Homeಕರ್ನಾಟಕಬೆನ್ನು ಬಿಡದ ಅಪರಾಧ

ಬೆನ್ನು ಬಿಡದ ಅಪರಾಧ

- Advertisement -
- Advertisement -

ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಸುಮಲತಾ ಅಂಬರೀಶರ ಚುನಾವಣಾ ಪ್ರಚಾರ ಮಾಡಿ ಸುಸ್ತಾಗಿ ಬಂದು ಮನೆ ಮುಂದೆ ನಿಂತಿದ್ದೆ. ಆಗ ನಾಗಮಂಗಲದಲ್ಲಿ ನಡೆದ ದೇವೇಗೌಡರ ಸಭೆಯ ಬಗ್ಗೆ ಮನಸ್ಸು ಒಂದಿಷ್ಟು ಘಾಸಿಗೊಂಡಿತ್ತು. ಏಕೆಂದರೆ ಕಾಂಗ್ರೆಸ್ ಮತ್ತು ದಳದ ಘಟಾನುಘಟಿ ಲೀಡರುಗಳ ಸಮ್ಮುಖದಲ್ಲಿ ಮಾತನಾಡುತ್ತಿದ್ದ ಗೆಳೆಯ ಶಿವರಾಮೇಗೌಡ ಸುಮಲತಾರನ್ನು ‘ಮಾಯಾಂಗನೆ’ ಎಂದು ಮೂದಲಿಸಿದ್ದಲ್ಲದೆ, ‘ಕರ್ನಾಟಕದ ಜಯಲಲಿತ ಆಗಲು ಬಂದಿದ್ದಾಳೆ’ ಎಂದುಬಿಟ್ಟಿದ್ದ. ಇದು ಅವನ ವ್ಯಕ್ತಿತ್ವಕ್ಕೆ ಸರಿಯಾದ ಮಾತು, ಆದರೆ ಆ ಸಭೆಯಲ್ಲಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡರು ಸಭ್ಯತೆಯ ಎಲ್ಲೆ ಮೀರಿದ್ದ ಶಿವರಾಮೇಗೌಡನ ಮಾತಿಗೆ ಆಕ್ಷೇಪವೆತ್ತಿರಲಿಲ್ಲ. ಬದಲಿಗೆ ದೇವೇಗೌಡರ ಮಾತಿಗೆ ಅವಕಾಶ ದೊರೆತಾಗ ‘ನಾನು ಭಾಷಣ ಮಾಡಲ್ಲ. ಶಿವರಾಮೇಗೌಡರ ಮಾತೇ ಅಂತಿಮ’ ಎಂದು ಹೇಳಿ ದಂಗುಬಡಿಸಿದ್ದರು. ಅಂತು ಇವರಿಗೇನೂ ಕೇಡುಗಾಲ ಎಂದುಕೊಂಡು ಸುಮ್ಮನೆ ಊರಿಗೆ ಬಂದಿದ್ದೆ.

ಆ ದಿನ ಸಾಯಂಕಾಲ ಮನೆ ಮುಂದೆ ಒಂದು ಬೈಕ್ ಬಂದು ನಿಂತಿತು. ಅಲ್ಲದೆ ‘ನಮಸ್ಕಾರ ಕಣಣ್ಣಾ’ ಎಂದಿತು. ನಸುಗತ್ತಲಾದ್ದರಿಂದ ಯಾರೆಂದು ಅರಿವಾಗಲಿಲ್ಲ ಹತ್ತಿರ ಹೋದೆ. ‘ನಾನು ಕಣಣ್ಣ ಎಂದ’. ‘ನಾನು ಮತ್ತೂ ಅನುಮಾನಿಸಿ ಗೊತ್ತಾಗಲಿಲ್ಲ’ ಎಂದೆ. ‘ನಾನು ಕಣಣ್ಣ, ಅದೇ ಗಂಗಾಧರಮೂರ್ತಿ’ ಎಂದ. ಆಗ ತಿಳಿಯಿತು. ನಮ್ಮೂರ ಮಗಳ ಮಗನಾದ ಈತ ತನ್ನ ಪರಿಚಯ ಹೇಳಿಕೊಳ್ಳಲು ‘ನಾನು ಗಂಗಾಧರ ಮೂರ್ತಿ ಕೊಂದವನು’ ಎಂದು ಹೇಳಿಕೊಳ್ಳುತ್ತಿದ್ದಾನೆ’ ಎಂಬುದು ಅರಿವಿಗೆ ಬಂತು. ಒಂದುಕ್ಷಣ ಅಳುಕಾಗಿ ‘ಏನಪ್ಪ ಸಮಾಚಾರ’ ಎಂದೆ. ‘ಏನಿಲ್ಲ ಕಣಣ್ಣ ನಿಮ್ಮತ್ರ ಏನೋ ಹೇಳಬೇಕಾಗ್ಯದೆ’ ಎಂದ. ‘ಏನು ವಿಷಯ’ ಎಂದೆ. ‘ಅದೆ ಶಿವರಾಮೇಗೌಡನ ವಿಷಯ ಕಣಣ್ಣ’ ಎಂದೆ. ‘ಅಯ್ಯೊ ಅವುನ ವಿಷಯ ಬಂದೂ ಬಂದೂ ಸಾಕಾಗ್ಯದೆ ಕಣಪ್ಪ. ಈಗವುನ್ನೇನು ಮುಟ್ಟಂಗಿಲ್ಲ. ದೇವೇಗೌಡ್ರು ಕರಕಂಡು ಬಂದು ಎಂ.ಪಿ ಮಾಡ್ಯವುರೆ’ ಎಂದೆ. ಆದ್ರು ಬರಿಬೇಕು ಬುಡಬಾರ್ದು ಕಣಣ್ಣ’ ಎಂದ. ‘ಆಯ್ತು ಬರಿಯನ ಅದೇನೇಳು’ ಎಂದೆ. ನೀವೊಂದೆರಡು ದಿನ ಬಿಡುವಾಗಿ ಸಿಕ್ಕಬೇಕಲ್ಲಣ್ಣ’ ಎಂದ. ‘ಸಿಗನ ತಗೊ ನನಿಗೇನು ಕ್ಯಲ್ಸಿಲ್ಲ’ ಎಂದೆ. ಶಿವರಾಮೇಗೌಡ ಕೋರ್ಟಿಗೋಗಬಹುದು’ ಎಂದ. ‘ಯಾಕೆ!’ ಎಂದೆ. ‘ಗಂಗಾಧರ ಮೂರ್ತಿ ಕೊಲೇಲಿ ನಮ್ಮನ್ನ ಹ್ಯಂಗೆ ಬಳಸಿಗಂಡ ಅನ್ನದನ್ಯಲ್ಲ ಹೇಳತಿನಿ’ ಎಂದ.

‘ನೋಡ್ರಪ್ಪ ಈಚೆಗೆ ನಮ್ಮ ಕೋರ್ಟಿಗೆ ಯಾರೂ ಹೆದರತಾಯಿಲ್ಲ. ಕೇಸಿನ ತೀರ್ಪು ಬರಕ್ಕೆ ಕನಿಷ್ಟ ಇಪ್ಪತ್ತು ವರ್ಷ ಆಯ್ತಾ ಅದೆ. ಅಷ್ಟೊತ್ತಿಗೆ ಶಿವರಾಮ ನೀನು ನಾನು ಯಾರೂ ಇರದಿಲ್ಲ ಆದ್ರಿಂದ ಧೈರ್ಯವಾಗಿ ಹೇಳು ಬರಿಯನ’ ಎಂದೆ. ಬರಿಬೇಕು ಕಣಣ್ಣ. ಇವತ್ತು ನಾನು ಬಾಳ ಯಾತನೇಲಿದ್ದಿನಿ’ ಎಂದ. ಒಂದಿಷ್ಟು ಸುಮ್ಮನಾದ. ನಾನು ಗಂಗಾಧರ ಮೂರ್ತಿ ಕೊಲೆ ಕಾಡಿಸುತ್ತಿರಬಹುದೆ. ಈತ ಹೊಡೆದ ಮಚ್ಚಿನೇಟಿಗೆ ಮರು ಮಾತನಾಡದೆ ಬೈಕ್ ಸಮೇತ ಭೂಮಿಗೊರಗಿದ. ಆ ದೃಶ್ಯ ಜೀವ ಹಿಂಡುತ್ತಿರಬಹುದೆ. ಎಂದು ಒಂದುಕ್ಷಣ ಯೋಚಿಸಿ ‘ಯಾಕಪ್ಪ ಏನಾಯ್ತು’ ಎಂದೆ. ‘ನನಿಗೆ ಜೀವಾವಧಿ ಆಯ್ತು ಕಣಣ್ಣ. ಅದೇ ಟೈಮಿಗೆ ನನಿಗೆ ಮಗ ಹುಟ್ಟಿದ. ಇತ್ತಗೆ ಹೆರಿಗೆ ಆದ್ರೆ ಅತ್ತಗೆ ನಾನು ಜೈಲಿಗೋದೆ. ಹೋಗುವಾಗ ನನ್ನೆಡ್ತಿಗೆ ಧೈರ್ಯ ಹೇಳಿ ಹೋಗಿದ್ದೆ. ಪೆರೋಲ್ ಮ್ಯಾಲೆ ಬಿಡುಗಡೆ ಆಯ್ತು ಸಾ… ಅದು ಎಂಟು ದಿನಕ್ಕೆ ಮಾತ್ರ. ಊರಿಗೆ ಬಂದು ನೋಡ್ತಿನಿ. ಮಗನಿಗಾಗ್ಲೆ ಹನ್ನೆರಡೊರ್ಸ. ಅವುನ ಜೊತೆ ಅರಾಮಾಗಿದ್ದು ಪುನಃ ಜೈಲಿಗೋದೆ ಕಣಣ್ಣ. ಒಳ್ಳೆ ನಡವಳಿಕೆ ಕಾರಣಕ್ಕೆ ಬೇಗ ಬಿಡುಗಡೆಯಾಗಕ್ಕೆ ಕುಮಾರಸ್ವಾಮಿಗೆ ಹೇಳೋದಕ್ಕೆ ಯವಸ್ಥೆ ಮಾಡಿದ್ದೆ ಕಣಣ್ಣ. ಅಷ್ಟರಲ್ಲಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಅನ್ನ ಸುದ್ದಿ ಬಿತ್ತು ಕಣಣ್ಣ’ ಎಂದು ಹೇಳುವಷ್ಟರಲ್ಲಿ, ಲೋಕೇಶನ ಗಂಟಲು ಬಿಗಿದು ಬಂದು ಕಣ್ಣು ತುಂಬಿಕೊಂಡವು. ‘ಅಯ್ಯೊ ಯಂತ ದುರಂತನಯ್ಯ’ ಎಂದು ಉದ್ಘಾರ ತೆಗೆದ. ನಾನು, ಬರೋಬ್ಬರಿ 26 ವರ್ಷಕ್ಕೆ ಮಗುಚಿಕೊಂಡೆ. ಆಗ ಇದೇ ಲೋಕೇಶ್‍ನಂತೆ ನನಗೂ ದುಃಖ ಒತ್ತರಿಸಿ ಬಂದು ಗೆಳೆಯರು ಸುಮ್ಮನಿರಿಸಿದರೂ ಆಗದೇ ಗೊಳೋ ಎಂದು ಅತ್ತು ಬಿಟ್ಟಿದ್ದೆ. ಎದೆಯ ದುಃಖ ಬಸಿದ ನಂತರ ಸಮಾಧಾನ ಮಾಡಿಕೊಂಡು ಆಲಿಸಿದೆ. ನನ್ನ ಅಳುವಿಗೆ ಕಾರಣನಾಗಿದ್ದ ಗಂಗಾಧರ ಮೂರ್ತಿ ಮಗ ರವಿವರ್ಮನ ಅಳು ನಿಂತಿತ್ತು. ತನ್ನ ತಂದೆಯ ಶವಸಂಸ್ಕಾರ ಮುಗಿದ ಮೇಲೆ ಇದ್ದಕ್ಕಿದ್ದಂತೆ ಅಪ್ಪನನ್ನ ನೆನೆಸಿಕೊಂಡು ಯಾರೂ ಸುಮ್ಮನಿರಿಸಲಾಗದ ಅಳುವಿಗೆ ತುತ್ತಾಗಿತ್ತು. ಈಗ ಸುಸ್ತಾಗಿ ಸುಮ್ಮನಾಗಿತ್ತು. ಆ ದಾರುಣ ಸಂದರ್ಭ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು. ಆವತ್ತು ಅಪ್ಪನನ್ನು ಕಳೆದುಕೊಂಡು ಮಗು ರವಿವರ್ಮ ಅಳುತ್ತಿದ್ದರೆ, ಈಗ ಮಗನನ್ನು ಕಳೆದುಕೊಂಡು ಲೋಕೇಶ್ ದುಃಖಿತನಾಗಿದ್ದ. ಬಹುಶಃ ಇಂತಹ ದುಃಖವೇ ಆತನನ್ನ ಶಿವರಾಮೇಗೌಡನ ವಿರುದ್ಧ ಸೇಡಿಗೆ ಪ್ರಚೋದಿಸಿರಬಹುದು ಎಂದುಕೊಳ್ಳುತ್ತಿರುವಾಗ, ಲೋಕೇಶ್ ‘ಮಗನ ಸಾವಿನ ದುಃಖ ಮರಿಯಕ್ಕೆ ಆಗಾಗ್ಗೆ ಕುಡಿತಿನಿ ಕಣಣ್ಣ’ ಎಂದ. ಈ ಬಗ್ಗೆ ನಾನು ಏನೂ ಹೇಳಲಾಗಲಿಲ್ಲ. ಆದರೆ, ಜೈಲಿನಲ್ಲಿದ್ದ ಅಪ್ಪ ಪೆರೋಲ್ ಮೇಲೆ ಬಂದು ಮಗನನ್ನ ಮಾತನಾಡಿಸಿ ಮುದ್ದಾಡಿ ಮತ್ತೆ ಜೈಲಿಗೆ ಹೋದಾಗ, ಆ ಹುಡುಗ ಏನು ಯೋಚಿಸಿರಬಹುದು. ಶಾಲೆಯಲ್ಲಿ ಯಾರಾದರೂ ಹಂಗಿಸಿರಬಹುದೇ ಎಂದೆಲ್ಲ ಆ ಯೋಚಿಸುತ್ತಿರುವಾಗ ‘ಬರ್ತಿನಿ ಕಣಣ್ಣ ಬಿಡುವು ಮಾಡಿಕೊಂಡು ಸಿಕ್ಕಿ ಯಲ್ಲನು ಹೇಳ್ತಿನಿ’ ಎಂದು ಹೊರಟ. ಈಗ ಅದ್ಯಾವುದರಿಂದ ಏನೂ ಪ್ರಯೋಜನವಿಲ್ಲ ಎಂದುಕೊಂಡರೂ, ಗಂಗಾಧರ ಮೂರ್ತಿ ಕೊಲೆ ನಡೆದು ಇಪ್ಪತ್ತಾರು ವರ್ಷಗಳಾಗಿವೆ. ಈ ನಡುವೆ ರಾಜಕೀಯವಾಗಿ ಮತ್ತು ಮತೀಯವಾಗಿ ನೂರಾರು ಕೊಲೆಗಳಾಗಿವೆ. ಆದರೂ ಇದೊಂದು ಕೊಲೆಗೆ ಸಂಬಂಧಿಸಿದವರು ಅಶಾಂತಿ ಮತ್ತು ದುಃಖದಿಂದ ತತ್ತರಿಸುತ್ತಿರುವುದು ಗೋಚರವಾಗುತ್ತಿದ್ದಂತೆ ಆಶ್ಚರ್ಯವಾಗತೊಡಗಿತು. ನಿಜಕ್ಕೂ ಅದೊಂದು ಅಮಾಯಕನ ಕೊಲೆಯಾಗಿತ್ತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...