Homeಮುಖಪುಟ'ಯುದ್ಧ ಮತ್ತು ಮಕ್ಕಳು': ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

‘ಯುದ್ಧ ಮತ್ತು ಮಕ್ಕಳು’: ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ.

- Advertisement -
- Advertisement -

ಎರಡನೇ ವಿಶ್ವಯುದ್ಧದ ಕಾಲದಲ್ಲಿ ಆ್ಯನಿ ಫ್ರಾಯ್ಡ್ (ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮಗಳು) ಮತ್ತು ಅವಳ ಆತ್ಮೀಯರಾದ ಡೊರೋಥಿ ಬರ್ಲಿಂಗ್ ಹ್ಯಾಮ್ ಇಬ್ಬರೂ ಕೂಡಿ ತಮ್ಮ ಸಾಂದರ್ಭಿಕ ಅಧ್ಯಯನದ ಫಲವಾಗಿ ‘ವಾರ್ ಆ್ಯಂಡ್ ಚಿಲ್ಡ್ರನ್’ ಪ್ರಕಟಿಸಿದರು. ನಾಜೀ ಜರ್ಮನಿಯ ಆಕ್ರಮಣಕ್ಕೆ ತುತ್ತಾದ ಇಂಗ್ಲೆಂಡಿನ ಮಕ್ಕಳು ತಮ್ಮ ಪೋಷಕರಿಂದ ಅಗಲಬೇಕಾದ ವ್ಯಥೆಯ ವಾಸ್ತವ ದಾಖಲೆ ಅದು. ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಯುದ್ಧ ಕಾಲದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತತ್ಕಾಲದ ಆಶ್ರಯವನ್ನು ನೀಡುವಂತಹ ವಾರ್ ನರ್ಸರಿಗಳಲ್ಲಿ ಕೆಲಸ ಮಾಡಿದ್ದರು. ಈ ಪುಸ್ತಕಕ್ಕೆ ಆ ಅನುಭವದ ಹಿನ್ನೆಲೆ ಇತ್ತು.

1936ರಲ್ಲಿ ಸ್ಪೇನ್ ದೇಶದ ಆಕ್ರಮಣಕ್ಕೆ ಮಕ್ಕಳು ತುತ್ತಾದಾಗಿನಿಂದ ಅಂತಹ ಮಹಾಯುದ್ಧಗಳ ಕಾಲದಲ್ಲಿ ಮಕ್ಕಳಿಗೆ ಪೋಷಣೆ ಮಾಡುವ ಸಾಕು ತಂದೆ ತಾಯಿಗಳನ್ನು ಗುರುತಿಸುವ ಮತ್ತು ಅವರಿಗೆ ಯೋಜನೆಗಳನ್ನು ರೂಪಿಸುವಂತಹ ಕೆಲಸಗಳು ನಡೆಯುತ್ತಿತ್ತು. ನಂತರ ಅದೇ ರೀತಿಯಲ್ಲಿ ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಫ್ರೆಂಚ್, ಪೋಲಿಶ್, ಡಚ್ ಮತ್ತು ಬೆಲ್ಜಿಯನ್ ಮಕ್ಕಳ ಆರೈಕೆಗಾಗಿ ಫ್ರಾನ್ಸಿನಲ್ಲಿ ಕೆಲಸ ಮಾಡಿದರು. ಫ್ರಾನ್ಸಿನ ಪತನದ ನಂತರ ಅದೇ ಬಗೆಯ ಯುದ್ಧ ಕಾಲದ ಶಿಶುವಿಹಾರದ ಕೆಲಸವನ್ನು ಇಂಗ್ಲೆಂಡಿನಲ್ಲಿ ಮಾಡತೊಡಗಿದರು.

ವಾರ್ ನರ್ಸರಿಯಲ್ಲಿ 20,000ಕ್ಕೂ ಹೆಚ್ಚಿನ ಮಕ್ಕಳನ್ನು ಅಧ್ಯಯನ ಮಾಡಲಾಯಿತು. ಆ್ಯನಿಯ ಸಿಬ್ಬಂದಿಗಳಿಗೆಲ್ಲಾ ಇದೇ ಕೆಲಸ. ಆ್ಯನಿ ಮತ್ತು ಡೊರೋಥಿ ಇಂಗ್ಲೆಂಡಿನಲ್ಲಿ ಮೂರು ವಾರ್ ನರ್ಸರಿಗಳಿಗೆ ಮತ್ತು ಸಾಕು ಪೋಷಕರ ಯೋಜನೆಗೆ ನಿರ್ದೇಶಕರಾಗಿದ್ದರು.

ಯುದ್ಧ ಮತ್ತು ಮಕ್ಕಳು: ಈ ಕೃತಿ ಮನಶಾಸ್ತ್ರದಲ್ಲಿ ತುಂಬಾ ಗಮನೀಯವಾದ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಯುದ್ಧದ ಸಂಕಷ್ಟದಲ್ಲಿ ನೊಂದ ಮಕ್ಕಳ ಕಥನವನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಇದರಲ್ಲಿ ದಾಖಲಿಸಲಾಗಿದೆ. ಮಕ್ಕಳ ಮೇಲಾಗುವ ಆಧುನಿಕ ಕಾಲದ ಯುದ್ಧದ ಪ್ರಭಾವಗಳನ್ನು ಮನಶಾಸ್ತ್ರೀಯ ಶಿಸ್ತಿನಲ್ಲಿ ಅಧ್ಯಯನ ಮಾಡಲಾಗಿದೆ.

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ. ಹೂವಿನಂತೆ ಮನಸ್ಸು ಮತ್ತು ಮಾನುಷ ಸಂಬಂಧಗಳು ಅರಳುವ ಬದಲು ಕೆರಳುತ್ತವೆ ಮತ್ತು ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಯುದ್ಧದ ನಕಾರಾತ್ಮಕವಾದ ಪರಿಣಾಮವು, ನೇರವಾಗಿ ಅದರಲ್ಲಿ ಭಾಗಿಯಾಗುವವರ ಮೇಲಾಗುವುದಕ್ಕಿಂತ, ಸಮಾಜದ ಸೂಕ್ಷ್ಮ ಸಂವೇದನೆಯ ಸಮೂಹವಾದ ಮಹಿಳೆಯರ ಮತ್ತು ಮಕ್ಕಳ ಮೇಲೆ ಬಹಳ ಆಕ್ರಮಣಕಾರಿಯಾಗಿರುತ್ತದೆ. ಯಾವುದೇ ಸಮಾಜದ ಸಂತತಿ ಅಥವಾ ಪೀಳಿಗೆಯ ಸೃಷ್ಟಿ, ಉಳಿಕೆ, ಬಾಳಿಕೆ ಮತ್ತು ಮುಂದುವರಿಕೆಯು ಮಹಿಳೆಯರು ಮತ್ತು ಮಕ್ಕಳ ಮೇಲೆ ಅವಲಂಬಿತವಾಗಿರುವುದರಿಂದ ಅವರು ಯುದ್ಧದ ಪರಿಣಾಮವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಗಂಭೀರವಾಗಿ ಗಮನಿಸಬೇಕು ಎಂದು ಆ್ಯನಿ ಫ್ರಾಯ್ಡ್ ಒತ್ತಿ ಹೇಳುತ್ತಾರೆ. ಹಾಗಾಗಿ ಸಮಾಜದಲ್ಲಿ ಸೂಕ್ಷ್ಮವಾಗಿರುವ ಈ ಸಮೂಹದ ಭದ್ರತೆಗೆ ಮತ್ತು ಅವರ ಅಗತ್ಯಗಳಿಗೆ ಕೆಲಸ ಮಾಡುವವರ ಅವಶ್ಯಕತೆ ಯುದ್ಧಕಾಲದಲ್ಲಿ ಹೆಚ್ಚಿರುತ್ತದೆ.

ಯುದ್ಧ ಕಾಲದಲ್ಲಿ ತಂದೆ ಇಲ್ಲದ ಮಕ್ಕಳು ಹಾಸುಗೆ ಹಿಡಿದಿರುವ ತಾಯಂದಿರನ್ನು ನೋಡಿಕೊಳ್ಳಬೇಕಾದ ಅಗತ್ಯಗಳು ಬಂದಿದ್ದರಿಂದ ಅವರ ಮಾನಸಿಕ ಒತ್ತಡವು ಅನೇಕ ಕಾರಣಗಳಿಂದ ಹೆಚ್ಚಾಗುತ್ತಿತ್ತಿತ್ತು. ಪುನರಾವರ್ತಿತ ವೈಮಾನಿಕ ದಾಳಿಗಳಿರಬಹುದು, ಆರ್ಥಿಕ ಮುಗ್ಗಟ್ಟು, ಸಂಪರ್ಕ ಸಾಧಿಸಲಾಗದಂತಹ ಸಮಸ್ಯೆ, ಆಹಾರ ಮತ್ತು ವೈದ್ಯಕೀಯ ಅಗತ್ಯಗಳ ಕೊರತೆ, ಇತ್ಯಾದಿ ಸಮಸ್ಯೆಗಳು ಹಾಗೂ

ಆತ್ಮೀಯರನ್ನು ಮತ್ತು ಎಳೆವಯದಲ್ಲಿ ಆಧಾರವಾಗಿರುವವರನ್ನು ಕಳೆದುಕೊಳ್ಳುವ ಮಕ್ಕಳಿಗೆ ಮಾನಸಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಆಘಾತವನ್ನು ಉಂಟುಮಾಡುತ್ತಿತ್ತು.

ಆ್ಯನಿ ಹೇಳುವುದೇನೆಂದರೆ, ಯುದ್ಧ ಕಾಲದಲ್ಲಿ ಮಕ್ಕಳಿಗೆ ಉಂಟಾಗುವ ಆತಂಕ, ಒತ್ತಡ, ಸಮಸ್ಯೆ ಇತ್ಯಾದಿಗಳನ್ನು ವಿಶ್ಲೇಷಣೆ ಮಾಡುವ ಬದಲು ಮಕ್ಕಳ ಅಭಿವೃದ್ಧಿಗೆ, ಅವರ ಅಗತ್ಯಗಳ ಪೂರೈಗೆಗೆ ಮತ್ತು ಅವರ ರಕ್ಷಣೆಗೆ ಸತತವಾಗಿ ಕೆಲಸವನ್ನು ಮಾಡುವ, ಆ ಧ್ಯೇಯೋದ್ದೇಶಕ್ಕೆ ಬದ್ಧವಾಗಿರುವಂತಹ ಶಿಶು ಮತ್ತು ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ಕೊಡಬೇಕು. ಅಥವಾ ಅಸ್ತಿತ್ವದಲ್ಲಿರುವ ಅಂತಹ ಕೇಂದ್ರಗಳ ಬಲ ಸಂವರ್ಧನೆಗೆ ಮುಂದಾಗಬೇಕು. ಅದಕ್ಕೆ ಹಣದ ಅಗತ್ಯವಿರುತ್ತದೆ. ಅದರ ಜೊತೆಗೆ ಬಹಳ ಮುಖ್ಯವಾಗಿ ಸೂಕ್ಷ್ಮ ಸಂವೇದನೆಯುಳ್ಳ, ವೃತ್ತಿಪರತೆಯುಳ್ಳ, ಸೂಕ್ಷ್ಮಗ್ರಾಹಿಗಳಾದ, ವೃತ್ತಿಯಲ್ಲಿ ಕೌಶಲ್ಯವುಳ್ಳಂತಹ ನಿಪುಣರು, ಮಕ್ಕಳನ್ನು ಪ್ರೀತಿಸುವವರು ಬೇಕಾಗಿರುತ್ತಾರೆ. ಸಮಾಜದ ವ್ಯವಸ್ಥೆಯಲ್ಲಿ ಎಂತಹುದೇ ಏರುಪೇರುಗಳಾದರೂ ಯಾವುದೇ ಕಾರಣಕ್ಕೂ ಮಕ್ಕಳ ಸಮೂಹವನ್ನು ನಿರ್ಲಕ್ಷಿಸಬಾರದು.

ನಿಗದಿತ ಅಥವಾ ಸೀಮಿತವಾದ ಆರ್ಥಿಕ ಮತ್ತು ಇತರ ಸಂಪನ್ಮೂಲಗಳಲ್ಲಿ ಇಂತಹ ಕೇಂದ್ರಗಳನ್ನು ಹೇಗೆ ನಿಭಾಯಿಸಬಹುದೆಂಬ ಕೌಶಲ್ಯವನ್ನೂ ಅಧ್ಯಯನ ಸೂಚಿಸುತ್ತದೆ. ಇವರ ಅಧ್ಯಯನದ ವ್ಯಾಪ್ತಿಗೆ ಒಳಪಟ್ಟ ಮಕ್ಕಳು ಒಂದು ವಾರದ ಮಗುವಿನಿಂದ ಹಿಡಿದು ಹದಿನಾಲ್ಕು ವರ್ಷದವರೆಗೂ ಇದ್ದರು.

ಓರ್ವ ದಾದಿ ಶೂ ರಿಪೇರಿ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳುವುದರಿಂದ ಹಿಡಿದು, ಮಗುವೊಂದು ಗೊಂಬೆಗಳನ್ನು ಮಾಡುವ ಯೋಜನೆಯವರೆಗೂ ಸಾಮೂಹಿಕ ಚಟುವಟಿಕೆಗಳು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಆರೋಗ್ಯ ಕಾರ್ಯಕ್ರಮ, ರೋಗ ನಿರೋಧಕ ಕಾರ್ಯಕ್ರಮಗಳು, ತರಕಾರಿಗಳ ತೋಟ, ದಾಖಲೆಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ, ಸಾರಿಗೆ ಮತ್ತು ಸಂಪರ್ಕ; ಇಂತಹವನ್ನೆಲ್ಲಾ ರೂಢಿಸುವುದರ ಜೊತೆಗೆ ವ್ಯಕ್ತಿಯು ಸಾಮಾಜಿಕವಾಗಿ ಬೆರೆಯುವ, ಸಮುದಾಯದ ಸೇವೆಯನ್ನು ತನ್ನ ಏಳ್ಗೆಗೂ, ತನ್ನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಸಾಮುದಾಯಕ ಬೆಳವಣಿಗೆಗೆ ಸಲ್ಲಿಸುವುದನ್ನೂ ಕೂಡಾ ರೂಢಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಸಂಪೂರ್ಣ ಅನಾಥರಾಗಿರುವ ಮಕ್ಕಳನ್ನು ಒಳಗೊಳ್ಳುವಂತಹ ಕುಟುಂಬಗಳನ್ನು ರಚಿಸುವುದೂ ಕೂಡಾ ಅಲ್ಲಾಗಿತ್ತು. ಸಮಾಜದಲ್ಲಿ ಏನೇ ಏರುಪೇರಾದರೂ ತನ್ನನ್ನು ತಾನು ಮಾನಸಿಕವಾಗಿ, ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಗುಣ ಪಡಿಸಿಕೊಳ್ಳುವ ಮತ್ತು ಸಶಕ್ತನನ್ನಾಗಿಸಿಕೊಳ್ಳುವ ಕುಶಲತೆಗೆ ಆ ಕೇಂದ್ರಗಳಲ್ಲಿ ಪ್ರಾಶಸ್ತ್ಯ ಕೊಡಲಾಗಿತ್ತು.

ಹಾಗಾಗಿ ಈ ಕೃತಿ ಆಗಿನ ಯುದ್ಧದ ಸಮಯದ್ದಾದರೂ ಅನೇಕ ವಿಷಯಗಳಲ್ಲಿ ಪ್ರಸ್ತುತಕ್ಕೂ ಅನ್ವಯವಾಗುತ್ತದೆ. ಬಹಳ ಮುಖ್ಯವಾಗಿ ಇದನ್ನು ಕೇಸ್ ಸ್ಟಡಿಗಳನ್ನು ಆಧರಿಸಿ ಬರೆದಿದ್ದು, ಮಗುವು ವ್ಯಕ್ತಿಯಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಅಗತ್ಯವಾದ ಮನಶಾಸ್ತ್ರೀಯ ಒಳನೋಟಗಳನ್ನು, ತಾತ್ವಿಕವಾದ ಸೂಕ್ಷ್ಮ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತದೆ.

  • ಯೋಗೇಶ್ ಮಾಸ್ಟರ್

ಇದನ್ನೂ ಓದಿ: ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...