Homeಕರ್ನಾಟಕಬೆನ್ನು ಬಿಡದ ಅಪರಾಧ

ಬೆನ್ನು ಬಿಡದ ಅಪರಾಧ

- Advertisement -
- Advertisement -

ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಸುಮಲತಾ ಅಂಬರೀಶರ ಚುನಾವಣಾ ಪ್ರಚಾರ ಮಾಡಿ ಸುಸ್ತಾಗಿ ಬಂದು ಮನೆ ಮುಂದೆ ನಿಂತಿದ್ದೆ. ಆಗ ನಾಗಮಂಗಲದಲ್ಲಿ ನಡೆದ ದೇವೇಗೌಡರ ಸಭೆಯ ಬಗ್ಗೆ ಮನಸ್ಸು ಒಂದಿಷ್ಟು ಘಾಸಿಗೊಂಡಿತ್ತು. ಏಕೆಂದರೆ ಕಾಂಗ್ರೆಸ್ ಮತ್ತು ದಳದ ಘಟಾನುಘಟಿ ಲೀಡರುಗಳ ಸಮ್ಮುಖದಲ್ಲಿ ಮಾತನಾಡುತ್ತಿದ್ದ ಗೆಳೆಯ ಶಿವರಾಮೇಗೌಡ ಸುಮಲತಾರನ್ನು ‘ಮಾಯಾಂಗನೆ’ ಎಂದು ಮೂದಲಿಸಿದ್ದಲ್ಲದೆ, ‘ಕರ್ನಾಟಕದ ಜಯಲಲಿತ ಆಗಲು ಬಂದಿದ್ದಾಳೆ’ ಎಂದುಬಿಟ್ಟಿದ್ದ. ಇದು ಅವನ ವ್ಯಕ್ತಿತ್ವಕ್ಕೆ ಸರಿಯಾದ ಮಾತು, ಆದರೆ ಆ ಸಭೆಯಲ್ಲಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡರು ಸಭ್ಯತೆಯ ಎಲ್ಲೆ ಮೀರಿದ್ದ ಶಿವರಾಮೇಗೌಡನ ಮಾತಿಗೆ ಆಕ್ಷೇಪವೆತ್ತಿರಲಿಲ್ಲ. ಬದಲಿಗೆ ದೇವೇಗೌಡರ ಮಾತಿಗೆ ಅವಕಾಶ ದೊರೆತಾಗ ‘ನಾನು ಭಾಷಣ ಮಾಡಲ್ಲ. ಶಿವರಾಮೇಗೌಡರ ಮಾತೇ ಅಂತಿಮ’ ಎಂದು ಹೇಳಿ ದಂಗುಬಡಿಸಿದ್ದರು. ಅಂತು ಇವರಿಗೇನೂ ಕೇಡುಗಾಲ ಎಂದುಕೊಂಡು ಸುಮ್ಮನೆ ಊರಿಗೆ ಬಂದಿದ್ದೆ.

ಆ ದಿನ ಸಾಯಂಕಾಲ ಮನೆ ಮುಂದೆ ಒಂದು ಬೈಕ್ ಬಂದು ನಿಂತಿತು. ಅಲ್ಲದೆ ‘ನಮಸ್ಕಾರ ಕಣಣ್ಣಾ’ ಎಂದಿತು. ನಸುಗತ್ತಲಾದ್ದರಿಂದ ಯಾರೆಂದು ಅರಿವಾಗಲಿಲ್ಲ ಹತ್ತಿರ ಹೋದೆ. ‘ನಾನು ಕಣಣ್ಣ ಎಂದ’. ‘ನಾನು ಮತ್ತೂ ಅನುಮಾನಿಸಿ ಗೊತ್ತಾಗಲಿಲ್ಲ’ ಎಂದೆ. ‘ನಾನು ಕಣಣ್ಣ, ಅದೇ ಗಂಗಾಧರಮೂರ್ತಿ’ ಎಂದ. ಆಗ ತಿಳಿಯಿತು. ನಮ್ಮೂರ ಮಗಳ ಮಗನಾದ ಈತ ತನ್ನ ಪರಿಚಯ ಹೇಳಿಕೊಳ್ಳಲು ‘ನಾನು ಗಂಗಾಧರ ಮೂರ್ತಿ ಕೊಂದವನು’ ಎಂದು ಹೇಳಿಕೊಳ್ಳುತ್ತಿದ್ದಾನೆ’ ಎಂಬುದು ಅರಿವಿಗೆ ಬಂತು. ಒಂದುಕ್ಷಣ ಅಳುಕಾಗಿ ‘ಏನಪ್ಪ ಸಮಾಚಾರ’ ಎಂದೆ. ‘ಏನಿಲ್ಲ ಕಣಣ್ಣ ನಿಮ್ಮತ್ರ ಏನೋ ಹೇಳಬೇಕಾಗ್ಯದೆ’ ಎಂದ. ‘ಏನು ವಿಷಯ’ ಎಂದೆ. ‘ಅದೆ ಶಿವರಾಮೇಗೌಡನ ವಿಷಯ ಕಣಣ್ಣ’ ಎಂದೆ. ‘ಅಯ್ಯೊ ಅವುನ ವಿಷಯ ಬಂದೂ ಬಂದೂ ಸಾಕಾಗ್ಯದೆ ಕಣಪ್ಪ. ಈಗವುನ್ನೇನು ಮುಟ್ಟಂಗಿಲ್ಲ. ದೇವೇಗೌಡ್ರು ಕರಕಂಡು ಬಂದು ಎಂ.ಪಿ ಮಾಡ್ಯವುರೆ’ ಎಂದೆ. ಆದ್ರು ಬರಿಬೇಕು ಬುಡಬಾರ್ದು ಕಣಣ್ಣ’ ಎಂದ. ‘ಆಯ್ತು ಬರಿಯನ ಅದೇನೇಳು’ ಎಂದೆ. ನೀವೊಂದೆರಡು ದಿನ ಬಿಡುವಾಗಿ ಸಿಕ್ಕಬೇಕಲ್ಲಣ್ಣ’ ಎಂದ. ‘ಸಿಗನ ತಗೊ ನನಿಗೇನು ಕ್ಯಲ್ಸಿಲ್ಲ’ ಎಂದೆ. ಶಿವರಾಮೇಗೌಡ ಕೋರ್ಟಿಗೋಗಬಹುದು’ ಎಂದ. ‘ಯಾಕೆ!’ ಎಂದೆ. ‘ಗಂಗಾಧರ ಮೂರ್ತಿ ಕೊಲೇಲಿ ನಮ್ಮನ್ನ ಹ್ಯಂಗೆ ಬಳಸಿಗಂಡ ಅನ್ನದನ್ಯಲ್ಲ ಹೇಳತಿನಿ’ ಎಂದ.

‘ನೋಡ್ರಪ್ಪ ಈಚೆಗೆ ನಮ್ಮ ಕೋರ್ಟಿಗೆ ಯಾರೂ ಹೆದರತಾಯಿಲ್ಲ. ಕೇಸಿನ ತೀರ್ಪು ಬರಕ್ಕೆ ಕನಿಷ್ಟ ಇಪ್ಪತ್ತು ವರ್ಷ ಆಯ್ತಾ ಅದೆ. ಅಷ್ಟೊತ್ತಿಗೆ ಶಿವರಾಮ ನೀನು ನಾನು ಯಾರೂ ಇರದಿಲ್ಲ ಆದ್ರಿಂದ ಧೈರ್ಯವಾಗಿ ಹೇಳು ಬರಿಯನ’ ಎಂದೆ. ಬರಿಬೇಕು ಕಣಣ್ಣ. ಇವತ್ತು ನಾನು ಬಾಳ ಯಾತನೇಲಿದ್ದಿನಿ’ ಎಂದ. ಒಂದಿಷ್ಟು ಸುಮ್ಮನಾದ. ನಾನು ಗಂಗಾಧರ ಮೂರ್ತಿ ಕೊಲೆ ಕಾಡಿಸುತ್ತಿರಬಹುದೆ. ಈತ ಹೊಡೆದ ಮಚ್ಚಿನೇಟಿಗೆ ಮರು ಮಾತನಾಡದೆ ಬೈಕ್ ಸಮೇತ ಭೂಮಿಗೊರಗಿದ. ಆ ದೃಶ್ಯ ಜೀವ ಹಿಂಡುತ್ತಿರಬಹುದೆ. ಎಂದು ಒಂದುಕ್ಷಣ ಯೋಚಿಸಿ ‘ಯಾಕಪ್ಪ ಏನಾಯ್ತು’ ಎಂದೆ. ‘ನನಿಗೆ ಜೀವಾವಧಿ ಆಯ್ತು ಕಣಣ್ಣ. ಅದೇ ಟೈಮಿಗೆ ನನಿಗೆ ಮಗ ಹುಟ್ಟಿದ. ಇತ್ತಗೆ ಹೆರಿಗೆ ಆದ್ರೆ ಅತ್ತಗೆ ನಾನು ಜೈಲಿಗೋದೆ. ಹೋಗುವಾಗ ನನ್ನೆಡ್ತಿಗೆ ಧೈರ್ಯ ಹೇಳಿ ಹೋಗಿದ್ದೆ. ಪೆರೋಲ್ ಮ್ಯಾಲೆ ಬಿಡುಗಡೆ ಆಯ್ತು ಸಾ… ಅದು ಎಂಟು ದಿನಕ್ಕೆ ಮಾತ್ರ. ಊರಿಗೆ ಬಂದು ನೋಡ್ತಿನಿ. ಮಗನಿಗಾಗ್ಲೆ ಹನ್ನೆರಡೊರ್ಸ. ಅವುನ ಜೊತೆ ಅರಾಮಾಗಿದ್ದು ಪುನಃ ಜೈಲಿಗೋದೆ ಕಣಣ್ಣ. ಒಳ್ಳೆ ನಡವಳಿಕೆ ಕಾರಣಕ್ಕೆ ಬೇಗ ಬಿಡುಗಡೆಯಾಗಕ್ಕೆ ಕುಮಾರಸ್ವಾಮಿಗೆ ಹೇಳೋದಕ್ಕೆ ಯವಸ್ಥೆ ಮಾಡಿದ್ದೆ ಕಣಣ್ಣ. ಅಷ್ಟರಲ್ಲಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಅನ್ನ ಸುದ್ದಿ ಬಿತ್ತು ಕಣಣ್ಣ’ ಎಂದು ಹೇಳುವಷ್ಟರಲ್ಲಿ, ಲೋಕೇಶನ ಗಂಟಲು ಬಿಗಿದು ಬಂದು ಕಣ್ಣು ತುಂಬಿಕೊಂಡವು. ‘ಅಯ್ಯೊ ಯಂತ ದುರಂತನಯ್ಯ’ ಎಂದು ಉದ್ಘಾರ ತೆಗೆದ. ನಾನು, ಬರೋಬ್ಬರಿ 26 ವರ್ಷಕ್ಕೆ ಮಗುಚಿಕೊಂಡೆ. ಆಗ ಇದೇ ಲೋಕೇಶ್‍ನಂತೆ ನನಗೂ ದುಃಖ ಒತ್ತರಿಸಿ ಬಂದು ಗೆಳೆಯರು ಸುಮ್ಮನಿರಿಸಿದರೂ ಆಗದೇ ಗೊಳೋ ಎಂದು ಅತ್ತು ಬಿಟ್ಟಿದ್ದೆ. ಎದೆಯ ದುಃಖ ಬಸಿದ ನಂತರ ಸಮಾಧಾನ ಮಾಡಿಕೊಂಡು ಆಲಿಸಿದೆ. ನನ್ನ ಅಳುವಿಗೆ ಕಾರಣನಾಗಿದ್ದ ಗಂಗಾಧರ ಮೂರ್ತಿ ಮಗ ರವಿವರ್ಮನ ಅಳು ನಿಂತಿತ್ತು. ತನ್ನ ತಂದೆಯ ಶವಸಂಸ್ಕಾರ ಮುಗಿದ ಮೇಲೆ ಇದ್ದಕ್ಕಿದ್ದಂತೆ ಅಪ್ಪನನ್ನ ನೆನೆಸಿಕೊಂಡು ಯಾರೂ ಸುಮ್ಮನಿರಿಸಲಾಗದ ಅಳುವಿಗೆ ತುತ್ತಾಗಿತ್ತು. ಈಗ ಸುಸ್ತಾಗಿ ಸುಮ್ಮನಾಗಿತ್ತು. ಆ ದಾರುಣ ಸಂದರ್ಭ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು. ಆವತ್ತು ಅಪ್ಪನನ್ನು ಕಳೆದುಕೊಂಡು ಮಗು ರವಿವರ್ಮ ಅಳುತ್ತಿದ್ದರೆ, ಈಗ ಮಗನನ್ನು ಕಳೆದುಕೊಂಡು ಲೋಕೇಶ್ ದುಃಖಿತನಾಗಿದ್ದ. ಬಹುಶಃ ಇಂತಹ ದುಃಖವೇ ಆತನನ್ನ ಶಿವರಾಮೇಗೌಡನ ವಿರುದ್ಧ ಸೇಡಿಗೆ ಪ್ರಚೋದಿಸಿರಬಹುದು ಎಂದುಕೊಳ್ಳುತ್ತಿರುವಾಗ, ಲೋಕೇಶ್ ‘ಮಗನ ಸಾವಿನ ದುಃಖ ಮರಿಯಕ್ಕೆ ಆಗಾಗ್ಗೆ ಕುಡಿತಿನಿ ಕಣಣ್ಣ’ ಎಂದ. ಈ ಬಗ್ಗೆ ನಾನು ಏನೂ ಹೇಳಲಾಗಲಿಲ್ಲ. ಆದರೆ, ಜೈಲಿನಲ್ಲಿದ್ದ ಅಪ್ಪ ಪೆರೋಲ್ ಮೇಲೆ ಬಂದು ಮಗನನ್ನ ಮಾತನಾಡಿಸಿ ಮುದ್ದಾಡಿ ಮತ್ತೆ ಜೈಲಿಗೆ ಹೋದಾಗ, ಆ ಹುಡುಗ ಏನು ಯೋಚಿಸಿರಬಹುದು. ಶಾಲೆಯಲ್ಲಿ ಯಾರಾದರೂ ಹಂಗಿಸಿರಬಹುದೇ ಎಂದೆಲ್ಲ ಆ ಯೋಚಿಸುತ್ತಿರುವಾಗ ‘ಬರ್ತಿನಿ ಕಣಣ್ಣ ಬಿಡುವು ಮಾಡಿಕೊಂಡು ಸಿಕ್ಕಿ ಯಲ್ಲನು ಹೇಳ್ತಿನಿ’ ಎಂದು ಹೊರಟ. ಈಗ ಅದ್ಯಾವುದರಿಂದ ಏನೂ ಪ್ರಯೋಜನವಿಲ್ಲ ಎಂದುಕೊಂಡರೂ, ಗಂಗಾಧರ ಮೂರ್ತಿ ಕೊಲೆ ನಡೆದು ಇಪ್ಪತ್ತಾರು ವರ್ಷಗಳಾಗಿವೆ. ಈ ನಡುವೆ ರಾಜಕೀಯವಾಗಿ ಮತ್ತು ಮತೀಯವಾಗಿ ನೂರಾರು ಕೊಲೆಗಳಾಗಿವೆ. ಆದರೂ ಇದೊಂದು ಕೊಲೆಗೆ ಸಂಬಂಧಿಸಿದವರು ಅಶಾಂತಿ ಮತ್ತು ದುಃಖದಿಂದ ತತ್ತರಿಸುತ್ತಿರುವುದು ಗೋಚರವಾಗುತ್ತಿದ್ದಂತೆ ಆಶ್ಚರ್ಯವಾಗತೊಡಗಿತು. ನಿಜಕ್ಕೂ ಅದೊಂದು ಅಮಾಯಕನ ಕೊಲೆಯಾಗಿತ್ತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....