Homeಮುಖಪುಟಟ್ರಮೋ ನಿಮ್ಮದು ಒಂದೇ ಬುದ್ದಿ : ಜನಸೇವಕರಲ್ಲ - ಮೆರವ ಅರಸರು

ಟ್ರಮೋ ನಿಮ್ಮದು ಒಂದೇ ಬುದ್ದಿ : ಜನಸೇವಕರಲ್ಲ – ಮೆರವ ಅರಸರು

- Advertisement -
- Advertisement -

ದೇಶ ಬೆಲೆ ಏರಿಕೆಯ ಭಾರದಿಂದ ನಲುಗುತ್ತಿದೆ. ದಿನಬಳಕೆಯ ಪದಾರ್ಥಗಳ ಬೆಲೆ ಇಳಿಯುವ ಸೂಚನೆಗಳಂತು ಕಾಣುತ್ತಿಲ್ಲ. ಒಂದೇ ಬಾರಿಗೆ ಅಡುಗೆ ಅನಿಲದ ಬೆಲೆ ದಿಢೀರ್ 145 ರೂಪಾಯಿ ಹೆಚ್ಚಳವಾಯಿತು. ಅಂತಾರಾಷ್ಟ್ರ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೂ ಭಾರತದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿ ಜನಸಾಮಾನ್ಯರ ಹೊರೆಯನ್ನು ಅಲ್ಪವಾದರೂ ಇಳಿಸುವ ಬುದ್ದಿಯೂ ಬರಲಿಲ್ಲ.. ಜನರು ಯಾವುದೇ ವಸ್ತುಗಳ ಬೆಲೆಗಳು ಹೆಚ್ಚಳವಾಗುತ್ತಿದ್ದರೂ ಮೌನವನ್ನೇ ಆಭರಣವಾಗಿ ಧರಿಸಿದ್ದಾರೆ ಎಂದು ನೀವು ಅಂದುಕೊಂಡಿದ್ದರೆ, ಅದು ನಿಮ್ಮ ಮೂರ್ಖತನ. ದೇಶದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳು ಮತ್ತು ಬೆಳವಣಿಗೆಗಳನ್ನು ಹತ್ತಿರದಿಂದಲೇ ಗಮನಿಸುತ್ತಿದ್ದಾರೆ. ಜನರ ಒಡಲೊಳಗೆ ಕುದಿ ಇದೆ. ಮುಖದಲ್ಲಿ  ನಗುವಿದೆ. ಯಾಕೆಂದರೆ ನೀವು ಮನುವಾದಿ ಮನಸ್ಥಿತಿಗಳ ಆರಾಧ್ಯ ದೈವವಲ್ಲವೇ?! ಅದಕ್ಕೆ!

ಪ್ರಜಗಳ ರಕ್ಷಣೆ ಪ್ರಭುವಿನ ಕೆಲಸ. ಪ್ರಜಗಳ ಕ್ಷೇಮವೇ ಪ್ರಧಾನ ಸೇವಕನ ಕೆಲಸವಾಗಬೇಕಿತ್ತು. ಆದರೆ ಅಂತಹ ಕೆಲಸ ನಡೆಯುತ್ತಿಲ್ಲ. ಪ್ರಜೆಗಳ ಮತದಿಂದ ಅಧಿಕಾರ ಹಿಡಿದ ಮೇಲೆ ಅರಸನ ಗೆಟಪ್ ಬಂದುಬಿಟ್ಟಿದೆ. ಈ ಗೆಟಪ್ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಅದೇ ಕಾರಣಕ್ಕೆ ಏನೋ,ಇದು ಪ್ರಜಾಪ್ರಭುತ್ವ ವ್ಯವಸ್ಥೆ,ಎಂಬುದನ್ನೇ ಮರೆತಿದ್ದೀರಿ. ಜನರ ಬೇಕು ಬೇಡಕಗಳು ನಿಮಗೆ ಅರ್ಥವಾಗುತ್ತಿಲ್ಲ. ಆರ್ಥಿಕ ಹಿಂಜರಿತ, ಉದ್ದಿಮೆಗಳ ಮುಚ್ಚುವಿಕೆ, ಕೆಲಸ ಕಳೆದುಕೊಂಡವರ ಪಾಡು, ನಿರುದ್ಯೋಗಿಗಳ ಸ್ಥಿತಿಗತಿ, ರೈತರ ಅಳಲು, ರೈತರ ಆತ್ಮಹತ್ಯೆ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಬೆಂಬಲ ಬೆಲೆ, ಸ್ವಾಮಿನಾಥನ್ ಶಿಫಾರಸುಗಳ ಜಾರಿ ಇದ್ಯಾವುದರ ಬಗ್ಗೆಯೂ ಕಿಂಚಿತ್ತೂ ಯೋಚಿಸುತ್ತಿಲ್ಲ.

ಕೋಟ್ಯಂತರ ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಮನೆ ಸೇರಿಸಿದರು. ನಗರದಲ್ಲಿದ್ದವರು ಹಳ್ಳಿಗೆ ತೆರಳಿದರು. ಆ ಕಾರ್ಮಿಕರ ಪಾಡು ಹೇಳತೀರದು. ಜನರ ಕೈಯಲ್ಲಿ ಹಣವೇ ಇಲ್ಲ. ಬದುಕಿನ ಸಾಮಾನ್ಯ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಆಗುತ್ತಿಲ್ಲ. ಉದ್ಯೋಗಗಳಿಲ್ಲದೆ ಹಳ್ಳಿ ಸೇರಿದವರು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಅಕ್ಷರಶಃ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ದೊರೆಯಂತೆ ವರ್ತಿಸುತ್ತಿರುವ ನೀವು ತುಘಲಕ್ ದರ್ಬಾರ್ ಮಾಡುತ್ತಿದ್ದೀರಿ. ತಾನು ಮಾಡಿದ್ದೇ ಕಾನೂನು. ತಾನು ಹೇಳಿದಂತೆಯೇ ನಡೆಯಬೇಕು. ಇಲ್ಲದಿದ್ದವರು ಇಲ್ಲಿರಲಿಕ್ಕೂ ಅವಕಾಶವಿಲ್ಲ. ಸರ್ವಾಧಿಕಾರದ ಮನೋಭಾವ ನಿಮ್ಮದು. ನಿಮ್ಮನ್ನು ಆರಾಧಿಸುವ ಭಕ್ತಪಡೆ ಜನರ ನೇರ ಪ್ರಶ್ನೆಗಳನ್ನು ಎದುರಿಸಲು ಆಗದೆ ಮೊಂಡುವಾದಕ್ಕೆ ಇಳಿದಿದೆ. ದೈಹಿಕ ದಾಳಿಯನ್ನು ಮಾಡತೊಡಗಿದೆ. ಇದು ನಿಮಗೆ ಕಾಣಿಸುತ್ತಿಲ್ಲವೇ?

ಸ್ವಚ್ಚಭಾರತ್ ಅಂದಿರಿ ನಿತ್ಯವೂ ನಗರಗಳಲ್ಲಿ ಸ್ವಚ್ಛಗೊಳಿಸುವವರ ಪಾಡು ಹೇಳತೀರದಾಗಿದೆ. ಅವರ ವೇತನ ತಿಂಗಳಿಗೆ ಸರಿಯಾಗಿ ಸಿಗುತ್ತಿಲ್ಲ. ಉದ್ಯೋಗ ಭದ್ತತೆ ಇಲ್ಲ. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದು ಖಾಯಂ ಮಾಡುವ ನಿರೀಕ್ಷೆಯಲ್ಲೇ ಕಾಲದೂಡುವಂತಾಗಿದೆ. ಸ್ವಚ್ಛತಾಕಾರರ ಆರೋಗ್ಯ ಹದಗೆಟ್ಟಿದೆ. ಮಾನವಹಕ್ಕು ಉಲ್ಲಂಘನೆಯಾಗುತ್ತಿದೆ. ಇನ್ನು ವಯಸ್ಸಿದ್ದಾಗಲೇ ಸಾವು ಬರುತ್ತಿದೆ. ಆದರೆ ಅವರ ಆರೋಗ್ಯದ ಕಡೆ ಸ್ವಚ್ಛ ಭಾರತ ಮುಖಮಾಡುವುದಿಲ್ಲ. ‘ಪೌರಕಾರ್ಮಿಕ’ನೆಂಬ ‘ನವಅಸ್ಪೃಶ್ಯತೆ’.ಮತ್ತೆ ಅಂಟಿಕೊಂಡಿದೆ. ಅವರ ಬದುಕೇ ಬೇರೊಬ್ಬರ ಚಾಕರಿ ಮಾಡುವುದು ಅನ್ನುವಂತಾಗಿದೆ. ಆಧುನಿಕ ತಂತ್ರಜ್ಞಾನ ಮುಂದುವರಿದಿದ್ದರೂ ಪೌರಕಾರ್ಮಿಕರಿಗೆ ಅದರ ಫಲ ಸಿಗುವಂತೆ ನೋಡಿಕೊಳ್ಳಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜಿಗ್ ಡೆತ್ ಗಳು ದೇಶದಾದ್ಯಂತ ನಡೆಯುತ್ತಲೇ ಇವೆ. ಸ್ವಚ್ಛಭಾರತದಲ್ಲಿ ಅವರಿಗೆ ಅವಕಾಶವೇ ಇಲ್ಲ.

ಮುದ್ರಾ ಯೋಜನೆಯಡಿ 7 ಕೋಟಿ ಉದ್ಯೋ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದರೆ ಜನ ಸಮಸ್ಯೆಗಳನ್ನೇಕೆ ಎದುರಿಸುತ್ತಿದ್ದಾರೆ. ನವಅಗ್ರಹಾರಗಳು ಬಂದ ಮೇಲೆ ಬೀದಿಬದಿ ವ್ಯಾಪಾರಿಗಳೇ ಮಾಯವಾಗುತ್ತಿದ್ದಾರೆ. ಬೀದಿಬದಿ ವ್ಯಾಪಾರ ಮಾಡುವವರನ್ನು ಸಣ್ಣ ಕಾರಣ ನೀಡಿ ಎತ್ತಂಗಡಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದಾಗ ನೀವು ಉದ್ಯೋಗ ಸೃಷ್ಟಿಸಿದ್ದಾದರೂ ಎಲ್ಲಿ? ಜನರೇಕೆ ಉದ್ಯೋಗವಿಲ್ಲ ಎಂದು ಹೇಳುತ್ತಿರುವುದು? ಹಾಗಾದರೆ ನೀವು ಯಾರಿಗೆ ನೀಡಿದ್ದೀರಿ ಉದ್ಯೋಗ.

ಸ್ಲಂಗಳು ಬೆಳೆಯುತ್ತಿವೆ. ಅವುಗಳನ್ನು ಬೇರೆಯವರ ಕಣ್ಣಿಗೆ ಕಾಣದಂತೆ ಮುಚ್ಚಿಡುವ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇವೆ. ಅಹಮದಾಬಾದ್ ಗೆ ಅಮೆರಿಕದ ಹುಚ್ಚು ದೊರೆ ಬಂದನೆಂಬ ಕಾರಣಕ್ಕೆ ತಡೆಗೋಡೆ ನಿರ್ಮಿಸಿದಿರಿ. ಅಲ್ಲಿದ್ದ ಬಡಕುಟುಂಬಗಳನ್ನಿ ನಿರ್ದಯವಾಗಿ ಎತ್ತಂಗಡಿ ಮಾಡಿದಿರಿ. ಭಾರತದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ಅಮೆರಿಕಾದ ಹುಚ್ಚುದೊರೆಯ ಮುಂದೆ ತೋರಿಸಲು ಯತ್ನಿಸಿದಿರಿ. ಹುಚ್ಚುದೊರೆ ನಿಮ್ಮ ಎದುರೇ ನೀವು ಸದಾ ಪಠಿಸುವ ದೇಶವನ್ನೇ ಹೊಗಲಿದನೆಂಬ ಸುದ್ದಿ ನಿಮಗೆ ಕೇಳಿಸಲಿಲ್ಲವೇ? ನಿಮ್ಮದೇ ಗುಂಪಿನ ಮುಖಂಡನೊಬ್ಬ ನಿಮ್ಮ ಆರ್ಥಿಕತೆ ನೀತಿಗಳನ್ನು ಟೀಕಿಸುತ್ತಲೇ ಬರುತ್ತಿದ್ದಾರೆ. ಇದಕ್ಕೆ ನೀವು ಕಿವಿಗೊಡುವುದಿಲ್ಲವೇ? ಮನ್ ಕಿ ಬಾತ್ ನಿಂತು ಹೋಯಿತು. ಟ್ರಂಪ್ ಕಿ ಬಾತ್ ಶುರುವಾಯಿತು ನೀವು ಇಬ್ಬರು ಆದರೆ ನಿಮ್ಮ ಮನಸ್ಥಿತಿ ಒಂದೇ. ಯಾಕೆಂದರೆ ನೀವು ಟ್ರಮೋ!

ಹಳ್ಳಿ ಕಡೆ ಮಾತೊಂದಿದಿದೆ. ಮಾತ್ನಾಗೆ ಎಂಗಣ್ಣ ಗಂಟೆ ಹೊಡ್ದಂಗೆ, ಊಟ್ದಾಗೆ ಎಂಗೆ ಸೆಲಿಕೆಗೆ ತಿರಿವಿ ಹಾಕ್ದಂಗೆ,,ಕೆಲ್ಸದಾಗೆ ಎಂಗೆ ಗೊಣಗೊಣ ಕಣಣ್ಣ’ ಹಾಗೆ ನೀವು. ಮಾತಿನಲ್ಲಿ ಗಂಟೆಯ ಶಬ್ದ, ಊಟದಲ್ಲಿ ಅಣಬೆ ಸಾಂಬಾರೆ ಬೇಕು! ಕೆಲಸ ಮಾತ್ರ ಏನೂ ಆಗಿಲ್ಲ. ಹಿಂದಿನ ಯೋಜನೆಗಳ ಹೆಸರು ಅಳಿಸಿದಿರಿ. ಹೊಸ ನಾಮಕರಣ ಮಾಡಿದಿರಿ. ಇದು ಸರಿಯೇ ದೊರೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...