Homeಮುಖಪುಟಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ - ಮೈಕೆಲ್ ಹಾನೆಕೆ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ – ಮೈಕೆಲ್ ಹಾನೆಕೆ

- Advertisement -
- Advertisement -

ಸಿನಿಯಾನ: 04

ರಾಜಶೇಖರ್ ಅಕ್ಕಿ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ. ಆ ಕಥೆಯಲ್ಲಿ ಒಬ್ಬ ಹೀರೋ ಇರ್ತಾನೆ, ಒಬ್ಳು ಹೀರೋಯಿನ್ ಇರ್ತಾಳೆ, ಒಬ್ಬ ಖಳನಾಯಕ ಇರ್ತಾನೆ, ಪೋಷಕ ಪಾತ್ರಗಳಿರ್ತಾವೆ ಎಂತೆಲ್ಲಾ ನಾವು ಅಂದುಕೊಂಡಿದ್ದು. ನಂತರ ಸಿನೆಮಾ ಅಭ್ಯಸಿಸುತ್ತ ಹೋದತ್ತ ಡ್ರಾಮಾ, ಸ್ಟ್ರಕ್ಚರ್ ಎನ್ನುವ ಅಂಶಗಳು ನಮಗೆ ತಿಳಿದವು. ಯಾವುದೇ ಒಂದು ಕಥೆಯಲ್ಲಿ ಆರಂಭ, ಮಧ್ಯ, ಮುಕ್ತಾಯ ಇರುತ್ತವೆ ಬೇರೆ ಪದಗಳಲ್ಲಿ ಹೇಳಬೇಕೆಂದರೆ, ಸಿನೆಮಾದ ಮೊದಲ ಇಪ್ಪತ್ತು ನಿಮಿಷಗಳವರೆಗೆ ಸೆಟ್‍ಅಪ್ ಅಂದರೆ ಪಾತ್ರಗಳು, ಆ ಪಾತ್ರಗಳ ಇರುವ ಸನ್ನಿವೇಶ ಇವೆಲ್ಲ ವೀಕ್ಷಕರಿಗೆ ತಿಳಿಯುತ್ತವೆ ಮುಂದಿನ ಸುಮಾರು ಒಂದು ಗಂಟೆಯ ವರೆಗೆ ಆ ಪಾತ್ರಗಳ ನಡುವಿನ ಸಂಘರ್ಷ ವ್ಯಕ್ತವಾಗಿ, ಆಯಾ ಪಾತ್ರಗಳು, ಮುಖ್ಯವಾಗಿ ನಾಯಕ(ಕಿ)ಯ ಪಾತ್ರ ಆ ಸಂಘರ್ಷವನ್ನು, ತನ್ನ ಗುರಿಗೆ ಇರುವ ತೊಡಕುಗಳನ್ನು ಹೇಗೆ ಎದುರಿಸುತ್ತವೆ ಎಂದೂ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಆ ಸಂಘರ್ಷ ಹೇಗೆ ನಿಷ್ಕರ್ಷವಾಗುತ್ತದೆ ಎಂದು ತಿಳಿಯುತ್ತದೆ. ಅನೇಕ ಚಿತ್ರಗಳಲ್ಲಿ ಸಂಘರ್ಷ ಬಾಹ್ಯವಾಗಿದ್ದರೆ ಕೆಲವು ಚಿತ್ರಗಳಲ್ಲಿ ಆಂತರಿಕವಾಗಿರುತ್ತದೆ ಅಂದರೆ ಆ ಪ್ರಮುಖ ಪಾತ್ರಕ್ಕೆ ತಾನೇ, ತನ್ನ ದೌರ್ಬಲ್ಯಗಳೇ ಮುಖ್ಯ ಶತ್ರುವಾಗಿದ್ದಾಗಿರುವಾಗ ಸಂಘರ್ಷ ಹುಟ್ಟಿಕೊಳ್ಳುತ್ತವೆ.

ನಮ್ಮಲ್ಲರಲ್ಲೂ ಅನೇಕ ಕಥೆಗಳಿರುತ್ತವೆ. ನಾವೆಲ್ಲರೂ ನಮ್ಮ ಸುತ್ತಮುತ್ತ ಆಗುತ್ತಿರುವ ಅನ್ಯಾಯ, ಸೋಜಿಗ, ಹೋರಾಟ, ಸಾಹಸಗಳನ್ನು ನೋಡಿ ಅನೇಕ ಕಥೆಗಳನ್ನು ಕಟ್ಟಿಕೊಂಡಿರುತ್ತೇವೆ, ಆಯಾ ಚಿತ್ರಗಳು ಮತ್ತು ಅದರಲ್ಲಿಯ ನಮ್ಮ ಒಳ್ಳೆಯತನ, ಕೆಟ್ಟತನ ಮುಂತಾದವುಗಳ ವ್ಯಾಖ್ಯೆಯ ಪರಿಧಿಯಲ್ಲಿ ಬರುತ್ತವೆ.

ಮೈಕೆಲ್ ಹಾನೆಕೆಯ ಚಿತ್ರಗಳನ್ನು ನೋಡಿದಾಗ ಇವೆಲ್ಲವುಗಳನ್ನೂ ಪ್ರಶ್ನಿಸಬೇಕಾಗುತ್ತದೆ. ಕಥೆ ಎಂದರೇನು, ಅದರ ಪರಿಭಾಷೆ ಏನು, ನಾಯಕನ ಪಾತ್ರ ಹೇಗಿರಬೇಕು, ಅವನು ಏನಾದರೂ ಒಳ್ಳೆಯದನ್ನು ಬಿಂಬಿಸಬೇಕಲ್ಲವೇ ಅಥವಾ ಅದಕ್ಕಾಗಿ ಹೋರಾಡಬೇಕಲ್ಲವೇ, ನಾಯಕ ಕೆಟ್ಟವನಾಗಿದ್ದರೂ ಅವನೊಳಗೇ ಏನಾದರೂ ತುಮುಲಗಳಿರಬೇಕಲ್ಲವೇ, ಅವನ/ಳ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಲ್ಲವೇ, ಪ್ರಮುಖ ಪಾತ್ರ ಕೆಟ್ಟವನಾಗಿದ್ದರೆ ಇತರ ಪಾತ್ರಗಳಾದರೂ ಅದರ ವಿರುದ್ಧ ಮನಸ್ಥಿತಿಯನ್ನು ಹೊಂದಿ ಸಂಘರ್ಷ ನಿರ್ಮಾಣವಾಗನೇಕಲ್ಲವೇ, ಕೆಟ್ಟದ್ದು ಮತ್ತು ಒಳ್ಳೇದು ಎನ್ನುವವುದೇನಾದರೂ ಕಥೆಯಲ್ಲಿ ಇರಬೇಕಲ್ಲವೇ, ಚಿತ್ರಕ್ಕೆ ನೈತಿಕ ಸ್ಪಷ್ಟತೆ ಇರಬೇಕಲ್ಲವೇ? ಮೈಕೆಲ್ ಹಾನೆಕೆಯ ಸಿನೆಮಾ ನೋಡಿದರೆ ಇವಕ್ಕೆ ಯಾವುದೇ ಉತ್ತರ ಸಿಗುವುದಿಲ್ಲ; ಸಿಗುವುದು ಪ್ರಶ್ನೆಗಳಷ್ಟೆ.

ಮೈಕೆಲ್ ಹಾನೆಕೆ ಒಬ್ಬ ಆಸ್ಟ್ರಿಯಾದ ಚಿತ್ರನಿರ್ದೇಶಕ. ಇವರು 1942 ರಲ್ಲಿ ಜರ್ಮನಿಯಲ್ಲಿ ಹುಟ್ಟಿ ಆಸ್ಟ್ರಿಯಾದಲ್ಲಿ ತಮ್ಮ ಶಿಕ್ಷಣ ಮುಗಿಸಿದರು. ನಟನಾಗಿ ಯಶಸ್ಸು ಸಿಗದಾಗ ವಿಮರ್ಶಕರಾಗಿ, ಸಂಕಲನಕಾರರಾಗಿ ಕೆಲಸ ಮಾಡಿ ನಂತರ ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿಸಿದ ಮೊದಲ ಚಿತ್ರ ‘ದಿ ಸೆವೆಂತ್ ಕಾಂಟಿನೆಂಟ್’. ಈ ಚಿತ್ರ ಅವರು ಮುಂದು ನಿರ್ದೇಶಿಸಲಿರುವ ಚಿತ್ರಗಳಲ್ಲಿಯ ಹಿಂಸೆ ಮತ್ತು ಬೋಲ್ಡ್ ಶೈಲಿಯ ಒಂದು ಝಲಕ್ ತೋರಿಸಿಕೊಟ್ಟಿತು. (ಸ್ಪಾಯ್ಲರ್ ಅಲರ್ಟ್) ಆಸ್ಟ್ರಿಯಾದ ಒಂದು ಮಧ್ಯಮ ವರ್ಗದ ಕುಟುಂಬ. ಜಾರ್ಜ್, ಒಬ್ಬ ಇಂಜಿನೀಯರ್, ಅವನ ಹೆಂಡತಿ ಆನಾ ಮತ್ತು ಅವರ ಮಗಳು ಈವಾ. ಆಸ್ಟ್ರಿಯಾದಿಂದ ಆಸ್ಟ್ರೇಲಿಯಾಗೆ ವಲಸೆ ಹೋಗಬೇಕೆಂದು ಕನಸು ಕಂಡ ಈ ಕಟುಂಬ, ಹಳ್ಳಿಯಲ್ಲಿರುವ ಜಾರ್ಜ್‍ನ ತಂದೆಯನ್ನು ಭೇಟಿ ಮಾಡಿ ಬಂದ ನಂತರ ತಮ್ಮ ಕಾರನ್ನು ಮಾರಿ, ಬ್ಯಾಂಕ್ ಖಾತೆಯಲ್ಲಿಯ ಎಲ್ಲ ದುಡ್ಡನ್ನು ತೆಗೆದುಕೊಂಡು, ಖಾತೆಯನ್ನು ಮುಚ್ಚಿ, ತಮ್ಮ ಮನೆಯಲ್ಲಿಯ ಎಲ್ಲಾ ವಸ್ತುಗಳನ್ನು ನಾಶಪಡಿಸಿ, ಇದ್ದ ದುಡ್ಡನ್ನೆಲ್ಲ ಹರಿದು ಹಾಕಿ, ಹರಿದ ತುಣುಕಗಳನ್ನೆಲ್ಲ ಟಾಯ್ಲೆಟ್‍ನಲ್ಲಿ ಫ್ಲಷ್ ಮಾಡಿ, ಮೂವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೆಂಡತಿ ಮಗಳು ಸತ್ತ ನಂತರ ಗೋಡೆಯ ಮೇಲೆ ಅವರ ಹೆಸರು, ಅವರು ಸತ್ತ ದಿನಾಂಕ ಮತ್ತು ಸಮಯವನ್ನು ಬರೆದು ತನ್ನ ಹೆಸರಿನ ಮುಂದೆ ಪ್ರಶ್ನಾರ್ಥಕ ಚಿನ್ಹೆ ಹಾಕಿ, ತಾನೂ ಸಾಯುತ್ತಾನೆ. ಆತ್ಮಹತ್ಯೆಗೂ ಮುಂಚೆ ಬರೆದ ಪತ್ರದಲ್ಲಿ ತಾವು ತಮ್ಮ ಕೆಲಸವನ್ನು ಬಿಟ್ಟಿರುವುದಾಗಿ, ತಾವೆಲ್ಲ ಹೋಗುತ್ತಿರುವುದಾಗಿ ಹಾಗೂ ಮಗಳನ್ನೂ ತಮ್ಮೊಂದಿಗೆ ಒಯ್ಯುವುದು ಕಷ್ಟದ ನಿರ್ಧಾರವಾಗಿತ್ತೆಂದು ಆದರೆ ಮಗಳು ಈವಾ ಬರಲು ಸಿದ್ಧವಾಗಿದ್ದರಿಂದ ತಮ್ಮೊಂದಿಗೆ ಕರೆದುಕೊಂಡು ಹೋಗುವದಾಗಿ ಹೇಳುತ್ತಾನೆ.

ಇವರುಗಳ ಆತ್ಮಹತ್ಯೆ, ಅದರ ತಯ್ಯಾರಿ, ತಮ್ಮೆಲ್ಲ ವಸ್ತುಗಳನ್ನು ನಾಶಪಡಿಸುವುದೇ ಈ ಚಿತ್ರ.

1997 ರಲ್ಲಿ ಮೈಕೆಲ್ ಫನಿ ಗೇಮ್ಸ್ ಎನ್ನುವ ಚಿತ್ರವನ್ನು ಮಾಡಿದರು. ಇದೇ ಚಿತ್ರವನ್ನು ಹತ್ತು ವರ್ಷಗಳ ನಂತರ ಹಾಲಿವುಡ್‍ನಲ್ಲಿಯೂ ಇವರೇ ಮತ್ತೊಮ್ಮೆ ನಿರ್ದೇಶಿಸಿದರು. ಒಂದು ಉಚ್ಚ ಮಧ್ಯಮಗ ವರ್ಗದ ಕುಟುಂಬ, ಗಂಡ, ಹೆಂಡತಿ, ಮಗ ಮತ್ತು ಅವರ ನಾಯಿ ತಾವು ರಜಾದಿನಗಳಿಗಾಗಿಯೇ ನಗರದಿಂದ ದೂರದಲ್ಲಿ ನಿರ್ಮಸಿದ ತಮ್ಮ ಮನೆಗೆ ಬರುತ್ತಾರೆ. ಅಲ್ಲಿ ಅವರಿಗೆ ಸಿಗುವವರು ಪಾಲ್ ಮತ್ತು ಪೀಟರ್ ಎನ್ನುವ ಯುವಕರು. ಈ ಇಬ್ಬರು ಕುಟುಂಬದ ಸ್ನೇಹ ಸಂಪಾದಿಸಿ, ನಂತರ ಅವರ ಪೋನ್ ಲೈನ್ ಅನ್ನು ಕಿತ್ತು ಹಾಕಿ ಇಡೀ ಕುಟುಂಬವನ್ನು ಬಂಧಿತರನ್ನಾಗಿಸಿ, ಅವರೊಂದಿಗೆ ನೋವು ಸಾವಿನ ಆಟವಾಡಿ, ಪಾರಾಗಲು ಅವಕಾಶ ಕೊಟ್ಟಂತೆ ಮಾಡಿ ಮರುದಿನ ಬೆಳಗ್ಗೆಯ ತನಕ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಕೊಂದು ಹಾಕುವುದು ಈ ಚಿತ್ರದ ಸಾರಾಂಶ. ಇವರನ್ನು ಮುಗಿಸಿದ ನಂತರ ಇದೇ ಆಟವನ್ನು ಮುಂದುವರೆಸಲು ಪಾಲ್ ಮತ್ತು ಪೀಟರ್ ಇನ್ನೊಂದು ಕುಟುಂಬದ ಸ್ನೇಹ ಸಂಪಾದಿಸುವ ದೃಶ್ಯದಿಂದ ಚಿತ್ರ ಮುಕ್ತಾಯಗೊಳ್ಳುತ್ತದೆ.

ಈ ಚಿತ್ರ ನೋಡಿದಾಗ ವೀಕ್ಷಕರ ಮನದಲ್ಲಿ ಪ್ರಶ್ನೆಗಳು ಏಳುವುದು ಸಹಜ. ಏಕೀ ಸಿನೆಮಾ? ಮೈಕೆಲ್ ಹೇಳುವಂತೆ ಅವರ ಸಿನೆಮಾಗಳು ವೀಕ್ಷಕರ ಕಲ್ಪನೆಗೆ ಅವಕಾಶ ಮಾಡಿಕೊಡುತ್ತವೆ ಹಾಗೂ ವೀಕ್ಷಕರು ತಮ್ಮನ್ನು ತಾವು ಪ್ರಶ್ನಿಸುವಂತೆ ಮಾಡುತ್ತವೆ. ಖಂಡಿತವಾಗಿಯೂ ಈ ಎರಡೂ ಉದ್ದೇಶಗಳು ಇವರ ಸಿನೆಮಾಗಳಲ್ಲಿ ಸಾಕಾರಗೊಳ್ಳುತ್ತವೆ ಆದರೂ ಹಲವಾರೂ ಪ್ರಶ್ನೆಗಳು ಉಳಿದುಕೊಳ್ಳುತ್ತವೆ. ಒಂದು ಪತ್ರಿಕೆ ಫನಿ ಗೇಮ್ಸ್ ಚಿತ್ರವನ್ನು ಕಲಾತ್ಮಕ ಚಿತ್ರಹಿಂಸೆ ಎಂದು ಕರೆದು ಅತಿ ಕಟ್ಟ ಚಿತ್ರಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಹಲವಾರು ವೀಕ್ಷಕರು ಮತ್ತು ವಿಮರ್ಶಕರು ಈ ಚಿತ್ರಗಳನ್ನು ವೀಕ್ಷಿಸುವದು ಒಂದು ವಿಶಿಷ್ಟ ಅನುಭವ, ನಮ್ಮ ಆಳದ ಹಿಂಸೆಯನ್ನು ಹೊರಗೆ ತರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಿದೆ.

2001 ರಲ್ಲಿ ಬಂದ ಫ್ರೆಂಚ್ ಸಿನೆಮಾ ‘ದಿ ಪಿಯಾನೋ ಟೀಚರ್’ ಇವರ ಇನ್ನೊಂದು ಚಿತ್ರ. ಒಬ್ಬ ಮಧ್ಯವಯಸ್ಕ ಪಿಯಾನೋ ಶಿಕ್ಷಕಿ ಎರಿಕಾ ಕೊಹಟ್‍ಯ ಕಥೆ. ಎರಿಕಾಳ ಲೈಂಗಿಕ ತುಮುಲಗಳು, ತನ್ನ ವಿದ್ಯಾರ್ಥಿಗಳೊಂದಿಗಿನ ಕ್ಲಿಷ್ಟಕರ ಸಂಬಂಧಗಳನ್ನು ಎಲ್ಲಿಯೂ ಜಜ್‍ಮೆಂಟಲ್ ಆಗದೇ ತೋರಿಸುತ್ತ ಹೋಗುತ್ತದೆ. ಕ್ಯಾಷೆ(2005), ದಿ ವೈಟ್ ರಿಬನ್(2009), ಅಮೋರ್(2012) ಮುಂತಾದವುಗಳು ಮೈಕೆಲ್ ಹಾನೆಕೆ ನಿರ್ದೇಶಿಸಿದ ಖ್ಯಾತ ಚಿತ್ರಗಳು. ಮನುಷ್ಯನ ಆಳಕ್ಕಿಳಿದು ಅಲ್ಲಿಯ ಹಿಂಸೆ, ನೋವು, ಲೈಂಗಿಕತೆಯ ತುಮುಲಗಳನ್ನು ಪರೀಕ್ಷಿಸುವ ಮತ್ತು ಪ್ರಶ್ನಿಸುವ ಇವರ ಚಿತ್ರಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಮೈಕಲ್ ಹಾನೆಕೆ ಸದ್ಯಕ್ಕೆ ವಿಯೆನ್ನಾದ ಫಿಲ್ಮ್ ಅಕಾಡೆಮಿಯಲ್ಲಿ ಚಲನಚಿತ್ರ ನಿರ್ದೇಶನ ಕಲಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...