Homeಮುಖಪುಟಕೇರಳದ ರಾಹುಲ್ ರ್ಯಾಲಿಯಲ್ಲಿ ಪಾಕ್ ಧ್ವಜ ಹಾರಾಡಿದ್ದು ಸುಳ್ಳು ಸುದ್ದಿ

ಕೇರಳದ ರಾಹುಲ್ ರ್ಯಾಲಿಯಲ್ಲಿ ಪಾಕ್ ಧ್ವಜ ಹಾರಾಡಿದ್ದು ಸುಳ್ಳು ಸುದ್ದಿ

- Advertisement -
- Advertisement -

ಹಸಿರು ಹಾರಿದರೆ ಅದು ಪಾಕ್ ಧ್ವಜ! ಸಂಘಿಗಳ ಬಹುಕಾಲದ ಹುನ್ನಾರ
ಇದು ಇವತ್ತು ನಿನ್ನೆಯದಲ್ಲ, ಸಂಘದ ಅಂಗಸಂಸ್ಥೆಗಳು ಸುಮಾರು ಎರಡು ದಶಕಗಳಿಂದ ನಡೆಸಿಕೊಂಡು ಬಂದಿರುವ ಪ್ರಪಗಂಡಾ. ಯಾವುದಾದರೂ ರ್ಯಾಲಿಯಲ್ಲಿ ಹಸಿರು ಬಾವುಟ ಕಂಡರೆ ಸಾಕು, ಅಲ್ಲಿ ಪಾಕ್ ಧ್ವಜ/ಇಸ್ಲಾಮಿಕ್ ಧ್ವಜ ಹಾರಾಡಿದವು ಎಂದೆಲ್ಲ ಸುದ್ದಿ ಹಬ್ಬಿಸುವುದು. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ಮೇಲೆ ಅಂತಹ ಫೋಟೊ, ವಿಡಿಯೋಗಳ ಮೂಲಕ ರಾಜಕೀಯವಾಗಿ ಮುಗ್ಧರಾದವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತ ಬರಲಾಗಿದೆ. ಕಾಂಗ್ರೆಸ್ ವಿರುದ್ಧವೇ ಈ ‘ಅಸ್ತ್ರ’ ಜಾಸ್ತಿ ಬಳಕೆಯಾಗಿದೆ, ಜೊತೆಗೆ ಮಮತಾ ಬ್ಯಾನರ್ಜಿಯವರನ್ನೂ ಬಿಟ್ಟಿಲ್ಲ.
ಈಗ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ನಡೆಸಿದ ರ್ಯಾಲಿ ವಿಚಾರದಲ್ಲೂ ಭಕ್ತರಲ್ಲಿ ಮತ್ತೆ ‘ಹಸಿರು ಕಾಮಾಲೆ’ ಕಾಣಿಸಿಕೊಂಡಿದೆ. ಇದು ಮರುಕಳಿಸುತ್ತಲೇ ಹೋಗಬಹುದಾದ್ದರಿಂದ ಪಾಕ್ ಧ್ವಜ, ಐಯುಎಂಎಲ್ ಪಕ್ಷದ ಧ್ವಜ ಮತ್ತು ಇಸ್ಲಾಮಿಕ್ ಬ್ಯಾನರ್‍ಗಳ ಕುರಿತ ಪ್ರಾಥಮಿಕ ತಿಳವಳಿಕೆಯನ್ನು ಇಲ್ಲಿ ನೀಡುತ್ತಿದ್ದೇವೆ.
ಮಿಥ್ಯ: ಏಪ್ರಿಲ್ 4ರಂದು ವಯನಾಡಿನಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ಮುನ್ನ ನಡೆದ ರ್ಯಾಲಿಯಲ್ಲಿ ಪಾಕ್ ಧ್ವಜಗಳು ಹಾರಾಡಿವೆ. ಇಸ್ಲಾಮಿಕ್ ಧ್ವಜಗಳೂ ಕಂಡಿವೆ. ಭಯೋತ್ಪಾದಕ ಜಿನ್ನಾ ಒಂದು ಕಾಶ್ಮೀರ ಮಾಡಿ ಹೋದ, ರಾಹುಲ್ 500 ಕಾಶ್ಮೀರಗಳನ್ನು ಸೃಷ್ಟಿಸಿ, ದೇಶ ಒಡೆಯಲಿದ್ದಾರೆ…. ಈಗಲಾದರೂ ಜಿಹಾದಿ ಪ್ರಿಯ ಕಾಂಗ್ರೆಸ್ ಅನ್ನು ಅರ್ಥ ಮಾಡಿಕೊಳ್ಳಿ ಎಂದು ಹಲವಾರು ಟ್ವಿಟ್ಟರ್ ಹ್ಯಾಂಡಲ್‍ಗಳಿಂದ ಸುದ್ದಿ ಹುಟ್ಟುತ್ತದೆ. ವಯನಾಡ್ ರ್ಯಾಲಿಯ ಫೋಟೊ, ವಿಡಿಯೋಗಳಲ್ಲಿ ಹಸಿರು ಧ್ವಜಗಳನ್ನು ಉಲ್ಲೇಖಿಸಿ ಈ ‘ಅಪಾದನೆ’ ಮಾಡಲಾಗಿದೆ. ಭಕ್ತರು ಇದನ್ನು ರಿಟ್ವೀಟ್ ಮಾಡುತ್ತಲೇ ಇದ್ದಾರೆ. ಫೇಸ್‍ಬುಕ್, ವ್ಯಾಟ್ಸಾಪ್‍ಗಳಿಗೂ ಇದು ಹರಡಿದೆ.


ಸತ್ಯ: ಇದು ಮೊದಲೇನಲ್ಲ. ಕೇರಳದ ‘ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್’ (ಐಯುಎಂಎಲ್) ಪಕ್ಷದ ಧ್ವಜ ಕಂಡಾಗಲೆಲ್ಲ ಇಂತಹ ಸುಳ್ಳು ಅಪಾದನೆ ಮಾಡುತ್ತ ಬರಲಾಗಿದೆ. ಐಯುಎಂಎಲ್ ಕೇರಳದಲ್ಲಿ ಅದು ಗಣನೀಯ ಬೇಸ್ ಹೊಂದಿದೆ. ಮೊನ್ನೆ ರ್ಯಾಲಿಯಲ್ಲಿ ಕಂಡಿದ್ದು ಇದೇ ಪಕ್ಷದ ಧ್ವಜ ಮತ್ತು ಬ್ಯಾನರ್ ಅವು ಖಂಡಿತ ಪಾಕ್ ಧ್ವಜಗಳೂ ಅಲ್ಲ, ಇಸ್ಲಾಮಿಕ್ ಧ್ವಜಗಳೂ ಅಲ್ಲ. ಜೊತೆಗೆ ಕಾಂಗ್ರೆಸ್ ಧ್ವಜಗಳಂತೂ ಅಲ್ಲವೇ ಅಲ್ಲ.
ಪಾಕ್ ಧ್ವಜದಲ್ಲಿ ಅರ್ಧಚಂದ್ರ ಮತ್ತು ನಕ್ಷತ್ರಗಳು ಮಧ್ಯಭಾಗದಲ್ಲಿ ಇದ್ದರೆ, ಅವು ಐಯುಎಂಎಲ್ ಧ್ವಜ/ಬ್ಯಾನರಿನಲ್ಲಿ ಎಡಮೂಲೆ ಟಾಪ್‍ನಲ್ಲಿವೆ. ಪಾಕ್ ಧ್ವಜದಲ್ಲಿ ಎಡಕ್ಕೆ ಬಿಳಿ ಪಟ್ಟೆ ಇರುತ್ತದೆ. ಸಾಮಾನ್ಯವಾಗಿ ಮುಸ್ಲಿಮರು ಧಾರ್ಮಿಕ ಧ್ವಜ ಎಂಬರ್ಥದಲ್ಲಿ ಬಳಸುವ ಬ್ಯಾನರ್‍ನಲ್ಲಿ ಈ ಬಿಳಿ ಪಟ್ಟೆ ಇರುವುದಿಲ್ಲ. ಅಂದು ರ್ಯಾಲಿಯಲ್ಲಿ ಹಾರಾಡಿದ್ದು ಐಯುಎಂಎಲ್ ಪಕ್ಷದ ಧ್ವಜಗಳಷ್ಟೇ.

ಇನ್ನೊಂದು ಕಡೆ ನಟಿ ಕೊಯ್ನ ಮಿತ್ರ ಒಂದು ಟ್ವೀಟ್ ಮಾಡಿದ್ದು, ಅಲ್ಲಿ ಬರೀ ಹಸಿರು ಧ್ವಜಗಳ ಚಿತ್ರವಿದೆ. ಇದು ವಯನಾಡ್ ರ್ಯಾಲಿಗೆ ಸಂಬಂಧವೇ ಇಲ್ಲದ ಚಿತ್ರ. ಐಯುಎಂಎಲ್ ಪಕ್ಷದ ಮಾಜಿ ಸಚಿವ ಕುನಾಲ್‍ಕುಟ್ಟಿ 2016ರಲ್ಲಿ ನಡೆಸಿದ ರ್ಯಾಲಿಯ ಚಿತ್ರವದು. ಅಲ್ಲಿ ಸಹಜವಾಗಿ ಐಯುಎಂಎಲ್ ಧ್ವಜಗಳೇ ಇವೆ.
(ಆಧಾರ: ಅಲ್ಟ್‍ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...