ಪ್ರಖರ ಚಿಂತಕ-ಬರಹಗಾರ, ಎಲ್ಲ ಜನಪರ ಚಳವಳಿಗಳ ತೆರೆಮರೆಯ ಗಟ್ಟಿ ಒಡನಾಡಿ, ಇರುವೆಯಂಥ ದಣಿವರಿಯದ ನಿರಂತರ ಚಟುವಟಿಕೆಯ ಜೀವಸೆಲೆ ಪ್ರೊ.ಬಿ.ಗಂಗಾಧರಮೂರ್ತಿಯವರು ಶನಿವಾರ ನಿಧನರಾದರು.
ಅನುವಾದಕರಾಗಿ ಅವರು ಕನ್ನಡದ ಓದಗರಿಗೆ ತಲುಪಿಸಿದ ವಿಚಾರಗಳು ಅನೇಕ. ಪ್ರಖ್ಯಾತ ಚಿಂತಕರಾದ ಆನಂದ್ ತೇಲ್ತುಂಬ್ಡೆ ಅವರ ‘ದಲಿತರು ಮತ್ತು ಹಿಂದುತ್ವ’, ‘ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ’ ಕೃತಿಗಳನ್ನು ಕನ್ನಡಕ್ಕೆ ತಂದವರು ಪ್ರೊ.ಬಿಜಿಎಂ.
ಭಾರತದ ಖ್ಯಾತ ಯುಟ್ಯೂಬರ್ಗಳಲ್ಲಿ ಒಬ್ಬರಾದ ಧ್ರುವ್ ರಾತಿ ಅವರ ಮಾತುಗಳನ್ನು ಕೆಲವು ತಿಂಗಳ ಹಿಂದೆ ಕನ್ನಡಕ್ಕೆ ಪ್ರೊ.ಗಂಗಾಧರಮೂರ್ತಿಯವರು ಅನುವಾದಿಸಿದ್ದರು. ‘ದೇಶ ವಿಭಜನೆಯ ವಾಸ್ತವ ಸತ್ಯಗಳು’ ಶೀರ್ಷಿಕೆಯಲ್ಲಿ ಪ್ರಕಟವಾದ ನಾಲ್ಕು ಕಂತುಗಳ ಬರಹಗಳನ್ನು ಇಲ್ಲಿ ಓದಬಹುದು.
ದೇಶವಿಭಜನೆಯ ಬಗ್ಗೆ ಧ್ರುವ್ ರಾತಿಯವರ ಹಿಂದಿ ವಿಡಿಯೋ ಪ್ರಸ್ತುತಿಗೆ ಪ್ರೊ. ಬಿ ಗಂಗಾಧರಮೂರ್ತಿ ಕನ್ನಡ ಬರಹ ರೂಪ ನೀಡಿದ್ದಾರೆ.
(ಲೇಖನಗಳನ್ನು ಓದಲು ಶೀರ್ಷಿಕೆಗಳ ಮೇಲೆ ‘ಕ್ಲಿಕ್’ ಮಾಡಿರಿ)
ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ-ಒಂದು
1947ರ ವಿಭಜನೆಗೆ ಕಾರಣವೇನು? ತ್ರಿಕೋನ ಪ್ರೇಮ ಪ್ರಕರಣ, ಮೌಂಟ್ಬ್ಯಾಟನ್ ಯೋಜನೆ, ಹಿಂದೂ-ಮುಸ್ಲಿಂ ಐಕ್ಯತೆಯ ಐತಿಹಾಸಿಕತೆ- ಉಪಶೀರ್ಷಿಕೆಯ ವಿವರಣೆಗಳು ಈ ಲೇಖನದಲ್ಲಿವೆ.
***
ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 2
ಈ ಭಾಗದಲ್ಲಿ ‘1857ರ ದಂಗೆ, ದ್ವಿ-ರಾಷ್ಟ್ರ ಸಿದ್ಧಾಂತದ ಹುಟ್ಟು, ಮುಸ್ಲಿಂಲೀಗ್ನ ಹುಟ್ಟು ಮತ್ತು ಹಿಂದೂ ಸನಾತನಿಗಳ ಪ್ರತಿಕ್ರಿಯೆ’ ಕುರಿತು ವಿವರಿಸಲಾಗಿದೆ.
***
ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 3
‘ದೇಶ ವಿಭಜನೆ-1947, ಸಾವರ್ಕರ್ ಮತ್ತು ಸುಭಾಷ್ಚಂದ್ರ ಬೋಸ್, ಹಿಂದೂ ರಾಷ್ಟ್ರೀಯತೆಯ ಉದಯ, ಹಿಂದುತ್ವದ ಅಂತರಂಗ, ಬಾಲಗಂಗಾಧರ ತಿಲಕ್, ಆಗ ಬಂದರು ಗಾಂಧಿ’ ಉಪಶೀರ್ಷಿಕೆಯ ವಿವರಣೆಗಳಿವೆ.
***
ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 4
ಬ್ರಿಟಿಷರಿಗೆ ಸಾವರ್ಕರ್ ಬೆಂಬಲ, ಬ್ರಿಟಿಷರಿಗೆ ಬೆಂಬಲ ಘೋಷಿಸಿದ ಜಿನ್ನಾ, ಸುಭಾಷ್ಚಂದ್ರ ಬೋಸರನ್ನು ಹಿಂದಿನಿಂದ ಇರಿದ ಸಾವರ್ಕರ್, ಜಿನ್ನಾ ಮತ್ತು ಚರ್ಚಿಲ್, ಕ್ಯಾಬಿನೆಟ್ ಮಿಷನ್ ಪರಾಜಯ