Homeಮುಖಪುಟಮಾನವ ಹಕ್ಕು ಚಳುವಳಿಯ ಮುಂಚೂಣಿ ನಾಯಕ ಎಸ್. ಶೇಷಯ್ಯ

ಮಾನವ ಹಕ್ಕು ಚಳುವಳಿಯ ಮುಂಚೂಣಿ ನಾಯಕ ಎಸ್. ಶೇಷಯ್ಯ

ಬೆಂಗಳೂರಿನಲ್ಲಿ 1993ರಲ್ಲಿ ಸ್ಥಾಪನೆಗೊಂಡ ಪ್ರಜಾತಾಂತ್ರಿಕ ಜನರ ವೇದಿಕೆ(ಪಿಡಿಎಫ್)ಗೆ ತುಂಬ ಹತ್ತಿರವಾಗಿದ್ದ ಶೇಷಯ್ಯನವರು ನಮ್ಮ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

- Advertisement -
- Advertisement -

ಅಕ್ಟೋಬರ್ 10, 2020 ರಂದು ನಿಧನರಾದ ಶೇಷಯ್ಯನವರ ಬಗ್ಗೆ ಮಾತನಾಡುವುದೆಂದರೆ ಭಾರತದ ಮುಖ್ಯವಾಗಿ ಆಂಧ್ರ ಪ್ರದೇಶದ ಮಾನವಹಕ್ಕು ಚಳುವಳಿಯ ಚರಿತ್ರೆಯ ಕೆಲವು ಮುಖ್ಯ ಅಧ್ಯಾಯಗಳನ್ನು ನೆನಪಿಸಿಕೊಂಡತೆಯೇ. ಇಲ್ಲಿನ ಸಾಮಾಜಿಕ ಸಂರಚನೆಯ ಭಾಗವಾದ ಶ್ರೇಣಿಕರಣದಿಂದಾಗಿ ಹಿಂದಿನಿಂದಲೂ ಮಾನವ ಹಕ್ಕು ಪರಿಕಲ್ಪನೆಯೇ ಭಾರತೀಯ ಲೋಕದೃಷ್ಟಿಯ ಭಾಗವಾಗಿರಲು ಸಾಧ್ಯವಿರಲಿಲ್ಲ. ‘ವಸುಧೈವ ಕುಟುಂಬಕಂ’ನಂಥ ಮಾತುಗಳು ಆಗಾಗ ಕೇಳಿ ಬರುತ್ತಿದ್ದರೂ ಅಂಥ ಹೇಳಿಕೆಗಳು ಕೇವಲ ಶಬ್ದಗಳಾಗಿ ಉಳಿದಿವೆಯೇ ಹೊರತು ಸಾಮಾಜಿಕ ನೀತಿ, ಆಚರಣೆಗಳಲ್ಲಿ ಸ್ಪಷ್ಟ ರೂಪ ತಳೆಯಲಿಲ್ಲ. ಜಗತ್ತಿನಾದ್ಯಂತ, ಸ್ಪಷ್ಟವಾಗಿ ಪಾಶ್ಚಾತ್ಯ ದೇಶಗಳಲ್ಲಿ ಪ್ರಜಾತಾಂತ್ರಿಕ ಚಳವಳಿಗಳು ಮೈಕೊಡವಿಕೊಂಡು ಜನರ ನಡುವೆ ಎದ್ದು ನಿಂತಿದ್ದರಿಂದ ಮತ್ತು 1948ರ ಡಿಸೆಂಬರ್ 10ರಂದು ವಿಶ್ವಸಂಸ್ಥೆ ಪ್ರಕಟಿಸಿದ ಜಾಗತಿಕ ಮಾನವನ ಹಕ್ಕುಗಳ ಘೋಷಣೆ (ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್)ಯಿಂದಾಗಿ ಎಲ್ಲೆಡೆಯೂ ಜನತಾಂತ್ರಿಕ ಆಶೋತ್ತರಗಳು ಮೊಳಗಿದವು. ಅದೇ ಸ್ಫೂರ್ತಿಯಿಂದ ಭಾರತದ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ಅಭಿವ್ಯಕ್ತಿಗೊಂಡವು. ಭಾರತೀಯ ಸಮಾಜದ ಜಾತಿ ಶ್ರೇಣಿಕರಣದ ವಿರುದ್ಧ ಸಾಂವಿಧಾನಿಕ ಸಮರವನ್ನು ಸಾರಿದ ಡಾ.ಬಿ.ಆರ್. ಅಂಬೇಡ್ಕರರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸಂವಿಧಾನವು ಮಾನವ ಹಕ್ಕುಗಳಿಗೆ ವೈಯಕ್ತಿಕ ನೀತಿಯಲ್ಲಿ ಮಾತ್ರವಲ್ಲದೆ ಸಾಮುದಾಯಿಕವಾಗಿಯೂ ಬೇಕಾದ ಹೊಸ ವ್ಯಾಖ್ಯಾನವನ್ನು ಒದಗಿಸಿತು.

ಈ ಪ್ರಜಾತಾಂತ್ರಿಕ ಚಿಂತನೆಯನ್ನೇ ಮೂಲದಲ್ಲಿ ಹೊಂದಿದ್ದ ಹಲವು ಸಂಘಟನೆಗಳು ರೂಪುತಳೆದು ಎಲ್ಲ ರೀತಿಯ ಅಸಮಾನತೆಗಳನ್ನು, ದೌರ್ಜನ್ಯಗಳನ್ನು ವಿಮರ್ಶೆಗೆ ಒಳಪಡಿಸಿ ಸಮಾಜದಲ್ಲಿ ಹೊಸ ಅಶಯವನ್ನು ಮೂಡಿಸಲು ಯತ್ನಿಸಿದವು. ಮುಖ್ಯವಾಗಿ ಮಾನವಹಕ್ಕುಗಳ ರಕ್ಷಣೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಮಾನವಹಕ್ಕು ಸಂಸ್ಥೆಗಳಲ್ಲಿ ಆಂಧ್ರಪ್ರದೇಶ್ ಸಿವಿಲ್ ಲಿಬರ್ಟೀಸ್ ಕಮಿಟಿ ಅತ್ಯಂತ ಪ್ರಮುಖವಾದ ಸಂಘಟನೆ. ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಜನರ ಪರವಾಗಿ ಮಾತ್ರವಲ್ಲದೆ, ಆಡಳಿತ ಯಂತ್ರಾಂಗದ ದಾಳಿಗಳಿಗೆ ಗುರಿಯಾದ ಹೋರಾಟಗಾರರು ಅನುಭವಿಸುತ್ತಿದ್ದ ಹಕ್ಕುಗಳ ಉಲ್ಲಂಘನೆಗಳ ಕುರಿತೂ ಸಹ ಈ ಸಂಸ್ಥೆ ತನ್ನ ಸತ್ಯಶೋಧಕ ಸಮಿತಿಗಳ ಮೂಲಕ ದನಿ ಎತ್ತಿತ್ತು. 1974ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಹಲವಾರು ನಾಯಕರು 1975ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಸೆರೆಮನೆವಾಸವನ್ನು ಎದುರಿಸಬೇಕಾಯಿತು ಕೂಡ.

ಪ್ರೊ. ಎಸ್. ಶೇಷಯ್ಯನವರು ವಿಧ್ಯಾರ್ಥಿಯಾಗಿದ್ದಾಗಲೇ ಕ್ರಾಂತಿಕಾರಿ ಚಿಂತನೆ ಮತ್ತು ಚಳುವಳಿಗಳ ಕಡೆಗೆ ಆಕರ್ಷಿತರಾದವರು. ಕಾಲೇಜಿನ ದಿನಗಳಲ್ಲಿ ಅಂದಿನ ಪ್ರಮುಖ ವಿದ್ಯಾರ್ಥಿ ಸಂಘಟನೆಯಾದ ಕ್ರಾಂತಿಕಾರಿ ವಿದ್ಯಾರ್ಥಿ ಸಂಘ (ರೆವಲ್ಯೂಷನರಿ ಸ್ಟುಡೆಂಟ್ಸ್ ಯೂನಿಯನ್-ಆರ್‌ಎಸ್‍ಯು)ದ ನಾಯಕರಾಗಿ ಬೆಳೆದರು. ಅದೇ ಸಮಯದಲ್ಲಿ ತಮ್ಮ ವಿದ್ಯಾಭ್ಯಾಸವನ್ನೂ ಯಶಸ್ವಿಯಾಗಿ ಮುಂದುವರೆಸಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಹಲವು ದಶಕಗಳ ಕಾಲ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿ ಕಾರ್ಯನಿರ್ವಹಿಸಿದರು.

ಒಂದು ವಿಶ್ವವಿದ್ಯಾಲಯದಲ್ಲಿನ ಅಧ್ಯಾಪಕ ವೃತ್ತಿ ಒದಗಿಸಬಹುದಾದ ಎಲ್ಲ ಸುಖ, ಸವಲತ್ತುಗಳಿಂದ ಕೂಡಿದ ಜೀವನಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೆ ಶೇಷಯ್ಯನವರು ಅಂದಿಗೆ ಆ ರಾಜ್ಯದಲ್ಲಿ ಪ್ರಸಿದ್ಧವಾಗಿದ್ದ ಆಂಧ್ರಪ್ರದೇಶ್ ಸಿವಿಲ್ ಲಿಬರ್ಟೀಸ್ ಕಮಿಟಿಯ ಸಕ್ರಿಯ ಕಾರ್ಯಕರ್ತರಾದರು. ತಮ್ಮ ಸಂಘಟನೆಯ ಪರವಾಗಿ, ದೇಶದೆಲ್ಲೆಡೆಗಿಂತ ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಮಾನವಹಕ್ಕು ಉಲ್ಲಂಘನೆಯ ಪ್ರಕರಣಗಳನ್ನು ಬಯಲಿಗೆಳೆಯುತ್ತಿದ್ದರು. ಆ ಹೊತ್ತಿಗಾಗಲೇ ಡಾ. ಕೆ. ಬಾಲಗೋಪಾಲ್‍ರಂಥ ನಾಯಕರು ಹಾಕಿಕೊಟ್ಟಿದ್ದ ದಾರಿಯಲ್ಲೇ ಮುನ್ನಡೆದರು.

ಆಂಧ್ರಪ್ರದೇಶದ ಈ ಮಾನವಹಕ್ಕು ಸಂಘಟನೆ ಅಲ್ಲಿನ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ತನ್ನ ವಿರೋಧಿಗಳನ್ನು ‘ಎನ್‍ಕೌಂಟರ್’ಗಳ ಮೂಲಕ ಇಲ್ಲವಾಗಿಸುವುದೇ ಅಲ್ಲದೆ, ಈ ಸಂಘಟನೆಯ ನಾಯಕರ ಮೇಲೆ ಸಹ ದಾಳಿಗಳು ನಡೆದವು. ಗ್ರೀನ್‍ಟೈಗರ್ಸ್, ಕೋಬ್ರಾದಂಥ ಹೆಸರುಗಳನ್ನು ಹೊಂದಿದ್ದ ಪೊಲೀಸ್ ಗುಂಪುಗಳು ಅಥವಾ ಇಲಾಖೆಯ ಬೆಂಬಲವನ್ನು ಪಡೆದಿದ್ದ ಹಂತಕ ಗುಂಪುಗಳು ಮಾನವಹಕ್ಕು ಸಂಘಟನೆಯ ನಾಯಕರನ್ನು ಕೊಲೆ ಮಾಡುವಲ್ಲಿ ನಿರತರಾಗಿದ್ದವು. ಹೈದರಾಬಾದ್ ಕೆ. ಪುರುಷೋತ್ತಂ ಮತ್ತು ನಲ್ಗೊಂಡದಲ್ಲಿ ಆಜಂ ಆಲಿಯಂಥ ನಾಯಕರು (ಅದಕ್ಕೂ ಮೊದಲು ಹತರಾಗಿದ್ದ ನಾಯಕರ ರೀತಿಯಲ್ಲಿ) ಕೊಲೆಗೀಡಾದ ಸಂದರ್ಭದಲ್ಲಿ 1998ರಲ್ಲಿ ಶೇಷಯ್ಯನವರು ಎಪಿಸಿಎಲ್‍ಸಿಯ ಕಾರ್ಯದರ್ಶಿಯಾದರು.

ನಂತರದ ದಿನಗಳಲ್ಲಿ ಆಂಧ್ರಪ್ರದೇಶ ಎರಡು ರಾಜ್ಯಗಳಾಗಿ ವಿಭಜನೆಗೊಂಡು ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಸಿಎಲ್‍ಸಿ (ಸಿವಿಲ್ ಲಿಬರ್ಟೀಸ್ ಕಮಿಟಿ) ಹೆಸರಿನಲ್ಲಿ ಮುಂದುವರೆದ ಸಂಘಟನೆಗಳ ಸಂಯೋಜಕರಾಗಿ ಎರಡೂ ತೆಲುಗು ರಾಜ್ಯಗಳಲ್ಲಿ ಮಾನವಹಕ್ಕು ಚಳವಳಿಯ ನೆಲೆಯನ್ನು ಇನ್ನೂ ಭದ್ರಗೊಳಿಸಿದರು. ಅಲ್ಲದೆ ದೇಶಾದ್ಯಂತ ಸರ್ಕಾರಗಳನ್ನು ವಿರೋಧಿಸಿ ಜೈಲುಸೇರಿದ್ದ ರಾಜಕೀಯ ಬಂದಿಗಳ ಬಿಡುಗಡೆಗಾಗಿ ನಡೆಯುತ್ತಿದ್ದ ಪ್ರಯತ್ನಗಳ ಭಾಗವೂ ಆಗಿದ್ದರು.

ಎಪಿಸಿಎಲ್‍ಸಿಯ ಹಿಂದಿನ ನಾಯಕರ ವಿಷಯದಲ್ಲಿ ನಡೆದಂತೆ ಶೇಷಯ್ಯನವರ ಮೇಲೆ ಸಹ ದಾಳಿ ನಡೆಯಿತು. ರಾಯಲಸೀಮ ಟೈಗರ್ಸ್ ಹೆಸರಿನಲ್ಲಿನ ಒಂದು ಗುಂಪು ಅನಂತಪುರದಲ್ಲಿ ಅವರ ಮನೆಯ ಮೇಲೆ ದಾಳಿ ನಡೆಸಿ ಹೊರಗೆ ನಿಲ್ಲಿಸಿದ್ದ ಕಾರನ್ನು ಧ್ವಂಸಗೊಳಿಸಿತು. ಆದರೆ ಶೇಷಯ್ಯನವರು ಈ ಘಟನೆಯಿಂದಾಗಿ ಧೃತಿಗೆಡದೆ ತಮ್ಮ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂದುವರೆದರು.

ಬೆಂಗಳೂರಿನಲ್ಲಿ 1993ರಲ್ಲಿ ಸ್ಥಾಪನೆಗೊಂಡ ಪ್ರಜಾತಾಂತ್ರಿಕ ಜನರ ವೇದಿಕೆ(ಪಿಡಿಎಫ್)ಗೆ ತುಂಬ ಹತ್ತಿರವಾಗಿದ್ದ ಶೇಷಯ್ಯನವರು ಇದರ ಸದಸ್ಯರಿಗೆ ಆತ್ಮೀಯ ಸ್ನೇಹಿತರಾಗಿದ್ದರು. ನಮ್ಮ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಮತ್ತು ಬೆಂಗಳೂರಿಗೂ ಭೇಟಿ ನೀಡಿದ್ದರು. ಈ ಮೂಲಕ ಅವರು ಕರ್ನಾಟಕದ ಮಾನವಹಕ್ಕು ಚಳವಳಿಗೂ ಸೇರಿದವರಾದರು.

ಪ್ರೊ. ಶೇಷಯ್ಯನವರು ಕೋವಿಡ್‍ಗೆ ಬಲಿಯಾದಾಗ ಅವರಿಗೆ 64 ವರ್ಷ ವಯಸ್ಸು. ಅನಂತಪುರದ ಆಸ್ಪತ್ರೆಯಲ್ಲಿ ಮೊದಲು ದಾಖಲಾಗಿ ನಂತರ ಹೈದರಾಬಾದಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ ಶೇಷಯ್ಯನವರು ಜೀವಂತವಾಗಿ ಅನಂತಪುರಕ್ಕೆ ಮರಳಲಿಲ್ಲ. ಅವರ ಮರಣ ನಿಜವಾದ ಅರ್ಥದಲ್ಲಿ ದೇಶದ ಮಾನವಹಕ್ಕು ಚಳವಳಿಗೆ ತುಂಬಲಾರದ ನಷ್ಟ! ಪಿಡಿಎಫ್‍ನ ಸದಸ್ಯರಾದ ನಮಗೆ ಒಬ್ಬ ಆತ್ಮೀಯ ಗೆಳೆಯನನ್ನು ಕಳೆದುಕೊಂಡ ನೋವು ಕಾಡುತ್ತಿದೆ.

ಶೇಷಯ್ಯನವರಿಗೆ ಗೌರವಪೂರ್ವಕ ನಮನಗಳು.


ಇದನ್ನೂ ಓದಿ: ಶ್ರಧ್ಧಾಂಜಲಿ: ಜನಪರ ಚಳವಳಿಯ ಮಾರ್ಗದರ್ಶಕ – ಧೀರ ಹೋರಾಟಗಾರ ಮಾರುತಿ ಮಾನ್ಪಡೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾಕ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ

ಇರಾಕಿನ ರಾಜಧಾನಿ ಬಾಗ್ದಾದ್‌ನಲ್ಲಿ ಒಂದು ವಾರದ ಹಿಂದೆ ಅಪಹರಿಸಲ್ಪಟ್ಟಿದ್ದ ಅಮೆರಿಕದ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಮಾರ್ಚ್ 31ರಂದು ಶೆಲ್ಲಿ...

ಅಸ್ಸಾಂನ ನಾಗಾಂವ್‌ನಲ್ಲಿ ದರೋಡೆ ಶಂಕೆಯ ಮೇಲೆ ಗುಂಪು ದಾಳಿ: ಮೂವರು ಮುಸ್ಲಿಂ ಪುರುಷರು ಸಾವು

ದರೋಡೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದ ಗುಂಪು ದಾಳಿಯಲ್ಲಿ ಮೂವರು ಮುಸ್ಲಿಂ ಪುರುಷರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸೈಫುಲ್ಲಾ, ಅಜೀಬುರ್ ಅಲಿಯಾಸ್ ಖೈರುಲ್ ಮತ್ತು ಇನಾಮುಲ್...

ಏ.10ರಂದು ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್ ಶಾಂತಿ ಮಾತುಕತೆ : 10 ಷರತ್ತುಗಳನ್ನು ಮುಂದಿಟ್ಟ ಇರಾನ್

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ಆಯೋಜಿಸಲಾಗಿದೆ. ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವಿನ ಈ ಮಹತ್ವದ ಮಾತುಕತೆಯು 2026ರ ಏಪ್ರಿಲ್ 10ರಂದು (ಶುಕ್ರವಾರ) ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ...

ಕದನ ವಿರಾಮ | ಟ್ರಂಪ್ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ; ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದ ನೆತನ್ಯಾಹು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಎರಡು ವಾರಗಳ ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಕದನ ವಿರಾಮವು ಕೇವಲ ಇರಾನ್‌ಗೆ ಮಾತ್ರ ಸೀಮಿತವಾಗಿದ್ದು, ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ತಕ್ಷಣವೇ ಹಾರ್ಮುಝ್...

ಹಾರ್ಮುಝ್ ಜಲಸಂಧಿಯ ಮೂಲಕ ಎರಡು ವಾರಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ : ಇರಾನ್ ಭರವಸೆ

ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಹಿನ್ನೆಲೆ, ಹಾರ್ಮುಝ್ ಜಲಸಂಧಿ  ಮೂಲಕ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡುವುದಾಗಿ ಇರಾನ್ ಭರವಸೆ ನೀಡಿದೆ. ವಿಶ್ವದ ಒಟ್ಟು ಪೆಟ್ರೋಲಿಯಂ ರಫ್ತಿನ...

ಇರಾನ್ ಮೇಲಿನ ದಾಳಿ ಸ್ಥಗಿತ : ಎರಡು ವಾರಗಳ ಕದನ ವಿರಾಮ ಘೋಷಿಸಿದ ಟ್ರಂಪ್

ಇರಾನ್ ಮೇಲೆ ನಡೆಸುತ್ತಿರುವ ಬಾಂಬ್ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಭಾರತೀಯ ಕಾಲಮಾನ ಏ.8) ಹೇಳಿದ್ದಾರೆ. ಪಾಕಿಸ್ತಾನ...

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...