Homeಸಾಹಿತ್ಯ-ಸಂಸ್ಕೃತಿಕಥೆಅವಕಾಶಗಳ ಬಾಲ ಕೈ ಬಿಟ್ಟಾಗ

ಅವಕಾಶಗಳ ಬಾಲ ಕೈ ಬಿಟ್ಟಾಗ

- Advertisement -
- Advertisement -

ಇಪ್ಪತ್ತೈದು ವಯಸ್ಸಿನ ಸ್ಫುರದ್ರೂಪಿ ಯುವಕ. ಪಕ್ಕದೂರಿನ ರೈತನೊಬ್ಬನ ಮಗಳ ಮೇಲೆ ಅವನಿಗೆ ಒಲವಾಯಿತು. ಆಕೆಯನ್ನೇ ಮದುವೆಯಾಗಬೇಕೆಂದು ನಿರ್ಧರಿಸಿಕೊಂಡ. ಸೀದಾ ಆ ಹುಡುಗಿಯ ಅಪ್ಪನ ಮುಂದೆ ಬಂದು ನಿಂತ.
`ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ. ಅವಳನ್ನು ಮದುವೆಯಾಗುತ್ತೇನೆ. ದಯವಿಟ್ಟು ಅಪ್ಪಣೆ ಕೊಡಿ’ ಹುಡುಗ ಪ್ರಾಮಾಣಿಕವಾಗಿ ತನ್ನ ಮನದಾಸೆಯನ್ನು ಹುಡುಗಿಯ ಅಪ್ಪನೆದುರು ಬಿಚ್ಚಿಟ್ಟ.
ರೈತ, ಹುಡುಗನನ್ನು ಒಮ್ಮೆ ದಿಟ್ಟಿಸಿ ನೋಡಿದ. ಸಿರಿವಂತಿಕೆಯ ಲಕ್ಷಣಗಳು ಅವನ ದೇಹದಿಂದ ಚಿಮ್ಮಿ ಬರುತ್ತಿದ್ದವು.
ಒಂದು ನಿರ್ಧಾರಿತ ಧ್ವನಿಯಲ್ಲಿ ರೈತ ನುಡಿದ, `ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನನಗೆ ಯಾವ ಅಭ್ಯಂತರವೂ ಇಲ್ಲ. ಆದರೆ ನಾನು ಒಂದು ಸ್ಪರ್ಧೆ ಇಡುವೆ. ಅದರಲ್ಲಿ ನೀನು ಗೆದ್ದರೆ ಮಾತ್ರ ಮದುವೆಯ ಪ್ರಸ್ತಾಪ. ಇಲ್ಲದಿದ್ದರೆ ನೀನು ಖಾಲಿ ಕೈಯಲ್ಲಿ ವಾಪಾಸ್ ಹೋಗಬೇಕು’.
ವಯಸ್ಸಿನ ಹುಮ್ಮಸ್ಸು, ಪ್ರೀತಿಯ ನಶೆಯಲ್ಲಿದ್ದ ಹುಡುಗ `ಸರಿ, ನಾನು ಸಿದ್ಧ. ಏನು ನಿಮ್ಮ ಸ್ಪರ್ಧೆ?’ ಪ್ರಶ್ನಿಸಿಯೇಬಿಟ್ಟ.
`ಏನಿಲ್ಲ, ನೀನು ಆ ಮೈದಾನದ ಮಧ್ಯದಲ್ಲಿ ನಿಂತಿರು. ನಾನು ನನ್ನ ಬಳಿಯಿರುವ ಮೂರು ಗೂಳಿಗಳನ್ನು ಒಂದಾದ ಮೇಲೆ ಒಂದರಂತೆ ಮೈದಾನದೊಳಕ್ಕೆ ಬಿಡುತ್ತೇನೆ. ಮೂರರಲ್ಲಿ ಯಾವುದಾದರು ಒಂದು ಗೂಳಿಯ ಬಾಲವನ್ನು ನೀನು ಹಿಡಿದರೂ ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡ್ತೀನಿ.’
`ಅಷ್ಟೇ ತಾನೆ, ನಾನು ಸಿದ್ಧ!’ ಹುಡುಗ ಒಂದೇ ಉಸುರಿಗೆ ಸಮ್ಮತಿಯಿತ್ತ.
ಮೈದಾನದ ನಡುವೆ ಹುಡುಗ ಮೊದಲ ಗೂಳಿಗಾಗಿ ಕಾದು ನಿಂತ. ರೈತ ತನ್ನ ಕೊಟ್ಟಿಗೆಯಿಂದ ಒಂದು ಗೂಳಿಯನ್ನು ಮೈದಾನದತ್ತ ನುಗ್ಗಿಸಿದ. ಅದು ದಷ್ಟಪುಷ್ಟವಾಗಿದ್ದ ಗೂಳಿ. ಕಟ್ಟುಮಸ್ತಾದ ಐದಾರು ಪೈಲ್ವಾನರನ್ನು ಒಂದೇ ಏಟಿಗೆ ಎತ್ತಿ ಬಿಸಾಡಬಲ್ಲ ರೋಷದಿಂದ ನುಗ್ಗಿ ಬರುತ್ತಿತ್ತು.
ಹುಡುಗ ಯೋಚನೆ ಮಾಡಿದ, `ಈ ಗೂಳಿ ಭಯಂಕರ ತಾಕತ್ತಿನಲ್ಲಿದೆ. ಇದರ ಬಾಲ ಹಿಡಿಯಲು ಹೋದರೆ ಅಪಾಯ ಕಟ್ಟಿಟ್ಟಬುತ್ತಿ. ಇದನ್ನು ಸುಮ್ಮನೇ ಬಿಟ್ಟುಬಿಡೋಣ. ಎರಡನೇ ಗೂಳಿಯ ಬಾಲ ಹಿಡಿದರಾಯ್ತು. ಹೇಗೂ ಒಂದು ಗೂಳಿಯ ಬಾಲವನ್ನು ತಾನೇ ನಾನು ಹಿಡಿಯಬೇಕಿರುವುದು. ಮನಸ್ಸಿನ ಆಲೋಚನೆಯನ್ನು ಪ್ರತಿಫಲಿಸುವಂತೆ ಆತ ಪಕ್ಕಕ್ಕೆ ಸರಿದು ಗೂಳಿ ಓಡಿಹೋಗಲು ಅನುವು ಮಾಡಿಕೊಟ್ಟ.
ಈಗಾತ ಎರಡನೇ ಗೂಳಿಯ ನಿರೀಕ್ಷೆಯಲ್ಲಿದ್ದಾನೆ. ಕೊಟ್ಟಿಗೆ ತೆರೆಯಿತು, ಎರಡನೇ ಗೂಳಿ ಮೈದಾನದತ್ತ ದೌಡಾಯಿಸಿತು. ಅದು ಮೊದಲನೆಯದ್ದಕ್ಕಿಂತ ಬಲಿಷ್ಠವಾಗಿದೆ. ಅದರ ಓಟಕ್ಕೆ ನೆಲವೇ ನಡುಗಿಹೋಗುತ್ತಿದೆ. ಹುಡುಗನ ಮನಸ್ಸು ಮತ್ತೆ ಆಲೋಚಿಸಿತು `ಈ ಗೂಳಿಯ ಸಹವಾಸವೂ ಬೇಡ. ಇದೂ ಹೋಗಲಿ. ಮೂರನೇ ಗೂಳಿಯ ಬಾಲವನ್ನು ಹಿಡಿದರಾಯಿತು.’
ಎರಡನೇ ಗೂಳಿಯೂ ಅನಾಯಾಸವಾಗಿ ಸಾಗಿಹೋಯಿತು. ಈಗ ಕಡೆಯ, ಮೂರನೇ ಗೂಳಿಯ ನಿರೀಕ್ಷೆಯಲ್ಲಿ ಹುಡುಗನಿದ್ದಾನೆ. ಇದು ಅವನ ಕೊನೆಯ ಅವಕಾಶ. ಕೊಟ್ಟಿಗೆಯ ಬಾಗಿಲು ತೆರೆಯಿತು. ಮೂರನೇ ಗೂಳಿಯೂ ಹೊರಬಂತು. ಅದನ್ನು ನೋಡುತ್ತಿದ್ದಂತೆ ಹುಡುಗನ ಮುಖದಲ್ಲಿ ಖುಷಿ ದಟ್ಟೈಸಿತು. ಯಾಕೆಂದರೆ ಅದು ಬಡಕಲು ದೇಹದ ನರಪೇತಲ ಗೂಳಿ! ಸುಲಭವಾಗಿ ಅದರ ಬಾಲ ಹಿಡಿಯಬಹುದೆಂದು ಹುಡುಗ ಲೆಕ್ಕಾಚಾರ ಹಾಕಿದ. ಗೂಳಿ ಹತ್ತಿರ ಬರುತ್ತಿದ್ದಂತೆಯೇ ಅದರ ಮೇಲೆ ನೆಗೆಯಲು ಸನ್ನದ್ಧನಾದ. ಬಾಲ ಹಿಡಿಯಬೇಕೆಂದರೆ ಗೂಳಿ ಕೊಂಚ ಮುಂದಕ್ಕೆ ಹೋಗಬೇಕು, ಆಗ ಹಿಂದಿನಿಂದ ನೆಗೆದು ಬಾಲ ಹಿಡಿಯಬಹುದೆಂಬ ತಂತ್ರ ರೂಪಿಸಿಕೊಂಡ. ಅದರಂತೆ ಆ ಗೂಳಿ ತನ್ನನ್ನು ಪಾರು ಮಾಡಿಕೊಂಡು ಹೋಗುತ್ತಿದ್ದಂತೆಯೇ ಎರಡೂ ತೋಳುಗಳಿಗೆ ಬಲತುಂಬಿಕೊಂಡು, ಅಂಗೈಗಳನ್ನು ಬಿಗಿತಕ್ಕೆ ಅಣಿಮಾಡಿಕೊಂಡು ಗೂಳಿಯ ಮೇಲೆ ಹಾರಿದ.
ಹುಡುಗನಿಗೆ ಅಚ್ಚರಿ… ಆ ಗೂಳಿಗೆ ಬಾಲವೇ ಇರಲಿಲ್ಲ! ಪ್ರಶ್ನಾರ್ಥಕ ಮೊಗದೊಂದಿಗೆ ರೈತನತ್ತ ನೋಡಿದ. ರೈತ ತನ್ನ ಮೊದಲೆರಡು ಗೂಳಿಗಳ ಕಡೆ ನೋಡಿ ಮುಗುಳ್ನಕ್ಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...