Homeಮುಖಪುಟಮೇ 23ಕ್ಕೆ ಸಭೆ ಕರೆದ ಸೋನಿಯಾ ಗಾಂಧಿ: ಫೀಲ್ಡಿಗಿಳಿದ ಮಾಸ್ಟರ್ ನೆಗೋಷಿಯೇಟರ್‍ಗಳು

ಮೇ 23ಕ್ಕೆ ಸಭೆ ಕರೆದ ಸೋನಿಯಾ ಗಾಂಧಿ: ಫೀಲ್ಡಿಗಿಳಿದ ಮಾಸ್ಟರ್ ನೆಗೋಷಿಯೇಟರ್‍ಗಳು

ವಿರೋಧ ಪಕ್ಷಗಳೆಲ್ಲವೂ ಗೌರವಿಸುವ ಸೋನಿಯಾ ಗಾಂಧಿಯವರೇ ಸಭೆ ಕರೆಯುವ ಮೂಲಕ ಕಾಂಗ್ರೆಸ್ ಜಾಣ ಹೆಜ್ಜೆ ಇರಿಸಿದೆ.

- Advertisement -
- Advertisement -

/ನಾನುಗೌರಿ ಡೆಸ್ಕ್/
ಆಶ್ಚರ್ಯಕರವಾದ ಬೆಳವಣಿಗೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿಯವರು ಮೇ 23ರಂದು ಎಲ್ಲಾ ವಿರೋಧ ಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನು ರಾಹುಲ್‍ಗಾಂಧಿಗೆ ವಹಿಸಿಕೊಟ್ಟ ನಂತರವೂ ಸೋನಿಯಾರೇ ಯುಪಿಎ ಅಧ್ಯಕ್ಷೆಯಾಗಿ ಮುಂದುವರೆದಿದ್ದಾರೆ. ಈ ಸಾರಿಯ ಚುನಾವಣೆಯಲ್ಲಿ ದೇಶಾದ್ಯಂತ ಪ್ರಚಾರದ ಕೆಲಸವನ್ನು ರಾಹುಲ್‍ಗಾಂಧಿ ಮಾಡಿದರೆ, ಉತ್ತರ ಪ್ರದೇಶದಲ್ಲಿ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಬಿರುಸಿನ ಪ್ರಚಾರ ನಡೆಸಿದ್ದರು. ರಾಯ್‍ಬರೇಲಿಗೆ ಒಮ್ಮೆ ಹೋಗಿದ್ದು ಬಿಟ್ಟರೆ ಸೋನಿಯಾ ಎಲ್ಲೂ ಕಾಣಿಸದೇ ಇದ್ದುದಕ್ಕೆ ಅನಾರೋಗ್ಯ ಕಾರಣವೆಂದು ಹೇಳಲಾಗಿತ್ತು. ಆದರೆ, ಕಳೆದ 15 ದಿನಗಳಿಂದಲೂ ದೇಶದ ವಿವಿಧ ವಿರೋಧ ಪಕ್ಷಗಳ ನಾಯಕರ ಜೊತೆ ಸೋನಿಯಾ ಸತತವಾಗಿ ಸಂಪರ್ಕದಲ್ಲಿದ್ದರೆಂದು ಎನ್‍ಡಿಟಿವಿ ವರದಿ ಮಾಡಿದೆ.
ಎನ್‍ಡಿಟಿವಿ ವರದಿ
ಇದೀಗ ಮೇ 23ರ ಸಂಜೆಯ ಸಭೆಗೆ ಆಹ್ವಾನಿಸಿ ಸೋನಿಯಾ ಅವರು ಪತ್ರ ಬರೆದಿದ್ದಾರೆ. ಈಗಾಗಲೇ ಪತ್ರವು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ಜೆಡಿಎಸ್‍ನ ಎಚ್.ಡಿ.ದೇವೇಗೌಡ ಮತ್ತು ಜೆಡಿಯುನ ಶರದ್‍ಪವಾರ್ ಅವರಿಗೆ ತಲುಪಿದ್ದು, ಇವರೇ ಅಲ್ಲದೇ ಎಲ್ಲಾ ವಿರೋಧ ಪಕ್ಷಗಳನ್ನೂ ಆಹ್ವಾನಿಸಲಾಗುತ್ತಿದೆಯೆಂದು ವರದಿ ಹೇಳುತ್ತದೆ.

ಇದಲ್ಲದೇ, ಒರಿಸ್ಸಾದ ನವೀನ್ ಪಟ್ನಾಯಕ್ ಅವರ ಶಾಲಾ ಸಹಪಾಠಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‍ನಾಥ್ ಮಾತಾಡಿದ್ದರೆ, ಯುಪಿಎ ಒಡನಾಡಿ ಶರದ್‍ಪವಾರ್ ಮಾಯಾವತಿಯವರ ಜೊತೆ ಮಾತಾಡಿದ್ದಾರೆ. ಫೆಡರಲ್ ಫ್ರಂಟ್ ರಚನೆಯ ಪ್ರಯತ್ನದಲ್ಲಿರುವ ಕೆ.ಚಂದ್ರಶೇಖರ ರಾವ್‍ರ ಜೊತೆ ಕಾಂಗ್ರೆಸ್‍ನ ಖಜಾಂಚಿ ಅಹ್ಮದ್ ಪಟೇಲ್ ಮತ್ತು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸಂಪರ್ಕದಲ್ಲಿದ್ದಾರೆ.

ಈ ಸಭೆಯ ವಿಚಾರ ಬಹಿರಂಗವಾಗುವುದಕ್ಕೆ ಒಂದು ದಿನ ಮುಂಚೆಯಷ್ಟೇ ಗುಲಾಂ ನಬಿ ಆಜಾದ್ ಒಂದು ಮುಖ್ಯವಾದ ಸಂಗತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ‘ಕಾಂಗ್ರೆಸ್‍ಗೇ ಪ್ರಧಾನಿ ಪಟ್ಟ ಕೊಡಲೇಬೇಕೆಂದೇನೂ ನಾವು ಬಯಸುವುದಿಲ್ಲ’ ಎಂದು ಗುಲಾಂ ನಬಿ ಹೇಳಿದ್ದಾರೆಂದರೆ, ಸ್ವತಃ ಸೋನಿಯಾಗಾಂಧಿಯವರ ಕುಟುಂಬವೇ ಮಾತಾಡಿದೆ ಎಂದೇ ಅರ್ಥ.


ಯಾರಿಗೂ ಬಹುಮತ ಬರುವುದಿಲ್ಲವೆಂಬುದು ಬಹುತೇಕ ಖಚಿತ. ಕೆಸಿಆರ್ ಮತ್ತು ನವೀನ್ ಪಟ್ನಾಯಕ್ ಇಬ್ಬರೂ ಕಾಂಗ್ರೆಸ್, ಬಿಜೆಪಿಗಳಿಂದ ಸಮಾನ ದೂರ ಎನ್ನುತ್ತಿದ್ದಾರಾದರೂ, ಎಸ್‍ಪಿ, ಬಿಎಸ್‍ಪಿ ಮತ್ತು ಟಿಎಂಸಿಗಳಿಗೆ ಪ್ರಧಾನ ಗುರಿ ಮೋದಿ-ಷಾಗಳೇ ಆಗಿದ್ದಾರೆ. ಇನ್ನು ಟಿಡಿಪಿಯ ಚಂದ್ರಬಾಬು ಜೊತೆ ಈ ಸಾರಿ ಕಾಂಗ್ರೆಸ್‍ಗೆ ಮೈತ್ರಿ ಇಲ್ಲವಾದರೂ, ಅವರು ಕಾಂಗ್ರೆಸ್ ಜೊತೆಗೆ ಇರುವ ಸುಳಿವು ನೀಡಿದ್ದಾರೆ. ಡಿಎಂಕೆಯ ಸ್ಟಾಲಿನ್ ಅಂತೂ ರಾಹುಲ್‍ಗಾಂಧಿಯ ಹೆಸರನ್ನು ಮೊದಲು ಪ್ರಧಾನಿ ಪಟ್ಟಕ್ಕೆ ಸೂಚಿಸಿದವರು. ಕೆಸಿಆರ್ ‘ಫೆಡರಲ್ ಫ್ರಂಟ್ ಮಾಡೋಣ ಬನ್ನಿ’ ಎಂದಾಗ, ‘ನೀವೇ ಬನ್ನಿ ಯುಪಿಎ ಜೊತೆಗೆ ಸರ್ಕಾರ ಮಾಡೋಣ. ಈ ಸಾರಿ ನೀವು ಹೇಳೋದು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಸ್ಟಾಲಿನ್ ಹೇಳಿದ್ದಾರೆ.
ಇವೆಲ್ಲದರ ಹಿನ್ನೆಲೆಯಲ್ಲಿ ಸೋನಿಯಾರ ಸಭೆಗೆ ಮಹತ್ವ ಬಂದಿದೆ. ಸರ್ಕಾರ ರಚನೆಯಾಗುವುದಾದರೆ, ಕಾಂಗ್ರೆಸ್‍ಗೆ ಮಹತ್ವದ ಪಾತ್ರ ಇರಬೇಕು, ಆದರೆ ರಾಹುಲ್‍ಗಾಂಧಿಯೇ ಪ್ರಧಾನಿಯಾಗಬೇಕೆಂದೇನಿಲ್ಲ ಎಂಬುದು ಅವರ ಇರಾದೆ ಇದ್ದಂತಿದೆ.
ಇದನ್ನೂ ಓದಿ: ಸರ್ಕಾರ ಮಾಡಲು ಒಲವು ತೋರದ ರಾಹುಲ್
ಈ ಮಧ್ಯೆ 30ರಷ್ಟು ಸೀಟುಗಳನ್ನು ಗೆಲ್ಲಲಿರುವ ಮಮತಾ ಬ್ಯಾನರ್ಜಿಯವರ ನಿಲುವಿಗೆ ಹೆಚ್ಚಿನ ಮಹತ್ವ ಇರಲಿದೆ. ಎನ್‍ಡಿಟಿವಿಯಲ್ಲಿ ಪತ್ರಕರ್ತೆ ಸ್ವಾತಿ ಚತುರ್ವೇದಿ ಬರೆದಿರುವ ಲೇಖನದಲ್ಲಿ ಇದರ ಕುರಿತು ಒಂದು ವಿಶೇಷ ಸುಳಿವಿದೆ. ಟಿಎಂಸಿ ನಾಯಕರ ಪ್ರಕಾರ, ‘ಬಿಜೆಪಿಯ ಜೊತೆಗೆ ಹೋಗಲು ಅಂತಹ ಸಮಸ್ಯೆ ಇಲ್ಲ. ಆದರೆ ವಿಷಕಾರಿ ರಾಜಕಾರಣ ಮಾಡುವ ಮೋದಿ-ಷಾ ತೊಲಗಬೇಕು’. ಮೇ 23ರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಮಾಯಾವತಿಯವರು ಭಾಗವಹಿಸುವ ಸಾಧ್ಯತೆ ಇಲ್ಲ. ಅಖಿಲೇಶ್ ಯಾದವ್, ಕೆಸಿಆರ್ ಮತ್ತು ನವೀನ್ ಪಟ್ನಾಯಕ್ ಸಹಾ ಫಲಿತಾಂಶ ಸಂಪೂರ್ಣ ನಿಚ್ಚಳವಾದ ನಂತರವೇ ತಮ್ಮ ಮನದಿಂಗಿತ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಫೆಡರಲ್ ಫ್ರಂಟ್ ರಚನೆಯ ಸಿದ್ಧತೆಯಲ್ಲಿ ಕೆಸಿಆರ್
ಆದರೆ, ಕಾಂಗ್ರೆಸ್ ತನ್ನ ದಾಳವನ್ನು ಉರುಳಿಸಿ ಆಗಿದೆ. ಸೋನಿಯಾಗಾಂಧಿಯವರೇ ಸಭೆ ಕರೆಯಲೂ ಕಾರಣವಿದೆ. ಯುಪಿಎ ಜೊತೆಗಿಲ್ಲದ ಪಕ್ಷಗಳಾಗಲೀ, ಯುಪಿಎ ಭಾಗವಾಗಿರುವ ಪಕ್ಷಗಳೇ ಆಗಲಿ, ಸೋನಿಯಾರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದಾರೆ. ಹಾಗಾಗಿ ಈ ನಡೆಯು ರಾಜಕೀಯ ವಲಯಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...