Homeಕರ್ನಾಟಕಸಂಘಪರಿವಾರ ಅಡ್ಡಿಪಡಿಸಿದ ‘ಜೊತೆಗಿರುವನು ಚಂದಿರ’ ನಾಟಕ ಕೈದಿಗಳ ಬಾಳಿಗೆ ಬೆಳಕಾಗಿದ್ದು ಹೀಗೆ...

ಸಂಘಪರಿವಾರ ಅಡ್ಡಿಪಡಿಸಿದ ‘ಜೊತೆಗಿರುವನು ಚಂದಿರ’ ನಾಟಕ ಕೈದಿಗಳ ಬಾಳಿಗೆ ಬೆಳಕಾಗಿದ್ದು ಹೀಗೆ…

ಜಯಂತ್ ಕಾಯ್ಕಿಣಿಯವರ ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಸಂಘಪರಿವಾರದವರು ಅಡ್ಡಿಪಡಿಸಿ ವಿವಾದ ಎಬ್ಬಿಸಿದ್ದಾರೆ. ಆದರೆ ಈ ನಾಟಕ ಅನೇಕ ಕೈದಿಗಳ ಮನ ಪರಿವರ್ತನೆಗೆ ಕಾರಣವಾಗಿತ್ತು... (ಮುಂದೆ ಓದಿರಿ)

- Advertisement -
- Advertisement -

ಚಾಮರಾಜನಗರ ಜಿಲ್ಲೆಯ ನಂಜುಂಡಸ್ವಾಮಿ ಕೆರೆಹಳ್ಳಿಯವರು ಒಂದು ಕಾಲಕ್ಕೆ ‘ಮೂರೂವರೆ’ ಮರ್ಡರ್‌ ಎಂದೇ ಕುಖ್ಯಾತಿ ಪಡೆದವರು. ಅತ್ತೆ, ಭಾವ, ಭಾಮೈದ, ಹೆಂಡತಿ ವಿಚಾರವಾಗಿ ಗಲಾಟೆ ನಡೆದು, ತನಗೆ ಹೊಡೆಯಲು ಬಂದವನಿಂದ ಮಚ್ಚು ಕಿತ್ತುಕೊಂಡು ನಂಜುಂಡಸ್ವಾಮಿ ಪ್ರತಿದಾಳಿ ನಡೆಸಿದಾಗ ಅತಾಚುರ್ಯ ನಡೆದೇ ಬಿಟ್ಟಿತ್ತು. ‘ಮೂರೂವರೆ ಮರ್ಡರ್‌’ ಎಂಬ ಅಪಖ್ಯಾತಿ ಅವರ ತಲೆಗೆ ಕಟ್ಟಿತು. ಹೀಗೆ ಜೈಲು ಸೇರಿದ ನಂಜುಂಡಸ್ವಾಮಿ ಸನ್ನಡತೆಯ ಆಧಾರದಲ್ಲಿ ಹೊರಗಡೆ ಬಂದಾಗ ಮಾತ್ರ ಸಂಪೂರ್ಣ ಬದಲಾಗಿದ್ದರು. ರಂಗಭೂಮಿ ಹಾಗೂ ಟೆರ್‍ರಾಕೋಟ ಕಲಾಕೃತಿಗಳ ಕಲಾವಿದರಾಗಿ ಹೊಮ್ಮಿದ್ದರು.

ರಂಗಭೂಮಿ ಮೂಲಕ ಅನೇಕ ಕೈದಿಗಳ ಮನಪರಿವರ್ತನೆ ಮಾಡಿದ ಹೆಗ್ಗಳಿಕೆ ಮೈಸೂರು ರಂಗಾಯಣದ ಹಿರಿಯ ಕಲಾವಿದ ಹುಲುಗಪ್ಪ ಕಟ್ಟೀಮನಿಯವರಿಗೆ ಸಲ್ಲುತ್ತದೆ. 1999ರಿಂದ 2017ರವರೆಗೆ ಸುಮಾರು ಹದಿನೇಳು ವರ್ಷಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ನಂಜುಂಡಸ್ವಾಮಿ, ಸನ್ನಡತೆಯ ಆಧಾರದಲ್ಲಿ ಹೊರಬಂದಿದ್ದರ ಹಿಂದೆ ರಂಗಭೂಮಿ ಎಂಬ ದಾರಿದೀಪ, ಹುಲುಗಪ್ಪ ಕಟ್ಟೀಮನಿ ಎಂಬ ಮಹಾನ್‌ ಗುರು ಇದ್ದರು. ಹಲವಾರು ನಾಟಕಗಳನ್ನು ಕೈದಿಗಳಿಗೆ ಕಲಿಸಿದ್ದ ಹುಲುಗಪ್ಪ ಅವರು, ಈಗ ವಿವಾದದ ಕೇಂದ್ರ ಬಿಂದುವಾಗಿರುವ ‘ಜೊತೆಗಿರುವನು ಚಂದಿರ’ ನಾಟಕವನ್ನೂ ಕೈದಿಗಳಿಂದ ಪ್ರದರ್ಶನ ಮಾಡಿಸಿ ಯಶಸ್ಸಿಯಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೂರೂವರೆ ಮರ್ಡರ್‌ ಎಂದೇ ಕುಖ್ಯಾತಿ ಪಡೆದಿದ್ದ ನಂಜುಂಡಸ್ವಾಮಿ ಕೆರೆಹಳ್ಳಿ ಅವರು ರಂಗಭೂಮಿ ಹಾಗೂ ಟೆರ್‍ರಾಕೋಟ ಕಲಾಕೃತಿಯ ಕಲಾವಿದರಾಗಿ ಹೊರಹೊಮ್ಮಿ ಜೈಲಿನಿಂದ ಹೊರಬಂದಿದ್ದಾರೆ.

ಜೋಸೆಫ್‌ ಸ್ಟೀನ್‌ ಅವರ ‘ಪಿಡ್ಲರ್‌ ಆನ್‌ ದಿ ರೂಫ್‌’ ನಾಟಕವನ್ನು ಸಾಹಿತಿ, ಕಥೆಗಾರ ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ‘ಜೊತೆಗಿರುವನು ಚಂದಿರ’ ಎಂಬ ಹೆಸರಲ್ಲಿ ರೂಪಾಂತರ ಮಾಡಿದ್ದಾರೆ. ಆ ನಾಟಕ ಹಲವು ವರ್ಷಗಳಿಂದ ರಂಗಪ್ರದರ್ಶನಗೊಳ್ಳುತ್ತಲೇ ಇದೆ. ಕಳೆದ ಭಾನುವಾರ ಶಿವಮೊಗ್ಗದ ರಂಗಬೆಳಕು ತಂಡವು ಆನವಟ್ಟಿಯಲ್ಲಿ ಈ ನಾಟಕದ ಪ್ರದರ್ಶನ ಹಮ್ಮಿಕೊಂಡಿತ್ತು. ಈ ವೇಳೆ ಆರ್‌ಎಸ್‌ಎಸ್‌ ಮತ್ತು ಬಜರಂಗದಳದ ಮುಖಂಡರು (ಸಂಘ ಪರಿವಾರದ ಫ್ರಿಂಜ್‌ ಎಲಿಮೆಂಟ್‌ಗಳು) ಬಂದು ಗಲಾಟೆ ಮಾಡಿ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. “ದೇಶದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ನಡೆಯುತ್ತಿರುವಾಗ ಮುಸ್ಲಿಮರೇ ಪ್ರಧಾನವಾಗಿರುವ ಕಥಾವಸ್ತು ಇಟ್ಟುಕೊಂಡು ನಾಟಕ ಮಾಡಿರುವುದು ಬೇಸರದ ಸಂಗತಿ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದನ್ನೂ ಇವರು ಆಕ್ಷೇಪಾರ್ಹ ನಾಟಕ ಎನ್ನುತ್ತಿದ್ದಾರೋ ಅದೇ ನಾಟಕ ಅನೇಕ ಕೈದಿಗಳ ಬದುಕಿನಲ್ಲಿ ಬೆಳಕಾಗಿದೆ. ಹೊಸ ದಿಕ್ಕನ್ನು ತೋರಿದೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕಲಾವಿದ ನಂಜುಂಡಸ್ವಾಮಿ ಕೆರೆಹಳ್ಳಿ,  “ರಂಗಭೂಮಿ ನನ್ನ ಬದುಕಿನಲ್ಲಿ ತಂದ ಬದಲಾವಣೆಯನ್ನು ನಾನೆಂದೂ ಮರೆಯುವುದಿಲ್ಲ. ಜೊತೆಗಿರುವನು ಚಂದಿರ ನಾಟಕದ- ಕಾಣದಿರದ ಹಾದಿಗಳಲಿ, ದೀಪವಿರದ ರಾತ್ರಿಗಳಲಿ, ಚಂದಿರ ನಮ್ಮ ಕೈಬಿಡದಿರಲಿ- ಹಾಡನ್ನು ಕೇಳುತ್ತಿದ್ದರೆ ನಾವು ಅತ್ತುಬಿಡುತ್ತಿದ್ದೆವು. ಕಿಡಿಗೇಡಿಗಳು ಈ ನಾಟಕದ ಬಗ್ಗೆ ಏನೋ ಹೇಳಿಬಿಡಬಹುದು. ಈ ನಾಟಕದ ಸಾಲುಗಳೇನು? ಆ ಮಾತಿನ ಅರ್ಥಗಳೇನು? ಎಂಬುದನ್ನು ತಿಳಿಯಬೇಕು. ಜಯಂತ ಕಾಯ್ಕಿಣಿಯವರು ಬರೆದಿರುವ ಮಾತುಗಳಂತೂ ಅದ್ಭುತವಾಗಿವೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಹೋಗಿ ನಾಟಕ ಮಾಡಿದ್ದೆವು. ಕಾಯ್ಕಿಣಿಯವರೂ ಈ ನಾಟಕವನ್ನು ನೋಡಲು ಬಂದು ನಮ್ಮನ್ನು ಪ್ರೋತ್ಸಾಹಿಸಿದ್ದರು” ಎಂದು ನೆನೆದರು.

ಮಾಜಿ ಕೈದಿ ನಂಜುಂಡಸ್ವಾಮಿ

ವೀರಪ್ಪನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದವರು ಅಂಬುರಾಜ್‌. ‘ಮಾಜಿ ಜೀವಾವಧಿ ಕೈದಿ’ಯಾಗಿರುವ ಅವರು, ‘ರಂಗಭೂಮಿಯ ಸ್ಪರ್ಶ ಸಿಗದಿದ್ದರೆ ನಾನು ಟೆರರಿಸ್ಟ್‌ ಆಗುತ್ತಿದ್ದೆ’ ಎಂದು ಭಾವುಕವಾಗಿ ನುಡಿಯುತ್ತಾರೆ.

“ಯಾವುದೇ ಧರ್ಮದವರಾದರೂ ಈ ದೇಶದ ಮಣ್ಣಿನ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುವ ನಾಟಕ- ಜೊತೆಗಿರುವನು ಚಂದಿರ. ಕೋಮು ಆಧಾರದಲ್ಲಿ ದೇಶ ವಿಭಜನೆಯಾದಾಗ ಸಾಮಾನ್ಯರ ಭಾವನೆಗಳು ಹೇಗಿದ್ದವು, ಈ ಮಣ್ಣಿನ ಬಗ್ಗೆ ಇರುವ ಪ್ರೀತಿ ಎಂಥದ್ದು ಎಂಬುದನ್ನು ಬಹಳ ಭಾವನಾತ್ಮಕವಾಗಿ ಕಟ್ಟಿಕೊಟ್ಟ ನಾಟಕವಿದು. ಇದು ಧರ್ಮಕ್ಕಿಂತ ಮನಸ್ಸುಗಳ ವಿಚಾರವನ್ನು ತೆರೆದಿಡುವ ನಾಟಕ” ಎನ್ನುತ್ತಾರೆ ಅಂಬುರಾಜ್.

ಮಾಜಿ ಜೀವಾವಧಿ ಕೈದಿ ಅಂಬುರಾಜ್‌

“ನಾಟಕದ ಮುಖ್ಯ ಪಾತ್ರವಾದ ಬಡೇಮಿಯನ ಮಗಳು ಹಿಂದೂ ಹುಡುಗನನ್ನು ಕರೆದುಕೊಂಡು ಹೋಗಿಬಿಡುತ್ತಾಳೆ. ಹಿಂದೂ ಮುಸ್ಲಿಂ ಮದುವೆಯಾಗುತ್ತಾರೆ. ಇದೇ ಭಾರತದ ಸಂಸ್ಕೃತಿ ಎಂದು ಹೇಳುವ ನಾಟಕವಿದು. ಕೋಮು ದೃಷ್ಟಿಕೋನ ಇಟ್ಟುಕೊಂಡು ಸಮಾಜವನ್ನು ನೋಡಿದರೆ, ಎಲ್ಲವೂ ಕೇಸರಿಯಾಗಿಯೇ ಕಾಣುತ್ತದೆ” ಎಂದು ವಿಷಾದಿಸಿದರು.

“ನನಗೆ ರಂಗಭೂಮಿಯ ನಂಟು ಸಿಗದೇ ಹೋಗಿದ್ದರೆ, ಕಟ್ಟೀಮನಿ ಥರದ ವ್ಯಕ್ತಿಗಳು ಪರಿಚಯವಾಗದೇ ಹೋಗಿದ್ದರೆ ನಾನು ಜೈಲಲ್ಲಿ ದೊಡ್ಡ ಟೆರರಿಸ್ಟ್‌ ಆಗ್ತಾ ಇದ್ದೆ. ನನ್ನ ಬದುಕನ್ನು ಸುಧಾರಿಸಿದ್ದು ರಂಗಭೂಮಿ. ವೀರಪ್ಪನ್‌ ಕೇಸ್‌ ಕಾರಣಕ್ಕೆ ನನಗೆ ಚಿತ್ರಹಿಂಸೆಯನ್ನೂ ನೀಡಿದರು. ಹೀಗಾಗಿ ಅಧಿಕಾರಿಗಳ ಮೇಲೆ, ಸಮಾಜದ ಮೇಲೆ ನನಗೆ ಸಿಟ್ಟಿತ್ತು. ಅದೆಲ್ಲವೂ ಕರಗಿಹೋಗಿ, ನನ್ನನ್ನು ಮನುಷ್ಯನನ್ನಾಗಿ ಮಾಡಿದ್ದು ರಂಗಭೂಮಿ” ಎಂದರು.

ರಂಗಕರ್ಮಿ, ಕೈದಿಗಳಿಗೆ ನಾಟಕಗಳನ್ನು ಕಲಿಸಿದ ಗುರು ಹುಲುಗಪ್ಪ ಕಟ್ಟೀಮನಿ

“ಜೊತೆಗಿರುವನು ಚಂದಿರ – ಮಾನವ ಮೌಲ್ಯಗಳನ್ನು ಬೆಳೆಸುವಂತಹ ನಾಟಕ. ಜೈಲಿನಲ್ಲಿ ಹಿಂದೂ ಮುಸ್ಲಿಂ ಹಬ್ಬಗಳನ್ನು ಒಟ್ಟಾಗಿ ಕೈದಿಗಳು ಆಚರಿಸುತ್ತಾರೆ. ಈ ನಾಟಕ ಹಿಂದೂ- ಮುಸ್ಲಿಂ ನಡುವೆ ಭೇದ ತರುವಂತಿದ್ದರೆ ಕೈದಿಗಳು ಈ ನಾಟಕವನ್ನು ಮಾಡಲು ಸಾಧ್ಯವಾಗುತ್ತಿತ್ತೇ?” ಎಂದು ಪ್ರಶ್ನಿಸಿದರು.

‘ಜೊತೆಗಿರುವನು ಚಂದಿರ’ ನಾಟಕದಲ್ಲಿ ಬಡೇಮಿಯ ಪಾತ್ರದಲ್ಲಿ ಅಭಿನಯಿಸಿದ್ದ ರಮೇಶ್‌ ಆಡುವಳ್ಳಿ ಅವರು ಸುಮಾರು ಹದಿನೈದು ವರ್ಷಗಳ ಕಾಲ ಜೈಲಿನಲ್ಲಿದ್ದವರು. ರಾಜಕೀಯ ಪ್ರಕರಣವೊಂದರಲ್ಲಿ ನನ್ನ ಹೆಸರು ಸಿಕ್ಕಿಕೊಂಡಿತು. ತಪ್ಪು ಮಾಡದೆಯೇ ಶಿಕ್ಷೆ ಅನುಭವಿಸಿದೆ ಎನ್ನುವ ರಮೇಶ್ ಅವರು, ಕಟ್ಟೀಮನಿಯವರ ತಂಡದೊಂದಿಗೆ ಕೆಲಸ ಮಾಡಿದವರು. “‘ತಲೆದಂಡ’ ನಾಟಕದಲ್ಲಿ ಬಸವಣ್ಣ ಪಾತ್ರದಲ್ಲಿ, ‘ಕಸ್ತೂರಬಾ ಗಾಂಧಿ’ ನಾಟಕದಲ್ಲಿ ಗಾಂಧಿಯಾಗಿ ಅಭಿನಯಿಸಿದ್ದಾರೆ. ‘ಮಾಧವಿ’ ನಾಟಕದಲ್ಲಿ ‘ಗಾಲವ’ನಾಗಿ ಅಭಿನಯಿಸಿದ್ದೇನೆ. ನನಗೆ ತುಂಬಾ ಇಷ್ಟವಾದ ನಾಟಕವೆಂದರೆ ಜಯಂತ್‌ ಕಾಯ್ಕಿಣಿಯವರು ಬರೆದ- ಜೊತೆಗಿರುವನು ಚಂದಿರ ನಾಟಕ. ಅದ್ಭುತವಾದ ಕಥೆ ಇದು. ಇದನ್ನು ನೋಡಿದವರು ಹಿಂದೂ- ಮುಸ್ಲಿಂ ವಿವಾದವನ್ನು ಮಾಡಲೇಬಾರದು” ಎಂದು ಅಭಿಪ್ರಾಯಪಟ್ಟರು.

‘ಕಸ್ತೂರ ಬಾ ಗಾಂಧಿ ನಾಟಕ’ದಲ್ಲಿ ಗಾಂಧಿ ಪಾತ್ರದಲ್ಲಿ ರಮೇಶ್‌ ಆಡುವಳ್ಳಿ ಅಭಿನಯಿಸಿದ್ದರು.

“ಕೈದಿಗಳ ಮೇಲೆ ತಪ್ಪು ಅಭಿಪ್ರಾಯ ಹೊಂದಿದ್ದ ಕಾರಾಗೃಹ ಇಲಾಖೆಯ ಮೇಲಧಿಕಾರಿಗಳೇ ನಮ್ಮ ನಾಟಕ ನೋಡಿ ಅಚ್ಚರಿ ಪಟ್ಟರು. ನಮ್ಮ ನಾಟಕ ನೋಡಿ ಅಧಿಕಾರಿಗಳ ಮನಸ್ಸೇ ಪರಿವರ್ತನೆಯಾಗಿತ್ತು” ಎಂದು ತಿಳಿಸಿದರು.

ಇದನ್ನೂ ಓದಿರಿ: ಮುಸ್ಲಿಂ ಪ್ರಧಾನ ಕಥೆ ಹೊಂದಿದೆ ಎಂದು ನಾಟಕಕ್ಕೆ ಅಡ್ಡಿಪಡಿಸಿದ RSS-ಬಜರಂಗದಳದ ದುಷ್ಕರ್ಮಿಗಳು

ರಂಗಕರ್ಮಿ ಹುಲುಗಪ್ಪ ಕಟ್ಟೀಮನಿಯವರನ್ನು ಈ ಕುರಿತು ಮಾತನಾಡಿಸಲು ‘ನಾನುಗೌರಿ.ಕಾಂ’ ತಂಡ ಪ್ರಯತ್ನಿಸಿತು. ನಾಟಕದ ಹೆಸರು ಹಾಗೂ ವಿವಾದದ ಕುರಿತು ಕೇಳಿದ ತಕ್ಷಣ ಕಟ್ಟೀಮನಿಯವರು ಭಾವುಕರಾದರು. “ನನ್ನದೇ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ, ಈ ಕುರಿತು ಬರೆಯುತ್ತೇನೆ” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...