Homeನ್ಯಾಯ ಪಥದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

ದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

- Advertisement -
- Advertisement -

ದೈಹಿಕವಾಗಿ ನಮ್ಮೊಡನಿಲ್ಲದ ಆದರೆ ಸದಾ ಹರಿಯುವ ಜೀವಂತಿಕೆಯ ಸೆಲೆಯಾಗಿ, ಜೀವ ಚೈತನ್ಯವಾಗಿ ನಮ್ಮೊಳಗಡೆಯೇ ಇರಲಿರುವ ಸ್ಫೂರ್ತಿಯ ಚಿಲುಮೆ ಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅವರನ್ನು ನೆನೆಯುವಾಗೆಲ್ಲ ಅವರ ವಿಶಿಷ್ಟ ಗುಣಗಳಲ್ಲಿ ನನ್ನನ್ನು ಸದಾ ಅಚ್ಚರಿಗೊಳಿಸುವ, ಅರಿವಿನ ಅಳತೆಗೆ ನಿಲುಕದ ಈ ಒಂದು ಸಂಗತಿಯನ್ನು ಮಾತ್ರ ಈ ಬರಹಕ್ಕೆ ಆಯ್ದುಕೊಳ್ಳುತ್ತಿದ್ದೇನೆ. ಅದು ಸದಾ ಕಾಲ, ಕಾಲದ ಕರೆಗೆ ಸ್ಪಂದಿಸುತ್ತಿದ್ದ, ಸರ್ವರ ಒಳಿತಿಗೆ- ಸಂದರ್ಭದ ಅಗತ್ಯಕ್ಕೆ ತನ್ನನ್ನು ತಾನು ಎತ್ತರಿಸಿಕೊಳ್ಳುತ್ತಿದ್ದ, ಸದಾ ಸಮುದಾಯದೊಂದಿಗೆ ಸಮಾಜದೊಂದಿಗೆ ಎತ್ತರಕ್ಕೆ ಬೆಳೆಯುತ್ತಲೇ ಹೋದ ಅವರ ಪ್ರತಿಸ್ಪಂದಿಸುವ ಗುಣ. ಯಾವತ್ತೂ ಕಾಲ ತನ್ನ ಮೇಲೆ ಹೊರಿಸಿದ ಹೊಣೆಗಾರಿಕೆಗೆ ಬೆನ್ನುತಿರುಗಿಸದ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆ. ಎಷ್ಟರಮಟ್ಟಿಗೆಂದರೆ ವಯೋಸಹಜವಾದ ಯಾವುದೇ ದೈಹಿಕ-ಮಾನಸಿಕ ಒತ್ತಡಗಳೂ ಅವರ ಪ್ರಸ್ತುತದ ಕುರಿತ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಮುಕ್ಕಾಗಿಸಲಾಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ದೇಶ ಸಾಗಿದ ಹಾದಿಯ ಬಗ್ಗೆ ದೊರೆಸ್ವಾಮಿಯವರಿಗೆ ಸಮಾಧಾನವಿಲ್ಲದಿದ್ದು, ಆ ಕಾರಣದಿಂದಲೂ ಸೇರಿದಂತೆ ತಮ್ಮೊಳಗಿನ ಸತ್ಯ-ನ್ಯಾಯದ ಪರವಾದ ಕಿಚ್ಚಿನ ಕಾರಣಕ್ಕಾಗಿ ಅಧಿಕಾರದೆಡೆಗೆ ಸಾಗದೆ ಹೋರಾಟದ ಹಾದಿಯಲ್ಲಿ ಅವರು ಮುಂದುವರೆದಿದ್ದು ಗೊತ್ತಿರುವ ವಿಷಯ. ಹಾಗೆ ಹೋರಾಟದ ಹಾದಿಯು ಅವರಿಗೆ ಕಾಲದಿಂದ ಕಾಲಕ್ಕೆ ಹೊಳೆಸುತ್ತಾ ಹೋದ ಹೊಸ ಸತ್ಯಗಳನ್ನು ನೇರವಾಗಿ ದಿಟ್ಟವಾಗಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಎದುರುಗೊಳ್ಳುತ್ತಾ ಹೋದದ್ದು ಅವರ ವೈಶಿಷ್ಟ್ಯ. ಕಳೆದ ಕೆಲವು ದಶಕಗಳಲ್ಲಂತೂ ಭಾರತದಲ್ಲಿ ಎದುರಾದ ಸಂಕೀರ್ಣವಾದ ಸಾಮಾಜಿಕ ಪಲ್ಲಟಗಳನ್ನು ಹತ್ತಿರದಿಂದ ಗಮನಿಸುತ್ತಾ ವಿಶ್ಲೇಷಿಸುತ್ತಾ ಆಯಾ ಕಾಲಘಟ್ಟದಲ್ಲಿ ತಾನು ವಹಿಸಬೇಕಿರುವ ಪಾತ್ರವನ್ನೂ ನಿಭಾಯಿಸುತ್ತಾ ಬಂದವರು ದೊರೆಸ್ವಾಮಿಯವರು.

ಜಾಗತೀಕರಣದ ಅಲೆಯು ಭಾರತವನ್ನು ಅಯೋಮಯಗೊಳಿಸಿದ್ದ ಕಾಲ. 90ರ ದಶಕದಲ್ಲಿ ಒಂದೆಡೆ ಖಾಸಗೀಕರಣ, ಉದಾರೀಕರಣಗಳನ್ನು ಎತ್ತಿಹಿಡಿಯುವ ಬಲವಾದ ಮಧ್ಯಮವರ್ಗವೊಂದನ್ನು ಪ್ರವರ್ಧಮಾನಕ್ಕೆ ಬಂದಂತೆ, ಕೋಮುವಾದದ ವಿಷವನ್ನು ದೇಶದ ನರನಾಡಿಗಳೊಳಕ್ಕೆ ಇಳಿಸಿದ ಬಾಬರಿ ಮಸೀದಿಯಂತಹ ವಿನಾಶಕಾರಿ ವಿದ್ಯಮಾನಕ್ಕೂ ಸಾಕ್ಷಿಯಾಯಿತು. ಸೂಕ್ಷ್ಮ ಮನಸ್ಸಿನ ಅನೇಕರಿಗೆ ಈ ವಿದ್ಯಮಾನಗಳು ಗೊಂದಲದ ಗೂಡಾಗಿ ಉತ್ತರವಿಲ್ಲದ ಪ್ರಶ್ನೆಗಳಾಗಿ ಕಾಡಿದರೆ, ಅತ್ಯಂತ ಸ್ಪಷ್ಟವಾಗಿ ’ಜಾಗತೀಕರಣ-ಕೋಮುವಾದಗಳೆರಡೂ ಒಂದೇ ಕತ್ತಿಯ ಎರಡು ಅಲಗುಗಳು, ಎರಡನ್ನೂ ಒಟ್ಟಿಗೆ ವಿರೋಧಿಸದೆ ಗತ್ಯಂತರವಿಲ್ಲ’ ಎಂದು ಭಾವಿಸಿದವರಲ್ಲಿ ದೊರೆಸ್ವಾಮಿಯವರೂ ಮುಖ್ಯರಾದವರು. ಕೇವಲ ಅದನ್ನು ಹೇಳಿದ್ದಷ್ಟೇ ಅಲ್ಲ, ಕಾರ್ಯರೂಪಕ್ಕೆ ತರುವುದಕ್ಕೂ ಶ್ರಮಿಸಿದವರು.

ದೊರೆಸ್ವಾಮಿ, doreswamy

ಜನಪರ ಕಾಳಜಿಗಳನ್ನುಳ್ಳವರಲ್ಲೇ ಭಾರತವು ಮುಕ್ತಮಾರುಕಟ್ಟೆಗೆ ತೆರೆದುಕೊಳ್ಳಬೇಕೆಂಬುದನ್ನೂ ಬಲವಾಗಿ ಪ್ರತಿಪಾದಿಸುತ್ತಿದ್ದ ಸಾಕಷ್ಟು ಮಂದಿ ಇದ್ದ ಸಂದರ್ಭದಲ್ಲೂ, ಮುಂದೆ ಇದು ನಮ್ಮ ದೇಶವನ್ನು ಎಲ್ಲಿಗೆ ಕರೆದೊಯ್ಯಲಿದೆಯೆಂಬ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಕಂಡು, ಮಾತನಾಡಿದವರಲ್ಲಿ ಕರ್ನಾಟಕದ ಐತಿಹಾಸಿಕ ರೈತ ಚಳವಳಿಯ ಪ್ರವರ್ತಕರಲ್ಲೊಬ್ಬರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಒಬ್ಬರಾದರೆ, ಎಚ್.ಎಸ್.ದೊರೆಸ್ವಾಮಿಯವರೂ ಮತ್ತೊಬ್ಬರು. ಜಾಗತೀಕರಣದ ನಂತರ ವೇಗವಾಗಿ ಬೀಸಿದ ಉದಾರೀಕರಣದ ಗಾಳಿಯಲ್ಲಿ ಭಾರತದೊಳಕ್ಕೆ ತೂರಲಾರಂಭಿಸಿದ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟ ಕಟ್ಟಿಕೊಂಡು ಹೋರಾಟದ ಕಣಕ್ಕಿಳಿದವರು ಅವರು. ಕಳೆದ ಶತಮಾನದ ಕೊನೆಯ ಅವಧಿ ಮತ್ತು ಈ ಶತಮಾನದ ಮೊದಲ ದಶಕದ ಮೊದಲರ್ಧಗಳು ಭೀಕರ ಕೋಮುಗಲಭೆಗಳಿಗೆ ದೇಶದ ಹಲವು ಭಾಗಗಳಲ್ಲಿ ಗುರಿಯಾಗುತ್ತಾ ನಲುಗುತ್ತಿದ್ದಾಗ, ಅದನ್ನು ವಿರೋಧಿಸುವ ಗಟ್ಟಿದನಿಗಳ ಜೊತೆಗೂಡಿದವರು ಈ ಹಿರಿಯಜ್ಜ.

ಅದೇರೀತಿ ನಂತರದ ದಿನಗಳಲ್ಲಿ ಕೋಮುಸೌಹಾರ್ದದ ಚಳವಳಿಗಳಲ್ಲಿ, ದೇಶದಲ್ಲಿ ಹೆಚ್ಚುತ್ತಿದ್ದ ಬಲಪಂಥೀಯ ರಾಜಕಾರಣದ ವಿರುದ್ಧದ ಆಂದೋಲನಗಳಲ್ಲಿ ದೊರೆಸ್ವಾಮಿಯವರು ಸದಾ ಸಕ್ರಿಯರಾಗಿದ್ದರು. ಶಾಂತಿಗಾಗಿ ನಾಗರಿಕರ ವೇದಿಕೆಯ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿ, ರಾಜ್ಯದಲ್ಲಿ ಭೂಗತ ಜೀವನದಿಂದ ಮುಖ್ಯವಾಹಿನಿಗೆ ಬರಲು ಹೋರಾಟಗಾರರಿಗೆ ಬೆಂಬಲವಾಗಿ ನಿಂತಿದ್ದರಲ್ಲಿ ಅವರ ಅಸಾಮಾನ್ಯವಾದ ಕಾಳಜಿ ನಮ್ಮ ಮನಸ್ಸಿಗೆ ತಾಕುತ್ತದೆ.

ಅಷ್ಟೇ ಅಲ್ಲ, ದೂರಗಾಮಿಯಾದ ಸಾಮಾಜಿಕ ಆಂದೋಲನವೊಂದನ್ನು ಹುಟ್ಟುಹಾಕಬೇಕು ಮತ್ತು ಅದು ಶೋಷಿತರಿಗೆ ಅವರ ಭೂಮಿಯ ಹಕ್ಕನ್ನು ಕೊಡಿಸುವುದೇ ಆಗಿರಬೇಕು ಎಂಬ ಖಚಿತವಾದ ಅಭಿಪ್ರಾಯವನ್ನು ಮುಂದಿಟ್ಟು ಅದರ ಮುಂಚೂಣಿ ಸ್ಥಾನವನ್ನೂ ತಾವೇ ವಹಿಸಿಕೊಂಡರು. ಅದರ ಅಂಗವಾಗಿ ಎಂತಹ ಕಷ್ಟಕರ ಹೋರಾಟಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಹಿಂಜರಿಯಲಿಲ್ಲ. ದಿಡ್ಡಳ್ಳಿಯ ಹೋರಾಟದ ಸಂದರ್ಭದಲ್ಲಿ ಮಡಿಕೇರಿ ಚಲೋಗಾದರೂ ಸರಿಯೇ, ಬೆಂಗಳೂರು ಚಲೋ ಪಾದಯಾತ್ರೆಗಾದರೂ ಸರಿಯೇ, ಸುದೀರ್ಘ 18 ದಿನಗಳ ನಿರಂತರ ಧರಣಿಗಾದರೂ ಸರಿಯೇ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೆ ಆ ಹೋರಾಟ ತಾತ್ವಿಕ ಅಂತ್ಯ ಕಾಣುವವರೆಗೆ ಪಟ್ಟುಹಿಡಿಯುವ ಅವರ ನಿರ್ಧಾರ ಸುಲಭಸಾಧ್ಯವಲ್ಲ. ಮದ್ಯನಿಷೇಧದ ಹೋರಾಟದಿಂದ ಹಿಡಿದು, ಕೆರೆ ಉಳಿಸುವ ಆಂದೋಲನದತನಕ ಎಲ್ಲದರಲ್ಲೂ ನಮಗೆ ಈ ಕಷ್ಟಸಹಿಷ್ಣು ಗುಣ ಎದ್ದು ಕಾಣುತ್ತದೆ.

ಗೌರಿ ಲಂಕೇಶರ ಹತ್ಯೆಯ ಸಂದರ್ಭದಲ್ಲೂ ಅತ್ಯಂತ ನಿಷ್ಟುರವಾಗಿ ಆಳುವ ಫ್ಯಾಸಿಸ್ಟ್ ಪಕ್ಷವನ್ನು ಗುರಿಮಾಡಿ ಮಾತನಾಡಲಾರಂಭಿಸಿ, ಆಳುವವರಿಗೆ ಶತ್ರುವಾಗಿ ಕಂಡರು. ಅಷ್ಟಾದರೂ ಸತ್ಯ, ನ್ಯಾಯ ಮತ್ತು ಹೋರಾಟದ ಹಾದಿಯಿಂದ ಹಿಂದೆಸರಿಯುವುದಿರಲಿ, ಒಂದಷ್ಟು ಮೃದುಧೋರಣೆ ತಾಳುವುದೂ ಕೂಡಾ ಅವರಿಗೆ ಎಂದಿಗೂ ಒಪ್ಪಿತವಾದ ಕೆಲಸವಲ್ಲ! ಅದಕ್ಕಾಗಿ ಬಿಜೆಪಿ ಪಾಳಯದಿಂದ ದಾಳಿಗೊಳಗಾದರೂ ಕಿಂಚಿತ್ತೂ ಅಳುಕದ ಆನೆ ನಡಿಗೆ ಅವರದ್ದು.

ತಮ್ಮ ದೂರದೃಷ್ಟಿತ್ವ, ತಳಮಟ್ಟದ ಸಮಸ್ಯೆಗಳನ್ನು ಕಂಡುಕೊಂಡು ಹೋರಾಟದ ಕಾರ್ಯತಂತ್ರ ರೂಪಿಸುವ ಸೂಕ್ಷ್ಮತೆ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಕುರಿತ ತಮ್ಮ ಅಚಲವಾದ ನಿಷ್ಠೆಯ ಕಾರಣದಿಂದ ದೊರೆಸ್ವಾಮಿಯವರು ಎಂದಿಗೂ ಅನನ್ಯರಾಗಿಯೇ ಉಳಿಯುತ್ತಾರೆ. ಎಷ್ಟೋ ಬಾರಿ ಕೆಲವರ ಸಾವಿನಿಂದ ’ನಾಡು ಬಡವಾಯಿತು’, ’ಶೂನ್ಯ ಆವರಿಸಿದೆ’ ಎಂಬ ಮಾತುಗಳನ್ನು ಬಳಸಿದ್ದಿದೆ… ಆ ಮಾತುಗಳು ಈ ಸಾವಿನ ಸಂದರ್ಭದಲ್ಲಿ ಇನ್ನಷ್ಟು ತೀವ್ರವಾಗಿ ಕಾಡುತ್ತವೆ. ದೊರೆಸ್ವಾಮಿಯವರ ನಿರ್ಗಮನ ಅವರ ತುಂಬು ಬದುಕಿನ ಮತ್ತೊಂದು ಘಟ್ಟ ಎಂಬ ಅರಿವಿದ್ದರೂ ನಿಜವಾದ ಶೂನ್ಯಭಾವ ಆವರಿಸಿರುವುದಂತೂ ಸತ್ಯ.

ಮಲ್ಲಿಗೆ

ಮಲ್ಲಿಗೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ ಅಲ್ಲಗೆಳೆದ ರಿಜಿಸ್ಟ್ರಾರ್‌‌‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...