Homeಮುಖಪುಟಮೇ 23ಕ್ಕೆ ಸಭೆ ಕರೆದ ಸೋನಿಯಾ ಗಾಂಧಿ: ಫೀಲ್ಡಿಗಿಳಿದ ಮಾಸ್ಟರ್ ನೆಗೋಷಿಯೇಟರ್‍ಗಳು

ಮೇ 23ಕ್ಕೆ ಸಭೆ ಕರೆದ ಸೋನಿಯಾ ಗಾಂಧಿ: ಫೀಲ್ಡಿಗಿಳಿದ ಮಾಸ್ಟರ್ ನೆಗೋಷಿಯೇಟರ್‍ಗಳು

ವಿರೋಧ ಪಕ್ಷಗಳೆಲ್ಲವೂ ಗೌರವಿಸುವ ಸೋನಿಯಾ ಗಾಂಧಿಯವರೇ ಸಭೆ ಕರೆಯುವ ಮೂಲಕ ಕಾಂಗ್ರೆಸ್ ಜಾಣ ಹೆಜ್ಜೆ ಇರಿಸಿದೆ.

- Advertisement -
- Advertisement -

/ನಾನುಗೌರಿ ಡೆಸ್ಕ್/
ಆಶ್ಚರ್ಯಕರವಾದ ಬೆಳವಣಿಗೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿಯವರು ಮೇ 23ರಂದು ಎಲ್ಲಾ ವಿರೋಧ ಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನು ರಾಹುಲ್‍ಗಾಂಧಿಗೆ ವಹಿಸಿಕೊಟ್ಟ ನಂತರವೂ ಸೋನಿಯಾರೇ ಯುಪಿಎ ಅಧ್ಯಕ್ಷೆಯಾಗಿ ಮುಂದುವರೆದಿದ್ದಾರೆ. ಈ ಸಾರಿಯ ಚುನಾವಣೆಯಲ್ಲಿ ದೇಶಾದ್ಯಂತ ಪ್ರಚಾರದ ಕೆಲಸವನ್ನು ರಾಹುಲ್‍ಗಾಂಧಿ ಮಾಡಿದರೆ, ಉತ್ತರ ಪ್ರದೇಶದಲ್ಲಿ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಬಿರುಸಿನ ಪ್ರಚಾರ ನಡೆಸಿದ್ದರು. ರಾಯ್‍ಬರೇಲಿಗೆ ಒಮ್ಮೆ ಹೋಗಿದ್ದು ಬಿಟ್ಟರೆ ಸೋನಿಯಾ ಎಲ್ಲೂ ಕಾಣಿಸದೇ ಇದ್ದುದಕ್ಕೆ ಅನಾರೋಗ್ಯ ಕಾರಣವೆಂದು ಹೇಳಲಾಗಿತ್ತು. ಆದರೆ, ಕಳೆದ 15 ದಿನಗಳಿಂದಲೂ ದೇಶದ ವಿವಿಧ ವಿರೋಧ ಪಕ್ಷಗಳ ನಾಯಕರ ಜೊತೆ ಸೋನಿಯಾ ಸತತವಾಗಿ ಸಂಪರ್ಕದಲ್ಲಿದ್ದರೆಂದು ಎನ್‍ಡಿಟಿವಿ ವರದಿ ಮಾಡಿದೆ.
ಎನ್‍ಡಿಟಿವಿ ವರದಿ
ಇದೀಗ ಮೇ 23ರ ಸಂಜೆಯ ಸಭೆಗೆ ಆಹ್ವಾನಿಸಿ ಸೋನಿಯಾ ಅವರು ಪತ್ರ ಬರೆದಿದ್ದಾರೆ. ಈಗಾಗಲೇ ಪತ್ರವು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ಜೆಡಿಎಸ್‍ನ ಎಚ್.ಡಿ.ದೇವೇಗೌಡ ಮತ್ತು ಜೆಡಿಯುನ ಶರದ್‍ಪವಾರ್ ಅವರಿಗೆ ತಲುಪಿದ್ದು, ಇವರೇ ಅಲ್ಲದೇ ಎಲ್ಲಾ ವಿರೋಧ ಪಕ್ಷಗಳನ್ನೂ ಆಹ್ವಾನಿಸಲಾಗುತ್ತಿದೆಯೆಂದು ವರದಿ ಹೇಳುತ್ತದೆ.

ಇದಲ್ಲದೇ, ಒರಿಸ್ಸಾದ ನವೀನ್ ಪಟ್ನಾಯಕ್ ಅವರ ಶಾಲಾ ಸಹಪಾಠಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‍ನಾಥ್ ಮಾತಾಡಿದ್ದರೆ, ಯುಪಿಎ ಒಡನಾಡಿ ಶರದ್‍ಪವಾರ್ ಮಾಯಾವತಿಯವರ ಜೊತೆ ಮಾತಾಡಿದ್ದಾರೆ. ಫೆಡರಲ್ ಫ್ರಂಟ್ ರಚನೆಯ ಪ್ರಯತ್ನದಲ್ಲಿರುವ ಕೆ.ಚಂದ್ರಶೇಖರ ರಾವ್‍ರ ಜೊತೆ ಕಾಂಗ್ರೆಸ್‍ನ ಖಜಾಂಚಿ ಅಹ್ಮದ್ ಪಟೇಲ್ ಮತ್ತು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸಂಪರ್ಕದಲ್ಲಿದ್ದಾರೆ.

ಈ ಸಭೆಯ ವಿಚಾರ ಬಹಿರಂಗವಾಗುವುದಕ್ಕೆ ಒಂದು ದಿನ ಮುಂಚೆಯಷ್ಟೇ ಗುಲಾಂ ನಬಿ ಆಜಾದ್ ಒಂದು ಮುಖ್ಯವಾದ ಸಂಗತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ‘ಕಾಂಗ್ರೆಸ್‍ಗೇ ಪ್ರಧಾನಿ ಪಟ್ಟ ಕೊಡಲೇಬೇಕೆಂದೇನೂ ನಾವು ಬಯಸುವುದಿಲ್ಲ’ ಎಂದು ಗುಲಾಂ ನಬಿ ಹೇಳಿದ್ದಾರೆಂದರೆ, ಸ್ವತಃ ಸೋನಿಯಾಗಾಂಧಿಯವರ ಕುಟುಂಬವೇ ಮಾತಾಡಿದೆ ಎಂದೇ ಅರ್ಥ.


ಯಾರಿಗೂ ಬಹುಮತ ಬರುವುದಿಲ್ಲವೆಂಬುದು ಬಹುತೇಕ ಖಚಿತ. ಕೆಸಿಆರ್ ಮತ್ತು ನವೀನ್ ಪಟ್ನಾಯಕ್ ಇಬ್ಬರೂ ಕಾಂಗ್ರೆಸ್, ಬಿಜೆಪಿಗಳಿಂದ ಸಮಾನ ದೂರ ಎನ್ನುತ್ತಿದ್ದಾರಾದರೂ, ಎಸ್‍ಪಿ, ಬಿಎಸ್‍ಪಿ ಮತ್ತು ಟಿಎಂಸಿಗಳಿಗೆ ಪ್ರಧಾನ ಗುರಿ ಮೋದಿ-ಷಾಗಳೇ ಆಗಿದ್ದಾರೆ. ಇನ್ನು ಟಿಡಿಪಿಯ ಚಂದ್ರಬಾಬು ಜೊತೆ ಈ ಸಾರಿ ಕಾಂಗ್ರೆಸ್‍ಗೆ ಮೈತ್ರಿ ಇಲ್ಲವಾದರೂ, ಅವರು ಕಾಂಗ್ರೆಸ್ ಜೊತೆಗೆ ಇರುವ ಸುಳಿವು ನೀಡಿದ್ದಾರೆ. ಡಿಎಂಕೆಯ ಸ್ಟಾಲಿನ್ ಅಂತೂ ರಾಹುಲ್‍ಗಾಂಧಿಯ ಹೆಸರನ್ನು ಮೊದಲು ಪ್ರಧಾನಿ ಪಟ್ಟಕ್ಕೆ ಸೂಚಿಸಿದವರು. ಕೆಸಿಆರ್ ‘ಫೆಡರಲ್ ಫ್ರಂಟ್ ಮಾಡೋಣ ಬನ್ನಿ’ ಎಂದಾಗ, ‘ನೀವೇ ಬನ್ನಿ ಯುಪಿಎ ಜೊತೆಗೆ ಸರ್ಕಾರ ಮಾಡೋಣ. ಈ ಸಾರಿ ನೀವು ಹೇಳೋದು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಸ್ಟಾಲಿನ್ ಹೇಳಿದ್ದಾರೆ.
ಇವೆಲ್ಲದರ ಹಿನ್ನೆಲೆಯಲ್ಲಿ ಸೋನಿಯಾರ ಸಭೆಗೆ ಮಹತ್ವ ಬಂದಿದೆ. ಸರ್ಕಾರ ರಚನೆಯಾಗುವುದಾದರೆ, ಕಾಂಗ್ರೆಸ್‍ಗೆ ಮಹತ್ವದ ಪಾತ್ರ ಇರಬೇಕು, ಆದರೆ ರಾಹುಲ್‍ಗಾಂಧಿಯೇ ಪ್ರಧಾನಿಯಾಗಬೇಕೆಂದೇನಿಲ್ಲ ಎಂಬುದು ಅವರ ಇರಾದೆ ಇದ್ದಂತಿದೆ.
ಇದನ್ನೂ ಓದಿ: ಸರ್ಕಾರ ಮಾಡಲು ಒಲವು ತೋರದ ರಾಹುಲ್
ಈ ಮಧ್ಯೆ 30ರಷ್ಟು ಸೀಟುಗಳನ್ನು ಗೆಲ್ಲಲಿರುವ ಮಮತಾ ಬ್ಯಾನರ್ಜಿಯವರ ನಿಲುವಿಗೆ ಹೆಚ್ಚಿನ ಮಹತ್ವ ಇರಲಿದೆ. ಎನ್‍ಡಿಟಿವಿಯಲ್ಲಿ ಪತ್ರಕರ್ತೆ ಸ್ವಾತಿ ಚತುರ್ವೇದಿ ಬರೆದಿರುವ ಲೇಖನದಲ್ಲಿ ಇದರ ಕುರಿತು ಒಂದು ವಿಶೇಷ ಸುಳಿವಿದೆ. ಟಿಎಂಸಿ ನಾಯಕರ ಪ್ರಕಾರ, ‘ಬಿಜೆಪಿಯ ಜೊತೆಗೆ ಹೋಗಲು ಅಂತಹ ಸಮಸ್ಯೆ ಇಲ್ಲ. ಆದರೆ ವಿಷಕಾರಿ ರಾಜಕಾರಣ ಮಾಡುವ ಮೋದಿ-ಷಾ ತೊಲಗಬೇಕು’. ಮೇ 23ರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಮಾಯಾವತಿಯವರು ಭಾಗವಹಿಸುವ ಸಾಧ್ಯತೆ ಇಲ್ಲ. ಅಖಿಲೇಶ್ ಯಾದವ್, ಕೆಸಿಆರ್ ಮತ್ತು ನವೀನ್ ಪಟ್ನಾಯಕ್ ಸಹಾ ಫಲಿತಾಂಶ ಸಂಪೂರ್ಣ ನಿಚ್ಚಳವಾದ ನಂತರವೇ ತಮ್ಮ ಮನದಿಂಗಿತ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಫೆಡರಲ್ ಫ್ರಂಟ್ ರಚನೆಯ ಸಿದ್ಧತೆಯಲ್ಲಿ ಕೆಸಿಆರ್
ಆದರೆ, ಕಾಂಗ್ರೆಸ್ ತನ್ನ ದಾಳವನ್ನು ಉರುಳಿಸಿ ಆಗಿದೆ. ಸೋನಿಯಾಗಾಂಧಿಯವರೇ ಸಭೆ ಕರೆಯಲೂ ಕಾರಣವಿದೆ. ಯುಪಿಎ ಜೊತೆಗಿಲ್ಲದ ಪಕ್ಷಗಳಾಗಲೀ, ಯುಪಿಎ ಭಾಗವಾಗಿರುವ ಪಕ್ಷಗಳೇ ಆಗಲಿ, ಸೋನಿಯಾರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದಾರೆ. ಹಾಗಾಗಿ ಈ ನಡೆಯು ರಾಜಕೀಯ ವಲಯಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...