Homeನ್ಯಾಯ ಪಥದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

ದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

- Advertisement -
- Advertisement -

ದೈಹಿಕವಾಗಿ ನಮ್ಮೊಡನಿಲ್ಲದ ಆದರೆ ಸದಾ ಹರಿಯುವ ಜೀವಂತಿಕೆಯ ಸೆಲೆಯಾಗಿ, ಜೀವ ಚೈತನ್ಯವಾಗಿ ನಮ್ಮೊಳಗಡೆಯೇ ಇರಲಿರುವ ಸ್ಫೂರ್ತಿಯ ಚಿಲುಮೆ ಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅವರನ್ನು ನೆನೆಯುವಾಗೆಲ್ಲ ಅವರ ವಿಶಿಷ್ಟ ಗುಣಗಳಲ್ಲಿ ನನ್ನನ್ನು ಸದಾ ಅಚ್ಚರಿಗೊಳಿಸುವ, ಅರಿವಿನ ಅಳತೆಗೆ ನಿಲುಕದ ಈ ಒಂದು ಸಂಗತಿಯನ್ನು ಮಾತ್ರ ಈ ಬರಹಕ್ಕೆ ಆಯ್ದುಕೊಳ್ಳುತ್ತಿದ್ದೇನೆ. ಅದು ಸದಾ ಕಾಲ, ಕಾಲದ ಕರೆಗೆ ಸ್ಪಂದಿಸುತ್ತಿದ್ದ, ಸರ್ವರ ಒಳಿತಿಗೆ- ಸಂದರ್ಭದ ಅಗತ್ಯಕ್ಕೆ ತನ್ನನ್ನು ತಾನು ಎತ್ತರಿಸಿಕೊಳ್ಳುತ್ತಿದ್ದ, ಸದಾ ಸಮುದಾಯದೊಂದಿಗೆ ಸಮಾಜದೊಂದಿಗೆ ಎತ್ತರಕ್ಕೆ ಬೆಳೆಯುತ್ತಲೇ ಹೋದ ಅವರ ಪ್ರತಿಸ್ಪಂದಿಸುವ ಗುಣ. ಯಾವತ್ತೂ ಕಾಲ ತನ್ನ ಮೇಲೆ ಹೊರಿಸಿದ ಹೊಣೆಗಾರಿಕೆಗೆ ಬೆನ್ನುತಿರುಗಿಸದ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆ. ಎಷ್ಟರಮಟ್ಟಿಗೆಂದರೆ ವಯೋಸಹಜವಾದ ಯಾವುದೇ ದೈಹಿಕ-ಮಾನಸಿಕ ಒತ್ತಡಗಳೂ ಅವರ ಪ್ರಸ್ತುತದ ಕುರಿತ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಮುಕ್ಕಾಗಿಸಲಾಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ದೇಶ ಸಾಗಿದ ಹಾದಿಯ ಬಗ್ಗೆ ದೊರೆಸ್ವಾಮಿಯವರಿಗೆ ಸಮಾಧಾನವಿಲ್ಲದಿದ್ದು, ಆ ಕಾರಣದಿಂದಲೂ ಸೇರಿದಂತೆ ತಮ್ಮೊಳಗಿನ ಸತ್ಯ-ನ್ಯಾಯದ ಪರವಾದ ಕಿಚ್ಚಿನ ಕಾರಣಕ್ಕಾಗಿ ಅಧಿಕಾರದೆಡೆಗೆ ಸಾಗದೆ ಹೋರಾಟದ ಹಾದಿಯಲ್ಲಿ ಅವರು ಮುಂದುವರೆದಿದ್ದು ಗೊತ್ತಿರುವ ವಿಷಯ. ಹಾಗೆ ಹೋರಾಟದ ಹಾದಿಯು ಅವರಿಗೆ ಕಾಲದಿಂದ ಕಾಲಕ್ಕೆ ಹೊಳೆಸುತ್ತಾ ಹೋದ ಹೊಸ ಸತ್ಯಗಳನ್ನು ನೇರವಾಗಿ ದಿಟ್ಟವಾಗಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಎದುರುಗೊಳ್ಳುತ್ತಾ ಹೋದದ್ದು ಅವರ ವೈಶಿಷ್ಟ್ಯ. ಕಳೆದ ಕೆಲವು ದಶಕಗಳಲ್ಲಂತೂ ಭಾರತದಲ್ಲಿ ಎದುರಾದ ಸಂಕೀರ್ಣವಾದ ಸಾಮಾಜಿಕ ಪಲ್ಲಟಗಳನ್ನು ಹತ್ತಿರದಿಂದ ಗಮನಿಸುತ್ತಾ ವಿಶ್ಲೇಷಿಸುತ್ತಾ ಆಯಾ ಕಾಲಘಟ್ಟದಲ್ಲಿ ತಾನು ವಹಿಸಬೇಕಿರುವ ಪಾತ್ರವನ್ನೂ ನಿಭಾಯಿಸುತ್ತಾ ಬಂದವರು ದೊರೆಸ್ವಾಮಿಯವರು.

ಜಾಗತೀಕರಣದ ಅಲೆಯು ಭಾರತವನ್ನು ಅಯೋಮಯಗೊಳಿಸಿದ್ದ ಕಾಲ. 90ರ ದಶಕದಲ್ಲಿ ಒಂದೆಡೆ ಖಾಸಗೀಕರಣ, ಉದಾರೀಕರಣಗಳನ್ನು ಎತ್ತಿಹಿಡಿಯುವ ಬಲವಾದ ಮಧ್ಯಮವರ್ಗವೊಂದನ್ನು ಪ್ರವರ್ಧಮಾನಕ್ಕೆ ಬಂದಂತೆ, ಕೋಮುವಾದದ ವಿಷವನ್ನು ದೇಶದ ನರನಾಡಿಗಳೊಳಕ್ಕೆ ಇಳಿಸಿದ ಬಾಬರಿ ಮಸೀದಿಯಂತಹ ವಿನಾಶಕಾರಿ ವಿದ್ಯಮಾನಕ್ಕೂ ಸಾಕ್ಷಿಯಾಯಿತು. ಸೂಕ್ಷ್ಮ ಮನಸ್ಸಿನ ಅನೇಕರಿಗೆ ಈ ವಿದ್ಯಮಾನಗಳು ಗೊಂದಲದ ಗೂಡಾಗಿ ಉತ್ತರವಿಲ್ಲದ ಪ್ರಶ್ನೆಗಳಾಗಿ ಕಾಡಿದರೆ, ಅತ್ಯಂತ ಸ್ಪಷ್ಟವಾಗಿ ’ಜಾಗತೀಕರಣ-ಕೋಮುವಾದಗಳೆರಡೂ ಒಂದೇ ಕತ್ತಿಯ ಎರಡು ಅಲಗುಗಳು, ಎರಡನ್ನೂ ಒಟ್ಟಿಗೆ ವಿರೋಧಿಸದೆ ಗತ್ಯಂತರವಿಲ್ಲ’ ಎಂದು ಭಾವಿಸಿದವರಲ್ಲಿ ದೊರೆಸ್ವಾಮಿಯವರೂ ಮುಖ್ಯರಾದವರು. ಕೇವಲ ಅದನ್ನು ಹೇಳಿದ್ದಷ್ಟೇ ಅಲ್ಲ, ಕಾರ್ಯರೂಪಕ್ಕೆ ತರುವುದಕ್ಕೂ ಶ್ರಮಿಸಿದವರು.

ದೊರೆಸ್ವಾಮಿ, doreswamy

ಜನಪರ ಕಾಳಜಿಗಳನ್ನುಳ್ಳವರಲ್ಲೇ ಭಾರತವು ಮುಕ್ತಮಾರುಕಟ್ಟೆಗೆ ತೆರೆದುಕೊಳ್ಳಬೇಕೆಂಬುದನ್ನೂ ಬಲವಾಗಿ ಪ್ರತಿಪಾದಿಸುತ್ತಿದ್ದ ಸಾಕಷ್ಟು ಮಂದಿ ಇದ್ದ ಸಂದರ್ಭದಲ್ಲೂ, ಮುಂದೆ ಇದು ನಮ್ಮ ದೇಶವನ್ನು ಎಲ್ಲಿಗೆ ಕರೆದೊಯ್ಯಲಿದೆಯೆಂಬ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಕಂಡು, ಮಾತನಾಡಿದವರಲ್ಲಿ ಕರ್ನಾಟಕದ ಐತಿಹಾಸಿಕ ರೈತ ಚಳವಳಿಯ ಪ್ರವರ್ತಕರಲ್ಲೊಬ್ಬರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಒಬ್ಬರಾದರೆ, ಎಚ್.ಎಸ್.ದೊರೆಸ್ವಾಮಿಯವರೂ ಮತ್ತೊಬ್ಬರು. ಜಾಗತೀಕರಣದ ನಂತರ ವೇಗವಾಗಿ ಬೀಸಿದ ಉದಾರೀಕರಣದ ಗಾಳಿಯಲ್ಲಿ ಭಾರತದೊಳಕ್ಕೆ ತೂರಲಾರಂಭಿಸಿದ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟ ಕಟ್ಟಿಕೊಂಡು ಹೋರಾಟದ ಕಣಕ್ಕಿಳಿದವರು ಅವರು. ಕಳೆದ ಶತಮಾನದ ಕೊನೆಯ ಅವಧಿ ಮತ್ತು ಈ ಶತಮಾನದ ಮೊದಲ ದಶಕದ ಮೊದಲರ್ಧಗಳು ಭೀಕರ ಕೋಮುಗಲಭೆಗಳಿಗೆ ದೇಶದ ಹಲವು ಭಾಗಗಳಲ್ಲಿ ಗುರಿಯಾಗುತ್ತಾ ನಲುಗುತ್ತಿದ್ದಾಗ, ಅದನ್ನು ವಿರೋಧಿಸುವ ಗಟ್ಟಿದನಿಗಳ ಜೊತೆಗೂಡಿದವರು ಈ ಹಿರಿಯಜ್ಜ.

ಅದೇರೀತಿ ನಂತರದ ದಿನಗಳಲ್ಲಿ ಕೋಮುಸೌಹಾರ್ದದ ಚಳವಳಿಗಳಲ್ಲಿ, ದೇಶದಲ್ಲಿ ಹೆಚ್ಚುತ್ತಿದ್ದ ಬಲಪಂಥೀಯ ರಾಜಕಾರಣದ ವಿರುದ್ಧದ ಆಂದೋಲನಗಳಲ್ಲಿ ದೊರೆಸ್ವಾಮಿಯವರು ಸದಾ ಸಕ್ರಿಯರಾಗಿದ್ದರು. ಶಾಂತಿಗಾಗಿ ನಾಗರಿಕರ ವೇದಿಕೆಯ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿ, ರಾಜ್ಯದಲ್ಲಿ ಭೂಗತ ಜೀವನದಿಂದ ಮುಖ್ಯವಾಹಿನಿಗೆ ಬರಲು ಹೋರಾಟಗಾರರಿಗೆ ಬೆಂಬಲವಾಗಿ ನಿಂತಿದ್ದರಲ್ಲಿ ಅವರ ಅಸಾಮಾನ್ಯವಾದ ಕಾಳಜಿ ನಮ್ಮ ಮನಸ್ಸಿಗೆ ತಾಕುತ್ತದೆ.

ಅಷ್ಟೇ ಅಲ್ಲ, ದೂರಗಾಮಿಯಾದ ಸಾಮಾಜಿಕ ಆಂದೋಲನವೊಂದನ್ನು ಹುಟ್ಟುಹಾಕಬೇಕು ಮತ್ತು ಅದು ಶೋಷಿತರಿಗೆ ಅವರ ಭೂಮಿಯ ಹಕ್ಕನ್ನು ಕೊಡಿಸುವುದೇ ಆಗಿರಬೇಕು ಎಂಬ ಖಚಿತವಾದ ಅಭಿಪ್ರಾಯವನ್ನು ಮುಂದಿಟ್ಟು ಅದರ ಮುಂಚೂಣಿ ಸ್ಥಾನವನ್ನೂ ತಾವೇ ವಹಿಸಿಕೊಂಡರು. ಅದರ ಅಂಗವಾಗಿ ಎಂತಹ ಕಷ್ಟಕರ ಹೋರಾಟಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಹಿಂಜರಿಯಲಿಲ್ಲ. ದಿಡ್ಡಳ್ಳಿಯ ಹೋರಾಟದ ಸಂದರ್ಭದಲ್ಲಿ ಮಡಿಕೇರಿ ಚಲೋಗಾದರೂ ಸರಿಯೇ, ಬೆಂಗಳೂರು ಚಲೋ ಪಾದಯಾತ್ರೆಗಾದರೂ ಸರಿಯೇ, ಸುದೀರ್ಘ 18 ದಿನಗಳ ನಿರಂತರ ಧರಣಿಗಾದರೂ ಸರಿಯೇ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೆ ಆ ಹೋರಾಟ ತಾತ್ವಿಕ ಅಂತ್ಯ ಕಾಣುವವರೆಗೆ ಪಟ್ಟುಹಿಡಿಯುವ ಅವರ ನಿರ್ಧಾರ ಸುಲಭಸಾಧ್ಯವಲ್ಲ. ಮದ್ಯನಿಷೇಧದ ಹೋರಾಟದಿಂದ ಹಿಡಿದು, ಕೆರೆ ಉಳಿಸುವ ಆಂದೋಲನದತನಕ ಎಲ್ಲದರಲ್ಲೂ ನಮಗೆ ಈ ಕಷ್ಟಸಹಿಷ್ಣು ಗುಣ ಎದ್ದು ಕಾಣುತ್ತದೆ.

ಗೌರಿ ಲಂಕೇಶರ ಹತ್ಯೆಯ ಸಂದರ್ಭದಲ್ಲೂ ಅತ್ಯಂತ ನಿಷ್ಟುರವಾಗಿ ಆಳುವ ಫ್ಯಾಸಿಸ್ಟ್ ಪಕ್ಷವನ್ನು ಗುರಿಮಾಡಿ ಮಾತನಾಡಲಾರಂಭಿಸಿ, ಆಳುವವರಿಗೆ ಶತ್ರುವಾಗಿ ಕಂಡರು. ಅಷ್ಟಾದರೂ ಸತ್ಯ, ನ್ಯಾಯ ಮತ್ತು ಹೋರಾಟದ ಹಾದಿಯಿಂದ ಹಿಂದೆಸರಿಯುವುದಿರಲಿ, ಒಂದಷ್ಟು ಮೃದುಧೋರಣೆ ತಾಳುವುದೂ ಕೂಡಾ ಅವರಿಗೆ ಎಂದಿಗೂ ಒಪ್ಪಿತವಾದ ಕೆಲಸವಲ್ಲ! ಅದಕ್ಕಾಗಿ ಬಿಜೆಪಿ ಪಾಳಯದಿಂದ ದಾಳಿಗೊಳಗಾದರೂ ಕಿಂಚಿತ್ತೂ ಅಳುಕದ ಆನೆ ನಡಿಗೆ ಅವರದ್ದು.

ತಮ್ಮ ದೂರದೃಷ್ಟಿತ್ವ, ತಳಮಟ್ಟದ ಸಮಸ್ಯೆಗಳನ್ನು ಕಂಡುಕೊಂಡು ಹೋರಾಟದ ಕಾರ್ಯತಂತ್ರ ರೂಪಿಸುವ ಸೂಕ್ಷ್ಮತೆ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಕುರಿತ ತಮ್ಮ ಅಚಲವಾದ ನಿಷ್ಠೆಯ ಕಾರಣದಿಂದ ದೊರೆಸ್ವಾಮಿಯವರು ಎಂದಿಗೂ ಅನನ್ಯರಾಗಿಯೇ ಉಳಿಯುತ್ತಾರೆ. ಎಷ್ಟೋ ಬಾರಿ ಕೆಲವರ ಸಾವಿನಿಂದ ’ನಾಡು ಬಡವಾಯಿತು’, ’ಶೂನ್ಯ ಆವರಿಸಿದೆ’ ಎಂಬ ಮಾತುಗಳನ್ನು ಬಳಸಿದ್ದಿದೆ… ಆ ಮಾತುಗಳು ಈ ಸಾವಿನ ಸಂದರ್ಭದಲ್ಲಿ ಇನ್ನಷ್ಟು ತೀವ್ರವಾಗಿ ಕಾಡುತ್ತವೆ. ದೊರೆಸ್ವಾಮಿಯವರ ನಿರ್ಗಮನ ಅವರ ತುಂಬು ಬದುಕಿನ ಮತ್ತೊಂದು ಘಟ್ಟ ಎಂಬ ಅರಿವಿದ್ದರೂ ನಿಜವಾದ ಶೂನ್ಯಭಾವ ಆವರಿಸಿರುವುದಂತೂ ಸತ್ಯ.

ಮಲ್ಲಿಗೆ

ಮಲ್ಲಿಗೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ ಅಲ್ಲಗೆಳೆದ ರಿಜಿಸ್ಟ್ರಾರ್‌‌‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....