Homeನ್ಯಾಯ ಪಥಹಿಂಗಿದ್ದ ನಮ್ಮ ರಾಮಣ್ಣ: ಭಾಗ-5; "ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ...

ಹಿಂಗಿದ್ದ ನಮ್ಮ ರಾಮಣ್ಣ: ಭಾಗ-5; “ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ ಅದ್ಕೂ ಕಲ್ಲಾಕಿದೆ”

- Advertisement -
- Advertisement -

ಸುಗ್ಗಿ ಕತಿಗೆ ಫಸ್ಟ್ ಪ್ರೈಜ್ ಬಂದಾಗ ಹಾಸ್ಟೆಲ್ ಹುಡುಗರ್‍ಯಲ್ಲ ಸೇರಿ ಹತ್ತತ್ತು ರೂಪಾಯಿ ಹಾಕಿ ಸನ್ಮಾನ ಮಾಡನ ಅಂತ ತೀರ್ಮಾನ ಮಾಡಿದೊ. ಸನ್ಮಾನ ಎಲ್ಲಿ ಮಾಡನ ಅಂತ ಚರ್ಚೆ ಮಾಡುವಾಗ ಹೋಟೆಲ್ ಡಿಲಕ್ಸೆ ಸರಿ ಅಂತ ಆಯ್ತು. ಡಾ. ಬಿ. ಶಿವಣ್ಣ ಎಂ.ಎಸ್.ಪಿ.ಜಿ ಇದ್ರು; ಅವರನ್ನ ಈ ಸನ್ಮಾನಕ್ಕೆ ಕರಿಯನ ಅಂತ ಹೋದೊ. ಅವುರೂ ಒಪ್ಪಿಗಂಡ್ರು. ಆಗ ಯಾರೂ ಕತೆ ಓದಿರಲಿಲ್ಲ. ಬರದೋನೆ ನಮ್ಮ ಜೊತೆ ಇರಬೇಕಾದ್ರೆ ಕತೆ ಕಟ್‌ಗಂಡೇನು ಅನ್ನಂಗಿದ್ರು. ಬಹುತೇಕ ಹುಡುಗ್ರು ಕುಸ್ತಿಗೆ ಪೈಲವಾನನ್ನ ಕರಕಂಡು ಬತ್ತರಲ್ಲ ಅಂಗೆ ರಾಮಣ್ಣನಿಗೆ ಹೂವಿನಾರ ಹಾಕಿ ಕರಕಂಡು ಬರಾನ ಅಂತ ತಯಾರಾದ್ರು. ಆದ್ರೆ ರಾಮಣ್ಣನೇ ಪತ್ತೇಯಿಲ್ಲ. ಅವುನು ಮಹಾರಾಣಿ ಕಾಲೇಜ್ ಬುಡೋ ಟೈಮಿಗೆ ಸರಿಯಾಗಿ ಹೋಗಿ ನಿಸರ್ಗ ನೋಡೋನಂಗೆ ನಿಂತಿದ್ದ. ಅವತ್ತಿನ ಅವನ ಸಂಭ್ರಮ ಮುಖದಲ್ಲೇ ಎದ್ದು ಕಾಣುತ್ತಿತ್ತು. ಆಗ ನಾನೋಗಿ “ರಾಮಣ್ಣ ನಿನ್ನ ಸನ್ಮಾನ ಕ್ಯಾನ್ಸಲ್ ಆಗ್ಯದೆ” ಅಂದೆ. “ಯಾಕ್ಲ” ಅಂದ. “ಆಸಾಮಿಯ ಹಿಡಕಂಡೋಗಿ ಸನುಮಾನ ಮಾಡನ ಅಂತ ಹುಡುಕಿ ಸಾಕಾಗಿ ಸುಮ್ಮಾನಾದ್ರು” ಅಂದೆ. “ಲ್ಯೇ ಎಲ್ಲುಡುಕಿದುರ್ಲ. ಇಲ್ಲೆ ಇವುನಿಕಲ, ನಾನೆಲ್ಲಿಗೋದೆನು ನಡಿಲ, ಜಲ್ದಿ ಹೊಗಮ” ಅಂತ ಬಂದ.

ಸನ್ಮಾನದ ಭರಾಟೆಲಿ ರಾಮಣ್ಣನ ಕತೆ ಬಗ್ಗೆ ಯಾರೂ ಕೇಳ್ಳಿಲ್ಲ. ರಾಮಣ್ಣನೂ ಹೇಳಲಿಲ್ಲ. ಯಲ್ಲ ಆಮ್ಲೆಟ್ ತಿನ್ನಕಂಡು ಅದು ಇದು ಮಾತಾಡಿಕೊಂಡು ಬಂದೂ. ಅವುನು ಒಕ್ಕಲಿಗರ ಹುಡುಗ್ರು ಸನ್ಮಾನ ಮಾಡಿದ್ರೆ ಹೋಯ್ತಿರಲಿಲ್ಲ. ಮದ್ಲಿಂದ ಜಾತಿ ಜನಗಳ ಗುಂಪಲ್ಲಿ ಸೇರತಿರಲಿಲ್ಲ. ನಾಕು ಜನ ಜಾತಿಯೋರು ಸೇರಿಕಂಡ್ರೆ ಇನ್ನೇನು ಮಾತಾಡ್ತರ್ಲ ಅಂತಿದ್ದ. ಆದ್ರೆ ತನ್ನಂಗೆ ಇದ್ದ ಸ್ವಜಾತಿ ಜನಗಳ ಜೊತೆ ಯಾವ ಅಳಕೂ ಇಲ್ದೆ ಬ್ಯರಿತಿದ್ದ. ಪರೀಕ್ಷೆ ಟೈಮಲ್ಲಿ ಜಾತಿ ಹುಡುಗರಿಗೆ ಸಬ್‌ಜೆಕ್ಟ್ ವಿಷಯದಲ್ಲಿ ಪ್ರಶ್ನೆ ಕೇಳಿ ಹೆದರಸತಿದ್ದ. ಸರಿಯಾಗಿ ಹೇಳದ ಹುಡುಗ್ರ ದುರುಗುಟ್ಟಿಗಂಡು ನೋಡಿ ನಿನ್ನಕತೆ ಮುಗಿತು ಅನ್ನಂಗೆ ಮಾಡನು, ಬಂದು ಅದೇಳಿಕಂಡು ನಗಾಡನು.

“ಕಮಲಾಕ್ಷಣ್ಣ ರಾಮಣ್ಣನ ಆ ಟೈಮಲ್ಲಿ ನಾನು ನೋಡಿದ್ದೆ. ನಾನು ನೋಡಿದ ಮೊದಲ ಕತೆಗಾರ ರಾಮಣ್ಣನೆಯ. ನಾನಾಗ ಕಡಬಳ್ಳಿ ಹೈಸ್ಕೂಲಲ್ಲಿ ಓದ್ತಿದ್ದೆ. ಅಲ್ಲಿ ಹೆಡ್ ಮಾಸ್ಟರಾಗಿದ್ದ ಯಚಾಕನಳ್ಳಿ ಸತ್ಯನಾರಾಯಣ ಮೇಷ್ಟ್ರು, ದೊಡ್ಡದೊಡ್ಡ ಅಧಿಕಾರಿಗಳು ವಿದ್ವಾಂಸರನ್ಯಲ್ಲ ಕರೆಸಿ ಭಾಷಣ ಮಾಡಸೋರು. ರಾಜಕಾರಣಿಗಳ ಪೈಕಿ ಟಿ.ಎಂ ಮಾದಪ್ಪಗೌಡ್ರು, ಹೆಚ್.ಟಿ ಕೃಷ್ಣಪ್ಪ, ಎಂ.ಆರ್.ಎಂ ಶಾಸ್ತ್ರಿ ಇವುರ್‍ಯಲ್ಲ ಬತ್ತಿದ್ರು. ಅಂಗೆ ರಾಮಣ್ಣನ ಟೀಮು ಬಂದಿತ್ತು. ಆಗ ರಾಮಣ್ಣ ಕತೆಗಾರ್ರು. ಅವುರ ಕತೆಗಾಗ್ಲೆ ಬಹುಮಾನ ಬಂದದೆ ಅಂತ ಪರಿಚಯ ಮಾಡಿದ್ರು. ನಾವು ವಿಶೇಷವಾಗಿ ನೋಡಿದ್ದೊ. ಅಲ್ಲಿ ನಾಗ್ತಳ್ಳಿ ಚಂದ್ರುನೂ ಇದ್ದ. ರಾಮಣ್ಣ ವಳ್ಳೆ ಪ್ರಾಯದ ಹುಡುಗ. ಕೆಂಪು ಕಣ್ಣುಬ್ಯಾರೆ. ನಮಿಗ್ಯಲ್ಲ ವಿಶೇಷವಾಗಿ ಕಂಡಿದ್ದ. ಅವುನು ಭಾಷಣ ಮಾಡುವಾಗ ನಿಮ್ಮ ಓದಿನ ಜೊತೆಗೆ ಬ್ಯಾರೆ ಚಟುವಟಿಕೆನೂ ಇರ್ಲಿ ಅಂತ ಹೇಳಿದ್ದೂ ಇನ್ನೂ ನ್ಯನಪದೆ ಮುಂದಕೇಳು.”

ಅವುನ ಕತಿಗೆ ಬಹುಮಾನ ಬಂದಿದ್ಕೆ ನಾವು ಸರಿಯಾದ ಪಾರ್ಟಿ ಮಾಡಿರಲಿಲ್ಲ. ಅಂದ್ರೆ ಒಂದು ಹೊರ್ಸತೊಡಿಕಿನಂತ ಫಂಕ್ಷನ್ ಆಗಬೇಕಿತ್ತು. ಅಂಗಾಗಿ ರಾಮಣ್ಣನೂ ನಾನು ಮೀನ್ ತರದೊ ಇಲ್ಲ ಬಾಡ್ ತರೊದೊ ಅಂತ ಚರ್ಚೆ ಮಾಡಿಕಂಡು ಮೀನು ಮಾರುಕಟ್ಟೆಗೋದೊ. ರಾಮಣ್ಣ ಬಂದು ದಪ್ಪ ಮೀನಿನ ತುಟಿಯಳದು ಚೆಕ್ ಮಾಡಿದ. ಅಮ್ಯಾಲೆ “ಇದ್ನೆ ತಗಳ್ಳ ಪ್ರೆಸ್ ಮಾಲಿದು” ಅಂದ. “ಅದ್ಯಂಗೇಳತಿ” ಅಂದೆ. “ಬಾಯಿ ಇನ್ನ ಕ್ಯಂಪಗದೆ ಕಲ. ಇವತ್ತಿಡಕಂಡು ಬಂದವುರೆ ತಗೊ” ಅಂದ. ಮೂರ್ ರುಪಾಯಿ ಕೆಜಿಯಂಗೆ ತಗಂಡೊ. ಅಲ್ಲೆ ಕ್ಲೀನ್ ಮಾಡಿಸಿಗಂಡು, ಕಟ್ ಮಾಡಿಸಿಗಂಡು ಬಂದೊ. ಸರಿ ಈಗ ಅಡುಗೆ ಮಾಡಬೇಕಲ್ಲ ಅಂತ ಯೋಚನೆ ಮಾಡುದಾಗ, ಊರಲ್ಲಿ ಮಾಂಸದ ಅಡುಗೆ ಮಾಡದ ನೋಡಿದ್ದೆ ಸರಿ, ಅಂಗೆ ಮಾಡನ ಅಂತ ರೆಡಿಯಾದೆ. ರಾಮಣ್ಣ ಸಾಮಾನು ತಂದುಕೊಟ್ಟ. ಹಾಲು ಕಾಫಿ ಕಾಸಕ್ಕೆ ಅಂತ ತಂದು ಮಡಿಕಂಡಿದ್ದ ಸ್ಟವ್ವಿನ ಮೇಲೆ ಮಾಡಬೇಕಾಯ್ತು. “ಇದರಲ್ಯಂಗಪ್ಪ ಮಾಡದು” ಅಂತ ಅನುಮಾನ ಮಾಡಬೇಕಾದ್ರೆ ರಾಮಣ್ಣ “ಅದ್ರಲ್ಲೇ ಮಾಡ್ಲ, ಮೀನ ಜಾಸ್ತಿ ಬೇಸಂಗಿಲ್ಲ. ಮಧ್ಯಾನಿಕೆ ಉಣ್ಣುವ” ಅಂದ. ನಾನು ಭಾಳ ಮುತುವರ್ಜಿ ವಯಿಸಿ, ಮನೇಲಿ ಮಾಂಸದಡಗೆ ಮಾಡ್ತರಲ್ಲ ಅಂಗೆ ಮಾಡಿದೆ. ಬಗ್ಗಿ ನೋಡಿದ್ರೆ ಮೀನು ಪೀಸು ಆಕಾರ ಕಳಕಂಡಿದ್ದೊ. ಇದೇನಿಂಗಾಯ್ತಲ್ಲಾ ಅಂತ ನೋಡಿದ್ರೆ ಮೀನ್ಯಲ್ಲ ಕದರಿಕೊಂಡು ಸಾರು ಬಗ್ಗಡಾಗಿತ್ತು. “ಬೇಸಿದ್ದು ಸಾಕು ತಗಿಲ” ಅಂದ ರಾಮಣ್ಣ. ಮೀನಿನ ಪೀಸ ತಗದು ನೋಡಿದ. ಅವ್ಯಲ್ಲ ಚಿಂದಿಯಾಗಿದ್ದೊ. “ಥೂ ನಿನ್ನ ಯಂಥಾ ಅಡ್ಡಕಸಬಿನ್ಲ ನೀನು, ನಿನ್ನಂಥೊನ ಕೈಗೆ ತಂದುಕೊಟ್ನಲ್ಲ ಮೀನ. ಮಾಡಕ್ಕೆ ಬರದಿಲ್ಲ ಅಂತ ಮದ್ಲೆ ಹೇಳಬೇಕಾಗಿತ್ತು ಕಲ. ಭಾಳ ಗಂಭೀರವಾಗಿ ಮಾಡತಿದ್ದಲ್ಲ, ಹಿಂಗ ಮಾಡದು” ಅಂತ ಒಂದೇ ಸಮ ರೇಗಿದ.

“ಏ ಊರಲ್ಲಿ ಬಾಡ್ನೆಸರು ಮಾಡ್ತರಲ್ಲ, ಅಂಗೆ ಅಂತ ತಿಳಕಂಡು ಮಾಡಿದ್ನಪ್ಪ.”

“ಬಾಡು ಮೀನು ಒಂದೆ ಏನ್ಲ, ಮೀನು ಸಾರು ಮಾಡಕ್ಕೆ ಬರೊದಿಲ್ಲ ಅಂತ ಮದ್ಲೆ ಹೇಳಬೇಕಾಗಿತ್ತು. ಮಾಡೋರ್‌ನೆ ಕರಸತಿದ್ದೆ. ಕಾಕಾಹೋಟ್ಳು ಮೀನ ಬಟ್ಟನಂಗಾಗಿಬುಟ್ಟೆ. ಯಾವ ನನ್ನಮಗನಿಗೆ ಗೊತ್ಲ, ನೀನಿಂಗೆ ರಸ ತಗಂಬಂದಿ ಕಸ ಮಾಡಿ ಮಡಗ್ತಿ ಅಂತ” ಅಂದ.

“ಈಗೇನೊ ಆಯ್ತಲ್ಲ ಹೋಗ್ಲಿ ಬುಡು” ಅಂದೆ.

“ಏಟು ಸಲೀಸಾಗೇಳ್ತಿಲ. ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ ಅದ್ಕೂ ಕಲ್ಲಾಕಿದೆ” ಅಂತ ಬೈಯ್ಯಕಂಡೆ ಚಿಂದಿ ಮೀನ ಪೀಸ ಗೋರಿಕಂಡು ತಿಂದ. “ನೀನು ತಿನ್ಲ ಅದ್ಯಾಕಂಗೆ ಕುಂತಿದ್ದಿ” ಅಂದ. ಅಮ್ಯಾಲೆ ನಾವು ಮೀನಿನ ಸವಾಸಕ್ಕೋಗಲಿಲ್ಲ.

ಆಗ ಆರ್ ರುಪಾಯಿ ಕೊಟ್ರೆ ಒಂದು ನಾಟಿಕೋಳಿ ಸಿಗದು. ಅದ್ನೆ ತಂದು ಕೂದು ಸೀದು ತರದು ಅಡುಗೆ ಮಾಡೊವಷ್ಟರಲ್ಲಿ ರಾಮಣ್ಣ ಹೋಗಿ ತ್ರಿಬಲ್ಲೆಕ್ಸ್ ರಂ ತರೋನು. ನಾಟಿಕೋಳಿ ರಂ ಪಾರ್ಟಿ ಚನ್ನಾಗಿ ನ್ಯಡಿಯದು. ಆಗಿನ ಖುಷಿ ಈಗ ಯಾವ ಪಾರ್ಟಿಲೂ ಸಿಗದಿಲ್ಲ. ಇಂತ ಪಾರ್ಟಿಗಳು ಸಾಂಗವಾಗಿ ನ್ಯಡಿದಾಗ ಕಾಲೇಜ್ ಯಲಕ್ಷನ್ ಬಂದು ನಮಿಗ್ಯಲ್ಲ ಒಂಥರ ಹುಮ್ಮಸ್ಸು ಬಂತು. ಆದ್ರೆ ರಾಮಣ್ಣನಿಗೆ ಯಾವ ಹುಮ್ಮಸ್ಸು ಸುಮ್ಮನಿದ್ದ. ಸಾಹಿತ್ಯ ಲೋಕದಲ್ಲಿ ಮುಳುಗಿದ್ದ ಅವುನಿಗೆ ನಮ್ಮ ಯಲಕ್ಷನ್ ವಿಷಯ ಹೇಳಿದಾಗ “ನಾವು ಇಂಟಲೆಕ್ಚುಯಲ್ ಕಲ, ನಿಮ್ಮ ಜುಜುಬಿ ಯಲಕ್ಷನ್ ಬಗೆ ತಲೆ ಕೆಡಿಸಿಗಳಂಗಿಲ್ಲ. ಅವ್ಯಲ್ಲ ನಿಮ್ಮಂಥೋರಿಗೆ ಸೈ. ನನ್ನ ಕರಿಯಕ್ಕೆ ಬರಬ್ಯಾಡ” ಅಂದ. “ಆಯ್ತಪ್ಪ ನಿನ್ನ ಕತೆಗೆ ಬಹುಮಾನ ಬಂದಾಗ ಅವುರ್ ಯಲ್ಲ ಓಡಾಡಿ ಸನ್ಮಾನ ಮಾಡಲಿಲ್ವೆ” ಅಂದೆ. “ಮಾಡಿ ಅಂತ ನಾನೇನು ಕೇಳಿದ್ನ? ಅಂಗಂತ ಬಾವುಟ ಹಿಡಕಂಡು ಜೈ ಅನ್ನಕಾದತ್ಲ? ಯಾವನಿಗೋ ನನಿಗಿಷ್ಟ ಬಂದೋನಿಗೆ ಓಟು ಮಾಡ್ತಿನಿ ಹೋಗು” ಅಂದ.

ಯಲಕ್ಷನ್ನು ಮುಗಿತು. ನಮ್ಮ ಹಾರಾಟನೂ ಮುಗಿತು. ಯಲ್ಲ ಮಾಮೂಲಿಯಂಗೆ ನ್ಯಡಕಂಡೊಯ್ತಾಯಿರುವಾಗ ನಮ್ಮ ಸಂತೋಷದಿಂದ ದೂರಯಿದ್ದ ರಾಮಣ್ಣ ನಮ್ಮಿಂದ ಇನ್ನ ದೂರವಾಗೊ ಒಂದು ಸುದ್ದಿ ಮದ್ದೂರು ಕಡಿಂದ ಬಂತು. ಅದೇನಪ್ಪ ಅಂದ್ರೆ ರಾಮಣ್ಣನಿಗೆ ಮದಿವಂತೆ ಅಂತ. ಅದು ಆಶ್ಚರ್ಯದ ಸುದ್ದಿ ಏನಾಗಿರಲಿಲ್ಲ. ಅವಾಗ ಯಲ್ಲ ಓದುವಾಗ್ಲೆ ಮದಿವಾಗೋರು. ಮದುವಿಗೆ ಬಂದ ಮಗನಿಗೆ ಮದುವೆ ಮಾಡೋದು ಈ ಸಮಾಜದ ಜವಾಬ್ದಾರಿ ಅನ್ನಂಗಿದ್ದ ಕಾಲ ಅದು. ನಮ್ಮಣ್ಣ ಹೆಚ್.ಟಿ ಕೃಷ್ಣಪ್ಪನಿಗೂ ಓದುವಾಗ್ಲೆ ಮದುವೆ ಮಾಡಿದ್ದೊ. ಓದುವಾಗ್ಲೆ ಮದಿವಾದೋರು ಏಕದಂ ಜವಾಬ್ದಾರಿ ಹೊತ್ತಂಗೆ ಕಾಣೋರು. ಹುಡುಗಾಟಿಕೆ ನಿಲ್ಲಸೋರು. ಏನೋ ನೋಡಿದೋರಂಗೆ ಕಾಣಸೋರು. ನನಿಗಂತೂ ಇನ್ನಿವುರ ಕತೆ ಮುಗಿತು. ಹುಡುಗಿರ ಮಾತಾಡ್ಸದಾಗ್ಲಿ ಕನಸು ಕಟ್ಟದಾಗ್ಲಿ ಇವುರಿಂದ ಸಾಧ್ಯವೇ ಯಿಲ್ಲ. ಏನಿದ್ರು ಹೆಡತಿ ಬಗ್ಗೆ ತಲೆಕೆಡಿಸಿಕೊಬೇಕಷ್ಟೆ ಅನ್ಸದು. ರಾಮಣ್ಣನ ಮದುವೆ ವಿಷಯ ಯಾರಿಂದ್ಲೋ ನನ್ನ ಕಿವಿಗೆ ಬಿದ್ದಾಗ ಅವುನ್ನೆ ಕೇಳಿದೆ.

ಅಗ್ರಹಾರ ಕೃಷ್ಣಮೂರ್ತಿಯವರೊಡನೆ

“ನಿನ್ನ ಮದುವೆ ಅಂತ ಸುದ್ದಿ ಹಬ್ಯದೆ ನಿಜವೆ” ಅಂದೆ.

“ಊ ಕಲ” ಅಂದ.

“ಅದ್ಯಾಕಿಷ್ಟು ಬೇಗ ಆಯ್ತೀ”

“ನಾನಾಗಕೋಗಿದ್ದನೆ, ಮನಿಯೋರು ಮಾಡ್ತ ಅವುರೆ ಕಲ”

“ಈಗ್ಲೆ ಬ್ಯಾಡ, ಎಂಬಿಬಿಎಸ್ ಮುಗಿಲಿ ಅನ್ನಬೇಕಾಗಿತ್ತು”

“ಅಂದೆ, ಅದರ ಪಾಡಿಗದು ಇದರ ಪಾಡಿಗಿದು” ಅಂದ್ರು.

“ಹುಡುಗಿ ದೂರದ ಸಂಮಧನೊ”

“ನಮ್ಮತ್ತಗೆ ತಂಗಿನೆ ಕಲ. ನಮ್ಮಣ್ಣ ತೀರಕಬುಟ್ಟ ಅತ್ತಿಗೆಗೆ ಒಂದು ರಕ್ಷಣೆಬೇಕು ಅಂತ ಅವುಳ ತಂಗಿನ ಮಾಡ್ತ ಅವುರೆ, ಒಪ್ಪಗಂಡಿದ್ದನಿ”

“ನಿನ್ನೊಪ್ಪಿಗೆಯಿಲ್ದೆ ಅವುರೆಲ್ಲಿ ಮಾಡ್ಯಾರೂ. ನಿನಿಗೂ ಜಲ್ದಿ ಮದಿವಾಗಬೇಕು ಅನ್ನ ಆಸಿತ್ತೇನೊ” ಅಂದೆ. ಅದಕ್ಕೇನು ಅವುನು ಉತ್ತರಕೊಡಲಿಲ್ಲ.

“ಬರ್ರಲ ಯಲ್ಲಾರು ಮದುವೆಗೆ” ಅಂದ.

“ಬರದೆ ಇರಕ್ಕಾದತೆ, ಯಲ್ಲಾರಿಗೂ ಹೇಳು ಬತ್ತಿವಿ” ಅಂದೆ.

ರಾಮಣ್ಣನ ಮದುವೆ ದಿನ ಹತ್ರಾದಂಗೂ ನಮಿಗೊಂಥರ ಸಂಭ್ರಮಾಯ್ತು. ಆಗ ಮದುವೆ ಅನ್ನ ಪದವೆ ಸಂಭ್ರಮವುಂಟು ಮಾಡತ್ತಿತ್ತು. ಅವುನ ಜೊತೆ ಓತ್ತಾಯಿದ್ದ ಹುಡುಗರ್‍ಯಲ್ಲ ತಯಾರಾಗಿ ಅಲಗೂರು ಪುಟ್ಟಸ್ವಾಮಿಗೌಡನ ಲೀಡರ್‌ಸಿಪ್ಪಲ್ಲಿ ಹೊಂಟೊ. ಪುಟ್ಟಸ್ವಾಮಿಗೌಡನಿಗೆ ರಾಮಣ್ಣ ಒಂಚೂರು ಹೆದರೋನು. ಅವನ ಮುಂದಾಳತ್ವದಲ್ಲಿ ಮೈಸೂರಿಂದ ಯಲ್ಲ ಹ್ವಂಟು ಮದ್ದೂರಲ್ಲಿಳದೊ, ಅಲ್ಲಿ ಯರಡು ಜಟಕಾ ಮಾಡಿಕೊಂಡು ದೇಶಿಹಳ್ಳಿಗೋದೊ. ಅಗ್ಯಲ್ಲ ಹೆಣ್ಣಿನ ಮನೆಬಾಗ್ಲಲ್ಲೆ ಮದುವೆ. ಅಂಗಾಗಿ ದೇಶಿಹಳ್ಳಿ ತಲುಪಿದೊ. ನಾವೇ ಮಾಡ್ಳು ಗಂಡಾಗಬೇಕಾಯ್ತು.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ: ಭಾಗ-3; ನಿನ್ನ ಕತೆ ಕಾದಂಬರಿ, ಇವೇನು ಎಗ್ಸಾಮಿಗೆ ಬಂದವಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...