Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-6; "ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ"

ಹಿಂಗಿದ್ದ ನಮ್ಮ ರಾಮಣ್ಣ-6; “ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ”

- Advertisement -
- Advertisement -

ನಮ್ಮ ಕಡೆ ಅಡ್ಳುದಮ್ಮ ಅಂತರೆ ನೋಡು, ಅಂಗೆ ಆ ಕಡೆ ಮಾಡ್ಳುದಮ್ಮಗಳಿರತವೆ. ಅವು ಗಂಡಿನ ಸರ್ವೆಂಟ್ ತರ ಇರತವೆ. ತಮಾಸಿ ಮಾಡಿ ಹೆಣ್ಣು ಗಂಡಿನ ನಡುವೆ ಸಲಿಗೆ ಬ್ಯೆಳಿಯಂಗೆ ಮಾಡ್ತಿರತವೆ. ಪಾಪ ಹೆಣ್ಣು ಕೊಟ್ಟೋರು ಈ ಅಡ್ಳುದಮ್ಮಗಳಿಗೂ ನೋವಾಗದಂಗೆ ನ್ಯಡಕಬೇಕು. ಮದುವಿಗೆ ಮಾಡಿದ್ದ ತಿಂಡಿ ತೀರ್ಥನ್ಯಲ್ಲ ಈ ಅಡ್ಳುದಮ್ಮಗಳು ಸವಿರಿ ಬಿಸಾಕ್ತವೆ. ಅಂತದೊಂದು ತಾತ್ಕಾಲಿಕ ಸವಲತ್ತು. ನಮಿಗ್ಯಲ್ಲ ಸಿಕ್ತು. ಹೆಣ್ಣಿನ ಕಡೆಲೂ ಅಡ್ಳುದಂಗಿರು ಇರತಿದ್ವು. ಅವುರ್‍ಯಲ್ಲ ಹೆಣ್ಣಿನ ಗೆಳತಿರು. ಅವುರನ್ಯಲ್ಲ ರೇಗಿಸಿಗಂಡು ಚುಡಾಯಿಸಿಗಂಡಿರದು ಚಂದ, ಆದ್ರೆ ಹಳ್ಳಿ ಹುಡುಗಿರು. ನಾವು ಪಟ್ಟಣದಲ್ಲಿ ಓದಿದೋರು, ನಮ್ಮ ಜೊತೆ ಹಳ್ಳಿ ಮಾತು ಹಾಡು ಹೇಳಕ್ಕೆ ಅಂಜಿಕಂಡು ಸುಮ್ಮನಿದ್ರು. ಅದೇ ಅವುರ ತರನೆ ಹಳ್ಳಿ ಹುಡುಗರಾದ್ರೆ ಆ ಮಜನೆ ಬ್ಯಾರೆ.

ರಾಮಣ್ಣನ ಮದುವೆಲಿ ಇಡೀ ದೇಶಿಹಳ್ಳಿನೆ ಭಾಗವಯಿಸಿದಂಗಿತ್ತು. ಪುಟ್ಟಲಿಂಗೇಗೌಡ್ರ ಮನೆ ಮುಂದೆನೆ ಚಪ್ಪರ ಹಾಕಿ ಹಳ್ಳಿ ಸಂಪ್ರದಾಯದಂಗೆ ಮದುವೆ ಮಾಡಿದ್ದು. ಶಾಸ್ತ್ರಗಳು ಚಾಚೂ ತಪ್ಪದಂಗೆ ನ್ಯಡದೊ. ಆ ಶಾಸ್ತ್ರಗಳನ್ನ ನೋಡಿದ್ರೆ ಇನ್ನೋಸೆಂಟ್ ಹೆಣ್ಣುಗಂಡನ್ನ ಒಂದು ಮಾಡಕ್ಕೆ ಅಂತ ಮಾಡಿರವು ಕಣಯ್ಯ. ಹೆಣ್ಣುಗಂಡಿನ ಕೈ ಹಿಡಿಸದು ಒಟ್ಟಿಗಂಟಾಕದು, ಶಾಸ್ತ್ರದ ನೀರು ತರದು, ಹೂವಿನ ಚೆಂಡಾಟ ಆಡದು, ಮಗ ತೂಗದು, ನೀನು ಯಾವ ಶಾಸ್ತ್ರನೆ ನೋಡು, ಹೆಣ್ಣು ಗಂಡಿನ ಮನಸ್ಸನ್ನು ಒಂದು ಮಾಡೊ ಹುನ್ನಾರನೆ ಇರದು. ಮುಂದೆ ಜೊತೆಯಾಗಿ ಬದುಕಕ್ಕೆ ಏನೇನು ಬೇಕೊ ಅದರ ಟ್ರೇನಿಂಗು ಮದುವೆಲೆ ನ್ಯಡದೋಗದು. ಇವು ನಮ್ಮ ರಾಮಣ್ಣನ ಮದುವೆ ಕಾಲದಲ್ಲೂ ಒಸಿ ಇದ್ದೊ. ರಾಮಣ್ಣ ಕೋಲೆ ಬಸವನಂಗೆ ಆರಾಮಾಗಿ ಯಲ್ಲಾ ಶಾಸ್ತ್ರಕ್ಕೂ ತೆಲೆಯೊಡ್ಡಿದ್ದ. ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ. ಅವರ ಮಾವನ ಕಡೆ ಕರಿಗೆ ಎಸ್.ಎಮ್ ಕೃಷ್ಣ ಬಂದಿದ್ರು. ರಾಮಣ್ಣನಿಗೆ ಅದೇನು ವಿಶೇಷ ಅನ್ನಿಸಲಿಲ್ಲ. ಮದುವೆ ಎಂಜಾಯ್ ಮಾಡದ್ರಲ್ಲಿ ಮುಳುಗಿದ್ದ.

ನಿಜವಾಗ್ಲು ಚಂದ್ರೇಗೌಡ, ಮದುವೆನ ಅಂತದೊಂದು ಸಂಭ್ರಮದ ಏಜಲ್ಲೆ ಆಗಿಬುಡಬೇಕು. ಮದುವೆ ವಯಸ್ಸು ಮೀರಿದಾಗ ಅಂತ ಯಾವ ಸಂಭ್ರಮನೂ ಇರದಿಲ್ಲ ಕಣಯ್ಯ. ನಾವ್ಯಲ್ಲ ಅಂತ ಏಜಲ್ಲೆ ಮದಿವಾಗಿದ್ದು. ಆಗಿನ ಮದುವೆ ಬ್ಯಾಸಗೆಲೆ ನ್ಯಡದ್ರು, ಸೋಬನ ಮಾಡಿಕೊಡತಿದ್ದುದ್ದು ಕಾರಬ್ಬಕ್ಕೆ ಇಲ್ಲ ಗೌರಿಹಬ್ಬಕೆ. ಅಲ್ಲಿವರಿಗೂ ಹುಡುಗಿಯ ಕರಕಂಡು ಬಂದು ಕರಕಂಡೋಗರು. ಒಂದು ದಿನ ಗಂಡನ ಜೊತೆ ಕಳಿಸಿಬುಡೋರು. ಆ ಗಂಡನಿಂದೆ ಬರುವ ಒಂದು ಹುಡುಗಿ ಮನಸ ಅಧ್ಯಯನ ಮಾಡಿ ಬರದಿರೋನು ಲಂಕೇಶ ಒಬ್ಬನೆ ಕಣಯ್ಯ. ಅವುನ ಲೇಖನ ನೋಡಿ ನಾನು ದಂಗುಬಡದೋದೆ. ಅತ್ತೆ ಮಾವ ನಾದಿನಿ ಮೈದುನ ಇವುರಾರು ಸರಿಯಾಗಿ ಪರಿಚಯವಿಲ್ಲದ ಅಪರಿಚಿತ ಜಾಗಕ್ಕೆ ಒಂದು ಮುಗ್ದ ಹೆಣ್ಣು ಬಂದು ಸೇರಿಕೊಂಡ ನಂತರ ಹೊಂದಿಕಳಕ್ಕೆ ಹೋರಾಡದಿದಿಯಲ್ಲ ಆ ಮನಸ್ಸಿನ ಒತ್ತಡ ಬರದಿರೋನು ಲಂಕೇಶ್. ಆಗ ಯಳೆ ಹುಡುಗಿ ಮಾಡಿಬುಡೋರು. ಅವುರು ಒಬ್ಬರಿಗೊಬ್ಬರು ಅರತುಗೊಂಡು ಬಾಳಕ್ಕೆ ತಯಾರಾಗೋರು. ಈ ನಡುವಿನ ಚಟುವಟಿಕೆ ಬಾಳ ಚನ್ನಾಗಿರವು. ನಮ್ಮಣ್ಣನೂ ಓದುವಾಗ್ಲೆ ಮದಿವಾದೋರು. ಅವುರು ಬ್ಯಾರೆ ಕಾಲೇಜು. ಇವುರ ಬ್ಯಾರೆ ಕಾಲೇಜು. ಆದ್ರು ಭೇಟಿಯಾಗಿ ಮಾತಾಡಿದೋರಲ್ಲ. ಯಾರಿಗಾರ ಗೊತ್ತಾದ್ರೇನು ಗತಿ ಅನ್ನೋ ಕಾಲ ಅದು. ಆ ಟೈಮಲ್ಲಿ ನಮ್ಮಣ್ಣನ ಫ್ರೆಂಡು ಹೆಡತಿ ನೋಡಿಕೊಂಡು ಬತ್ತಿನಿ ಅಂತ ಊರಿಗೋಗ್ತಿದ್ನಂತೆ. ಅಲ್ಲಿಂದ ಬಂದು ಭಾಳ ಖುಷಿಯಾಗಿದ್ನಂತೆ. ಏನೋ ನ್ಯಡದಿರಬೇಕು ಅಂತ ನಮ್ಮಣಾರು ’ಏನಪ್ಪ ವಿಶೇಷ ಅಂದ್ರಂತೆ. ಅದಕವುನು ಒಂದು ದೊಡ್ಡ ಪ್ರಕರಣ ಹೇಳೋನಂಗೆ ತಯಾರಾಗಿ ’ಅವುಳು ನೀರು ಕೊಡಕ್ಕೆ ಅಂತ ಬಂದ್ಲು. ಅತ್ತಗಿತ್ತಗೆ ನೋಡಿ ಅವುಳ ಕೈನೆ ಮುಟ್ಟಿಬುಟ್ಟಿ’ ಅಂತ ನಗಾಡಿದನಂತೆ. ಅಂತಕಾಲ ಅದು. ಅಂತದೊಂದು ಕಾಲದಲ್ಲಿ ಮದಿವಾಗಿದ್ದ ರಾಮಣ್ಣ. ಇವತ್ತೆ ಸೋಬನ ಮಾಡಿಕೊಡಿ ಅನ್ನೊ ಮಾತ ಹೆಣ್ಣಿನ ಕಡಿಯೋರಿಗೆ ತಲುಪಿಸಿದ್ದ. ಹೆಣ್ಣಿನ ತಂದೆ ಪುಟ್ಟಲಿಂಗಯ್ಯನಿಗೆ ಗಾಬರಿಯಾಗಿತ್ತು. ಇದವುರು ನ್ಯಡಿಸಿಕೊಡಕ್ಕಾಗದ ಮಾತಾಗಿತ್ತು. ಯಾಕಂದ್ರೆ ನಾನಾಗ್ಲೆ ಹೇಳಿದಂಗೆ, ಮದುವೆಯಾದ ಯರಡು ಮೂರು ತಿಂಗಳಿಗೆ ಸೋಬನ ಮಾಡಿಕೊಡತಿದ್ದ ಕಾಲ ಅದು. ಯಳೆ ಹುಡುಗಿರು ಊಟ ಉಣ್ಣಬೇಕು, ಬಲ್ತಗಬೇಕು ಅಂತ ನಂಬಿಕಂಡಿದ್ದ ಕಾಲದಲ್ಲಿ ರಾಮಣ್ಣ ಇವತ್ತೇ ಸೋಬನ ಮಾಡಿಕೊಡಿ ಅಂದಿದ್ದ. ಅವುನು ಹಳ್ಳಿಲಿ ವಲ ಉಳೊ ಒರಟುಡುಗಲ್ಲ. ಮೈಸೂರಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ ಡಾಕ್ಟರಾಗಿ ಒದ್ತಾಯಿರೋರು. ಇಂಥೊನಿಗೆ ವಾಪಸ್ಸು ಉತ್ತರ ಹೇಳಕ್ಕಾಗದ ಪುಟ್ಟಲಿಂಗೇಗೌಡ್ರು ಯಲ್ಲೇಗೌಡ್ರತ್ರಕ್ಕೋಗಿ ಗಂಡಿಗೆ ಸಮಾಧಾನ ಮಾಡಕ್ಕೇಳಿದ್ರು. ಇಂತ ವಿಷಯನ ಯಲ್ಲೇಗೌಡ್ರು ರಾಮಣ್ಣನಿಗೇಳಕ್ಕೂ ಅಂಜಿಕಂಡ್ರು. ಕಡಿಗೆ ರಾಮಣ್ಣ ತುಂಬ ಗೌರವ ಕೊಡತಿದ್ದ ಹಲಗೂರು ಪುಟ್ಟಸ್ವಾಮಿಗೌಡ್ರಿಗೇಳಿ “ಅವುರ ಸಂಪ್ರದಾಯದಲ್ಲಿ ಮದುವೆ ದಿನವೇ ಸೋಬನ ಮಾಡಿಕೊಡದಿಲ್ಲವಂತೆ, ಅದಕೆ ಆದ ಒಂದು ದಿನ ಶಾಸ್ತ್ರ ಇಟ್ಟಗತ್ತರಂತೆ. ಅಂತ ಹೇಳಪ್ಪ” ಅಂದು ಕಳಿಸಿದ್ರು.

ಪುಡಸಾಮಿಗೌಡ್ರು ರಾಮಣ್ಣತ್ರಕೋಗಿ ಪಿಸುಮಾತಲ್ಲಿ “ರಾಮಣ್ಣ ನಿಮ್ಮಪ್ಪ ಗೌರಿಹಬ್ಬಕೆ ಸೋಬನ ಮಾಡಿಕಳನ ಅಂತ ಹೇಳ್ತರೆ. ಅಂಗೆ ಆಗ್ಲಿ ತಗೂ” ಅಂದ್ರು. ಪುಟ್ಟಸ್ವಾಮಿಗೌಡನ ಮಾತಿಗೆ ಎದುರುತ್ತರ ಕೊಡದಂಗಿದ್ದ ರಾಮಣ್ಣ, ಅ ಕಡೆ ತಿರುಗಿ ನೋಡದಂಗೆ “ನನ್ನ ಕಷ್ಟ ನಮ್ಮಪನಿಗೇನು ಗೊತ್ತಾದದೂ” ಅಂದ. ಇದು ತಮಾಸಿಯಾಗಿ ಕಂಡ್ರೂ ರಾಮಣ್ಣನಂತ ತರುಣರ ಲೈಂಗಿಕ ಸಮಸ್ಯೆಯ ಒತ್ತಡದ ಅರಿವಾಯ್ತು. ಇದು ಪುಟ್ಟಸ್ವಾಮಿಗೌಡನಿಗೂ ಗೊತ್ತಾಗಿ, ಆತ ಮುಂದುವರದು ಮಾತಾಡಕ್ಕೆ ಹೆದರಿದ. ಕಡಿಗೆ “ನೋಡಿ ಇದು ಅವುರವುರ ಸ್ವಂತ ವಿಚಾರ. ಇದನ್ನ ತೀರ್ಮಾನ ಮಾಡಿಕಳರು ಹುಡುಗ ಹುಡುಗಿ ಕಡಿಯೋರು. ಇದರೊಳಗೆ ನಮಿಗ್ಯಾವ ಕ್ಯಲಸನೂ ಇಲ್ಲ ಅಂದ. ಪುಟ್ಟಸ್ವಾಮಿಗೌಡನ ಮಾತು ನಮಗೆಲ್ಲಾ ಸಮಂಜಸವಾಗಿ ಕಂಡಿದ್ರಿಂದ ಹ್ವರಡಕ್ಕೆ ತಯಾರಾದೊ. ರಾಮಣ್ಣ ಹಟ ಸಾಧಿಸಿ ಗೆದ್ದ ಖುಷಿಲಿ ಎಲ್ಲರ ಕೈ ಕುಲುಕುತ್ತ “ಇರಿ ಹೊಗುವುರಿ” ಅಂದ.

“ಇದ್ಯಾಕಿಂಗೆ ಮಾಡಿದೆ ನೀನೂ” ಅಂದೆ.

“ನಾನೇನು ಮಾಡಿದುನ್ಲ” ಅಂದ.

“ಮದುವೆ ದಿನವೇ ಸೋಬನ ಮಾಡಿಕೊಡಿ ಅಂದ್ಯಲ್ಲ ಸರಿನೆ?”

“ಪೂಜೆ ಮಾಡಕ್ಲ ಮದುವಾಗದು. ದೇವಾನು ದೇವತೆಗಳ್ಯಲ್ಲ ಮದುವೆ ಒಂದಿನ ಸೋಬನ ಒಂದಿನ ಅಂತ ಕಾಯ್ತಿದ್ರೇನ್ಲ” ಅಂದ.

“ನೀನ್ಯಾವು ದೇವತೆನಪ್ಪ” ಅಂದೆ.

“ಸುಮ್ಮನೆ ನಡಿಲ ಕಂಡಿವ್ನಿ” ಅಂದ. ಎಲ್ಲರೂ ನಗಾಡಿದ್ರು. ನನ್ನ ಜೀವನದಲ್ಲಿ ರಾಮಣ್ಣನ ಮದುವೆ ಒಳ್ಳೆ ನೆನೆಪಾಗ್ಯದೆ.

ರಾಮಣ್ಣ ಮದುವೆ ಮುಗಿಸಿಗಂಡು ಮೈಸೂರಿಗೆ ಬಂದ. ಆಗಿನ ಮದುವೆ ಗಂಡುಗಳು ವಸಿ ದಿನ ಕಾಲಿನ ನಡು ಬೆರಳಿಗೆ ಬೆಳ್ಳಿ ರಿಂಗ್ ಹಾಕಿರೋರು. ಕತ್ತಲಿ ಚೈನು ಕಿವಿಲಿ ಅತ್ತಕಡಕುಯಲ್ಲಿ ಇರವು. ನಮ್ಮ ರಾಮಣ್ಣನಿಗೆ ಅವೇನು ಇರಲಿಲ್ಲ. ಮದುವೆಯಾದ ಮ್ಯಾಲೆ ರಾಮಣ್ಣನಲ್ಲಿ ಒಂದು ಉತ್ಸಾಹದ ಚಟುವಟಿಕೆ ಗಮನಿಸಿದೆ. ತುಂಬ ಖುಷಿಯಾಗಿ ಊರಿಗೋಗನು. ಹಾಸ್ಟಲಲ್ಲೇ ಇರತಿರಲಿಲ್ಲ. ಒಂದು ಸತಿ ಊರಿಂದ ಬಂದಾಗ ಯಂತದೊ ಟಾನಿಕ್ ಬಾಟ್ಳಿ ತಂದಿದ್ದ.

“ಇದೇನು ಬಾಟ್ಲಿನೊ” ಅಂತ ಕೇಳಿದೆ.

“ಪಾಸ್ ಪೊರ್ಮಿನ್ ಕಲ” ಅಂದ.

“ಅದ್ಯಂತದೊ” ಅಂದೆ.

“ಸೇಬಿನ ರಸದಲ್ಲಿ ಮಾಡಿರೊ ಟಾನಿಕ್ಕು ಕಲ” ಅಂದ.

“ಅದ್ಯಾಕ್ ತಗತಿಯೋ ಮೆಡಿಕಲಿ ಅಪ್ರುವಲ್ಲಾಗಿಲ್ಲ” ಅಂದೆ.

“ತಾಕತ್ತಿಗೆ ಕಲಾ” ಅಂದ.

“ಯಾವ ಡಾಕ್ಟರೇಳೀದ್ರು ನಿಂಗೇ, ಒಹೊಹೊ. ಪತ್ರಿಕೆಲಿ ಅಡವಿಟೀಜ್ ಬಂದಿತ್ತಲ್ಲಾ ಅದನೋಡಿ ತಗಂಡೆ ಅನ್ನು. ಅಂತವುನ್ಯಲ್ಲ ಕುಡಿಬ್ಯಾಡ. ಅದರ ಬದ್ಲು ಬಾಡು ಒಳ್ಳೆ ಹಣ್ಣು ಹಂಪಲು ತಿನ್ನ” ಅಂದೆ.

“ನಿನಿಗೇನು ಗೊತ್ತು ಸುಮ್ಮನೆ ಕೂತಗಲ. ಇನ್ನ ಡಾಕ್ಟರೋತ್ತ ಅವುನೆ, ಆಗಲೆ ಡಾಕ್ಟರಾಡಿದಂಗಾಡ್ತನೆ. ಸುಮ್ಮಸುಮ್ಮನೆ ಅಡವಿಟೇಜ್ ಕೊಟ್ಟಾರ್ಲ. ಸೇಬಿನ ರಸಕಲ ಅದು. ಯಾವತ್ತಾರ ಕುಡದಿದ್ದಿಯಾ. ನಿನಿಗ್ಯಾಕ್ ಬೇಕು ಅವ್ಯಲ್ಲ ಸುಮ್‌ಕಿರು” ಅಂದ. ನಾನು ನಗಾಡಿಕಂಡು ಸುಮ್ಮನಾದೆ. ಹಾಸ್ಟಲಲ್ಲಿ ಅವುನ್ಯಾವತ್ತೂ ಲೀಡ್ರ ತರ ಇರಲಿಲ್ಲ. ಒಂಥರ ಯಲೆಮರೆ ಕಾಯಂಗಿರತಿದ್ದ. ಜನಗಳ ಜೊತೆ ಇರದು ಬುಟ್ರೆ ಮಂಚೂಣಿಲಿ ಕಾಣಿಸಿಗಳ್ತಿರಲಿಲ್ಲ. ಇದು ಬರಹಗಾರನಾದವನ ನಡವಳಿಕೆ ಇರಬಹುದು. ಅವುನ ಪ್ರಿಯವಾದ ಕೆಲಸದಲ್ಲಿ ವಾಕ್ ಮಾಡದು ಒಂದು. ಒಂದಿನ ವಾಕ್ ಬತ್ತಿದೋನು ಇದ್ದಕಿದ್ದಗೆ ಕಾಣದಂಗಾದ. ಇವುನ್ಯತ್ತಗೋದ ಅಂತ ಹುಡುಕದ್ರಲ್ಲಿ ಪ್ರತ್ಯಕ್ಷಾದ. ಆಗ ನಮ್ಮ ಜೊತೆ ಪುಟ್ಟಸ್ವಾಮಿಗೌಡನೂ ಇದ್ದ. “ಇದೆಲ್ಲಿಗೋಗಿದ್ದೊ” ಅಂದೆ. ನನ್ನ ಫ್ರೆಂಡಿಗೆ ಉಷಾರಿರಲಿಲ್ಲ ಕಲ. ಒಂದಿಷ್ಟು ದುಡ್ಡುಕೊಟ್ಟು ಬಂದೆ” ಅಂದ.

“ಅದ್ನ ಹೇಳಿಬುಟ್ಟೆ ಹೋಗಬವುದಿತ್ತಪ್ಪ” ಅಂದೆ. “ಯಲ್ಲಾನು ಹೇಳಿಬುಟ್ಟಿ ಮಾಡಕ್ಕಾದತ್ಲೆ” ಅಂದ. ಕಷ್ಟದಲ್ಲಿದ್ದವುರೆ ಸಹಾಯ ಮಾಡದು ಅವನ ಜನ್ಮದಲ್ಲೇ ಬಂದ ಗುಣ ಆಗಿತ್ತು. ಅವುನಿನ್ನು ಸಂಬಳ ತಗಿತಿರಲಿಲ್ಲ, ಆದ್ರು ಓದೊ ದುಡ್ಡಲ್ಲೇ ಸಹಾಯ ಮಾಡತಿದ್ದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ: ಭಾಗ-5; “ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ ಅದ್ಕೂ ಕಲ್ಲಾಕಿದೆ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...