Homeಮುಖಪುಟಉತ್ತರಕಾಶಿ: 'ಪತ್ರಕರ್ತ', ಹಿಂದುತ್ವ ಸಂಘಟನೆಗಳು ಅಪಹರಣ ಪ್ರಕರಣವನ್ನು 'ಲವ್ ಜಿಹಾದ್'ಗೆ ತಿರುಗಿಸಿದ್ದು ಹೇಗೆ?

ಉತ್ತರಕಾಶಿ: ‘ಪತ್ರಕರ್ತ’, ಹಿಂದುತ್ವ ಸಂಘಟನೆಗಳು ಅಪಹರಣ ಪ್ರಕರಣವನ್ನು ‘ಲವ್ ಜಿಹಾದ್’ಗೆ ತಿರುಗಿಸಿದ್ದು ಹೇಗೆ?

- Advertisement -
- Advertisement -

ಕಳೆದ ತಿಂಗಳು 14 ವರ್ಷದ ಹಿಂದೂ ಬಾಲಕಿಯನ್ನು ಇಬ್ಬರು ವ್ಯಕ್ತಿಗಳು ಅಪಹರಿಸಲು ಪ್ರಯತ್ನಿಸಿದರು ಎಂಬ ಆರೋಪದಿಂದ ಉತ್ತರಕಾಶಿಯ ಪುರೋಲಾ ಪಟ್ಟಣದಲ್ಲಿ ಕೋಮು ಉದ್ವಿಗ್ನತೆಗಳು ಉದ್ಭವಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 26ರಂದು ಜಿತೇಂದ್ರ ಸೈನಿ ಮತ್ತು ಉಬೇದ್ ಖಾನ್ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಆ ನಂತರ, ಸ್ಥಳೀಯ ಹಿಂದುತ್ವ ಗುಂಪುಗಳು ಇದು “ಲವ್ ಜಿಹಾದ್” ಪ್ರಕರಣ ಎಂದು ಆರೋಪಿಸಿದರು.

ಹಿಂದುತ್ವ ಗುಂಪುಗಳು ರ್ಯಾಲಿಯನ್ನು ಮುನ್ನಡೆಸಿ, ಅಂಗಡಿಗಳನ್ನು ಧ್ವಂಸ ಮಾಡಿದರು ಮತ್ತು ಮುಸ್ಲಿಂ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಲಾಯಿತು. ಆನಂತರ ಕನಿಷ್ಠ 41 ಮುಸ್ಲಿಂ ಕುಟುಂಬಗಳು ಪಟ್ಟಣವನ್ನು ತೊರೆದಿದ್ದಾರೆ. ಹಿಂದುತ್ವ ಸಂಘಟನೆಗಳು ಉದ್ದೇಶಪೂರ್ವಕವಾಗಿ ಘಟನೆಗೆ “ಕೋಮು ಬಣ್ಣ” ನೀಡಿ “ಲವ್ ಜಿಹಾದ್” ಎಂದು ಹೇಳಿಕೊಂಡಿವೆ ಎಂದು ಅಪ್ರಾಪ್ತ ಬಾಲಕಿಯ ಮಾವ ರಾಕೇಶ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಮೊದಲು “ಲವ್ ಜಿಹಾದ್” ದೃಷ್ಟಿಕೋನ ನೀಡಿದ್ದು “ಸ್ಥಳೀಯ ಪತ್ರಕರ್ತ” ಎಂದು ರಾಕೇಶ್ ದೂಷಿಸಿದ್ದಾರೆ. ”ತನ್ನ ಸೊಸೆ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ “ನಕಲಿ ದೂರು” ದಾಖಲಿಸುವಂತೆ ಈ ಪತ್ರಕರ್ತ ಒತ್ತಾಯಿಸಿದ್ದನು. ಈ ಆರೋಪದ ನಕಲಿ ದೂರಿನಲ್ಲಿ ಖಾನ್ ಮಾತ್ರ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ, ಮತ್ತೋರ್ವ ಆರೋಪಿ ಸೈನಿ ಅಲ್ಲ ಹೆಸರು ಕೈಬಿಡಲಾಗಿದೆ” ಎಂದು ಹೇಳಿದರು.

ಪತ್ರಕರ್ತನು ತನ್ನ ಸುದ್ದಿ ವೆಬ್‌ಸೈಟ್‌ನಲ್ಲಿ “ಲವ್ ಜಿಹಾದ್” ದೃಷ್ಟಿಕೋನವನ್ನು ಕೊಟ್ಟು ನಕಲಿ ದೂರನ್ನು “ಸೋರಿಕೆ” ಮಾಡಿದನು. ಆ ಬಳಿಕ ಹಿಂದುತ್ವ ಗುಂಪುಗಳು ಅದನ್ನು ಕೋಮು ಉದ್ವಿಗ್ನತೆಗಳು ಉಂಟುಮಾಡಲು ಬಳಸಿಕೊಂಡರು ಎಂದು ರಾಕೇಶ್ ತಿಳಿಸಿದ್ದಾರೆ.

ಏನಿದು ಪ್ರಕರಣ?

ಅಪಹರಣ ಯತ್ನ: 14 ವರ್ಷದ ಅಪ್ರಾಪ್ತ ಬಾಲಕಿಯ ಪೋಷಕರು ಚಿಕ್ಕವಳಿದ್ದಾಗ ಮೃತಪಟ್ಟಿದ್ದರು. ಅವಳು ಸೋದರಮಾವ ರಾಕೇಶ್ ಕುಟುಂಬದೊಂದಿಗೆ ಪುರೋಲಾದಲ್ಲಿ ವಾಸಿಸುತ್ತಾಳೆ. ರಾಕೇಶ್ ಸರ್ಕಾರಿ ಶಾಲಾ ಶಿಕ್ಷಕ. ಸ್ಥಳೀಯರು ಅವರನ್ನು ಮಾಸ್ಟರ್ಜಿ ಎಂದು ಕರೆಯುತ್ತಾರೆ. ನ್ಯೂಸ್‌ಲಾಂಡ್ರಿ ಅವರ ಮನೆಗೆ ಭೇಟಿ ನೀಡಿದಾಗ, ಅವರು ಆರಂಭದಲ್ಲಿ ಮಾತನಾಡಲು ಹಿಂಜರಿಯುತ್ತಿದ್ದರು – ಅವರು ”ಇಂದು ಪುರೋಲಾದಲ್ಲಿ ನಡೆಯುತ್ತಿರುವ ಕೋಮು ಉದ್ವಿಗ್ನತೆಗಳಿಗೆ ಮಾಧ್ಯಮವೇ ಕಾರಣ” ಎಂದು ಆರೋಪಿಸಿದರು.

”ಪತ್ರಕರ್ತರು ಮತ್ತು ಹಿಂದುತ್ವ ಸಂಘಟನೆಗಳು ನನ್ನ ಜೀವನವನ್ನು ಕಷ್ಟಕರವಾಗಿಸಿದೆ” ಎಂದು ಅವರು ಹೇಳಿದರು. ”ನಾನು ಒಂದು ತಿಂಗಳಿನಿಂದ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಪೊಲೀಸರು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದಾರೆ ಆದರೆ ನನ್ನ ಭುಜದ ಮೇಲೆ ಬಂದೂಕು ಇಟ್ಟುಕೊಂಡು ಹಿಂದೂ-ಮುಸ್ಲಿಂ ಎಂಬ ನಾಟಕವಾಡುತ್ತಿದ್ದಾರೆ” ಎಂದು ರಾಕೇಶ್ ತಮ್ಮ ಅಳಲು ತೋಡಿಕೊಂಡರು.

”ಮೇ 26ರಂದು ಮಧ್ಯಾಹ್ನ 3 ಗಂಟೆಗೆ ತನಗೆ ಫೋನ್ ಕರೆ ಬಂದಿತ್ತು. ನನ್ನ ಸೊಸೆಯನ್ನು ಇಬ್ಬರು ನೌಗಾಂವ್‌ಗೆ ಅಪಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರೋ ಕರೆ ಮಾಡಿದ್ದರು. ಆ ಸಮಯದಲ್ಲಿ ನಾನು ಅಲ್ಲಿ ಇರಲಿಲ್ಲ ಆದ್ದರಿಂದ ನಾನು ತಕ್ಷಣ ನನ್ನ ಸ್ನೇಹಿತ ಅಜಯ್ ಗೆ ಕರೆ ಮಾಡಿ ತ್ವರಿತವಾಗಿ ಸ್ಥಳಕ್ಕೆ ತಲುಪಲು ಹೇಳಿದೆ” ಎಂದು ಘಟನೆಯನ್ನು ವಿವರಿಸಿದರು.

ಇದನ್ನೂ ಓದಿ: ಉತ್ತರಾಖಂಡ: ಮುಸ್ಲಿಂ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಬೇಕು; ಬೆದರಿಕೆಯ ಪೋಸ್ಟರ್‌ ಅಂಟಿಸಿದ ಕಿಡಿಗೇಡಿಗಳು

ರಾಕೇಶ್ ಸ್ಥಳಕ್ಕೆ ಆಗಮಿಸಿದಾಗ ಅಲ್ಲಿ ”ಬಿಜೆಪಿ, ಬಜರಂಗದಳ ಮತ್ತು ವಿಎಚ್‌ಪಿ”ಯ ಕಾರ್ಯಕರ್ತರು ಇದ್ದರು. ಅವರ ಜೊತೆಗೆ ತನ್ನ ಸೊಸೆ ಇದ್ದಳು. ಆಗ ಅವರೆಲ್ಲರೂ ಖಾನ್ ಮತ್ತು ಸೈನಿ ಓಡಿಹೋದರು ಎಂದು ಹೇಳಿದರು.

”ಆರೋಪಿಗಳು ಪುರೋಲಾ ಬಜಾರ್‌ನಲ್ಲಿ ಅಂಗಡಿಕಾರರಾಗಿದ್ದಾರೆ. ನಾವು ನನ್ನ ಸೊಸೆಯೊಂದಿಗೆ ಅಂಗಡಿಗೆ ಹೋಗಿದ್ದೆವು. ನೀವು ಏನು ಮಾಡಿದ್ದೀರಿ, ಅದಕ್ಕೆ ಕ್ಷಮೆಯಾಚಿಸಿ, ಪೊಲೀಸರಿಗೆ ಯಾವುದೇ ದೂರು ನೀಡುವುದಿಲ್ಲ” ಎಂದು ಹೇಳಿದೆ.

”ಉಬೇದ್ ಮತ್ತು ಜಿತೇಂದ್ರ ನನ್ನ ಸೊಸೆಯನ್ನು ಅಪಹರಿಸುವ ಉದ್ದೇಶದಿಂದ ಕರೆದುಕೊಂಡು ಹೋಗುತ್ತಿದ್ದರು. ಆದರೂ, ನಾನು ಅವರನ್ನು ಕ್ಷಮಿಸುತ್ತಿದ್ದೆ ಏಕೆಂದರೆ ನನಗೆ ಉಬೇದ್ ಪರಿಚಿತ ವ್ಯಕ್ತಿಯಾಗಿದ್ದಾರೆ. ಅವರ ಅಂಗಡಿಯಿಂದಲೇ ಸರಕುಗಳನ್ನು ಖರೀದಿಸುತ್ತಿದ್ದೆ” ಎಂದು ಹೇಳಿದರು.

”ನಾನು ಅಷ್ಟೆಲ್ಲಾ ಹೇಳಿದರೂ ಕೂಡ ಆ ಇಬ್ಬರೂ ಕ್ಷಮೆ ಕೇಳಲಿಲ್ಲ ಮತ್ತು ಸೊಕ್ಕುತನ ತೋರಿದರು. ಹೀಗಾಗಿ, ನಾನು ದೂರು ನೀಡಲು ನಿರ್ಧರಿಸಿ ಪುರೋಲಾ ಪೊಲೀಸ್ ಠಾಣೆಗೆ ತೆರಳಿದೆ” ಎಂದರು.

ಪೊಲೀಸ್ ಠಾಣೆಯಲ್ಲಿ, ರಾಕೇಶ್ ಅವರನ್ನು ಸ್ಥಳೀಯ ಪತ್ರಕರ್ತ ಅನಿಲ್ ಅಸ್ವಾಲ್ ಎಂಬವರು ಈ ಘಟನೆಗೆ ‘ಲವ್ ಜಿಹಾದ್’ ಕೋನವನ್ನು ನೀಡಲು ಪ್ರೇರೇಪಿಸಿದರು. ಅಷ್ಟೇ ಅಲ್ಲದೇ ಅನಿಲ್ ಅವರು ನಕಲಿ ದೂರು ಪತ್ರವನ್ನು ನೀಡಿದ್ದರು. ಈ “ನಕಲಿ” ಪತ್ರದಲ್ಲಿ ಖಾನ್ ಹೆಸರು ಮಾತ್ರ ಹೆಸರಿಸಿದೆ, ಸೈನಿ ಹೆಸರಿರಲಿಲ್ಲ. ಅದು “ಅಪಹರಣ” “ವೇಶ್ಯಾವಾಟಿಕೆ” ಮತ್ತು “ಲವ್ ಜಿಹಾದ್” ಎಂದು ಆರೋಪಿಸಲಾಗಿತ್ತು.

ಅನಿಲ್ ಬಿಬಿಸಿ ಖಬರ್ ಎಂಬ ವೆಬ್‌ಸೈಟ್ ಅನ್ನು ನಡೆಸುತ್ತಿದ್ದಾರೆ – ಇದು ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌(ಬಿಬಿಸಿ) ಜೊತೆಗೆ ಯಾವುದೇ ಸಂಬಂಧವಿಲ್. ಅನಿಲ್ ಅವರು ಆರ್‌ಎಸ್ಎಸ್ ಮತ್ತು ಎಬಿವಿಪಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ.

ಅನಿಲ್ ಕೊಟ್ಟ ನಕಲಿ ದೂರಿನಲ್ಲಿ ಏನಿದೆ?

”[ಖಾನ್] ಹಲವು ದಿನಗಳಿಂದ ಅರ್ಜಿದಾರರ (ರಾಕೇಶ್) ಸೊಸೆಯನ್ನು ಹಿಂಬಾಲಿಸುತ್ತಿದ್ದರು. ಎದುರು ಪಕ್ಷದವರು ಅತ್ಯಂತ ಕುತಂತ್ರದ ವ್ಯಕ್ತಿಯಾಗಿದ್ದು, ಅಪ್ರಾಪ್ತ ಬಾಲಕಿಯೊಂದಿಗೆ ಪರಾರಿಯಾಗುವುದು ಮತ್ತು ಅವಳನ್ನು ಮಾಂಸದ ವ್ಯಾಪಾರ(ವೇಶ್ಯಾವಾಟಿಕೆ)ಗೆ ತಳ್ಳುವುದು ಎದುರಿನವರ ಗುರಿಯಾಗಿದೆ. ಎದುರು ಪಕ್ಷದವರು ಎಷ್ಟು ಬುದ್ಧಿವಂತರು ಎಂದರೆ ಪ್ರತಿಪಕ್ಷಗಳು ಸಂತ್ರಸ್ತ ಬಾಲಕಿಯ ಹೆಸರನ್ನು ಅಂಕಿತ್ ಎಂದು ಹೇಳಿಕೊಂಡು ವಂಚಿಸುತ್ತಿವೆ. ಅರ್ಜಿದಾರರ ಸೊಸೆಯನ್ನು ಮನವೊಲಿಸುವ ಮೂಲಕ ದೊಡ್ಡ ಘಟನೆಯನ್ನು ಕಾರ್ಯಗತಗೊಳಿಸುವ ಪ್ರಯತ್ನದಂತೆ ತೋರುತ್ತಿದೆ. ಎದುರು ಪಕ್ಷದವರು, ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಲವ್ ಜಿಹಾದ್ ಮತ್ತು ಆಮಿಷಕ್ಕೆ ಒಳಪಡಿಸುವ ಮೂಲಕ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಳ್ಳುವ ಪಿತೂರಿಯಲ್ಲಿದ್ದರು. ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಮತ್ತು ತಕ್ಷಣ ಅವರನ್ನು ಬಂಧಿಸಲು ಮತ್ತು ಅಗತ್ಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು” ಎಂದು ಹೇಳಿದೆ.

The ‘fake’ complaint on the left and the actual complaint on the right.

ರಾಕೇಶ್ ಅವರು ಈ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರು. ಅಂತಹ ಪ್ರಕರಣ ಇಲ್ಲದಿರುವಾಗ, ಯಾಕೆ ‘ಲವ್ ಜಿಹಾದ್’ ದೃಷ್ಟಿಕೋನಕ್ಕೆ ತಿರುಗಿಸಬೇಕು?… ಇತರ ಆರೋಪಿ ಜಿತೇಂದ್ರ ಸೈನಿ ಹೆಸರನ್ನು ಏಕೆ ಉಲ್ಲೇಖಿಸಲಾಗಿಲ್ಲ?” ಎಂದು ರಾಕೇಶ್ ಪ್ರಶ್ನಿಸಿದ್ದಾರೆ.

ಇನ್ನೂ ಈ ಬಗ್ಗೆ ನ್ಯೂಸ್‌ಲಾಂಡ್ರಿ ಜೊತೆ ಮಾತನಾಡಿರುವ ಪುರೋಲಾದ ಠಾಣೆಯ ಅಧಿಕಾರಿ ಖಾಜನ್ ಸಿಂಗ್ ಚೌಹಾನ್ ಅವರು, ”ಈ ಪತ್ರಕರ್ತ ತನ್ನ ನಕಲಿ ದೂರು ಪತ್ರವನ್ನು ಇಟ್ಟುಕೊಂಡು ರಾಕೇಶ್‌ನನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿರುವುದನ್ನು ನಾನು ನೋಡಿದ್ದೇನೆ. ಈ ಘಟನೆಯು ಲವ್ ಜಿಹಾದ್‌ಗೆ ಸಂಬಂಧಿಸಿಲ್ಲ ಎಂದು ಅವರು ಹೇಳಿದರು.

”ನಕಲಿ ದೂರಿನಲ್ಲಿ, ‘ಲವ್ ಜಿಹಾದ್’ ಎಂದು ಬರೆಯಲಾಗಿದೆ ಮತ್ತು ಉಬೇದ್ ಖಾನ್ ಸಂತ್ರಸ್ತೆಯೊಂದಿಗೆ ಅಂಕಿತ್ ಎಂದು ಮಾತನಾಡುತ್ತಿದ್ದರು ಎಂದು ಅದು ಹೇಳಿದೆ. ಆದರೆ ಇದು ಸುಳ್ಳು” ಎಂದು ಹೇಳಿದರು.

ರಾಕೇಶ್ ನಂತರ ತನ್ನದೇ ಆದ ದೂರಿನ ಪತ್ರವನ್ನು ಬರೆದು ನೀಡಿದರು. ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಸೈನಿ ಮತ್ತು ಖಾನ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪತ್ರಕರ್ತ ಅನಿಲ್ ನಂತರ ಒಂದು ಹೆಜ್ಜೆ ಮುಂದೆ ಹೋಗಿ ಬಿಬಿಸಿ ಖಬರ್‌ ಎನ್ನುವ ತನ್ನ ವೆಬ್ಸೈಟ್‌ನಲ್ಲಿ ಉತ್ತರಕಾಶಿಯಲ್ಲಿ “ಲವ್ ಜಿಹಾದ್” ಎಂದು ಸುದ್ದಿಗಳನ್ನು ಪ್ರಕಟಿಸಿದರು ಎಂದು ರಾಕೇಶ್ ಆರೋಪಿಸಿದರು.

”ಇಬ್ಬರನ್ನು ಲವ್ ಜಿಹಾದ್ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದರಿಂದ ಹಿಂದೂ ಸಂಘಟನೆಗಳು ಆಕ್ರೋಶಗೊಂಡಿವೆ” ಎಂದು ಒಬ್ಬರು ಹೇಳಿದರು.

ಅನಿಲ್ ಅವರು ಈ ಸುದ್ದಿಗಳನ್ನು ಸ್ಥಳೀಯ ವಾಟ್ಸಾಪ್ ಗುಂಪುಗಳಲ್ಲಿ ಫಾರ್ವರ್ಡ್ ಮಾಡಿದ್ದಾರೆ. ಇದರಿಂದ ಕೋಮು ಉದ್ವಿಗ್ನತೆ ಹೆಚ್ಚಾಯಿತು ಎಂದು ಹೇಳಿದರು.

ವಿಎಚ್‌ಪಿಯ ವೀರೇಂದ್ರ ಸಿಂಗ್ ರಾವತ್, ಬಿಜೆಪಿಯ ಪವನ್ ನೌಟಿಯಾಲ್, ಯುವ ಮೋರ್ಚಾ ಮಂಡಲ್‌ನ ದಿವಾಕರ್ ಉನಿಯಾಲ್ ಮತ್ತು ಪುರೋಲಾ ವ್ಯಾಪಾರಿ ಮಂಡಲದ ಪದಾಧಿಕಾರಿಗಳಾದ ಬ್ರಿಜ್ಮೋಹನ್ ಚೌಹಾಣ್ ಮತ್ತು ದೀಪಕ್ ನೌಟಿಯಾಲ್ ಸೇರಿದಂತೆ ಪುರೋಲಾದಲ್ಲಿನ ಹಲವು ಜನರು ಈ ಸುದ್ದಿಯನ್ನು ಎತ್ತಿಕೊಂಡರು. ಮೇ 27ರಂದು ಚೌಹಾಣ್ ಅವರು ಪುರೋಲಾ ವ್ಯಾಪಾರಿಗಳ ವಾಟ್ಸಾಪ್ ಗುಂಪಿನಿಂದ ಮುಸ್ಲಿಮರನ್ನು ತೆಗೆದುಹಾಕಿದರು. ಚೌಹಾಣ್ ಕೂಡ ಬಿಜೆಪಿ ಜೊತೆ ನಂಟು ಹೊಂದಿದ್ದಾರೆ.

The letter issued by the Purola Gram Pradhan Sangathan.

ಆನಂತರ ಈ ಸುದ್ದಿಯು ಹತ್ತಿರದ ಹಳ್ಳಿಗಳಿಗೂ ಪಸರಿಸಿತು. ಮೇ 28 ರಂದು, ಪುರೋಳ ಗ್ರಾಮ ಪ್ರಧಾನ ಸಂಘಟನೆಯ (ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ) ಅಧ್ಯಕ್ಷ ಪ್ರದೀಪ್ ರೈ ನೇತೃತ್ವದಲ್ಲಿ ಮೇ 29 ರಂದು ಪುರೋಳ ಮಾರುಕಟ್ಟೆಯನ್ನು ಮುಚ್ಚಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರತಿಭಟನೆ ನಡೆಸುವಂತೆ ಒತ್ತಾಯಿಸಿ ಗ್ರಾಮ ಪ್ರಧಾನರಿಗೆ ಪತ್ರವನ್ನು ನೀಡಲಾಯಿತು.

ಈ ಮಧ್ಯೆ BBC ಖಬರ್‌ ವೆಬ್ಸೈಟ್‌ನಲ್ಲಿ, “ಪುರೋಲಾದಲ್ಲಿ ‘ಲವ್ ಜಿಹಾದ್’ ವಿರುದ್ಧದ ಪ್ರತಿಭಟನೆ” ಎಂದು ಮತ್ತೊಂದು ವರದಿಯನ್ನು ಪ್ರಕಟಿಸಿತು.

ಮೇ 29 ರ ಪ್ರತಿಭಟನೆಯಲ್ಲಿ ಕೋಪಗೊಂಡ ಜನಸಮೂಹವು ಮುಸ್ಲಿಮರು ನಡೆಸುತ್ತಿದ್ದ ಅಂಗಡಿಗಳನ್ನು ಧ್ವಂಸಗೊಳಿಸಿದರು. ಮುಸ್ಲಿಂ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಪ್ರತಿಭಟನೆ ನಂತರ ಅನೇಕ ಮುಸ್ಲಿಂ ಕುಟುಂಬಗಳು ಊರುಬಿಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...