Homeಪುಸ್ತಕ ವಿಮರ್ಶೆವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

ವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

- Advertisement -
- Advertisement -

“ಮಾನವ ಸಮಾಜ ಒಮ್ಮೆಲೇ ಇಂದಿನ ಪರಿಸ್ಥಿತಿಗೆ ತಲುಪಲಿಲ್ಲ. ಈ ಸ್ಥಿತಿಗೆ ತಲುಪಬೇಕಾದರೆ ಅದು ಅನೇಕಾನೇಕ ಸಂಘರ್ಷಗಳನ್ನು ಎದುರಿಸಬೇಕಾಯಿತು” ಎಂದೇ ಪ್ರಾರಂಭವಾಗುವ ಈ ಕೃತಿ ಕತೆಗಳೆಂದು ಕರೆಯಿಸಿಕೊಳ್ಳುವ ಮಾನವ ಸಮಾಜದ ಇತಿಹಾಸದ ಭಿತ್ತಿ ಚಿತ್ರಗಳು.

ಇಪ್ಪತ್ತು ಕತೆಗಳ ಸಂಕಲನ.
ಇಂದು ನಾವು ಕಾಣುತ್ತಿರುವಂತೆ ಸಮಾಜವಿರಲಿ, ಕುಟುಂಬವೂ ಇರಲಿಲ್ಲ ಮತ್ತು ಕುಟುಂಬದ ಸದಸ್ಯರ ಸಂಬಂಧವೂ ಇರಲಿಲ್ಲ. ತಾಯಿ, ಮಗು, ಸೋದರ, ಸೋದರಿಯರ ಇಂದಿನ ಶಿಷ್ಟ ಸಂಬಂಧದ ಕನ್ನಡಕದಿಂದ ಅಂದಿನ ನಮ್ಮ ಪೂರ್ವಜರ ನೈಸರ್ಗಿಕ ವರ್ತನೆಗಳನ್ನು ನೋಡಿದರೆ, ಅಶ್ಲೀಲವೆಂದೋ, ಅಕ್ರಮವೆಂದೋ, ಅಸಭ್ಯವೆಂದೋ ತುಚ್ಛೀಕರಿಸಬಹುದು. ಆದರೆ ಸಮಾಜದ ವ್ಯವಸ್ಥೆಯು ವಿಕಸಿತವಾದಂತೆ, ಕುಟುಂಬವೂ, ಅದರ ಸದಸ್ಯರ ಸಂಬಂಧಗಳ ರೂಪುರೇಷೆಗಳೂ ವಿಕಸಿತಗೊಳ್ಳುತ್ತಾ ಬಂತು ಎಂಬುದನ್ನು ನಿರಾಕರಿಸಲಾಗದು. ಮಾನವನ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳ ಸಿಕ್ಕ ತುಣುಕುಗಳನ್ನು ಕತೆಗಳ ರೂಪದಲ್ಲಿ ಕಟ್ಟಿಕೊಡುವ ಸಾಂಕೃತ್ಯಾಯನ ಬಹುದೊಡ್ಡ ಪಂಡಿತರು.

ತುಂಡುತುಂಡಾಗಿ ಸಿಕ್ಕಿರುವ ಇತಿಹಾಸದ ದಾಖಲೆಗಳನ್ನು ಜೋಡಿಸುವ ಕೊಂಡಿಗಳನ್ನು ಕಲ್ಪಿಸಿರುವ ಕತೆಗಾರನ ಕಲ್ಪನಾಶಕ್ತಿಗಿಂತ ಕಾಣದಿರುವ ಇತಿಹಾಸದ ಗ್ರಹಿಕೆ ತೋರುತ್ತದೆ.

ನಿಶಾ, ಮೊದಲ ಕತೆ. ವೋಲ್ಗಾ ನದಿಯ ತಟದಲ್ಲಿ ಕ್ರಿ.ಪೂ.600ರ ಜೀವನವನ್ನು ತೆರೆದಿಡುತ್ತದೆ.

ಹಾಗೆಯೇ ವೇದ, ಬ್ರಾಹ್ಮಣ, ಉಪನಿಷತ್ತುಗಳನ್ನೆಲ್ಲಾ ಜಾಲಾಡುವ ಸಾಂಕೃತ್ಯಾಯನ ವಿವಿಧ ಭೂಭಾಗಗಳಲ್ಲಿ ಮಾನವನ ವಿವಿಧ ಜನಾಂಗಗಳು ಬಾಳಿರುವ ರೀತಿಗಳನ್ನು, ಎದುರಿಸಿರುವ ಸಂಘರ್ಷಗಳನ್ನು ಮತ್ತು ಅಳವಡಿಸಿಕೊಂಡಿರುವ ವ್ಯವಸ್ಥೆಗಳನ್ನು ಕಥಿಸುತ್ತಾರೆ.
1942ರಲ್ಲಿ ಸಾಂಕೃತ್ಯಾಯನ ಬರೆದ ಈ ಕೃತಿಗೆ ಸನಾತನಿಗಳು ಕೆಂಡಕಾರಿದ್ದರು. ಬಹುವಾಗಿ ನಿಂದಿಸಿದ್ದರು. ಆದರೆ ಈ ಕೃತಿಯನ್ನು ಸಮರ್ಥಿಸಲು ಅಥವಾ ಖಂಡಿಸಲು ಯಾರಿಗಾದರೂ ಆಳವಾದ ಅಧ್ಯಯನವಿರಬೇಕು. ಏಕೆಂದರೆ ಇವರ ಅಗಾಧ ಓದಿನ ಹಿನ್ನೆಲೆ ಮತ್ತು ಅಧ್ಯಯನ ವ್ಯಾಪ್ತಿಯನ್ನು ನಗ್ನವಾದಿ ವೇದನಿಂದಕ ಎಂದು ದೂಷಿಸಿದರೆ ಅದೊಂದು ಪೂರ್ವಾಗ್ರಹ ಪೀಡಿತ ಮನಸ್ಕರ ಅಸಹನೆಯ ಪ್ರದರ್ಶನವಷ್ಟೇ ಆಗುತ್ತದೆ.

ಬರಿಯ ಗ್ರಂಥಾಧ್ಯಯನ ಮಾತ್ರವಲ್ಲದೇ ತಾವೇ ಅಲೆದಾಟದಲ್ಲಿ ತೊಡಗಿದ್ದರ ಪರಿಣಾಮ ಜೀವನವಿಧಾನ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳು ವೋಲ್ಗಾ ಗಂಗಾದಲ್ಲಿ ಹರಳುಗಟ್ಟಿದೆ. ಇತಿಹಾಸ, ತತ್ವಶಾಸ್ತ್ರ, ವಿಜ್ಞಾನ, ರಾಜನೀತಿ, ಸಂಸ್ಕೃತಿ, ಸಮಾಜ ವಿಜ್ಞಾನ ಎಲ್ಲವೂ ಕತೆಗಳ ತಳಪಾಯಗಳೇ. ಹಾಗಾಗಿ ತಿಳಿವಳಿಕೆಯ ಕೊರತೆಗಳು ಕತೆಗಳನ್ನು ಕ್ಲಿಷ್ಟಗೊಳಿಸುತ್ತವೆ. ತಲೆಬಾಲ ಅರ್ಥವಾಗದೇ ಹೋಗಬಹುದು. ಏಕೆಂದರೆ ಇಂದಿನ ಸಮಾಜದ ಕನ್ನಡಕದಿಂದ ನೋಡಲಾಗುವುದಿಲ್ಲವಲ್ಲ!

ಈ ಲೇಖನದ ಉದ್ದೇಶ ಅವರ ಕತೆಗಳಲ್ಲಿರುವ ಅಂಶಗಳನ್ನು ಚರ್ಚಿಸುವುದಾಗಲಿ, ವಿಷಯಗಳನ್ನು ಮುಂದಿಡುವುದಾಗಲಿ ಅಲ್ಲ. ಬರಿದೇ ಪ್ರವೇಶಿಕೆಯನ್ನು ಒದಗಿಸುವುದಕ್ಕೆ. ಕತೆಗಳ ನಾಟಕೀಯತೆಯನ್ನು ಊಹಿತಸತ್ಯ (ಹೈಪೋತಿಸೀಸ್) ರೀತಿಯಲ್ಲಿ ಗ್ರಹಿಸಬೇಕಾಗಿರುವ ಮುನ್ನೆಚ್ಚರಿಕೆಯನ್ನು ಹೊಂದುವುದಕ್ಕೆ.

ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ಕತೆಗಳ ರೂಪದ ಈ ಪುಸ್ತಕ ನವಕರ್ನಾಟಕದಲ್ಲಿ ಸಿಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...