Homeಮುಖಪುಟಮಾನವ ಹಕ್ಕು ಚಳುವಳಿಯ ಮುಂಚೂಣಿ ನಾಯಕ ಎಸ್. ಶೇಷಯ್ಯ

ಮಾನವ ಹಕ್ಕು ಚಳುವಳಿಯ ಮುಂಚೂಣಿ ನಾಯಕ ಎಸ್. ಶೇಷಯ್ಯ

ಬೆಂಗಳೂರಿನಲ್ಲಿ 1993ರಲ್ಲಿ ಸ್ಥಾಪನೆಗೊಂಡ ಪ್ರಜಾತಾಂತ್ರಿಕ ಜನರ ವೇದಿಕೆ(ಪಿಡಿಎಫ್)ಗೆ ತುಂಬ ಹತ್ತಿರವಾಗಿದ್ದ ಶೇಷಯ್ಯನವರು ನಮ್ಮ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

- Advertisement -
- Advertisement -

ಅಕ್ಟೋಬರ್ 10, 2020 ರಂದು ನಿಧನರಾದ ಶೇಷಯ್ಯನವರ ಬಗ್ಗೆ ಮಾತನಾಡುವುದೆಂದರೆ ಭಾರತದ ಮುಖ್ಯವಾಗಿ ಆಂಧ್ರ ಪ್ರದೇಶದ ಮಾನವಹಕ್ಕು ಚಳುವಳಿಯ ಚರಿತ್ರೆಯ ಕೆಲವು ಮುಖ್ಯ ಅಧ್ಯಾಯಗಳನ್ನು ನೆನಪಿಸಿಕೊಂಡತೆಯೇ. ಇಲ್ಲಿನ ಸಾಮಾಜಿಕ ಸಂರಚನೆಯ ಭಾಗವಾದ ಶ್ರೇಣಿಕರಣದಿಂದಾಗಿ ಹಿಂದಿನಿಂದಲೂ ಮಾನವ ಹಕ್ಕು ಪರಿಕಲ್ಪನೆಯೇ ಭಾರತೀಯ ಲೋಕದೃಷ್ಟಿಯ ಭಾಗವಾಗಿರಲು ಸಾಧ್ಯವಿರಲಿಲ್ಲ. ‘ವಸುಧೈವ ಕುಟುಂಬಕಂ’ನಂಥ ಮಾತುಗಳು ಆಗಾಗ ಕೇಳಿ ಬರುತ್ತಿದ್ದರೂ ಅಂಥ ಹೇಳಿಕೆಗಳು ಕೇವಲ ಶಬ್ದಗಳಾಗಿ ಉಳಿದಿವೆಯೇ ಹೊರತು ಸಾಮಾಜಿಕ ನೀತಿ, ಆಚರಣೆಗಳಲ್ಲಿ ಸ್ಪಷ್ಟ ರೂಪ ತಳೆಯಲಿಲ್ಲ. ಜಗತ್ತಿನಾದ್ಯಂತ, ಸ್ಪಷ್ಟವಾಗಿ ಪಾಶ್ಚಾತ್ಯ ದೇಶಗಳಲ್ಲಿ ಪ್ರಜಾತಾಂತ್ರಿಕ ಚಳವಳಿಗಳು ಮೈಕೊಡವಿಕೊಂಡು ಜನರ ನಡುವೆ ಎದ್ದು ನಿಂತಿದ್ದರಿಂದ ಮತ್ತು 1948ರ ಡಿಸೆಂಬರ್ 10ರಂದು ವಿಶ್ವಸಂಸ್ಥೆ ಪ್ರಕಟಿಸಿದ ಜಾಗತಿಕ ಮಾನವನ ಹಕ್ಕುಗಳ ಘೋಷಣೆ (ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್)ಯಿಂದಾಗಿ ಎಲ್ಲೆಡೆಯೂ ಜನತಾಂತ್ರಿಕ ಆಶೋತ್ತರಗಳು ಮೊಳಗಿದವು. ಅದೇ ಸ್ಫೂರ್ತಿಯಿಂದ ಭಾರತದ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ಅಭಿವ್ಯಕ್ತಿಗೊಂಡವು. ಭಾರತೀಯ ಸಮಾಜದ ಜಾತಿ ಶ್ರೇಣಿಕರಣದ ವಿರುದ್ಧ ಸಾಂವಿಧಾನಿಕ ಸಮರವನ್ನು ಸಾರಿದ ಡಾ.ಬಿ.ಆರ್. ಅಂಬೇಡ್ಕರರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸಂವಿಧಾನವು ಮಾನವ ಹಕ್ಕುಗಳಿಗೆ ವೈಯಕ್ತಿಕ ನೀತಿಯಲ್ಲಿ ಮಾತ್ರವಲ್ಲದೆ ಸಾಮುದಾಯಿಕವಾಗಿಯೂ ಬೇಕಾದ ಹೊಸ ವ್ಯಾಖ್ಯಾನವನ್ನು ಒದಗಿಸಿತು.

ಈ ಪ್ರಜಾತಾಂತ್ರಿಕ ಚಿಂತನೆಯನ್ನೇ ಮೂಲದಲ್ಲಿ ಹೊಂದಿದ್ದ ಹಲವು ಸಂಘಟನೆಗಳು ರೂಪುತಳೆದು ಎಲ್ಲ ರೀತಿಯ ಅಸಮಾನತೆಗಳನ್ನು, ದೌರ್ಜನ್ಯಗಳನ್ನು ವಿಮರ್ಶೆಗೆ ಒಳಪಡಿಸಿ ಸಮಾಜದಲ್ಲಿ ಹೊಸ ಅಶಯವನ್ನು ಮೂಡಿಸಲು ಯತ್ನಿಸಿದವು. ಮುಖ್ಯವಾಗಿ ಮಾನವಹಕ್ಕುಗಳ ರಕ್ಷಣೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಮಾನವಹಕ್ಕು ಸಂಸ್ಥೆಗಳಲ್ಲಿ ಆಂಧ್ರಪ್ರದೇಶ್ ಸಿವಿಲ್ ಲಿಬರ್ಟೀಸ್ ಕಮಿಟಿ ಅತ್ಯಂತ ಪ್ರಮುಖವಾದ ಸಂಘಟನೆ. ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಜನರ ಪರವಾಗಿ ಮಾತ್ರವಲ್ಲದೆ, ಆಡಳಿತ ಯಂತ್ರಾಂಗದ ದಾಳಿಗಳಿಗೆ ಗುರಿಯಾದ ಹೋರಾಟಗಾರರು ಅನುಭವಿಸುತ್ತಿದ್ದ ಹಕ್ಕುಗಳ ಉಲ್ಲಂಘನೆಗಳ ಕುರಿತೂ ಸಹ ಈ ಸಂಸ್ಥೆ ತನ್ನ ಸತ್ಯಶೋಧಕ ಸಮಿತಿಗಳ ಮೂಲಕ ದನಿ ಎತ್ತಿತ್ತು. 1974ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಹಲವಾರು ನಾಯಕರು 1975ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಸೆರೆಮನೆವಾಸವನ್ನು ಎದುರಿಸಬೇಕಾಯಿತು ಕೂಡ.

ಪ್ರೊ. ಎಸ್. ಶೇಷಯ್ಯನವರು ವಿಧ್ಯಾರ್ಥಿಯಾಗಿದ್ದಾಗಲೇ ಕ್ರಾಂತಿಕಾರಿ ಚಿಂತನೆ ಮತ್ತು ಚಳುವಳಿಗಳ ಕಡೆಗೆ ಆಕರ್ಷಿತರಾದವರು. ಕಾಲೇಜಿನ ದಿನಗಳಲ್ಲಿ ಅಂದಿನ ಪ್ರಮುಖ ವಿದ್ಯಾರ್ಥಿ ಸಂಘಟನೆಯಾದ ಕ್ರಾಂತಿಕಾರಿ ವಿದ್ಯಾರ್ಥಿ ಸಂಘ (ರೆವಲ್ಯೂಷನರಿ ಸ್ಟುಡೆಂಟ್ಸ್ ಯೂನಿಯನ್-ಆರ್‌ಎಸ್‍ಯು)ದ ನಾಯಕರಾಗಿ ಬೆಳೆದರು. ಅದೇ ಸಮಯದಲ್ಲಿ ತಮ್ಮ ವಿದ್ಯಾಭ್ಯಾಸವನ್ನೂ ಯಶಸ್ವಿಯಾಗಿ ಮುಂದುವರೆಸಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಹಲವು ದಶಕಗಳ ಕಾಲ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿ ಕಾರ್ಯನಿರ್ವಹಿಸಿದರು.

ಒಂದು ವಿಶ್ವವಿದ್ಯಾಲಯದಲ್ಲಿನ ಅಧ್ಯಾಪಕ ವೃತ್ತಿ ಒದಗಿಸಬಹುದಾದ ಎಲ್ಲ ಸುಖ, ಸವಲತ್ತುಗಳಿಂದ ಕೂಡಿದ ಜೀವನಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೆ ಶೇಷಯ್ಯನವರು ಅಂದಿಗೆ ಆ ರಾಜ್ಯದಲ್ಲಿ ಪ್ರಸಿದ್ಧವಾಗಿದ್ದ ಆಂಧ್ರಪ್ರದೇಶ್ ಸಿವಿಲ್ ಲಿಬರ್ಟೀಸ್ ಕಮಿಟಿಯ ಸಕ್ರಿಯ ಕಾರ್ಯಕರ್ತರಾದರು. ತಮ್ಮ ಸಂಘಟನೆಯ ಪರವಾಗಿ, ದೇಶದೆಲ್ಲೆಡೆಗಿಂತ ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಮಾನವಹಕ್ಕು ಉಲ್ಲಂಘನೆಯ ಪ್ರಕರಣಗಳನ್ನು ಬಯಲಿಗೆಳೆಯುತ್ತಿದ್ದರು. ಆ ಹೊತ್ತಿಗಾಗಲೇ ಡಾ. ಕೆ. ಬಾಲಗೋಪಾಲ್‍ರಂಥ ನಾಯಕರು ಹಾಕಿಕೊಟ್ಟಿದ್ದ ದಾರಿಯಲ್ಲೇ ಮುನ್ನಡೆದರು.

ಆಂಧ್ರಪ್ರದೇಶದ ಈ ಮಾನವಹಕ್ಕು ಸಂಘಟನೆ ಅಲ್ಲಿನ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ತನ್ನ ವಿರೋಧಿಗಳನ್ನು ‘ಎನ್‍ಕೌಂಟರ್’ಗಳ ಮೂಲಕ ಇಲ್ಲವಾಗಿಸುವುದೇ ಅಲ್ಲದೆ, ಈ ಸಂಘಟನೆಯ ನಾಯಕರ ಮೇಲೆ ಸಹ ದಾಳಿಗಳು ನಡೆದವು. ಗ್ರೀನ್‍ಟೈಗರ್ಸ್, ಕೋಬ್ರಾದಂಥ ಹೆಸರುಗಳನ್ನು ಹೊಂದಿದ್ದ ಪೊಲೀಸ್ ಗುಂಪುಗಳು ಅಥವಾ ಇಲಾಖೆಯ ಬೆಂಬಲವನ್ನು ಪಡೆದಿದ್ದ ಹಂತಕ ಗುಂಪುಗಳು ಮಾನವಹಕ್ಕು ಸಂಘಟನೆಯ ನಾಯಕರನ್ನು ಕೊಲೆ ಮಾಡುವಲ್ಲಿ ನಿರತರಾಗಿದ್ದವು. ಹೈದರಾಬಾದ್ ಕೆ. ಪುರುಷೋತ್ತಂ ಮತ್ತು ನಲ್ಗೊಂಡದಲ್ಲಿ ಆಜಂ ಆಲಿಯಂಥ ನಾಯಕರು (ಅದಕ್ಕೂ ಮೊದಲು ಹತರಾಗಿದ್ದ ನಾಯಕರ ರೀತಿಯಲ್ಲಿ) ಕೊಲೆಗೀಡಾದ ಸಂದರ್ಭದಲ್ಲಿ 1998ರಲ್ಲಿ ಶೇಷಯ್ಯನವರು ಎಪಿಸಿಎಲ್‍ಸಿಯ ಕಾರ್ಯದರ್ಶಿಯಾದರು.

ನಂತರದ ದಿನಗಳಲ್ಲಿ ಆಂಧ್ರಪ್ರದೇಶ ಎರಡು ರಾಜ್ಯಗಳಾಗಿ ವಿಭಜನೆಗೊಂಡು ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಸಿಎಲ್‍ಸಿ (ಸಿವಿಲ್ ಲಿಬರ್ಟೀಸ್ ಕಮಿಟಿ) ಹೆಸರಿನಲ್ಲಿ ಮುಂದುವರೆದ ಸಂಘಟನೆಗಳ ಸಂಯೋಜಕರಾಗಿ ಎರಡೂ ತೆಲುಗು ರಾಜ್ಯಗಳಲ್ಲಿ ಮಾನವಹಕ್ಕು ಚಳವಳಿಯ ನೆಲೆಯನ್ನು ಇನ್ನೂ ಭದ್ರಗೊಳಿಸಿದರು. ಅಲ್ಲದೆ ದೇಶಾದ್ಯಂತ ಸರ್ಕಾರಗಳನ್ನು ವಿರೋಧಿಸಿ ಜೈಲುಸೇರಿದ್ದ ರಾಜಕೀಯ ಬಂದಿಗಳ ಬಿಡುಗಡೆಗಾಗಿ ನಡೆಯುತ್ತಿದ್ದ ಪ್ರಯತ್ನಗಳ ಭಾಗವೂ ಆಗಿದ್ದರು.

ಎಪಿಸಿಎಲ್‍ಸಿಯ ಹಿಂದಿನ ನಾಯಕರ ವಿಷಯದಲ್ಲಿ ನಡೆದಂತೆ ಶೇಷಯ್ಯನವರ ಮೇಲೆ ಸಹ ದಾಳಿ ನಡೆಯಿತು. ರಾಯಲಸೀಮ ಟೈಗರ್ಸ್ ಹೆಸರಿನಲ್ಲಿನ ಒಂದು ಗುಂಪು ಅನಂತಪುರದಲ್ಲಿ ಅವರ ಮನೆಯ ಮೇಲೆ ದಾಳಿ ನಡೆಸಿ ಹೊರಗೆ ನಿಲ್ಲಿಸಿದ್ದ ಕಾರನ್ನು ಧ್ವಂಸಗೊಳಿಸಿತು. ಆದರೆ ಶೇಷಯ್ಯನವರು ಈ ಘಟನೆಯಿಂದಾಗಿ ಧೃತಿಗೆಡದೆ ತಮ್ಮ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂದುವರೆದರು.

ಬೆಂಗಳೂರಿನಲ್ಲಿ 1993ರಲ್ಲಿ ಸ್ಥಾಪನೆಗೊಂಡ ಪ್ರಜಾತಾಂತ್ರಿಕ ಜನರ ವೇದಿಕೆ(ಪಿಡಿಎಫ್)ಗೆ ತುಂಬ ಹತ್ತಿರವಾಗಿದ್ದ ಶೇಷಯ್ಯನವರು ಇದರ ಸದಸ್ಯರಿಗೆ ಆತ್ಮೀಯ ಸ್ನೇಹಿತರಾಗಿದ್ದರು. ನಮ್ಮ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಮತ್ತು ಬೆಂಗಳೂರಿಗೂ ಭೇಟಿ ನೀಡಿದ್ದರು. ಈ ಮೂಲಕ ಅವರು ಕರ್ನಾಟಕದ ಮಾನವಹಕ್ಕು ಚಳವಳಿಗೂ ಸೇರಿದವರಾದರು.

ಪ್ರೊ. ಶೇಷಯ್ಯನವರು ಕೋವಿಡ್‍ಗೆ ಬಲಿಯಾದಾಗ ಅವರಿಗೆ 64 ವರ್ಷ ವಯಸ್ಸು. ಅನಂತಪುರದ ಆಸ್ಪತ್ರೆಯಲ್ಲಿ ಮೊದಲು ದಾಖಲಾಗಿ ನಂತರ ಹೈದರಾಬಾದಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ ಶೇಷಯ್ಯನವರು ಜೀವಂತವಾಗಿ ಅನಂತಪುರಕ್ಕೆ ಮರಳಲಿಲ್ಲ. ಅವರ ಮರಣ ನಿಜವಾದ ಅರ್ಥದಲ್ಲಿ ದೇಶದ ಮಾನವಹಕ್ಕು ಚಳವಳಿಗೆ ತುಂಬಲಾರದ ನಷ್ಟ! ಪಿಡಿಎಫ್‍ನ ಸದಸ್ಯರಾದ ನಮಗೆ ಒಬ್ಬ ಆತ್ಮೀಯ ಗೆಳೆಯನನ್ನು ಕಳೆದುಕೊಂಡ ನೋವು ಕಾಡುತ್ತಿದೆ.

ಶೇಷಯ್ಯನವರಿಗೆ ಗೌರವಪೂರ್ವಕ ನಮನಗಳು.


ಇದನ್ನೂ ಓದಿ: ಶ್ರಧ್ಧಾಂಜಲಿ: ಜನಪರ ಚಳವಳಿಯ ಮಾರ್ಗದರ್ಶಕ – ಧೀರ ಹೋರಾಟಗಾರ ಮಾರುತಿ ಮಾನ್ಪಡೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...