Homeಮುಖಪುಟಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

ಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

- Advertisement -
- Advertisement -

ಸಾಮಾನ್ಯ ಭಾರತೀಯನಿಗಿಂತ ಹೆಚ್ಚು ಎತ್ತರದಾಗ ತೇಲಾಡೋ ಹೀರೋ ಅಮಿತಾಬ ಬಚ್ಚನ ಅವರು ʻಹಮ್ʼ (ನಾವು) ಅಂತ ಒಂದು ಪಿಚ್ಚರು ಮಾಡಿದ್ದರು. ಅದರಾಗ ಒಂದು ಡಯಲಾಗು ಇತ್ತು. ʻʻʻದೇಖೋ ಗೊನಸಾಲ್ವಿಸ್. ಇಸ್ ದುನಿಯಾ ಮೆ ದೊ ತರಹ ಕಾ ಕೀಡಾ ಹೋತಾ ಹೈ,ʼʼ ಅಂತ ಶುರು ಆಗುವ ಆ ಮಾತು ಬಹಳ ಜನಪ್ರಿಯವಾಗಿತ್ತು.

ʻʻಎಕ್ ವೊ ಜೊ ಕಚರೇ ಸೆ ಉಠತಾ ಹೈ. ದೂಸರಾ ಪಾಪ ಕಿ ಗಂದಗೀ ಸೆ ಉಠತಾ ಹೈ. ಕಚರೇ ಕಾ ಕೀಡಾ ಇನ್ಸಾನ ಕೋ ಬೀಮಾರ ಕರತಾ ಹೈ. ಲೆಕಿನ್ ಪಾಪ ಕಿ ಗಂದಗೀ ಸೆ ನಿಕಲನೆ ವಾಲಾ ಕೀಡಾ ಪೂರೆ ಸಮಾಜ ಕೊ ಬೀಮಾರ ಕರತಾ ಹೈ. ಕಚರೇ ಕಾ ಕೀಡಾ ಮಾರನೆ ಕೆ ಲಿಯೆ ಫ್ಲಿಟ್ ಬಾಜಾರ್ ಮೆ ಮಿಲತಾ ಹೈ. ಲೆಕಿನ ಪಾಪ ಕಿ ಗಂದಗೀ ಕಾ ಕೀಡಾ ಮಾರನೆ ಕೆ ಲಿಯೆ ಸಾಲಾ ಫ್ಲಿಟ್ ಅಭೀ ತಕ ಬನಾ ನಹೀಂʼʼ ಸಮಾಜದಲ್ಲಿರುವುದು ಎರಡು ರೀತಿಯ ಕ್ರಿಮಿ. ಒಂದು ಕಸದಿಂದ ಬರುವುದು, ಇನ್ನೊಂದು ಪಾಪದಿಂದ ಹುಟ್ಟುವುದು. ಮೊದಲನೆಯದರಿಂದ ಮನುಷ್ಯರಿಗೆ ರೋಗ ಬಂದರೆ ಎರಡನೇಯದರಿಂದ ಇಡೀ ಸಮಾಜಕ್ಕೆ ರೋಗ ಬರತದೆ. ಒಂದನೇಯದಕ್ಕೆ ಔಷಧಿ ಇದೆ. ಇನ್ನೊಂದಕ್ಕಿಲ್ಲ,ʼʼ ಅಂತ.

 

ಇವತ್ತು ನಮ್ಮೆದುರಿಗೆ ಇರುವುದು ಸಹ ಎರಡು – ಕೊರೋನಾ ಕ್ರಿಮಿ ಮತ್ತು ಕೋಮು ಕ್ರಿಮಿ. ಕೊರೋನಾ ರೋಗಿಷ್ಟರ ಕೆಮ್ಮು – ಕಫಾದಾಗ ಇದ್ದರ. ಎರಡನೇದು ಠೀವಿ ಗೂಟಗಳ (ಟೀವಿ ಆಂಕರುಗಳ) ಒದರಿಕೆಯಿಂದ ಬರತೇತಿ. ಕೊರೋನಾ ಬರಾಕ ನೀವು ರೋಗಿ ಎದರಿಗೆ ಇರಬೇಕು. ಎರಡನೇದು ಬರಾಕ ನಿಮ್ಮ ಮನ್ಯಾಗ ಠೀವಿ ಇದ್ದರ ಸಾಕು. ನೀವು ಅದರ ಎದರಿಗೆ ಇರಬೇಕು ಅಂತ ಏನಿಲ್ಲ.


ಇದನ್ನೂ ಓದಿ: ಆನಿ ಬಂದವು ಆನಿ ಎರಡೆರಡು ಆನಿ – ಒಂದು ಅಂಬಾನಿ, ಇನ್ನೊಂದು ಅಡಾನಿ


ಇಂತ ದುರಿತ ಕಾಲದಾಗ ಅವರ ಕೆಲಸ ಏನಪಾ ಅಂದರ ಜನರ ಅಂಜಿಕಿ ಕಮ್ಮಿ ಮಾಡೋದು. ಆದರ ಅವರು ಏನು ಮಾಡಾಕ ಹತ್ಯಾರು ಅಂದರ ಜನರ ಅಂಜಿಕಿ ಜಾಸ್ತಿ ಮಾಡಾಕ ಹತ್ಯಾರು. ಹೆದರಿದವರ ಮ್ಯಾಗ ಹಲ್ಲಿ ಒಗದಿದ್ದರು ಅಂದಂಗ ಇಲ್ಲದ್ದು – ಬಿಟ್ಟದ್ದು ಎಲ್ಲಾ ಹುಡಿಕಿ ಹುಡಿಕಿ ಮಂದೀಗೆ ಹೆದರಸಾಕ ಹತ್ಯಾರು.

ಅವರು ರೋಗದ ಬಗ್ಗೆ- ವೈರಸ್ಸ ಬಗ್ಗೆ ತಪ್ಪು ಮಾಹಿತಿ ಕೊಡತಾರು. ಮತ್ತ ಆ ನೆವದಿಂದ ಜನಾಂಗೀಯ ದ್ವೇಷ ಹುಟ್ಟಸಾಕ- ಹೆಚ್ಚು ಮಾಡಾಕ ಕುಂತಾರು.

ನಮ್ಮ ಒಳಗ ಇದ್ದಿರಬಹುದಾದ ದ್ವೇಷ ಹೊಡದ ಎಬ್ಬಸಾಕ ಹತ್ಯಾರು. ಅವರಿಗೆ ಏನು ಗೊತ್ತಿಲ್ಲಾ ಅಂದರ ಒಂದ ಸಲಾ ಇದು ಸುರು ಆತಂದರ ಅದನ್ನ ನಿಲ್ಲಸಾಕ ಆಗಂಗಿಲ್ಲ. ಅದಕ್ಕ ದಿನಾ ಸಂಜೀಕೆ ನರಬಲಿ ಕೊಡಬೇಕು. ಕಡೀಕೆ ಅದು ಫ್ರಾಂಕೆನ್ ಸ್ಟೈನ್ ರಾಕ್ಷಸನ ಗತೆ, ತಮ್ಮ ಸೃಷ್ಟಿ ಮಾಡಿದವರನ್ನ ತಿಂದು ಬಿಡತೇತಿ.

ಹದಿನೈದನೇ ಶತಮಾನದ ಸಂತ ನಾರ್ಸಿ ಮೆಹತಾ ಅವರ ಭಜನೆಯ ಆಶಯದಂತೆ ಆ ಭಗವಂತ ನಮಗೂ ಅವರಿಗೂ, ಸಬಕೋ ಸನ್ಮತಿ ಕೊಡಲಿ.

ಈ ಕೀಲಿ ಕಿಟಕ್ಕಿನ್ಯಾಗ ಎಲ್ಲಾರೂ ಪಿಚ್ಚರು ನೋಡಾಕ ಹತ್ಯಾರು. ನೀವು ಸಹಿತ ʻಇಂಗೋಮಾನ್ಷಯಾʼ (ಸಿಹಿ ಕನಸು) ಅನ್ನುವ ಒಂದು ಸಾಕ್ಷ ಚಿತ್ರ ಸಿಕ್ಕರೆ ನೋಡ್ರಿ. ಅದು ರುವಾಂಡ ದೇಶದಲ್ಲಿ 1994 ರಾಗ ನಡೆದ ನರಮೇಧದ ನಂತರ ಹುಟು ಮತ್ತು ಟುಟ್ಸಿ ಎಂಬ ವಿರೋಧಿ ಜನಾಂಗೀಯ ಗುಂಪುಗಳ ಹೆಣ್ಣು ಮಕ್ಕಳು ಕೂಡಿ ಒಂದು ಡೊಳ್ಳು ಕುಣಿತದ ತಂಡ ಹಾಗೂ ಒಂದು ಐಸ್ ಕ್ರೀಮು ಅಂಗಡಿ ಹಾಕಿ ಒಗ್ಗಟ್ಟು ಸಾರಿದ್ದರ ಬಗ್ಗೆ ಐತಿ. ಅದನ್ನ ಮಾಡಾಕ ಕೀಕೀ ಅನ್ನೋ ಪಾಪ್ ಹಾಡುಗಾರ್ತಿ ಅವರಿಗೆ ಹುರಿದುಂಬಸತಾಳು.

ಇದರ ಹಿನ್ನೆಲೆ ಎನಂದರ 1994 ಬೇಸಿಗೆಯೊಳಗ ಮಧ್ಯ ಆಫ್ರಿಕಾದ ಸಣ್ಣ ದೇಶ ರುವಾಂಡದಾಗ ಹುಟು ಹಾಗೂ ಟುಟ್ಸಿ ಅವರ ನಡುವೆ ಜನಾಂಗೀಯ ಕದನ ನಡೀತು. ಬಹುಸಂಖ್ಯಾತ ಹುಟುರವರಲ್ಲಿನ ಉಗ್ರವಾದಿಗಳು ಅಲ್ಪ ಸಂಖ್ಯಾತ ಟುಟ್ಸಿ ಹಾಗೂ ಸೌಮ್ಯವಾದಿ ಹುಟು ಜನರನ್ನ ಕೊಂದರು. ಅಸಂಖ್ಯ ಜನ ಸತ್ತರು, ಎಷ್ಟೋ ಜನ ನಾಪತ್ತೆಯಾದರು, ಹಲವರು ವಿದೇಶಗಳಿಗೆ ಓಡಿ ಹೋದರು.


ಇದನ್ನೂ ಓದಿ:  ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?


ನಿನ್ನೆ ಮೊನ್ನೆ ನೆರೆಹೊರೆಯವರಾಗಿದ್ದ ಜನರನ್ನ ರಕ್ತ ಪಿಪಾಸುಗಳಾಗುವಂತೆ ಮಾಡಿದ್ದು ಯಾರಂದರ ರುವಾಂಡ ರೇಡಿಯೋದ ಪತ್ರಕರ್ತರು. ʻಟುಟ್ಸಿಗಳು ವಿಷದ ಹಾವು – ಚೇಳು- ಜಿರಲೆ. ಅವರನ್ನು ಕೊಲ್ಲಿರಿ. ದೇವರು ನಿಮಗೆ ಶಹಬ್ಬಾಸು ಗಿರಿ ಕೊಡತಾನೆ. ಚಿಕ್ಕ ಮಕ್ಕಳು ಅಂತ ಬಿಡಬೇಡಿ, ಹಾವುಗಳಲ್ಲಿ ಹುಟ್ಟಿನಿಂದ ವಿಷ ತುಂಬಿರತದೆʼ ಅಂತ ಇಪ್ಪತ್ನಾಕು ತಾಸು ಪ್ರಸಾರ ಮಾಡಿದರು.

ಆರು ವರ್ಷಗಳ ಹಿಂಸೆ- ಕ್ಷಾಮ- ದುರಾಡಳಿತದ ನಂತರ ಚುನಾವಣೆಯಾಗಿ ರುವಾಂಡದಾಗ ಶಾಂತಿ ಪ್ರಿಯ ಸರಕಾರ ಬಂತು. ಈಗ ಆಫ್ರಿಕಾ ಖಂಡದ 54 ದೇಶಗಳೊಳಗ ಅತಿ ವೇಗವಾಗಿ ಬೆಳೆಯುತ್ತಿರುವ ದೇಶ ರವಾಂಡ. ಟುಟ್ಸಿ ರಾಜಮನೆತನಕ್ಕ ಸೇರಿದ ಅದರ ಅಧ್ಯಕ್ಷ ಪಾಲ ಕಗಾಮೆ ಎಲ್ಲಾ ಜನಾಂಗಗಳನ್ನು ಜೊತೆಯಲ್ಲಿ ಸೇರಿಸಿ ಕರೆದುಕೊಂಡು ಹೋಗುವ ಮಾತಾಡತಾನು. ಅಲ್ಲಿನ ಸಂಸತ್ತಿನಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆದಾಗ ಅದಾರು. ಅರಣ್ಯ – ವನ್ಯಜೀವಿ ರಕ್ಷಣೆ ಛಲೋ ಮಾಡತಾರು ಅಂತ ಹೇಳಿ ಅವರಿಗೆ ಪ್ರಶಸ್ತಿ ಕೊಟ್ಟೇತಿ. ರೇಡಿಯೋ ರವಾಂಡಾದ ಕೆಲವು (ಅನೌನ್ಸರು) ಕಿರಚಾಟಿಗಳ ಮ್ಯಾಲೆ ಮೊಕದ್ದಮೆ ನಡದು ಜೈಲಿಗೆ ಹೋಗ್ಯಾರು. ಅದರಾಗಿನ ಕಾರ್ಯಕ್ರಮದ ಗುಣಮಟ್ಟ ಬ್ಯಾರೆ ಈಗ ಆಗೇತಿ.

ನಮ್ಮ ಮಾಧ್ಯಮಗಳು ಈ ಭೂಮಿಯನ್ನ ಸ್ವರ್ಗ ಮಾಡೋದು ಹೋಗಲಿ. ನರಕಾ ಅಂತೂ ಮಾಡಬಾರದು ಅಂತ ಹೇಳಿ ರಘುಪತಿ ರಾಘವನಲ್ಲೆ ಪ್ರಾರ್ಥನೆ ಮಾಡೋಣು. ಅದರಕಿಂತಾ ಮೊದಲಿಗೆ ಠೀವಿ ಬಂದು ಮಾಡೋಣು, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ವಿಡಿಯೊ ನೋಡಿ: ಕೊರೊನಾಗೆ ಚಿಕಿತ್ಸೆ ಏನು? ವ್ಯಾಕ್ಸೀನ್‌ ತಯಾರಿ ಎಲ್ಲಿಯವರೆಗೆ ಬಂದಿದೆ? ಅಂತಿಮ ಪರಿಹಾರ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...