Homeನ್ಯಾಯ ಪಥದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

ದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

- Advertisement -
- Advertisement -

ದೈಹಿಕವಾಗಿ ನಮ್ಮೊಡನಿಲ್ಲದ ಆದರೆ ಸದಾ ಹರಿಯುವ ಜೀವಂತಿಕೆಯ ಸೆಲೆಯಾಗಿ, ಜೀವ ಚೈತನ್ಯವಾಗಿ ನಮ್ಮೊಳಗಡೆಯೇ ಇರಲಿರುವ ಸ್ಫೂರ್ತಿಯ ಚಿಲುಮೆ ಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅವರನ್ನು ನೆನೆಯುವಾಗೆಲ್ಲ ಅವರ ವಿಶಿಷ್ಟ ಗುಣಗಳಲ್ಲಿ ನನ್ನನ್ನು ಸದಾ ಅಚ್ಚರಿಗೊಳಿಸುವ, ಅರಿವಿನ ಅಳತೆಗೆ ನಿಲುಕದ ಈ ಒಂದು ಸಂಗತಿಯನ್ನು ಮಾತ್ರ ಈ ಬರಹಕ್ಕೆ ಆಯ್ದುಕೊಳ್ಳುತ್ತಿದ್ದೇನೆ. ಅದು ಸದಾ ಕಾಲ, ಕಾಲದ ಕರೆಗೆ ಸ್ಪಂದಿಸುತ್ತಿದ್ದ, ಸರ್ವರ ಒಳಿತಿಗೆ- ಸಂದರ್ಭದ ಅಗತ್ಯಕ್ಕೆ ತನ್ನನ್ನು ತಾನು ಎತ್ತರಿಸಿಕೊಳ್ಳುತ್ತಿದ್ದ, ಸದಾ ಸಮುದಾಯದೊಂದಿಗೆ ಸಮಾಜದೊಂದಿಗೆ ಎತ್ತರಕ್ಕೆ ಬೆಳೆಯುತ್ತಲೇ ಹೋದ ಅವರ ಪ್ರತಿಸ್ಪಂದಿಸುವ ಗುಣ. ಯಾವತ್ತೂ ಕಾಲ ತನ್ನ ಮೇಲೆ ಹೊರಿಸಿದ ಹೊಣೆಗಾರಿಕೆಗೆ ಬೆನ್ನುತಿರುಗಿಸದ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆ. ಎಷ್ಟರಮಟ್ಟಿಗೆಂದರೆ ವಯೋಸಹಜವಾದ ಯಾವುದೇ ದೈಹಿಕ-ಮಾನಸಿಕ ಒತ್ತಡಗಳೂ ಅವರ ಪ್ರಸ್ತುತದ ಕುರಿತ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಮುಕ್ಕಾಗಿಸಲಾಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ದೇಶ ಸಾಗಿದ ಹಾದಿಯ ಬಗ್ಗೆ ದೊರೆಸ್ವಾಮಿಯವರಿಗೆ ಸಮಾಧಾನವಿಲ್ಲದಿದ್ದು, ಆ ಕಾರಣದಿಂದಲೂ ಸೇರಿದಂತೆ ತಮ್ಮೊಳಗಿನ ಸತ್ಯ-ನ್ಯಾಯದ ಪರವಾದ ಕಿಚ್ಚಿನ ಕಾರಣಕ್ಕಾಗಿ ಅಧಿಕಾರದೆಡೆಗೆ ಸಾಗದೆ ಹೋರಾಟದ ಹಾದಿಯಲ್ಲಿ ಅವರು ಮುಂದುವರೆದಿದ್ದು ಗೊತ್ತಿರುವ ವಿಷಯ. ಹಾಗೆ ಹೋರಾಟದ ಹಾದಿಯು ಅವರಿಗೆ ಕಾಲದಿಂದ ಕಾಲಕ್ಕೆ ಹೊಳೆಸುತ್ತಾ ಹೋದ ಹೊಸ ಸತ್ಯಗಳನ್ನು ನೇರವಾಗಿ ದಿಟ್ಟವಾಗಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಎದುರುಗೊಳ್ಳುತ್ತಾ ಹೋದದ್ದು ಅವರ ವೈಶಿಷ್ಟ್ಯ. ಕಳೆದ ಕೆಲವು ದಶಕಗಳಲ್ಲಂತೂ ಭಾರತದಲ್ಲಿ ಎದುರಾದ ಸಂಕೀರ್ಣವಾದ ಸಾಮಾಜಿಕ ಪಲ್ಲಟಗಳನ್ನು ಹತ್ತಿರದಿಂದ ಗಮನಿಸುತ್ತಾ ವಿಶ್ಲೇಷಿಸುತ್ತಾ ಆಯಾ ಕಾಲಘಟ್ಟದಲ್ಲಿ ತಾನು ವಹಿಸಬೇಕಿರುವ ಪಾತ್ರವನ್ನೂ ನಿಭಾಯಿಸುತ್ತಾ ಬಂದವರು ದೊರೆಸ್ವಾಮಿಯವರು.

ಜಾಗತೀಕರಣದ ಅಲೆಯು ಭಾರತವನ್ನು ಅಯೋಮಯಗೊಳಿಸಿದ್ದ ಕಾಲ. 90ರ ದಶಕದಲ್ಲಿ ಒಂದೆಡೆ ಖಾಸಗೀಕರಣ, ಉದಾರೀಕರಣಗಳನ್ನು ಎತ್ತಿಹಿಡಿಯುವ ಬಲವಾದ ಮಧ್ಯಮವರ್ಗವೊಂದನ್ನು ಪ್ರವರ್ಧಮಾನಕ್ಕೆ ಬಂದಂತೆ, ಕೋಮುವಾದದ ವಿಷವನ್ನು ದೇಶದ ನರನಾಡಿಗಳೊಳಕ್ಕೆ ಇಳಿಸಿದ ಬಾಬರಿ ಮಸೀದಿಯಂತಹ ವಿನಾಶಕಾರಿ ವಿದ್ಯಮಾನಕ್ಕೂ ಸಾಕ್ಷಿಯಾಯಿತು. ಸೂಕ್ಷ್ಮ ಮನಸ್ಸಿನ ಅನೇಕರಿಗೆ ಈ ವಿದ್ಯಮಾನಗಳು ಗೊಂದಲದ ಗೂಡಾಗಿ ಉತ್ತರವಿಲ್ಲದ ಪ್ರಶ್ನೆಗಳಾಗಿ ಕಾಡಿದರೆ, ಅತ್ಯಂತ ಸ್ಪಷ್ಟವಾಗಿ ’ಜಾಗತೀಕರಣ-ಕೋಮುವಾದಗಳೆರಡೂ ಒಂದೇ ಕತ್ತಿಯ ಎರಡು ಅಲಗುಗಳು, ಎರಡನ್ನೂ ಒಟ್ಟಿಗೆ ವಿರೋಧಿಸದೆ ಗತ್ಯಂತರವಿಲ್ಲ’ ಎಂದು ಭಾವಿಸಿದವರಲ್ಲಿ ದೊರೆಸ್ವಾಮಿಯವರೂ ಮುಖ್ಯರಾದವರು. ಕೇವಲ ಅದನ್ನು ಹೇಳಿದ್ದಷ್ಟೇ ಅಲ್ಲ, ಕಾರ್ಯರೂಪಕ್ಕೆ ತರುವುದಕ್ಕೂ ಶ್ರಮಿಸಿದವರು.

ದೊರೆಸ್ವಾಮಿ, doreswamy

ಜನಪರ ಕಾಳಜಿಗಳನ್ನುಳ್ಳವರಲ್ಲೇ ಭಾರತವು ಮುಕ್ತಮಾರುಕಟ್ಟೆಗೆ ತೆರೆದುಕೊಳ್ಳಬೇಕೆಂಬುದನ್ನೂ ಬಲವಾಗಿ ಪ್ರತಿಪಾದಿಸುತ್ತಿದ್ದ ಸಾಕಷ್ಟು ಮಂದಿ ಇದ್ದ ಸಂದರ್ಭದಲ್ಲೂ, ಮುಂದೆ ಇದು ನಮ್ಮ ದೇಶವನ್ನು ಎಲ್ಲಿಗೆ ಕರೆದೊಯ್ಯಲಿದೆಯೆಂಬ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಕಂಡು, ಮಾತನಾಡಿದವರಲ್ಲಿ ಕರ್ನಾಟಕದ ಐತಿಹಾಸಿಕ ರೈತ ಚಳವಳಿಯ ಪ್ರವರ್ತಕರಲ್ಲೊಬ್ಬರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಒಬ್ಬರಾದರೆ, ಎಚ್.ಎಸ್.ದೊರೆಸ್ವಾಮಿಯವರೂ ಮತ್ತೊಬ್ಬರು. ಜಾಗತೀಕರಣದ ನಂತರ ವೇಗವಾಗಿ ಬೀಸಿದ ಉದಾರೀಕರಣದ ಗಾಳಿಯಲ್ಲಿ ಭಾರತದೊಳಕ್ಕೆ ತೂರಲಾರಂಭಿಸಿದ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟ ಕಟ್ಟಿಕೊಂಡು ಹೋರಾಟದ ಕಣಕ್ಕಿಳಿದವರು ಅವರು. ಕಳೆದ ಶತಮಾನದ ಕೊನೆಯ ಅವಧಿ ಮತ್ತು ಈ ಶತಮಾನದ ಮೊದಲ ದಶಕದ ಮೊದಲರ್ಧಗಳು ಭೀಕರ ಕೋಮುಗಲಭೆಗಳಿಗೆ ದೇಶದ ಹಲವು ಭಾಗಗಳಲ್ಲಿ ಗುರಿಯಾಗುತ್ತಾ ನಲುಗುತ್ತಿದ್ದಾಗ, ಅದನ್ನು ವಿರೋಧಿಸುವ ಗಟ್ಟಿದನಿಗಳ ಜೊತೆಗೂಡಿದವರು ಈ ಹಿರಿಯಜ್ಜ.

ಅದೇರೀತಿ ನಂತರದ ದಿನಗಳಲ್ಲಿ ಕೋಮುಸೌಹಾರ್ದದ ಚಳವಳಿಗಳಲ್ಲಿ, ದೇಶದಲ್ಲಿ ಹೆಚ್ಚುತ್ತಿದ್ದ ಬಲಪಂಥೀಯ ರಾಜಕಾರಣದ ವಿರುದ್ಧದ ಆಂದೋಲನಗಳಲ್ಲಿ ದೊರೆಸ್ವಾಮಿಯವರು ಸದಾ ಸಕ್ರಿಯರಾಗಿದ್ದರು. ಶಾಂತಿಗಾಗಿ ನಾಗರಿಕರ ವೇದಿಕೆಯ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿ, ರಾಜ್ಯದಲ್ಲಿ ಭೂಗತ ಜೀವನದಿಂದ ಮುಖ್ಯವಾಹಿನಿಗೆ ಬರಲು ಹೋರಾಟಗಾರರಿಗೆ ಬೆಂಬಲವಾಗಿ ನಿಂತಿದ್ದರಲ್ಲಿ ಅವರ ಅಸಾಮಾನ್ಯವಾದ ಕಾಳಜಿ ನಮ್ಮ ಮನಸ್ಸಿಗೆ ತಾಕುತ್ತದೆ.

ಅಷ್ಟೇ ಅಲ್ಲ, ದೂರಗಾಮಿಯಾದ ಸಾಮಾಜಿಕ ಆಂದೋಲನವೊಂದನ್ನು ಹುಟ್ಟುಹಾಕಬೇಕು ಮತ್ತು ಅದು ಶೋಷಿತರಿಗೆ ಅವರ ಭೂಮಿಯ ಹಕ್ಕನ್ನು ಕೊಡಿಸುವುದೇ ಆಗಿರಬೇಕು ಎಂಬ ಖಚಿತವಾದ ಅಭಿಪ್ರಾಯವನ್ನು ಮುಂದಿಟ್ಟು ಅದರ ಮುಂಚೂಣಿ ಸ್ಥಾನವನ್ನೂ ತಾವೇ ವಹಿಸಿಕೊಂಡರು. ಅದರ ಅಂಗವಾಗಿ ಎಂತಹ ಕಷ್ಟಕರ ಹೋರಾಟಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಹಿಂಜರಿಯಲಿಲ್ಲ. ದಿಡ್ಡಳ್ಳಿಯ ಹೋರಾಟದ ಸಂದರ್ಭದಲ್ಲಿ ಮಡಿಕೇರಿ ಚಲೋಗಾದರೂ ಸರಿಯೇ, ಬೆಂಗಳೂರು ಚಲೋ ಪಾದಯಾತ್ರೆಗಾದರೂ ಸರಿಯೇ, ಸುದೀರ್ಘ 18 ದಿನಗಳ ನಿರಂತರ ಧರಣಿಗಾದರೂ ಸರಿಯೇ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೆ ಆ ಹೋರಾಟ ತಾತ್ವಿಕ ಅಂತ್ಯ ಕಾಣುವವರೆಗೆ ಪಟ್ಟುಹಿಡಿಯುವ ಅವರ ನಿರ್ಧಾರ ಸುಲಭಸಾಧ್ಯವಲ್ಲ. ಮದ್ಯನಿಷೇಧದ ಹೋರಾಟದಿಂದ ಹಿಡಿದು, ಕೆರೆ ಉಳಿಸುವ ಆಂದೋಲನದತನಕ ಎಲ್ಲದರಲ್ಲೂ ನಮಗೆ ಈ ಕಷ್ಟಸಹಿಷ್ಣು ಗುಣ ಎದ್ದು ಕಾಣುತ್ತದೆ.

ಗೌರಿ ಲಂಕೇಶರ ಹತ್ಯೆಯ ಸಂದರ್ಭದಲ್ಲೂ ಅತ್ಯಂತ ನಿಷ್ಟುರವಾಗಿ ಆಳುವ ಫ್ಯಾಸಿಸ್ಟ್ ಪಕ್ಷವನ್ನು ಗುರಿಮಾಡಿ ಮಾತನಾಡಲಾರಂಭಿಸಿ, ಆಳುವವರಿಗೆ ಶತ್ರುವಾಗಿ ಕಂಡರು. ಅಷ್ಟಾದರೂ ಸತ್ಯ, ನ್ಯಾಯ ಮತ್ತು ಹೋರಾಟದ ಹಾದಿಯಿಂದ ಹಿಂದೆಸರಿಯುವುದಿರಲಿ, ಒಂದಷ್ಟು ಮೃದುಧೋರಣೆ ತಾಳುವುದೂ ಕೂಡಾ ಅವರಿಗೆ ಎಂದಿಗೂ ಒಪ್ಪಿತವಾದ ಕೆಲಸವಲ್ಲ! ಅದಕ್ಕಾಗಿ ಬಿಜೆಪಿ ಪಾಳಯದಿಂದ ದಾಳಿಗೊಳಗಾದರೂ ಕಿಂಚಿತ್ತೂ ಅಳುಕದ ಆನೆ ನಡಿಗೆ ಅವರದ್ದು.

ತಮ್ಮ ದೂರದೃಷ್ಟಿತ್ವ, ತಳಮಟ್ಟದ ಸಮಸ್ಯೆಗಳನ್ನು ಕಂಡುಕೊಂಡು ಹೋರಾಟದ ಕಾರ್ಯತಂತ್ರ ರೂಪಿಸುವ ಸೂಕ್ಷ್ಮತೆ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಕುರಿತ ತಮ್ಮ ಅಚಲವಾದ ನಿಷ್ಠೆಯ ಕಾರಣದಿಂದ ದೊರೆಸ್ವಾಮಿಯವರು ಎಂದಿಗೂ ಅನನ್ಯರಾಗಿಯೇ ಉಳಿಯುತ್ತಾರೆ. ಎಷ್ಟೋ ಬಾರಿ ಕೆಲವರ ಸಾವಿನಿಂದ ’ನಾಡು ಬಡವಾಯಿತು’, ’ಶೂನ್ಯ ಆವರಿಸಿದೆ’ ಎಂಬ ಮಾತುಗಳನ್ನು ಬಳಸಿದ್ದಿದೆ… ಆ ಮಾತುಗಳು ಈ ಸಾವಿನ ಸಂದರ್ಭದಲ್ಲಿ ಇನ್ನಷ್ಟು ತೀವ್ರವಾಗಿ ಕಾಡುತ್ತವೆ. ದೊರೆಸ್ವಾಮಿಯವರ ನಿರ್ಗಮನ ಅವರ ತುಂಬು ಬದುಕಿನ ಮತ್ತೊಂದು ಘಟ್ಟ ಎಂಬ ಅರಿವಿದ್ದರೂ ನಿಜವಾದ ಶೂನ್ಯಭಾವ ಆವರಿಸಿರುವುದಂತೂ ಸತ್ಯ.

ಮಲ್ಲಿಗೆ

ಮಲ್ಲಿಗೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ ಅಲ್ಲಗೆಳೆದ ರಿಜಿಸ್ಟ್ರಾರ್‌‌‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...