Homeಮುಖಪುಟಟ್ರಮೋ ನಿಮ್ಮದು ಒಂದೇ ಬುದ್ದಿ : ಜನಸೇವಕರಲ್ಲ - ಮೆರವ ಅರಸರು

ಟ್ರಮೋ ನಿಮ್ಮದು ಒಂದೇ ಬುದ್ದಿ : ಜನಸೇವಕರಲ್ಲ – ಮೆರವ ಅರಸರು

- Advertisement -
- Advertisement -

ದೇಶ ಬೆಲೆ ಏರಿಕೆಯ ಭಾರದಿಂದ ನಲುಗುತ್ತಿದೆ. ದಿನಬಳಕೆಯ ಪದಾರ್ಥಗಳ ಬೆಲೆ ಇಳಿಯುವ ಸೂಚನೆಗಳಂತು ಕಾಣುತ್ತಿಲ್ಲ. ಒಂದೇ ಬಾರಿಗೆ ಅಡುಗೆ ಅನಿಲದ ಬೆಲೆ ದಿಢೀರ್ 145 ರೂಪಾಯಿ ಹೆಚ್ಚಳವಾಯಿತು. ಅಂತಾರಾಷ್ಟ್ರ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೂ ಭಾರತದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿ ಜನಸಾಮಾನ್ಯರ ಹೊರೆಯನ್ನು ಅಲ್ಪವಾದರೂ ಇಳಿಸುವ ಬುದ್ದಿಯೂ ಬರಲಿಲ್ಲ.. ಜನರು ಯಾವುದೇ ವಸ್ತುಗಳ ಬೆಲೆಗಳು ಹೆಚ್ಚಳವಾಗುತ್ತಿದ್ದರೂ ಮೌನವನ್ನೇ ಆಭರಣವಾಗಿ ಧರಿಸಿದ್ದಾರೆ ಎಂದು ನೀವು ಅಂದುಕೊಂಡಿದ್ದರೆ, ಅದು ನಿಮ್ಮ ಮೂರ್ಖತನ. ದೇಶದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳು ಮತ್ತು ಬೆಳವಣಿಗೆಗಳನ್ನು ಹತ್ತಿರದಿಂದಲೇ ಗಮನಿಸುತ್ತಿದ್ದಾರೆ. ಜನರ ಒಡಲೊಳಗೆ ಕುದಿ ಇದೆ. ಮುಖದಲ್ಲಿ  ನಗುವಿದೆ. ಯಾಕೆಂದರೆ ನೀವು ಮನುವಾದಿ ಮನಸ್ಥಿತಿಗಳ ಆರಾಧ್ಯ ದೈವವಲ್ಲವೇ?! ಅದಕ್ಕೆ!

ಪ್ರಜಗಳ ರಕ್ಷಣೆ ಪ್ರಭುವಿನ ಕೆಲಸ. ಪ್ರಜಗಳ ಕ್ಷೇಮವೇ ಪ್ರಧಾನ ಸೇವಕನ ಕೆಲಸವಾಗಬೇಕಿತ್ತು. ಆದರೆ ಅಂತಹ ಕೆಲಸ ನಡೆಯುತ್ತಿಲ್ಲ. ಪ್ರಜೆಗಳ ಮತದಿಂದ ಅಧಿಕಾರ ಹಿಡಿದ ಮೇಲೆ ಅರಸನ ಗೆಟಪ್ ಬಂದುಬಿಟ್ಟಿದೆ. ಈ ಗೆಟಪ್ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಅದೇ ಕಾರಣಕ್ಕೆ ಏನೋ,ಇದು ಪ್ರಜಾಪ್ರಭುತ್ವ ವ್ಯವಸ್ಥೆ,ಎಂಬುದನ್ನೇ ಮರೆತಿದ್ದೀರಿ. ಜನರ ಬೇಕು ಬೇಡಕಗಳು ನಿಮಗೆ ಅರ್ಥವಾಗುತ್ತಿಲ್ಲ. ಆರ್ಥಿಕ ಹಿಂಜರಿತ, ಉದ್ದಿಮೆಗಳ ಮುಚ್ಚುವಿಕೆ, ಕೆಲಸ ಕಳೆದುಕೊಂಡವರ ಪಾಡು, ನಿರುದ್ಯೋಗಿಗಳ ಸ್ಥಿತಿಗತಿ, ರೈತರ ಅಳಲು, ರೈತರ ಆತ್ಮಹತ್ಯೆ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಬೆಂಬಲ ಬೆಲೆ, ಸ್ವಾಮಿನಾಥನ್ ಶಿಫಾರಸುಗಳ ಜಾರಿ ಇದ್ಯಾವುದರ ಬಗ್ಗೆಯೂ ಕಿಂಚಿತ್ತೂ ಯೋಚಿಸುತ್ತಿಲ್ಲ.

ಕೋಟ್ಯಂತರ ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಮನೆ ಸೇರಿಸಿದರು. ನಗರದಲ್ಲಿದ್ದವರು ಹಳ್ಳಿಗೆ ತೆರಳಿದರು. ಆ ಕಾರ್ಮಿಕರ ಪಾಡು ಹೇಳತೀರದು. ಜನರ ಕೈಯಲ್ಲಿ ಹಣವೇ ಇಲ್ಲ. ಬದುಕಿನ ಸಾಮಾನ್ಯ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಆಗುತ್ತಿಲ್ಲ. ಉದ್ಯೋಗಗಳಿಲ್ಲದೆ ಹಳ್ಳಿ ಸೇರಿದವರು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಅಕ್ಷರಶಃ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ದೊರೆಯಂತೆ ವರ್ತಿಸುತ್ತಿರುವ ನೀವು ತುಘಲಕ್ ದರ್ಬಾರ್ ಮಾಡುತ್ತಿದ್ದೀರಿ. ತಾನು ಮಾಡಿದ್ದೇ ಕಾನೂನು. ತಾನು ಹೇಳಿದಂತೆಯೇ ನಡೆಯಬೇಕು. ಇಲ್ಲದಿದ್ದವರು ಇಲ್ಲಿರಲಿಕ್ಕೂ ಅವಕಾಶವಿಲ್ಲ. ಸರ್ವಾಧಿಕಾರದ ಮನೋಭಾವ ನಿಮ್ಮದು. ನಿಮ್ಮನ್ನು ಆರಾಧಿಸುವ ಭಕ್ತಪಡೆ ಜನರ ನೇರ ಪ್ರಶ್ನೆಗಳನ್ನು ಎದುರಿಸಲು ಆಗದೆ ಮೊಂಡುವಾದಕ್ಕೆ ಇಳಿದಿದೆ. ದೈಹಿಕ ದಾಳಿಯನ್ನು ಮಾಡತೊಡಗಿದೆ. ಇದು ನಿಮಗೆ ಕಾಣಿಸುತ್ತಿಲ್ಲವೇ?

ಸ್ವಚ್ಚಭಾರತ್ ಅಂದಿರಿ ನಿತ್ಯವೂ ನಗರಗಳಲ್ಲಿ ಸ್ವಚ್ಛಗೊಳಿಸುವವರ ಪಾಡು ಹೇಳತೀರದಾಗಿದೆ. ಅವರ ವೇತನ ತಿಂಗಳಿಗೆ ಸರಿಯಾಗಿ ಸಿಗುತ್ತಿಲ್ಲ. ಉದ್ಯೋಗ ಭದ್ತತೆ ಇಲ್ಲ. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದು ಖಾಯಂ ಮಾಡುವ ನಿರೀಕ್ಷೆಯಲ್ಲೇ ಕಾಲದೂಡುವಂತಾಗಿದೆ. ಸ್ವಚ್ಛತಾಕಾರರ ಆರೋಗ್ಯ ಹದಗೆಟ್ಟಿದೆ. ಮಾನವಹಕ್ಕು ಉಲ್ಲಂಘನೆಯಾಗುತ್ತಿದೆ. ಇನ್ನು ವಯಸ್ಸಿದ್ದಾಗಲೇ ಸಾವು ಬರುತ್ತಿದೆ. ಆದರೆ ಅವರ ಆರೋಗ್ಯದ ಕಡೆ ಸ್ವಚ್ಛ ಭಾರತ ಮುಖಮಾಡುವುದಿಲ್ಲ. ‘ಪೌರಕಾರ್ಮಿಕ’ನೆಂಬ ‘ನವಅಸ್ಪೃಶ್ಯತೆ’.ಮತ್ತೆ ಅಂಟಿಕೊಂಡಿದೆ. ಅವರ ಬದುಕೇ ಬೇರೊಬ್ಬರ ಚಾಕರಿ ಮಾಡುವುದು ಅನ್ನುವಂತಾಗಿದೆ. ಆಧುನಿಕ ತಂತ್ರಜ್ಞಾನ ಮುಂದುವರಿದಿದ್ದರೂ ಪೌರಕಾರ್ಮಿಕರಿಗೆ ಅದರ ಫಲ ಸಿಗುವಂತೆ ನೋಡಿಕೊಳ್ಳಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜಿಗ್ ಡೆತ್ ಗಳು ದೇಶದಾದ್ಯಂತ ನಡೆಯುತ್ತಲೇ ಇವೆ. ಸ್ವಚ್ಛಭಾರತದಲ್ಲಿ ಅವರಿಗೆ ಅವಕಾಶವೇ ಇಲ್ಲ.

ಮುದ್ರಾ ಯೋಜನೆಯಡಿ 7 ಕೋಟಿ ಉದ್ಯೋ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದರೆ ಜನ ಸಮಸ್ಯೆಗಳನ್ನೇಕೆ ಎದುರಿಸುತ್ತಿದ್ದಾರೆ. ನವಅಗ್ರಹಾರಗಳು ಬಂದ ಮೇಲೆ ಬೀದಿಬದಿ ವ್ಯಾಪಾರಿಗಳೇ ಮಾಯವಾಗುತ್ತಿದ್ದಾರೆ. ಬೀದಿಬದಿ ವ್ಯಾಪಾರ ಮಾಡುವವರನ್ನು ಸಣ್ಣ ಕಾರಣ ನೀಡಿ ಎತ್ತಂಗಡಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದಾಗ ನೀವು ಉದ್ಯೋಗ ಸೃಷ್ಟಿಸಿದ್ದಾದರೂ ಎಲ್ಲಿ? ಜನರೇಕೆ ಉದ್ಯೋಗವಿಲ್ಲ ಎಂದು ಹೇಳುತ್ತಿರುವುದು? ಹಾಗಾದರೆ ನೀವು ಯಾರಿಗೆ ನೀಡಿದ್ದೀರಿ ಉದ್ಯೋಗ.

ಸ್ಲಂಗಳು ಬೆಳೆಯುತ್ತಿವೆ. ಅವುಗಳನ್ನು ಬೇರೆಯವರ ಕಣ್ಣಿಗೆ ಕಾಣದಂತೆ ಮುಚ್ಚಿಡುವ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇವೆ. ಅಹಮದಾಬಾದ್ ಗೆ ಅಮೆರಿಕದ ಹುಚ್ಚು ದೊರೆ ಬಂದನೆಂಬ ಕಾರಣಕ್ಕೆ ತಡೆಗೋಡೆ ನಿರ್ಮಿಸಿದಿರಿ. ಅಲ್ಲಿದ್ದ ಬಡಕುಟುಂಬಗಳನ್ನಿ ನಿರ್ದಯವಾಗಿ ಎತ್ತಂಗಡಿ ಮಾಡಿದಿರಿ. ಭಾರತದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ಅಮೆರಿಕಾದ ಹುಚ್ಚುದೊರೆಯ ಮುಂದೆ ತೋರಿಸಲು ಯತ್ನಿಸಿದಿರಿ. ಹುಚ್ಚುದೊರೆ ನಿಮ್ಮ ಎದುರೇ ನೀವು ಸದಾ ಪಠಿಸುವ ದೇಶವನ್ನೇ ಹೊಗಲಿದನೆಂಬ ಸುದ್ದಿ ನಿಮಗೆ ಕೇಳಿಸಲಿಲ್ಲವೇ? ನಿಮ್ಮದೇ ಗುಂಪಿನ ಮುಖಂಡನೊಬ್ಬ ನಿಮ್ಮ ಆರ್ಥಿಕತೆ ನೀತಿಗಳನ್ನು ಟೀಕಿಸುತ್ತಲೇ ಬರುತ್ತಿದ್ದಾರೆ. ಇದಕ್ಕೆ ನೀವು ಕಿವಿಗೊಡುವುದಿಲ್ಲವೇ? ಮನ್ ಕಿ ಬಾತ್ ನಿಂತು ಹೋಯಿತು. ಟ್ರಂಪ್ ಕಿ ಬಾತ್ ಶುರುವಾಯಿತು ನೀವು ಇಬ್ಬರು ಆದರೆ ನಿಮ್ಮ ಮನಸ್ಥಿತಿ ಒಂದೇ. ಯಾಕೆಂದರೆ ನೀವು ಟ್ರಮೋ!

ಹಳ್ಳಿ ಕಡೆ ಮಾತೊಂದಿದಿದೆ. ಮಾತ್ನಾಗೆ ಎಂಗಣ್ಣ ಗಂಟೆ ಹೊಡ್ದಂಗೆ, ಊಟ್ದಾಗೆ ಎಂಗೆ ಸೆಲಿಕೆಗೆ ತಿರಿವಿ ಹಾಕ್ದಂಗೆ,,ಕೆಲ್ಸದಾಗೆ ಎಂಗೆ ಗೊಣಗೊಣ ಕಣಣ್ಣ’ ಹಾಗೆ ನೀವು. ಮಾತಿನಲ್ಲಿ ಗಂಟೆಯ ಶಬ್ದ, ಊಟದಲ್ಲಿ ಅಣಬೆ ಸಾಂಬಾರೆ ಬೇಕು! ಕೆಲಸ ಮಾತ್ರ ಏನೂ ಆಗಿಲ್ಲ. ಹಿಂದಿನ ಯೋಜನೆಗಳ ಹೆಸರು ಅಳಿಸಿದಿರಿ. ಹೊಸ ನಾಮಕರಣ ಮಾಡಿದಿರಿ. ಇದು ಸರಿಯೇ ದೊರೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: BLO ಮನೆ-ಮನೆ ಭೇಟಿ ಗಡುವು ಆಗಸ್ಟ್‌ 17ರವರೆಗೆ ವಿಸ್ತರಣೆ!

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು,...

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲ್ಲ: ತಮಿಳುನಾಡು ಸಿಎಂ ವಿಜಯ್

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ....

ಬೆಂಗಳೂರಿನ ಜಕ್ಕೂರಿನಲ್ಲಿ 22-23 ವರ್ಷದ ಇಬ್ಬರು ನೇಪಾಳಿ ಯುವತಿಯರ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜಕ್ಕೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನೇಪಾಳ...

NEET Paper Leak: ಒಂದೇ ಒಂದು CCTV ಇರಲಿಲ್ಲ, ಚೆಕಿಂಗ್ ಇರಲಿಲ್ಲ! ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ? CBI ವರದಿ ಇಲ್ಲಿದೆ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA)...

ಉತ್ತರಾಖಂಡ : ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ SIR ನೋಟಿಸ್

ಉತ್ತರಾಖಂಡದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ತಲುಪಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ),...

SIR: ಗಣತಿ ನಮೂನೆ ವಾಪಸ್‌ಗೆ ನಾಳೆಯೇ ಅಂತಿಮ ಗಡುವು, 1.10 ಕೋಟಿ ಮತದಾರರ ಹೆಸರು ಡಿಲೀಟ್‌!

ರಾಜ್ಯಾದ್ಯಂತ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ನಾಳೆ (ಆಗಸ್ಟ್ 8) ಕೊನೆಯ ದಿನವಾಗಿದೆ. ಈ ನಡುವೆ...

ಕರ್ನಾಟಕ ಎಸ್ಐಆರ್: ಬೆಂಗಳೂರಿನ ಅರ್ಧದಷ್ಟು ಮತದಾರರು ‘ಹೊರಕ್ಕೆ’: ರಾಜ್ಯದಲ್ಲಿ 1.11 ಕೋಟಿ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ

ಕರ್ನಾಟಕದಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಕೈಗೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ರಾಜ್ಯದ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಭೀತಿಯನ್ನು ಹುಟ್ಟುಹಾಕಿದೆ. ಪ್ರಜಾಪ್ರಭುತ್ವ...

ಎರಡು ನ್ಯೂಸ್ ಚಾನೆಲ್‌ಗಳಿಗೆ ಉದಯನಿಧಿ ಲೀಗಲ್ ನೋಟಿಸ್ : ಸಾರ್ವಜನಿಕ ಕ್ಷಮೆಯಾಚನೆ, 100 ಕೋಟಿ ಪರಿಹಾರಕ್ಕೆ ಆಗ್ರಹ-ವರದಿ

ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಇತ್ತೀಚಿನ ಹೇಳಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾನನಷ್ಟ ಆರೋಪ ಮಾಡಿ ಎರಡು ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ...

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ: ಅಭಿಜೀತ್ ದೀಪ್ಕೆಗೆ ‘ರಾಷ್ಟ್ರೀಯ ಸಂಚಾಲಕ’

ದೇಶಾದ್ಯಂತ ವಿದ್ಯಾರ್ಥಿ ಮತ್ತು ಯುವಜನರ ಬೃಹತ್ ಹೋರಾಟದ ಮೂಲಕ ಗಮನಸೆಳೆದಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಅಧಿಕೃತವಾಗಿ ತನ್ನ ಮೊದಲ 14 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (National Working Committee) ಪ್ರಕಟಿಸಿದೆ....

ಕ್ಷೇತ್ರ ಪುನರ್ ವಿಂಗಡಣೆಗೆ ಡಿಎಂಕೆ ವಿರೋಧ: ‘ಮೃದು ಧೋರಣೆ’ ವದಂತಿಗೆ ಉದಯನಿಧಿ ಸ್ಟಾಲಿನ್ ಬ್ರೇಕ್

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಚಯಿಸಲು ಮುಂದಾಗಿರುವುದು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಕಸರತ್ತಿಗೆ ಕಾರಣವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಡಿಎಂಕೆ (DMK) ತನ್ನ ಕಠಿಣ ನಿಲುವನ್ನು ಮೃದುಗೊಳಿಸಿದೆ ಎಂಬ...