Homeಮುಖಪುಟಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

ಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

- Advertisement -
- Advertisement -

ಸಾಮಾನ್ಯ ಭಾರತೀಯನಿಗಿಂತ ಹೆಚ್ಚು ಎತ್ತರದಾಗ ತೇಲಾಡೋ ಹೀರೋ ಅಮಿತಾಬ ಬಚ್ಚನ ಅವರು ʻಹಮ್ʼ (ನಾವು) ಅಂತ ಒಂದು ಪಿಚ್ಚರು ಮಾಡಿದ್ದರು. ಅದರಾಗ ಒಂದು ಡಯಲಾಗು ಇತ್ತು. ʻʻʻದೇಖೋ ಗೊನಸಾಲ್ವಿಸ್. ಇಸ್ ದುನಿಯಾ ಮೆ ದೊ ತರಹ ಕಾ ಕೀಡಾ ಹೋತಾ ಹೈ,ʼʼ ಅಂತ ಶುರು ಆಗುವ ಆ ಮಾತು ಬಹಳ ಜನಪ್ರಿಯವಾಗಿತ್ತು.

ʻʻಎಕ್ ವೊ ಜೊ ಕಚರೇ ಸೆ ಉಠತಾ ಹೈ. ದೂಸರಾ ಪಾಪ ಕಿ ಗಂದಗೀ ಸೆ ಉಠತಾ ಹೈ. ಕಚರೇ ಕಾ ಕೀಡಾ ಇನ್ಸಾನ ಕೋ ಬೀಮಾರ ಕರತಾ ಹೈ. ಲೆಕಿನ್ ಪಾಪ ಕಿ ಗಂದಗೀ ಸೆ ನಿಕಲನೆ ವಾಲಾ ಕೀಡಾ ಪೂರೆ ಸಮಾಜ ಕೊ ಬೀಮಾರ ಕರತಾ ಹೈ. ಕಚರೇ ಕಾ ಕೀಡಾ ಮಾರನೆ ಕೆ ಲಿಯೆ ಫ್ಲಿಟ್ ಬಾಜಾರ್ ಮೆ ಮಿಲತಾ ಹೈ. ಲೆಕಿನ ಪಾಪ ಕಿ ಗಂದಗೀ ಕಾ ಕೀಡಾ ಮಾರನೆ ಕೆ ಲಿಯೆ ಸಾಲಾ ಫ್ಲಿಟ್ ಅಭೀ ತಕ ಬನಾ ನಹೀಂʼʼ ಸಮಾಜದಲ್ಲಿರುವುದು ಎರಡು ರೀತಿಯ ಕ್ರಿಮಿ. ಒಂದು ಕಸದಿಂದ ಬರುವುದು, ಇನ್ನೊಂದು ಪಾಪದಿಂದ ಹುಟ್ಟುವುದು. ಮೊದಲನೆಯದರಿಂದ ಮನುಷ್ಯರಿಗೆ ರೋಗ ಬಂದರೆ ಎರಡನೇಯದರಿಂದ ಇಡೀ ಸಮಾಜಕ್ಕೆ ರೋಗ ಬರತದೆ. ಒಂದನೇಯದಕ್ಕೆ ಔಷಧಿ ಇದೆ. ಇನ್ನೊಂದಕ್ಕಿಲ್ಲ,ʼʼ ಅಂತ.

 

ಇವತ್ತು ನಮ್ಮೆದುರಿಗೆ ಇರುವುದು ಸಹ ಎರಡು – ಕೊರೋನಾ ಕ್ರಿಮಿ ಮತ್ತು ಕೋಮು ಕ್ರಿಮಿ. ಕೊರೋನಾ ರೋಗಿಷ್ಟರ ಕೆಮ್ಮು – ಕಫಾದಾಗ ಇದ್ದರ. ಎರಡನೇದು ಠೀವಿ ಗೂಟಗಳ (ಟೀವಿ ಆಂಕರುಗಳ) ಒದರಿಕೆಯಿಂದ ಬರತೇತಿ. ಕೊರೋನಾ ಬರಾಕ ನೀವು ರೋಗಿ ಎದರಿಗೆ ಇರಬೇಕು. ಎರಡನೇದು ಬರಾಕ ನಿಮ್ಮ ಮನ್ಯಾಗ ಠೀವಿ ಇದ್ದರ ಸಾಕು. ನೀವು ಅದರ ಎದರಿಗೆ ಇರಬೇಕು ಅಂತ ಏನಿಲ್ಲ.


ಇದನ್ನೂ ಓದಿ: ಆನಿ ಬಂದವು ಆನಿ ಎರಡೆರಡು ಆನಿ – ಒಂದು ಅಂಬಾನಿ, ಇನ್ನೊಂದು ಅಡಾನಿ


ಇಂತ ದುರಿತ ಕಾಲದಾಗ ಅವರ ಕೆಲಸ ಏನಪಾ ಅಂದರ ಜನರ ಅಂಜಿಕಿ ಕಮ್ಮಿ ಮಾಡೋದು. ಆದರ ಅವರು ಏನು ಮಾಡಾಕ ಹತ್ಯಾರು ಅಂದರ ಜನರ ಅಂಜಿಕಿ ಜಾಸ್ತಿ ಮಾಡಾಕ ಹತ್ಯಾರು. ಹೆದರಿದವರ ಮ್ಯಾಗ ಹಲ್ಲಿ ಒಗದಿದ್ದರು ಅಂದಂಗ ಇಲ್ಲದ್ದು – ಬಿಟ್ಟದ್ದು ಎಲ್ಲಾ ಹುಡಿಕಿ ಹುಡಿಕಿ ಮಂದೀಗೆ ಹೆದರಸಾಕ ಹತ್ಯಾರು.

ಅವರು ರೋಗದ ಬಗ್ಗೆ- ವೈರಸ್ಸ ಬಗ್ಗೆ ತಪ್ಪು ಮಾಹಿತಿ ಕೊಡತಾರು. ಮತ್ತ ಆ ನೆವದಿಂದ ಜನಾಂಗೀಯ ದ್ವೇಷ ಹುಟ್ಟಸಾಕ- ಹೆಚ್ಚು ಮಾಡಾಕ ಕುಂತಾರು.

ನಮ್ಮ ಒಳಗ ಇದ್ದಿರಬಹುದಾದ ದ್ವೇಷ ಹೊಡದ ಎಬ್ಬಸಾಕ ಹತ್ಯಾರು. ಅವರಿಗೆ ಏನು ಗೊತ್ತಿಲ್ಲಾ ಅಂದರ ಒಂದ ಸಲಾ ಇದು ಸುರು ಆತಂದರ ಅದನ್ನ ನಿಲ್ಲಸಾಕ ಆಗಂಗಿಲ್ಲ. ಅದಕ್ಕ ದಿನಾ ಸಂಜೀಕೆ ನರಬಲಿ ಕೊಡಬೇಕು. ಕಡೀಕೆ ಅದು ಫ್ರಾಂಕೆನ್ ಸ್ಟೈನ್ ರಾಕ್ಷಸನ ಗತೆ, ತಮ್ಮ ಸೃಷ್ಟಿ ಮಾಡಿದವರನ್ನ ತಿಂದು ಬಿಡತೇತಿ.

ಹದಿನೈದನೇ ಶತಮಾನದ ಸಂತ ನಾರ್ಸಿ ಮೆಹತಾ ಅವರ ಭಜನೆಯ ಆಶಯದಂತೆ ಆ ಭಗವಂತ ನಮಗೂ ಅವರಿಗೂ, ಸಬಕೋ ಸನ್ಮತಿ ಕೊಡಲಿ.

ಈ ಕೀಲಿ ಕಿಟಕ್ಕಿನ್ಯಾಗ ಎಲ್ಲಾರೂ ಪಿಚ್ಚರು ನೋಡಾಕ ಹತ್ಯಾರು. ನೀವು ಸಹಿತ ʻಇಂಗೋಮಾನ್ಷಯಾʼ (ಸಿಹಿ ಕನಸು) ಅನ್ನುವ ಒಂದು ಸಾಕ್ಷ ಚಿತ್ರ ಸಿಕ್ಕರೆ ನೋಡ್ರಿ. ಅದು ರುವಾಂಡ ದೇಶದಲ್ಲಿ 1994 ರಾಗ ನಡೆದ ನರಮೇಧದ ನಂತರ ಹುಟು ಮತ್ತು ಟುಟ್ಸಿ ಎಂಬ ವಿರೋಧಿ ಜನಾಂಗೀಯ ಗುಂಪುಗಳ ಹೆಣ್ಣು ಮಕ್ಕಳು ಕೂಡಿ ಒಂದು ಡೊಳ್ಳು ಕುಣಿತದ ತಂಡ ಹಾಗೂ ಒಂದು ಐಸ್ ಕ್ರೀಮು ಅಂಗಡಿ ಹಾಕಿ ಒಗ್ಗಟ್ಟು ಸಾರಿದ್ದರ ಬಗ್ಗೆ ಐತಿ. ಅದನ್ನ ಮಾಡಾಕ ಕೀಕೀ ಅನ್ನೋ ಪಾಪ್ ಹಾಡುಗಾರ್ತಿ ಅವರಿಗೆ ಹುರಿದುಂಬಸತಾಳು.

ಇದರ ಹಿನ್ನೆಲೆ ಎನಂದರ 1994 ಬೇಸಿಗೆಯೊಳಗ ಮಧ್ಯ ಆಫ್ರಿಕಾದ ಸಣ್ಣ ದೇಶ ರುವಾಂಡದಾಗ ಹುಟು ಹಾಗೂ ಟುಟ್ಸಿ ಅವರ ನಡುವೆ ಜನಾಂಗೀಯ ಕದನ ನಡೀತು. ಬಹುಸಂಖ್ಯಾತ ಹುಟುರವರಲ್ಲಿನ ಉಗ್ರವಾದಿಗಳು ಅಲ್ಪ ಸಂಖ್ಯಾತ ಟುಟ್ಸಿ ಹಾಗೂ ಸೌಮ್ಯವಾದಿ ಹುಟು ಜನರನ್ನ ಕೊಂದರು. ಅಸಂಖ್ಯ ಜನ ಸತ್ತರು, ಎಷ್ಟೋ ಜನ ನಾಪತ್ತೆಯಾದರು, ಹಲವರು ವಿದೇಶಗಳಿಗೆ ಓಡಿ ಹೋದರು.


ಇದನ್ನೂ ಓದಿ:  ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?


ನಿನ್ನೆ ಮೊನ್ನೆ ನೆರೆಹೊರೆಯವರಾಗಿದ್ದ ಜನರನ್ನ ರಕ್ತ ಪಿಪಾಸುಗಳಾಗುವಂತೆ ಮಾಡಿದ್ದು ಯಾರಂದರ ರುವಾಂಡ ರೇಡಿಯೋದ ಪತ್ರಕರ್ತರು. ʻಟುಟ್ಸಿಗಳು ವಿಷದ ಹಾವು – ಚೇಳು- ಜಿರಲೆ. ಅವರನ್ನು ಕೊಲ್ಲಿರಿ. ದೇವರು ನಿಮಗೆ ಶಹಬ್ಬಾಸು ಗಿರಿ ಕೊಡತಾನೆ. ಚಿಕ್ಕ ಮಕ್ಕಳು ಅಂತ ಬಿಡಬೇಡಿ, ಹಾವುಗಳಲ್ಲಿ ಹುಟ್ಟಿನಿಂದ ವಿಷ ತುಂಬಿರತದೆʼ ಅಂತ ಇಪ್ಪತ್ನಾಕು ತಾಸು ಪ್ರಸಾರ ಮಾಡಿದರು.

ಆರು ವರ್ಷಗಳ ಹಿಂಸೆ- ಕ್ಷಾಮ- ದುರಾಡಳಿತದ ನಂತರ ಚುನಾವಣೆಯಾಗಿ ರುವಾಂಡದಾಗ ಶಾಂತಿ ಪ್ರಿಯ ಸರಕಾರ ಬಂತು. ಈಗ ಆಫ್ರಿಕಾ ಖಂಡದ 54 ದೇಶಗಳೊಳಗ ಅತಿ ವೇಗವಾಗಿ ಬೆಳೆಯುತ್ತಿರುವ ದೇಶ ರವಾಂಡ. ಟುಟ್ಸಿ ರಾಜಮನೆತನಕ್ಕ ಸೇರಿದ ಅದರ ಅಧ್ಯಕ್ಷ ಪಾಲ ಕಗಾಮೆ ಎಲ್ಲಾ ಜನಾಂಗಗಳನ್ನು ಜೊತೆಯಲ್ಲಿ ಸೇರಿಸಿ ಕರೆದುಕೊಂಡು ಹೋಗುವ ಮಾತಾಡತಾನು. ಅಲ್ಲಿನ ಸಂಸತ್ತಿನಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆದಾಗ ಅದಾರು. ಅರಣ್ಯ – ವನ್ಯಜೀವಿ ರಕ್ಷಣೆ ಛಲೋ ಮಾಡತಾರು ಅಂತ ಹೇಳಿ ಅವರಿಗೆ ಪ್ರಶಸ್ತಿ ಕೊಟ್ಟೇತಿ. ರೇಡಿಯೋ ರವಾಂಡಾದ ಕೆಲವು (ಅನೌನ್ಸರು) ಕಿರಚಾಟಿಗಳ ಮ್ಯಾಲೆ ಮೊಕದ್ದಮೆ ನಡದು ಜೈಲಿಗೆ ಹೋಗ್ಯಾರು. ಅದರಾಗಿನ ಕಾರ್ಯಕ್ರಮದ ಗುಣಮಟ್ಟ ಬ್ಯಾರೆ ಈಗ ಆಗೇತಿ.

ನಮ್ಮ ಮಾಧ್ಯಮಗಳು ಈ ಭೂಮಿಯನ್ನ ಸ್ವರ್ಗ ಮಾಡೋದು ಹೋಗಲಿ. ನರಕಾ ಅಂತೂ ಮಾಡಬಾರದು ಅಂತ ಹೇಳಿ ರಘುಪತಿ ರಾಘವನಲ್ಲೆ ಪ್ರಾರ್ಥನೆ ಮಾಡೋಣು. ಅದರಕಿಂತಾ ಮೊದಲಿಗೆ ಠೀವಿ ಬಂದು ಮಾಡೋಣು, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ವಿಡಿಯೊ ನೋಡಿ: ಕೊರೊನಾಗೆ ಚಿಕಿತ್ಸೆ ಏನು? ವ್ಯಾಕ್ಸೀನ್‌ ತಯಾರಿ ಎಲ್ಲಿಯವರೆಗೆ ಬಂದಿದೆ? ಅಂತಿಮ ಪರಿಹಾರ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...