Homeಮುಖಪುಟ'ಯುದ್ಧ ಮತ್ತು ಮಕ್ಕಳು': ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

‘ಯುದ್ಧ ಮತ್ತು ಮಕ್ಕಳು’: ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ.

- Advertisement -
- Advertisement -

ಎರಡನೇ ವಿಶ್ವಯುದ್ಧದ ಕಾಲದಲ್ಲಿ ಆ್ಯನಿ ಫ್ರಾಯ್ಡ್ (ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮಗಳು) ಮತ್ತು ಅವಳ ಆತ್ಮೀಯರಾದ ಡೊರೋಥಿ ಬರ್ಲಿಂಗ್ ಹ್ಯಾಮ್ ಇಬ್ಬರೂ ಕೂಡಿ ತಮ್ಮ ಸಾಂದರ್ಭಿಕ ಅಧ್ಯಯನದ ಫಲವಾಗಿ ‘ವಾರ್ ಆ್ಯಂಡ್ ಚಿಲ್ಡ್ರನ್’ ಪ್ರಕಟಿಸಿದರು. ನಾಜೀ ಜರ್ಮನಿಯ ಆಕ್ರಮಣಕ್ಕೆ ತುತ್ತಾದ ಇಂಗ್ಲೆಂಡಿನ ಮಕ್ಕಳು ತಮ್ಮ ಪೋಷಕರಿಂದ ಅಗಲಬೇಕಾದ ವ್ಯಥೆಯ ವಾಸ್ತವ ದಾಖಲೆ ಅದು. ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಯುದ್ಧ ಕಾಲದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತತ್ಕಾಲದ ಆಶ್ರಯವನ್ನು ನೀಡುವಂತಹ ವಾರ್ ನರ್ಸರಿಗಳಲ್ಲಿ ಕೆಲಸ ಮಾಡಿದ್ದರು. ಈ ಪುಸ್ತಕಕ್ಕೆ ಆ ಅನುಭವದ ಹಿನ್ನೆಲೆ ಇತ್ತು.

1936ರಲ್ಲಿ ಸ್ಪೇನ್ ದೇಶದ ಆಕ್ರಮಣಕ್ಕೆ ಮಕ್ಕಳು ತುತ್ತಾದಾಗಿನಿಂದ ಅಂತಹ ಮಹಾಯುದ್ಧಗಳ ಕಾಲದಲ್ಲಿ ಮಕ್ಕಳಿಗೆ ಪೋಷಣೆ ಮಾಡುವ ಸಾಕು ತಂದೆ ತಾಯಿಗಳನ್ನು ಗುರುತಿಸುವ ಮತ್ತು ಅವರಿಗೆ ಯೋಜನೆಗಳನ್ನು ರೂಪಿಸುವಂತಹ ಕೆಲಸಗಳು ನಡೆಯುತ್ತಿತ್ತು. ನಂತರ ಅದೇ ರೀತಿಯಲ್ಲಿ ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಫ್ರೆಂಚ್, ಪೋಲಿಶ್, ಡಚ್ ಮತ್ತು ಬೆಲ್ಜಿಯನ್ ಮಕ್ಕಳ ಆರೈಕೆಗಾಗಿ ಫ್ರಾನ್ಸಿನಲ್ಲಿ ಕೆಲಸ ಮಾಡಿದರು. ಫ್ರಾನ್ಸಿನ ಪತನದ ನಂತರ ಅದೇ ಬಗೆಯ ಯುದ್ಧ ಕಾಲದ ಶಿಶುವಿಹಾರದ ಕೆಲಸವನ್ನು ಇಂಗ್ಲೆಂಡಿನಲ್ಲಿ ಮಾಡತೊಡಗಿದರು.

ವಾರ್ ನರ್ಸರಿಯಲ್ಲಿ 20,000ಕ್ಕೂ ಹೆಚ್ಚಿನ ಮಕ್ಕಳನ್ನು ಅಧ್ಯಯನ ಮಾಡಲಾಯಿತು. ಆ್ಯನಿಯ ಸಿಬ್ಬಂದಿಗಳಿಗೆಲ್ಲಾ ಇದೇ ಕೆಲಸ. ಆ್ಯನಿ ಮತ್ತು ಡೊರೋಥಿ ಇಂಗ್ಲೆಂಡಿನಲ್ಲಿ ಮೂರು ವಾರ್ ನರ್ಸರಿಗಳಿಗೆ ಮತ್ತು ಸಾಕು ಪೋಷಕರ ಯೋಜನೆಗೆ ನಿರ್ದೇಶಕರಾಗಿದ್ದರು.

ಯುದ್ಧ ಮತ್ತು ಮಕ್ಕಳು: ಈ ಕೃತಿ ಮನಶಾಸ್ತ್ರದಲ್ಲಿ ತುಂಬಾ ಗಮನೀಯವಾದ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಯುದ್ಧದ ಸಂಕಷ್ಟದಲ್ಲಿ ನೊಂದ ಮಕ್ಕಳ ಕಥನವನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಇದರಲ್ಲಿ ದಾಖಲಿಸಲಾಗಿದೆ. ಮಕ್ಕಳ ಮೇಲಾಗುವ ಆಧುನಿಕ ಕಾಲದ ಯುದ್ಧದ ಪ್ರಭಾವಗಳನ್ನು ಮನಶಾಸ್ತ್ರೀಯ ಶಿಸ್ತಿನಲ್ಲಿ ಅಧ್ಯಯನ ಮಾಡಲಾಗಿದೆ.

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ. ಹೂವಿನಂತೆ ಮನಸ್ಸು ಮತ್ತು ಮಾನುಷ ಸಂಬಂಧಗಳು ಅರಳುವ ಬದಲು ಕೆರಳುತ್ತವೆ ಮತ್ತು ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಯುದ್ಧದ ನಕಾರಾತ್ಮಕವಾದ ಪರಿಣಾಮವು, ನೇರವಾಗಿ ಅದರಲ್ಲಿ ಭಾಗಿಯಾಗುವವರ ಮೇಲಾಗುವುದಕ್ಕಿಂತ, ಸಮಾಜದ ಸೂಕ್ಷ್ಮ ಸಂವೇದನೆಯ ಸಮೂಹವಾದ ಮಹಿಳೆಯರ ಮತ್ತು ಮಕ್ಕಳ ಮೇಲೆ ಬಹಳ ಆಕ್ರಮಣಕಾರಿಯಾಗಿರುತ್ತದೆ. ಯಾವುದೇ ಸಮಾಜದ ಸಂತತಿ ಅಥವಾ ಪೀಳಿಗೆಯ ಸೃಷ್ಟಿ, ಉಳಿಕೆ, ಬಾಳಿಕೆ ಮತ್ತು ಮುಂದುವರಿಕೆಯು ಮಹಿಳೆಯರು ಮತ್ತು ಮಕ್ಕಳ ಮೇಲೆ ಅವಲಂಬಿತವಾಗಿರುವುದರಿಂದ ಅವರು ಯುದ್ಧದ ಪರಿಣಾಮವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಗಂಭೀರವಾಗಿ ಗಮನಿಸಬೇಕು ಎಂದು ಆ್ಯನಿ ಫ್ರಾಯ್ಡ್ ಒತ್ತಿ ಹೇಳುತ್ತಾರೆ. ಹಾಗಾಗಿ ಸಮಾಜದಲ್ಲಿ ಸೂಕ್ಷ್ಮವಾಗಿರುವ ಈ ಸಮೂಹದ ಭದ್ರತೆಗೆ ಮತ್ತು ಅವರ ಅಗತ್ಯಗಳಿಗೆ ಕೆಲಸ ಮಾಡುವವರ ಅವಶ್ಯಕತೆ ಯುದ್ಧಕಾಲದಲ್ಲಿ ಹೆಚ್ಚಿರುತ್ತದೆ.

ಯುದ್ಧ ಕಾಲದಲ್ಲಿ ತಂದೆ ಇಲ್ಲದ ಮಕ್ಕಳು ಹಾಸುಗೆ ಹಿಡಿದಿರುವ ತಾಯಂದಿರನ್ನು ನೋಡಿಕೊಳ್ಳಬೇಕಾದ ಅಗತ್ಯಗಳು ಬಂದಿದ್ದರಿಂದ ಅವರ ಮಾನಸಿಕ ಒತ್ತಡವು ಅನೇಕ ಕಾರಣಗಳಿಂದ ಹೆಚ್ಚಾಗುತ್ತಿತ್ತಿತ್ತು. ಪುನರಾವರ್ತಿತ ವೈಮಾನಿಕ ದಾಳಿಗಳಿರಬಹುದು, ಆರ್ಥಿಕ ಮುಗ್ಗಟ್ಟು, ಸಂಪರ್ಕ ಸಾಧಿಸಲಾಗದಂತಹ ಸಮಸ್ಯೆ, ಆಹಾರ ಮತ್ತು ವೈದ್ಯಕೀಯ ಅಗತ್ಯಗಳ ಕೊರತೆ, ಇತ್ಯಾದಿ ಸಮಸ್ಯೆಗಳು ಹಾಗೂ

ಆತ್ಮೀಯರನ್ನು ಮತ್ತು ಎಳೆವಯದಲ್ಲಿ ಆಧಾರವಾಗಿರುವವರನ್ನು ಕಳೆದುಕೊಳ್ಳುವ ಮಕ್ಕಳಿಗೆ ಮಾನಸಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಆಘಾತವನ್ನು ಉಂಟುಮಾಡುತ್ತಿತ್ತು.

ಆ್ಯನಿ ಹೇಳುವುದೇನೆಂದರೆ, ಯುದ್ಧ ಕಾಲದಲ್ಲಿ ಮಕ್ಕಳಿಗೆ ಉಂಟಾಗುವ ಆತಂಕ, ಒತ್ತಡ, ಸಮಸ್ಯೆ ಇತ್ಯಾದಿಗಳನ್ನು ವಿಶ್ಲೇಷಣೆ ಮಾಡುವ ಬದಲು ಮಕ್ಕಳ ಅಭಿವೃದ್ಧಿಗೆ, ಅವರ ಅಗತ್ಯಗಳ ಪೂರೈಗೆಗೆ ಮತ್ತು ಅವರ ರಕ್ಷಣೆಗೆ ಸತತವಾಗಿ ಕೆಲಸವನ್ನು ಮಾಡುವ, ಆ ಧ್ಯೇಯೋದ್ದೇಶಕ್ಕೆ ಬದ್ಧವಾಗಿರುವಂತಹ ಶಿಶು ಮತ್ತು ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ಕೊಡಬೇಕು. ಅಥವಾ ಅಸ್ತಿತ್ವದಲ್ಲಿರುವ ಅಂತಹ ಕೇಂದ್ರಗಳ ಬಲ ಸಂವರ್ಧನೆಗೆ ಮುಂದಾಗಬೇಕು. ಅದಕ್ಕೆ ಹಣದ ಅಗತ್ಯವಿರುತ್ತದೆ. ಅದರ ಜೊತೆಗೆ ಬಹಳ ಮುಖ್ಯವಾಗಿ ಸೂಕ್ಷ್ಮ ಸಂವೇದನೆಯುಳ್ಳ, ವೃತ್ತಿಪರತೆಯುಳ್ಳ, ಸೂಕ್ಷ್ಮಗ್ರಾಹಿಗಳಾದ, ವೃತ್ತಿಯಲ್ಲಿ ಕೌಶಲ್ಯವುಳ್ಳಂತಹ ನಿಪುಣರು, ಮಕ್ಕಳನ್ನು ಪ್ರೀತಿಸುವವರು ಬೇಕಾಗಿರುತ್ತಾರೆ. ಸಮಾಜದ ವ್ಯವಸ್ಥೆಯಲ್ಲಿ ಎಂತಹುದೇ ಏರುಪೇರುಗಳಾದರೂ ಯಾವುದೇ ಕಾರಣಕ್ಕೂ ಮಕ್ಕಳ ಸಮೂಹವನ್ನು ನಿರ್ಲಕ್ಷಿಸಬಾರದು.

ನಿಗದಿತ ಅಥವಾ ಸೀಮಿತವಾದ ಆರ್ಥಿಕ ಮತ್ತು ಇತರ ಸಂಪನ್ಮೂಲಗಳಲ್ಲಿ ಇಂತಹ ಕೇಂದ್ರಗಳನ್ನು ಹೇಗೆ ನಿಭಾಯಿಸಬಹುದೆಂಬ ಕೌಶಲ್ಯವನ್ನೂ ಅಧ್ಯಯನ ಸೂಚಿಸುತ್ತದೆ. ಇವರ ಅಧ್ಯಯನದ ವ್ಯಾಪ್ತಿಗೆ ಒಳಪಟ್ಟ ಮಕ್ಕಳು ಒಂದು ವಾರದ ಮಗುವಿನಿಂದ ಹಿಡಿದು ಹದಿನಾಲ್ಕು ವರ್ಷದವರೆಗೂ ಇದ್ದರು.

ಓರ್ವ ದಾದಿ ಶೂ ರಿಪೇರಿ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳುವುದರಿಂದ ಹಿಡಿದು, ಮಗುವೊಂದು ಗೊಂಬೆಗಳನ್ನು ಮಾಡುವ ಯೋಜನೆಯವರೆಗೂ ಸಾಮೂಹಿಕ ಚಟುವಟಿಕೆಗಳು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಆರೋಗ್ಯ ಕಾರ್ಯಕ್ರಮ, ರೋಗ ನಿರೋಧಕ ಕಾರ್ಯಕ್ರಮಗಳು, ತರಕಾರಿಗಳ ತೋಟ, ದಾಖಲೆಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ, ಸಾರಿಗೆ ಮತ್ತು ಸಂಪರ್ಕ; ಇಂತಹವನ್ನೆಲ್ಲಾ ರೂಢಿಸುವುದರ ಜೊತೆಗೆ ವ್ಯಕ್ತಿಯು ಸಾಮಾಜಿಕವಾಗಿ ಬೆರೆಯುವ, ಸಮುದಾಯದ ಸೇವೆಯನ್ನು ತನ್ನ ಏಳ್ಗೆಗೂ, ತನ್ನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಸಾಮುದಾಯಕ ಬೆಳವಣಿಗೆಗೆ ಸಲ್ಲಿಸುವುದನ್ನೂ ಕೂಡಾ ರೂಢಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಸಂಪೂರ್ಣ ಅನಾಥರಾಗಿರುವ ಮಕ್ಕಳನ್ನು ಒಳಗೊಳ್ಳುವಂತಹ ಕುಟುಂಬಗಳನ್ನು ರಚಿಸುವುದೂ ಕೂಡಾ ಅಲ್ಲಾಗಿತ್ತು. ಸಮಾಜದಲ್ಲಿ ಏನೇ ಏರುಪೇರಾದರೂ ತನ್ನನ್ನು ತಾನು ಮಾನಸಿಕವಾಗಿ, ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಗುಣ ಪಡಿಸಿಕೊಳ್ಳುವ ಮತ್ತು ಸಶಕ್ತನನ್ನಾಗಿಸಿಕೊಳ್ಳುವ ಕುಶಲತೆಗೆ ಆ ಕೇಂದ್ರಗಳಲ್ಲಿ ಪ್ರಾಶಸ್ತ್ಯ ಕೊಡಲಾಗಿತ್ತು.

ಹಾಗಾಗಿ ಈ ಕೃತಿ ಆಗಿನ ಯುದ್ಧದ ಸಮಯದ್ದಾದರೂ ಅನೇಕ ವಿಷಯಗಳಲ್ಲಿ ಪ್ರಸ್ತುತಕ್ಕೂ ಅನ್ವಯವಾಗುತ್ತದೆ. ಬಹಳ ಮುಖ್ಯವಾಗಿ ಇದನ್ನು ಕೇಸ್ ಸ್ಟಡಿಗಳನ್ನು ಆಧರಿಸಿ ಬರೆದಿದ್ದು, ಮಗುವು ವ್ಯಕ್ತಿಯಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಅಗತ್ಯವಾದ ಮನಶಾಸ್ತ್ರೀಯ ಒಳನೋಟಗಳನ್ನು, ತಾತ್ವಿಕವಾದ ಸೂಕ್ಷ್ಮ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತದೆ.

  • ಯೋಗೇಶ್ ಮಾಸ್ಟರ್

ಇದನ್ನೂ ಓದಿ: ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...