Homeನಾನು ಗೌರಿಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ. ಬನ್ನಿ ನಮ್ಮೊಡನೆ ಮಾತನಾಡಿ

ಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ. ಬನ್ನಿ ನಮ್ಮೊಡನೆ ಮಾತನಾಡಿ

- Advertisement -
- Advertisement -

| ಡಾ. ವಾಸು ಎಚ್.ವಿ |

ದೇಶದ ಸಮಸ್ಯೆಗಳ ಸುತ್ತ ಚುನಾವಣೆ ಎದುರಿಸಲು ಹಿಂಜರಿಯುತ್ತಿರುವ ಬಿಜೆಪಿ

2019ರ ಚುನಾವಣೆಯ ಒಂದು ಅತೀ ಮುಖ್ಯ ಲಕ್ಷಣವೆಂದರೆ, ಅಧಿಕಾರಾರೂಢ ಪಕ್ಷವು ದೇಶದ ಜನರ ಅಸಲೀ ಸಮಸ್ಯೆಗಳು ಚುನಾವಣೆಯಲ್ಲಿ ಚರ್ಚೆಯಾಗಬಾರದೆಂದು ಬಯಸುತ್ತಿದೆ. ಅದಕ್ಕಾಗಿ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಇದಕ್ಕೆ ಕಾರಣಗಳಿವೆ.

ಇನ್ನು 10 ವರ್ಷಗಳ ಕಾಲ ನಾನೇ ಪ್ರಧಾನಿ ಎಂದು ಖಚಿತವಾಗಿ ಭಾವಿಸಿಕೊಂಡಿದ್ದ ಬಿಜೆಪಿಯ ನಂಬಿಕೆ ಮೂರೂವರೆ ವರ್ಷಗಳಲ್ಲೇ ಅಲ್ಲಾಡಿತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದರೂ ಸಂಭ್ರಮಿಸಲಾಗದಷ್ಟು ತೆಳ್ಳಗಿನ ಮಾರ್ಜಿನ್‍ನಲ್ಲಿ ಗೆದ್ದಿದ್ದರು. ಆ ನಂತರ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಲ್ಲಾ ಕಡೆ ಸೋತರಷ್ಟೇ ಅಲ್ಲದೇ, ಈ ಹಿಂದೆ ಅಧಿಕಾರದಲ್ಲಿದ್ದ ಮೂರು ದೊಡ್ಡ ರಾಜ್ಯಗಳನ್ನು ಕಳೆದುಕೊಂಡಿದ್ದರು. ಇಲ್ಲಿಂದ ಬಿಜೆಪಿಯ ಗ್ರಾಫ್ ಇಳಿಯುತ್ತಾ ಹೋಯಿತು. ಆದರೆ, ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯವರ ಜನಪ್ರಿಯತೆ ರಾಹುಲ್ ಗಾಂಧಿಗಿಂತ ಎಷ್ಟೋ ಮೇಲೆ ಇತ್ತು, ಇಂದಿಗೂ ಇದೆ.

ಅದು ಕುಸಿಯಲು ಆರಂಭಿಸಿದ್ದು ರಾಫೇಲ್ ಭ್ರಷ್ಟಾಚಾರದ ಸದ್ದು ಹೆಚ್ಚಾಗುತ್ತಾ ಹೋದಂತೆ. ಜನವರಿಯ ನಂತರ ನಡೆದ ಸಮೀಕ್ಷೆಗಳಲ್ಲೆಲ್ಲಾ ಬಿಜೆಪಿಯ ಕುಸಿತವು ಕಾಣುತ್ತಾ ಬಂದಿತು. ಮೊದಮೊದಲು ಬಿಜೆಪಿಗೆ ಬಹುಮತ ಬರಲ್ಲ ಅಂತ ಇದ್ದದ್ದು, ಎನ್‍ಡಿಎಗೂ ಬಹುಮತ ಬರಲ್ಲ ಅಂತ ಖಚಿತವಾಯಿತು. ಚುನಾವಣೆ ಹೊತ್ತಿಗೆ ಈ ಗ್ರಾಫ್ ಮತ್ತಷ್ಟು ಇಳಿದರೆ ಏನು ಮಾಡೋದು ಎನ್ನುವ ಚಿಂತೆಯಲ್ಲಿದ್ದ ಅವರಿಗೆ ಪುಲ್ವಾಮಾ ನೆರವಿಗೆ ಬಂದಿತು.

ಸಿಆರ್‍ಪಿಎಫ್ ಯೋಧರು ಸತ್ತಿದ್ದಕ್ಕೆ ಇಡೀ ದೇಶವೇ ಮರುಗಿತು. ಆದರೆ ಬಿಜೆಪಿಗೆ ಒಂಥರಾ ಸಂಭ್ರಮವಿತ್ತು. ಪಾಕಿಸ್ತಾನದ ಮೇಲೆ ಒಂದು ದಾಳಿ ನಡೆಸಿ (ಈ ದಾಳಿಯ ‘ಸಾಧನೆ’ಯ ಕುರಿತ ವಿವಾದಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ) ಮಸ್ಕುಲಾರ್ ನ್ಯಾಷನಲಿಸಂ ಮೂಲಕ ಚೇತರಿಕೆ ಪಡೆದುಕೊಳ್ಳಲು ನೋಡಿದರು. ಮಸ್ಕುಲಾರ್ ನ್ಯಾಷನಲಿಸಂ ಎಂದರೆ, ದೇಶದ ಅಸಲೀ ಸಮಸ್ಯೆಗಳನ್ನು ಬಗೆಹರಿಸಿ, ಜನರನ್ನು ಸಬಲಗೊಳಿಸಿ ದೇಶ ಕಟ್ಟುವ ಬದಲಿಗೆ ಹೊರಗಿನ ಶತ್ರುವಿನ ವಿರುದ್ಧ ತೋಳೇರಿಸುತ್ತಾ ತನ್ನ ಬಲ ಹೆಚ್ಚಿಸಿಕೊಳ್ಳುವುದು. ಒಂದು ವೇಳೆ ಶತ್ರು ಇಲ್ಲದಿದ್ದರೆ ಅಂತಹ ಶತ್ರುವನ್ನು ಸೃಷ್ಟಿಸುವುದು ಇದಕ್ಕೆ ಅಗತ್ಯವಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗೆ ನೆರವು ನೀಡುತ್ತಿರುವ ನೆರೆಯ ಪಾಕಿಸ್ತಾನ ಇರುವುದು ಬಿಜೆಪಿಗೆ ಬಹಳ ಅನುಕೂಲ. ಬಿಜೆಪಿ ಆಡಳಿತಾವಧಿಯಲ್ಲಿ ಹಿಂದಿಗಿಂತ ಹೆಚ್ಚು ಭಯೋತ್ಪಾದಕ ಚಟುವಟಿಕೆ ನಡೆದಿದ್ದರೂ, ಹೆಚ್ಚು ಸೈನಿಕರು ಸತ್ತಿದ್ದರೂ ಲೋಪ ಎಲ್ಲಾಯಿತು ಎಂದು ನೋಡಿಕೊಳ್ಳುವ ಬದಲು, ಸೈನಿಕರ ಶವವಿಟ್ಟುಕೊಂಡು ಅದರ ದುರ್ಬಳಕೆಗೆ ಮುಂದಾಯಿತು.

ನಿಧಾನಕ್ಕೆ ಈ ಏರ್‍ಸ್ಟ್ರೈಕ್‍ಗಳು ಜನರ ತಲೆಯಿಂದ ಮರೆಯಾಗುತ್ತಾ, ಅಸಲೀ ವಿಚಾರಗಳು ಮುಂದಕ್ಕೆ ಬಂದವು. ಜನರು ಮತ್ತೆ ನಿರುದ್ಯೋಗ, ರೈತರಿಗೆ ಬೆಲೆ ಇತ್ಯಾದಿಗಳನ್ನು ಮಾತಾಡುತ್ತಾ ಬಂದರು. ಜೊತೆಗೆ ರಾಹುಲ್‍ಗಾಂಧಿ ಬಡವರ ಖಾತೆಗೆ ಸರಾಸರಿ 72,000 ರೂ ಹಾಕುವ ನ್ಯಾಯ್ ಯೋಜನೆ ಪ್ರಕಟಿಸಿದರು. ಚರ್ಚೆ ಬಡವರ ಸುತ್ತಲೂ ಶುರುವಾಯಿತು.

ಇದೀಗ ಮತ್ತೆ ಮೋದಿಯವರು ರಂಗಕ್ಕಿಳಿದರು. ಇಸ್ರೋ ಮುಖ್ಯಸ್ಥರು ಮಾಡಬೇಕಾದ ಪ್ರಕಟಣೆಯನ್ನು ತಾವೇ ಮಾಡಲು ನಿಂತರು. ಸಿನೀಮಿಯಗೊಳಿಸಲು ಬೆಳಿಗ್ಗೆ 11ಕ್ಕೆ ಒಂದು ಟ್ವೀಟ್ ಮಾಡಿ, ತಾನು 11.45ಕ್ಕೆ ರಾಷ್ಟ್ರವನ್ನುದ್ದೇಶಿಸಿ ಮಾತಾಡಲಿದ್ದೇನೆಂದು ಘೋಷಿಸಿದರು. ಆ ನಂತರ 20 ನಿಮಿಷಕ್ಕೂ ಹೆಚ್ಚು ಕಾಯಿಸಿ ಭಾಷಣ ಮಾಡಿದರು. ನಿಸ್ಸಂದೇಹವಾಗಿ ದೇಶವು ಹೆಮ್ಮೆ ಪಟ್ಟುಕೊಳ್ಳಬೇಕಾದ ಒಂದು ಸಾಧನೆಯನ್ನು, ಈ ದೇಶದ ವಿಜ್ಞಾನಿಗಳ ಸಾಧನೆಯನ್ನು ಮುಂದಿಟ್ಟರು. ಆದರೆ, ಅವರ ಉದ್ದೇಶ ಅದಾಗಿರಲಿಲ್ಲ. ಮತ್ತೆ ಗೋದಿ ಮೀಡಿಯಾ ಒಂದು ವಾರ ಕಾಲ ಚರ್ಚೆಯನ್ನು ದೇಶದೊಳಗಿನ ಸಮಸ್ಯೆಗಳ ಕುರಿತು ಯಾರೂ ಮಾತಾಡದಂತೆ ನೋಡಿಕೊಳ್ಳುತ್ತದೆ ಎಂಬುದು ಅವರಿಗೆ ಗೊತ್ತು.

ಬಿಜೆಪಿಗೆ ಏಕೆ ಇಷ್ಟೊಂದು ಹೆದರಿಕೆ? ಈಗ ದೇಶದಲ್ಲಿ ಶೇ.25ರಷ್ಟು ಕಡುಬಡವರಿದ್ದು, ಅವರ ಅಕೌಂಟಿಗೆ ಹಣ ಹಾಕುತ್ತೇವೆಂದು ರಾಹುಲ್‍ಗಾಂಧಿ ಪ್ರಕಟಿಸಿದಾಗ ಅವರನ್ನು ಕೌಂಟರ್ ಮಾಡುವುದು ಕಷ್ಟವೇ? ಅಲ್ಲಾ ಕಣಪ್ಪಾ, ಈ ದೇಶದಲ್ಲಿ 40 ವರ್ಷ ನಿಮ್ಮ ಕುಟುಂಬದವರೇ ಆಳಿದ್ದೀರಿ, ಈಗಲೂ ಇಷ್ಟು ಕಡುಬಡವರು ಏಕಿದ್ದಾರೆ ಎಂದು ಕೇಳಬಹುದಲ್ಲವೇ? ನಿರುದ್ಯೋಗ, ರೈತರಿಗೆ ಒಳ್ಳೆಯ ಬೆಲೆ ಇತ್ಯಾದಿಗಳ ವಿಚಾರದಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಅದ್ಭುತವಾದದ್ದೇನೂ ಮಾಡಿಲ್ಲ. ಆದರೆ ಅದನ್ನು ಪ್ರಶ್ನೆ ಮಾಡಲು ಹೊರಟರೆ, ಹೌದು ಕಾಂಗ್ರೆಸ್ ಅದ್ಭುತವಾದದ್ದನ್ನು ಮಾಡಿರಲಿಲ್ಲ, ಬಿಜೆಪಿ ಪರಿಸ್ಥಿತಿಯನ್ನು ಮತ್ತಷ್ಟು ಅಧ್ವಾನಗೊಳಿಸಿತು ಎಂಬುದು ಬಯಲಾಗುತ್ತದೆ. ಇದೇ ನಿಮ್ಮ ಸಮಸ್ಯೆಯೇ?

ಗಡಿಯಿಂದ ಒಳಕ್ಕೆ ಬನ್ನಿ ಬಾಹ್ಯಾಕಾಶದಿಂದ ಕೆಳಗಿಳಿದು ಬನ್ನಿ. ದೇಶದ ಅಸಲೀ ಸಮಸ್ಯೆಗಳ ಕುರಿತು ಚರ್ಚಿಸಿ. ಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...