Homeಕರ್ನಾಟಕಸಂಘಪರಿವಾರ ಅಡ್ಡಿಪಡಿಸಿದ ‘ಜೊತೆಗಿರುವನು ಚಂದಿರ’ ನಾಟಕ ಕೈದಿಗಳ ಬಾಳಿಗೆ ಬೆಳಕಾಗಿದ್ದು ಹೀಗೆ...

ಸಂಘಪರಿವಾರ ಅಡ್ಡಿಪಡಿಸಿದ ‘ಜೊತೆಗಿರುವನು ಚಂದಿರ’ ನಾಟಕ ಕೈದಿಗಳ ಬಾಳಿಗೆ ಬೆಳಕಾಗಿದ್ದು ಹೀಗೆ…

ಜಯಂತ್ ಕಾಯ್ಕಿಣಿಯವರ ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಸಂಘಪರಿವಾರದವರು ಅಡ್ಡಿಪಡಿಸಿ ವಿವಾದ ಎಬ್ಬಿಸಿದ್ದಾರೆ. ಆದರೆ ಈ ನಾಟಕ ಅನೇಕ ಕೈದಿಗಳ ಮನ ಪರಿವರ್ತನೆಗೆ ಕಾರಣವಾಗಿತ್ತು... (ಮುಂದೆ ಓದಿರಿ)

- Advertisement -
- Advertisement -

ಚಾಮರಾಜನಗರ ಜಿಲ್ಲೆಯ ನಂಜುಂಡಸ್ವಾಮಿ ಕೆರೆಹಳ್ಳಿಯವರು ಒಂದು ಕಾಲಕ್ಕೆ ‘ಮೂರೂವರೆ’ ಮರ್ಡರ್‌ ಎಂದೇ ಕುಖ್ಯಾತಿ ಪಡೆದವರು. ಅತ್ತೆ, ಭಾವ, ಭಾಮೈದ, ಹೆಂಡತಿ ವಿಚಾರವಾಗಿ ಗಲಾಟೆ ನಡೆದು, ತನಗೆ ಹೊಡೆಯಲು ಬಂದವನಿಂದ ಮಚ್ಚು ಕಿತ್ತುಕೊಂಡು ನಂಜುಂಡಸ್ವಾಮಿ ಪ್ರತಿದಾಳಿ ನಡೆಸಿದಾಗ ಅತಾಚುರ್ಯ ನಡೆದೇ ಬಿಟ್ಟಿತ್ತು. ‘ಮೂರೂವರೆ ಮರ್ಡರ್‌’ ಎಂಬ ಅಪಖ್ಯಾತಿ ಅವರ ತಲೆಗೆ ಕಟ್ಟಿತು. ಹೀಗೆ ಜೈಲು ಸೇರಿದ ನಂಜುಂಡಸ್ವಾಮಿ ಸನ್ನಡತೆಯ ಆಧಾರದಲ್ಲಿ ಹೊರಗಡೆ ಬಂದಾಗ ಮಾತ್ರ ಸಂಪೂರ್ಣ ಬದಲಾಗಿದ್ದರು. ರಂಗಭೂಮಿ ಹಾಗೂ ಟೆರ್‍ರಾಕೋಟ ಕಲಾಕೃತಿಗಳ ಕಲಾವಿದರಾಗಿ ಹೊಮ್ಮಿದ್ದರು.

ರಂಗಭೂಮಿ ಮೂಲಕ ಅನೇಕ ಕೈದಿಗಳ ಮನಪರಿವರ್ತನೆ ಮಾಡಿದ ಹೆಗ್ಗಳಿಕೆ ಮೈಸೂರು ರಂಗಾಯಣದ ಹಿರಿಯ ಕಲಾವಿದ ಹುಲುಗಪ್ಪ ಕಟ್ಟೀಮನಿಯವರಿಗೆ ಸಲ್ಲುತ್ತದೆ. 1999ರಿಂದ 2017ರವರೆಗೆ ಸುಮಾರು ಹದಿನೇಳು ವರ್ಷಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ನಂಜುಂಡಸ್ವಾಮಿ, ಸನ್ನಡತೆಯ ಆಧಾರದಲ್ಲಿ ಹೊರಬಂದಿದ್ದರ ಹಿಂದೆ ರಂಗಭೂಮಿ ಎಂಬ ದಾರಿದೀಪ, ಹುಲುಗಪ್ಪ ಕಟ್ಟೀಮನಿ ಎಂಬ ಮಹಾನ್‌ ಗುರು ಇದ್ದರು. ಹಲವಾರು ನಾಟಕಗಳನ್ನು ಕೈದಿಗಳಿಗೆ ಕಲಿಸಿದ್ದ ಹುಲುಗಪ್ಪ ಅವರು, ಈಗ ವಿವಾದದ ಕೇಂದ್ರ ಬಿಂದುವಾಗಿರುವ ‘ಜೊತೆಗಿರುವನು ಚಂದಿರ’ ನಾಟಕವನ್ನೂ ಕೈದಿಗಳಿಂದ ಪ್ರದರ್ಶನ ಮಾಡಿಸಿ ಯಶಸ್ಸಿಯಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೂರೂವರೆ ಮರ್ಡರ್‌ ಎಂದೇ ಕುಖ್ಯಾತಿ ಪಡೆದಿದ್ದ ನಂಜುಂಡಸ್ವಾಮಿ ಕೆರೆಹಳ್ಳಿ ಅವರು ರಂಗಭೂಮಿ ಹಾಗೂ ಟೆರ್‍ರಾಕೋಟ ಕಲಾಕೃತಿಯ ಕಲಾವಿದರಾಗಿ ಹೊರಹೊಮ್ಮಿ ಜೈಲಿನಿಂದ ಹೊರಬಂದಿದ್ದಾರೆ.

ಜೋಸೆಫ್‌ ಸ್ಟೀನ್‌ ಅವರ ‘ಪಿಡ್ಲರ್‌ ಆನ್‌ ದಿ ರೂಫ್‌’ ನಾಟಕವನ್ನು ಸಾಹಿತಿ, ಕಥೆಗಾರ ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ‘ಜೊತೆಗಿರುವನು ಚಂದಿರ’ ಎಂಬ ಹೆಸರಲ್ಲಿ ರೂಪಾಂತರ ಮಾಡಿದ್ದಾರೆ. ಆ ನಾಟಕ ಹಲವು ವರ್ಷಗಳಿಂದ ರಂಗಪ್ರದರ್ಶನಗೊಳ್ಳುತ್ತಲೇ ಇದೆ. ಕಳೆದ ಭಾನುವಾರ ಶಿವಮೊಗ್ಗದ ರಂಗಬೆಳಕು ತಂಡವು ಆನವಟ್ಟಿಯಲ್ಲಿ ಈ ನಾಟಕದ ಪ್ರದರ್ಶನ ಹಮ್ಮಿಕೊಂಡಿತ್ತು. ಈ ವೇಳೆ ಆರ್‌ಎಸ್‌ಎಸ್‌ ಮತ್ತು ಬಜರಂಗದಳದ ಮುಖಂಡರು (ಸಂಘ ಪರಿವಾರದ ಫ್ರಿಂಜ್‌ ಎಲಿಮೆಂಟ್‌ಗಳು) ಬಂದು ಗಲಾಟೆ ಮಾಡಿ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. “ದೇಶದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ನಡೆಯುತ್ತಿರುವಾಗ ಮುಸ್ಲಿಮರೇ ಪ್ರಧಾನವಾಗಿರುವ ಕಥಾವಸ್ತು ಇಟ್ಟುಕೊಂಡು ನಾಟಕ ಮಾಡಿರುವುದು ಬೇಸರದ ಸಂಗತಿ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದನ್ನೂ ಇವರು ಆಕ್ಷೇಪಾರ್ಹ ನಾಟಕ ಎನ್ನುತ್ತಿದ್ದಾರೋ ಅದೇ ನಾಟಕ ಅನೇಕ ಕೈದಿಗಳ ಬದುಕಿನಲ್ಲಿ ಬೆಳಕಾಗಿದೆ. ಹೊಸ ದಿಕ್ಕನ್ನು ತೋರಿದೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕಲಾವಿದ ನಂಜುಂಡಸ್ವಾಮಿ ಕೆರೆಹಳ್ಳಿ,  “ರಂಗಭೂಮಿ ನನ್ನ ಬದುಕಿನಲ್ಲಿ ತಂದ ಬದಲಾವಣೆಯನ್ನು ನಾನೆಂದೂ ಮರೆಯುವುದಿಲ್ಲ. ಜೊತೆಗಿರುವನು ಚಂದಿರ ನಾಟಕದ- ಕಾಣದಿರದ ಹಾದಿಗಳಲಿ, ದೀಪವಿರದ ರಾತ್ರಿಗಳಲಿ, ಚಂದಿರ ನಮ್ಮ ಕೈಬಿಡದಿರಲಿ- ಹಾಡನ್ನು ಕೇಳುತ್ತಿದ್ದರೆ ನಾವು ಅತ್ತುಬಿಡುತ್ತಿದ್ದೆವು. ಕಿಡಿಗೇಡಿಗಳು ಈ ನಾಟಕದ ಬಗ್ಗೆ ಏನೋ ಹೇಳಿಬಿಡಬಹುದು. ಈ ನಾಟಕದ ಸಾಲುಗಳೇನು? ಆ ಮಾತಿನ ಅರ್ಥಗಳೇನು? ಎಂಬುದನ್ನು ತಿಳಿಯಬೇಕು. ಜಯಂತ ಕಾಯ್ಕಿಣಿಯವರು ಬರೆದಿರುವ ಮಾತುಗಳಂತೂ ಅದ್ಭುತವಾಗಿವೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಹೋಗಿ ನಾಟಕ ಮಾಡಿದ್ದೆವು. ಕಾಯ್ಕಿಣಿಯವರೂ ಈ ನಾಟಕವನ್ನು ನೋಡಲು ಬಂದು ನಮ್ಮನ್ನು ಪ್ರೋತ್ಸಾಹಿಸಿದ್ದರು” ಎಂದು ನೆನೆದರು.

ಮಾಜಿ ಕೈದಿ ನಂಜುಂಡಸ್ವಾಮಿ

ವೀರಪ್ಪನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದವರು ಅಂಬುರಾಜ್‌. ‘ಮಾಜಿ ಜೀವಾವಧಿ ಕೈದಿ’ಯಾಗಿರುವ ಅವರು, ‘ರಂಗಭೂಮಿಯ ಸ್ಪರ್ಶ ಸಿಗದಿದ್ದರೆ ನಾನು ಟೆರರಿಸ್ಟ್‌ ಆಗುತ್ತಿದ್ದೆ’ ಎಂದು ಭಾವುಕವಾಗಿ ನುಡಿಯುತ್ತಾರೆ.

“ಯಾವುದೇ ಧರ್ಮದವರಾದರೂ ಈ ದೇಶದ ಮಣ್ಣಿನ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುವ ನಾಟಕ- ಜೊತೆಗಿರುವನು ಚಂದಿರ. ಕೋಮು ಆಧಾರದಲ್ಲಿ ದೇಶ ವಿಭಜನೆಯಾದಾಗ ಸಾಮಾನ್ಯರ ಭಾವನೆಗಳು ಹೇಗಿದ್ದವು, ಈ ಮಣ್ಣಿನ ಬಗ್ಗೆ ಇರುವ ಪ್ರೀತಿ ಎಂಥದ್ದು ಎಂಬುದನ್ನು ಬಹಳ ಭಾವನಾತ್ಮಕವಾಗಿ ಕಟ್ಟಿಕೊಟ್ಟ ನಾಟಕವಿದು. ಇದು ಧರ್ಮಕ್ಕಿಂತ ಮನಸ್ಸುಗಳ ವಿಚಾರವನ್ನು ತೆರೆದಿಡುವ ನಾಟಕ” ಎನ್ನುತ್ತಾರೆ ಅಂಬುರಾಜ್.

ಮಾಜಿ ಜೀವಾವಧಿ ಕೈದಿ ಅಂಬುರಾಜ್‌

“ನಾಟಕದ ಮುಖ್ಯ ಪಾತ್ರವಾದ ಬಡೇಮಿಯನ ಮಗಳು ಹಿಂದೂ ಹುಡುಗನನ್ನು ಕರೆದುಕೊಂಡು ಹೋಗಿಬಿಡುತ್ತಾಳೆ. ಹಿಂದೂ ಮುಸ್ಲಿಂ ಮದುವೆಯಾಗುತ್ತಾರೆ. ಇದೇ ಭಾರತದ ಸಂಸ್ಕೃತಿ ಎಂದು ಹೇಳುವ ನಾಟಕವಿದು. ಕೋಮು ದೃಷ್ಟಿಕೋನ ಇಟ್ಟುಕೊಂಡು ಸಮಾಜವನ್ನು ನೋಡಿದರೆ, ಎಲ್ಲವೂ ಕೇಸರಿಯಾಗಿಯೇ ಕಾಣುತ್ತದೆ” ಎಂದು ವಿಷಾದಿಸಿದರು.

“ನನಗೆ ರಂಗಭೂಮಿಯ ನಂಟು ಸಿಗದೇ ಹೋಗಿದ್ದರೆ, ಕಟ್ಟೀಮನಿ ಥರದ ವ್ಯಕ್ತಿಗಳು ಪರಿಚಯವಾಗದೇ ಹೋಗಿದ್ದರೆ ನಾನು ಜೈಲಲ್ಲಿ ದೊಡ್ಡ ಟೆರರಿಸ್ಟ್‌ ಆಗ್ತಾ ಇದ್ದೆ. ನನ್ನ ಬದುಕನ್ನು ಸುಧಾರಿಸಿದ್ದು ರಂಗಭೂಮಿ. ವೀರಪ್ಪನ್‌ ಕೇಸ್‌ ಕಾರಣಕ್ಕೆ ನನಗೆ ಚಿತ್ರಹಿಂಸೆಯನ್ನೂ ನೀಡಿದರು. ಹೀಗಾಗಿ ಅಧಿಕಾರಿಗಳ ಮೇಲೆ, ಸಮಾಜದ ಮೇಲೆ ನನಗೆ ಸಿಟ್ಟಿತ್ತು. ಅದೆಲ್ಲವೂ ಕರಗಿಹೋಗಿ, ನನ್ನನ್ನು ಮನುಷ್ಯನನ್ನಾಗಿ ಮಾಡಿದ್ದು ರಂಗಭೂಮಿ” ಎಂದರು.

ರಂಗಕರ್ಮಿ, ಕೈದಿಗಳಿಗೆ ನಾಟಕಗಳನ್ನು ಕಲಿಸಿದ ಗುರು ಹುಲುಗಪ್ಪ ಕಟ್ಟೀಮನಿ

“ಜೊತೆಗಿರುವನು ಚಂದಿರ – ಮಾನವ ಮೌಲ್ಯಗಳನ್ನು ಬೆಳೆಸುವಂತಹ ನಾಟಕ. ಜೈಲಿನಲ್ಲಿ ಹಿಂದೂ ಮುಸ್ಲಿಂ ಹಬ್ಬಗಳನ್ನು ಒಟ್ಟಾಗಿ ಕೈದಿಗಳು ಆಚರಿಸುತ್ತಾರೆ. ಈ ನಾಟಕ ಹಿಂದೂ- ಮುಸ್ಲಿಂ ನಡುವೆ ಭೇದ ತರುವಂತಿದ್ದರೆ ಕೈದಿಗಳು ಈ ನಾಟಕವನ್ನು ಮಾಡಲು ಸಾಧ್ಯವಾಗುತ್ತಿತ್ತೇ?” ಎಂದು ಪ್ರಶ್ನಿಸಿದರು.

‘ಜೊತೆಗಿರುವನು ಚಂದಿರ’ ನಾಟಕದಲ್ಲಿ ಬಡೇಮಿಯ ಪಾತ್ರದಲ್ಲಿ ಅಭಿನಯಿಸಿದ್ದ ರಮೇಶ್‌ ಆಡುವಳ್ಳಿ ಅವರು ಸುಮಾರು ಹದಿನೈದು ವರ್ಷಗಳ ಕಾಲ ಜೈಲಿನಲ್ಲಿದ್ದವರು. ರಾಜಕೀಯ ಪ್ರಕರಣವೊಂದರಲ್ಲಿ ನನ್ನ ಹೆಸರು ಸಿಕ್ಕಿಕೊಂಡಿತು. ತಪ್ಪು ಮಾಡದೆಯೇ ಶಿಕ್ಷೆ ಅನುಭವಿಸಿದೆ ಎನ್ನುವ ರಮೇಶ್ ಅವರು, ಕಟ್ಟೀಮನಿಯವರ ತಂಡದೊಂದಿಗೆ ಕೆಲಸ ಮಾಡಿದವರು. “‘ತಲೆದಂಡ’ ನಾಟಕದಲ್ಲಿ ಬಸವಣ್ಣ ಪಾತ್ರದಲ್ಲಿ, ‘ಕಸ್ತೂರಬಾ ಗಾಂಧಿ’ ನಾಟಕದಲ್ಲಿ ಗಾಂಧಿಯಾಗಿ ಅಭಿನಯಿಸಿದ್ದಾರೆ. ‘ಮಾಧವಿ’ ನಾಟಕದಲ್ಲಿ ‘ಗಾಲವ’ನಾಗಿ ಅಭಿನಯಿಸಿದ್ದೇನೆ. ನನಗೆ ತುಂಬಾ ಇಷ್ಟವಾದ ನಾಟಕವೆಂದರೆ ಜಯಂತ್‌ ಕಾಯ್ಕಿಣಿಯವರು ಬರೆದ- ಜೊತೆಗಿರುವನು ಚಂದಿರ ನಾಟಕ. ಅದ್ಭುತವಾದ ಕಥೆ ಇದು. ಇದನ್ನು ನೋಡಿದವರು ಹಿಂದೂ- ಮುಸ್ಲಿಂ ವಿವಾದವನ್ನು ಮಾಡಲೇಬಾರದು” ಎಂದು ಅಭಿಪ್ರಾಯಪಟ್ಟರು.

‘ಕಸ್ತೂರ ಬಾ ಗಾಂಧಿ ನಾಟಕ’ದಲ್ಲಿ ಗಾಂಧಿ ಪಾತ್ರದಲ್ಲಿ ರಮೇಶ್‌ ಆಡುವಳ್ಳಿ ಅಭಿನಯಿಸಿದ್ದರು.

“ಕೈದಿಗಳ ಮೇಲೆ ತಪ್ಪು ಅಭಿಪ್ರಾಯ ಹೊಂದಿದ್ದ ಕಾರಾಗೃಹ ಇಲಾಖೆಯ ಮೇಲಧಿಕಾರಿಗಳೇ ನಮ್ಮ ನಾಟಕ ನೋಡಿ ಅಚ್ಚರಿ ಪಟ್ಟರು. ನಮ್ಮ ನಾಟಕ ನೋಡಿ ಅಧಿಕಾರಿಗಳ ಮನಸ್ಸೇ ಪರಿವರ್ತನೆಯಾಗಿತ್ತು” ಎಂದು ತಿಳಿಸಿದರು.

ಇದನ್ನೂ ಓದಿರಿ: ಮುಸ್ಲಿಂ ಪ್ರಧಾನ ಕಥೆ ಹೊಂದಿದೆ ಎಂದು ನಾಟಕಕ್ಕೆ ಅಡ್ಡಿಪಡಿಸಿದ RSS-ಬಜರಂಗದಳದ ದುಷ್ಕರ್ಮಿಗಳು

ರಂಗಕರ್ಮಿ ಹುಲುಗಪ್ಪ ಕಟ್ಟೀಮನಿಯವರನ್ನು ಈ ಕುರಿತು ಮಾತನಾಡಿಸಲು ‘ನಾನುಗೌರಿ.ಕಾಂ’ ತಂಡ ಪ್ರಯತ್ನಿಸಿತು. ನಾಟಕದ ಹೆಸರು ಹಾಗೂ ವಿವಾದದ ಕುರಿತು ಕೇಳಿದ ತಕ್ಷಣ ಕಟ್ಟೀಮನಿಯವರು ಭಾವುಕರಾದರು. “ನನ್ನದೇ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ, ಈ ಕುರಿತು ಬರೆಯುತ್ತೇನೆ” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...