Homeಕರ್ನಾಟಕಕಾನ್ವೆಂಟುಗಳಿಗೂ ಸವಾಲೆಸೆದ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ

ಕಾನ್ವೆಂಟುಗಳಿಗೂ ಸವಾಲೆಸೆದ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ

- Advertisement -
- Advertisement -

ಎಲೆಮರೆ – 13

ಈಚೆಗೆ ಎಲ್.ಕೆ.ಜಿ. ಯು.ಕೆ.ಜಿಯನ್ನು ಅಂಗನವಾಡಿಯಲ್ಲೇ ಆರಂಭಿಸಿ ಎಂದು ಸಿ.ಐ.ಟಿ.ಯು ಸಂಘಟನೆಯು ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಿತು. ರಾಜ್ಯವ್ಯಾಪಿ ಗಮನ ಸೆಳೆಯಿತು. ಇದೀಗ ಸರಕಾರದ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿದೆ. ಆದರೆ ಇಲ್ಲೊಬ್ಬ ಅಂಗನವಾಡಿ ಕಾರ್ಯಕರ್ತೆ ಸರಕಾರ ಅಧಿಕೃತವಾಗಿ ಎಲ್.ಕೆ.ಜಿ. ಯು.ಕೆ.ಜಿಯನ್ನು ಅಂಗನವಾಡಿಗಳಲ್ಲಿ ಆರಂಭಿಸುವ ಮುನ್ನವೇ ಕಾನ್ವೆಂಟುಗಳಿಗೂ ಸವಾಲೆಸೆಯುವಂತೆ ಅಂಗನವಾಡಿಯನ್ನು ರೂಪಿಸಿದ್ದಾರೆ. ಈಚೆಗೆ ದೇವದುರ್ಗ ಭಾಗದ 40 ಜನ ಅಂಗನವಾಡಿ ಕಾರ್ಯಕರ್ತೆಯರ ತಂಡ ಈ ಅಂಗನವಾಡಿಯನ್ನು ಭೇಟಿ ಮಾಡಿ ನಾವೂ ಹೀಗೆ ಮಾಡಬಹುದೇ ಎಂದು ಪರಿಶೀಲಿಸಿದ್ದಾರೆ. ಈ ಭಾಗದ ಶಿಶು ಅಭಿವೃದ್ಧಿ ತಾಲೂಕು ಅಧಿಕಾರಿ ಎ.ಆರ್. ಮಧುಸೂದನ ಅವರು ಈ ಅಂಗನವಾಡಿಯ ಮಾದರಿಯನ್ನು ಇಡೀ ತಾಲೂಕಿಗೆ ವಿಸ್ತರಿಸುವ ಯೋಚನೆ ಮಾಡಿದ್ದಾರೆ. ಹಾಗಾದರೆ ಇದರ ವಿಶೇಷತೆಯೇನು?

ಜೀರೋದಿಂದ ಮೂರು ನಾಲ್ಕು ವರ್ಷದ ಮಕ್ಕಳು ಚಿಲಿಪಿಲಿಗುಟ್ಟುವ ಈ ಪುಟ್ಟ ಕೋಣೆಯಲ್ಲಿ ಟೀಚರ್ ಕೇಳುವ ಪ್ರತಿ ಪ್ರಶ್ನೆಗಳಿಗೂ ಮಕ್ಕಳು ಸ್ಪರ್ಧೆಗೆ ಬಿದ್ದಂತೆ ಪಟಪಟನೆ ಉತ್ತರಿಸುತ್ತಾರೆ. ಚಕಚಕನೆ ಇಂತಿಷ್ಟು ಪ್ಲಾಸ್ಟಿಕ್ ಕಪ್‍ಗಳನ್ನು ಜೋಡಿಸುತ್ತಾ ಸೂಪರ್ ಮಿನಿಟ್ ರಿಯಾಲಿಟಿ ಶೋನ ಅಣಕು ಮಾಡಿ ಚಪ್ಪಾಳೆ ತಟ್ಟುತ್ತಾರೆ. ಬಾಸ್ಕೆಟ್‍ಬಾಲನ್ನು ನೆಟ್‍ನಲ್ಲಿ ಮಗುವೊಂದು ಎಸೆಯುವಾಗ ಉಳಿದೆಲ್ಲರೂ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಗಾಂಧೀಜಿ ಎಂದ ತಕ್ಷಣ ಗಾಂಧೀಜಿಗೆ ಸಂಬಂಧಿಸಿದ ಹತ್ತಾರು ಸಂಗತಿಗಳನ್ನು ಒಬ್ಬರಾದ ನಂತರ ಒಬ್ಬರಂತೆ ಪಟಪಟನೆ ಹೇಳುತ್ತಾ ಗಾಂಧಿಯ ಜೀವನ ಕಥನವನ್ನು ಅರಳಿಸುತ್ತಾರೆ. ಸ್ವಾತಂತ್ರ್ಯ ಎಂದತಕ್ಷಣ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರನ್ನು ಉಲಿಯುತ್ತಾರೆ. ಸೊಳ್ಳೆ ಎಂದ ತಕ್ಷಣ ಅದರ ಪರಿಚಯ ಹೇಳುತ್ತಲೆ ಅದರಿಂದ ಹರಡುವ ರೋಗಗಳಾವುವು, ಈ ರೋಗಗಳು ಹರಡದಂತೆ ಮನೆಯಲ್ಲಿ ಏನೇನು ಮುಂಜಾಗ್ರತೆ ವಹಿಸಬೇಕು ಎಂದು ಮಕ್ಕಳು ವಿವರಿಸುತ್ತಾರೆ. ಹೀಗೆ ಒಂದೊಂದು ಸಂಗತಿಯ ಬಗೆಗೂ ಸಾಮೂಹಿಕವಾಗಿ ಒಬ್ಬರಾದನಂತರ ಒಬ್ಬರಂತೆ ಉತ್ತರದ ಸರಪಳಿ ಹೆಣೆಯುವ ಈ ಮಕ್ಕಳು ಇಂಟರ್‍ನ್ಯಾಷನಲ್ ಎಂದು ಕರೆದುಕೊಳ್ಳುವ ಯಾವುದೇ ಖಾಸಗಿ ಕಾನ್ವೆಂಟ್ ಸ್ಕೂಲಿನಲ್ಲಿ ಓದುತ್ತಿಲ್ಲ. ಹತ್ತಾರು ಅವಕಾಶಗಳಿರುವ ಸರಕಾರಿ ಶಾಲೆಯ ಮಕ್ಕಳೂ ಅಲ್ಲ. ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಕೂಡ್ಲಿಗಿಯಿಂದ ಪಶ್ಚಿಮಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಗಜಾಪುರದ ಅಂಗನವಾಡಿ ಬಿ ಕೇಂದ್ರದ ಮಕ್ಕಳು.

ಹೌದು ಅಂಗನವಾಡಿ ಕಾರ್ಯಕರ್ತೆ ಇಷ್ಟೆಲ್ಲಾ ಪ್ರಯೋಗ ಮಾಡಿದ್ದಾರಾ? ಎಂದು ನೀವು ಈ ಪುಟ್ಟ ಶಾಲೆಯನ್ನು ಪ್ರವೇಶಿಸಿದರೆ, ಹುಬ್ಬೇರಿಸುವಂತೆ ಈ ಅಂಗನವಾಡಿ ಹತ್ತಾರು ಹೊಸ ಹೊಸ ಪ್ರಯೋಗಗಳ ಕಲಿಕಾ ಸಾಮಗ್ರಿಗಳ ಅಕ್ಷಯ ಪಾತ್ರೆಯಂತೆ ಗಮನ ಸೆಳೆಯುತ್ತದೆ. ಮಕ್ಕಳ ಸೃಜನಶೀಲತೆಯನ್ನು ಅವರದೇ ಪರಿಸರದಲ್ಲಿ ಬಳಸಿ ಬಿಸಾಡಿದ, ಮಕ್ಕಳಿಂದಲೇ ಸಂಗ್ರಹಿಸಿದ ವಸ್ತುಗಳನ್ನು ಬಳಸಿಯೇ ತಯಾರಿಸಲಾಗಿದೆ. ಮನೆಗಳಲ್ಲಿ ಲಭ್ಯವಿರುವ ಬೀಜಗಳನ್ನು ಕಲೆ ಹಾಕಿ ಸಂಗ್ರಹ ಮಾಡಲಾಗಿದೆ. ಒಂದೊಂದು ಬೀಜವನ್ನು ತೋರಿಸಿದಾಗಲೂ ಆ ಬೀಜದ ಬೆಳೆ, ಹಣ್ಣು, ಕಾಯಿ, ಬೆಳೆಯುವ ಕಾಲಮಾನ, ಬೆಳೆಯ ಅವಧಿ ಇತ್ಯಾದಿಗಳನ್ನು ಮಕ್ಕಳು ಹೇಳುತ್ತಾರೆ.

ಪ್ರತಿದಿನ ಹನ್ನೊಂದು ಗಂಟೆಯ ಹೊತ್ತಿಗೆ ಒಬ್ಬ ಮಗು ಶಾಲೆಯಿಂದ ಹೊರಗಡೆ ಬಂದು ವಾತಾವರಣವನ್ನು ಅವಲೋಕಿಸಿ, ಮಕ್ಕಳಿಗೆ ಈ ದಿನದ ಹವಾಮಾನ ಹೇಗಿದೆ ಎಂದು ವಿವರಿಸುತ್ತದೆ. ಪ್ರತೀ ಮಕ್ಕಳಿಗೂ ಅವರದೇ ಆದ ಒಂದು ಚೀಲವಿದೆ. ಆ ಮಗು ಒಂದು ವಾರದಲ್ಲಿ ಬರೆಯುವ ಡ್ರಾಯಿಂಗ್, ಬರಹದ ಪುಟಗಳನ್ನು ಆಯಾ ಮಗುವಿನ ಚೀಲದಲ್ಲಿ ಶೇಖರಿಸಲಾಗುತ್ತದೆ. ವಾರಕ್ಕೊಮ್ಮೆ ಪೋಷಕರನ್ನು ಕರೆಸಿ ಆಯಾ ಮಕ್ಕಳ ವಾರದ ಚಟುವಟಿಕೆಯನ್ನು ವಿವರಿಸಲಾಗುತ್ತದೆ. ಕನ್ನಡ ಇಂಗ್ಲಿಷ್ ಅಂಕೆಸಂಖ್ಯೆಯ ಅಕ್ಷರಗಳನ್ನು ಗುರುತಿಸುತ್ತಲೇ ಓದುವ ಪ್ರಯತ್ನ ಮಾಡುವ ಮಕ್ಕಳನ್ನು ನೋಡಿ ಪ್ರತಿ ತಂದೆತಾಯಿ ಅಥವಾ ಪೋಷಕರಿಗೆ ತಮ್ಮ ಮಗು ಏನೇನು ಕಲಿಯುತ್ತಿದೆ ಎನ್ನುವ ಸ್ಪಷ್ಟತೆ ಸಿಕ್ಕು ಖುಷಿಗೊಳ್ಳುತ್ತಾರೆ.

ಹಳ್ಳಿಯಲ್ಲಿ ಬಳಸಿ ಬಿಸಾಡುವ ಅನೇಕ ಚಿಕ್ಕಪುಟ್ಟ ವಸ್ತುಗಳೆಲ್ಲಾ ಕಲಿಕಾ ಸಾಮಗ್ರಿಗಳಾಗಿ ಅಂಗನವಾಡಿ ಸೇರುತ್ತವೆ. ದಿನಬಳಕೆಯ ವಸ್ತುಗಳ ಖಾಲಿ ಸಾಮಾನುಗಳಿಂದ ಆಯಾ ಸಾಮಗ್ರಿಯ ಬಳಕೆಯ ಬಗ್ಗೆ ಕಲಿತ ಮಕ್ಕಳು ಅದನ್ನು ಮನೆಯಲ್ಲಿ ತಂದೆತಾಯಿಯರಿಗೆ ವಿವರಿಸುತ್ತಾರೆ. ಪ್ರತೀ ವಾರ ಒಂದು ವಿಷಯ ಆಯ್ದುಕೊಂಡು ಆ ವಿಷಯದ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ಅವುಗಳ ಲಕ್ಷಣಗಳನ್ನು ವಿವರಿಸುತ್ತಾ ಹೋಗುತ್ತಾರೆ. ಒಂದು ಚಿತ್ರವನ್ನು ತೋರಿಸಿದ ತಕ್ಷಣ ಮಕ್ಕಳು ಆ ಚಿತ್ರಕ್ಕೊಂದು ಕತೆ ಕಟ್ಟುತ್ತಾರೆ. ಮೋಡ, ಹವಾಮಾನ, ಹೊಲಗಳಲ್ಲಿ ಬೆಳೆಯುವ ಬೆಳೆಗಳು, ಸುತ್ತಮುತ್ತಣ ಪರಿಸರ ಎಲ್ಲದರ ಬಗ್ಗೆಯೂ ಮಕ್ಕಳು ಮಾತನಾಡುತ್ತಾರೆ. ಖಾಲಿ ರಟ್ಟಿದ ಬಾಕ್ಸ್‍ಗಳನ್ನು ಬಳಸಿ ಮನೆ, ಆಸ್ಪತ್ರೆ, ಶಾಲೆಯ ಮಾದರಿಗಳನ್ನು ತಯಾರಿಸಿ ಸ್ವಚ್ಛ ಹಳ್ಳಿಯೊಂದರ ಚಿತ್ರಣವನ್ನು ಕಣ್ಣಮುಂದೆ ತರುತ್ತಾರೆ. ತೂಗುಹಾಕಿದ ಚೀಲಗಳ ಬಣ್ಣವನ್ನು ಗುರುತಿಸಿ ಆಯಾ ಬಣ್ಣದ ಹತ್ತಾರು ಸಂಗತಿಗಳನ್ನು ಜೋಡಿಸಿ ಹೇಳುತ್ತಾರೆ. ಹೀಗೆ ಮಕ್ಕಳ ಗ್ರಹಿಕೆಯನ್ನು ಸೂಕ್ಷ್ಮಗೊಳಿಸಲಾಗಿದೆ. ಮಕ್ಕಳು ಪ್ರತಿಯೊಂದರ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲಿಗಳಾಗಿದ್ದಾರೆ. ಸಮಗ್ರ ಬಾಲವಿಕಾಸ ಯೋಜನೆಯ ಪೂರ್ವ ಪ್ರಾಥಮಿಕ ಶಿಕ್ಷಣದ ಉದ್ದೇಶ ಇಲ್ಲಿ ಸಾಕಾರಗೊಂಡಿದೆ. ಇದನ್ನು ಅವಿರತ ಶ್ರಮಿಸಿ ರೂಪಿಸಿದವರು ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ.

ಅಂಗನವಾಡಿ ಕಾರ್ಯಕರ್ತೆಯಾಗಿ ಕಳೆದ ಏಳು ವರ್ಷದಿಂದ ಕೆಲಸ ಮಾಡುವ ವಸಂತ ಅವರು ತನಗಿರುವ ಅಂಗವೈಕಲ್ಯವನ್ನು ಮರೆತು ಮಕ್ಕಳ ಜತೆ ಮಕ್ಕಳಂತೆಯೇ ಬೆರೆಯುತ್ತಾರೆ. ನಾಳೆ ಮಕ್ಕಳಿಗೆ ಯಾವ ಪ್ರಯೋಗ ಮಾಡಬೇಕು, ಹೊಸದೇನನ್ನು ಕಲಿಸಬೇಕು ಎನ್ನುವ ಯೋಚನೆಯೇ ಅವರನ್ನು ಕ್ರಿಯಾಶೀಲವಾಗಿಟ್ಟಿದೆ. `ನನಗಿನ್ನೂ ತುಂಬಾ ಕನಸುಗಳಿವೆ ಸರ್, ನಮ್ಮ ಇಲಾಖೆ ಮತ್ತು ಊರಿನ ಗ್ರಾಮಸ್ಥರಿಂದ ಒಳ್ಳೆಯ ಪ್ರೋತ್ಸಾಹವಿದೆ. ಆದರೆ ಈ ತರಹದ ಪ್ರಯೋಗಗಳಿಗೆ ಇಲಾಖೆಯಿಂದ ಹಣ ಕೊಡುವ ನಿಯಮವಿಲ್ಲ. ಹಾಗಾಗಿ ಅಗತ್ಯವಿದ್ದ ಹಣವನ್ನು ನಾವೇ ಕೈಯಿಂದ ಹಾಕಬೇಕು. ಅಥವಾ ಹಣವಿಲ್ಲದೆ ಪುಕ್ಕಟೆಯಾಗಿ ಸಿಗುವ ವಸ್ತುಗಳನ್ನೆ ಬಳಸಿ ಪ್ರಯೋಗಗಳನ್ನು ಮಾಡಬೇಕು’ ಎನ್ನುತ್ತಾರೆ.

ಪತ್ರಕರ್ತರಾದ ಗಜಾಪುರದ ಭೀಮಣ್ಣ `ಇಲ್ಲಿ ಆಟದ ಜೊತೆಗೆ ಮಕ್ಕಳ ಕಲಿಕೆ ವಿಶಿಷ್ಟವಾಗಿದೆ. ಈ ಕೇಂದ್ರ ಇತರೆ ಅಂಗನವಾಡಿಗಳಿಗೆ ಮಾದರಿಯಂತಿದೆ’ ಎನ್ನುತ್ತಾರೆ. `ನಾವು ಬಡವರು ಕಾನ್ವೆಂಟಿಗೆ ಕಳಿಸೋವಷ್ಟು ದುಡ್ಡಿಲ್ಲ ತನ್ನ ಮಗಳು ಕಾನ್ವೆಂಟಿಗೆ ಹೋಗುವ ಮಕ್ಕಳಿಗಿಂತ ಚೆನ್ನಾಗಿ ಓದ್ತಾಳೆ’ ಎಂದು ಅಂಗನವಾಡಿಯಲ್ಲಿರುವ ತನ್ನ ಮಗಳ ಬಗ್ಗೆ ಭಾಗ್ಯಮ್ಮ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಶಿಶು ಅಭಿವೃದ್ಧಿ ತಾಲೂಕು ಅಧಿಕಾರಿ ಎ.ಆರ್. ಮಧುಸೂದನ ಅವರು ` ಅಂಗನವಾಡಿ ಕಾರ್ಯಕರ್ತೆ ವಸಂತ ಅವರು ಪೂರ್ವ ಪ್ರಾಥಮಿಕ ಮಕ್ಕಳ ಶಿಕ್ಷಣವನ್ನು ಕಲಿಕಾ ಸಾಮಗ್ರಿಗಳನ್ನು ಬಳಸಿ, ಹಲವು ಹೊಸ ಪ್ರಯೋಗಗಳನ್ನು ಮಾಡಿ ಪರಿಣಾಮಕಾರಿಯಾಗಿ ಕಲಿಸುತ್ತಿದ್ದಾರೆ. ಈ ಮಾದರಿಯನ್ನು ತಾಲೂಕಿನ ಇತರೆ ಅಂಗನವಾಡಿಗಳಲ್ಲಿ ಅಳವಡಿಸಿಕೊಳ್ಳಲು ತಿಳಿಸಿದ್ದೇವೆ’ ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...