Homeಚಳವಳಿಜನಸಂಕಷ್ಟಕ್ಕೆ ದನಿಯಾದ ಜೀವನಾಡಿಗಳು

ಜನಸಂಕಷ್ಟಕ್ಕೆ ದನಿಯಾದ ಜೀವನಾಡಿಗಳು

ಎರಡು ವರ್ಷದ ಕೆಳಗೆ ಅಲುಗಾಡದೆ ಧೈರ್ಯದಿಂದ ಪೋಲಿಸರ ಜೊತೆ ನಡೆದು ಹೋಗಿಬಿಟ್ಟ ವರವರರಾವ್‌ರನ್ನು ತಿರುಗಿ ಹಾಗೇಯೇ ನೋಡುತ್ತೇವಾ?

- Advertisement -
- Advertisement -

ವಿಸ್ಮೃತಿ ಒಂದು ಖಾಯಿಲೆ. ವಯೋಭಾರ ಅದಕ್ಕೆ ಕಾರಣವಿರಬಹುದು. ಜನಮಾನಸದಲ್ಲಿ ಮುಳುಗೇಳುವ ಮನುಷ್ಯ ಏಕಾಂಗಿ ಆದಾಗ, ಖಿನ್ನತೆ ಜೊತೆಯಾಗುತ್ತದೆ. ವಿಸ್ಮೃತಿಗೆ ಪ್ರೇರಣೆ ಆಗುತ್ತದೆ. ತಾನು ಓದಿದ, ತಿಳಿದುಕೊಂಡ, ಭಾಗವಾದ, ಬರೆದ ಚರಿತ್ರೆಯನ್ನು ವರವರರಾವು ಮರೆತು ಹೋಗಬಹುದೆಂದು ಯಾರಾದರೂ ಅಂದುಕೊಂಡಿದ್ದೇವ? ಮಾತು ಸ್ಪಷ್ಟವಾಗಿ, ಸರಿಯಾಗಿ ಇಲ್ಲದ ವರವರರಾವರನ್ನು ಯಾರಾದರೂ ಊಹಿಸಬಲ್ಲರ? ಎಷ್ಟು ಕೃಶವಾಗಿದ್ಧಾರೆ! ಎರಡು ವರ್ಷದ ಕೆಳಗೆ ಅಲುಗಾಡದೆ ಧೈರ್ಯದಿಂದ ಪೋಲಿಸರ ಜೊತೆ ನಡೆದು ಹೋಗಿಬಿಟ್ಟ ವರವರರಾವ್‌ರನ್ನು ತಿರುಗಿ ಹಾಗೇಯೇ ನೋಡುತ್ತೇವಾ?

ಬರಹ: ಕೆ.ಶ್ರೀನಿವಾಸ್ (ಸಂಪಾದಕರು ಆಂಧ್ರಜ್ಯೋತಿ ತೆಲುಗು ದಿನಪತ್ರಿಕೆ)
ಅನುವಾದ: ಅನಿಲ್ ಕುಮಾರ್‌ ಚಿಕ್ಕದಳವಟ್ಟ

ವರವರರಾವ್ ಆರೋಗ್ಯದ ಬಗ್ಗೆ ಕಳವಳ, ಅವರನ್ನು ಬಿಡುಗಡೆ ಮಾಡಬೇಕೆಂಬ ಬಯಕೆ ತೆಲುಗು ಸಮಾಜದಲ್ಲೇ ಅಲ್ಲ, ದೇಶ ವಿದೇಶಗಳಲ್ಲಿಯೂ ಬಲವಾಗುತ್ತಿದೆ. ಪ್ರತಿ ಪ್ರತಿರೋಧ, ಪ್ರತಿಭಟನೆಗೂ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪ್ರತಿನಿಧಿಗಳಾಗಿ ಕೇಳಿಬರುವ ಹೆಸರುಗಳೆಲ್ಲ ಅವರಿಗಾಗಿ ರೂಪುಗೊಳ್ಳುತ್ತಿರುವ ಹೇಳಿಕೆಗಳಲ್ಲಿ, ಮನವಿಗಳಲ್ಲಿ ಕಾಣಿಸುತ್ತಿವೆ.

ಕೆಲವು ಚಿಂತನೆಗಳ ವಿಷಯಗಳಲ್ಲಿ, ಆ ಚಿಂತನೆಗಳ ಸಾಧಕರ ವಿಷಯದಲ್ಲಿ ತಾವು ಕಠಿಣವಾಗಿಯೂ, ಧೃಢವಾಗಿಯೂ ಇರಬೇಕೆಂದುಕೊಂಡಿದ್ದೇವೆ ಎಂದು ಭಾರತದ ಪ್ರಭುತ್ವವನ್ನು ನಿರ್ವಹಿಸುತ್ತಿರುವ ರಾಜಕೀಯ ನಾಯಕತ್ವ ಭಾವಿಸುತ್ತಲಿರಬಹುದು, ಆ ವೈಖರಿ ಎಲ್ಲಾ ಅವಧಿಗಳನ್ನು ದಾಟಿ ಕ್ರೂರವಾಗಿ, ಅಮಾನವೀಯವಾಗಿ ವ್ಯಕ್ತವಾಗುತ್ತಿದೆ. ಅದಕ್ಕಾಗಿಯೇ, ಇತರೆ ಸಂಧರ್ಭಗಳಲ್ಲಿಯೂ ಇಂತಹ ಬಂಧಗಳ ಕುರಿತು ಮಾತನಾಡದ ವ್ಯಕ್ತಿಗಳು ಸಹ ಬಾಯಿ ಬಿಡುತ್ತಿದ್ದಾರೆ.


ಓದಿ: ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.


ಈ ಬಂಧನಗಳು ಇಪ್ಪತ್ತೆರಡು ತಿಂಗಳುಗಳಿಂದ ಸಾಗುತ್ತಿದ್ದರೂ, ಇನ್ನು ಇದರ ಕುರಿತು  ಮಾತನಾಡದಿದ್ದರೆ ಆತ್ಮಸಾಕ್ಷಿ ಒಪ್ಪಿಕೊಳ್ಳಲಾರದ ಸ್ಥಿತಿಯನನ್ನು ಮತ್ತೊಂದಷ್ಟು ಜನ  ಈಗೀಗ ಗುರುತಿಸುತ್ತಿದ್ದಾರೆ. ಕಬ್ಬಿಣ ಸಹ ಕರಗುತ್ತಿದೆ. ‘ಉಪಾ’ವನ್ನು ಎತ್ತಿ ಹಿಡಿದು, ಹೊಸ ಉಡುಗೆ ತೊಡಗಿಸಿದ ಚಿದಂಬರಮ್ ಕೂಡ ವರವರರಾವ್ ಬಿಡುಗಡೆಯನ್ನು  ಕೋರುತ್ತಿದ್ದಾರೆ.

ಬಂಧನ ಅನ್ಯಾಯವೆಂದು, ಅಕ್ರಮವೆಂದು ಪ್ರತಿಭಟಿಸುವುದರಿಂದ ಹಿಡಿದು ಅನಾರೋಗ್ಯವನ್ನು ವೃಧ್ಯಾಪ್ಯವನ್ನು ನೋಡಿಯಾದರೂ ಸ್ಫಂಧಿಸಬೇಕೆಂದು ಕೇಳುವವರೆಗೂ ನಾಗರೀಕ ಸಮಾಜ ಬಂದಿದೆ. ಕಲ್ಲುಬಂಡೆ ಪ್ರಭುತ್ವಗಳ ಸ್ಪಂಧನರಾಹಿತ್ಯವನ್ನ, ನ್ಯಾಯವನ್ನ ರಕ್ಷಿಸಬೇಕಾದ ವ್ಯವಸ್ಥೆಯ ವೈಪಲ್ಯವನ್ನು, ಜನ ಹೋರಾಟಗಳ ನಿಸ್ಸಾಯಕತೆಯನ್ನು ಈ ಅವರೋಹಣ ತಿಳಿಸುತ್ತದೆ.

ಪ್ರಜಾಪ್ರಭುತ್ವ ಮೌಲ್ಯಗಳು, ಸಹಜ ನ್ಯಾಯದಂತಹ ನಾಗರೀಕ ಅಂಶಗಳೇನು ಚಲಾವಣೆ ಆಗದಿದ್ದಾಗ, ಕನಿಷ್ಟ ಮಾನವೀಯತಯ ಪ್ರತಿಪಾಧನೆಯ ಮೇಲೆಯೇ ಕೇಳಿಕೊಳ್ಳಬೇಕಾಗುತ್ತದೆ. ಅಲ್ಲಿಯೂ ಸಹ ಬಾಗಿಲು ಮುಚ್ಚಿರುವಾಗ, ಶಿಲಾಸದೃಷ ಮೌನ   ಎದುರಾದಾಗ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲದಂತಾಗುತ್ತದೆ. 90% ರಷ್ಟು ಅಂಗವಿಕಲರಾದ ಸಾಯಿಬಾಬರನ್ನು, ವ್ಯವಸ್ಥೆಗೆ ಅತ್ಯಂತ ಅಪಾಯಕರಿ ಎಂದೂ ಏಕಾಂಗಿಯಾಗಿ ಕಾರಾಗೃಹದಲ್ಲಿ ಬಂಧಿಸಿದಾಗ, ವ್ಯವಸ್ಥೆಯು ವಿವೇಚನೆಯ ಅಂಗವೈಕಲ್ಯದ  ಕಟಕಟೆಯಲ್ಲಿ ನಿಲ್ಲುತ್ತದೆ.

ಅಸಹನೆ, ಕೂಗಾಟ ಯಾವ ಕಾಲಕ್ಕೆ ಒಂದು ಸ್ಪಷ್ಟ ರಾಜಕೀಯ ನಿರಾಕಾರಣೆಯಾಗಿ ಬದಲಾಗುತ್ತದೋ, ಯಾವಾಗ ಆಚರಣೆಯಾಗಿ ಪರಿಣಮಿಸುತ್ತದೋ ಎಂದು ಹೇಳಲಾಗುವುದಿಲ್ಲವಾದರೂ, ಪರಿಣಾಮಗಳು ಮಾತ್ರ ಇರುತ್ತವೆ. ಅಪನಂಬಿಕೆಗಳು, ಭಿನ್ನಾಭಿಪ್ರಯಗಳು, ಅಸಹಾಕರಗಳು, ಆಚರಣೆಗಳು ಎಲ್ಲವನ್ನೂ ನಿರ್ಭಂಧದಿಂದಲೇ ವ್ಯವಹರಿಸಬಹುದೆಂದು ಆಳುವವರು ಅಂದುಕೊಂಡರೆ, ನಡೆಯಲಿರುವ ಚರಿತ್ರೆಯನ್ನು ಕುತೂಹದಿಂದ , ಕಳವಳದಿಂದ ನೋಡಬೇಕಷ್ಟೆ.

ಮುಂಬರುವ ದಿನಗಳು ಅಷ್ಟೇನು ಆಶಾದಾಯಕವಾಗಿಲ್ಲ, ಜನರು ತಾವಿರುವ ಪ್ರಮಾದದ ಪ್ರಮಾಣವನ್ನು, ತಾವು ಬೆಳೆಸಿ ಪೋಷಿಸುತ್ತಿರುವ ಉಪದ್ರವಗಳನ್ನು ತಿಳಿದುಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ. ಅವರ ಬುದ್ದಿವಂತಿಕೆ, ಸ್ಪಂಧನೆಗಳು, ಉದ್ವೇಗಗಳು ಪ್ರೋಗ್ರಾಮಿಂಗ್ ಮಾಡಿ, ನಡೆಸುವಂತಹ ಶಕ್ತಿಗಳು ಬಲವಾಗಿವೆ ಹಾಗೂ ಇನ್ನು ಬಲಗೊಳ್ಳುತ್ತಿವೆ. ಅವರು ತಮಗೆ ಇರುವ ದೀರ್ಘಕಾಲಿಕ ಪ್ರಣಾಳಿಕೆಯ ಪ್ರಕಾರ ಒಂದೊಂದೆ ಹೆಜ್ಜೆ ಹಾಕುತ್ತಿದ್ದಾರೆ.


ಓದಿ: ಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?


ಶತಮಾನಗಳ ಕಾಲದಿಂದ, ವಸಹಾತುಶಾಹಿ ವಿರುದ್ಧದ ರಾಷ್ಟ್ರೀಯ ಹೋರಾಟದಿಂದ ಹಿಡಿದು ಅನೇಕ ಸಾಮಾಜಿಕ ಹೋರಾಟ, ರಾಜಕೀಯ ಹೋರಾಟ, ಹೀಗೆ ಅನೇಕ ಹೋರಾಟಗಳಿಂದ ಈ ದೇಶ ಪಡೆದುಕೊಂಡ ಆದರ್ಶಗಳನ್ನು, ಹೊಸ ಮೌಲ್ಯಗಳನ್ನು, ಮಾನವೀಯತೆಯನ್ನು–ಎಲ್ಲವನ್ನು ಧ್ವಂಸ ಮಾಡುವ ಪ್ರಕ್ರಿಯೆ ಮುಂದುವರೆಯುತ್ತಿದೆ.

ಪ್ರಜಾಪ್ರಭುತ್ವ ಮೂಲ ತತ್ವಗಳನ್ನು, ಸಾಮೂಹಿಕ ಸದ್ಬಾವನೆ, ಪರಿವರ್ತನೆಯ ಅಡಿಪಾಯವನ್ನು ಅಳಿಸಿಹಾಕದ ಹೊರತು, ಏರ್ಪಟ್ಟಂತಹ ಆಧಾರ ತಲೆಕೆಳಗಾಗಿಸದೆ ಈ ದೇಶದಲ್ಲಿ ಅವರು ಅಂದುಕೊಳ್ಳುವ ರೀತಿಯ ಸಮಾಜ, ದೇಶ ನಿರ್ಮಾಣವಾಗುವುದಿಲ್ಲ.  ಅದಕ್ಕಾಗಿಯೇ ಒಂದು ಶುದ್ಧೀಕರಣ ಅವಶ್ಯಕವಾಗಿದೆ. ಬೇರೆ ಬೇರೆ ಸ್ಥಾಯಿಯಲ್ಲಿ, ಬೇರೆ ಬೇರೆ ಹಂತದಲ್ಲಿ ವಿಧವಿಧವಾದ ನಿರ್ಮೂಲನೆ ಬೇಕಾಗಿದೆ. ಈ ಕ್ರಿಯೆ  ಕಾಣಿಸುತ್ತಲೇ ಇದೆ. ಕೆಲವರು ಮಾತ್ರ ಇದನ್ನು ಕಾಣುತ್ತಿದ್ದಾರೆ.

ಪರಿಸ್ಥಿತಿ ಇಷ್ಟು ಹದಗೆಡಲು ಎಡಪಂಥ, ಪ್ರಜಾಪ್ರಭುತ್ವ ಪರ ರಾಜಕೀಯ ಜವಾಬ್ದಾರಿ ಕೂಡ ಇದೆ. ವರವರರಾವು ಪ್ರತಿನಿಧಿಸುವ ರಾಜಕೀಯಗಳ ಪಾಲು ಸಹ ಕಡಿಮೆ ಏನಲ್ಲ. ಮಧ್ಯಮ ರಾಜಕಾರಣಗಳ ವೈಫಲ್ಯ, ಭಾರತದೇಶ ನಿರ್ಧಿಷ್ಟ ಪರಿಸ್ಥಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ಸಿದ್ದಾಂತಗಳಿಗೆ ಅನ್ವಯಿಸುವುದರಲ್ಲಿ, ಅಚರಣೆಯಲ್ಲಿ ಇಡುವುದರಲ್ಲಿ ದೊಡ್ಡ ದೊಡ್ಡ ತಪ್ಪುಗಳೇ ನಡೆದವು. ಇದನ್ನು ಗುರುತಿಸಿದ ನಂತರವು ತಿದ್ದಿ ನಡೆಯುವುದು ವಿಳಂಬವಾಯಿತು. ನೋಡ ನೋಡುತ್ತಿಂದಂತೆಯೇ  ಭಯಪಡುವಷ್ಟು ಸಂಭವಿಸಿತು.

ಪ್ರಗತಿಯಪರ ಎಂದು ಹತ್ತಿರದಿಂದ ಮುಗಿಸುವ ಯಜ್ಞ ಆರಂಭವಾಗಿದೆ. ವರವರರಾವು ಅಂತಹವರ ಬಂಧನವೇ ಅಲ್ಲ, ಈ ಬಂಧನಗಳಿಗೆ ಪರಿಸ್ಥಿತಿಗಳಿಗೆ ಸಮಾಜದಲ್ಲಿ ಲಭಿಸುತ್ತಿರುವ ಮೌನ, ಕ್ರೀಯಾಶೀಲ ಮತೋನ್ಮಾಧವನ್ನು ಬೆಳೆಸುವ ಉದ್ರೇಕದ ಕಾರ್ಯಕ್ರಮಗಳ ಜೊತೆಗೆ, ಲೌಕಿಕ, ಉದಾರ ಭಾವನೆಗಳ ಮೇಲೆ ತೀವ್ರ ಯುದ್ದವು ಸಹ ಮುಂದವರೆಯುತ್ತದೆ ಇದರ ಭಾಗವೇ ವರವರರಾವ್ ಅವರ ನಿರ್ಧಾಕ್ಷಿಣ್ಯ ಬಂಧನ.


ಓದಿ: ಅಂಬೇಡ್ಕರ್‍ರ ಕನಸನ್ನು ತನ್ನದೇ ರೀತಿಯಲ್ಲಿ ನನಸಾಗಿಸಲು ದುಡಿಯುತ್ತಿರುವ ಅನೂಪ್ ಕುಮಾರ್‍


ಕಾಶ್ಮೀರ್ ನಂತಹ ವಿಷಯಗಳಲ್ಲಿ ಏನು ಮಾಡುವುದಕ್ಕಾದರೂ ಸರಿ ರಾಷ್ಟ್ರೀಯತೆ ಆಯುಧವಾಗಿಯು, ಕವಚವಾಗಿಯೂ ಉಪಯೋಗಕ್ಕೆ ಬರುತ್ತದೆ. ಪೌರತ್ವ ಕಾಯ್ದೆಯನ್ನು ವಿರೋಧಿಸಿದವರ ಮೇಲೆ ಸಾಲು ಸಾಲು ಕೇಸ್ಗಳನ್ನು ಹಾಕಲು ಬಹುಸಂಖ್ಯವಾದ ಛತ್ರಿಯಾಗುತ್ತದೆ. ಈ ಹಿಂದೆಯೇ ಹುಟ್ಟುಹಾಕಿದ ಕೆಡಕುಗಳಿಗೆ ಇರುವ ಅವಕಾಶಗಳು, ಸಮಾಜದಲ್ಲಿನ ತಳ ಸಮುದಾಯಗಳ ಏಳಿಗೆಗಾಗಿ ಕೆಲಸ ಮಾಡಿದ, ಹೋರಾಟಗಾರರ ಹಕ್ಕುಗಳಿಗಾಗಿ ಹೋರಾಡುವ ಪ್ರಜಾಪ್ರಭುತ್ವಾವಾದಿಗಳ ವಿಷಯದಲ್ಲಿ ಇರುವುದಿಲ್ಲ. ಬಹುಸಾಂಖ್ಯಾತರ ಭಾವನೆಗಳೊಂದಿಗೆ ಅವರ ಮೇಲೆ ವಿರೋಧವನ್ನು ವಿಶಾಲವಾಧ ತಾಲಳಹದಿಯಲ್ಲಿ ಹುಟ್ಟುಹಾಕಲು ಸಾಧ್ಯವಾಗುತ್ತಿಲ್ಲ.

ಈ  ಪ್ರಜಾಪ್ರಭುತ್ವದ ಹೋರಾಟಗಾರರ ಸ್ವಾರ್ಥರಾಹಿತ್ಯ, ವ್ಯಕ್ತಿಗತ ನೈತಿಕತೆ, ಬದ್ದತೆ, ಪ್ರಜಾ ತಳಹದಿ ಅವರಿಗೆ ರಕ್ಷೆಯಾಗಿ ಇರತ್ತವೆ. ಬಂಧನದ ವಾತವಾರಣದ ನೆಪಥ್ಯದಲ್ಲಿ, ಕಠಿಣ ಕಾಯ್ದೆಗಳ ಅಮಾನವೀಯ ಜಾರಿ ಮೂಲಕ ಮಾತ್ರವೇ, ಪಜಾಪ್ರಭುತ್ವ ವಾದಿಗಳನ್ನು ಬಂಧಿಸಿ ಇಡುವರು. ಇದಕ್ಕೆ ಜನರ ಪ್ರತಿಕ್ರಿಯೆ, ನಾಗರೀಕ ಸಮಾಜದ ಸ್ಫಂದನೆ ಹೇಗೆ ಇರುತ್ತದೆ ಎನ್ನುವ ಅನುಮಾನ ಪ್ರಭುತ್ವಗಳಿಗೆ ಇರುತ್ತದೆ.

ಈ ದೇಶ ಪರೋಪಕಾರಗಳಿಗೆ, ಸಾಹಸಗಳಿಗೆ, ತ್ಯಾಗಗಳಿಗೆ ಕಡಿಮೆ ಏನಿಲ್ಲ. ಅಂತಹ ವಿಶಿಷ್ಟ, ಪ್ರತ್ಯೇಕ ಸಮೂಹದಿಂದ ಹತ್ತು ಜನರನ್ನು ಅಥವಾ ಇಪ್ಪತ್ತು  ಜನರನ್ನು ಮಾತ್ರ ಮಾದರಿಯಾಗಿ ತೆಗೆದುಕೊಂಡು ಭಾರತದ ಜನರ ಪ್ರಜಾಸ್ವಾಮ್ಯದ ಸ್ಪಂದನೆಗಳನ್ನು ಪ್ರಭುತ್ವ ಪರಿಶೀಲಿಸುತ್ತಿದೆ. ಇದೊಂದು ರೀತಿಯ ನಕಾರಾತ್ಮಕ ಕ್ಲಿನಿಕಲ್ ಟ್ರಯಲ್. ಸ್ಫಂದನೆ ಇದಿಯೋ ಇಲ್ಲವೋ, ಮಂದವಾಗಿದೀಯೊ ಆಪರೇಷನ್ ಸಕ್ಸಸ್. ಬಂಧನಗಳಿಗೆ ಮತ್ತೊಂದು ಸಾಲು ಸಿದ್ಧ ಮಾಡಿಕೊಳ್ಳಬಹುದು. ಈಗ ವರವರರಾವ್, ಆನಂದ್ ತೇಲ್ತುಂಬ್ಡೆ, ಸುಧಾ ಭಾರಧ್ವಾಜ್, ಷೋಮಾಸೇನ್, ಅಖಿಲ್ ಗೋಗಾಯಿ, ಗೌತಮ್ ನವಲಖರಂತಹವರೇ ಮೊದಲ ಸಾಲಿನ ಪರೀಕ್ಷೆಯಲ್ಲಿ ಇರಬಹುದು.

ಇನ್ನೂ ಕೆಲವು ದಿನಗಳಿಗೆ ಸೀತರಾಂ ಯೇಚೂರಿ, ಬೃಂದಾ ಕಾರಟ್, ಸುರವರಂ ಸುಧಾಕರ್ ರೆಡ್ಡಿ, ಕಂಕಣಾಲ ನಾರಾಯಣ, ಕೊನೆಗೆ ಫೆಡರಲಿಜಂ ಬಗ್ಗೆ ಮಾತನಾಡುವ ಕೆಸಿಆರ್, ಇನ್ನೂ ಹಳೇಯ ವಾಸನೆ ಇರುವ ಕಾಂಗ್ರೇಸ್ ಯೋಧರು – ಎಲ್ಲರೂ ಸಾಲಿನಲ್ಲಿ ನಿಲ್ಲಲೇಬೇಕಾಗುತ್ತದೆ. ನೆಹುರುರನ್ನೇ ಮತ್ತೆ ಸಾಯಿಸುತ್ತಿರುವವನಿಗೆ ರಾಹುಲ್ ಗಾಂಧಿ ಒಂದು ಲೆಕ್ಕಾನ? ದೇವರನ್ನ ತಲೆಯ ಮೇಲೆ ಎತ್ತಿಕೊಂಡರೂ, ಕಲಕತ್ತಾ ಕಾಳಿಗೆ ಕೈ ಮುಗಿದರು, ನರೇಂದ್ರ ಮೋದಿಗೆ ಜೈಕಾರ ಹಾಕಿದರೂ ಉಪಯೋಗವೇನು ಇರುವುದಿಲ್ಲ. ಸರ್ವಧರ್ಮಗಳನ್ನು ಪರಿತ್ಯಜಿಸಿ, ಅವರೆ ದಿಕ್ಕೆಂದು ಶರಣು ಬೇಡಿಕೊಳ್ಳಬೇಕು. ರಾಡಿಕಲ್ ಶಕ್ತಿಗಳ ಮೇಲೆ ಮಾತ್ರವೇ ಅಸ್ತ್ರಗಳು ಗುರಿಯಿಟ್ಟಿವೆ ಎಂದುಕೊಂಡರೆ ಅದು ಭ್ರಮೆ.


ಓದಿ:  ಸನಾತನ ಸಂಸ್ಥೆಯೋ? ಸೈತಾನ ಪಡೆಯೋ??


ಪ್ರಜೆಗಳು, ಕಲ್ಯಾಣ, ಸಂಕ್ಷೇಮ, ಶ್ರಮಜೀವಿಗಳು, ಸಮಾನತೆ, ಹಕ್ಕುಗಳು, ಪ್ರಾದೆಶಿಕ ನ್ಯಾಯ ಎನ್ನುವಂತಹ ಮಾತುಗಳನ್ನು ಉಪಯೋಗಿಸುವ ಎಲ್ಲರೂ ಸಾಲಿನಲ್ಲಿ ನಿಲ್ಲಲೇಬೇಕು. ಸರತಿ ನಮ್ಮವರೆಗೂ ಬರಬಾರದೆಂದರೆ, ಭಾರತದ ಪ್ರಜಾಸ್ವಾಮ್ಯದ ವೈಶಿಷ್ಟ್ಯಕ್ಕೆ ಸಂಕೇತವಾಗಿ, ರಕ್ಷಣೆಗೆ ಮೊದಲ ಸಾಲಿನಲ್ಲಿ ಗೋಡೆಯಾಗಿ ನಿಂತ ವರವರರಾವು ಅಂತಹವರನ್ನು ರಕ್ಷಿಸಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ವಿರೋಧಿಗಳ ಪ್ರಯತ್ನಗಳು ಸೋತು ಹೋಗಬೇಕು.

ಸರ್ಕಾರ ವರವರರಾವ್ ಬಂಧನವನ್ನು ಮುಂದುವರೆಸುತ್ತಾ, ನೈತಿಕತೆಯನ್ನು ಕಳೆದುಕೊಂಡ ಸ್ಥಿತಿಗೆ ಜಾರಿದೆ. ಈ ಅನೈತಿಕತೆ ಕೇವಲ ದುರ್ಬಲ ಸ್ಥಿತಿಯಲ್ಲಿ ಇರುವ ವ್ಯಕ್ತಿಯನ್ನು ಬಂಧಿಸುವುದರಿಂದ ಏರ್ಪಟ್ಟಿರುವುದಷ್ಟೇ ಅಲ್ಲಾ. ವರವರರಾವ್ ಎಂಬ ಒಬ್ಬ ವ್ಯಕ್ತಿಯ ಐವತ್ತು ವರ್ಷದ ಕ್ರೀಯಾಶೀಲ ಸಾರ್ವನಿಕ ಜೀವನ ಈ  ಸಂದರ್ಭದಲ್ಲಿ ಚರ್ಚೆಗೆ ಬರುತ್ತಿದೆ.

ಸಮಕಾಲೀನದಲ್ಲಿ ಅವರನ್ನು ವಿರೋಧಿಸಿದ, ಅವರ ಜೊತೆ ಭಿನ್ನಭಿಪ್ರಾಯವಿದ್ದವರೂ ಸಹ ಅವರದು ಉತ್ತಮ ಸಾರ್ವಜನಿಕ ವ್ಯಕ್ತಿತ್ವ ಎಂದು ಗುರುತಿಸುತ್ತಿದ್ದಾರೆ. ಕವಿ ಮಾತ್ರವಲ್ಲ ಕವಿಯಾಗಿ ಶಿಖರ, ವ್ಯಕ್ತಿಯಾಗಿ ಅಸಾಮಾನ್ಯ, ಅಸಾಧಣ ವ್ಯಕ್ತಿ. ತೆಲಂಗಾಣವನ್ನು ಹೋರಾಟದ ಸಮುದಾಯವೆಂದು ಭಾವಿಸಿದರೆ, ಅದರ ಕೈಯಲ್ಲಿ ವ್ಯಕ್ತಿತ್ವವನ್ನು ರೂಪಸಿಕೊಂಡು, ತಿರುಗಿ ಅದನ್ನು ರೂಪಿಸಿದವರು. ಪ್ರತ್ಯೇಕ ರಾಜ್ಯವಾಗಿ ಉಗಮಿಸಿದ ತೆಲಂಗಾಣ ಹೋರಾಟದಲ್ಲಿ ಅವರೊಂದು ಜಲಪಾತ. ಅವರ ರಾಜಕೀಯ ನಂಬಿಕೆಗಳನ್ನು ಎಷ್ಟಾದರೂ ವಿಮರ್ಶಿಸಬಹುದು. ಆದರೆ ಅವರ ಕನಸನ್ನು ಹಂಚಿಕೊಳ್ಳದೇ ಇರಲಾರೆವು.

ವಿಸ್ಮೃತಿ ಒಂದು ಖಾಯಿಲೆ. ವಯೋಭಾರ ಅದಕ್ಕೆ ಕಾರಣವಿರಬಹುದು. ಜನಮಾನಸದಲ್ಲಿ ಮುಳುಗೇಳುವ ಮನುಷ್ಯ ಏಕಾಂಗಿ ಆದಾಗ, ಖಿನ್ನತೆ ಜೊತೆಯಾಗುತ್ತದೆ. ವಿಸ್ಮೃತಿಗೆ ಪ್ರೇರಣೆ ಆಗುತ್ತದೆ. ತಾನು ಓದಿದ, ತಿಳಿದುಕೊಂಡ, ಭಾಗವಾದ, ಬರೆದ ಚರಿತ್ರೆಯನ್ನು ವರವರರಾವು ಮರೆತು ಹೋಗಬಹುದೆಂದು ಯಾರಾದರೂ ಅಂದುಕೊಂಡಿದ್ದೇವ? ಮಾತು ಸ್ಪಷ್ಟವಾಗಿ, ಸರಿಯಾಗಿ ಇಲ್ಲದ ವರವರರಾವರನ್ನು ಯಾರಾದರೂ ಊಹಿಸಬಲ್ಲರ? ಎಷ್ಟು ಕೃಶವಾಗಿದ್ಧಾರೆ! ಎರಡು ವರ್ಷದ ಕೆಳಗೆ ಅಲುಗಾಡದೆ ಧೈರ್ಯದಿಂದ ಪೋಲಿಸರ ಜೊತೆ ನಡೆದು ಹೋಗಿಬಿಟ್ಟ ವರವರರಾವ್‌ರನ್ನು ತಿರುಗಿ ಹಾಗೇಯೇ ನೋಡುತ್ತೇವಾ?

ಬಿಡುಗಡೆಗೊಂಡು, ವಿಶ್ರಾಂತಿ ಪಡೆದರೆ ಮತ್ತೆ ಅವರನ್ನು ಅವರಲ್ಲಿ ಸ್ಥಾಪಿಸಬಹುದೆಂಬುದೇ ಅಲ್ಲವೇ ಆತ್ಮೀಯರೇ ಆಸೆ!


ಓದಿ: IIM ಅಹಮದಾಬಾದ್‍ನ ಮೊದಲ ಹಳೆಯ ವಿದ್ಯಾರ್ಥಿ, ಮೊದಲ IIT ಪ್ರೊಫೆಸರ್ ಹಾಗೂ ಮೊದಲ ಕಾ‍ರ್ಪೊರೇಟ್ CEO ಆನಂದ್‌ ತೇಲ್ತುಂಬ್ಡೆ ಬಂಧನ ಸರಿಯೇ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...