Homeನ್ಯಾಯ ಪಥದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

ದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

- Advertisement -
- Advertisement -

ದೈಹಿಕವಾಗಿ ನಮ್ಮೊಡನಿಲ್ಲದ ಆದರೆ ಸದಾ ಹರಿಯುವ ಜೀವಂತಿಕೆಯ ಸೆಲೆಯಾಗಿ, ಜೀವ ಚೈತನ್ಯವಾಗಿ ನಮ್ಮೊಳಗಡೆಯೇ ಇರಲಿರುವ ಸ್ಫೂರ್ತಿಯ ಚಿಲುಮೆ ಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅವರನ್ನು ನೆನೆಯುವಾಗೆಲ್ಲ ಅವರ ವಿಶಿಷ್ಟ ಗುಣಗಳಲ್ಲಿ ನನ್ನನ್ನು ಸದಾ ಅಚ್ಚರಿಗೊಳಿಸುವ, ಅರಿವಿನ ಅಳತೆಗೆ ನಿಲುಕದ ಈ ಒಂದು ಸಂಗತಿಯನ್ನು ಮಾತ್ರ ಈ ಬರಹಕ್ಕೆ ಆಯ್ದುಕೊಳ್ಳುತ್ತಿದ್ದೇನೆ. ಅದು ಸದಾ ಕಾಲ, ಕಾಲದ ಕರೆಗೆ ಸ್ಪಂದಿಸುತ್ತಿದ್ದ, ಸರ್ವರ ಒಳಿತಿಗೆ- ಸಂದರ್ಭದ ಅಗತ್ಯಕ್ಕೆ ತನ್ನನ್ನು ತಾನು ಎತ್ತರಿಸಿಕೊಳ್ಳುತ್ತಿದ್ದ, ಸದಾ ಸಮುದಾಯದೊಂದಿಗೆ ಸಮಾಜದೊಂದಿಗೆ ಎತ್ತರಕ್ಕೆ ಬೆಳೆಯುತ್ತಲೇ ಹೋದ ಅವರ ಪ್ರತಿಸ್ಪಂದಿಸುವ ಗುಣ. ಯಾವತ್ತೂ ಕಾಲ ತನ್ನ ಮೇಲೆ ಹೊರಿಸಿದ ಹೊಣೆಗಾರಿಕೆಗೆ ಬೆನ್ನುತಿರುಗಿಸದ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆ. ಎಷ್ಟರಮಟ್ಟಿಗೆಂದರೆ ವಯೋಸಹಜವಾದ ಯಾವುದೇ ದೈಹಿಕ-ಮಾನಸಿಕ ಒತ್ತಡಗಳೂ ಅವರ ಪ್ರಸ್ತುತದ ಕುರಿತ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಮುಕ್ಕಾಗಿಸಲಾಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ದೇಶ ಸಾಗಿದ ಹಾದಿಯ ಬಗ್ಗೆ ದೊರೆಸ್ವಾಮಿಯವರಿಗೆ ಸಮಾಧಾನವಿಲ್ಲದಿದ್ದು, ಆ ಕಾರಣದಿಂದಲೂ ಸೇರಿದಂತೆ ತಮ್ಮೊಳಗಿನ ಸತ್ಯ-ನ್ಯಾಯದ ಪರವಾದ ಕಿಚ್ಚಿನ ಕಾರಣಕ್ಕಾಗಿ ಅಧಿಕಾರದೆಡೆಗೆ ಸಾಗದೆ ಹೋರಾಟದ ಹಾದಿಯಲ್ಲಿ ಅವರು ಮುಂದುವರೆದಿದ್ದು ಗೊತ್ತಿರುವ ವಿಷಯ. ಹಾಗೆ ಹೋರಾಟದ ಹಾದಿಯು ಅವರಿಗೆ ಕಾಲದಿಂದ ಕಾಲಕ್ಕೆ ಹೊಳೆಸುತ್ತಾ ಹೋದ ಹೊಸ ಸತ್ಯಗಳನ್ನು ನೇರವಾಗಿ ದಿಟ್ಟವಾಗಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಎದುರುಗೊಳ್ಳುತ್ತಾ ಹೋದದ್ದು ಅವರ ವೈಶಿಷ್ಟ್ಯ. ಕಳೆದ ಕೆಲವು ದಶಕಗಳಲ್ಲಂತೂ ಭಾರತದಲ್ಲಿ ಎದುರಾದ ಸಂಕೀರ್ಣವಾದ ಸಾಮಾಜಿಕ ಪಲ್ಲಟಗಳನ್ನು ಹತ್ತಿರದಿಂದ ಗಮನಿಸುತ್ತಾ ವಿಶ್ಲೇಷಿಸುತ್ತಾ ಆಯಾ ಕಾಲಘಟ್ಟದಲ್ಲಿ ತಾನು ವಹಿಸಬೇಕಿರುವ ಪಾತ್ರವನ್ನೂ ನಿಭಾಯಿಸುತ್ತಾ ಬಂದವರು ದೊರೆಸ್ವಾಮಿಯವರು.

ಜಾಗತೀಕರಣದ ಅಲೆಯು ಭಾರತವನ್ನು ಅಯೋಮಯಗೊಳಿಸಿದ್ದ ಕಾಲ. 90ರ ದಶಕದಲ್ಲಿ ಒಂದೆಡೆ ಖಾಸಗೀಕರಣ, ಉದಾರೀಕರಣಗಳನ್ನು ಎತ್ತಿಹಿಡಿಯುವ ಬಲವಾದ ಮಧ್ಯಮವರ್ಗವೊಂದನ್ನು ಪ್ರವರ್ಧಮಾನಕ್ಕೆ ಬಂದಂತೆ, ಕೋಮುವಾದದ ವಿಷವನ್ನು ದೇಶದ ನರನಾಡಿಗಳೊಳಕ್ಕೆ ಇಳಿಸಿದ ಬಾಬರಿ ಮಸೀದಿಯಂತಹ ವಿನಾಶಕಾರಿ ವಿದ್ಯಮಾನಕ್ಕೂ ಸಾಕ್ಷಿಯಾಯಿತು. ಸೂಕ್ಷ್ಮ ಮನಸ್ಸಿನ ಅನೇಕರಿಗೆ ಈ ವಿದ್ಯಮಾನಗಳು ಗೊಂದಲದ ಗೂಡಾಗಿ ಉತ್ತರವಿಲ್ಲದ ಪ್ರಶ್ನೆಗಳಾಗಿ ಕಾಡಿದರೆ, ಅತ್ಯಂತ ಸ್ಪಷ್ಟವಾಗಿ ’ಜಾಗತೀಕರಣ-ಕೋಮುವಾದಗಳೆರಡೂ ಒಂದೇ ಕತ್ತಿಯ ಎರಡು ಅಲಗುಗಳು, ಎರಡನ್ನೂ ಒಟ್ಟಿಗೆ ವಿರೋಧಿಸದೆ ಗತ್ಯಂತರವಿಲ್ಲ’ ಎಂದು ಭಾವಿಸಿದವರಲ್ಲಿ ದೊರೆಸ್ವಾಮಿಯವರೂ ಮುಖ್ಯರಾದವರು. ಕೇವಲ ಅದನ್ನು ಹೇಳಿದ್ದಷ್ಟೇ ಅಲ್ಲ, ಕಾರ್ಯರೂಪಕ್ಕೆ ತರುವುದಕ್ಕೂ ಶ್ರಮಿಸಿದವರು.

ದೊರೆಸ್ವಾಮಿ, doreswamy

ಜನಪರ ಕಾಳಜಿಗಳನ್ನುಳ್ಳವರಲ್ಲೇ ಭಾರತವು ಮುಕ್ತಮಾರುಕಟ್ಟೆಗೆ ತೆರೆದುಕೊಳ್ಳಬೇಕೆಂಬುದನ್ನೂ ಬಲವಾಗಿ ಪ್ರತಿಪಾದಿಸುತ್ತಿದ್ದ ಸಾಕಷ್ಟು ಮಂದಿ ಇದ್ದ ಸಂದರ್ಭದಲ್ಲೂ, ಮುಂದೆ ಇದು ನಮ್ಮ ದೇಶವನ್ನು ಎಲ್ಲಿಗೆ ಕರೆದೊಯ್ಯಲಿದೆಯೆಂಬ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಕಂಡು, ಮಾತನಾಡಿದವರಲ್ಲಿ ಕರ್ನಾಟಕದ ಐತಿಹಾಸಿಕ ರೈತ ಚಳವಳಿಯ ಪ್ರವರ್ತಕರಲ್ಲೊಬ್ಬರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಒಬ್ಬರಾದರೆ, ಎಚ್.ಎಸ್.ದೊರೆಸ್ವಾಮಿಯವರೂ ಮತ್ತೊಬ್ಬರು. ಜಾಗತೀಕರಣದ ನಂತರ ವೇಗವಾಗಿ ಬೀಸಿದ ಉದಾರೀಕರಣದ ಗಾಳಿಯಲ್ಲಿ ಭಾರತದೊಳಕ್ಕೆ ತೂರಲಾರಂಭಿಸಿದ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟ ಕಟ್ಟಿಕೊಂಡು ಹೋರಾಟದ ಕಣಕ್ಕಿಳಿದವರು ಅವರು. ಕಳೆದ ಶತಮಾನದ ಕೊನೆಯ ಅವಧಿ ಮತ್ತು ಈ ಶತಮಾನದ ಮೊದಲ ದಶಕದ ಮೊದಲರ್ಧಗಳು ಭೀಕರ ಕೋಮುಗಲಭೆಗಳಿಗೆ ದೇಶದ ಹಲವು ಭಾಗಗಳಲ್ಲಿ ಗುರಿಯಾಗುತ್ತಾ ನಲುಗುತ್ತಿದ್ದಾಗ, ಅದನ್ನು ವಿರೋಧಿಸುವ ಗಟ್ಟಿದನಿಗಳ ಜೊತೆಗೂಡಿದವರು ಈ ಹಿರಿಯಜ್ಜ.

ಅದೇರೀತಿ ನಂತರದ ದಿನಗಳಲ್ಲಿ ಕೋಮುಸೌಹಾರ್ದದ ಚಳವಳಿಗಳಲ್ಲಿ, ದೇಶದಲ್ಲಿ ಹೆಚ್ಚುತ್ತಿದ್ದ ಬಲಪಂಥೀಯ ರಾಜಕಾರಣದ ವಿರುದ್ಧದ ಆಂದೋಲನಗಳಲ್ಲಿ ದೊರೆಸ್ವಾಮಿಯವರು ಸದಾ ಸಕ್ರಿಯರಾಗಿದ್ದರು. ಶಾಂತಿಗಾಗಿ ನಾಗರಿಕರ ವೇದಿಕೆಯ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿ, ರಾಜ್ಯದಲ್ಲಿ ಭೂಗತ ಜೀವನದಿಂದ ಮುಖ್ಯವಾಹಿನಿಗೆ ಬರಲು ಹೋರಾಟಗಾರರಿಗೆ ಬೆಂಬಲವಾಗಿ ನಿಂತಿದ್ದರಲ್ಲಿ ಅವರ ಅಸಾಮಾನ್ಯವಾದ ಕಾಳಜಿ ನಮ್ಮ ಮನಸ್ಸಿಗೆ ತಾಕುತ್ತದೆ.

ಅಷ್ಟೇ ಅಲ್ಲ, ದೂರಗಾಮಿಯಾದ ಸಾಮಾಜಿಕ ಆಂದೋಲನವೊಂದನ್ನು ಹುಟ್ಟುಹಾಕಬೇಕು ಮತ್ತು ಅದು ಶೋಷಿತರಿಗೆ ಅವರ ಭೂಮಿಯ ಹಕ್ಕನ್ನು ಕೊಡಿಸುವುದೇ ಆಗಿರಬೇಕು ಎಂಬ ಖಚಿತವಾದ ಅಭಿಪ್ರಾಯವನ್ನು ಮುಂದಿಟ್ಟು ಅದರ ಮುಂಚೂಣಿ ಸ್ಥಾನವನ್ನೂ ತಾವೇ ವಹಿಸಿಕೊಂಡರು. ಅದರ ಅಂಗವಾಗಿ ಎಂತಹ ಕಷ್ಟಕರ ಹೋರಾಟಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಹಿಂಜರಿಯಲಿಲ್ಲ. ದಿಡ್ಡಳ್ಳಿಯ ಹೋರಾಟದ ಸಂದರ್ಭದಲ್ಲಿ ಮಡಿಕೇರಿ ಚಲೋಗಾದರೂ ಸರಿಯೇ, ಬೆಂಗಳೂರು ಚಲೋ ಪಾದಯಾತ್ರೆಗಾದರೂ ಸರಿಯೇ, ಸುದೀರ್ಘ 18 ದಿನಗಳ ನಿರಂತರ ಧರಣಿಗಾದರೂ ಸರಿಯೇ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೆ ಆ ಹೋರಾಟ ತಾತ್ವಿಕ ಅಂತ್ಯ ಕಾಣುವವರೆಗೆ ಪಟ್ಟುಹಿಡಿಯುವ ಅವರ ನಿರ್ಧಾರ ಸುಲಭಸಾಧ್ಯವಲ್ಲ. ಮದ್ಯನಿಷೇಧದ ಹೋರಾಟದಿಂದ ಹಿಡಿದು, ಕೆರೆ ಉಳಿಸುವ ಆಂದೋಲನದತನಕ ಎಲ್ಲದರಲ್ಲೂ ನಮಗೆ ಈ ಕಷ್ಟಸಹಿಷ್ಣು ಗುಣ ಎದ್ದು ಕಾಣುತ್ತದೆ.

ಗೌರಿ ಲಂಕೇಶರ ಹತ್ಯೆಯ ಸಂದರ್ಭದಲ್ಲೂ ಅತ್ಯಂತ ನಿಷ್ಟುರವಾಗಿ ಆಳುವ ಫ್ಯಾಸಿಸ್ಟ್ ಪಕ್ಷವನ್ನು ಗುರಿಮಾಡಿ ಮಾತನಾಡಲಾರಂಭಿಸಿ, ಆಳುವವರಿಗೆ ಶತ್ರುವಾಗಿ ಕಂಡರು. ಅಷ್ಟಾದರೂ ಸತ್ಯ, ನ್ಯಾಯ ಮತ್ತು ಹೋರಾಟದ ಹಾದಿಯಿಂದ ಹಿಂದೆಸರಿಯುವುದಿರಲಿ, ಒಂದಷ್ಟು ಮೃದುಧೋರಣೆ ತಾಳುವುದೂ ಕೂಡಾ ಅವರಿಗೆ ಎಂದಿಗೂ ಒಪ್ಪಿತವಾದ ಕೆಲಸವಲ್ಲ! ಅದಕ್ಕಾಗಿ ಬಿಜೆಪಿ ಪಾಳಯದಿಂದ ದಾಳಿಗೊಳಗಾದರೂ ಕಿಂಚಿತ್ತೂ ಅಳುಕದ ಆನೆ ನಡಿಗೆ ಅವರದ್ದು.

ತಮ್ಮ ದೂರದೃಷ್ಟಿತ್ವ, ತಳಮಟ್ಟದ ಸಮಸ್ಯೆಗಳನ್ನು ಕಂಡುಕೊಂಡು ಹೋರಾಟದ ಕಾರ್ಯತಂತ್ರ ರೂಪಿಸುವ ಸೂಕ್ಷ್ಮತೆ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಕುರಿತ ತಮ್ಮ ಅಚಲವಾದ ನಿಷ್ಠೆಯ ಕಾರಣದಿಂದ ದೊರೆಸ್ವಾಮಿಯವರು ಎಂದಿಗೂ ಅನನ್ಯರಾಗಿಯೇ ಉಳಿಯುತ್ತಾರೆ. ಎಷ್ಟೋ ಬಾರಿ ಕೆಲವರ ಸಾವಿನಿಂದ ’ನಾಡು ಬಡವಾಯಿತು’, ’ಶೂನ್ಯ ಆವರಿಸಿದೆ’ ಎಂಬ ಮಾತುಗಳನ್ನು ಬಳಸಿದ್ದಿದೆ… ಆ ಮಾತುಗಳು ಈ ಸಾವಿನ ಸಂದರ್ಭದಲ್ಲಿ ಇನ್ನಷ್ಟು ತೀವ್ರವಾಗಿ ಕಾಡುತ್ತವೆ. ದೊರೆಸ್ವಾಮಿಯವರ ನಿರ್ಗಮನ ಅವರ ತುಂಬು ಬದುಕಿನ ಮತ್ತೊಂದು ಘಟ್ಟ ಎಂಬ ಅರಿವಿದ್ದರೂ ನಿಜವಾದ ಶೂನ್ಯಭಾವ ಆವರಿಸಿರುವುದಂತೂ ಸತ್ಯ.

ಮಲ್ಲಿಗೆ

ಮಲ್ಲಿಗೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ ಅಲ್ಲಗೆಳೆದ ರಿಜಿಸ್ಟ್ರಾರ್‌‌‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...