ದೀಪಾವಳಿ ಹಬ್ಬದ ನಂತರ ಮಹಾರಾಷ್ಟ್ರದ ಒಂಬತ್ತರಿಂದ ಹನ್ನೆರಡನೇ ತರಗತಿಗಳ ಶಾಲೆಗಳು ಮತ್ತೆ ತೆರೆಯಲು ಸಿಎಂ ಉದ್ಧವ್ ಠಾಕ್ರೆ ಅನುಮತಿ ನೀಡಿದ್ದಾರೆ. ಜೊತೆಗೆ ದೇವಾಲಯಗಳನ್ನು ಸಹ ತೆರೆಯಬಹುದು ಎಂದು ಅವರು ಹೇಳಿದ್ದಾರೆ.
ಎಲ್ಲಾ ರೀತಿಯ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ದೀಪಾವಳಿಯ ನಂತರ ಶಾಲೆಗಳನ್ನು ತೆರೆಯಲು ಯೋಚಿಸಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಶಾಲೆಗಳು ಅನುಸರಿಸಬೇಕಾದ ಕಾರ್ಯ ವಿಧಾನಗಳನ್ನು ಪರಿಶೀಲಿಸಲು ಭಾನುವಾರ ನಡೆದ ಇಲಾಖೆಯ ಸಭೆಯಲ್ಲಿ ಈ ವಿಷಯವನ್ನು ನಿರ್ಧರಿಸಲಾಗಿದೆ.
Pollution can increase the impact of #COVID19. I appeal to people to not burn firecrackers rather lit earthen lamps. 15 days post-Diwali will be crucial, we should be cautious so that the need for lockdown does not arise again: Maharashtra Chief Minister Uddhav Thackeray https://t.co/Jnfb5xshDT
— ANI (@ANI) November 8, 2020
ಇದನ್ನೂ ಓದಿ: ಆಂಧ್ರ ಪ್ರದೇಶ: 262 ವಿದ್ಯಾರ್ಥಿಗಳಿಗೆ ಕೊರೊನಾ, ಆತಂಕ ಬೇಡ ಎಂದ ಇಲಾಖೆ!
’ದೀಪಾವಳಿಯ ನಂತರ ರಾಜ್ಯದ ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ಶಾಲೆಗಳು ಮತ್ತೆ ತೆರೆಯಲು ಸಿಎಂ ಉದ್ಧವ್ ಠಾಕ್ರೆ ಅವಕಾಶ ನೀಡಿದ್ದಾರೆ. ನವೆಂಬರ್ 17 ಮತ್ತು 22 ರ ನಡುವೆ ಸ್ಥಳೀಯ ಆಡಳಿತಗಳಿಂದ ಎಲ್ಲಾ ಶಿಕ್ಷಕರಿಗೂ ಕೊರೊನಾ ಟೆಸ್ಟ್ ನಡೆಸಲಾಗುವುದು. ನೆಗೆಟಿವ್ ವರದಿ ಬಂದ ಶಿಕ್ಷಕರಿಗೆ ಮಾತ್ರ ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಸಚಿವ ವರ್ಷಾ ಗಾಯಕವಾಡ್ ತಿಳಿಸಿದ್ದಾರೆ.
ಕೊರೊನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಹಾಗಾಗಿ, ಎಲ್ಲಾ ವಿದ್ಯಾರ್ಥಿಗಳನ್ನು ತರಗತಿ ಕೋಣೆಗಳ ಒಳಗೆ ಹೋಗುವ ಮೊದಲು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು ಮತ್ತು ಬೆಂಚ್ಗೆ ಒಂದು ಮಗುವಿಗೆ ಮಾತ್ರ ಅವಕಾಶ ನೀಡುವಂತೆ ಆಸನ ವ್ಯವಸ್ಥೆಯನ್ನು ಬದಲಾಯಿಸಲಾಗುವುದು ಎಂದು ಹೇಳಿದರು.
“ದೈಹಿಕ ತರಗತಿಗಳು ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಇರುವುದಿಲ್ಲ. ಶಿಕ್ಷಕರ ಅಗತ್ಯವಿರುವ ಗಣಿತ ಮತ್ತು ವಿಜ್ಞಾನದಂತಹ ಆಯ್ದ ವಿಷಯಗಳನ್ನು ಮಾತ್ರ ಭೌತಿಕ ತರಗತಿಗಳಿಗೆ ತೆಗೆದುಕೊಳ್ಳಲಾಗುವುದು, ಉಳಿದ ವಿಷಯಗಳು ಆನ್ಲೈನ್ನಲ್ಲಿ ಮುಂದುವರಿಯುತ್ತದೆ ”ಎಂದು ಗಾಯಕವಾಡ್ ಹೇಳಿದರು.