Homeಕವನಅನುವಾದಿತ ಕವನ; ನಿನ್ನ ಹಸಿವೆಯಿಂದ ಭಯಗೊಂಡಿದ್ದೇನೆ

ಅನುವಾದಿತ ಕವನ; ನಿನ್ನ ಹಸಿವೆಯಿಂದ ಭಯಗೊಂಡಿದ್ದೇನೆ

- Advertisement -
- Advertisement -

ನಾ ನಿನ್ನ ಊರಿನಿಂದ
ಮತ್ತು ನಿನ್ನ ಲೋಕದಿಂದ
ಪೂರಾ ಸೋತುಹೋಗಿದ್ದೇನೆ
ಅನಿಷ್ಟದ ನಗುವನ್ನು
ಕಿರೀಟದಂತೆ ಮುಡಿಸಿಕೊಂಡ
ನಿಮ್ಮ ಆತ್ಮದ ರೀತಿ ರಿವಾಜುಗಳು ಹೊಲಸು ನಾರುತ್ತಿವೆ
ಇನ್ನು ಸಹಿಸಲಾಗದು!

ನಿಮ್ಮ ತಕ್ಕಡಿಯಲ್ಲಿ ನಮ್ಮ ಬದುಕನ್ನಿಟ್ಟು
ಬರುಹೋಗುವ ಉಸಿರನ್ನು ನೋಡುವುದಕ್ಕೂ
ನಾಚಿಕೆಯಾಗುತ್ತದೆ.

ದೇವರು ನಿನ್ನದೇ ಕಲ್ಪನೆಯ ಕೆಟ್ಟ ಸೃಷ್ಟಿಯೆಂದು ಯಾರಿಗೆ ಗೊತ್ತಿಲ್ಲ
ಧರ್ಮವೆಂಬುದು ಸೃಷ್ಟಿಯ ಬಹುದೊಡ್ದ ಹಗರಣ
ಜಾತಿಯೆಂಬೊಂದು ಆಳ ಆಳದ ಬಾವಿ
ನೀರು ಎಲ್ಲಾ ವಿಕಾರವನ್ನು ಮುಚ್ಚಿಹಾಕಿದೆ..

ನಿಮ್ಮ ಕಲೆಯಿಂದ
ಮತ್ತು ನಿಮ್ಮ ವಿಜ್ಞಾನದಿಂದ ನಾನು
ವಿಪರೀತ ಬೇಸತ್ತು ಹೋಗಿದ್ದೇನೆ
ಇಲ್ಲಿ ರಕ್ತವನ್ನು ಉಗುಳು ಮತ್ತು
ಆಕ್ರಂದನವನು ದೇವಳದ ಭಜನೆ ನುಂಗಿಹಾಕಿದೆ
ಇಲ್ಲಿ ಸತ್ಯವನ್ನು ಸಂಸತ್ತಿನ ಟಾಯ್ಲೆಟ್ ಪೇಪರ್ ಮಾಡಿ
ನೇತುಹಾಕಲಾಗುತ್ತದೆ
ಮುಂಜಾನೆಯಿಂದ ಸಂಜೆವರೆಗೆ ಹೊಸಕಿಹೋದ ಜನರ ಕನಸುಗಳನ್ನು ಒರೆಸಲಾಗುತ್ತದೆ

ನಾನು ಶತಮಾನಗಳಿಂದ ಅನ್ನದ ಅಗುಳನ್ನೂ ಕಾಣದ
ಈ ದೇಶದ ಅನ್ನನಾಳದಿಂದ ಬಂದಿದ್ದೇನೆ
ನಿಮ್ಮ ಹಸಿವೆಯಿಂದ ನನಗೆ ಭಯವಾಗುತ್ತದೆ

ಕೆರೆ ಹಳ್ಳಗಳಿಗಾಗಿ
ನನ್ನನ್ನು ಬಿಟ್ಟುಬಿಡಿ
ಅಲ್ಲಿ ಕಪ್ಪೆ ಮೀನುಗಳು ನನಗಾಗಿ ಕಾಯುತ್ತಿರಬಹುದು
ಯಾರಾದರೂ ಜೀವದ ಗೆಳೆಯನೊಂದಿಗೆ
ಮಳೆಯನ್ನು ನನ್ನ ಅಂಗಿಯನ್ನಾಗಿಸಿ
ನನ್ನ ಕುರಿ ಆಡುಗಳು ನೆನೆಯುವ ಆ ದಿಕ್ಕಿನತ್ತ
ಈಜಲು ಹೋಗುವೆ
ಅಲ್ಲಿ ಯಾವುದಾದರೂ ಮಾವಿನ ಮರದ ಮೇಲೆ
ನನ್ನ ಎರಡೂ ಕೈಗಳು ಸಿಕ್ಕಿಕೊಂಡಿರಬೇಕು
ಮತ್ತು ಅಲ್ಲೇ ಎಲ್ಲೋ ಹತ್ತಿರದಲ್ಲಿ ಸಿಕ್ಕುಸಿಕ್ಕಾದ ನನ್ನ ಮೀನಿನ ಬಲೆ
ನನ್ನ ಬೆರಳುಗಳಿಗಾಗಿ ಕರೆಯುತ್ತಿರಬಹುದು

ಮುಕ್ತಿಬೋಧದ ಬಗ್ಗೆ ಯಾವ ಅಭಿಪ್ರಾಯವೂ ಇಲ್ಲ
ಮಾರ್ಕ್ಸ್ ನನಗೆ ಗುರುತಿಲ್ಲ
ಅಂಬೇಡ್ಕರ್ ಹೆಸರನ್ನೇ ಕೇಳಿರುವೆ ಮೊದಲಬಾರಿ
ಬಹುಶಃ ಅಜ್ಞೇಯನಾಗುವುದೆ ನಿಮ್ಮ ಸಂಸ್ಕೃತಿಯ ದೊಡ್ದ ಕೊಡುಗೆಯಿದ್ದೀತು
ಈಗ ನನ್ನನ್ನು ಹೋಗಲು ಬಿಡಿ

ಗಾಲಿಬನನ್ನು ನಾಲಿಗೆಯಲೂ ನೆನೆಯುವುದಿಲ್ಲ
ಜಯಸಿಯೇ ಯುದ್ಧದ ನಿರರ್ಥಕತೆಯನ್ನು ಸಾರಿದ ಮೊದಲ ಕವಿಯೆಂದು
ವಾದಿಸುವುದಿಲ್ಲ ನಾನು
ನನಗೆ ಹೋಗಲು ಬಿಡಿ

ನನ್ನನ್ನು ನೀವು ಪುಕ್ಕಲು ಎನ್ನಿ
ಪಲಾಯನವಾದಿ ಎನ್ನಿ
ಆದರೆ ಹೋಗಲು ಬಿಡಿ

ನಾನು ಹೋಗುವ ಅಜ್ಞಾತವಾಸದ ಅರ್ಥ
ಬಹುಶಃ ನಿಮಗೆ ಗೊತ್ತಿದ್ದೀತು ಅಥವಾ
ನಿಮಗೆಂದಿಗೂ ಗೊತ್ತಾಗದು
ತುದಿ ಮಣಿಸಿ ಬಾಗಿಸಿದ ಬಿದಿರ ಚಿಗುರು ಸಂಕಟದಲಿ
ನಡುಗಿದ್ದು
ಅದೇ ನನಗೆ ಹೇಳಿಕೊಟ್ಟಿದೆ
ಹೇಗೆ ವಿನಮ್ರತೆ ದೈನೇಸಿಯಾಗಿ ಬದಲಾಗುವ ಮೊದಲು
ಪ್ರತಿಭಟನೆಯಾಗಿ ಬದಲಾಗುವುದೇ
ಬದುಕಿನ ಸಾಕ್ಷಿಯಾಗಿದೆ..!

ಹಿಂದಿ ಮೂಲ: ಪರಾಗ್ ಪಾವನ್
ಕನ್ನಡಕ್ಕೆ: ರೇಣುಕಾ ನಿಡಗುಂದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...