Homeಕರ್ನಾಟಕಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

ಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

- Advertisement -
- Advertisement -

ಉತ್ತರ ಕನ್ನಡದ ಕಾಂಗ್ರೆಸ್ ಪೊರೆ ಕಳಚಿಕೊಳ್ಳುತ್ತಿದೆ! ಮದವೇರಿದ ಮದ್ದಾನೆಗಳಂತಾಗಿ ದಶಕಗಟ್ಟಲೆ ಕಾಲ ಗುದ್ದಾಡಿ ಜಿಲ್ಲಾ ಕಾಂಗ್ರೆಸನ್ನು ನಜ್ಜುಗುಜ್ಜುಮಾಡಿದ್ದ ಮ್ಯಾಗಿಯಜ್ಜಿ ಮತ್ತು ದೇಶಜ್ಜ ರಾಜಿ ಸಂಕೇತ ಬಿತ್ತರಿಸುತ್ತಿದ್ದಾರೆ. ಪರಸ್ಪರ ಅಸ್ತಿತ್ವ ಉಳಿಸಿಕೊಳ್ಳಲು ಈ ಮುದಿಮಣಿಗಳು ಹೊಂದಾಣಿಕೆಯ ಅನಿವಾರ್ಯಕ್ಕೆ ಬಿದ್ದಿವೆ. ಬದ್ಧವೈರಿಗಳ ಈ ಮನಃಪರಿವರ್ತನೆ ಯಲ್ಲಾಪುರ ಬೈ-ಇಲೆಕ್ಷನ್ ಸೋಲಿನ ನೇರ ಪರಿಣಾಮ ಎಂತಲೇ ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆಗಳು ನಡೆದಿದೆ.

ದೇಶಪಾಂಡೆ ತನ್ನ ಮೂರು ದಶಕದ ರಾಜಕೀಯದಲ್ಲಿ ಜನತಾ ಪರಿವಾರದಲ್ಲಿರಲಿ ಅಥವಾ ಕಾಂಗ್ರೆಸಿನಲ್ಲಿರಲಿ ಯಾರನ್ನೂ ಗೆಲ್ಲಿಸಲು ತ್ರಿಕರ್ಣಪೂರ್ವಕ ಪ್ರಯತ್ನ ಮಾಡಿದ ಕುರುಹುಗಳಿಲ್ಲ. ಹಾಗಂತ ಸೋಲಿಸಲು ಹಲವು ಸಲ ಹಠಹಿಡಿದು ಹಿಕಮತ್ತು ನಡೆಸಿದ ದಾಖಲೆಗಳಿವೆ. ಇಂಥ ಇತಿಹಾಸದ ದೇಶ್ ಕಳೆದ ಯಲ್ಲಾಪುರ ಬೈ-ಇಲೆಕ್ಷನ್‍ನಲ್ಲಿ ತನ್ನ ಚೇಲಾ ಭೀಮಣ್ಣ ನಾಯ್ಕನ ಗೆಲ್ಲಿಸಿ ವೈರಿ ಹೆಬ್ಬಾರ್ ಮೇಲಿನ ಸೇಡು ತೀರಿಸಿಕೊಳ್ಳಲು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಿದ್ದರು. ಆದರೆ ಸ್ವಯಂಕೃತಾಪರಾಧಗಳ ಸರಣಿಯಿಂದ ವರ್ಚಸ್ಸು ಕಳಕೊಂಡಿರುವ ದೇಶ್ ಮುಗ್ಗರಿಸಿ ಮಕಾಡೆ ಮಲಗಿಬಿಟ್ಟರು! ಕಂಗಾಲಾಗಿ ದೇಶಪಾಂಡೆ ಕೂತಿದ್ದ ಈ ಹೊತ್ತಿನಲ್ಲೇ ಬರೋಬ್ಬರಿ ಒಂದು ವರ್ಷದನಂತರ ಜಿಲ್ಲೆಗೆ ವಕ್ಕರಿಸಿದ ಇಲ್ಲಿಯ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಆಟ ಶುರುಹಚ್ಚಿಕೊಂಡಿದ್ದರು. ನೇರ ಮ್ಯಾಗಿಯ ಶಿರಸಿಯ ಮನೆಗೇ ಹೋದ ದೇಶ್ ಆಕೆಯ ಮುಂದೆ ನಿಂತು ಹೊಸ ನಂಟಿನ ಪ್ರಸ್ತಾಪ ಇಟ್ಟಿರುವುದು ಅನಿರೀಕ್ಷಿತ ಸಮೀಕರಣವನ್ನು ಜಿಲ್ಲಾ ರಾಜಕೀಯ ಭೂಮಿಕೆಯಲ್ಲಿ ಸೃಷ್ಟಿಸಿಬಿಟ್ಟಿದೆ.

ಮ್ಯಾಗಿ ಮತ್ತಾಕೆಯ ಮಗ ಆಳ್ವ ಫೌಂಡೇಶನ್ ಕಟ್ಟಿಕೊಂಡಿದ್ದರೆ, ದೇಶ್ ಮತ್ತವರ ಪುತ್ರ ಪ್ರಶಾಂತ ದೇಶಪಾಂಡೆ ಟ್ರಸ್ಟ್ ಸ್ಥಾಪಿಸಿಕೊಂಡಿದ್ದಾರೆ. ಎರಡೂ ಕುಟುಂಬಗಳು ಸಾಮಾಜಿಕ ಸೇವೆಯ ಹೆಸರಲ್ಲಿ ರಾಜಕೀಯ ಫಾಯ್ದೆಗೆ ಹವಣಿಸುತ್ತಿವೆ. ಮ್ಯಾಗಿಗೆ ತನ್ನ ಪೆದ್ದು ಕುಲೋದ್ಧಾರಕನನ್ನು ಶಿರಸಿಯ ಶಾಸಕನ ಮಾಡುವ ಕನಸು; ದೇಶ್‍ಗೆ ಮುಂಬೈನಲ್ಲಿ ವಕೀಲಿಕೆ ಮಾಡುವ ಅನಿವಾಸಿ ಉತ್ತರ ಕನ್ನಡಿಗ ಮಗ ಮಹಾರಾಯನ ಸಂಸದನ ಮಾಡುವ ಆಸೆ. ಇದೇ ಒಳಉದ್ದೇಶದಿಂದ ಮ್ಯಾಗಿ ಫೌಂಡೇಷನ್ ಕಾರ್ಯಕ್ರಮ ಹಾಕಿಕೊಂಡು ಈಗ ಜಿಲ್ಲೆಯಲ್ಲಿ ಅಂಡಲೆಯುತ್ತಿದ್ದಾರೆ. ಆಕೆ ಫಂಕ್ಷನ್ ಮುಗಿಸಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ದೇಶಪಾಂಡೆ ಮೊನ್ನೆ ಶನಿವಾರ ಭೇಟಿಯಾಗಿ ಗ್ಯಾಂಗ್‍ವಾರ್ ನಿಲ್ಲಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಎಬ್ಬಿಸಿರುವ ಬಡಿವಾರಕ್ಕೆ ಬೆದರಿರುವ ಮ್ಯಾಗಿ-ದೇಶ್ ನೈಚ್ಛಾನುಸಂಧಾನ ನಡೆಸಬೇಕಾಗಿ ಬಂದಿವೆ, ಪಾಪ!!

ಮ್ಯಾಗಿ-ದೇಶ್ ಅಕ್ಕ-ಪಕ್ಕ ಕುಳಿತು ಕಳೆದ ಅಸೆಂಬ್ಲಿ ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಬಣ ಬಡಿದಾಟದಿಂದಾದ ಹಾನಿಯ ಲೆಕ್ಕ ತೆಗೆದಿದ್ದಾರೆ. ತಮ್ಮೊಳಗಿನ ದ್ವೇಷಾಸೂಯೆ ಮೇಲಾಟದಿಂದ ಗತಿಗೇಡಿ ಬಿಜೆಪಿ ಸೈತಾನನಂತೆ ಬೆಳೆದಿದೆ ಎಂದು ಪಾಪಪ್ರಜ್ಞೆಯಿಂದ ಮಾತಾಡಿಕೊಂಡಿದ್ದಾರೆ; ಈಗಿಂದಲೇ ತಳಮಟ್ಟದಿಂದ ಪಾರ್ಟಿಯನ್ನು ಕಟ್ಟದಿದ್ದರೆ ತಮ್ಮ ವಂಶದ ಉತ್ತರಾಧಿಕಾರಿಗಳಿಗೆ ಭವಿಷ್ಯವಿಲ್ಲ ಎಂಬುದು ಮನಗಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉದ್ಧಾರವಾಗಬೇಕಿದ್ದರೆ ಮೊದಲು ಹಾಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕನ ಉಚ್ಚಾಟಿಸಿ ಹೊಸ ಆಯ್ಕೆ ಮಾಡಬೇಕು; ಆನಂತರ ತಾವಿಬ್ಬರೂ ಒಟ್ಟಾಗಿ ಜಿಲ್ಲಾ ಟೂರ್ ಹೊಡೆದು ಪಕ್ಷಕ್ಕೆ ಜೀವ ತುಂಬಬೇಕೆಂದು ಮ್ಯಾಗಿ ಮನದಿಂಗಿತವನ್ನು ದೇಶ್ ಮುಂದೆ ಮಂಡಿಸಿದ್ದಾರೆ. ಇದನ್ನು ದೇಶಪಾಂಡೆಯೂ ಒಪ್ಪಿದ್ದಾರೆ.

ಬದಲಾದ ವರಸೆಯಲ್ಲಿ ಮ್ಯಾಗಿಗೆ ದೇಶಪಾಂಡೆಗಿಂತಲೂ ಹೆಚ್ಚು ಸಿಟ್ಟಿರುವುದು ಭೀಮಣ್ಣನ ಮೇಲೆ. ತನ್ನನ್ನು ಕೊನೆತನಕವೂ ಕಾಡಿದ ಮಾಜಿ ಸಿಎಂ ‘ಬಂ’ನ ಭಾಮೈದ ಈ ಭೀಮಣ್ಣನೆಂಬುದು ಮ್ಯಾಗಿಯ ಹಲವು ಅಸಮಾಧಾನದ ಕಾರಣಗಳಲ್ಲಿ ಒಂದು. ಈ ಭೀಮಣ್ಣ ನಾಯ್ಕನೂ ಅಷ್ಟೇ ಕಿತಾಪತಿಗಾರ. ಮ್ಯಾಗಿಗೆ ಆತ ಕೇರ್ ಮಾಡುತ್ತಿರಲಿಲ್ಲ. ಆಕೆಯ ನಿಷ್ಠಾವಂತ ಹಿಂಬಾಲಕರಾದ ವಿ.ಎನ್.ನಾಯ್ಕ್, ವಸಂತನಾಯ್ಕ್ ವಗೈರೆ ದೀವರ ಹುಡುಗರನ್ನು ಭೀಮಣ್ಣ ಹಣಿಯುತ್ತಲೇ ಬಂದಿದ್ದ. 2013ರ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ಎದುರು ಮೂರು ಸಾವಿರ ಚಿಲ್ಲರೆ ಮತದ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ದಿವಂಗತ ದೀಪಕ್ ಹೊನ್ನಾವರ್ ಮ್ಯಾಗಿಯ ಪುಂಡ ಪಟ್ಟ ಶಿಷ್ಯನಾಗಿದ್ದ. ಆತ ಗೆಲುವಿನ ಹತ್ತಿರ ಬಂದು ಮುಗ್ಗರಿಸಲು ಭೀಮಣ್ಣ-ರವೀಂದ್ರನಾಥ್ ನಾಯ್ಕ ಜೋಡಿಯ ದ್ರೋಹವೇ ಅಂದು ಕಾರಣವಾಗಿತ್ತು. ಈ ಉರಿ ಮ್ಯಾಗಿಗಿನ್ನೂ ಕಡಿಮೆಯಾಗಿಲ್ಲ. ಒಂದು ಕಾಲದಲ್ಲಿ ರವಿ ಮ್ಯಾಗಿ ಶಿಷ್ಯನಾಗಿದ್ದವ. ಆಕೆಯಿಂದಲೇ ಶಿರಸಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದವ. ಆನಂತರ ಗುರುಮಾತೆಗೇ ತಿರುಗಿಬಿದ್ದಿದ್ದ ರವಿ ಜೆಡಿಎಸ್ ಪಾಲಾಗಿದ್ದ. ಮೊನ್ನೆಯ ಯಲ್ಲಾಪುರ ಉಪಚುನಾವಣೆ ಗಡಿಬಿಡಿಯಲ್ಲಿ ಈ ರವಿ, ದೇಶಪಾಂಡೆ ಜುಬ್ಬ ಹಿಡಿದುಕೊಂಡು ಕಾಂಗ್ರೆಸ್‍ಗೆ ನುಸುಳಿದ್ದಾನೆ.

ಇಂಥ ಭೀಮ-ರವಿಯಂಥವರ ದೂರವಿಟ್ಟರೆ ಮ್ಯಾಗಿ-ದೇಶ್‍ನಂಟು ಕುದುರುತ್ತದೆ. 2018ರ ಶಿರಸಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮತ್ತು ಮೊನ್ನೆಯ ಯಲ್ಲಾಪುರ ಉಪಚುನಾವಣೆಯಲ್ಲಿ ಹೇತ್ಲಾಂಡಿ ಭೀಮಣ್ಣನ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದೇ ತಪ್ಪು ಆಯ್ಕೆ ಎನ್ನುವ ಮ್ಯಾಗಿ ತನ್ನ ಮಗ ಶಿರಸಿಯಲ್ಲಿ “ರೈಟ್ ಕ್ಯಾಂಡಿಡೇಟ್” ಎನ್ನುವುದೇ ವಿಚಿತ್ರ. ಬಿಜೆಪಿ ಬೆಂಬಲಿಗರಾದ ಹವ್ಯಕ ಬ್ರಾಹ್ಮಣ ಬಾಹುಳ್ಯದ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ನಿವೇದಿತ್ ಆಳ್ವ ಗೆಲ್ಲುವುದು ಅಷ್ಟು ಸುಲಭವೇನಲ್ಲ. ಅಲ್ಪಸಂಖ್ಯಾತರ ದ್ವೇಷದ ಮೇಲೆಯೇ ಬಿಜೆಪಿಯನ್ನು ಕಟ್ಟಿರುವ ಕಾಗೇರಿ, ಅನಂತ್ಮಾಣಿಗಳ ತವರು ಶಿರಸಿಯಲ್ಲಿ ಕಾಂಗ್ರೆಸ್ ಹವ್ಯಕ ಮಾಣಿ/ಕೂಸು ನಿಲ್ಲಿಸಿದರಷ್ಟೇ ಅನುಕೂಲ. ಸದ್ಯ ಜೆಡಿಎಸ್‍ನಲ್ಲಿರುವ ದಿವಂಗತ ಮಾಜಿ ಸಿಎಂ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿ. ಕಾಂಗ್ರೆಸ್ ಸೇರುವ ಆಸೆ ಶಶಿಗಿದ್ದರೂ ಹೆಗಡೆಜೀಯ ದೊಡ್ಮನೆ ಫ್ಯಾಮಿಲಿ ಬಗ್ಗೆ ದೇಶಪಾಂಡೆಗಿರುವ ಪುರಾತನ ದ್ವೇಷಕ್ಕೆ ಹೆದರಿ ಆತ ಸುಮ್ಮನಿದ್ದಾರೆ.

ಗೆಲ್ಲಲು ಇರುವ ಇಂಥ ಸರಳ ಲೆಕ್ಕಾಚಾರಗಳು ಪುತ್ರ ವ್ಯಾಮೋಹದಲ್ಲಿ ಮಂಕಾಗಿರುವ ಮ್ಯಾಗಜ್ಜೀ-ದೇಶಜ್ಜನಿಗೆ ಅರ್ಥವಾಗೋದಿಲ್ಲ. ಔಟ್‍ಡೇಟೆಡ್ ದಿಗ್ಗಜರು ಹಳೆಯದನ್ನು ಮರೆತು ಒಂದಾಗಿ ಪಾರ್ಟಿ ಕಟ್ಟಬಹುದೆಂಬ ನಂಬಿಕೆ ನಿಷ್ಠಾವಂತ ಕಾಂಗ್ರೆಸಿಗರಿಗಂತೂ ಇಲ್ಲಾ. ಆದರೆ ಮಕ್ಕಳ ಭವಿಷ್ಯ ಬೆಳಗಲು ಅನಿವಾರ್ಯವಾಗಿ ಮ್ಯಾಗಿ-ದೇಶ್ ಹೊಸ ಹೊಂದಾಣಿಕೆಯ ಸ್ಕೆಚ್ ಹಾಕಿದ್ದಾರೆಂಬುದು ಕಾಂಗ್ರೆಸ್‍ನಲ್ಲಷ್ಟೇ ಅಲ್ಲ ವಿರೋಧಿ ಕೇಸರಿ ಪಾಳೆಯದಲ್ಲೂ ಸಣ್ಣದೊಂದು ತಲ್ಲಣ ಎಬ್ಬಿಸಿರುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...