Homeಮುಖಪುಟಟ್ರಮೋ ನಿಮ್ಮದು ಒಂದೇ ಬುದ್ದಿ : ಜನಸೇವಕರಲ್ಲ - ಮೆರವ ಅರಸರು

ಟ್ರಮೋ ನಿಮ್ಮದು ಒಂದೇ ಬುದ್ದಿ : ಜನಸೇವಕರಲ್ಲ – ಮೆರವ ಅರಸರು

- Advertisement -
- Advertisement -

ದೇಶ ಬೆಲೆ ಏರಿಕೆಯ ಭಾರದಿಂದ ನಲುಗುತ್ತಿದೆ. ದಿನಬಳಕೆಯ ಪದಾರ್ಥಗಳ ಬೆಲೆ ಇಳಿಯುವ ಸೂಚನೆಗಳಂತು ಕಾಣುತ್ತಿಲ್ಲ. ಒಂದೇ ಬಾರಿಗೆ ಅಡುಗೆ ಅನಿಲದ ಬೆಲೆ ದಿಢೀರ್ 145 ರೂಪಾಯಿ ಹೆಚ್ಚಳವಾಯಿತು. ಅಂತಾರಾಷ್ಟ್ರ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೂ ಭಾರತದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿ ಜನಸಾಮಾನ್ಯರ ಹೊರೆಯನ್ನು ಅಲ್ಪವಾದರೂ ಇಳಿಸುವ ಬುದ್ದಿಯೂ ಬರಲಿಲ್ಲ.. ಜನರು ಯಾವುದೇ ವಸ್ತುಗಳ ಬೆಲೆಗಳು ಹೆಚ್ಚಳವಾಗುತ್ತಿದ್ದರೂ ಮೌನವನ್ನೇ ಆಭರಣವಾಗಿ ಧರಿಸಿದ್ದಾರೆ ಎಂದು ನೀವು ಅಂದುಕೊಂಡಿದ್ದರೆ, ಅದು ನಿಮ್ಮ ಮೂರ್ಖತನ. ದೇಶದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳು ಮತ್ತು ಬೆಳವಣಿಗೆಗಳನ್ನು ಹತ್ತಿರದಿಂದಲೇ ಗಮನಿಸುತ್ತಿದ್ದಾರೆ. ಜನರ ಒಡಲೊಳಗೆ ಕುದಿ ಇದೆ. ಮುಖದಲ್ಲಿ  ನಗುವಿದೆ. ಯಾಕೆಂದರೆ ನೀವು ಮನುವಾದಿ ಮನಸ್ಥಿತಿಗಳ ಆರಾಧ್ಯ ದೈವವಲ್ಲವೇ?! ಅದಕ್ಕೆ!

ಪ್ರಜಗಳ ರಕ್ಷಣೆ ಪ್ರಭುವಿನ ಕೆಲಸ. ಪ್ರಜಗಳ ಕ್ಷೇಮವೇ ಪ್ರಧಾನ ಸೇವಕನ ಕೆಲಸವಾಗಬೇಕಿತ್ತು. ಆದರೆ ಅಂತಹ ಕೆಲಸ ನಡೆಯುತ್ತಿಲ್ಲ. ಪ್ರಜೆಗಳ ಮತದಿಂದ ಅಧಿಕಾರ ಹಿಡಿದ ಮೇಲೆ ಅರಸನ ಗೆಟಪ್ ಬಂದುಬಿಟ್ಟಿದೆ. ಈ ಗೆಟಪ್ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಅದೇ ಕಾರಣಕ್ಕೆ ಏನೋ,ಇದು ಪ್ರಜಾಪ್ರಭುತ್ವ ವ್ಯವಸ್ಥೆ,ಎಂಬುದನ್ನೇ ಮರೆತಿದ್ದೀರಿ. ಜನರ ಬೇಕು ಬೇಡಕಗಳು ನಿಮಗೆ ಅರ್ಥವಾಗುತ್ತಿಲ್ಲ. ಆರ್ಥಿಕ ಹಿಂಜರಿತ, ಉದ್ದಿಮೆಗಳ ಮುಚ್ಚುವಿಕೆ, ಕೆಲಸ ಕಳೆದುಕೊಂಡವರ ಪಾಡು, ನಿರುದ್ಯೋಗಿಗಳ ಸ್ಥಿತಿಗತಿ, ರೈತರ ಅಳಲು, ರೈತರ ಆತ್ಮಹತ್ಯೆ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಬೆಂಬಲ ಬೆಲೆ, ಸ್ವಾಮಿನಾಥನ್ ಶಿಫಾರಸುಗಳ ಜಾರಿ ಇದ್ಯಾವುದರ ಬಗ್ಗೆಯೂ ಕಿಂಚಿತ್ತೂ ಯೋಚಿಸುತ್ತಿಲ್ಲ.

ಕೋಟ್ಯಂತರ ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಮನೆ ಸೇರಿಸಿದರು. ನಗರದಲ್ಲಿದ್ದವರು ಹಳ್ಳಿಗೆ ತೆರಳಿದರು. ಆ ಕಾರ್ಮಿಕರ ಪಾಡು ಹೇಳತೀರದು. ಜನರ ಕೈಯಲ್ಲಿ ಹಣವೇ ಇಲ್ಲ. ಬದುಕಿನ ಸಾಮಾನ್ಯ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಆಗುತ್ತಿಲ್ಲ. ಉದ್ಯೋಗಗಳಿಲ್ಲದೆ ಹಳ್ಳಿ ಸೇರಿದವರು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಅಕ್ಷರಶಃ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ದೊರೆಯಂತೆ ವರ್ತಿಸುತ್ತಿರುವ ನೀವು ತುಘಲಕ್ ದರ್ಬಾರ್ ಮಾಡುತ್ತಿದ್ದೀರಿ. ತಾನು ಮಾಡಿದ್ದೇ ಕಾನೂನು. ತಾನು ಹೇಳಿದಂತೆಯೇ ನಡೆಯಬೇಕು. ಇಲ್ಲದಿದ್ದವರು ಇಲ್ಲಿರಲಿಕ್ಕೂ ಅವಕಾಶವಿಲ್ಲ. ಸರ್ವಾಧಿಕಾರದ ಮನೋಭಾವ ನಿಮ್ಮದು. ನಿಮ್ಮನ್ನು ಆರಾಧಿಸುವ ಭಕ್ತಪಡೆ ಜನರ ನೇರ ಪ್ರಶ್ನೆಗಳನ್ನು ಎದುರಿಸಲು ಆಗದೆ ಮೊಂಡುವಾದಕ್ಕೆ ಇಳಿದಿದೆ. ದೈಹಿಕ ದಾಳಿಯನ್ನು ಮಾಡತೊಡಗಿದೆ. ಇದು ನಿಮಗೆ ಕಾಣಿಸುತ್ತಿಲ್ಲವೇ?

ಸ್ವಚ್ಚಭಾರತ್ ಅಂದಿರಿ ನಿತ್ಯವೂ ನಗರಗಳಲ್ಲಿ ಸ್ವಚ್ಛಗೊಳಿಸುವವರ ಪಾಡು ಹೇಳತೀರದಾಗಿದೆ. ಅವರ ವೇತನ ತಿಂಗಳಿಗೆ ಸರಿಯಾಗಿ ಸಿಗುತ್ತಿಲ್ಲ. ಉದ್ಯೋಗ ಭದ್ತತೆ ಇಲ್ಲ. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದು ಖಾಯಂ ಮಾಡುವ ನಿರೀಕ್ಷೆಯಲ್ಲೇ ಕಾಲದೂಡುವಂತಾಗಿದೆ. ಸ್ವಚ್ಛತಾಕಾರರ ಆರೋಗ್ಯ ಹದಗೆಟ್ಟಿದೆ. ಮಾನವಹಕ್ಕು ಉಲ್ಲಂಘನೆಯಾಗುತ್ತಿದೆ. ಇನ್ನು ವಯಸ್ಸಿದ್ದಾಗಲೇ ಸಾವು ಬರುತ್ತಿದೆ. ಆದರೆ ಅವರ ಆರೋಗ್ಯದ ಕಡೆ ಸ್ವಚ್ಛ ಭಾರತ ಮುಖಮಾಡುವುದಿಲ್ಲ. ‘ಪೌರಕಾರ್ಮಿಕ’ನೆಂಬ ‘ನವಅಸ್ಪೃಶ್ಯತೆ’.ಮತ್ತೆ ಅಂಟಿಕೊಂಡಿದೆ. ಅವರ ಬದುಕೇ ಬೇರೊಬ್ಬರ ಚಾಕರಿ ಮಾಡುವುದು ಅನ್ನುವಂತಾಗಿದೆ. ಆಧುನಿಕ ತಂತ್ರಜ್ಞಾನ ಮುಂದುವರಿದಿದ್ದರೂ ಪೌರಕಾರ್ಮಿಕರಿಗೆ ಅದರ ಫಲ ಸಿಗುವಂತೆ ನೋಡಿಕೊಳ್ಳಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜಿಗ್ ಡೆತ್ ಗಳು ದೇಶದಾದ್ಯಂತ ನಡೆಯುತ್ತಲೇ ಇವೆ. ಸ್ವಚ್ಛಭಾರತದಲ್ಲಿ ಅವರಿಗೆ ಅವಕಾಶವೇ ಇಲ್ಲ.

ಮುದ್ರಾ ಯೋಜನೆಯಡಿ 7 ಕೋಟಿ ಉದ್ಯೋ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದರೆ ಜನ ಸಮಸ್ಯೆಗಳನ್ನೇಕೆ ಎದುರಿಸುತ್ತಿದ್ದಾರೆ. ನವಅಗ್ರಹಾರಗಳು ಬಂದ ಮೇಲೆ ಬೀದಿಬದಿ ವ್ಯಾಪಾರಿಗಳೇ ಮಾಯವಾಗುತ್ತಿದ್ದಾರೆ. ಬೀದಿಬದಿ ವ್ಯಾಪಾರ ಮಾಡುವವರನ್ನು ಸಣ್ಣ ಕಾರಣ ನೀಡಿ ಎತ್ತಂಗಡಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದಾಗ ನೀವು ಉದ್ಯೋಗ ಸೃಷ್ಟಿಸಿದ್ದಾದರೂ ಎಲ್ಲಿ? ಜನರೇಕೆ ಉದ್ಯೋಗವಿಲ್ಲ ಎಂದು ಹೇಳುತ್ತಿರುವುದು? ಹಾಗಾದರೆ ನೀವು ಯಾರಿಗೆ ನೀಡಿದ್ದೀರಿ ಉದ್ಯೋಗ.

ಸ್ಲಂಗಳು ಬೆಳೆಯುತ್ತಿವೆ. ಅವುಗಳನ್ನು ಬೇರೆಯವರ ಕಣ್ಣಿಗೆ ಕಾಣದಂತೆ ಮುಚ್ಚಿಡುವ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇವೆ. ಅಹಮದಾಬಾದ್ ಗೆ ಅಮೆರಿಕದ ಹುಚ್ಚು ದೊರೆ ಬಂದನೆಂಬ ಕಾರಣಕ್ಕೆ ತಡೆಗೋಡೆ ನಿರ್ಮಿಸಿದಿರಿ. ಅಲ್ಲಿದ್ದ ಬಡಕುಟುಂಬಗಳನ್ನಿ ನಿರ್ದಯವಾಗಿ ಎತ್ತಂಗಡಿ ಮಾಡಿದಿರಿ. ಭಾರತದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ಅಮೆರಿಕಾದ ಹುಚ್ಚುದೊರೆಯ ಮುಂದೆ ತೋರಿಸಲು ಯತ್ನಿಸಿದಿರಿ. ಹುಚ್ಚುದೊರೆ ನಿಮ್ಮ ಎದುರೇ ನೀವು ಸದಾ ಪಠಿಸುವ ದೇಶವನ್ನೇ ಹೊಗಲಿದನೆಂಬ ಸುದ್ದಿ ನಿಮಗೆ ಕೇಳಿಸಲಿಲ್ಲವೇ? ನಿಮ್ಮದೇ ಗುಂಪಿನ ಮುಖಂಡನೊಬ್ಬ ನಿಮ್ಮ ಆರ್ಥಿಕತೆ ನೀತಿಗಳನ್ನು ಟೀಕಿಸುತ್ತಲೇ ಬರುತ್ತಿದ್ದಾರೆ. ಇದಕ್ಕೆ ನೀವು ಕಿವಿಗೊಡುವುದಿಲ್ಲವೇ? ಮನ್ ಕಿ ಬಾತ್ ನಿಂತು ಹೋಯಿತು. ಟ್ರಂಪ್ ಕಿ ಬಾತ್ ಶುರುವಾಯಿತು ನೀವು ಇಬ್ಬರು ಆದರೆ ನಿಮ್ಮ ಮನಸ್ಥಿತಿ ಒಂದೇ. ಯಾಕೆಂದರೆ ನೀವು ಟ್ರಮೋ!

ಹಳ್ಳಿ ಕಡೆ ಮಾತೊಂದಿದಿದೆ. ಮಾತ್ನಾಗೆ ಎಂಗಣ್ಣ ಗಂಟೆ ಹೊಡ್ದಂಗೆ, ಊಟ್ದಾಗೆ ಎಂಗೆ ಸೆಲಿಕೆಗೆ ತಿರಿವಿ ಹಾಕ್ದಂಗೆ,,ಕೆಲ್ಸದಾಗೆ ಎಂಗೆ ಗೊಣಗೊಣ ಕಣಣ್ಣ’ ಹಾಗೆ ನೀವು. ಮಾತಿನಲ್ಲಿ ಗಂಟೆಯ ಶಬ್ದ, ಊಟದಲ್ಲಿ ಅಣಬೆ ಸಾಂಬಾರೆ ಬೇಕು! ಕೆಲಸ ಮಾತ್ರ ಏನೂ ಆಗಿಲ್ಲ. ಹಿಂದಿನ ಯೋಜನೆಗಳ ಹೆಸರು ಅಳಿಸಿದಿರಿ. ಹೊಸ ನಾಮಕರಣ ಮಾಡಿದಿರಿ. ಇದು ಸರಿಯೇ ದೊರೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...