Homeಮುಖಪುಟಮಯನ್ಮಾರ್ ಮಿಲಿಟರಿ ದಂಗೆಯ ವಿರುದ್ಧ ಬಂಡಾಯ 8888 ರಿಂದ 2021

ಮಯನ್ಮಾರ್ ಮಿಲಿಟರಿ ದಂಗೆಯ ವಿರುದ್ಧ ಬಂಡಾಯ 8888 ರಿಂದ 2021

- Advertisement -
- Advertisement -

2021, ಫೆಬ್ರವರಿ ಒಂದರಂದು, ಮಯನ್ಮಾರ್‌ನ ಮಿಲಿಟರಿ, (ಟಾಟ್ಮಾಡಾವ್) ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಮಿಲಿಟರಿ ದಂಗೆಯಲ್ಲಿ ಪದಚ್ಯುತಗೊಳಿಸಿತು. ಮಿಲಿಟರಿ ಅಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. 2020ರ ಚುನಾವಣೆಯಲ್ಲಿ ಪ್ರಚಾರ ಮಾರ್ಗಸೂಚಿಗಳನ್ನು ಹಾಗೂ ಕೋವಿಡ್-19 ನಿರ್ಬಂಧನೆಗಳನ್ನು ಉಲ್ಲಂಘಿಸಿದ್ದಾರೆಂದು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ನಾಯಕರ ಮೇಲೆ ಅಲ್ಲಿನ ಮಿಲಿಟರಿ ದೋಷಾರೋಪ ಮಾಡುತ್ತಾ ಬಂದಿದೆ. 2020ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಸಂಸತ್ತಿನ 476 ಸ್ಥಾನಗಳಲ್ಲಿ 396 ಸ್ಥಾನಗಳನ್ನು ಗೆದ್ದುಕೊಂಡಿತು. ಚುನಾವಣಾ ಫಲಿತಾಂಶಗಳು ವಂಚನೆ ಮತ್ತು ರಿಗ್ಗಿಂಗ್‌ನ ಫಲ ಎಂದು ಮಿಲಿಟರಿ ನಾಯಕರು ಪ್ರತಿಪಾದಿಸುತ್ತ ಬಂದಿದ್ದಾರೆ.

ಮಿಲಿಟರಿ ದಂಗೆಯ ನಂತರ ಪ್ರತಿಭಟನೆಗಳು ಪ್ರಾರಂಭವಾದವು. ಫೆಬ್ರವರಿ 2ರಂದು ಕೆಲವೇ ಜನರೊಂದಿಗೆ ಶುರುವಾದ ಪ್ರತಿಭಟನೆ, ಫೆಬ್ರವರಿ 7ರ ಹೊತ್ತಿಗೆ ಲಕ್ಷಗಳ ಸಂಖ್ಯೆಯಲ್ಲಿ ಜನರು ಪ್ರತಿಭಟಿಸುತ್ತಿದ್ದರು. ಈ ಪ್ರತಿಭಟನೆಗಳಿಗೆ ಯಾವ ನಾಯಕರೂ ಇರಲಿಲ್ಲ. ಮಿಲಿಟರಿ ಆಡಳಿತವನ್ನು ಕೊನೆಗೊಳಿಸಬೇಕು ಮತ್ತು ನಾಗರಿಕ ಆಡಳಿತವನ್ನು ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತ ಬಂದಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಮಿಲಿಟರಿ ಜಲ-ಫಿರಂಗಿಗಳನ್ನು, ಬಳಸಿದೆ. ಫೆಬ್ರವರಿ 8 ರಿಂದ ಮಿಲಿಟರಿ ಅಲ್ಲಿ ತನ್ನ ’ಸೇನಾಡಳಿತ’ವನ್ನು ಸ್ಥಾಪಿಸಿದೆ.

PC : BBC

ಪ್ರತಿಭಟನೆಗಳು ದೇಶಾದ್ಯಂತ ಹರಡಿವೆ. ನೂರಾರು ಪ್ರತಿಭಟನಾಕಾರರನ್ನು ಹತ್ಯೆ ಮಾಡಲಾಗಿದೆ ಮತ್ತು ಸಾವಿರಾರು ಜನರನ್ನು ಬಂಧಿಸಲಾಗಿದೆ. ಎನ್‌ಎಲ್‌ಡಿಯ ನಾಯಕರನ್ನು ಜೈಲಿಗೆ ಹಾಕಲಾಗಿದೆ. ದೇಶಾದ್ಯಂತ ಅನೇಕ ಉಗ್ರಗಾಮಿ ಗುಂಪುಗಳು ಸರ್ಕಾರದ ವಿರುದ್ಧ ಬಹಿರಂಗ ಘೋಷಣೆಗಳನ್ನು ಮಾಡುತ್ತಿವೆ. ಮಯನ್ಮಾರ್ ನಾಗರಿಕ ಅಂತರ್ಯುದ್ಧದ ಅಂಚಿನಲ್ಲಿರಬಹುದು. ಇದರೊಂದಿಗೆ ಭಾರತದ ಗಡಿಯಲ್ಲಿ ನಿರಾಶ್ರಿತರ ಬಿಕ್ಕಟ್ಟು ಉಂಟಾಗಬಹುದು. ಈ ಪರಿಸ್ಥಿತಿಯಿಂದ ಮುಂದೆ ಒದಗಬಹುದಾದ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಒಂದು ಪ್ರಬುದ್ಧ ನೀತಿಯನ್ನು ಭಾರತ ನಿರ್ಧರಿಸಬೇಕಾದ ಸಮಯ ಇದು.

ಹಿನ್ನೆಲೆ

ಸ್ವಾತಂತ್ರ್ಯ ಬಂದಾಗಿನಿಂದ ಮಯನ್ಮಾರ್ ಹೆಚ್ಚಾಗಿ ಮಿಲಿಟರಿ ಆಡಳಿತದಲ್ಲಿದೆ. 1985ರಲ್ಲಿ ಮತ್ತು 1987 ರಲ್ಲಿ ಸರ್ಕಾರವು ಡಿಮಾನೆಟೈಸೇಶನ್ ನೀತಿಯನ್ನು ಜಾರಿಗೆ ತಂದಿತು ಮತ್ತು ಸುಮಾರು ಶೇ 75ರಷ್ಟು ರಾಷ್ಟ್ರೀಯ ಕರೆನ್ಸಿಯನ್ನು ಇಲ್ಲವಾಗಿಸಿತು. ಪರಿಣಾಮವಾಗಿ, ಅನೇಕ ಜನರು ತಮ್ಮ ಉಳಿತಾಯವನ್ನು ಕಳೆದುಕೊಂಡರು. 1985ರ ಡಿಮಾನೆಟೈಸೇಶನ್ (ನೋಟು ಅಮಾನ್ಯೀಕರಣ) ಕೆಲವು ಸಣ್ಣ ಆಂದೋಲನಗಳಿಗೆ ಕಾರಣವಾಯಿತು. ಭೂಗತ ಪ್ರಭುತ್ವ ವಿರೋಧಿ ಪ್ರತಿರೋಧವು ರೂಪುಗೊಳ್ಳಲು ಪ್ರಾರಂಭಿಸಿತು. 1987ರ ಡಿಮಾನೆಟೈಸೇಶನ್ ಪ್ರತಿರೋಧದ ಎರಡನೇ ಅಲೆಗೆ ಕಾರಣವಾಯಿತು. ಇದು 8 ಆಗಸ್ಟ್ 1988 ರ ದಂಗೆಗೆ (8888 ದಂಗೆ ಎಂದೇ ಪ್ರಚಲಿತ) ಇದು ಕಾರಣವಾಯಿತು. ಶಿಕ್ಷಣಕ್ಕೆ ಬೇಕಾದ ಉಳಿತಾಯವನ್ನು ಕಳೆದುಕೊಂಡ ವಿದ್ಯಾರ್ಥಿಗಳು ಗಲಭೆಗಳನ್ನು ಮುನ್ನಡೆಸಿದರು. ಕೊನೆಗೆ, ಸಮಾಜದ ಇತರ ವರ್ಗಗಳು ಸೇರಿಕೊಂಡವು. ಪ್ರತಿಭಟನೆಗಳು ದೇಶಾದ್ಯಂತ ಹರಡಿದವು. ಆರಂಭದಲ್ಲಿ, ಮಿಲಿಟರಿ ’ಸೇನಾ ಕಾನೂನು’ ಘೋಷಿಸುವ ಮೂಲಕ ಪ್ರತಿಕ್ರಿಯಿಸಿತು. ಅಂತಿಮವಾಗಿ, ಅವರು ಚುನಾವಣೆ ನಡೆಸಲು ಒಪ್ಪುವ ಮೂಲಕ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

8888 ದಂಗೆಯ ನಂತರ ಎನ್‌ಎಲ್‌ಡಿ ರಚನೆಯಾಯಿತು. ಪ್ರಸಿದ್ಧ ರಾಷ್ಟ್ರೀಯವಾದಿ ಆಂಗ್ ಸಾನ್ ಅವರ ಪುತ್ರಿ ಆಂಗ್ ಸಾನ್ ಸೂಕಿ ಮಿಲಿಟರಿ ಆಡಳಿತದ ಪ್ರತಿರೋಧದ ಮುಖವಾಗಿ ಮುನ್ನಲೆಗೆ ಬಂದರು. ಅವರು ಎನ್‌ಎಲ್‌ಡಿಯನ್ನು ಮುನ್ನಡೆಸಿದರು. 1990 ರಲ್ಲಿ ಚುನಾವಣೆಗಳು ನಡೆದವು. ಸಂಸತ್ತಿನ 492 ಸ್ಥಾನಗಳಲ್ಲಿ ಎನ್‌ಎಲ್‌ಡಿ 392 ಸ್ಥಾನಗಳನ್ನು ಗಳಿಸಿ ಶೇ.59 ಜನಪ್ರಿಯ ಮತಗಳನ್ನು ಗಳಿಸಿತು. ಮಿಲಿಟರಿ ಚುನಾವಣೆಗಳನ್ನು ನ್ಯಾಯಸಮ್ಮತವಲ್ಲವೆಂದು ಘೋಷಿಸಿತು ಮತ್ತು ಮಯನ್ಮಾರ್ ಆಡಳಿತವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿತು.

1990ರ ದಶಕದಲ್ಲಿ ಆಂದೋಲನಗಳು ಮುಂದುವರೆದವು. ಎನ್‌ಎಲ್‌ಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿತು. ಅಮೆರಿಕ, ಬ್ರಿಟನ್, ಜಪಾನ್ ಮತ್ತು ಅನೇಕ ಯುರೋಪಿಯನ್ ದೇಶಗಳಿಂದ ಬೆಂಬಲವನ್ನು ಪಡೆದುಕೊಂಡಿತು, ಇದು ಮಯನ್ಮಾರ್ ವಿರುದ್ಧ ನಿರ್ಬಂಧಗಳಿಗೆ ಕಾರಣವಾಯಿತು. ಮಯನ್ಮಾರ್‌ನ ಆರ್ಥಿಕತೆ ಸಂಕಷ್ಟಕ್ಕೆ ಈಡಾಗಿತು. ವಿವಿಧ ಪ್ರದೇಶಗಳ ಉಗ್ರ ಜನಾಂಗೀಯ ಆಧಾರಿತ ಗುಂಪುಗಳು ಸ್ವಾತಂತ್ರ್ಯಕ್ಕಾಗಿ ಯುದ್ಧಗಳನ್ನು ಘೋಷಿಸಲು ಪ್ರಾರಂಭಿಸಿದವು.

2003ರಲ್ಲಿ, ಸರ್ಕಾರವು ಪ್ರಜಾಪ್ರಭುತ್ವ ಸ್ಥಾಪನೆಗೆ ಏಳು ಹಂತಗಳನ್ನು ಪ್ರಸ್ತಾಪಿಸಿತು. ಅಲ್ಲಿ ಅವರು ಸಂವಿಧಾನವನ್ನು ಸ್ಥಾಪಿಸಲು ಮತ್ತು ನಾಗರಿಕ ಆಡಳಿತಕ್ಕೆ ಹೋಗಲು ಒಪ್ಪಿದರು. ಅವರ ಪ್ರಸ್ತಾಪವನ್ನು ದೇಶದ ಪ್ರಮುಖ ಬಂಡುಕೋರ ಗುಂಪುಗಳು ಒಪ್ಪಿಕೊಂಡವು ಮತ್ತು ಪ್ರತಿ ಪ್ರದೇಶದಲ್ಲೂ ಪ್ರಾದೇಶಿಕ ಸಂವಿಧಾನಗಳನ್ನು ರೂಪಿಸಲು ಅವಕಾಶ ನೀಡುವ ಷರತ್ತಿನ ಮೇಲೆ ಅವರು ಕದನ ವಿರಾಮಕ್ಕೆ ಒಪ್ಪಿದರು,

2008ರಲ್ಲಿ ರಾಜ್ಯವು ಪ್ರಸ್ತಾವಿತ ಸಂವಿಧಾನದೊಂದಿಗೆ ಜನಾಭಿಪ್ರಾಯವನ್ನು ಪ್ರಸ್ತಾಪಿಸಿತು. ಹೊಸ ಸಂವಿಧಾನವು ಸಂಸತ್ತಿನ ಶೇ.25 ಸ್ಥಾನಗಳನ್ನು ನಿಯಂತ್ರಿಸುವ ಮೂಲಕ ಮಿಲಿಟರಿಗೆ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಉಪಾಧ್ಯಕ್ಷರಲ್ಲಿ ಒಬ್ಬರನ್ನು ನೇಮಿಸುತ್ತದೆ. ಜನಾಭಿಪ್ರಾಯ ಸಂಗ್ರಹಣೆ ನಡೆಯುವ ಎರಡು ತಿಂಗಳ ಮೊದಲು ಸಂವಿಧಾನವನ್ನು ಬಿಡುಗಡೆ ಮಾಡಲಾಯಿತು. ಈ ಅವಧಿಯಲ್ಲಿ ಪ್ರಮುಖ ಚಂಡಮಾರುತವಾದ ನಾರ್ಗಿಸ್ ಬಂದೆರಗಿತು. ಸಂವಿಧಾನವು ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಿದೆ, ಸಾರ್ವಜನಿಕ ಚರ್ಚೆಗೆ ಸ್ವಲ್ಪ ಸಮಯವನ್ನು ನೀಡಿದೆ ಮತ್ತು ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಸಂಭವಿಸಿದೆ ಎಂದು ಜನಾಭಿಪ್ರಾಯ ಸಂಗ್ರಹಣೆಗೆ ಎನ್‌ಎಲ್‌ಡಿ ಆಕ್ಷೇಪ ವ್ಯಕ್ತಪಡಿಸಿತು.

ಕೊನೆಗೂ ಸಂವಿಧಾನವನ್ನು ಅಂಗೀಕರಿಸಲಾಯಿತು, ಮತ್ತು 2010 ರಲ್ಲಿ ಚುನಾವಣೆಗಳು ನಡೆದವು. ಎನ್‌ಎಲ್‌ಡಿ ಚುನಾವಣೆಯಲ್ಲಿ ಭಾಗವಹಿಸಲು ನಿರಾಕರಿಸಿತು. ಮಿಲಿಟರಿಯೊಂದಿಗೆ ಬಲವಾದ ಸಂಪರ್ಕ ಹೊಂದಿರುವ ಪಕ್ಷವಾದ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್ಮೆಂಟ್ ಪಾರ್ಟಿ (ಯುಎಸ್‌ಡಿಪಿ) ಚುನಾವಣೆಯಲ್ಲಿ ಜಯ ಗಳಿಸಿತು. 2015ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಸ್ಪರ್ಧಿಸಿ ಜಯ ಗಳಿಸಿತು.

2020ರ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನಡೆಯಿತು. ಯುಎಸ್‌ಡಿಪಿ ವಿರುದ್ಧ ಎನ್‌ಎಲ್‌ಡಿ ಹೋರಾಟ ಎಂಬಂತೆ ಈ ಚುನಾವಣೆ ನಡೆಯಿತು. 2020 ರಲ್ಲಿನ ಸೋಲು ಮಿಲಿಟರಿ ಪ್ರಭಾವಕ್ಕೆ ಹೆಚ್ಚು ಸವಾಲು ಒಡ್ಡುವುದಕ್ಕೆ ಸಂಕೇತವಾಗಿತ್ತು. ಇದರ ಪರಿಣಾಮವಾಗಿ, ಮಿಲಿಟರಿ ದಂಗೆಯ ಮೂಲಕ ಅದು ಈಗ ಪ್ರತಿಕ್ರಿಯೆ ನೀಡಿದೆ.

PC : Digis Mak

ಮಯನ್ಮಾರ್ ಕೇಂದ್ರ ಸರ್ಕಾರದ ಬಗ್ಗೆ ಭಾರತ ಯಾವಾಗಲೂ ಹಸ್ತಕ್ಷೇಪ ಮಾಡದ ನೀತಿಯನ್ನು ಹೊಂದಿದೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಸ್ವ-ನಿರ್ಣಯವು ಪ್ರಮುಖ ತತ್ವಗಳು ಎಂದು ಸತತವಾಗಿ ವಾದಿಸುತ್ತಿರುವುದರಿಂದ ಇದು ಬಹುತೇಕ ವಿಷಯಗಳಲ್ಲಿ ಭಾರತದ ವಿದೇಶಾಂಗ ನೀತಿಗೆ ಅನುಗುಣವಾಗಿದೆ. ಮಯನ್ಮಾರ್‌ನೊಂದಿಗಿನ ಪರಿಸ್ಥಿತಿ ಹೆಚ್ಚು ತಂತ್ರಗಾರಿಕೆಯದ್ದಾಗಿದೆ. 8888ರ ದಂಗೆಯಂತೆ, ಮಯನ್ಮಾರ್‌ನಲ್ಲಿನ ಸಂಘರ್ಷವು ಭಾರತಕ್ಕೆ ನಿರಾಶ್ರಿತರ ಒಳಹರಿವಿಗೆ ಕಾರಣವಾಗಬಹುದು. ಭಾರತ ಅದಕ್ಕೆ ಸಿದ್ಧವಾದಂತೆ ಕಾಣುತ್ತಿಲ್ಲ.

ನೆರೆಯ ರಾಷ್ಟ್ರವಾಗಿ, ಎರಡೂ ಕಡೆಗಳಲ್ಲಿ ಅನೇಕ ಪ್ರತ್ಯೇಕತಾವಾದಿ ಚಳವಳಿಗಳು ಸಂಭವಿಸುತ್ತಿರುವ ಸಂದರ್ಭದಲ್ಲಿ ಭಾರತವು ಮಯನ್ಮಾರ್ ಬಗ್ಗೆ ಖಚಿತ ನಿಲುವು ತೆಗೆದುಕೊಳ್ಳುವುದನ್ನು ತಪ್ಪಿಸಿಕೊಂಡಿದೆ ಧ್ರುವೀಕರಿಸುವ ಕಾಲದಲ್ಲಿ, ಮಯನ್ಮಾರ್ ದೇಶದೊಳಗಿನ ಬಣಗಳು ಚೀನಾದ ಕಡೆಗೆ ಬಾಗುವ ಬಗ್ಗೆ ಭಾರತ ಸರ್ಕಾರ ಕಳವಳದಿಂದಿದ್ದು, ಅದರಿಂದ ತಟಸ್ಥ ನಿಲುವನ್ನು ಇಟ್ಟುಕೊಂಡಿದೆ. ಮಯನ್ಮಾರ್‌ನಲ್ಲಿ ತೈಲ ಮತ್ತು ಅನಿಲದ ದೊಡ್ಡ ಸಂಗ್ರಹವಿದೆ ಮತ್ತು ಭಾರತ ಈ ವ್ಯಾಪಾರಕ್ಕೆ ಕಾಯುತ್ತಿದೆ.

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಈಶ್ವರಪ್ಪನವರು ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...