Homeಕರ್ನಾಟಕಸ್ಪೀಕರ್ ಕೊಟ್ಟ ಸಂಡೇ ಶಾಕ್: ಮತ್ತೆ 14 ಶಾಸಕರು ಅನರ್ಹ, ಮಂಕಾಗಿ ಹೋದ ಮುಂಬೈವಾಲಾ ಶಾಸಕರು!...

ಸ್ಪೀಕರ್ ಕೊಟ್ಟ ಸಂಡೇ ಶಾಕ್: ಮತ್ತೆ 14 ಶಾಸಕರು ಅನರ್ಹ, ಮಂಕಾಗಿ ಹೋದ ಮುಂಬೈವಾಲಾ ಶಾಸಕರು! ನಾಳೆ ಏನಾಗಲಿದೆ?

- Advertisement -
- Advertisement -

ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ರಮೇಶಕುಮಾರ್ ಅವರು ಇಂದು ರವಿವಾರ ನೀಡಿದ ತೀರ್ಪು ಮತ್ತೆ 14 ಶಾಸಕರಿಗರನ್ನು ತಲ್ಲಣಗೊಳಿಸಿ ಬಿಟ್ಟಿದೆ. ಮುಂಬೈ, ಪೂಣೆಯಲ್ಲಿ ಈಗ ಸುರಿಯುತ್ತಿರುವ ಮಳೆ ನೀಡುತ್ತಿರುವ ತಂಪು ಮತ್ತು ಅಲ್ಲಿನ ಐಷಾರಾಮಿ ಹೊಟೆಲ್‍ಗಳಲ್ಲಿ ಇರುವ ಎ.ಸಿ.ಯ ನಡುವೆಯೂ ಅತೃಪ್ತ ಶಾಸಕರು ಮೈ ಮನಸ್ಸುಗಳೆಲ್ಲ ಬೆವರಿನಿಂದ ಒದ್ದೆಯಾಗಿವೆ.

ಹೇಗೂ ನಮ್ಮ ಸರ್ಕಾರವೇ, ಈ ಅತೃಪ್ತರು ಅನರ್ಹಗೊಂಡ ಕಾರಣಕ್ಕೆ ನಮ್ಮ ಶಾಸಕರಿಗೆ ಸಚಿವಗಿರಿ ಕೊಡಬಹುದು ಎಂದು ಒಳಗಡೆ ಖುಷಿ ಪಡುತ್ತಿರುವ ಬಿಜೆಪಿ, ಇದು ಅನ್ಯಾಯ ಎಂದೆಲ್ಲ ಅತೃಪ್ತರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಇಂದಿನ ‘ಸ್ವಾರ್ಥಕ್ಕಾಗಿ ಬೆನ್ನಿಗೆ ಚೂರಿ ಹಾಕುವ’ ಮೋದಿ-ಶಾಗಳ ರಾಜಕೀಯದ ಮುಂದುವರಿಕೆಯ ಸ್ಯಾಂಪಲ್ ಆಗಿದೆ…..

ಮೊನ್ನೆ ಮುಂಬೈಯಿಂದ ಓಡೋಡಿ ಬಂದು ಯಲ್ಲಪುರದ ತಾಲೂಕಾ ಪಂಚಾಯತಿಯ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ‘ವ್ಯವಹಾರ’ ಮುಗಿಸಿಕೊಂಡು ಮತ್ತೆ ಮುಂಬೈಗೋ. ಪುಣೈಗೋ ಪಲಾಯನ ಮಾಡಿದ ಅಲ್ಲಿನ ಶಾಸಕ ಶಿವರಾಮ್ ಹೆಬ್ಬಾರ್ ನಾಳೆ ಮುಂಜಾನೆ ಯಲ್ಲಾಪುರದ ಯಾವ ಕಚೇರಿಗೆ ಹೋದರೂ ಕವಡೆ ಕಾಸಿನ ಕಿಮ್ಮತ್ತೇ ಇಲ್ಲ!

ಇದು ಸೋಮಶೇಖರ್, ಬೈರತಿ ಬಸವರಾಜು, ವಿಶ್ವನಾಥ್, ಮುನಿರತ್ನ ಇತ್ಯಾದಿ ಎಲ್ಲರಿಗೂ ಅನ್ವಯವೇ! ಸ್ಪೀಕರ್ ರಮೇಶಕುಮಾರ್ ಕೊಟ್ಟ ಶಾಕೇ ಹಾಗಿದೆ. ಬಿಜೆಪಿಯ ಮಾತು ಕೇಳಿಕೊಂಡು ಸರ್ಕಾರ ಬೀಳಿಸಲು ‘ಮಹತ್ತರ’ ಪಾತ್ರ ವಹಿಸಿದ್ದ 17 ಶಾಸಕರಿಗೆ ಇನ್ನು ಕನಿಷ್ಠ 4 ವರ್ಷಗಳ ಕಾಲ ಅವರದೇ ಕ್ಷೇತ್ರಗಳಲ್ಲಿ ಸಾರ್ವಜನಿಕ ಮಾನ್ಯತೆಯೇ ಇಲ್ಲ. ಈಗ ಅವರು ಕರ್ನಾಟಕಕ್ಕೆ ಬರಲೇಬೇಕು. ಬಹುಷ: ಅವರ ಕುಟುಂಬದವರನ್ನು ಬಿಟ್ಟರೆ ಅವರನ್ನು ಸ್ವಾಗತಿಸಲು ಕೆಲವು ಹುಂಬಾತಿಹುಂಬ ಕಾರ್ಯಕರ್ತರನ್ನು ಬಿಟ್ಟರೆ ಮತ್ಯಾರು ಇಲ್ಲಿ ಇರಲ್ಲ.

ನಾಳೆ ಏನಾಗಬಹುದು?
17 ಶಾಸಕರ ಅನರ್ಹತೆಯ ಕಾರಣಕ್ಕೆ ಈಗ ಸದನದ ಸದಸ್ಯರ ಸಂಖ್ಯೆ 207. ಬಹುಮತ ಸಾಬೀತಿಗೆ 104 ಸಂಖ್ಯೆ ಸಾಕು. ಈಗಾಗಲೇ ಬಿಜೆಪಿಗೆ 105 ಶಾಸಕರ ಸಂಖ್ಯೆ ಇರುವುದರಿಂದ ವಿಶ್ವಾಸಮತ ಗೆಲ್ಲಬಹುದು. ಆದರೆ, ಇತ್ತ ಅತೃಪ್ತರಾಗೇ ಉಳಿದುಬಿಟ್ಟ ಶಾಸಕರ (ಇವರೀಗ ಶಾಸಕರೇ ಅಲ್ಲ ಬಿಡಿ..), ಅಲ್ಲ ಮಹಾಮಹಿಮರನ್ನು ಬಿಜೆಪಿ ಸಮಾಧಾನ ಮಾಡಬೇಕು. ಈ ಗದ್ದಲದಲ್ಲಿ ಕುಮಾರಸ್ವಾಮಿ ಬಿಜೆಪಿ ಶಾಸಕರಿಗೆ ಕೈ ಹಾಕಿಬಿಟ್ಟರೆ ಬಿಜೆಪಿ ಸಂಕಟಕ್ಕೆ ಸಿಲುಕುವುದಂತೂ ಸತ್ಯ.

ಆದರೆ, ಒಟ್ಟಿನಲ್ಲಿ ಸ್ಪೀಕರ್ ರಮೇಶಕುಮಾರ್ ಅವರ ನಿರ್ಧಾರ ಸಾಮಾನ್ಯ ಮತದಾರರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಖುಷಿ ಕೊಟ್ಟೇ ಇದೆ. ವಿಚಿತ್ರ ಎಂದರೆ ಬಿಜೆಪಿಗೂ ಒಂದರ್ಥದಲ್ಲಿ ಇದು ಖುಷಿಯ ವಿಷಯವೇ. ಅಂದರೆ ಈಗ ಅನರ್ಹಗೊಂಡವರೆಲ್ಲ ಅಂತರ್ ಪಿಶಾಚಿಗಳು ಅಷ್ಟೇ… ಅವರಿಗಿರುವ ಏಕೈಕ ದಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...