Homeಮುಖಪುಟ‘ತಿರುಚಿತ್ರಂಬಲಂ’: ಧನುಷ್‌- ನಿತ್ಯಾ ಮೆನನ್‌ ನಟನೆಯ ನವಿರು ಪ್ರೇಮಕಥೆ

‘ತಿರುಚಿತ್ರಂಬಲಂ’: ಧನುಷ್‌- ನಿತ್ಯಾ ಮೆನನ್‌ ನಟನೆಯ ನವಿರು ಪ್ರೇಮಕಥೆ

- Advertisement -
- Advertisement -

ಅದೊಂದು ಸುಂದರ ಕುಟುಂಬ. ಆಕಸ್ಮಿಕವಾಗಿ ಘಟಿಸುವ ಅಪಘಾತ. ತಂದೆ- ಮಗನ ನಡುವೆ ಬಗೆಹರಿಯದ ಮನಸ್ತಾಪ. ಅಜ್ಜ ಮತ್ತು ಮೊಮ್ಮಗನ ಆತ್ಮೀಯತೆ. ಚಿಕ್ಕನಿಂದಲೂ ಕಥಾನಾಯಕನ ಜೊತೆಗಿರುವ ಗೆಳತಿ, ಆತನ ಏಳು ಬೀಳುಗಳ ಜೊತೆಯಲ್ಲಿ ಸಾಗುತ್ತಾಳೆ. ಕೊನೆಯಲ್ಲೊಂದು ಟ್ವಿಸ್ಟ್‌. ಪ್ರೀತಿ, ಸ್ನೇಹ, ಕೋಪದೊಳಗೆ ಅವಿತಿರುವ ವಾತ್ಸಲ್ಯ- ಇತ್ಯಾದಿಗಳನ್ನು ಹದವಾಗಿ ಬೆರೆಸಿದ ಸಿನಿಮಾ ತಮಿಳಿನ ‘ತಿರುಚಿತ್ರಂಬಲಂ’

ಮಿತ್ರನ್ ಆರ್ ಜವಾಹರ್ ನಿರ್ದೇಶನದ ‘ತಿರುಚಿತ್ರಂಬಲಂ’- ಎಲ್ಲಿಯೂ ಭಾರವೆನಿಸದೆ, ಮೊದಲಿನಿಂದ ಕೊನೆಯವರೆಗೂ ನವಿರು ಹಾಸ್ಯ ಹಾಗೂ ನವಿರು ಸಂಭಾಷಣೆ ಮೂಲಕ, ಖುಷಿ, ಕೋಪ, ದುಃಖ, ಪ್ರೀತಿ, ಸ್ನೇಹ, ಸಂಬಂಧಗಳ ಏರಿಳಿತದೊಂದಿಗೆ ಸಾಗುತ್ತದೆ. ಮನಸ್ಸನ್ನು ಮುದಗೊಳಿಸುತ್ತದೆ.

ಧನುಷ್‌, ನಿತ್ಯಾ ಮೆನನ್‌, ಪ್ರಕಾಶ್ ರಾಜ್‌, ಭಾರತೀರಾಜ ಮೊದಲಾದ ಕಲಾವಿದರು ಹಠಕ್ಕೆ ಬಿದ್ದಂತೆ ನಟಿಸಿರುವ ‘ತಿರುಚಿತ್ರಂಬಲಂ’- ಲವ್‌ಸ್ಟೋರಿ ಆಧಾರಿತ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕ ವರ್ಗಕ್ಕೆ ಭರಪೂರ ಮನರಂಜನೆ ನೀಡಬಲ್ಲದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಥೆ ಸರಳವಾದರೂ ಚಿತ್ರಕಥೆಯ ನಿರೂಪಣಾ ಶೈಲಿ ಹೊಸ ಅನುಭವವನ್ನು ನೀಡುತ್ತದೆ. ಅನುರುದ್ಧ್ ಅವರ ಸಂಗೀತ- ಹಿತವೆನಿಸುತ್ತದೆ. ಕಥೆಯ ತೂಕವನ್ನು ಹೆಚ್ಚಿಸಿದೆ. ಪ್ರೀತಿಗಾಗಿ ಹಂಬಲಿಸುತ್ತಿರುವ ಪಡಮ್‌ (ತಿರುಚಿತ್ರಂಬಲಂ), ಸೋತು ಗೆಲ್ಲುತ್ತಾನೋ, ಪ್ರೀತಿಯನ್ನು ಧಕ್ಕಿಸಿಕೊಳ್ಳುತ್ತಾನೋ ಎಂಬುದು ಕಥೆ.

ಮಧ್ಯಮ ವರ್ಗದ ಕುಟುಂಬಗಳ ಸುತ್ತ ನಡೆಯುವ ಈ ಸಿನಿಮಾದಲ್ಲಿ ಧನುಷ್‌ (ಪಡಂ) ಒಬ್ಬ ಡೆಲಿವರಿ ಬಾಯ್‌. ಅಪ್ಪ (ಪ್ರಕಾಶ್ ರಾಜ್‌) ಪೊಲೀಸ್‌ ಅಧಿಕಾರಿ. ತಾತ (ಭಾರತೀರಾಜ) ಜನರೇಷನ್‌ ಗ್ಯಾಪ್ ದಾಟಿ ಮೊಮ್ಮಗನೊಂದಿಗೆ ಜಾಲಿಯಾಗಿರುವ ವ್ಯಕ್ತಿ. ಜೊತೆಯಲ್ಲೇ ಕೂತು ಬಿಯರ್‌ ಹೀರುವ ಪ್ರೀತಿ. ಚಿಕ್ಕಂದಿನಿಂದಲೂ ಜೊತೆಯಲ್ಲೇ ಬೆಳೆದಿರುವ ಗೆಳತಿ ಶೋಭನಾ (ನಿತ್ಯಾ ಮೆನನ್‌), ಪಡಂನ ಎಲ್ಲ ಸುಖ, ದುಃಖ, ನೋವು, ನಲಿವು, ಇಷ್ಟ-ಕಷ್ಟಗಳ ಭಾಗ.

ಈ ಸಿನಿಮಾ ಕೇವಲ ಪ್ರೀತಿಯ ಹುಡುಕಾಟದ ಕಥೆಯಾಗಿಯಷ್ಟೇ ಉಳಿಯದೆ ಜನರೇಷನ್‌ಗಳ ನಡುವೆ ಇರುವ ಗೋಡೆಗಳನ್ನು ಕೆಡವುತ್ತ ಹೋಗುತ್ತದೆ. ಚಿತ್ರಕತೆಯ ಜೊತೆಗೆ ಕಥೆಗೆ ಪೂರಕವಾದ ಸಂಭಾಷಣೆ ಇಲ್ಲಿನ ಮತ್ತೊಂದು ಹೈಲೈಟ್‌. ಒಳ್ಳೆಯ ಕಥೆಗೆ ದೊಡ್ಡ ಬಜೆಟ್ ಬೇಕಿಲ್ಲ ಎಂಬುದನ್ನು ತಿರುಚಿತ್ರಂಬಲಂ ಮತ್ತೊಮ್ಮೆ ಸಾಬೀತು ಮಾಡಿದೆ.

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ವಿವಾದಿತ ಆಧಾತ್ಮಿಕ ಗುರುವೆನಿಸಿದ ಓಶೋ ರಜನೀಶ್‌, “ಪ್ರೀತಿ ಕೊಟ್ಟು ಸಂತೋಷ ಪಡುತ್ತದೆ. ಅಹಂಕಾರ ಕಿತ್ತುಕೊಂಡು ಸಂತೋಷಪಡುತ್ತದೆ (Love is happy when it is able to give something. The ego is happy when it is able to take something)” ಎಂದಿದ್ದರು. ಇಲ್ಲಿಯೂ ಅಷ್ಟೇ- ಕೊಟ್ಟು ಸಂತೋಷಪಡುವ ತಾತ್ವಿಕತೆಯೇ ಮೇಲುಗೈ ಸಾಧಿಸುತ್ತದೆ.

ಪಡಂನ ಮೂರು ಪ್ರೇಮ ಕಥೆಗಳು ಇಲ್ಲಿವೆ. ಸಿದ್ಧಮಾದರಿಗಳನ್ನು ಒಪ್ಪಿಕೊಂಡಿರುವ ವ್ಯವಸ್ಥೆಯಲ್ಲಿ ಮೂರನೇ ಪ್ರೇಮಕಥೆ- ತುಸು ಅವಸರವಾಯಿತೇನೋ ಎಂಬ ಅಳುಕು ಪ್ರೇಕ್ಷಕನನ್ನು ಕಾಡುವ ಹೊತ್ತಿಗೆ ಅದನ್ನು ಭಾವುಕ ಸನ್ನಿವೇಶಗಳ ಮೂಲಕ ಭಾರವೆನಿಸದಂತೆ ಕಟ್ಟಿಕೊಟ್ಟಿರುವುದು ಮಿತ್ರನ್‌ ಅವರ ನಿರೂಪಣಾ ಜಾಣ್ಮೆಗೆ ಕನ್ನಡಿ ಹಿಡಿದಿದೆ. ಕ್ಲೈಮ್ಯಾಕ್ಸ್‌ ನಿರೀಕ್ಷಿತವೆನಿಸಿದರೂ ಅದು ಪ್ರೇಕ್ಷಕನಿಗೆ ಒಪ್ಪಿತವಾಗುವುದು ಹೆಚ್ಚುಗಾರಿಕೆ. ಮನೆಮಂದಿಯೆಲ್ಲ ಒಟ್ಟಿಗೆ ಕೂತು ನೋಡಬಹುದಾದ ನವಿರು ಪ್ರೇಮಕಥೆ- ‘ತಿರುಚಿತ್ರಂಬಲಂ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...