಮಾಡಿಕೊಂಡು, ಅಲ್ಲೇ ಹತ್ತು ಎಕರೆ ಸೇಬುಹಣ್ಣಿನ ತೋಟ ವರದಕ್ಷಿಣೆ ಪಡಿಯಬೇಕು ಅಂತ ಈಗಿನ ಆಳುವ ಪಕ್ಷಕ್ಕ ವೋಟು ಹಾಕಿದ್ದೇವಿ. ಹೀಗಾಗಿ...

- Advertisement -
- Advertisement -

ಪೂರ್ಣಾವಧಿ ಸೋಶಿಯಲ್ ಮೀಡಿಯಾ ಸ್ಟಾರ್, ಅಲ್ಪಾವಧಿ ಲೋಕಸಭಾ ಸದಸ್ಯರಾಗಿರುವ ತೇಜಸ್ವಿ ಸೂರ್ಯ ನಾರಾಯಣರಾವು ಅವರು ಮೊನ್ನೆ ಬೆಂಗಳೂರು ಎಂಬೋ ಮಾಯಾನಗರಿಯೊಳಗ ಒಂದು ಕಾಲ್ ಸೆಂಟರ್‌ದೊಳಗಿನ 17 ಮಂದಿ ಮುಸ್ಲಿಂ ಕೆಲಸಗಾರರ ಹೆಸರು ಓದಿ, ಮರುದಿವಸ ಒಂಬತ್ತು ಮಂದಿ ಗೈರು ಮುಸ್ಲಿಂರ ದಸ್ತಗಿರಿ ಮಾಡಿಸಿದ್ದು ನಮಗ ಗೊತ್ತು.

ಇಲ್ಲೇ ಪ್ರಶ್ನೆ ಏನು ಅಂದ್ರ ಒಬ್ಬ ಎಂಪಿ ಕೆಲಸ ಏನು? ಪತ್ತೇದಾರಿ ವರದಿಗಾರರಂತೆ ಹಗರಣ ಹೊರಗೆ ತೆಗೆಯೋದೋ ಅಥವಾ ಸರ್ಕಾರದ ಕೆಲ್ಸಗಳು ಸರಿಯಾಗಿ ನಡಿಯೋ ಹಂಗ ಮಾಡೋದೋ?

ತೇಜಸ್ವಿ ಅವ್ರು ಮಾಡಿದ್ದೇ ಸರಿ. ಅವ್ರು ಈ ಹುಳುಕು ಹೊರಗೆ ತೆಗೆಯದೇ ಇದ್ದರೆ ಯಾರು ತೆಗೆಯಬೇಕಿತ್ತು? ಅಂತ ಅವರನ್ನು ಹೊಗಳುವ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಕ್ಕೆಬಿಟ್ಟರು ಅಂತ ಖುಷಿಯಿಂದ ಕುಣಿಯುತ್ತಿರುವ ಜನರಿಗೆ ಏನೂ ಕಮ್ಮಿ ಇಲ್ಲಾ.

ಈ ಜನರ ಭಾವನೆ ಸರಿ. ಅದನ್ನು ನಾನು ಮೈಸೂರು ತೇರು ಮೈದಾನದಿಂದ ಬೇಕಾದರೂ ಹೇಳಬಲ್ಲೆ ಅಂತ ಇನ್ನೊಬ್ಬ ಯುವ ಸಂಸದ ಪ್ರತಾಪ್ ಸಿಂಹ ಅವ್ರು ಹೇಳಿಬಿಟ್ಟಾರ. ಅವ್ರು ಇಂಥ ಕೆಲ್ಸಾ ಮಾಡಿಯೇ ಮುಂದೆ ಬಂದಾರ. ಎರಡು ವರ್ಷದ ಹಿಂದೆ ಕೊಡಗು ಜಿಲ್ಲೆಯೊಳಗ ಪ್ರವಾಹ ಬಂದಾಗ ಅವ್ರು ಒಂದು ಕೆಂಪು ಅಂಗಿ ಬಿಳೆ ಬೂಟು ಹಾಕಿಕೊಂಡು ಕರೆಂಟ್ ಕಂಬಾ ಭೂಮಿಯೊಳಗ ನೆಡುವ ಪ್ರಯತ್ನ ಮಾಡಿದ್ದ ಫೋಟೋ ಸೋಶಿಯಲ್ ಮೀಡಿಯಾದಾಗ ಓಡಾಡಲಿಕ್ಕೆ ಹತ್ತಿತ್ತು. ಆವಾಗ ಅವರ ಸಹೋದ್ಯೋಗಿಯಾಗಿದ್ದ ಹಿರಿಯ ಪತ್ರಕರ್ತರು ಒಬ್ಬರು “ನಾವು ಈ ಯುವ ಸಂಸದರನ್ನು ದೆಹಲಿಗೆ ಕಳಿಸಿದ್ದು ಯಾಕೆ ಅಂದ್ರೆ ಅವರು ಪ್ರಧಾನಿ ಹಾಗೂ ಇತರ ಮಂತ್ರಿಗಳ ಜೊತೆ ಸೇರಿ ಕರ್ನಾಟಕಕ್ಕೆ ಹೆಚ್ಚಿನ ನೆರವು ಕೊಡಿಸಲಿ ಅಂತ. ಹಸಿ ಮಣ್ಣಿನ ನೆಲದಲ್ಲಿ ಕರೆಂಟ್ ಕಂಬ ನೆಡಲಿ ಅಂತ ಅಲ್ಲಾ” ಅಂತ ಕಾಮೆಂಟ್ ಮಾಡಿದ್ರು. ಇದು ದೊಡ್ಡ ಸುದ್ದಿಯಾಗಿತ್ತು.

ಇದೆ ಮಾದರಿಯಲ್ಲಿ ಹಿರಿಯ ಭಾರತೀಯ ಪೊಲೀಸು ಸೇವೆ ಅಧಿಕಾರಿ ರೂಪ ದಿವಾಕರ್ ಅವ್ರು ತಾವು ಜೈಲಿನಲ್ಲಿ ಡಿಐಜಿ ಇದ್ದಾಗ ಅಲ್ಲಿನ ಆಡಳಿತದಲ್ಲಿನ ತಪ್ಪುಗಳನ್ನು ಸರಿ ಮಾಡುವುದನ್ನು ಬಿಟ್ಟು ಥೇಟು ಎನ್‌ಜಿಓ ಶೈಲಿಯಲ್ಲಿ ಒಂದು ದೊಡ್ಡ ರಿಪೋರ್ಟ್ ಬರೆದರು.

ಅವರು ನಾನು ನಿಗರಾಣಿ ಅಧಿಕಾರಿಯಾಗಿರುವ ಈ ಜೈಲಿನಲ್ಲಿ, ನನ್ನ ಕೆಳಗೆ ಹಾಗು ಮೇಲೆ ಇರುವ ಅಧಿಕಾರಿಗಳು ಇಂತಹ ತಪ್ಪುಗಳನ್ನು ಮಾಡಿದ್ದಾರೆ, ಮಾಡುತ್ತಾ ಇದ್ದಾರೆ, ಮುಂದೆಯೂ ಮಾಡುವ ಸಾಧ್ಯತೆ ಇದೆ ಅಂತ ಹೇಳಿ ಒಂದು ವರದಿ ಕೊಟ್ಟರು. ಅದನ್ನು ಮಾಧ್ಯಮದವರು ದೇವವಾಣಿಯಂತೆ ಕಂಡು ಪೂಜೆ ಮಾಡಿದ್ರು. ಅದನ್ನು ಬರೆದ ಅಧಿಕಾರಿಯನ್ನು ಪ್ರಮಥರಂತೆ ನೋಡಿದರು. ನಿಮ್ಮನ್ನು ಭಾ.ಪೋ.ಸೇ.ಗೆ ಸೇರಿಸಿ, ತೆರಿಗೆದಾರರ ಹಣದಿಂದ ನಿಮಗೆ ತಿಂಗಳು ತಿಂಗಳು ಸಂಬಳ ಕೊಟ್ಟಿದ್ದು ಯಾಕೆ? ಅಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಲಿಕ್ಕೋ ಅಥವಾ ಇದು ನನ್ನ ಕಣ್ಣಿಗೆ ಬಿದ್ದಿದೆ ಆದರೆ ನಾನು ಅದರ ಬಗ್ಗೆ ಏನೂ ಮಾಡಲಾರೆ ಅಂತ ಅಸಹಾಯಕತೆ ವ್ಯಕ್ತಪಡಿಸಲಿಕ್ಕೋ ಅಂತ ಯಾವ ಟಿವಿ ಚಾನೆಲ್‌ನ ಹಿಡಿಗೂಟಗಳೂ ಕೇಳಲಿಲ್ಲ.

ಇವತ್ತಿಗೂ ನಮ್ಮ ಜನರಿಗೆ ಯಾರ ಹತ್ತಿರ ಗೋಳು ಹೇಳಿಕೊಳ್ಳಬೇಕು ಅನ್ನುವುದು ಗೊತ್ತಿಲ್ಲ. ಸುಂಕ ವಸೂಲಾತಿಗೆ ಬಂದ ಕಂದಾಯ ಅಧಿಕಾರಿಯ ಮುಂದೆ ಯಪ್ಪಾ ನಮ್ಮ ಹತ್ತಿರ ಉಣ್ಣಾಕ್ ರೊಕ್ಕಾ ಇಲ್ಲ ಅಂದ್ರೆ ಬಿಡುತ್ತಾನೆಯೇ? ವಿಧಾನಸಭೆ – ಸಂಸತ್ತು ಸಭೆಗಳಲ್ಲಿ ಹೋಗಿ ನಮ್ಮ ಪರವಾಗಿ, ನಮ್ಮ ಸುಂಕ ಕಮ್ಮಿ ಮಾಡಬೇಕು ಅಂತ ಮಾತು ಆಡಬೇಕಾದವರು ಆಡೋದಿಲ್ಲ. ಅವ್ರ ಕುತ್ತಿಗೆ ಪಟ್ಟಿ ಹಿಡದು ನಾವು ಕೇಳೋದಿಲ್ಲಾ. ನಮ್ಮ ಮನಿಗೆ ನೀರು ಬರಲಿಲ್ಲ ಅಂದರ ಜಿಲ್ಲಾಧಿಕಾರಿಯ ಕಚೇರಿಗೆ ಹೋಗ್ತೆವಿ, ಹೊರತು, ನಮ್ಮ ನಗರಸಭೆ ಸದಸ್ಯರ ಮನಿಯ ಮುಂದ ಹೋಗಿ ಕೂಡೋದಿಲ್ಲಾ.

ಈ ಸಾರೆ ಅಂತೂ ನಾವು ಕಾಶ್ಮೀರದ ಹುಡುಗಿ ಮಾಡಿಕೊಂಡು, ಅಲ್ಲೇ ಹತ್ತು ಎಕರೆ ಸೇಬುಹಣ್ಣಿನ ತೋಟ ವರದಕ್ಷಿಣೆ ಪಡಿಯಬೇಕು ಅಂತ ಈಗಿನ ಆಳುವ ಪಕ್ಷಕ್ಕ ವೋಟು ಹಾಕಿದ್ದೇವಿ. ಹೀಗಾಗಿ, ಸರಕಾರೀ ಆಸ್ಪತ್ರೆ ಒಳಗ ಹಾಸಿಗೆ ಸಿಗಲಿಲ್ಲಾ, ರೋಗಿಗಳಿಗೆ ಆಮ್ಲಜನಕ ಸಿಗಲಿಲ್ಲ, ರೆಮೆಡಿಸಿವಿರ್ ಇಂಜಕ್ಷನ್ ಕೊಡಲಿಲ್ಲ ಅಂತ ಹೇಳಿ ನಾವು ದೂರು ಕೊಡಲಿಕ್ಕೆ ಬರೋದಿಲ್ಲಾ.

ಕಾಶ್ಮೀರದಾಗಿನ ಸೇಬುಹಣ್ಣಿನ ಬಣ್ಣದ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕ ಜೀವನದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ. ಏನರ ಹೋಲಿಕೆ ಅದ ಏನು ಹೇಳ್ರಿ?


ಇದನ್ನೂ ಓದಿ: ತೇಜಸ್ವಿ ಸೂರ್ಯ ಓದಿದ ಮುಸ್ಲಿಮರ ಪಟ್ಟಿ: ಬಿಬಿಎಂಪಿ ಇಂತಹ ಲಿಸ್ಟ್ ತಯಾರಿಸಿಲ್ಲ! ಮತ್ತೆ ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...