Homeಕರ್ನಾಟಕಬಗೆಹರಿದ ಸಂಪುಟ ವಿಸ್ತರಣೆ ಕಸರತ್ತು; ನೂತನ ಸಚಿವರ ಪ್ರಮಾಣವಚನ ಇಂದು

ಬಗೆಹರಿದ ಸಂಪುಟ ವಿಸ್ತರಣೆ ಕಸರತ್ತು; ನೂತನ ಸಚಿವರ ಪ್ರಮಾಣವಚನ ಇಂದು

- Advertisement -
- Advertisement -

ರಾಜ್ಯ ನೂತನ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯ ಕಗ್ಗಂಟು ಬಗೆಹರಿದಿದ್ದು ಇಂದು (ಶನಿವಾರ) 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೆ ಕಾಂಗ್ರೆಸ್‌ ಹೈಕಮಾಂಡ್‌ ಸತತ ಮೂರು ದಿನಗಳ ಕಾಲ ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಬಿಡಿಸಿದೆ.

ಉಭಯ ಸದನಗಳ ಸದಸ್ಯರೂ ಅಲ್ಲದ ಪಕ್ಷದ ಹಿರಿಯ ಮುಖಂಡ ಎನ್‌.ಎಸ್‌.ಬೋಸರಾಜು ಅವರಿಗೆ ಸಚಿವರಾಗುವ ಅವಕಾಶವನ್ನು ನೀಡಲಾಗಿದೆ. ಹಲವು ಹಿರಿಯ ಶಾಸಕರಿಗೆ ಸಚಿವರಾಗುವ ಅವಕಾಶ ದೊರೆತ್ತಿಲ್ಲ.

ನೂತನ ಸಚಿವರ ಪ್ರಮಾಣವಚನ ಸಮಾರಂಭ ಶನಿವಾರ (ಇಂದು) ಬೆಳಿಗ್ಗೆ 11.45ಕ್ಕೆ ರಾಜಭವನದಲ್ಲಿ ನಡೆಯಲಿದೆ. ಪ್ರಮಾಣವಚನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜಭವನಕ್ಕೆ ಶುಕ್ರವಾರ ಮಧ್ಯಾಹ್ನವೇ ಮುಖ್ಯಮಂತ್ರಿ ಸಚಿವಾಲಯ ಸಂದೇಶ ಕಳುಹಿಸಿದೆ.

ಸಚಿವ ಸಂಪುಟದಲ್ಲಿ ಒಟ್ಟು 34 ಮಂದಿಯ ಸೇರ್ಪಡೆಗೆ ಅವಕಾಶ ಇದೆ. 24 ಮಂದಿಯ ಸೇರ್ಪಡೆಯಿಂದ ಸಂಪುಟ ಭರ್ತಿಯಾದಂತೆ ಆಗಿದೆ.

ಲಿಂಗಾಯತ ಸಮುದಾಯದ ಹಲವು ಒಳಪಂಗಡಗಳನ್ನು ಒಳಗೊಂಡು ಎಂಟು ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಒಕ್ಕಲಿಗರಲ್ಲಿ ಡಿ.ಕೆ.ಶಿವಕುಮಾರ್ ಸೇರಿ ಐದು ಮಂದಿಗೆ ಅವಕಾಶ ದೊರೆತಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಒಟ್ಟು 9 ಮಂದಿಗೆ ಸಚಿವ ಸ್ಥಾನ ಲಭಿಸಿದೆ. ಪರಿಶಿಷ್ಟ ಜಾತಿಯ ಕೆ.ಎಚ್‌. ಮುನಿಯಪ್ಪ, ಜಿ.ಪರಮೇಶ್ವರ, ಎಚ್‌.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ, ಪ್ರಿಯಾಂಕ್ ಖರ್ಗೆ, ಪರಿಶಿಷ್ಟ ಪಂಗಡದ ನಾಗೇಂದ್ರ, ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ಸಚಿವರಾಗಿದ್ದಾರೆ.

‘ಹಿಂದುಳಿದ ಜಾತಿಗಳಲ್ಲಿ ಅತ್ಯಂತ ಸಣ್ಣ ಸಮುದಾಯವಾದ ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಬೆಸ್ತ ಸಮುದಾಯದ ಮಂಕಾಳ ಸುಬ್ಬ ವೈದ್ಯ, ಮರಾಠ ಸಮಾಜದ ಸಂತೋಷ್ ಲಾಡ್ ಸಂಪುಟ ಸೇರ್ಪಡೆಯಾಗಿದ್ದಾರೆ. ಕುರುಬ ಸಮುದಾಯದಿಂದ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ.

ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ, ಬಸವರಾಜ ರಾಯರಡ್ಡಿ, ಟಿ.ಬಿ.ಜಯಚಂದ್ರ, ತನ್ವೀರ್ ಸೇಠ್‌, ಎನ್‌.ಎ.ಹ್ಯಾರಿಸ್‌, ಸಲೀಂ ಅಹಮದ್‌ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ.  ದಿನೇಶ್‌ ಗುಂಡೂರಾವ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಆರಂಭದಲ್ಲಿ ಒಲವು ವ್ಯಕ್ತವಾಗಿರಲಿಲ್ಲ. ಆದರೆ, ಕೊನೆಯ ಕ್ಷಣದಲ್ಲಿ ಬ್ರಾಹ್ಮಣ ಕೋಟಾದಡಿ ಅವರಿಗೆ ಅವಕಾಶ ದೊರೆತಿದೆ.

ರಾಜೀನಾಮೆಗೆ ಮುಂದಾದ ಹರಿಪ್ರಸಾದ್?

ಸಚಿವ ಸ್ಥಾನ ಸಿಗದ ಕಾರಣಕ್ಕೆ ಬೇಸರವಾಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆಂದು ವರದಿಯಾಗಿದೆ.

ಶನಿವಾರವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಅವಕಾಶ ಕೈತಪ್ಪಲು ಸಿದ್ದರಾಮಯ್ಯನವರು ಕಾರಣವೆಂದು ಹರಿಪ್ರಸಾದ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ನೂತನ ಸಚಿವರ ಪಟ್ಟಿ

ಎಚ್.ಕೆ.ಪಾಟೀಲ- ನಾಮಧಾರಿ ರೆಡ್ಡಿ

ಕೃಷ್ಣ ಬೈರೇಗೌಡ- ಒಕ್ಕಲಿಗ

ಎನ್.ಚಲುವರಾಯಸ್ವಾಮಿ- ಒಕ್ಕಲಿಗ

ಕೆ.ವೆಂಕಟೇಶ್‌- ಒಕ್ಕಲಿಗ

ಡಾ.ಎಚ್‌.ಸಿ.ಮಹದೇವಪ್ಪ- ಎಸ್‌ಸಿ (ಬಲಗೈ)

ಈಶ್ವರ ಖಂಡ್ರೆ- ಬಣಜಿಗ ಲಿಂಗಾಯತ

ಕೆ.ಎನ್‌.ರಾಜಣ್ಣ- ವಾಲ್ಮೀಕಿ (ಎಸ್‌ಟಿ)

ದಿನೇಶ್‌ ಗುಂಡೂರಾವ್‌- ಬ್ರಾಹ್ಮಣ

ಶರಣಬಸಪ್ಪ ದರ್ಶನಾಪುರ- ರೆಡ್ಡಿ ಲಿಂಗಾಯತ

ಶಿವಾನಂದ ಪಾಟೀಲ- ಪಂಚಮಸಾಲಿ

ಆರ್.ಬಿ.ತಿಮ್ಮಾಪುರ- ಎಸ್‌ಸಿ (ಎಡಗೈ)

ಎಸ್‌.ಎಸ್‌.ಮಲ್ಲಿಕಾರ್ಜುನ- ಸಾದರ ಲಿಂಗಾಯತ

ಶಿವರಾಜ ತಂಗಡಗಿ- ಎಸ್‌ಸಿ (ಭೋವಿ)

ಶರಣ ಪ್ರಕಾಶ ಪಾಟೀಲ- ಬಣಜಿಗ ಲಿಂಗಾಯತ

ಮಂಕಾಳ ಸುಬ್ಬ ವೈದ್ಯ- ಮೊಗವೀರ

ಲಕ್ಷ್ಮಿ ಹೆಬ್ಬಾಳಕರ- ಪಂಚಮಸಾಲಿ

ರಹೀಂ ಖಾನ್‌- ಮುಸ್ಲಿಂ

ಡಿ.ಸುಧಾಕರ್‌- ಜೈನ

ಸಂತೋಷ್‌ ಎಸ್‌.ಲಾಡ್‌- ಮರಾಠ

ಎನ್‌.ಎಸ್.ಬೋಸರಾಜು- ರಾಜು ಕ್ಷತ್ರೀಯ

ಬೈರತಿ ಸುರೇಶ್‌- ಕುರುಬ

ಮಧು ಬಂಗಾರಪ್ಪ- ಈಡಿಗ

ಡಾ.ಎಂ.ಸಿ.ಸುಧಾಕರ್‌- ಒಕ್ಕಲಿಗ

ಬಿ.ನಾಗೇಂದ್ರ- ವಾಲ್ಮೀಕಿ (ಎಸ್‌ಟಿ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...