Homeಕರ್ನಾಟಕಹಿರಿಯ ಸಾಹಿತಿ ದೇಶಾಂಶ ಹುಡಗಿ ನಿಧನ!

ಹಿರಿಯ ಸಾಹಿತಿ ದೇಶಾಂಶ ಹುಡಗಿ ನಿಧನ!

ಬೀದರ್ ಜಿಲ್ಲೆಯವರಾದ ಇವರ ಮೂಲ ಹೆಸರು ಶಾಂತಪ್ಪ ಶರಣಪ್ಪ ದೇವರಾಯ. ಕನ್ನಡ ಭಾಷೆ, ಸಾಹಿತ್ಯ, ಜಾನಪದ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಇವರು ಮಾಡಿರುವ ಸಾಧನೆ ಅವಿಸ್ಮರಣೀಯ.

- Advertisement -
- Advertisement -

ನಾಡಿನ ಹೆಸರಾಂತ ಸಾಹಿತಿ 91 ವರ್ಷದ ದೇಶಾಂಶ ಹುಡಗಿ ವಯೋಸಹಜ ಕಾಯಿಲೆಯಿಂದ ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4 ದಿನದ ಹಿಂದೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಬೀದರ್ ಜಿಲ್ಲೆಯವರಾದ ಇವರ ಮೂಲ ಹೆಸರು ಶಾಂತಪ್ಪ ಶರಣಪ್ಪ ದೇವರಾಯ. ಕನ್ನಡ ಭಾಷೆ, ಸಾಹಿತ್ಯ, ಜಾನಪದ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಇವರು ಮಾಡಿರುವ ಸಾಧನೆ ಅವಿಸ್ಮರಣೀಯ. ಕಥೆ, ಕವನ ಸಂಕಲ, ಶರಣ ಸಾಹಿತ್ಯ, ಜಾನಪದ ಸಾಹಿತ್ಯ ಸೇರಿದಂತೆ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಹಲವು ಪ್ರಶಸ್ತಿಗಳಿಗೂ ಭಾಜನಾಗಿದ್ದಾರೆ.

ಇದನ್ನು ಓದಿ: ಹೈದರಾಬಾದ್: ಅತಿಕ್ರಮಣ ಪ್ರವೇಶ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ!

ಈ ಸಂದರ್ಭದಲ್ಲಿ 2 ವರ್ಷಗಳ ಹಿಂದೆ ನಾನು ಗೌರಿ.ಕಾಂ ನಲ್ಲಿ ದೇಶಾಂಶ ಹುಡಗಿ ಬಗ್ಗೆ ಬರೆದಿದ್ದ ಲೇಖನವನ್ನು ಮತ್ತೊಮ್ಮೆ ಪ್ರಕಟಿಸಲಾಗಿದೆ.

15 ವರ್ಷಗಳ ಅವಿರತ ಶ್ರಮ ಮತ್ತು ಶ್ರದ್ಧೆಯಿಂದ ಕುರಿತು ದೇಶಾಂಶ ಹುಡಗಿಯವರು ರೂಪಿಸಿದ ‘ಬೀದರ ಕನ್ನಡ ಕೋಶ’ ಕೃತಿಯು ಸಾಂಸ್ಕೃತಿಕ, ಸಾಹಿತ್ಯ ಮತ್ತು ಭಾಷಾ ಲೋಕಕ್ಕೆ ನೀಡಿದ ಮಹತ್ವದ ಕೊಡುಗೆ.

ಇದನ್ನು ಓದಿ: ರಾಜ್ಯ ಸರ್ಕಾರ ದಿವಾಳಿಯಾಗಿದೆ, ವೃದ್ಧಾಪ್ಯ ವೇತನ ನೀಡಲು ಕೂಡಾ ಹಣವಿಲ್ಲ: ಸಿದ್ದರಾಮಯ್ಯ

ಕರ್ನಾಟಕದ ತುತ್ತ ತುದಿಯಲ್ಲಿ ಇರುವ ಬೀದರ್ ಹಲವು ಭಾಷೆಗಳ ಆಡುಂಬೊಲ. ವಿವಿಧ ಭಾಷೆಗಳ ಪರಸ್ಪರ ಮುಖಾಮುಖಿ, ಅನುಸಂಧಾನ, ಕೊಡುಕೊಳುವಿಕೆಯಿಂದ ಹೊಸ ಮತ್ತು ವಿಭಿನ್ನ ಭಾಷೆ-ಪದಗಳು ರೂಪುಗೊಂಡಿವೆ. ಜೊತೆಗೆ ಹಳೆಗನ್ನಡದ ಅಚ್ಚದೇಸಿ ಪದಗಳು ಕೂಡ ಇಂದಿಗೂ ಬಳಕೆಯಲ್ಲಿವೆ. ಅವುಗಳನ್ನು ಹುಡುಕಿ ತಂದು ಒಂದೆಡೆ ಸೇರಿಸಿ ನಿಘಂಟು ರಚಿಸುವ ಅನನ್ಯ ಕೆಲಸವನ್ನು ದೇಶಾಂಶ ಹುಡಗಿ ಅವರು ಮಾಡಿದ್ದಾರೆ.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಮತ್ತು ಬದಲಾವಣೆಗಳು ಅನ್ಯ ಭಾಷೆ ಮತ್ತು ಸಾಹಿತ್ಯದ ಜತೆಗಿನ ಒಡನಾಟದೊಂದಿಗೆ ನಡೆದಿದೆ. ಒಂದು ಕಾಲಕ್ಕೆ ಸಂಸ್ಕೃತದೊಂದಿಗೆ ಮುಖಾಮುಖಿಯಾದ ಕನ್ನಡವು ಅನಂತರದಲ್ಲಿ ಅನುಸಂಧಾನ ಮತ್ತು ಆಪ್ತತೆಗಳಿಂದ ಹೊಸ ತಿಳಿವಳಿಕೆ ಪಡೆಯುತ್ತ, ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಾಯ್ದುಕೊಂಡಿದೆ. ಕವಿರಾಜಮಾರ್ಗಕಾರನ ಪರಿಕಲ್ಪನೆಯ ಹಲವು ಕನ್ನಡಗಳು ಇಲ್ಲಿವೆ. ಅದರಲ್ಲಿ ಬೀದರ ಕನ್ನಡವೂ ಒಂದು. ಹಿಂದಿ, ಉರ್ದು, ತೆಲಗು, ಮರಾಠಿ, ಪರ್ಷಿಯನ್, ಇಂಗ್ಲಿಷ್, ಅರೆಬಿಕ್, ಮೊದಲಾದ ಭಾಷೆಗಳ ಸಂಪರ್ಕದಿಂದ ಬೀದರ ಕನ್ನಡ ಪದ ರಚನೆಯಲ್ಲಿ ಅವೆಲ್ಲವು ಬೆರೆತುಹೋಗಿವೆ. ತೆಲಂಗಾಣಾ, ಮಹಾರಾಷ್ಟ್ರ, ಕನ್ನಡದ ಸೀಮಾಂತ ಜಿಲ್ಲೆಯಾದ ಬೀದರನ ಕನ್ನಡದಲ್ಲಿ ಅನ್ಯ ಭಾಷೆಯ ಅನೇಕ ಪದಗಳನ್ನು ಕನ್ನಡೀಕರಿಸುವ ಶಕ್ತಿ ಪಡೆದಿದೆ. ಸಂಸ್ಕೃತದಿಂದ ಕನ್ನಡಿಕರಣಗೊಂಡು ತದ್ಭವವಾಗುವಂಥ ಗುಣ ಈ ಭಾಷೆಗೆ ಇದೆ.

ಇದನ್ನು ಓದಿ: ಯಡಿಯೂರಪ್ಪ ವಿರುದ್ದ ಅಸಮಾಧಾನ ಹೊರಹಾಕಿದ ಶ್ರೀನಿವಾಸ್ ಪ್ರಸಾದ್- ಪಕ್ಷದಲ್ಲಿ ಬಿಕ್ಕಟ್ಟು?

ಇಂಥ ಭಾಷೆಯ ಮೂಡಿಬಂದ ಈ ಕೋಶ ಬೀದರ ಕನ್ನಡದಲ್ಲಿ ಉಳಿದುಕೊಂಡ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ಅಸಂಖ್ಯ ಪದಗಳನ್ನ ಪೋಷಿಸಿ ಅವನ್ನು ಅರ್ಥದ ಆವರಣಕ್ಕೆ ತಂದು ನಿಲ್ಲಿಸಿದ್ದು ವಿಶೇಷವಾಗಿದೆ.

ಕಾಲದಿಂದ ಕಾಲಕ್ಕೆ ಭಾಷೆಯ ಬಳಕೆ ಭಿನ್ನವಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಈ ನೆಲದ ಭಾಷೆಯ ರಚನೆ, ಅದರ ಸ್ವರೂಪ, ಈ ಬಳಕೆಯಾಗುವ ಪ್ರತ್ಯಯಗಳು, ಭಾಷಾ ಪ್ರಯೋಗದ ಬಗೆಗಳು, ಅವುಗಳ ಅರ್ಥಗ್ರಹಿಕೆ ಇವೆಲ್ಲವುದರ ಕುರಿತು ಭಾಷಾ ಅಧ್ಯಯನಕ್ಕೆ ಹೊಸ ಮಾರ್ಗವೊಂದನ್ನು ಸೃಷ್ಟಿಸಬಲ್ಲ ಕೋಶವನ್ನು ಹುಡಗಿಯವರು ಕಟ್ಟಿಕೊಟ್ಟಿದ್ದಾರೆ. ಸ್ಥಳೀಯ ಭಾಷೆ, ಸಂಪ್ರದಾಯ, ಸಂಸ್ಕೃತಿ, ಜನಪದ, ದೇವರು, ದೆವ್ವ, ನಂಬಿಕೆ, ಆಚರಣೆ, ಗಾದೆ, ಬೈಗಳು ಎಲ್ಲವು ಈ ಕೋಶದ ವ್ಯಪ್ತಿಗೆ ಸೇರಿವೆ.

ಇದನ್ನು ಓದಿ: ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರ ಪ್ರತಿಭಟನೆ 17 ನೇ ದಿನಕ್ಕೆ; ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ

1936 ನವೆಂಬರ್ 06ರಂದು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಡಗಿಯಲ್ಲಿ ಜನಿಸಿದ ಶಾಂತಪ್ಪ ದೇವರಾಯ ಅವರು ‘ದೇಶಾಂಶ ಹುಡಗಿ’ ಎಂದೇ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರು. ತಂದೆ ಶರಣಪ್ಪ. ತಾಯಿ ಭೀಮಾಬಾಯಿ. ಕೃಷಿ ಹಿನ್ನಲೆಯ ಕುಟುಂಬದವರು. 1952ರಿಂದ ಕವಿತೆಗಳು ಬರೆಯುತ್ತಿರುವ ಹುಡಗಿಯವರು 1980ರಲ್ಲಿ ‘ಗ್ರಾಮಶಿಲ್ಪಿಗಳು’ ಕೃತಿಯನ್ನು ಮೊದಲಿಗೆ ಪ್ರಕಟಿಸಿದರು. ಕನ್ನಡದ ಜೊತೆಗೆ ಹಿಂದಿ, ಮರಾಠಿ, ಉರ್ದು, ಇಂಗ್ಲೀಷ ಮೊದಲಾದ ಬಹುಭಾಷೆಗಳಲ್ಲಿ ಪ್ರಾವಿಣ್ಯ ಹೊಂದಿದ ದೇಶಾಂಶ ಹುಡಗಿಯವರು ಕವಿ, ಕತೆಗಾರ, ಸಂಪಾದಕ, ಚರಿತ್ರೆಕಾರ, ನಿಘಂಟುತಜ್ಞ, ಅನುವಾದಕ, ಸಂಘಟಕರಾಗಿ ಸಾಹಿತ್ಯ ಜಗತ್ತಿನಲ್ಲಿ ಮಹತ್ವ ಪಡೆದಿದ್ದಾರೆ.

‘ಬದುಕಿನ ಸುತ್ತ’ (1988),’ಅಕ್ಷರಜ್ಯೋತಿ’ (1992), ಕವನ ಸಂಕಲನಗಳನ್ನು ಬರೆದ ಇವರು, ವ್ಯಕ್ತಿ ಮತ್ತು ವ್ಯಕ್ತಿತ್ವದ ಕನ್ನಡಿಯಾಗಿ ‘ಬೀದರ ಜಿಲ್ಲೆಯ ಬರಹಗಾರರು’, ‘ಬೀದರ ಜಿಲ್ಲೆಯಲ್ಲಿ ಕನ್ನಡ ಕಟ್ಟಿದವರು’, ‘ಗ್ರಾಮಶಿಲ್ಪಿಗಳು’ ಕೃತಿಗಳನ್ನು ಬರೆದಿದ್ದಾರೆ. ಸಾವಿರ ರುಬಾಯಿಗಳ ಸಂಗ್ರಹ ‘ಪ್ರಚಲಿತ’, ‘ಬಚ್ಚನ್ನನ ಮಧುಶಾಲಾ’ (ಹರಿವಂಶರಾಯ್ ಬಚ್ಚನ್), ‘ಆಧ್ಯಾತ್ಮವಾದಿ ವಿಶ್ವವಿಭೂತಿ ಮಹಾತ್ಮ ಬಸವೇಶ್ವರರು’ (ಡಾ.ಭಗವಾನದಾಸ ತಿವಾರಿ) ಅನುವಾದಿತ ಶ್ರೀ ಚನ್ನಬಸವ ಚರಿತ್ರೆ (2014 ಮಹಾಕಾವ್ಯ) ಕೃತಿಗಳಾಗಿವೆ.

ಇದನ್ನು ಓದಿ: ಮೆಹಬೂಬ ಮುಫ್ತಿ ಆಪ್ತ ಸಹಾಯಕನನ್ನು ಬಂಧಿಸಿದ ಎನ್‌ಐಎ!

ಬಿ.ಎ, ಬಿ.ಇಡಿ. ಪದವೀಧರರಾದ ಶಾಂತಪ್ಪನವರು ಪ್ರೌಢಶಾಲಾ ಶಿಕ್ಷಕರಾಗಿ, ಸಾಕ್ಷರತಾ ಶಿಕ್ಷಣ ಯೋಜನಾಧಿಕಾರಿಯಾಗಿ, ಶಾಲಾ ತನಿಖಾಧಿಕಾರಿಯಾಗಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ರಂಗಭೂಮಿಯ ನಂಟಿನಿಂದ 25 ನಾಟಕಗಳಲ್ಲಿ ಅಭಿನಯಿಸಿದ್ದು, 20 ನಾಟಕಗಳನ್ನು ನಿರ್ದೇಶಿಸಿದ್ದಾರೆ. 1999ರಲ್ಲಿ ಧರಿನಾಡು ಕನ್ನಡ ಸಂಘ ಹುಟ್ಟು ಹಾಕಿ, ಹೊಸ ಪೀಳಿಗೆಯ ಕನ್ನಡ ಓದುಗ ಮತ್ತು ಬರಹಗಾರರನ್ನು ಬೆಳೆಸಿ ಪ್ರೋತ್ಸಾಹಿಸುತ್ತಿದ್ದಾರೆ. ಧರಿನಾಡು ಕನ್ನಡ ಸಂಘದ ಅಡಿಯಲ್ಲಿ ಪುಸ್ತಕ ಪ್ರಕಟಣೆ, ಕವಿಗೋಷ್ಠಿ, ವಿಚಾರ ಸಂಕಿರಣ, ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ ‘ಕೆ.ಜಿ.ಕುಂದಣಗಾರ ಗಡಿಕನ್ನಡ ಸಾಹಿತ್ಯ ಪ್ರಶಸ್ತಿ’, ಕನಾಟಕ ಜಾನಪದ ಅಕಾಡೆಮಿಯಿಂದ ಜಾನಪದತಜ್ಞ (2012), ಪಿ.ಎಚ್. ಜವರಪ್ಪ ಸಮಾಜಮುಖಿ ಪ್ರಶಸ್ತಿ, ಕಾಯಕ ಸಮ್ಮಾನ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ದೇಶಾಂಶರ ಸಾಹಿತ್ಯ ಸೇವೆಗೆ ಸಂದಿವೆ.

ದೇಶಾಂಶರ ಬಹುಮುಖ ಪ್ರತಿಭೆ, ಕ್ರಿಯಾಶೀಲ ವ್ಯಕ್ತಿತ್ವ, ಸೃಜನ ಮತ್ತು ಸೃಜನೇತರ ಸಾಹಿತ್ಯವು ಕನ್ನಡದ ಒಂದುತಲೆಮಾರಿನ ಓದುಗರಲ್ಲಿ ಗ್ರಾಮ್ಯಪ್ರಜ್ಞೆ ಮತ್ತು ಲೋಕಪ್ರಜ್ಞೆಯನ್ನು ಮೂಡಿಸಿ, ಸಾಂಸ್ಕೃತಿಕ ಪರಕೀಯತೆಯನ್ನು ಹೋಗಲಾಡಿಸಿ, ದೇಶಿಯತೆ ಹಾಗೂ ಸ್ಥಳೀಯತೆಯ ಸಂಗಡ ನಿಕಟ ಸಂಬಂಧವೊಂದನ್ನು ಬೆಳೆಸಿವೆ.


ಇದನ್ನು ಓದಿ: ದೆಹಲಿ ಗಲಭೆ: ಬಿಜೆಪಿ ನಾಯಕರ ವಿರುದ್ಧದ ದೂರುಗಳಿಗೆ ಕ್ರಮವಿಲ್ಲ- ಎನ್‌ಡಿಟಿವಿ ತನಿಖಾ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...