Homeಮುಖಪುಟರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ಒರಿಯಾನ್ ನಕ್ಷತ್ರ ಪುಂಜದ ಚಿತ್ರದಲ್ಲಿ ಗುರುತಿಸಿರುವ ಭಾಗವನ್ನು ಚಂದ್ರನಿಲ್ಲದ ರಾತ್ರಿಯಲ್ಲಿ ಬರಿಗಣ್ಣಿನಲ್ಲಿ ನೋಡಿದರೆ, ನಕ್ಷತ್ರಗಳು ಹುಟ್ಟುವ ಪ್ರದೇಶವಾದ ಸುಂದರವಾದ ನೆಬುಲ್ಲಾ ಕಾಣುತ್ತದೆ.

- Advertisement -
- Advertisement -

(ಆಕಾಶ ಕಾಯಗಳು ವೀಕ್ಷಣೆ ಮತ್ತು ವಿವರಣೆ: ಡಿಸೆಂಬರ್ ೦೧-೦೮)

ಭಾರತದಲ್ಲಿ ಮಳೆಗಾಲದ ನಂತರ ಬರುವ ಚಳಿಗಾಲದಲ್ಲಿ, ಆಕಾಶವು ಮೋಡಗಳಿಲ್ಲದೆ ಸ್ಪಷ್ಟವಾಗಿ ಕಾಣುತ್ತದೆ (ಸೈಕ್ಲೋನ್ ಇಲ್ಲದಿದ್ದರೆ). ಹಾಗಾಗಿ, ಅಕ್ಟೋಬರ್ ತಿಂಗಳಿನಿಂದ ಮುಂದಿನ ಮಾರ್ಚ್ ಮತ್ತು ಏಪ್ರಿಲ್‌ವರೆಗೂ ಆಕಾಶ ವೀಕ್ಷಣೆಗೆ ಸದವಕಾಶ. ಡಿಸೆಂಬರ್‌ನ ಕೊರೆಯುವ ಚಳಿಯಲ್ಲಂತೂ ಬಿಸಿಬಿಸಿ ತಿನಿಸುಗಳನ್ನು ತಿನ್ನುತ್ತ ಆಕಾಶ ವೀಕ್ಷಣೆ ಮಾಡುವುದೇ ಒಂದು ವಿಶಿಷ್ಟವಾದ ಅನುಭವ. ಕಳೆದ ವಾರ, ಆಗಸದಲ್ಲಿ ಕಾಣುವ ಪ್ರಮುಖವಾದ ಗ್ರಹಗಳ ಸ್ಥಾನ ಮತ್ತು ಚಂದ್ರನ ಬಿಂಬಾವಸ್ಥೆಯ ಬಗ್ಗೆ ತಿಳಿದೆವು. ಈ ವಾರ ವೈಶಿಷ್ಟತೆಗಳೇನು?

1. ಗ್ರಹಗಳು: ಗುರು, ಶನಿ, ಶುಕ್ರ ಮತ್ತು ಮಂಗಳ

ಕಳೆದ ವಾರ ಈ ಗ್ರಹಗಳ ಸ್ಥಾನಗಳನ್ನು ಗಮನಿಸಿದ್ದರೆ, ಈ ವಾರ ಈ ಗ್ರಹಗಳನ್ನು ಆಗಸದಲ್ಲಿ ಹುಡುಕುವುದಕ್ಕೆ ಬಹಳ ಕಷ್ಟವೇನಾಗುವುದಿಲ್ಲ. ಏಕೆಂದರೆ, ಗ್ರಹಗಳ ನೈಜ ಚಲನೆಗಳು ಬಹಳ ನಿಧಾನ. ಹಾಗಾಗಿ ಅದೇ ಸ್ಥಾನದಲ್ಲೆ, ಅಥವಾ ಸ್ವಲ್ಪ ಆಸುಪಾಸಿನಲ್ಲೇ ಈ ಗ್ರಹಗಳನ್ನು ನಾವು ನೋಡಬಹುದು. ಸೂರ್ಯ ಮುಳುಗಿದ ನಂತರ, ದಿಗಂತದಲ್ಲಿ ಕಾಣುವ ಪ್ರಕಾಶಮಾನವಾದ ಜೋಡಿ ಚುಕ್ಕಿಗಳು ಶನಿ ಮತ್ತು ಗುರುಗ್ರಹ ಮತ್ತು ಇವೆರಡರಲ್ಲಿ ಹೆಚ್ಚು ಪ್ರಕಾಶಮಾನವಾಗಿರುವುದು ಗುರುಗ್ರಹ. ಹಿಂದಿನ ವಾರ ಈ ಜೋಡಿ ಗ್ರಹಗಳ ವೀಕ್ಷಣೆ ಮಾಡಿದ್ದರೆ, ಗ್ರಹಗಳ ನಡುವೆ ಇರುವ ಅಂತರ ಕಡಿಮೆಯಾಗುತ್ತಿರುವುದನ್ನು ನೀವು ಗಮನಿಸಬಹುದು. ಈ ಅಂತರ ಹೀಗೆ ಕಡಿಮೆಯಾಗುತ್ತಾ, ಡಿಸೆಂಬರ್ 21ರ ರಾತ್ರಿಯಂದು ಈ ಎರಡೂ ಗ್ರಹಗಳು ಆಗಸದಲ್ಲಿ ಒಂದೇ ಚುಕ್ಕಿಯಂತೆ ಭಾಸವಾಗುವಷ್ಟು ಅಂತರಕ್ಕೆ ಬರಲಿವೆ! ನಿಮ್ಮ ಬಳಿ ಇರುವ ಕ್ಯಾಮರಾ ಮೂಲಕ, ಪ್ರತಿ ದಿನ ಈ ಜೋಡಿ ಗ್ರಹಗಳ ಚಿತ್ರಗಳನ್ನು ತೆಗೆದು ಅಂತರವನ್ನು ದಿನದಿಂದ ದಿನಕ್ಕೆ ಹೋಲಿಕೆ ಮಾಡಬಹುದು. ಗುರು ಮತ್ತು ಶನಿ ಗ್ರಹಗಳು ಸೂರ್ಯನ ಸುತ್ತ ಪ್ರತ್ಯೇಕವಾದ ಕಕ್ಷೆಯಲ್ಲಿ ಸುತ್ತುತ್ತವೆ. ಈ ಕಕ್ಷೆಗಳ ನಡುವಿನ ಅಂತರ ಸುಮಾರು 64 ಕೋಟಿ ಕಿಲೋಮೀಟರ್. ಆದರೂ, ಈ ಗ್ರಹಗಳು ಆಗಸದಲ್ಲಿ ಒಂದೇ ದಿಕ್ಕಿನಲ್ಲಿ ಕಾಣುತ್ತಿರುವದರಿಂದ, ಅಕ್ಕಪಕ್ಕದಲ್ಲಿ ಇರುವಂತೆ ಕಾಣುತ್ತಿವೆ. ವಾಸ್ತವದಲ್ಲಿ ಆ ಎರಡು ಗ್ರಹಗಳು ಊಹೆಗೂ ನಿಲುಕದಷ್ಟು ದೂರದಲ್ಲಿವೆ.

ಸೂರ್ಯ ಮುಳುಗಿದ ನಂತರ ಗುರು ಮತ್ತು ಶನಿ ಗ್ರಹಗಳನ್ನು ನೋಡಿಕೊಂಡು, ನೆತ್ತಿಯ ಆಸುಪಾಸಿನಲ್ಲಿ ಕಣ್ಣಾಯಿಸಿದರೆ, ಕೆಂಪಾಗಿ ಕಾಣುವ ಗ್ರಹವೇ ಮಂಗಳ ಗ್ರಹ. ಇದಲ್ಲದೆ, ಮುಂಜಾನೆ ಸೂರ್ಯ ಉದಯಿಸುವುದಕ್ಕೆ ಮುನ್ನ ಪ್ರಕಾಶಮಾನವಾಗಿ ಕಾಣುವ ಶುಕ್ರಗ್ರಹವನ್ನು ಕೂಡ ನೋಡಬಹುದು. ಈ ಎಲ್ಲಾ ಗ್ರಹಗಳ ಚಲನವಲನವನ್ನು ವಾರದುದ್ದಕ್ಕೂ ಗಮನಿಸಬಹುದಾಗಿದೆ.

ಚಂದ್ರ

ನವೆಂಬರ್ 23ರಿಂದ 30ರವರೆಗೂ ನೀವು ಚಂದಿರನನ್ನು ಗಮನಿಸಿರಬೇಕು. ಹೇಗೆ, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಬದಲಾವಣೆಯಾಯಿತು ಎಂಬುದನ್ನು ಕೂಡ. ಕಳೆದ ವಾರ ಕೃಷ್ಣ ಪಕ್ಷದ ಚಂದ್ರನನ್ನು ಅಂದರೆ, ವೃದ್ಧಿಸುತ್ತಿರುವ ಚಂದ್ರನನ್ನು ನೋಡಿದಿರಿ. ಅದಲ್ಲದೆ, ನವೆಂಬರ್ 30ರಂದು ಹುಣ್ಣಿಮೆ ಚಂದ್ರನನ್ನು ನೋಡಿದಿರಿ. ಅಂದು ನಡೆದಿದ್ದ ಭಾಗಶಃ ಚಂದ್ರಗ್ರಹಣ ದಕ್ಷಿಣ ಭಾರತಕ್ಕೆ ಕಾಣಿಸಿರುವುದಿಲ್ಲ. ಅಲ್ಲದೆ ಭಾಗಶಃ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ಗ್ರಹಿಸುವುದು ಕಷ್ಟವಾಗಿರುತ್ತದೆ. ಇರಲಿ, ಈ ವಾರ ಚಂದ್ರನ ಹುಣ್ಣಿಮೆಯ ನಂತರದ ಬಿಂಬಾವಸ್ಥೆಯನ್ನು ನೋಡಬಹುದಾಗಿರುತ್ತದೆ. ಇದನ್ನು ನಾವು ಶುಕ್ಲ ಪಕ್ಷ ಅಥವಾ ಕ್ಷೀಣಿಸುತ್ತಿರುವ ಚಂದ್ರ ಎಂದು ಕರೆಯುತ್ತೇವೆ. ಹುಣ್ಣಿಮೆಯ ದಿನ ಚಂದ್ರ, ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದರೆ, ಪೂರ್ವದಲ್ಲಿ ಹುಟ್ಟುತ್ತಿರುತ್ತಾನೆ, ಮತ್ತು ರಾತ್ರಿ ಪೂರಾ ಕಾಣುತ್ತಾನೆ. ಹುಣ್ಣಿಮೆಯ ನಂತರದ ದಿನಗಳಲ್ಲಿ ಚಂದ್ರ, ಈ ಹಿಂದೆ ಹುಟ್ಟಿದ ಸಮಯಕ್ಕಿಂತಲೂ ಸುಮಾರು 50 ನಿಮಿಷಗಳ ತಡವಾಗಿ ಹುಟ್ಟುತ್ತಾನೆ. ಹೀಗೆ 50 ನಿಮಿಷಗಳ ತಡವಾಗಿ ಹುಟ್ಟುವುದು ಪ್ರತಿ ದಿನವು ನಡೆಯುತ್ತದೆ. ಇದಕ್ಕೆ ಕಾರಣ: ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವ ಕಕ್ಷೆಯಲ್ಲಿ, ಒಂದು ದಿನಕ್ಕೆ ಸುಮಾರು ಒಂದು ಡಿಗ್ರಿ ಚಲಿಸುತ್ತದೆ. ಹಾಗಾಗಿ, ಒಂದು ವರ್ಷಕ್ಕೆ ಸುಮಾರು 360(5) ದಿನ (ಪೂರ್ಣ ವೃತ್ತಕ್ಕೆ 360 ಡಿಗ್ರಿ). ಈ ವಾರ ಚಂದ್ರನು ಹುಟ್ಟುವ ಸಮಯ ಮತ್ತು ಮುಳುಗುವ ಸಮಯವನ್ನು ಮತ್ತು ಚಂದ್ರನು ಕ್ಷೀಣಿಸುತ್ತಿರುವ ಬಿಂಬಾವಸ್ಥೆಯನ್ನು ಗಮನಿಸಬಹುದು.

ನಕ್ಷತ್ರ ಪುಂಜಗಳು

ಇಲ್ಲಿಯವರೆಗೂ ನಾವು ಆಗಸದಲ್ಲಿ ಪ್ರಕಾಶಮಾನವಾಗಿ ಕಾಣುವ ಗ್ರಹಗಳು ಮತ್ತು ಚಂದಿರನ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದೆವು. ಸೌರ ಮಂಡಲದ ಕಾಯಗಳಲ್ಲದೆ, ಆಗಸದಲ್ಲಿ ಸಹಸ್ರಾರು ನಕ್ಷತ್ರಗಳು ಕಾಣುತ್ತವೆ. ನಕ್ಷತ್ರಗಳು ನಮ್ಮ ಸೌರಮಂಡಲದ ಕಾಯಗಳಿಗಿಂತಲೂ ಕೋಟ್ಯಾನುಕೋಟಿ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವುದರಿಂದ, ಈ ನಕ್ಷತ್ರಗಳ ಸ್ಥಾನಗಳು ನೂರಾರು ವರ್ಷಗಳಾದರೂ ಬದಲಾವಣೆಯಾಗುವುದಿಲ್ಲ. ಅಂದರೆ, ನಕ್ಷತ್ರಗಳ ನೈಜ ಸ್ಥಾನದ ಬದಲಾವಣೆ ಇರುವುದಿಲ್ಲ. ಹಾಗಾಗಿ, ಹಲವಾರು ನಾಗರಿಕತೆಗಳು, ಭೂಮಿಯಿಂದ ಕಾಣುವ ನಕ್ಷತ್ರಗಳನ್ನು ಒಂದೊಂದು ಗುಂಪುಗಳಾಗಿ ಮಾಡಿ, ಅವುಗಳಿಗೆ ಕೆಲವೊಂದು ಆಕಾರಗಳನ್ನು ಕೊಟ್ಟು, ದಿಕ್ಕುಗಳನ್ನು ಕಂಡುಹಿಡಿಯಲು, ಸಮುದ್ರಯಾನ ಮಾಡಲು ಮತ್ತು ಕಾಲಗಳನ್ನು ಗುರುತಿಸಲು ಬಳಸಿಕೊಂಡವು. ಇಂತಹ ನಕ್ಷತ್ರಗಳ ಗುಂಪುಗಳನ್ನು ನಕ್ಷತ್ರ ಪುಂಜ ಎಂದು ಕರೆಯಲಾಯಿತು. ಬೇರೆ ಬೇರೆ ನಾಗರಿಕತೆಗಳು ತಮಗೆ ಕಾಣುವ ನಕ್ಷತ್ರಗಳನ್ನು ತಮ್ಮ ದೈವಗಳಿಗೆ ಮತ್ತು ತಮ್ಮ ಸಂಸ್ಕೃತಿಗಳಿಗೆ ಅನುಗುಣವಾಗಿ ಗುಂಪುಗಳನ್ನಾಗಿ ವಿಂಗಡಿಸಿ ಕಥೆಗಳನ್ನು ಕಟ್ಟಿದರು.

ಉದಾಹರಣೆಗೆ, ಉತ್ತರ ದಿಕ್ಕಿನಲ್ಲಿ ಕಾಣುವ ಏಳು ಪ್ರಕಾಶಮಾನವಾದ ನಕ್ಷತ್ರ ಪುಂಜವನ್ನು ಭಾರತದಲ್ಲಿ ಸಪ್ತಋಷಿಮಂಡಲ (ಏಳು ಋಷಿಗಳ ತಪಸ್ಸು ಮಾಡುತ್ತಿರುವುದು) ಎಂದು ಗ್ರಹಿಸಿದರೆ, ಗ್ರೀಕರು ಇದೇ ನಕ್ಷತ್ರ ಪುಂಜವನ್ನು ದೊಡ್ಡಕರಡಿ ಎಂದು ಕರೆದರು. ಹೀಗೆ, ಹಲವಾರು ನಕ್ಷತ್ರಪುಂಜಗಳನ್ನು ವಿವಿಧ ದೇಶಗಳ ನಾಗರಿಕತೆಗಳು ವಿವಿಧ ರೀತಿಯಲ್ಲಿ ಕರೆದರಾದರೂ, ಕಥೆಗಳನ್ನೂ ಕಟ್ಟಿದರಾದರೂ, ಎಲ್ಲರಿಗೂ ನಕ್ಷತ್ರಪುಂಜಗಳ ವೀಕ್ಷಣೆಯಿಂದ ಪಡೆಯುತ್ತಿದ್ದ ಮಾಹಿತಿ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದರೆ, ಪ್ರಸ್ತುತ ಇರುವ International Astronomical Union (IAU) ಸಂಸ್ಥೆಯು, ನಕ್ಷತ್ರಪುಂಜಗಳ ವಿವಿಧ ಹೆಸರುಗಳ ಬದಲಾಗಿ, ಎಲ್ಲರೂ ಒಂದೇ ಹೆಸರನ್ನು ಬಳಸಲು ಅನುಕೂಲವಾಗುವಂತೆ, ಇಡೀ ಆಗಸವನ್ನು 88 ಗುಂಪುಗಳಾಗಿ ವಿಂಗಡಿಸಿ, 88 ನಕ್ಷತ್ರ ಪುಂಜಗಳನ್ನು ಹೆಸರಿಸಿದೆ. ಇದನ್ನು ಜಗತ್ತಿನಾದ್ಯಂತ ಒಪ್ಪಲಾಗಿದೆ. 88 ನಕ್ಷತ್ರಪುಂಜಗಳ ಪೈಕಿ, ಕೆಲವು ಪ್ರಕಾಶಮಾನವಾಗಿದ್ದರೆ, ಇನ್ನು ಕೆಲವು ಅಷ್ಟು ಬೆಳಗುವುದಿಲ್ಲ. ಆದರೂ, ಚಂದ್ರನಿಲ್ಲದ ರಾತ್ರಿಯಲ್ಲಿ ನಕ್ಷತ್ರಪುಂಜಗಳನ್ನು ಬರಿಗಣ್ಣಿನಲ್ಲಿಯೇ ನೋಡಿ ಸವಿಯಬಹುದು. ಈ ವಾರ ಚಳಿಗಾಲದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರಪುಂಜವನ್ನು ನೋಡೋಣ.

ಚಳಿಗಾಲದ ಆಗಸದಲ್ಲಿ ಬಹಳ ಪ್ರಕಾಶಮಾನವಾಗಿ ಮತ್ತು ಸುಲಭವಾಗಿ ಗುರುತಿಸಬಲ್ಲ ಪ್ರಥಮ ನಕ್ಷತ್ರಪುಂಜ ಎಂದರೆ ಅದು ಒರಿಯಾನ್. ಸುಮಾರು ರಾತ್ರಿ ಒಂಭತ್ತು ಗಂಟೆಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತರೆ ಈ ಕೆಳಗಿನ ಚಿತ್ರದಂತೆ ಪ್ರಕಾಶಮಾನವಾದ ನಕ್ಷತ್ರಗಳನ್ನು ಕಾಣಬಹುದು. ಈ ನಕ್ಷತ್ರಪುಂಜದಲ್ಲಿ ಹೆಚ್ಚು ಪ್ರಕಾಶಮಾನವಾದ ಬಿಳಿ ಬಣ್ಣದ ನಕ್ಷತ್ರವನ್ನು ರಿಗಲ್ ಮತ್ತು ಅದರ ವಿರುದ್ಧ ದಿಕ್ಕಿನ ನಸು ಹಳದಿ ಬಣ್ಣದ ನಕ್ಷತ್ರವನ್ನು ಬೀಟಲ್‌ಜೂಸ್ ಎಂದು ಹೆಸರಿಸಲಾಗಿದೆ.

ಚಿತ್ರದಲ್ಲಿ ನಕ್ಷತ್ರಗಳ ಪುಂಜವನ್ನು ಗುರುತಿಸಲು ಸಹಾಯವಾಗುವಂತೆ ಗೆರೆಯನ್ನು ಬಳಸಲಾಗಿದೆ. ಈ ಕಾಲ್ಪನಿಕ ಗೆರೆಗಳನ್ನು ಕಲ್ಪಿಸಿಕೊಂಡು ಆಗಸದಲ್ಲಿ ಈ ನಕ್ಷತ್ರ ಪುಂಜವನ್ನು ಗುರುತಿಸಬಹುದು. ಈ ನಕ್ಷತ್ರಪುಂಜವನ್ನು ಗ್ರೀಕ್ ಪುರಾಣ ಕಥೆಯಲ್ಲಿ ಬರುವ ’ದಿ ಗ್ರೇಟ್ ಹಂಟರ್ – ಬೇಟೆಗಾರನಾದ ಒರಿಯಾನ್ ಎಂದು ಹೆಸರಿಸಲಾಗಿದೆ. ಭಾರತದಲ್ಲಿ ಈ ನಕ್ಷತ್ರ ಪುಂಜವನ್ನು ಮಹಾವ್ಯಾಧ ಎಂದು ಹೆಸರಿಸಿದ್ದು, ಈ ಮಹಾವ್ಯಾಧ ತನ್ನ ಮುಂದಿರುವ ವೃಷಭ-ಗೂಳಿ (ಟಾರಸ್ ಎಂದು ಕರೆಯುತ್ತಾರೆ)ವನ್ನು ಅಟ್ಟುತ್ತಿದ್ದಾನೆ ಎನ್ನುವುದು ಪುರಾಣ ಕಥೆ. ಆಗಸದಲ್ಲೂ, ಮಹಾವ್ಯಾಧ ನಕ್ಷತ್ರಪುಂಜದ ಮುಂದೆ ವೃಷಭ ನಕ್ಷತ್ರ ಪುಂಜ ಇದೆ.

ಅಂದಹಾಗೆ, ಈ ಕೆಳಗೆ ನೀಡಿರುವ ಒರಿಯಾನ್ ನಕ್ಷತ್ರ ಪುಂಜದ ಚಿತ್ರದಲ್ಲಿ ಗುರುತಿಸಿರುವ ಭಾಗವನ್ನು ಚಂದ್ರನಿಲ್ಲದ ರಾತ್ರಿಯಲ್ಲಿ ಬರಿಗಣ್ಣಿನಲ್ಲಿ ನೋಡಿದರೆ, ನಕ್ಷತ್ರಗಳು ಹುಟ್ಟುವ ಪ್ರದೇಶವಾದ ಸುಂದರವಾದ ನೆಬುಲ್ಲಾ ಕಾಣುತ್ತದೆ. ಇದನ್ನು ಬೈನಾಕ್ಯೂಲರ್ ಅಥವಾ ದೂರದರ್ಶಕದಲ್ಲಿ ನೋಡಿದರೆ, ಬಹಳ ಸುಂದರವಾಗಿ ಕಾಣುತ್ತದೆ. ಆಗಸದ ಚಿತ್ರಗಳನ್ನು ತೆಗೆಯುವ ಹವ್ಯಾಸಿ ಛಾಯಾಗ್ರಾಹಕರ ನೆಚ್ಚಿನ ವಸ್ತು ಒರಿಯಾನ್ ನೆಬುಲ್ಲಾ. ಅತ್ಯಂತ ಸುಂದರವಾದ ಹೈಡ್ರೋಜನ್ ಮೋಡಗಳು ಮತ್ತು ಎಳೆ ನಕ್ಷತ್ರಗಳು ಹುಟ್ಟುವ ಜಾಗವನ್ನು ಸೆರೆಹಿಡಿಯಬಹುದು. ನಕ್ಷತ್ರದ ಹುಟ್ಟು ಸಾವು ಅಧ್ಯಯನ ಮಾಡಲು ಅತ್ಯಂತ ಉಪಯೋಗವಾದ ನೆಬುಲ್ಲಾ ಇದಾಗಿದೆ.

  • ವಿಶ್ವ ಕೀರ್ತಿ ಎಸ್

ಚಿತ್ರ ಕೃಪೆ: Stellarium, Hubblesite

ಚಿತ್ರ ಕೃಪೆ: www.moongiant.com
(ಮುಂದಿನ ವಾರ ಡಿಸೆಂಬರ್‌ನ ವಿಶೇಷ ಖಗೋಳೀಯ ಘಟನೆಯಾದ ಮತ್ತು ಪ್ರತಿ ವರ್ಷದ ಪ್ರಕಾಶಮಾನ ಜಮಿನೈಡ್ಸ್ ಉಲ್ಕಾಪಾತದ ಬಗ್ಗೆ ವಿವರಗಳನ್ನು ನಿರೀಕ್ಷಿಸಿ.)

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...