Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ: ಭಾಗ-3; ನಿನ್ನ ಕತೆ ಕಾದಂಬರಿ, ಇವೇನು ಎಗ್ಸಾಮಿಗೆ ಬಂದವಾ?

ಹಿಂಗಿದ್ದ ನಮ್ಮ ರಾಮಣ್ಣ: ಭಾಗ-3; ನಿನ್ನ ಕತೆ ಕಾದಂಬರಿ, ಇವೇನು ಎಗ್ಸಾಮಿಗೆ ಬಂದವಾ?

- Advertisement -
- Advertisement -

ಆಗಿನ ಊರಬ್ಬಗಳು ಚನ್ನಾಗಿದ್ದೊ. ಹಬ್ಬ ಅಂದ ಕೂಡ್ಲೆ ಊರಿಗೆ ಓಡಿ ಬತ್ತಿದ್ದೊ. ಹಬ್ಬಕೆ ಅಂತ ಬಂದ ನಂಟ್ರನ್ಯಲ್ಲ ಮಾತಾಡಿಸಿ ಮೈಸೂರಲ್ಲಿ ಡಾಗುಟ್ರಾಗ್ತಾ ಅವುನೆ ಅಂತ ಅವುರಿವುರಿಂದ ಹೊಗಳಿಸಿಕಂಡು ಬರದು ಅಂದ್ರೆ ಭಾಳ ಖುಷಿಯಾಗದು. ಬರುವಾಗ ಹಬ್ಬದ ತಿಂಡಿನ್ಯಲ್ಲ ಗಂಟುಕಟ್ಟಿ ಕಳುಸರು. ನಾನು ತಂದ ಗಂಟ ರಾಮಣ್ಣ ನರಿ, ಕೋಳಿ ನೋಡಿದಂಗೆ ನೋಡಿ ಲಲ್ಲಲ್ಲಾ ಲಲ್ಲಲ್ಲಾ ಅಂತ ನಾಲಗೆಲೆ ಹಾಡೇಳನು. ಅವುನಿಗೆ ಖುಷಿಯಾದಾಗ ಲಿರಿಕ್ ಇಲ್ಲದ ಹಾಡು ಬರುವು. ಅದು ಬರಿ ಲಲ್ಲಲ್ಲಾ ಅಂತ. ನಾನದನ್ನ ನೆಗ್ಲೆಟ್ ಮಾಡಿದ್ರೆ, “ಅದೇನ್ಲ ಗಂಟು ಬಿಚ್ಚಲಾ, ವಬ್ನೆ ತಿನ್ನಕ್ಕೆ ಮಡಿಕಂಡಿದ್ದಿಯಾ” ಅನ್ನನು. ಆಗ ನಾನು, “ನಾನೂ ಹಂಚಿ ತಿನ್ನೋನು ಕನೊ, ವಬ್ನೆ ಯಾವತ್ತಾರ ತಿಂದಿದ್ದಿನಾ, ಗಂಟು ಬಿಚ್ಚಗಂಟ ವಸಿ ತಡಕೊ, ಅಂಗೆ ಬೊಬ್ಬೆ ವಾತನಂಗಾಡಬ್ಯಾಡ” ಅಂತಿದ್ದೆ.

“ಸುಮ್ಮನಂಗಂದೆ ಕಲ, ಆಟೊಂತರ ವಬ್ನೆ ತಿನ್ನಕೋದಿಯಾ. ನಿಮ್ಮ ಕಡೆ ಕರ್ಜಿಕಾಯಿ, ಚಿಕ್ಕಿನುಂಡೆ, ವಡಕಜ್ಜಾಯ ಚನ್ನಾಗಿರತವೆ ಕಲ. ವಯಿಸಾದೆಂಗೆಸರ ಕೈಯೇ ಚಂದ ಕಲ. ಹದ ಹಿಡಿದಿರತವೆ; ಅವುರು ಯಡಗೈಲಿ ಉಪ್ಪಾಕಿದ್ರೂ ಕರಟ್ಟಾಗಾಕ್ತರೆ. ವಡೆ ಅಗಿತ ಅಗಿತ ರುಚಿ ಬತ್ತವೆ.” ಅಂತ ನಮ್ಮಳ್ಳಿ ಹೆಂಗಸರ ಹೊಗಳೋನು. ಊರಿನಿಂದ ಏನಾರ ಬಾಡಿನೆಸರು ಕಳಿಸಿದ್ರೆ, “ಇರ್‍ಲ ವಸಿಯ, ಇಲ್ಲೆ ಬಂದೆ” ಅಂತ ಒಂದೇ ಉಸುರಿಗೋಡೋಗಿ ತ್ರಿಬಲ್ಲೆಕ್ಸ್ ರಂ ತರೋನು. ಅದೇನಾಗ ಐದು ರೂಪಾಯಿಗೊಂದು ಸೀಸ ಸಿಗದು. ಅದ ತಂದು ಮಟ್ಟವಾಗಿ ಕೂತಗಂಡು ಭಾಳ ಸ್ಟೈಲಾಗಿ ಜಾದೂ ಮಾಡೋನಂಗೆ ಮುಚ್ಚಳ ತಗದು ಗ್ಲಾಸಿಗುಯ್ಕಂಡು ಕುಡಿವಾಗ ನನ್ನ ಕಡಿಗೆ ಕಣ್ಣು ಬುಡೋನು. ಮದ್ಲೆ ಅವುನವು ಕೆಂಪುಕಣ್ಣು. ಯಣ್ಣೆ ಹೀರತ ಸುಖಪಡೊ ಭಂಗಿಯ ಈಗ್ಲು ಮರಿಯಂಗಿಲ್ಲ. ಅಮ್ಯಾಲೆ ಬಾಡಿನಿಲಕ ತಗದು ಬಾಯಿಗೆಸಗಳನು, ಅಂಗೆ ಅಣ್ಣೆಕಲ್ಯಸದಂಗೆ ಗುರಿಯಿಟ್ಟು ಅಂಗಳಿಗೆ ತಾಕಂಗೆ ಯಸಿಯನು. ಬಾಡಿನೆಸರು ಅಂದ್ರು ಸಾಕು ಮರಿಯನಂಗೆಯ. ನಮ್ಮ ಜನಗಳ ಆಗಿನಿಂದ್ಲೂ ನೋಡಿದ್ದಿನಿ, ವಡೆ ಪಯಸದ ಊಟ ಅಂದ್ರೆ ಅಂಗಾಡದಿಲ್ಲ. ಅಲ್ಲಿ ಯಾವ ಜಗಳನೂ ಇರದಿಲ್ಲ. ಅದೇ ಬಾಡಿನೆಸರು ಮಾಡಿದ ಪಾಸಾಲೆನೆ ಪ್ರಕ್ಷುಬ್ದವಾಗಿರತದೆ. ಈಗಂತು ಅಂತ ಜಾಗಕ್ಕೆ ಹೋಗಕ್ಕೆ ಭಯಾಯ್ತದೆ. ಬಾಡಿನೆಸರೂಟಕ್ಕೆ ಜನ ತಯಾರಾಗಿ ಬಂದಿರತರೆ. ರಾಮಣ್ಣಂಗೆ ಆಗಾಗ್ಗೆ ಬಾಡಿನೆಸರು ಮೆಸ್‌ಗೋಗಬೇಕು ಅನ್ಸದು. ಆಗ ನನ್ನ ಕರದು “ಬಾಲ ಬಾಯಿಕೆಟ್ಟದೆ ಹೋಗಮು” ಅನ್ನೋನು.

ರಾಮಣ್ಣ ಮೆಡಿಕಲ್ ಪುಸ್ತಕ ಓದದಕಿಂತ ಕತೆ ಕಾದಂಬರಿ ಓದೊನು. ಅವುನು ಮೆಡಿಕಲ್ ಓದಕ್ಕೆ ಅಂತ ಬಂದಿರಂಗೆ ಕಾಣ್ತಾಯಿರಲಿಲ್ಲ. ಅವುನು ಸುತ್ತ ಬ್ಯಾರೆ ಪುಸ್ತಕನೆ ಇರವು. ಹೊಸಹೊಸ ಪುಸ್ತಕ ತಂದು. ಮುಗಿಯೊವರಿಗೂ ಬುಡ್ತಿರಲಿಲ್ಲ. ಇದ ನೋಡಿದ ನಾವು “ಅದೇನು ಓದ್ತಿಯೋ, ಮೊದಲು ಸಬ್‌ಜೆಕ್ಟೋದು, ಅಮ್ಯಾಲೆ ನಿನ್ನ ಕತೆ ಕಾದಂಬರಿ, ಇವೇನು ಎಗ್ಸಾಮಿಗೆ ಬಂದವಾ” ಅಂದೆ, ಅವುನಿಗೆ ಸಿಟ್ಟು ಬಂದು, “ಅದೇನು ಕೇಮಿದ್ರ ಕೆಯಿಲ, ನಿನಿಗೇನು ಗೊತ್ತಾದತೂ ಸಾಯಿತ್ಯ ಅಂತಿದ್ದ.

“ಮದ್ಲು ಸಬ್‌ಜೆಕ್ಟು ಆಮ್ಯಾಲೆ ಸಾಹಿತ್ಯ ಕಣೊ” ಅಂದ್ರೆ “ಅಮಿಕ್ಕಂಡು ಕುತಗಳ್ಳ, ನಾನೀಗ ಚಂಬಲ್ ಕಣಿವೆ ಮಂಗಳ್ ಸಿಂಗ್ ಒತ್ತಾಯಿದ್ದಿನಿ ಕಲ. ಈ ನಮ್ಮ ವಿದ್ವಾಂಸರು ಕತೆ ಕಾದಂಬರಿ ತರನೆ ಸಬ್‌ಜಕ್ಟ್ ಬುಕ್ಕುನೂ ಬರದಿದ್ರೆ ಎಷ್ಟು ಚನ್ನಾಗಿರದ್ಲ” ಅಂದ.

“ಏನೋತ್ತಾಯಿದ್ದಿ ನೀನು?”

“ಹೇಳ್ಳಿಲವೇನ್ಲ ಚಂಬಲ್ ಕಣಿವೆ ಮಂಗಳ್ ಸಿಂಗ್ ಒತ್ತಾಯಿದ್ದಿನಿ. ಅವುನಕ್ಕನ್ ಏನ್ ಜನರಯ್ಯ ಅವುರು”.

“ಸರಿಯಪ್ಪ ಅದರ್‍ವಳಿಕೆನಿನ್ನ ಮೆಡಿಕಲ್ ಯಂಗೆ ಸೇರಸಮ?”

“ವಿಜ್ಞಾನ ಓದಿದೋನು ಸಾಯಿತಿಯಾದ್ರೆ ಬರಿಬವುದು ಕಲ” ಅಂದ.

“ಆಯ್ತು ನೀನೆ ಅಂತ ವಿಜ್ಞಾನದ ಸಾಯಿತಿ ಯಾರಾಗಬಾರದು” ಅಂದೆ.

“ಸುಮ್ಮನೆ ನಿಂದೇನದೆ ಅದ ಓದ್‌ಕಲ” ಅಂದ.

ರಾಮಣ್ಣ ಯಂತ ಗಿರಾಕಿ ಅಂದ್ರೇ, ಅವುನ ಸಬ್‌ಜೆಕ್ಟ್‌ನ ನನ್ನ ಕೈಲಿ ಜೋರಾಗಿ ಓದಕ್ಕೆ ಕೊಟ್ಟು ಸುಮ್ಮನೆ ಜಂತಿಗೆ ಕಣ್ಣು ಬುಟುಗಂಡು ನೋಡನು. ಅಮ್ಯಾಲೆ ನನ್ನ ಓದಿನ ಯಥಾವತ್ ಪದ ಬಳಸಿ ಬರಿತಿದ್ದ. ಕೇಳಿದ್ದನ್ನ ನ್ಯಾಪಗ ಇಟ್ಗಳದ್ರಲ್ಲಿ ನಿಸ್ಸೀಮ ಅವುನು. ಆದ್ರು ಪೇಲಾಗೋನು.

“ಸರಿಯಪ್ಪ ಇಷ್ಟು ಬುದ್ದಿವಂತ ಅದ್ಯಾಕ್ ಪೇಲಾಯ್ತೀ” ಅಂದ್ರೆ, “ಅದೇ ಕಲ ನನಿಗೂ ಆಶ್ಚರ್ಯ” ಅನ್ನೋನು. ಆದರೆ ನಿಜವಾಗಿ ಅವುನು ಪ್ರಾಕ್ಟಿಕಲ್‌ನಲ್ಲಿ ಡಲ್ಲಾಗಿದ್ದ. ಯಾಕಂದ್ರೆ ಪ್ರಾಕ್ಟಿಕಲ್ ಚಕ್ಕರ್ ಹೊಡದು ಊರಿಗೋಗಿಬುಡತಿದ್ದ. ಆಗ ಊರು ಅಂಗೇ ಇರತಿದ್ದೊ. ಅಲ್ಲಿನ ಬಾಂಧವ್ಯ ಸಮಂಧಿಕರ ಮಾತುಕತೆಯಿಂದ ಮನಸ್ಸು ತಣದಮ್ಯಾಲೆ ಮೈಸೂರಿಗೆ ಬರೋನು. ಈ ಸಮಂಧಕಿಂತ ಅವುನಿಗೆ ಪ್ರಾಕ್ಟಿಕಲ್ ಮುಖ್ಯ ಅನ್ನಸತಿರಲಿಲ್ಲ. ಆದ್ರೆ ಮೆಡಿಕಲ್ಲಲ್ಲಿ ಅದು ಬಹಳ ಮುಖ್ಯ. ಬೆಡ್ಡಲ್ಲಿರೊ ಪೇಷಂಟ್ ಮುಂಖಾಂತರ ಕಲಿಯೋದು ಬಹಳ ಮುಖ್ಯ. ಒಂಥರ ಅಕ್ಕಸಾಲಿಗ ಒಡವೆ ಹಿಡಕಂಡು ಉಜ್ಜತನೆ ನೋಡು, ಅಂಗೆ ಬೆಡ್ಡಲ್ಲಿರೊ ಪೇಷಂಟ್ ತಪಾಸಣೆ ಬಹಳ ಮುಖ್ಯ. ಆದ್ರಿಂದ ರಜ ಸಿಕ್ಕಿದೇಟಿಗೆ ಊರಿಗೋಗೊ ರಾಮಣ್ಣ ಪ್ರಾಕ್ಟಿಕಲಲ್ಲಿ ಡಲ್ಲಾಗಿದ್ದ. ಒಂದು ವೇಳೆ ಅವುನು ಊರಿಗೋಡೋಗದು, ಕತೆ ಬರಿಯ ಶ್ರಮನ್ಯಲ್ಲ ಇಲ್ಲಾಕಿದ್ರೆ ನಮ್ಮನ್ಯಲ್ಲ ಮೀರಿ ಒಳ್ಳೆ ಡಾಕ್ಟರಾಗೋನು.

“ಅಂಗಾಗಿದ್ರೆ ಕನ್ನಡಕ್ಕೆ ಒಬ್ಬ ಒಳ್ಳೆ ಕತೆಗಾರ ಸಿಗತಿರಲಿಲ್ಲ ಕಣಣ್ಣ. ಈ ನಾಡಲ್ಲಿ ಬೇಕಾದಷ್ಟು ಜನ ಡಾಕ್ಟರವುರೆ. ಆದ್ರೆ ಕನ್ನಡ ಸಾಹಿತ್ಯದಲ್ಲಿ ರಾಮಣ್ಣನಂತ ಕತೆಗಾರ ಇದ್ದುದ್ದು ಅವುನೊಬ್ಬನೆ. ಅದೂ ಯಂಥಾ ಕಾಲದಲ್ಲಿ ಅಂತೀ. ಅವುನು ಬರಿತಿದ್ದ ಕಾಲದಲ್ಲಿ ಕನ್ನಡದ ಮುಖ್ಯ ಕತೆಗಾರರೆಲ್ಲ ನವ್ಯ ಸಂವೇದನೆ ಮೈಮ್ಯಾಲ್ಯಳಕಂಡು ವಿಮರ್ಶಕರ ಮುಖಾಂತರ ನಮಗೆ ಅರ್ಥವಾಗದಂಗೆ ಕತೆ ಬರಿತಿದ್ರು. ಆದ್ರೆ ರಾಮಣ್ಣ ಈ ನ್ಯಲಕ್ಕೆ ನಿಷ್ಟನಾಗಿ ಬರದು ನೇರವಾಗಿ ನಮ್ಮ ಹೃದಯನ ತಟ್ಟೋನು. ಮನ ಮುಟ್ಟಂಗೆ ಬರತಿದ್ದ. ನಮಿಗ್ಯಲ್ಲ ಬರಿಯದ ಕಲಿಸಿದೋನೆ ಅವುನು. ಒಂದು ಕತೆಯಂತೂ ಇವತ್ನೋಡಿದ್ರು ನಮ್ಮನ್ನು ಅಲ್ಲಾಡಿಸಿಬುಡ್ತದೆ ಕಣಣ್ಣ, ಗಾಂಧಿ ಕತೆ ಓದಿದ್ದಿಯಾ. ಅದರಲ್ಲಿ ಗಾಂಧಿ ಹೆಸರಿನ ಹುಡುಗನ್ನ ಉಳಿಸಗಳಕ್ಕಾಗದಿಲ್ಲ. ಕರಿಸಿದ್ದೇಗೌಡ ದನನೊ ಅಥವಾ ಮರನೋ ಮಾರಿ ದುಡ್ಡು ತತ್ತನೆ. ಅಷ್ಟ್ರಲ್ಲಿ ಗಾಂಧಿ ಅವ್ವ ಅಳತಾ ಬಾಗಲಲ್ಲಿ ನಿಂತಿರತಳೆ. ಕರಿಸಿದ್ದೇಗೌಡ ಬಂದು ’ಜೀವ ಯಾವಾಗೊಯ್ತು’ ಅಂತನೆ. ಅಳನೆ ಅವಳುತ್ತರವಾಯ್ತದೆ. ಆಗ ಕರಿಸಿದ್ದೇಗೌಡ, ’ಮನುಸ್ರು ಸಾಯ್ದೆ ಕಲ್ಲು ಸತ್ತವಾ ಸುಮ್ನಿರು’ ಅಂತ ಗಾಂಧಿ ಶವ ತಗಳಕ್ಕೆ ಅಂತ ಡಾಕ್ಟರು ಕೇಳಕ್ಕೋಯ್ತನೆ. ರಾಮಣ್ಣ ಬರದ ಈ ಸಾಲು ಕನ್ನಡ ಸಾಹಿತ್ಯನೆ ಆಳ್ಳಾಡಿಸಿಬುಡ್ತು ಕಣಣ್ಣ.”

“ನಿಜ ರಾಮಣ್ಣನ ಕತೆಗಳು ಓದುಗರ ಮನಸ ಮುಟ್ಟಿದ್ಕೆ ಅಲವೆ ಅವುನು ವಳ್ಳೆ ಕತೆಗಾರ ಅನ್ನಿಸಿಗಂಡಿದ್ದು.”

“ರಾಮಣ್ಣ ನಮ್ಮ ಏರಿಯಾದ ಭಾಷೆನ ಯಾವುದೆ ಸಂಕೋಚವಿಲ್ಲದೆ ಬಳಸಿದ. ಲೇ ಆ ಕರ ಹಿಡಿಕಂಡೋಗಿ ಬಿತ್ತ ಕೆಚ್ಚಿಸಿಗಂಡು ಬಾರ್ಲ. ಸಿಕ್ಕಿದ ಹಸಿನ ಮ್ಯಾಲ್ಯಲ್ಲ ನ್ಯಗಿತದೆ” ಅಂತ ರಾಮಣ್ಣ ಬರದಿದ್ರಿಂದ ನಾವ್ಯಲ್ಲ ನಮ್ಮೂರ ಭಾಷೆ ಬಳಸಕ್ಕೆ ಧೈರ್ಯ ಮಾಡಿದ್ದು.”

“ಅಂತ ಮಾತು ಅವುನ ಕತೆಲಿ ತುಂಬಾ ಬತ್ತವೆ. ಆಲನಹಳ್ಳಿ ಕೃಷ್ಣ ಹಳ್ಳಿ ಕತೆ ಬರುದ್ರು, ರಾಮಣ್ಣನೇ ಬ್ಯಾರೆ ತರ ಬರಿಯೋನು. ಅವುನ ಕತೆ ಜನಪ್ರಗತಿಲೊ ಮಯೂರದಲ್ಲೊ ಪ್ರಜಾವಾಣಿಲೋ ಬಂದ್ರೆ ಅದೇ ಒಂದು ಸುದ್ದಿಯಾಗದು ಆ ಟೈಮಲ್ಲಿ. ಆಲನಹಳ್ಳಿ ’ಏನ್ಲ ರಾಮಣ್ಣ ಯಂಗಿದ್ದಿಲ’ ಅಂತ ಬಂದುಬುಡೋನು. ಅವುನು ಬಂದೇಟಿಗೆ ವಾಕ್ ಮಾಡೋರು. ನನಿಗೆ ರಾಮಣ್ಣ, ’ಹೋಗ್ಲಾ ಒಂದು ಮೂರು ಕಾಳು ಚೌಚೌ ತಗಂಬಾಲ ಅನ್ನೋನು’. ನಾನು ಹೋಗಿ ಕತೆಗಾರರಿಗೆ ಚೌಚೌ ಕಟ್ಟಿಸಿಗಂಡು ಬರಿವೆ”.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-2; ಮಂಡ್ಯಜಿಲ್ಲೆ ಒರಟುತನ ಇಲವಲ್ಲಾ, ಇಷ್ಟು ನಯವಂತಿಕೆ ಯಂಗೆ ಬತ್ತೂ ಅನ್ನಕಂಡೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...