Homeಪುಸ್ತಕ ವಿಮರ್ಶೆವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

ವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

- Advertisement -
- Advertisement -

“ಮಾನವ ಸಮಾಜ ಒಮ್ಮೆಲೇ ಇಂದಿನ ಪರಿಸ್ಥಿತಿಗೆ ತಲುಪಲಿಲ್ಲ. ಈ ಸ್ಥಿತಿಗೆ ತಲುಪಬೇಕಾದರೆ ಅದು ಅನೇಕಾನೇಕ ಸಂಘರ್ಷಗಳನ್ನು ಎದುರಿಸಬೇಕಾಯಿತು” ಎಂದೇ ಪ್ರಾರಂಭವಾಗುವ ಈ ಕೃತಿ ಕತೆಗಳೆಂದು ಕರೆಯಿಸಿಕೊಳ್ಳುವ ಮಾನವ ಸಮಾಜದ ಇತಿಹಾಸದ ಭಿತ್ತಿ ಚಿತ್ರಗಳು.

ಇಪ್ಪತ್ತು ಕತೆಗಳ ಸಂಕಲನ.
ಇಂದು ನಾವು ಕಾಣುತ್ತಿರುವಂತೆ ಸಮಾಜವಿರಲಿ, ಕುಟುಂಬವೂ ಇರಲಿಲ್ಲ ಮತ್ತು ಕುಟುಂಬದ ಸದಸ್ಯರ ಸಂಬಂಧವೂ ಇರಲಿಲ್ಲ. ತಾಯಿ, ಮಗು, ಸೋದರ, ಸೋದರಿಯರ ಇಂದಿನ ಶಿಷ್ಟ ಸಂಬಂಧದ ಕನ್ನಡಕದಿಂದ ಅಂದಿನ ನಮ್ಮ ಪೂರ್ವಜರ ನೈಸರ್ಗಿಕ ವರ್ತನೆಗಳನ್ನು ನೋಡಿದರೆ, ಅಶ್ಲೀಲವೆಂದೋ, ಅಕ್ರಮವೆಂದೋ, ಅಸಭ್ಯವೆಂದೋ ತುಚ್ಛೀಕರಿಸಬಹುದು. ಆದರೆ ಸಮಾಜದ ವ್ಯವಸ್ಥೆಯು ವಿಕಸಿತವಾದಂತೆ, ಕುಟುಂಬವೂ, ಅದರ ಸದಸ್ಯರ ಸಂಬಂಧಗಳ ರೂಪುರೇಷೆಗಳೂ ವಿಕಸಿತಗೊಳ್ಳುತ್ತಾ ಬಂತು ಎಂಬುದನ್ನು ನಿರಾಕರಿಸಲಾಗದು. ಮಾನವನ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳ ಸಿಕ್ಕ ತುಣುಕುಗಳನ್ನು ಕತೆಗಳ ರೂಪದಲ್ಲಿ ಕಟ್ಟಿಕೊಡುವ ಸಾಂಕೃತ್ಯಾಯನ ಬಹುದೊಡ್ಡ ಪಂಡಿತರು.

ತುಂಡುತುಂಡಾಗಿ ಸಿಕ್ಕಿರುವ ಇತಿಹಾಸದ ದಾಖಲೆಗಳನ್ನು ಜೋಡಿಸುವ ಕೊಂಡಿಗಳನ್ನು ಕಲ್ಪಿಸಿರುವ ಕತೆಗಾರನ ಕಲ್ಪನಾಶಕ್ತಿಗಿಂತ ಕಾಣದಿರುವ ಇತಿಹಾಸದ ಗ್ರಹಿಕೆ ತೋರುತ್ತದೆ.

ನಿಶಾ, ಮೊದಲ ಕತೆ. ವೋಲ್ಗಾ ನದಿಯ ತಟದಲ್ಲಿ ಕ್ರಿ.ಪೂ.600ರ ಜೀವನವನ್ನು ತೆರೆದಿಡುತ್ತದೆ.

ಹಾಗೆಯೇ ವೇದ, ಬ್ರಾಹ್ಮಣ, ಉಪನಿಷತ್ತುಗಳನ್ನೆಲ್ಲಾ ಜಾಲಾಡುವ ಸಾಂಕೃತ್ಯಾಯನ ವಿವಿಧ ಭೂಭಾಗಗಳಲ್ಲಿ ಮಾನವನ ವಿವಿಧ ಜನಾಂಗಗಳು ಬಾಳಿರುವ ರೀತಿಗಳನ್ನು, ಎದುರಿಸಿರುವ ಸಂಘರ್ಷಗಳನ್ನು ಮತ್ತು ಅಳವಡಿಸಿಕೊಂಡಿರುವ ವ್ಯವಸ್ಥೆಗಳನ್ನು ಕಥಿಸುತ್ತಾರೆ.
1942ರಲ್ಲಿ ಸಾಂಕೃತ್ಯಾಯನ ಬರೆದ ಈ ಕೃತಿಗೆ ಸನಾತನಿಗಳು ಕೆಂಡಕಾರಿದ್ದರು. ಬಹುವಾಗಿ ನಿಂದಿಸಿದ್ದರು. ಆದರೆ ಈ ಕೃತಿಯನ್ನು ಸಮರ್ಥಿಸಲು ಅಥವಾ ಖಂಡಿಸಲು ಯಾರಿಗಾದರೂ ಆಳವಾದ ಅಧ್ಯಯನವಿರಬೇಕು. ಏಕೆಂದರೆ ಇವರ ಅಗಾಧ ಓದಿನ ಹಿನ್ನೆಲೆ ಮತ್ತು ಅಧ್ಯಯನ ವ್ಯಾಪ್ತಿಯನ್ನು ನಗ್ನವಾದಿ ವೇದನಿಂದಕ ಎಂದು ದೂಷಿಸಿದರೆ ಅದೊಂದು ಪೂರ್ವಾಗ್ರಹ ಪೀಡಿತ ಮನಸ್ಕರ ಅಸಹನೆಯ ಪ್ರದರ್ಶನವಷ್ಟೇ ಆಗುತ್ತದೆ.

ಬರಿಯ ಗ್ರಂಥಾಧ್ಯಯನ ಮಾತ್ರವಲ್ಲದೇ ತಾವೇ ಅಲೆದಾಟದಲ್ಲಿ ತೊಡಗಿದ್ದರ ಪರಿಣಾಮ ಜೀವನವಿಧಾನ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳು ವೋಲ್ಗಾ ಗಂಗಾದಲ್ಲಿ ಹರಳುಗಟ್ಟಿದೆ. ಇತಿಹಾಸ, ತತ್ವಶಾಸ್ತ್ರ, ವಿಜ್ಞಾನ, ರಾಜನೀತಿ, ಸಂಸ್ಕೃತಿ, ಸಮಾಜ ವಿಜ್ಞಾನ ಎಲ್ಲವೂ ಕತೆಗಳ ತಳಪಾಯಗಳೇ. ಹಾಗಾಗಿ ತಿಳಿವಳಿಕೆಯ ಕೊರತೆಗಳು ಕತೆಗಳನ್ನು ಕ್ಲಿಷ್ಟಗೊಳಿಸುತ್ತವೆ. ತಲೆಬಾಲ ಅರ್ಥವಾಗದೇ ಹೋಗಬಹುದು. ಏಕೆಂದರೆ ಇಂದಿನ ಸಮಾಜದ ಕನ್ನಡಕದಿಂದ ನೋಡಲಾಗುವುದಿಲ್ಲವಲ್ಲ!

ಈ ಲೇಖನದ ಉದ್ದೇಶ ಅವರ ಕತೆಗಳಲ್ಲಿರುವ ಅಂಶಗಳನ್ನು ಚರ್ಚಿಸುವುದಾಗಲಿ, ವಿಷಯಗಳನ್ನು ಮುಂದಿಡುವುದಾಗಲಿ ಅಲ್ಲ. ಬರಿದೇ ಪ್ರವೇಶಿಕೆಯನ್ನು ಒದಗಿಸುವುದಕ್ಕೆ. ಕತೆಗಳ ನಾಟಕೀಯತೆಯನ್ನು ಊಹಿತಸತ್ಯ (ಹೈಪೋತಿಸೀಸ್) ರೀತಿಯಲ್ಲಿ ಗ್ರಹಿಸಬೇಕಾಗಿರುವ ಮುನ್ನೆಚ್ಚರಿಕೆಯನ್ನು ಹೊಂದುವುದಕ್ಕೆ.

ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ಕತೆಗಳ ರೂಪದ ಈ ಪುಸ್ತಕ ನವಕರ್ನಾಟಕದಲ್ಲಿ ಸಿಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...