Homeಕವನಅನುವಾದಿತ ಕವನ; ನಿನ್ನ ಹಸಿವೆಯಿಂದ ಭಯಗೊಂಡಿದ್ದೇನೆ

ಅನುವಾದಿತ ಕವನ; ನಿನ್ನ ಹಸಿವೆಯಿಂದ ಭಯಗೊಂಡಿದ್ದೇನೆ

- Advertisement -
- Advertisement -

ನಾ ನಿನ್ನ ಊರಿನಿಂದ
ಮತ್ತು ನಿನ್ನ ಲೋಕದಿಂದ
ಪೂರಾ ಸೋತುಹೋಗಿದ್ದೇನೆ
ಅನಿಷ್ಟದ ನಗುವನ್ನು
ಕಿರೀಟದಂತೆ ಮುಡಿಸಿಕೊಂಡ
ನಿಮ್ಮ ಆತ್ಮದ ರೀತಿ ರಿವಾಜುಗಳು ಹೊಲಸು ನಾರುತ್ತಿವೆ
ಇನ್ನು ಸಹಿಸಲಾಗದು!

ನಿಮ್ಮ ತಕ್ಕಡಿಯಲ್ಲಿ ನಮ್ಮ ಬದುಕನ್ನಿಟ್ಟು
ಬರುಹೋಗುವ ಉಸಿರನ್ನು ನೋಡುವುದಕ್ಕೂ
ನಾಚಿಕೆಯಾಗುತ್ತದೆ.

ದೇವರು ನಿನ್ನದೇ ಕಲ್ಪನೆಯ ಕೆಟ್ಟ ಸೃಷ್ಟಿಯೆಂದು ಯಾರಿಗೆ ಗೊತ್ತಿಲ್ಲ
ಧರ್ಮವೆಂಬುದು ಸೃಷ್ಟಿಯ ಬಹುದೊಡ್ದ ಹಗರಣ
ಜಾತಿಯೆಂಬೊಂದು ಆಳ ಆಳದ ಬಾವಿ
ನೀರು ಎಲ್ಲಾ ವಿಕಾರವನ್ನು ಮುಚ್ಚಿಹಾಕಿದೆ..

ನಿಮ್ಮ ಕಲೆಯಿಂದ
ಮತ್ತು ನಿಮ್ಮ ವಿಜ್ಞಾನದಿಂದ ನಾನು
ವಿಪರೀತ ಬೇಸತ್ತು ಹೋಗಿದ್ದೇನೆ
ಇಲ್ಲಿ ರಕ್ತವನ್ನು ಉಗುಳು ಮತ್ತು
ಆಕ್ರಂದನವನು ದೇವಳದ ಭಜನೆ ನುಂಗಿಹಾಕಿದೆ
ಇಲ್ಲಿ ಸತ್ಯವನ್ನು ಸಂಸತ್ತಿನ ಟಾಯ್ಲೆಟ್ ಪೇಪರ್ ಮಾಡಿ
ನೇತುಹಾಕಲಾಗುತ್ತದೆ
ಮುಂಜಾನೆಯಿಂದ ಸಂಜೆವರೆಗೆ ಹೊಸಕಿಹೋದ ಜನರ ಕನಸುಗಳನ್ನು ಒರೆಸಲಾಗುತ್ತದೆ

ನಾನು ಶತಮಾನಗಳಿಂದ ಅನ್ನದ ಅಗುಳನ್ನೂ ಕಾಣದ
ಈ ದೇಶದ ಅನ್ನನಾಳದಿಂದ ಬಂದಿದ್ದೇನೆ
ನಿಮ್ಮ ಹಸಿವೆಯಿಂದ ನನಗೆ ಭಯವಾಗುತ್ತದೆ

ಕೆರೆ ಹಳ್ಳಗಳಿಗಾಗಿ
ನನ್ನನ್ನು ಬಿಟ್ಟುಬಿಡಿ
ಅಲ್ಲಿ ಕಪ್ಪೆ ಮೀನುಗಳು ನನಗಾಗಿ ಕಾಯುತ್ತಿರಬಹುದು
ಯಾರಾದರೂ ಜೀವದ ಗೆಳೆಯನೊಂದಿಗೆ
ಮಳೆಯನ್ನು ನನ್ನ ಅಂಗಿಯನ್ನಾಗಿಸಿ
ನನ್ನ ಕುರಿ ಆಡುಗಳು ನೆನೆಯುವ ಆ ದಿಕ್ಕಿನತ್ತ
ಈಜಲು ಹೋಗುವೆ
ಅಲ್ಲಿ ಯಾವುದಾದರೂ ಮಾವಿನ ಮರದ ಮೇಲೆ
ನನ್ನ ಎರಡೂ ಕೈಗಳು ಸಿಕ್ಕಿಕೊಂಡಿರಬೇಕು
ಮತ್ತು ಅಲ್ಲೇ ಎಲ್ಲೋ ಹತ್ತಿರದಲ್ಲಿ ಸಿಕ್ಕುಸಿಕ್ಕಾದ ನನ್ನ ಮೀನಿನ ಬಲೆ
ನನ್ನ ಬೆರಳುಗಳಿಗಾಗಿ ಕರೆಯುತ್ತಿರಬಹುದು

ಮುಕ್ತಿಬೋಧದ ಬಗ್ಗೆ ಯಾವ ಅಭಿಪ್ರಾಯವೂ ಇಲ್ಲ
ಮಾರ್ಕ್ಸ್ ನನಗೆ ಗುರುತಿಲ್ಲ
ಅಂಬೇಡ್ಕರ್ ಹೆಸರನ್ನೇ ಕೇಳಿರುವೆ ಮೊದಲಬಾರಿ
ಬಹುಶಃ ಅಜ್ಞೇಯನಾಗುವುದೆ ನಿಮ್ಮ ಸಂಸ್ಕೃತಿಯ ದೊಡ್ದ ಕೊಡುಗೆಯಿದ್ದೀತು
ಈಗ ನನ್ನನ್ನು ಹೋಗಲು ಬಿಡಿ

ಗಾಲಿಬನನ್ನು ನಾಲಿಗೆಯಲೂ ನೆನೆಯುವುದಿಲ್ಲ
ಜಯಸಿಯೇ ಯುದ್ಧದ ನಿರರ್ಥಕತೆಯನ್ನು ಸಾರಿದ ಮೊದಲ ಕವಿಯೆಂದು
ವಾದಿಸುವುದಿಲ್ಲ ನಾನು
ನನಗೆ ಹೋಗಲು ಬಿಡಿ

ನನ್ನನ್ನು ನೀವು ಪುಕ್ಕಲು ಎನ್ನಿ
ಪಲಾಯನವಾದಿ ಎನ್ನಿ
ಆದರೆ ಹೋಗಲು ಬಿಡಿ

ನಾನು ಹೋಗುವ ಅಜ್ಞಾತವಾಸದ ಅರ್ಥ
ಬಹುಶಃ ನಿಮಗೆ ಗೊತ್ತಿದ್ದೀತು ಅಥವಾ
ನಿಮಗೆಂದಿಗೂ ಗೊತ್ತಾಗದು
ತುದಿ ಮಣಿಸಿ ಬಾಗಿಸಿದ ಬಿದಿರ ಚಿಗುರು ಸಂಕಟದಲಿ
ನಡುಗಿದ್ದು
ಅದೇ ನನಗೆ ಹೇಳಿಕೊಟ್ಟಿದೆ
ಹೇಗೆ ವಿನಮ್ರತೆ ದೈನೇಸಿಯಾಗಿ ಬದಲಾಗುವ ಮೊದಲು
ಪ್ರತಿಭಟನೆಯಾಗಿ ಬದಲಾಗುವುದೇ
ಬದುಕಿನ ಸಾಕ್ಷಿಯಾಗಿದೆ..!

ಹಿಂದಿ ಮೂಲ: ಪರಾಗ್ ಪಾವನ್
ಕನ್ನಡಕ್ಕೆ: ರೇಣುಕಾ ನಿಡಗುಂದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...