Homeಅಂಕಣಗಳುಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

- Advertisement -
- Advertisement -

ಕರ್ನಾಟಕದಲ್ಲಿ ನಡೆದ ಕಳೆದ ಎರಡು ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಲ್ಲಿ ಅತಿ ಹೆಚ್ಚು ಅಟ್ಯಾಕ್ ಆದವರು ಯಾರು ಎಂಬ ಪ್ರಶ್ನೆ ಹಾಕಿಕೊಂಡರೆ ಒಂದು ಹೆಸರು ಸುಲಭವಾಗಿ ಗೋಚರಿಸುತ್ತದೆ. ಆ ದಾಳಿ ಅವರ ಮೇಲೆ ನಡೆದದ್ದು, ಅವರ ಮೇಲೆ ಯಾವುದೋ ಕೇಸು ಇದೆಯೆಂತಲ್ಲ ಅಥವಾ ಅವರ ವಿರುದ್ಧ ಯಾವುದೋ ಭಾರಿ ಭ್ರಷ್ಟಾಚಾರದ ಅರೋಪ ತನಿಖೆಯಾಗುತ್ತಿದೆಯೆಂದೂ ಅಲ್ಲ; ಬದಲಿಗೆ ಅವರ ಸೈದ್ಧಾಂತಿಕ ಸ್ಪಷ್ಟತೆ ಮುಖ್ಯ ಕಾರಣ; ಉಳಿದೆಲ್ಲರಿಗಿಂತಲೂ, ಮತ್ತು ಅವರು ಪ್ರತಿನಿಧಿಸುವ ಪಕ್ಷಕ್ಕಿಂತಲೂ ಆ ಸ್ಪಷ್ಟತೆ ವಿರೋಧಿ ಪಾಳಯಕ್ಕೆ ಅಪಾಯಕಾರಿಯಾಗಿ ತೋರಿತ್ತು. ಹೀಗೆ ವಿರೋಧ ಪಕ್ಷಗಳಿಗೆ ಮತ್ತವರ ಬೆಂಬಲಿಗರಿಗೆ ಸಿಂಹಸ್ವಪ್ನವಾಗಿ ಕಾಡುವ, ತಮ್ಮ ಪಕ್ಷದ ಬಹುಪಾಲು ಬೆಂಬಲಿಗರಿಗೆ ಹೀರೋವಾಗಿ ಕಾಣುವ, ’ಮಾಸ್ ಲೀಡರ್’ ನುಡಿಗಟ್ಟಿಗೆ ಅನ್ವರ್ಥವಾಗಿರುವ ಸಿದ್ದರಾಮಯ್ಯನವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ 20 ಮೇ 2023ರಂದು ಪ್ರಮಾಣ ವಚನ ತೆಗೆದುಕೊಂಡರು. ಪ್ರಮಾಣವಚನದ ದಿನದಂದು ಸಿದ್ದರಾಮಯ್ಯನವರ ಚಿತ್ರವನ್ನು ಹೊತ್ತ ಹಳದಿ ಬಾವುಟಗಳು ಅಸಂಖ್ಯಾತವಾಗಿ ರಾರಾಜಿಸಿದ್ದು, ಒಬಿಸಿ ಕುರುಬ ಸಮುದಾಯಕ್ಕೆ ಸೇರಿದ ಮುಖಂಡನೊಬ್ಬನ ಈ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಯಿತು.

ಸ್ವಾತಂತ್ರ್ಯ ಬಂದ ವರ್ಷವೇ, ಆಗಸ್ಟ್ ತಿಂಗಳಲ್ಲಿಯೇ ಜನಿಸಿದವರು ಸಿದ್ದರಾಮಯ್ಯ; ಭಾರತ ಅಮೃತಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವಾಗಲೇ, ಸಿದ್ದರಾಮಯ್ಯನವರಿಗೂ 75 ತುಂಬಿದ ಸಂಭ್ರಮದಲ್ಲಿ ಅವರ ಬೆಂಬಲಿಗ ಬಳಗ ದಾವಣಗೆರೆಯಲ್ಲಿ ’ಸಿದ್ದರಾಮೋತ್ಸವ’ವವನ್ನು ಸೆಪ್ಟಂಬರ್ 2022ರಲ್ಲಿ ಆಯೋಜಿಸಿತ್ತು. ಇದಕ್ಕೆ ನಡೆಯುತ್ತಿದ್ದ ಉತ್ಸಾಹದ ಸಿದ್ಧತೆಗಳನ್ನು ಮತ್ತು ಬೆಂಬಲಿಗರ ಜೋಷ್ ಗಮನಿಸಿದ ಕಾಂಗ್ರೆಸ್ ಪಕ್ಷದ ವರಿಷ್ಠರು ಇದನ್ನು ಪಕ್ಷದ ಕಾರ್ಯಕ್ರಮವನ್ನಾಗಿ ಬದಲಾಯಿಸಿಕೊಂಡರು. ಕಾರ್ಯಕ್ರಮ ಶುರುವಾಗುವ ಮುಂಜಾನೆಯೇ ರಾಜ್ಯದಾದ್ಯಂತ ಮೂಲೆಮೂಲೆಗಳಿಂದ ಜನ ಬಂದು ಸೇರುವುದಕ್ಕೆ ಪ್ರಾರಂಭಿಸಿದಾಗ ಹೆದ್ದಾರಿಯಲ್ಲಿಯೇ ಮೈಲುಗಟ್ಟಲೆ ಟ್ರಾಫಿಕ್ ಜಾಮ್ ಆಯಿತು. ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮುಂದೆ ಹಲವು ದಿನಗಳ ಕಾಲ ಚರ್ಚೆಯಾಗುವಂತಾಯಿತು. ಎಂದಿನಂತೆ ವಿರೋಧ ಪಕ್ಷಗಳು ಹಲುಬಿದವು. ಆದರೆ, ಕಾಂಗ್ರೆಸ್ ಪಕ್ಷದ ಚುನಾವಣಾ ಸಮರಕ್ಕೆ ಇದು ಶುಭಾರಂಭವೆಂದೇ ಬಹುತೇಕ ಪ್ರಚಾರ ಪಡೆದುಕೊಂಡಿತು. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಕ್ಲೇಮ್ ಮಾಡಿಕೊಳ್ಳುವ ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗೆ ಇದು ಬ್ರೇಕ್ ಹಾಕಿತು.

ಒಬ್ಬ ಮುಖಂಡ ಹೀಗೆ ಪ್ರಚಂಡ ಜನನಾಯಕನಾಗಿ ಹೇಗೆ ಬೆಳೆಯುತ್ತಾನೆ ಎಂಬುದನ್ನು ವಿವರಿಸುವುದು ಸುಲಭವಲ್ಲ. ವೈಯಕ್ತಿಕ ವರ್ಚಸ್ಸು, ಸುದೀರ್ಘ ಜನಪರ ರಾಜಕಾರಣ, ಮೋಡಿ ಮಾಡುವ ಮಾತುಗಾರಿಕೆ ಇವೆಲ್ಲವೂ ಒಂದು ಮಟ್ಟಿಗೆ ಕಾರಣವಾದರೂ, ನಮ್ಮಂತಹ ದೇಶದಲ್ಲಿ ವಿವಿಧ ಸಮುದಾಯಗಳ, ವಿವಿಧ ವರ್ಗಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶಗಳನ್ನು ಮತ್ತು ಜನರ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು, ಅಧಿಕಾರ ನೀತಿ ನಿರೂಪಣೆಗಳನ್ನು ಎಲ್ಲರ ಸಮಷ್ಠಿ ಹಿತಕ್ಕಾಗಿ ರೂಪಿಸುವ ಬದ್ಧತೆ ಮತ್ತು ಕ್ರಿಯಾಶೀಲತೆ ಬಹುಶಃ ಮುಖ್ಯವಾದೀತು. ಈ ಆಯಾಮದಲ್ಲಿ ಬಹುಶಃ ಸಿದ್ದರಾಮಯ್ಯನವರು ಕರ್ನಾಟಕದ ಹಲವು ಮುಂಚೂಣಿ ಮುಖಂಡರ ಸಾಲಿನಲ್ಲಿ ನಿಲ್ಲುತ್ತಾರೆ. ಬಹುಶಃ ಇದೇ ಕಾರಣಕ್ಕೂ ಅವರನ್ನು ದೇವರಾಜ ಅರಸ್ ಅವರ ಜೊತೆಗೆ ಆಗಾಗ ಹೋಲಿಕೆ ಮಾಡಲಾಗುತ್ತದೆ.

2023ರ ಚುನಾವಣಾ ಪೂರ್ವಕ್ಕೆ ಸಿದ್ದರಾಮಯ್ಯನವರು ಸ್ಪರ್ಧಿಸಬೇಕಿದ್ದ ಕ್ಷೇತ್ರದ ಆಯ್ಕೆ ಕಗ್ಗಂಟಾಗಿತ್ತು. ಬಾದಾಮಿ, ಕೋಲಾರ ಹೀಗೆ ಹಲವು ಹೆಸರುಗಳು ಕೇಳಿಬಂದು ಕೊನೆಗೆ ತಮ್ಮ ಮಗ ಯತೀಂದ್ರ 2018ರಲ್ಲಿ ಗೆದ್ದಿದ್ದ ವರುಣಾ (ಹಿಂದೆ ಸಿದ್ದರಾಮಯ್ಯ ಇಲ್ಲಿ ಎರಡು ಬಾರಿ ಗೆದ್ದಿದ್ದರು) ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯನವರನ್ನು ಕಟ್ಟಿಹಾಕಿದರೆ ಅರ್ಧ ಕೆಲಸ ಮುಗಿದಂತೆ ಎಂದು ನಂಬಿದ್ದ ಬಿಜೆಪಿ ಆ ಕ್ಷೇತ್ರಕ್ಕೆ ಸೋಮಣ್ಣನವರನ್ನು ನಿಲ್ಲಿಸಿತ್ತು. ಈ ಹೈವೋಲ್ಟೇಜ್ ಕ್ಷೇತ್ರದ ಜನಾಭಿಪ್ರಾಯ ಸಮೀಕ್ಷೆ ನಡೆಸಲು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ವರುಣಾವನ್ನು ಒಂದು ದಿನದ ಮಟ್ಟಿಗೆ ಸುತ್ತು ಹಾಕಿದ್ದೆ. ಕಳೆದ ಕೆಲವು ದಶಕಗಳಿಂದ ಸಾಂದರ್ಭಿಕವಾಗಿ ಬಿಜೆಪಿ ಕಡೆಗೆ ವಾಲಿರುವ ಲಿಂಗಾಯತ ಸಮುದಾಯ ಗೊಂದಲದಲ್ಲಿದ್ದುದು (ಅವರಲ್ಲೂ ಸಿದ್ದರಾಮಯ್ಯನವರ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ತಿಳಿಸಿದವರು ಹಲವರಿದ್ದರು) ಬಿಟ್ಟರೆ ಬಹುತೇಕ ಎಲ್ಲ ಸಮುದಾಯಗಳ ಜನರು ಸಿದ್ದರಾಮಯ್ಯನವರ ಪರವಾಗಿದ್ದುದು ನಿಚ್ಚಳವಾಗಿ ಎದ್ದುಕಾಣುತ್ತಿತ್ತು. ಒಂದು ಹಳ್ಳಿಯಲ್ಲಿ ಸಿಕ್ಕ ದಲಿತ ಎಡಗೈ ಸಮುದಾಯದ ಹಿರಿಯ ಜೀವಿಯೊಬ್ಬರು ತಾವು ಜೀತ ಮಾಡುತ್ತಿದ್ದ ಕಾಲದಲ್ಲಿದ್ದ ಪರಿಸ್ಥಿತಿ; ಇಂದಿರಾ ಗಾಂಧೀ-ದೇವರಾಜ ಅರಸ್ ಅದಕ್ಕೆ ಮುಕ್ತಿ ದೊರಕಿಸಿದ್ದು; ಅದರಿಂದ ಘನತೆಯಿಂದ ಬದುಕಲು ಸಾಧ್ಯವಾದದ್ದು- ಈ ಎಲ್ಲವನ್ನೂ ವಿವರಿಸುತ್ತಿದ್ದಂತೆ ಒಮ್ಮೆಗೇ ಸಿದ್ದರಾಮಯ್ಯನವರ ಕಾಲಕ್ಕೆ ಜಂಪ್ ಆಗಿ- ಅವರ ಕಾಲದಲ್ಲಿ ಇನ್ನಷ್ಟು ಘನತೆಯಿಂದ ಬದುಕಲು ಸಾಧ್ಯವಾಯಿತು, ಊಟ ಮಾಡಲು ಅಕ್ಕಿ ದೊರಕಿತು, ಗ್ರಾಮ ಪಂಚಾಯತಿಯಲ್ಲಿ ಒಂದಷ್ಟು ಮನೆಗಳು ಬಂದವು- ಹೀಗೆ ನೆನಪಿಸಿಕೊಂಡರು. ಸಿದ್ದರಾಮಯ್ಯನವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೂಪಿಸಿದ ಕೆಲವು ಯೋಜನೆಗಳು, ಅದರಲ್ಲೂ ಅನ್ನಭಾಗ್ಯ ಎಂಬ 10ಕೆಜಿ ಪಡಿತರ ಅಕ್ಕಿಯ ಯೋಜನೆ ಇಂದು ಜನಜನಿತವಾಗಿದೆ. ಇದು ಉಳ್ಳವರ ನಡುವೆ, ಶೋಷಕ ಸಮುದಾಯಗಳ ನಡುವೆ ಸಿದ್ದರಾಮಯ್ಯ ವಿಲನ್ ಆಗುವುದಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

ಹೀಗಿದ್ದರೂ ಕೆಲವು ಸಮುದಾಯಗಳು 2018ರಲ್ಲಿ ಸಿದ್ದರಾಮಯ್ಯನವರನ್ನು ಆ ಮಟ್ಟದಲ್ಲಿ ವಿರೋಧಿಸಿದ್ದು ಏಕೆ ಎಂಬ ಪ್ರಶ್ನೆಯನ್ನು ಹತ್ತುಹಲವು ಆಯಾಮಗಳಲ್ಲಿ ಚರ್ಚಿಸಲಾಗುತ್ತದೆ. ದಲಿತ ಸಮುದಾಯಗಳ ಒಂದು ಸೆಕ್ಷನ್ ಸಿದ್ದರಾಮಯ್ಯನವರನ್ನು ವಿರೋಧಿಸುವುದಕ್ಕೆ ತಮ್ಮ ಸಂಪುಟದಿಂದ ಹಿರಿಯ ಮುಖಂಡ ಶ್ರೀನಿವಾಸ ಪ್ರಸಾದ್ ಅವರನ್ನು ತೆಗೆದುಹಾಕಿದ್ದು ಮತ್ತು ಮುಂದೆ ಪ್ರಸಾದ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದು ಒಂದು ಮುಖ್ಯ ಕಾರಣವಾಗಿ ನೀಡುತ್ತಾರೆ. ಆಗ ಅವರ ಜಾಗದಲ್ಲಿ ದಲಿತ ಸಮುದಾಯದವರೇ ಆದ ಪ್ರಿಯಾಂಕ ಖರ್ಗೆ ಸಚಿವರಾದರು. ಈ ಸಂಗತಿ ಯಾಕೋ ದಲಿತ ಸಮುದಾಯವನ್ನು ಅಷ್ಟು ಕನ್ವಿನ್ಸ್ ಮಾಡಲೇ ಇಲ್ಲ. ಆದರೂ, ಈ ಚುನಾವಣೆಯಲ್ಲಿ ಈ ಕೋಪ ತಣ್ಣಗಾದಂತೆ ಕಂಡಿತು. ಇನ್ನು ಒಳಮೀಸಲಾತಿಯ ಬಗ್ಗೆ ತಾವು ಮುಖ್ಯಮಂತ್ರಿಯಾಗಿ ಯಾವುದೇ ನಿರ್ಣಾಯಕ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಅಂಶವೂ ಮಾದಿಗ ಸಮುದಾಯವನ್ನು ಕೆರಳಿಸಿತ್ತು. ಬಿಜೆಪಿಯ ದಲಿತ ವಿರೋಧಿ ಮನೋಧೋರಣೆಯ ಅರಿವಾದಂತೆ ಸಿದ್ದರಾಮಯ್ಯನವರ ಮೇಲಿದ್ದ ಈ ಕೋಪವೂ ತುಸು ಕಡಿಮೆಯಾದಂತೆ ಭಾಸವಾಗುತ್ತಿದೆ. ಹಿಂದಿನ ತಮ್ಮ ಸಂಪುಟದಲ್ಲಿ ಒಳಮೀಸಲಾತಿಗೆ ತಮ್ಮದೇ ಕೆಲವು ಸಚಿವರ ವಿರೋಧವಿತ್ತು ಎಂಬ ಕಾರಣದ ಹೊರತಾಗಿಯೂ, ಸಿದ್ದರಾಮಯ್ಯನವರ ಮುತ್ಸದ್ಧಿತನ ಒಳಮೀಸಲಾತಿ ಅನುಷ್ಠಾನಕ್ಕೆ ಮುಂದಾಗಬೇಕಿತ್ತು ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಕಾಟಾಚಾರಕ್ಕೆ ಶಿಫಾರಸ್ಸು ಮಾಡಿರುವ ಒಳಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದಕ್ಕೆ, ಈ ಅವಧಿಗಾದರೂ ಸಿದ್ದರಾಮಯ್ಯ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆಂಬ ಅಪಾರ ನಿರೀಕ್ಷೆಯಿದೆ. ಇನ್ನು ಅವರು ಕಳೆದ ಅವಧಿಯಲ್ಲಿ ನಡೆಸಿದ ಜಾತಿಗಣತಿಯನ್ನು ಯಾವ ಕಾರಣಕ್ಕೆ ಸಾರ್ವಜನಿಕಗೊಳಿಸಲಿಲ್ಲವೆಂಬುದು ಇಂದಿಗೂ ಮಿಸ್ಟರಿಯಾಗಿಯೇ ಉಳಿದಿದೆ. ಈ ಅವಧಿಯಲ್ಲಿ ಅದನ್ನು ಸಾರ್ವಜನಿಕಗೊಳಿಸುವ ಅಥವಾ ಹೊಸದಾದ ಜಾತಿಗಣತಿಯನ್ನು ನಡೆಸಿ, ಚುನಾವಣೆಯಲ್ಲಿ ಪ್ರಾಮಿಸ್ ಮಾಡಿದಂತೆ ಮೀಸಲಾತಿಯನ್ನು 75%ಗೆ ಹೆಚ್ಚಿಸುವ ಕಡೆಗೆ ಸಿದ್ದರಾಮಯ್ಯನವರ ಹೆಜ್ಜೆಯನ್ನು ರಾಜ್ಯ ನಿರೀಕ್ಷಿಸುತ್ತಿದೆ.

ಶ್ರೀನಿವಾಸ ಪ್ರಸಾದ್

2013ರಲ್ಲಿ ಒಕ್ಕಲಿಗ-ಲಿಂಗಾಯತ-ಬ್ರಾಹ್ಮಣರ (ಜಿಲೇಬಿ) ಕನ್ಸಾಲಿಡೇಷನ್ ಸಿದ್ದರಾಮಯ್ಯನವರ ವಿರುದ್ಧ ಒಂದು ಅನೈತಿಕ ಅಲೆಯನ್ನೇ ಸೃಷ್ಟಿಸಿತ್ತು. ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ನಂತರ ಇನ್ನೂ ದೊಡ್ಡ ನಾಯಕನಾಗಿ ಹೊರಹೊಮ್ಮಿದ್ದನ್ನು ಒಕ್ಕಲಿಗ ಸಮುದಾಯದ ಕೆಲವು ಮುಖಂಡರು ಸಹಿಸಿಕೊಳ್ಳದೇ ಹೋದರು; ಸಿದ್ದರಾಮಯ್ಯನವರನ್ನು ಒಕ್ಕಲಿಗ ಸಮುದಾಯದ ವಿರೋಧಿ ಎಂಬಂತೆ ಚಿತ್ರಿಸತೊಡಗಿದರು. ಹಳೇ ಮೈಸೂರು ಭಾಗದಲ್ಲಿ ಸಾಂಪ್ರದಾಯಿಕವಾಗಿ ಜೆಡಿಎಸ್ ಮತದಾರರಾಗಿರುವ ಒಕ್ಕಲಿಗ ಸಮುದಾಯದ ದೊಡ್ಡ ಸಂಖ್ಯೆಯ ಮತದಾರರು ಇದರಿಂದ ಪ್ರಭಾವಿತರಾಗಿದ್ದರೇನೋ ಎಂದೆನಿಸುವಂತಹ ಫಲಿತಾಂಶವಂತೂ ಹೊರಬಿದ್ದಿತ್ತು. ಆದರೆ 2023ರಲ್ಲಿ ಬಿಜೆಪಿ ಸೃಷ್ಟಿಸುತ್ತಿರುವ ಅವಾಂತರಗಳನ್ನು ಅರಿತ ಸಮುದಾಯ ಸಿದ್ದರಾಮಯ್ಯನವರ ವಿರುದ್ಧದ ಪೂರ್ವಾಗ್ರಹಗಳನ್ನು ಕಳಚಿಕೊಂಡಿದೆಯೋ ಇಲ್ಲವೋ, ಆ ಸಮುದಾಯದ ಬಹಳಷ್ಟು ಮತಗಳು ಕಾಂಗ್ರೆಸ್‌ಗೆ ಹೊರಳಿರುವ ಸಾಧ್ಯತೆಯಂತೂ ಇದೆ. ಲಿಂಗಾಯತ ಧರ್ಮದ ಮಾನ್ಯತೆಯ ಪ್ರತಿಪಾದನೆಯನ್ನು ಮಾಡಿದ್ದಕ್ಕೆ ಮತ್ತೆ ಲಿಂಗಾಯತ ಸಮುದಾಯದ ನಡುವೆ ಸಿದ್ದರಾಮಯ್ಯನವರನ್ನು ಖಳನಾಯಕನಂತೆ ಬಿಂಬಿಸಲಾಗಿತ್ತು. ಸ್ವಪಕ್ಷದವರೇ ಈ ನಡೆಯ ಉದಾತ್ತತೆಯನ್ನು ಅರಿತು ಸಮರ್ಥಿಸಿಕೊಳ್ಳಲು ಹಿಂಜರಿದರು. ಇದರಿಂದ ಉನ್ನತ ಮಟ್ಟದ ಆಶಯವುಳ್ಳ ಸಾಮಾಜಿಕ ಇಂಜಿನಿಯರಿಂಗ್ ನಡೆಯೊಂದಕ್ಕೆ ಸೋಲಾಯಿತು. ಇನ್ನು ಮೌಢ್ಯ ವಿರೋಧಿ ಕಾಯ್ದೆಯನ್ನು ತರಲು ಪ್ರಯತ್ನಿಸಿದ್ದು, ಸದಾ ಸೆಕ್ಯುಲರ್ ಆಶಯಗಳನ್ನು ಪ್ರತಿಪಾದಿಸುತ್ತಿದ್ದುದು ’ವೈದಿಕ ಮತದಾರರ ಮತ್ತು ಮೀಡಿಯಾ’ಗಳ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂತು. ಸಿದ್ದರಾಮಯ್ಯನವರ ಬಗ್ಗೆ ಅಪಪ್ರಚಾರ ಮಾಡಲು ಅವು ಶತಾಯಗತಾಯ ನಿಂತವು.

ಇವೆಲ್ಲಾ ಸಂಗತಿಗಳನ್ನೂ ಮತ್ತೆ 2023ರ ಚುನಾವಣೆಯಲ್ಲಿಯೂ ಸಿದ್ದರಾಮಯ್ಯನವರ ವಿರುದ್ಧ ಮೊಳಗಿಸಲು ವಿರೋಧ ಪಕ್ಷಗಳು ಪ್ರಯತ್ನಿಸಿದವು; ಅದರೆ ಅವು ಮತದಾರರನ್ನು ಪ್ರಭಾವಿಸಲಿಲ್ಲ. ಬಹುಮತ ಬಂದಮೇಲೆ, ಮುಖ್ಯಮಂತ್ರಿ ಯಾರಾಗಬೇಕು ಎಂಬ ಹಗ್ಗಜಗ್ಗಾಟದಲ್ಲಿ ಸಿದ್ದರಾಮಯ್ಯನವರ ಎಲ್ಲಾ ಸಾಂಪ್ರದಾಯಿಕ ವಿರೋಧಿಗಳು (ಬಹುತೇಕ ಜಿಲೇಬಿ ಬಣದವರು) ಅವರ ವಿರುದ್ಧ ನಿಂತರು. ಇವೆಲ್ಲವನ್ನೂ ಸೆಣಸಿ, ಕಾಂಗ್ರೆಸ್‌ನ ಹೆಚ್ಚಿನ ಶಾಸಕರ ಬೆಂಬಲವನ್ನು ಪಡೆದುಕೊಂಡಿರುವ ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಹಂಬಲ್ ಹಿನ್ನೆಲೆಯಿಂದ ಬಂದು ಅಧಿಕಾರದ ವಿವಿಧ ಹಂತಗಳಲ್ಲಿ ಛಾಪು ಮೂಡಿಸಿ ಇಲ್ಲಿಯವರೆಗೂ 13 ಬಜೆಟ್ಟುಗಳನ್ನು ಮಂಡಿಸಿ, ಸಾಮಾನ್ಯನಿಗೂ ಅರ್ಥಶಾಸ್ತ್ರದ ಪಾಠ ಹೇಳಬಲ್ಲ ಸಿದ್ದರಾಮಯ್ಯನವರ ಮೇಲೆ ಅಪಾರ ನಿರೀಕ್ಷೆಗಳಿವೆ. ಅಹಿಂದ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಕೋಮುವಾದದ ವಿರುದ್ಧ ದೇಶದಾದ್ಯಂತ ಇಂತಹ ಸೆಕ್ಯುಲರ್ ನೆಲೆಯನ್ನು ಹುಟ್ಟುಹಾಕಬಲ್ಲರೇ ಎಂಬ ನಿರೀಕ್ಷೆಯೂ ಇದೆ. ಕರ್ನಾಟಕದಲ್ಲಿ ಸಮಾನತೆಯನ್ನು ತರಬಲ್ಲ ಇನ್ನಷ್ಟು ಜನಪರ ನೀತಿಗಳನ್ನು ಸಿದ್ದರಾಮಯ್ಯನವರ ಮುಂದಾಳತ್ವದ ಈ ಸರ್ಕಾರದಿಂದ ನಿರೀಕ್ಷಿಸಬಹುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ, ಶಾ ವಿರುದ್ಧ ಘೋಷಣೆ ಆರೋಪ: ತನ್ನದೇ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ ಜೆಎನ್‌ಯು ಆಡಳಿತ ಮಂಡಳಿ

ಸೋಮವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಆ ಘೋಷಣೆಗಳು "ಪ್ರಚೋದನಕಾರಿ, ಪ್ರಚೋದನಕಾರಿ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...

ಉತ್ತರ ಪ್ರದೇಶ SIR : ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್‌) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ...

ಕರೂರ್ ಕಾಲ್ತುಳಿತ ಪ್ರಕರಣ: ಟಿವಿಕೆ ನಾಯಕ ವಿಜಯ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್

ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿವಿಕೆ ನಾಯಕ ವಿಜಯ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ನಟ-ರಾಜಕಾರಣಿ ವಿಜಯ್ ಅವರ ತಮಿಳಗ...

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಉದ್ಘಾಟನೆ : ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೊಮ್ಲೋಟ್

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್‌ ರಾಯಭಾರಿ ಇದನ್ನು 'ಐತಿಹಾಸಿಕ ಕ್ಷಣ' ಎಂದು ಬಣ್ಣಿಸಿದ್ದಾರೆ. ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ...

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮತ್ತು ಪತ್ರಕರ್ತನಾಗಿದ್ದ ರಾಣಾ ಪ್ರತಾಪ್ ಬೈರಾಗಿ ತಲೆಗೆ ಗುಂಡಿಕ್ಕಿ ಹತ್ಯೆ 

ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಸೋಮವಾರ 38 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.  ಬೈರಾಗಿ ಒಬ್ಬ ಹಿಂದೂ ಉದ್ಯಮಿ ಮತ್ತು...