Homeದಲಿತ್ ಫೈಲ್ಸ್ತುಮಕೂರು: ಮುಚ್ಚಿ ಹೋಗುತ್ತಿದೆಯೇ ಮತ್ತೊಬ್ಬ ದಲಿತನ ಕೊಲೆ ಪ್ರಕರಣ?

ತುಮಕೂರು: ಮುಚ್ಚಿ ಹೋಗುತ್ತಿದೆಯೇ ಮತ್ತೊಬ್ಬ ದಲಿತನ ಕೊಲೆ ಪ್ರಕರಣ?

- Advertisement -
- Advertisement -

ತುಮಕೂರು ತಾಲ್ಲೂಕು ಕೋರಾ ಹೋಬಳಿ ಜಕ್ಕೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್‌ 29ನೇ ತಾರೀಕಿನಿಂದ ಈ ಪ್ರಕರಣ ತೆರೆದುಕೊಳ್ಳುತ್ತದೆ. ಊರಿನ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯ ಚಾನೆಲ್‌ನಲ್ಲಿ ಮಾದಿಗ ಸಮುದಾಯದ ಮುತ್ತುರಾಜ (26) ಎಂಬ ಯುವಕನ ಶವ ಪತ್ತೆಯಾಗುತ್ತದೆ. ಅಂದು ಮುತ್ತುರಾಜನ ತಂದೆ ಮುತ್ತುರಾಯಪ್ಪ (65) ನೀಡಿದ ದೂರು ದಾಖಲಾಗುತ್ತದೆ. ಆದರೆ ದೂರಿನಲ್ಲಿ ಏನು ಬರೆದಿದೆ ಎಂಬುದೇ ಗೊತ್ತಾಗದ, ಕೇವಲ ಸಹಿ ಮಾಡಲು ಬರುವ ಮುತ್ತುರಾಯಪ್ಪ ಮತ್ತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಮೆಟ್ಟಿಲೇರುತ್ತಾರೆ.

ಶವವಾಗಿ ಪತ್ತೆಯಾದ ಮುತ್ತುರಾಜನನ್ನು ಸವರ್ಣೀಯ ಜಾತಿಯವರು ಕೊಂದಿದ್ದಾರೆ ಎಂಬುದು ಮುತ್ತುರಾಯಪ್ಪನವರ ಕುಟುಂಬದ ಆರೋಪ. ಜಕ್ಕೇನಹಳ್ಳಿಯ ಜಿಲ್ಲಾ ಪೊಲೀಸ್ ಕಚೇರಿಗೆ ಜೂನ್‌ 7ರಂದು ತೆರಳಿದ ಮುತ್ತುರಾಯಪ್ಪ ಹೀಗೆ ದೂರು ನೀಡುತ್ತಾರೆ:

“ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿಗಳು ನಾನು ನೀಡಿದ್ದ ಕೈ ಬರವಣಿಗೆಯ ದೂರನ್ನು ಮರೆಮಾಚಿ ಪೊಲೀಸ್‌ನವರೇ ಒಂದು ದೂರನ್ನು ಸೃಷ್ಟಿ ಮಾಡಿಕೊಂಡು ಅನಕ್ಷರಸ್ಥನಾದ ನನ್ನ ಸಹಿಯನ್ನು ಪಡೆದುಕೊಂಡು ನನಗೆ ಅನ್ಯಾಯ ಮಾಡಿದ್ದಾರೆ. ಇದರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜಕ್ಕೇನಹಳ್ಳಿ  ಗ್ರಾಮದ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಚಾನಲ್‌ನಲ್ಲಿ ನನ್ನ ಮಗನಾದ ಮುತ್ತುರಾಜನ ಮೃತದೇಹವು ತೇಲುತ್ತಿತ್ತು. ಸಾರ್ವಜನಿಕರು ಗಮನಿಸಿ ವಿಚಾರ ತಿಳಿಸಿದರು. ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಬಂದರು. ಪೊಲೀಸ್‌ನವರ ಸಮಕ್ಷಮ ಮೃತ ದೇಹವನ್ನು ಹೊರತೆಗೆದು ತುಮಕೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಮೃತದೇಹವನ್ನು ನಮ್ಮ ವಶಕ್ಕೆ ಕೇಳಿದಾಗ ಪೊಲೀಸರ ಕಂಪ್ಲೇಟ್ ಅಗತ್ಯವೆಂದರು. ಆ ದಿನ ನಾನು ತುಂಬ ದುಃಖಿತನಾಗಿದ್ದೆ. ಏನನ್ನೂ ಸರಿಯಾಗಿ ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ನಾನು ನನಗೆ ಗೊತ್ತಿರುವ ಒಬ್ಬರಿಂದ ಒಂದು ದೂರನ್ನು ಕೈಯಲ್ಲಿ ಬರೆಯಿಸಿ ಆ ದೂರಿಗೆ ನಾನು ಸಹಿ ಮಾಡಿರುತ್ತೇನೆ. ನಾನು ಸಹಿ ಮಾಡುವುದನ್ನು ಮಾತ್ರ ಕಲಿತಿರುತ್ತೇನೆ. ಓದಲು, ಬರೆಯಲು ಬರುವುದಿಲ್ಲ. ಆದರೆ ಪೊಲೀಸ್‌ನವರು ನಾನು ನೀಡಿದ್ದ ದೂರನ್ನು ಮರೆಮಾಚಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನಾಸ್ಪದ ವ್ಯಕ್ತಿಗಳನ್ನು ಕಾಪಾಡುವ ಸಲುವಾಗಿ ಅಮಾಯಕನಾದ ನನಗೆ ಮೋಸ ಮಾಡಿರುತ್ತಾರೆ” ಎಂದು ಮುತ್ತುರಾಯಪ್ಪ ಆರೋಪಿಸುತ್ತಾರೆ.

ಇದನ್ನೂ ಓದಿರಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ಕುಟುಂಬ ಏನು ಹೇಳುತ್ತದೆ? ಆರೋಪಿಗಳು ಯಾರು?

ಮಹಾಲಕ್ಷ್ಮಮ್ಮ- ಮುತ್ತುರಾಯಪ್ಪ ಜಕ್ಕೇನಹಳ್ಳಿ ಗ್ರಾಮದ ದಂಪತಿ. ಇವರಿಗೆ ಮೂರು ಜನ ಹೆಣ್ಣು ಮಕ್ಕಳು. ಒಬ್ಬ ಗಂಡು ಮಗ. ಮೂವರು ಹೆಣ್ಣುಮಕ್ಕಳಲ್ಲಿ ನಡುಮಧ್ಯೆಯವರಾದ ಮುತ್ತಮ್ಮ ಅವರು ಜಕ್ಕೇನಹಳ್ಳಿಯ ಗ್ರಾಮದ ಒಕ್ಕಲಿಗ ಜಾತಿಯ ನಾಗರಾಜ್‌ (ಕೆಎಸ್‌ಆರ್‌ಟಿಸಿ ಡ್ರೈವರ್‌) ಎಂಬವರನ್ನು ಸುಮಾರು ಆರೇಳು ವರ್ಷಗಳ ಹಿಂದೆ ಮದುವೆಯಾಗುತ್ತಾರೆ. ನಾಗರಾಜ್‌- ಮುತ್ತಮ್ಮ ಕುಟುಂಬ ತುಮಕೂರಿನಲ್ಲೇ ವಾಸವಿತ್ತು.

ನಾಗರಾಜ್‌ ಅವರ ಬಾಮೈದ ಬಸವರಾಜನು ಮುತ್ತುರಾಜನ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದನು. “ನಿಮ್ಮಕ್ಕ ನಮ್ಮ ಭಾವನನ್ನು ಮದುವೆಯಾದ ಕಾರಣ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ” ಎಂದು ತಕರಾರು ತೆಗೆಯುತ್ತಿದ್ದನು. ಮುತ್ತರಾಜ ತನ್ನ ಅಕ್ಕನಲ್ಲಿ ಹೋಗಿ, “ಆಗಿದ್ದು ಆಗಿಹೋಯಿತು. ನಾನು ನಿನ್ನನ್ನು ಸಾಕಿಕೊಳ್ಳುತ್ತೇನೆ. ನಮ್ಮ ಮನೆಗೆ ಬಂದು ಬಿಡು” ಎಂದು ಕೇಳಿಕೊಂಡಿದ್ದ. ಅವರು ಬಂದಿರಲಿಲ್ಲ.

ಕೊಲೆಯಾಗುವ ಸಮಯದಲ್ಲಿ ಜಕ್ಕೇನಹಳ್ಳಿಯಲ್ಲಿ ಜಾತ್ರೆ ಇತ್ತು. ಅದಕ್ಕೂ ಐದಾರು ದಿನಗಳ ಮುಂಚೆ ಬಸವರಾಜನು ಮುತ್ತುರಾಜನೊಂದಿಗೆ ಚೆನ್ನಾಗಿ ಹೊಂದಾಣಿಕೆಯಿಂದ ಇದ್ದನು. ಏಪ್ರಿಲ್‌ 28ರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮನೆಯ ಬಳಿ ಬಂದ ಬಸವರಾಜ, ಮುತ್ತುರಾಜರನ್ನು ಕರೆದುಕೊಂಡು ಹೋಗುತ್ತಾನೆ. ಮುತ್ತುರಾಜ ಟವೆಲ್‌ ಧರಿಸಿದ್ದರು. ಸಂಜೆ ವೇಳೆಗೆ ಮತ್ತೆ ಒಬ್ಬನೇ ಮರಳಿದ ಬಸವರಾಜನು ಮುತ್ತುರಾಜನ ಟವೆಲ್ ವಾಪಸ್‌ ತಂದಿರುತ್ತಾನೆ. “ಟವಲ್‌ ಮಾತ್ರ ತಂದಿದ್ದೀಯ. ನಮ್ಮ ಹುಡುಗ ಎಲ್ಲೋ” ಎಂದು ಮಹಾಲಕ್ಷ್ಮಮ್ಮ  ಕೇಳುತ್ತಾರೆ. ಆದರೆ ಆತ, “ನನಗೆ ಮಾಹಿತಿ ಇಲ್ಲ” ಎಂದು ಹೇಳುತ್ತಾನೆ.

ಮುತ್ತುರಾಯಪ್ಪನವರ ಹೆಂಡತಿ ಮಹಾಲಕ್ಷ್ಮಮ್ಮ ತುಮಕೂರಿನ ನರಸಿಂಹಯ್ಯ ಆಸ್ಪತ್ರೆಯಲ್ಲಿ ಸ್ಲೀಪರ್‌ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಗೆಂದು ಅಂದು ಸಂಜೆ ಹೋಗಿರುತ್ತಾರೆ. ಬೆಳಿಗ್ಗೆ ವಾಪಸ್‌ ಮನೆಗೆ ಮರಳಿದಾಗ ಅವರಿಗೆ ಕೆಟ್ಟ ಸುದ್ದಿ ಕಾದಿರುತ್ತದೆ.

ಪೊಲೀಸರು ಬಂದು ಹೆಣವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಣವನ್ನು ಕುಟುಂಬಕ್ಕೆ ಹಸ್ತಾಂತರಿಸುತ್ತಾರೆ. ರಾತ್ರಿ ಅಂತ್ಯಸಂಸ್ಕಾರ ನಡೆಯುತ್ತದೆ. ಅಂದು ಹತ್ತು ಗಂಟೆಯ ಸಮಯದಲ್ಲಿ ನಾಗರಾಜ್‌ (ಮುತ್ತಮ್ಮನ ಗಂಡ) ಕುಡಿದ ಮತ್ತಲ್ಲಿ- “ನಾವೇ ಕೊಲೆ ಮಾಡಿದ್ದೀವಿ” ಎಂದು ಹೇಳಿದ್ದರು ಎಂದು ಕುಟುಂಬ ಆರೋಪಿಸುತ್ತದೆ.

ಎಸ್‌ಪಿಗೆ ದೂರು

ನ್ಯಾಚುರಲ್‌ ಡೆತ್‌ ಎಂದು ಹೇಳಲಾಗುತ್ತಿತ್ತು. ಆದರೆ ಕುಟುಂಬ ಇದನ್ನು ಒಪ್ಪಲಿಲ್ಲ. ವಿಷಯ ಅರಿತ ದಲಿತ ಸಂಘರ್ಷ ಸಮಿತಿ ಮುಖಂಡರು ಪ್ರಕರಣವನ್ನು ಮುಚ್ಚಿ ಹಾಕಲು ಬಿಡಲಿಲ್ಲ. ಮೇ 7ರಂದು ಎಸ್‌ಪಿಗೆ ವಿಷಯ ತಿಳಿಸಿದರು. ಬಳಿಕ ಮೇ 18ರಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮರು ದೂರು ನೀಡಿದ ಬಳಿಕ ಪ್ರಕರಣದ ದಾಖಲಾಗುತ್ತದೆ.

ಇದನ್ನೂ ಓದಿರಿ: ಪೆದ್ದನಹಳ್ಳಿ ಪ್ರಕರಣ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!

“ನನ್ನ ಮಗನಿಗೆ ಈಜಲು ಬರುತ್ತಿತ್ತು. ಒಕ್ಕಲಿಗ ಜನಾಂಗಕ್ಕೆ ಸೇರಿದ ಬಸವರಾಜು ಮತ್ತು ಆತನ ಸ್ನೇಹಿತರು ಸೇರಿ ನನ್ನ ಮಗನಾದ ಮುತ್ತುರಾಜನನ್ನು ಕೊಲೆ ಮಾಡಿ ನಾಲೆಗೆ ಹಾಕಿರುತ್ತಾರೆ” ಎಂದು ಮುತ್ತುರಾಯಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಐಪಿಸಿ ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟ ಡಿವೈಎಸ್‌ಪಿಯವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ಮಾಹಿತಿ ನೀಡಲು ನಿರಾಕರಿಸಿದ ಅವರು, ಎಸ್‌ಪಿಯವರನ್ನು ಸಂಪರ್ಕಿಸಿ ಎಂದು ಪ್ರತಿಕ್ರಿಯಿಸಿದರು.

“ಇಷ್ಟೆಲ್ಲ ಆದ ಮೇಲೆ, ಪ್ರಕರಣ ಏನಾಯಿತೆಂಬ ಮಾಹಿತಿ ದೊರಕುತ್ತಿಲ್ಲ. ಅವರಿವರಲ್ಲಿಗೆ ಓಡಾಡಲು ನಮ್ಮ ಬಳಿ ದುಡ್ಡು-ಕಾಸು ಇಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ. ತಪ್ಪಿತಸ್ಥರ ಬಂಧನವಾಗಿದೆಯೋ ಇಲ್ಲವೋ ಗೊತ್ತಿಲ್ಲ” ಎಂದು ಕುಟುಂಬ ಸದಸ್ಯರು ದುಃಖಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...