Homeಚಳವಳಿಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಉತ್ತರವಾಗಿದೆ: ಎಸ್‌ಕೆಎಂ

ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಉತ್ತರವಾಗಿದೆ: ಎಸ್‌ಕೆಎಂ

- Advertisement -
- Advertisement -

14 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 30 ವಿಧಾನಸಭಾ ಕ್ಷೇತ್ರಗಳು, ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ನೀಡಿದ ಉತ್ತರವಾಗಿದೆ.

ರೈತ ವಿರೋಧಿ ಕಾಯ್ದೆಗಳಿಗೆ ಉತ್ತರವನ್ನು ಉಪಚುನಾವಣೆಯ ಮೂಲಕ ಜನತೆ ನೀಡಿದ್ದಾರೆ. ಇದು ಬಿಜೆಪಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ. ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ತಾನದ ಫಲಿತಾಂಶಗಳು ಬಿಜೆಪಿಯ ವಿರುದ್ಧವಾಗಿ ಬಂದಿವೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಒಂದನ್ನು ಮಾತ್ರ ಬಿಜೆಪಿ ಗೆದ್ದಿದೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಹರಿಯಾಣ ಥರದ ರಾಜ್ಯಗಳು ವಿಧಾನಸಭಾ ಉಪಚುನಾಣೆಯಲ್ಲಿ ತಕ್ಕ ಉತ್ತರವನ್ನು ಬಿಜೆಪಿಗೆ ನೀಡಿವೆ. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ನಡೆಸುತ್ತಿರುವ ಚಳವಳಿಗೆ ಜನತೆ ಬೆಂಬಲ ನೀಡಿದ್ದಾರೆ.

“ಎಲ್ಲದಕ್ಕೂ ಮಾತುಕತೆಯೊಂದೇ ಪರಿಹಾರ, ಇದು ರೈತರ ಹೋರಾಟಕ್ಕೂ ಅನ್ವಯಿಸುತ್ತದೆ” ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೀಡಿರುವ ಹೇಳಿಕೆಗೆ ಎಸ್‌ಕೆಎಂ ಸಹಮತ ವ್ಯಕ್ತಪಡಿಸಿದೆ.

ಆದರೆ, ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಬಿಜೆಪಿ ಸಿದ್ಧವಿಲ್ಲ. ಕೊನೆಯ ಸುತ್ತಿನ ಮಾತುಕತೆಯು ಜನವರಿ 22, 2021ರಂದು ‌ಆಯಿತು. ಇದರ ನಂತರದಲ್ಲಿ ಮತ್ತೆ ಮಾತುಕತೆ ನಡೆಸಲು ಸರ್ಕಾರ ನಿರಾಕರಿಸಿದೆ.

ಇದನ್ನೂ ಓದಿರಿ: ಶೃಂಗಸಭೆ: ಮೋದಿ ಭೇಟಿ ವಿರೋಧಿಸಿ ಅನಿವಾಸಿ ಭಾರತೀಯರ ಪ್ರತಿಭಟನೆ

ಅಷ್ಟೇ ಅಲ್ಲದೆ ಖಟ್ಟರ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ರೈತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ.

ಹತ್ತಿ ಬೆಳೆಗೆ ಭಾರೀ ಕೀಟಗಳ ಹಾವಳಿಯಿಂದ ಉಂಟಾದ ಹಾನಿಯು ಪಂಜಾಬ್ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳಲ್ಲಿ ಹತ್ತಿ ರೈತರಿಗೆ ವ್ಯಾಪಕ ನಷ್ಟವನ್ನು ತಂದಿವೆ. ಇಂತಹ ನಷ್ಟ ಅನುಭವಿಸುತ್ತಿರುವ ರೈತರ ಹಲವಾರು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಎಕರೆಗೆ 60,000 ರೂ. ನಷ್ಟವಾಗಿದೆ. ಹಾನಿಯ ಪ್ರಮಾಣವನ್ನು ವರ್ಗೀಕರಿಸಿ ಎಕರೆಗೆ ₹ 2000ರಿಂದ ₹ 12,000ರವರೆಗೆ ಸರ್ಕಾರ ಪರಿಹಾರ ನೀಡುತ್ತದೆ. ನಷ್ಟದ ಒಂದು ಭಾಗವನ್ನೂ ಪರಿಹಾರದ ಹಣ ಭರಿಸುವುದಿಲ್ಲ.

ನಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಪ್ಯಾಕೇಜ್‌ಗಾಗಿ ಪಂಜಾಬ್ ರೈತ ಸಂಘಗಳು ಹೋರಾಟ ಮುಂದುವರಿಸಿವೆ. ಡಿಎಪಿಯಂತಹ ರಸಗೊಬ್ಬರದ ಕೊರತೆಯೂ ತಲೆದೋರಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಎಸ್‌ಕೆಎಂ ಒತ್ತಾಯಿಸಿದೆ. ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‌ಕೆಎಂ ಒತ್ತಾಯಿಸುತ್ತದೆ.

ಉಪಚುನಾವಣೆಯ ಫಲಿತಾಂಶ ಹೀಗಿದೆ:

1. ಆಂಧ್ರಪ್ರದೇಶ

  • ಬದ್ವೇಲ್‌ ಕ್ಷೇತ್ರ – ವೈಎಸ್‌ಆರ್‌‌ ಕಾಂಗ್ರೆಸ್‌

ಕ್ಷೇತ್ರವು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಹಿಡಿತದಲ್ಲಿತ್ತು. ಉಪಚುನಾವಣೆಯಲ್ಲಿ ತನ್ನಲ್ಲೇ ಉಳಿಸಿಕೊಂಡಿದೆ.

2. ಅಸ್ಸಾಂ

  • ಭನಾನಿಪುರ್‌ – ಬಿಜೆಪಿ
  • ಗೋಸಾಯಿಗಾಂವ್ –  ಯುಪಿಪಿಎಲ್‌ – (ಬಿಜೆಪಿ ಮೈತ್ರಿ ಪಕ್ಷ)
  • ಮರಿಯಾನಿ – ಬಿಜೆಪಿ
  • ತಮುಲ್‌ಪುರ್‌ – ಯುಪಿಪಿಎಲ್‌ – (ಬಿಜೆಪಿ ಮೈತ್ರಿ ಪಕ್ಷ)
  • ಥೌರಾ – ಬಿಜೆಪಿ

ಬಿಜೆಪಿ ಗೆದ್ದ ಮೂರು ಕ್ಷೇತ್ರಗಳಲ್ಲಿ ಎರಡು ಕಾಂಗ್ರೆಸ್‌‌ನ ಹಿಡಿತದಲ್ಲಿದ್ದ ಕ್ಷೇತ್ರಗಳಾಗಿದ್ದು, ಒಂದು ಕ್ಷೇತ್ರ AIUDF ಹಿಡಿತದಲ್ಲಿದ್ದವು. ಯುಪಿಪಿಎಲ್‌ ಗೆದ್ದ ಎರಡು ಕ್ಷೇತ್ರಗಳಲ್ಲಿ ಒಂದು ತನ್ನದೇ ಕ್ಷೇತ್ರವನ್ನು ಉಳಿಸಿಕೊಂಡಿದ್ದರೆ, ಮತ್ತೊಂದನ್ನು ಬೇರೆ ಪಕ್ಷದಿಂದ ತನ್ನ ತೆಕ್ಕೆಗೆ ಪಡೆದು ಕೊಂಡಿದೆ.

ಇದನ್ನೂ ಓದಿ: ನಾನೇಕೆ ಆರ್ ಎಸ್ ಎಸ್ ತೊರೆದೆ ಸರಣಿ; ದೇಶಕ್ಕಾಗಿ ಸಂಘದ ಸಖ್ಯ ಬಿಟ್ಟೆ!

3. ಬಿಹಾರ

  • ಕುಶೇಶ್ವರ ಆಸ್ಥಾನ – JDU
  • ತಾರಾಪುರ – JDU

ಕುಶೇಶ್ವರ ಆಸ್ಥಾನ ಕ್ಷೇತ್ರದಲ್ಲಿ ಜೆಡಿಯು ತನ್ನ ಕ್ಷೇತ್ರವನ್ನು ಉಳಿಕೊಂಡರೆ, ತಾರಾಪುರದಲ್ಲಿ ಕಳೆದುಕೊಂಡಿದೆ.

4. ಹರಿಯಾಣ

  • ಎಲ್ಲೇನಾಬಾದ್ – INLD ತನ್ನದೇ ಕ್ಷೇತ್ರವನ್ನು ಮತ್ತೇ ಗೆದ್ದುಕೊಂಡಿದೆ.

5. ಹಿಮಾಚಲ ಪ್ರದೇಶ

  • ಅರ್ಕಿ – ಕಾಂಗ್ರೆಸ್
  • ಫತೇಪುರ್ – ಕಾಂಗ್ರೆಸ್
  • ಜುಟ್ಟಬ್ – ಕಾಂಗ್ರೆಸ್

ಅರ್ಕಿ ಮತ್ತು ಫೆತೇಪುರ್‌ನಲ್ಲಿ ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದರೆ, ಜುಟ್ಟಬ್‌ನಲ್ಲಿ ಹೊಸದಾಗಿ ಕ್ಷೇತ್ರವನ್ನು ಗೆದ್ದುಕೊಂಡಿದೆ.

6. ಕರ್ನಾಟಕ

  • ಹಾನಗಲ್‌ – ಕಾಂಗ್ರೆಸ್
  • ಸಿಂದಗಿ – ಬಿಜೆಪಿ

ಕರ್ನಾಟಕದಲ್ಲಿ ಬಿಜೆಪಿ ವಶದಲ್ಲಿ ಇದ್ದ ಹಾನಗಲ್‌ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಂಡರೆ, ಜೆಡಿಎಸ್‌ ವಶದಲ್ಲಿದ್ದ ಸಿಂದಗಿಯನ್ನು ಬಿಜೆಪಿ ಗೆದ್ದುಕೊಂಡಿದೆ.

ಇದನ್ನೂ ಓದಿ: ಅಸ್ಸಾಂ: ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಸೋಲು; ಆಪರೇಷನ್‌ ಕಮಲಕ್ಕೆ ಜಯ!

7. ಮಧ್ಯಪ್ರದೇಶ

  • ಜೋಬತ್ – ಬಿಜೆಪಿ
  • ಪೃಥ್ವಿಪುರ – ಬಿಜೆಪಿ
  • ರಾಯಗಾಂವ್ – ಕಾಂಗ್ರೆಸ್

ಜೋಬತ್ ಮತ್ತು ಪೃಥ್ವಿಪುರ ಕ್ಷೇತ್ರವನ್ನು ಬಿಜೆಪಿ ಬೇರೆ ಪಕ್ಷದಿಂದ ವಶಪಡಿಸಿಕೊಂಡರೆ, ಕಾಂಗ್ರೆಸ್‌ ರಾಯಗಾಂವ್ ಕ್ಷೇತ್ರವನ್ನು ಅನ್ನು ಹೊಸದಾಗ ಗೆದ್ದುಕೊಂಡಿದೆ.

8. ಮಹಾರಾಷ್ಟ್ರ

  • ದೆಗ್ಲೂರ್ – ಕಾಂಗ್ರೆಸ್

ಈ ಕ್ಷೇತ್ರವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನಲ್ಲೇ ಉಳಿಸಕೊಂಡಿದೆ.

9. ಮೇಘಾಲಯ

  • ಮಾವ್‌ಫ್ಲಾಂಗ್‌ – ಯುನೈಟೆಡ್‌ ಡೆಮಾಕ್ರಟಿಕ್ ಪಾರ್ಟಿ
  • ಮೌರಿಂಗ್‌ಕೆಂಗ್ – ಯುನೈಟೆಡ್‌ ಡೆಮಾಕ್ರಟಿಕ್ ಪಾರ್ಟಿ
  • ರಾಜಬಾಲಾ – ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ

10. ಮಿಜೋರಾಂ

  • ಟುಯಿರಿಯಲ್ – ಮಿಜೋ ನ್ಯಾಶನಲ್ ಫ್ರಂಟ್

ಬೇರೆ ಪಕ್ಷದಿಂದ ಕ್ಷೇತ್ರವನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ: ಹರಿಯಾಣ ಉಪಚುನಾವಣೆ: ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜೀನಾಮೆ ಕೊಟ್ಟಿದ್ದ ಅಭಯ್ ಚೌಟಾಲಾಗೆ ಗೆಲುವು

11. ನಾಗಾಲ್ಯಾಂಡ್

  • ಶಮ್ಟೋರ್ – ನ್ಯಾಶನಲಿಸ್ಟಿಕ್‌ ಡೆಮಾಕ್ರಟಿಕ್ ಪ್ರೊಗ್ರೇಸಿವ್ ಪಾರ್ಟಿ

ಅವಿರೋಧ ಆಯ್ಕೆ!

12. ರಾಜಸ್ಥಾನ

  • ಧರಿಯಾವಾಡ – ಕಾಂಗ್ರೆಸ್
  • ವಲ್ಲಭನಗರ – ಕಾಂಗ್ರೆಸ್

ಇಲ್ಲಿ ಕಾಂಗ್ರೆಸ್ ಒಂದು ತನ್ನದೇ ಕ್ಷೇತ್ರನ್ನು ಉಳಿಸಿಕೊಂಡು, ಮತ್ತೊಂದು ಕ್ಷೇತ್ರವನ್ನು ಬೇರೆ ಪಕ್ಷದಿಂದ ವಶಕ್ಕೆ ಪಡೆದಿದೆ.

13. ತೆಲಂಗಾಣ

  • ಹುಜೂರಾಬಾದ್ – ಬಿಜೆಪಿ

ಟಿಆರ್‌ಎಸ್‌ ಪಕ್ಷದಿಂದ ಬಿಜೆಪಿಯು ಈ ಕ್ಷೇತ್ರವನ್ನು ಗೆದ್ದುಕೊಂಡಿದೆ.

14. ಪಶ್ಚಿಮ ಬಂಗಾಳ

  • ದೀನ್‌ಹಟಾ – ಟಿಎಂಸಿ
  • ಗೋಸಾಬ – ಟಿಎಂಸಿ
  • ಖಾರ್ದಹೊ – ಟಿಎಂಸಿ
  • ಶಾಂತಿಪುರ – ಟಿಎಂಸಿ

ಇಲ್ಲಿ ಎರಡು ಕ್ಷೇತ್ರಗಳನ್ನು ಟಿಎಂಸಿ ತನ್ನದೇ ಕ್ಷೇತ್ರವನ್ನು ಗೆದ್ದುಕೊಂಡು, ಮತ್ತೆರೆಡು ಕ್ಷೇತ್ರವನ್ನು ಬಿಜೆಪಿಯಿಂದ ಗೆದ್ದುಕೊಂಡಿದೆ.

ಇದನ್ನೂ ಓದಿ: ಚುನಾವಣೆ ವಿಶ್ಲೇಷಣೆ: ಹಾನಗಲ್‌ನಲ್ಲಿ ಬಿಜೆಪಿ ಸೋತಿದ್ದೇಕೆ? ಕ್ಷೇತ್ರದ ಮತದಾರರ ವೈಶಿಷ್ಟ್ಯವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...