Homeಚಳವಳಿಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ಕೆರೆಯನ್ನು ಗಲೀಜು ಮಾಡಿದ್ದ ಮೇಲ್ಜಾತಿಯವನನ್ನು ದಲಿತನೊಬ್ಬ ಪ್ರಶ್ನನಿಸಿದ್ದೆ ದಲಿತರ ಭೀಕರ ಹತ್ಯಾಕಾಂಡಕ್ಕೆ ಕಾರಣವಾಯಿತು.

- Advertisement -
- Advertisement -

ದಲಿತ ದಮನಿತರ ಮೇಲಿನ ದೌರ್ಜನ್ಯದ ಕೇಸುಗಳನ್ನು ದುಡ್ಡಿರುವ ಮೇಲ್ಜಾತಿಯ ಜನ ಎಲ್ಲಿಬೇಕಾದರೂ ಗೆದ್ದು ಬರುತ್ತಾರೆ. ಈಗಲೂ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಬಂದಿವೆ. ಬಾಬಾ ಸಾಹೇಬ್ ಅಂಬೇಡ್ಕರರ ಕರೆಯಾದ ಶಿಕ್ಷಣ, ಸಂಘಟನೆ, ಸಂಘರ್ಷದ ಮೂಲಕ ತರುವ ಬದಲಾವಣೆಯೇ ದಲಿತರನ್ನು ಶೋಷಣೆಯ ಸಮುದ್ರದಿಂದ ಆಚೆ ತೆಗೆದು ದಡ ಸೇರಿಸಬಲ್ಲದು.

ಬರಹ: ಅನಿಲ್‌ ಕುಮಾರ್ ಚಿಕ್ಕದಾಳವಟ್ಟ

ದಲಿತರ ಮೇಲೆ ನಡೆದ ಅಮಾನುಷ ದೌರ್ಜನ್ಯಗಳಲ್ಲಿ ಒಂದಾದ ಕಾರಂಚೇಡು ಘಟನೆಗೆ ಇಂದಿಗೆ 35 ವರ್ಷ. ಮನುವಾದದ ವಿಷ ಬೀಜಗಳನ್ನು ನಿಧಾನಗತಿಯಲ್ಲಿ ಮೈ ಮನಸಲ್ಲಿ ಹರಡುವಂತೆ ಮಾಡುವಲ್ಲಿ ಬ್ರಾಹ್ಮಣ್ಯ ಕೆಲಸ ಮಾಡಿದೆ ಎನ್ನಲು ಈ ಭೀಕರ ಘಟನೆಗಳೇ ಸಾಕ್ಷ್ಯಗಳಾಗಿವೆ. ಅಶ್ಪಶ್ಯರನ್ನು ತಮ್ಮ ಭೂಮಿಗಳಲ್ಲಿ ದುಡಿಸಿಕೊಂಡು ಮೆರೆದ ಭೂಮಾಲಿಕರು ಎಂದೆದಿಂದಿಗೂ ದಲಿತರು ತಮ್ಮ ಕಾಲ ಕೆಳಗೆ ಇರಬೇಕೆಂದು ಶತ ಶತಮಾನಗಳಿಂದ ಬಯಸಿದ್ದರು.

ಆಂಧ್ರ-ತೆಲಂಗಾಣಗಳಲ್ಲಿ ಸಾವಿರಗಟ್ಟಲೆ ಎಕರೆಗಳ ಮಾಲೀಕರಾದ ಮೇಲ್ಜಾತಿಯ ಜನ ಕೆಳವರ್ಗದವರನ್ನು ಜೀತದಾಳುಗಳಾಗಿರಿಸಿಕೊಂಡು, ಅವರಿಗೆ ಒಂದಿಂಚೂ ಭೂಮಿಯ ಒಡೆತನ ನೀಡದೆ ಶೋಷಣೆ ಮಾಡಿದ್ದರು (ಈಗ ಭೂಮಿಯಿದೆ ಆದರೆ, ಶೋಷಣೆ ನಿಂತಿಲ್ಲ). ಅಂತಹ ಭಯಾನಕವಾದ ಸಮಯದಲ್ಲೂ ಶೋಷಣೆಯ ವಿರುದ್ಧ ಸಿಡಿದೆದ್ದ ಸಾಕಷ್ಟು ಜನ ಹೋರಾಟಗರರು ಹುತಾತ್ಮರಾಗಿದ್ದಾರೆ. ದಲಿತರ ಮೇಲಿನ ಶೋಷಣೆಯನ್ನು ಪ್ರಶ್ನಿಸಿದ್ದಕ್ಕಾಗಿ ನಡೆದ ಕಾರಂಚೇಡು ದಲಿತರ ಮೇಲಿನ ಹತ್ಯಾಕಾಂಡಕ್ಕೆ ಇಂದಿಗೆ 35 ವರ್ಷ.

1985, ಆಗಿನ ವಿಶಾಲ ಆಂಧ್ರಪ್ರದೇಶದಲ್ಲಿನ ಪ್ರಕಾಶಂ ಜಿಲ್ಲೆಯ ಕಾರಂಚೇಡು ಎಂಬ ಗ್ರಾಮದಲ್ಲಿ ದಲಿತರು ಮತ್ತು ಮೇಲ್ಜಾತಿಯ ಜನಕ್ಕೆ ಪ್ರತ್ಯೇಕವಾಗಿ ಎರಡು ಕೆರೆಗಳನ್ನು ಮಾಡಿಕೊಂಡಿದ್ದರು. ದಲಿತ ಸಮುದಾಯದ ಮಾದಿಗ ಜನಾಂಗದ ಜನರು ತಮ್ಮ ಕೆರೆಯ ನೀರನ್ನು ಕುಡಿಯಲೂ ಸಹ ಬಳಸುತ್ತಿದ್ದರಿಂದ  ಅದನ್ನು ಶುಚಿಯಾಗಿ ಇಟ್ಟುಕೊಂಡಿದ್ದರು.


ಓದಿ: ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!


1985 ಜುಲೈ 16 ರಂದು ಕಮ್ಮ ಜಾತಿಗೆ ಸೇರಿದ ಕೊಳಕು ಮನಸ್ಸಿನ ಸವರ್ಣೀಯನೊಬ್ಬ ದಲಿತರ ಕುಡಿಯುವ ನೀರಿನ ಕೆರೆಗೆ ದನಗಳನ್ನು ಇಳಿಸಿ, ಅವುಗಳ ಮೈ ತೊಳೆದು, ಅವು ಕುಡಿದು ಉಳಿದ ಮುಸುರೆ ನೀರನ್ನು ಸುರಿದ. ಇದನ್ನು ಕಂಡ ಮಾದಿಗ ಜನಾಂಗದ ಯುವಕರು ಈ ರೀತಿ ಮಾಡಿದರೆ ನಾವು ನೀರು ಕುಡಿಯುವುದು ಹೇಗೆ ಎಂದು ಪ್ರಶ್ನಿಸಿದ್ದರು. ಕೆಳಜಾತಿಯವನಾಗಿ ನನಗೆ ಪ್ರಶ್ನೆ ಮಾಡುತ್ತಿರ ಎಂದು ಜಗಳ ತೆಗೆದ ಆತ, ತನ್ನ ಜಾತಿಯವರನ್ನು ಸೇರಿಸಿ ನಡೆದ ಘಟನೆಯ ಬಗ್ಗೆ ಚರ್ಚೆ ಮಾಡಿದ. ಅಲ್ಲಿ ಕಮ್ಮ ಮೇಲ್ಜಾತಿಯ ಭೂಮಾಲಿಕರು ದಲಿತರನ್ನು ಹೀಗೆ ಬಿಟ್ಟರೆ ಬೆಳೆದು ಬಿಡುತ್ತಾರೆ. ಅವರನ್ನು ಸುಮ್ಮನೆ  ಬಿಡಬಾರದು ಎಂದು ರಾತ್ರಿಯೇ ಸಂಚು ರೂಪಿಸಿದ್ದರು.

1985 ಜುಲೈ 17 ರ ಬೆಳಗಿನ ಜಾವ ಕೈಗೆ ಸಿಕ್ಕ ಕತ್ತಿ, ಕೊಡಲಿ, ಮಾರಕಾಯುಧಗಳೊಂದಿಗೆ ಟ್ರಾಕ್ಟರ್‌ಗಳಲ್ಲಿ ಬಂದ ಸವರ್ಣೀಯರು, ಮಾದಿಗ ಸಮುದಾಯದ ದಲಿತರನ್ನು ಅಟ್ಟಾಡಿಸಿ ಭಯಾನಕವಾಗಿ ದಾಳಿ ಮಾಡಿದ್ದರು. ಸಿಕ್ಕಸಿಕ್ಕವರನ್ನು ಕತ್ತರಿಸಿ ಹಾಕಿದರು. ಸಾಕಷ್ಟು ಜನ ಹೆಣ್ಣು ಮಕ್ಕಳನ್ನು ಅಮಾನುಷವಾಗಿ ಅತ್ಯಾಚಾರವೆಸಗಿದರು.

ಈ ದುರ್ಘಟನೆಯಲ್ಲಿ ತೆಳ್ಳ ಯೋಹೌಷುವ, ದುಡ್ಡು ವಂದನಂ, ತೆಳ್ಳ ಮುತ್ತಯ್ಯ, ದುಡ್ಡು ರಮೇಶ್, ತೆಳ್ಳ ಮಾಷೆ, ದುಡ್ಡು ಅಬ್ರಹಾಂ ಎಂಬ ಆರು ಜನರು ಅಲ್ಲಿಯೇ ಕೊಲೆಯಾಗಿ ಹೋದರು. 20 ಕ್ಕೂ ಹೆಚ್ಚು ಜನರು ಗಂಬೀರ ಗಾಯಗಳಿಗೆ ತುತ್ತಾದರು. ಕಣ್ಣೆದುರೇ ಮಗನನ್ನು ಕಳೆದುಕೊಂಡ ಪ್ರತ್ಯಕ್ಷ ಸಾಕ್ಷಿ ದುಡ್ಡು ಆಲಿಸಮ್ಮನನ್ನು ಎರಡು ವರ್ಷಗಳ ನಂತರ ಕೊಲೆ ಮಾಡಿದರು.

ಈ ಘಟನೆ ದೇಶದ ಪ್ರಜ್ಞಾವಂತರ, ಮಾನವತವಾದಿಗಳ, ದಲಿತ ಸಂಘಟನೆಗಳ ಆಕ್ರೋಷಕ್ಕೆ ಕಾರಣವಾಗಿ ಬೃಹತ್ ಪ್ರತಿಭಟನೆಗಳು ನಡೆದವು. ಸತತವಾಗಿ ಆರು ತಿಂಗಳ ಕಾಲ ನಡೆದ ಕಾರಂಚೇಡು ಹೋರಾಟ ಬಹಳಷ್ಟು ಕಾನೂನುಗಳನ್ನು ರೂಪಿಸಲು ಕೂಡ ಕಾರಣವಾಯಿತು ಎಂದು ಕೂಡ ಹೇಳಲಾಗುತ್ತದೆ. 1989 ಎಸ್ಸಿ, ಎಸ್ಟಿ ದೌರ್ಜನ್ಯ ವಿರೋಧಿ ಕಾಯ್ದೆ ಬರಲು ಕೂಡ ಈ ಹೋರಾಟದ ಹಿನ್ನೆಲೆ ಇದೆ ಎನ್ನಲಾಗಿದೆ.

ಈ ಹಲ್ಲೆಯಲ್ಲಿ ಭಾಗಿದಾರರಾದ ಆರೋಪಿಗಳ ಮೇಲೆ ಪೋಲೀಸರು ಕೇಸು ದಾಖಲಿಸಿರಲಿಲ್ಲ. ಆದರೆ ಹೋರಾಟಗಾರು ಕೋರ್ಟಿಗೆ ಹೋದ ನಂತರ 9 ಸೆಕ್ಷನ್ಗಳ ಅಡಿಯಲ್ಲಿ 90 ಜನರನ್ನು ಆರೋಪಿಗಳನ್ನಾಗಿ ಮಾಡಿ ಚಾರ್ಜ್ ಶೀಟ್ ಹಾಕಿದರು.


ಓದಿ: ತಮ್ಮ ಭೂಮಿ ಆಕ್ರಮಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ದಲಿತ ಯುವಕನ ಹತ್ಯೆ


1994 ರ ಅಕ್ಟೋಬರ್ 30 ರಂದು ಐದು ಜನರಿಗೆ ಜೀವಾವಧಿ ಶಿಕ್ಷೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ನಾಲ್ಕು ಜನ ವೃದ್ದರಿಗೆ 1000 ರೂ. ದಂಡ ಹಾಗೂ 46 ಜನರಿಗೆ ತಲಾ 3 ವರ್ಷ ಜೈಲು ಶಿಕ್ಷೆ ವಿಧಿಸಿತು. ಶಿಕ್ಷಗೆ ಒಳಗಾದಂತಹ ಎಲ್ಲರೂ ಹೈಕೋರ್ಟಿಗೆ ಮೇಲ್ಮನವಿ ಹಾಕಿದರು. 1998 ಜುಲೈ 24 ರ ತೀರ್ಪಿನಲ್ಲಿ ಬೆನಿಫಿಟ್ ಆಫ್ ಡೌಟ್ ಅಡಿಯಲ್ಲಿ ಶಿಕ್ಷೆ ರದ್ದುಗೊಳಿಸಲಾಯಿತು.

ಹೋರಾಟಗಾರರ ಸತತ ಪ್ರಯತ್ನದಿಂದ ಅಂತಿಮವಾಗಿ 1998 ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸ್ಪಷಲ್ ಲೀವ್ ಪಿಟಿಷನ್ ದಾಖಲು ಮಾಡಲಾಯಿತು. ಅದಾಗಿ ಹತ್ತು ವರ್ಷಗಳ ನಂತರ 2008 ಡಿಸೆಂಬರ್ 19 ರಂದು ಸುಪ್ರೀಂಕೋರ್ಟ್ ಅಂಜಯ್ಯ ಎಂಬುವವರಿಗೆ ಜೀವಾವದಿ ಶಿಕ್ಷೆ ಮತ್ತು 29 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ದಲಿತ ದಮನಿತರ ಮೇಲಿನ ದೌರ್ಜನ್ಯದ ಕೇಸುಗಳನ್ನು ದುಡ್ಡಿರುವ ಮೇಲ್ಜಾತಿಯ ಜನ ಎಲ್ಲಿಬೇಕಾದರೂ ಗೆದ್ದು ಬರುತ್ತಾರೆ. ಈಗಲೂ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಬಂದಿವೆ. ಬಾಬಾ ಸಾಹೇಬ್ ಅಂಬೇಡ್ಕರರ ಕರೆಯಾದ ಶಿಕ್ಷಣ, ಸಂಘಟನೆ, ಸಂಘರ್ಷದ ಮೂಲಕ ತರುವ ಬದಲಾವಣೆಯೇ ದಲಿತರನ್ನು ಶೋಷಣೆಯ ಸಮುದ್ರದಿಂದ ಆಚೆ ತೆಗೆದು ದಡ ಸೇರಿಸಬಲ್ಲದು.


ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...