Homeಎಕಾನಮಿಆರ್ಥಿಕ ಕುಸಿತವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಗಂಭೀರ ಸಮಸ್ಯೆಯತ್ತ ನಡೆಯುತ್ತಿದ್ದೇವೆ; ಯೋಗೇಂದ್ರ ಯಾದವ್

ಆರ್ಥಿಕ ಕುಸಿತವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಗಂಭೀರ ಸಮಸ್ಯೆಯತ್ತ ನಡೆಯುತ್ತಿದ್ದೇವೆ; ಯೋಗೇಂದ್ರ ಯಾದವ್

- Advertisement -
- Advertisement -

ನಮ್ಮ ದೇಶ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆಯೇ? ಇನ್ನು ಈ ಪ್ರಶ್ನೆಯನ್ನು ಕೇಳದೇ ಇರಲು ಆಗುವುದಿಲ್ಲ. ಒಂದು ಕಡೆ ಇಡೀ ದೇಶವೇ ಜಮ್ಮು ಮತ್ತು ಕಾಶ್ಮೀರದ ಪ್ರಶ್ನೆಯಲ್ಲಿ ಸಿಲುಕಿಕೊಂಡಿದ್ದರೆ ಅದೇ ಸಮಯದಲ್ಲಿ ದೇಶದ ಅರ್ಥವ್ಯವಸ್ಥೆಯು ನಿಧಾನವಾಗಿ ಕುಸಿಯುತ್ತಿದೆ. ಮೊದಲು ಸಮಸ್ಯೆಯಾಗಿ ಕಂಡುಬಂದಿದ್ದು, ಈಗ ಸಂಕಟದ ರೂಪ ಪಡೆದುಕೊಳ್ಳುತ್ತಿದೆ.

ಇತ್ತೀಚಿಗೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಆರ್ಥಿಕ ಹಿಂಜರಿತದ ಲಕ್ಷಣಗಳು ಚಿಂತಾಜನಕವಾಗಿವೆ, ಇದಕ್ಕೆ ತುರ್ತಾಗಿ ಏನಾದರೂ ಮಾಡಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಇದೇ ರಘುರಾಮ್ ರಾಜನ್ ಅವರು ವಿಶ್ವದಲ್ಲಿ 2008ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಮುಂದೆ ಹೀಗಾಗುವುದಿದೆ ಎನ್ನುವ ಭವಿಷ್ಯವಾಣಿ ನುಡಿದಿದ್ದ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಹಾಗಾಗಿ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಕಳೆದ ಕೆಲವು ದಿನಗಳಲ್ಲಿ ಅರ್ಥವ್ಯವಸ್ಥೆಯ ಭಿನ್ನಭಿನ್ನ ಕ್ಷೇತ್ರಗಳಿಂದ ಕೆಟ್ಟ ಸುದ್ದಿಗಳು ಬರುತ್ತಿವೆ. ಆಟೋ ಉದ್ಯಮದಲ್ಲಿ ಹಿಂಜರಿತ ಮತ್ತು ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕುವ ವಿಷಯ ಈಗ ಸಾಮಾನ್ಯ ವಿಷಯವಾಗಿಬಿಟ್ಟಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ರಾಹುಲ್ ಬಜಾಜ್‍ರಂತಹ ಉದ್ಯಮಿಯೇ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಇಲ್ಲ ಹಾಗೂ ಹೂಡಿಕೆಯೂ ಇಲ್ಲದಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕೇಳಬೇಕಾಯಿತು. ರೈತರ ಸಂಘಟನೆಗಳು ಹಾಗೂ ಡೇರಿ ಉತ್ಪಾದಕರೂ ಸಹ ಅನೇಕ ದಿನಗಳಿಂದ ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ. ಈಗ ಬಟ್ಟೆ ತಯಾರಕರು ಆ ಕ್ಷೇತ್ರದಲ್ಲಿ ಪರಿಸ್ಥಿತಿ ದಿನೇದಿನೆ ಕೆಡುತ್ತಿದೆ ಎಂದು ನಿರ್ದಿಷ್ಟವಾಗಿ ಜಾಹೀರಾತನ್ನೇ ಪ್ರಕಟಿಸಿದ್ದಾರೆ. ಪ್ರಾಪರ್ಟಿಯ ವ್ಯಾಪಾರ ಹಲವು ವರ್ಷಗಳಿಂದ ನಿಧಾನವಾಗಿದೆ. ನೋಟುರದ್ದತಿಯ ಸಮಯದಿಂದಲೇ ಚಿಲ್ಲರೆ ವ್ಯಾಪಾರಿಗಳು ತಮ್ಮ ವ್ಯಾಪಾರ ಹದಗಟ್ಟಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆದಾಗ್ಯೂ ಜನರ ಹೇಳಿಕೆಯ ಮೇಲೆ ಭರವಸೆ ಮಾಡುವುದರ ಬದಲಿಗೆ ನಿಜವಾದ ಅಂಕಿಅಂಶಗಳ ಆಧಾರದ ಮೇಲೆಯೇ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ. ಇತ್ತೀಚಿಗೆ ಹಿಂಜರಿತವನ್ನು ಪುಷ್ಟೀಕರಿಸುವಂತಹ ಅನೇಕ ಅಂಕಿಅಂಶಗಳು ಬಂದಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರಕಾರ ಅರ್ಥವ್ಯವಸ್ಥೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಕಳೆದ 9 ತಿಂಗಳಿಂದ ಈ ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಅರ್ಥಿಕ ವೃದ್ಧಿಯ ದರ ಕಡಿಮೆಯಾಗುತ್ತಿದೆ. 9% ರಿಂದ 10% ದರದಲ್ಲಿ ವೃದ್ಧಿಯಾಗುತ್ತಿದ್ದ ನಮ್ಮ ಅರ್ಥವ್ಯವಸ್ಥೆ ಈಗ 5.8% ರ ದರಕ್ಕೆ ಕುಸಿದಿದೆ. ಕಳೆದ 20 ವರ್ಷಗಳಲ್ಲಿ ಸತತ ಮೂರು ತ್ರೈಮಾಸಿಕಗಳಲ್ಲೂ (quarterly) ಅಭಿವೃದ್ಧಿ ದರದಲ್ಲಿ ಕುಸಿತ ಕಂಡಿದ್ದು ಕೇವಲ ಮೂರು ಬಾರಿ. ನಿಸ್ಸಂಶಯವಾಗಿಯೂ ಆರ್ಥಿಕ ವೃದ್ಧಿಯ ವಾರ್ಷಿಕ ದರದಲ್ಲಿ ಇಳಿತ ಕಂಡುಬಂದಿದೆಯೇ ಹೊರತು ವೃದ್ಧಿ ನಿಂತಿಲ್ಲ, ಅಥವಾ ಅರ್ಥವ್ಯವಸ್ಥೆಯ ಸಂಕುಚಿತ ಇನ್ನೂ ಶುರು ಆಗಿಲ್ಲ. ಆದರೆ ಭಾರತೀಯ ಅರ್ಥವ್ಯವಸ್ಥೆಗೆ ವೃದ್ಧಿಯ ದರ ಹೆಚ್ಚುತ್ತ ಇರುವುದು ಅತ್ಯಂತ ಅವಶ್ಯಕವಾಗಿದೆ ಹಾಗಾಗಿ ಈ ಸುದ್ದಿಗಳು ಚಿಂತಾಜನಕವಾಗಿವೆ.

ಒಂದು ವೇಳೆ ಕಳೆದ ವರ್ಷ 2018ರಲ್ಲಿ ಜನೆವರಿಯಿಂದ ಮಾರ್ಚ್‍ತನಕದ ತ್ರೈಮಾಸಿಕ ಹಾಗೂ ಈ ವರ್ಷದ ಇವೇ ಮೂರು ತಿಂಗಳ ಹೋಲಿಕೆ ಮಾಡಿದರೆ ಸ್ಪಷ್ಟವಾಗುವುದೇನೆಂದರೆ ಸುಮಾರಾಗಿ ಎಲ್ಲಾ ಮಹತ್ವಪೂರ್ಣ ಕ್ಷೇತ್ರಗಳ ಅರ್ಥವ್ಯವಸ್ಥೆಯಲ್ಲಿ ಕುಸಿತ ಕಂಡುಬಂದಿದೆ. ಕಾರುಗಳು ಮಾರಾಟದಲ್ಲಿ ಕಳೆದ ಬಾರಿ 18% ವೃದ್ಧಿ ಆಗಿತ್ತು, ಈ ಬಾರಿ 23% ಕುಸಿತ ದಾಖಲೆಯಾಗಿದೆ. ಸ್ಕೂಟರ್ ಮತ್ತು ಇತರ ದ್ವೀಚಕ್ರ ವಾಹನಗಳಲ್ಲಿ ಕಳೆದ ಬಾರಿ 16% ಹೆಚ್ಚಳವಿತ್ತು ಆದರೆ ಈ ಬಾರಿ 12% ಕುಸಿತ ಕಾಣಿಸಿಕೊಂಡಿದೆ. ದೈನಂದಿಕ ಬಳಕೆಯ ಉಪಭೋಗದ ವಸ್ತುಗಳ ಮಾರಾಟದಲ್ಲಿ ಕಳೆದ ಬಾರಿಯ 12% ಹೆಚ್ಚಳದ ಹೋಲಿಕೆಯಲ್ಲಿ ಈ ಬಾರಿ ಕೇವಲ 5% ಹೆಚ್ಚಳವಾಗಿದೆ.

ಹೂಡಿಕೆಯಲ್ಲೂ ಇದೇ ಪ್ರವೃತ್ತಿಯನ್ನು ಕಾಣಬಹುದಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊಸ ಹೂಡಿಕೆಯ ಪ್ರೊಜೆಕ್ಟ್ ಗಳ ಮೊತ್ತದಲ್ಲಿ 13% ಹೆಚ್ಚಳವಾಗಿತ್ತು, ಆದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 80% ಕಡಿಮೆ ಆಗಿದೆ. ಆರ್ಥಿಕ ಹಿಂಜರಿತವನ್ನು ಎದರುರಿಸುವುದರಲ್ಲಿ ಸರಕಾರಿ ವೆಚ್ಚದ ಮಹತ್ವಪೂರ್ಣ ಪಾತ್ರ ಇರುತ್ತದೆ. ಆದರೆ ಅದರಲ್ಲೂ ಕುಸಿತವೇ ಕಂಡುಬಂದಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಕಾರದ ಟ್ಯಾಕ್ಸ್ ಆದಾಯ 22% ಹೆಚ್ಚಾಗಿತ್ತು ಆದರೆ ಈ ವರ್ಷ ಕೇವಲ 1.5% ಹೆಚ್ಚಳ ಕಂಡಿದೆ. ರಫ್ತು ಮತ್ತು ಆಮದಿನ ಅಂತರ ಕಳೆದ ಬಾರಿ 15% ಹೆಚ್ಚಾಗಿತ್ತು ಆದರೆ ಈ ಬಾರಿ 1% ಕಡಿಮೆ ಆಗಿದೆ. ಈ ಎಲ್ಲ ಅಂಕಿಅಂಶಗಳು ಹೇಳುವುದೇನೆಂದರೆ ಆರ್ಥಿಕ ಹಿಂಜರಿತದ ಸತ್ಯವನ್ನು ಅಲ್ಲಗೆಳೆಯಲಾಗುವುದಿಲ್ಲ. ಒಂದು ವೇಳೆ ಇದೇ ಪ್ರವೃತ್ತಿ ಇನ್ನೆರಡು ತ್ರೈಮಾಸಿಕಳವರೆಗೆ ಮುಂದುವರೆದರೆ ಕಳೆದ ಮೂರು ದಶಕಗಳ ಅತ್ಯಂತ ಗಂಭೀರ ಸ್ಥಿತಿ ಎದುರಿಸಬೇಕಾಗುವುದು.

ಆರ್ಥಿಕ ಹಿಂಜರಿತವನ್ನು ನಿಭಾಯಿಸಲು ಸಾಧ್ಯವಿದೆ ಆದರೆ ಹಾಗೆ ಮಾಡಲು ಎಲ್ಲಕ್ಕಿಂತ ಮುಂಚೆ ಈ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ದುರದೃಷ್ಟವಷಾತ್, ಸರಕಾರವು ಇಲ್ಲಿಯತನಕ ಈ ಸತ್ಯವನ್ನು ನೋಡಲು ನಿರಾಕರಿಸುತ್ತಿದೆ. ಜ್ವರದ ಚಿಕಿತ್ಸೆ ಮಾಡುವ ಬದಲಿಗೆ ಥರ್ಮಾಮೀಟರ್ ಅನ್ನು ಒಡೆದುಹಾಕುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಭಾರತದ ಅಂಕಿಅಂಶಗಳ ವಿಭಾಗ ಸಾಧನೆ ಎಷ್ಟಿದೆಯೆಂದರೆ, ವಿಶ್ವಾದ್ಯಂತ ಅದರ ಅಂಕಿಅಂಶಗಳನ್ನು ವಿಶ್ವಾಸಾರ್ಹ ಎಂದು ಪರಿಗಣಿಸಲಾಗುತ್ತದೆ. ಸ್ವತಃ ಮೋದಿ ಸರಕಾರದ ಮುಖ್ಯ ಆರ್ಥಿಕ ಸಲಹಾಕಾರರಾಗಿದ್ದ ಅರವಿಂದ್ ಸುಬ್ರಹ್ಮಣ್ಯಮ್ ಅವರು ಹೇಳುವುದೇನೆಂದರೆ ಭಾರತದ ಜಿಡಿಪಿ ಕನಿಷ್ಠಪಕ್ಷ ಶೇಕಡಾ ಎರಡರಿಂದ ಎರಡೂವರೆವಷ್ಟು ಹೆಚ್ಚಿಸಿ ತೋರಿಸಲಾಗುತ್ತಿದೆ ಎಂದು.

ಇಂತಹದರಲ್ಲಿ ಇನ್ನಷ್ಟು ಚಿಂತೆಯ ವಿಷಯವೇನೆಂದರೆ, ನಿಧಾನವಾಗಿ ಎಲ್ಲಾ ಒಳ್ಳೆಯ ಅರ್ಥಶಾಸ್ತ್ರಜ್ಞರು ಈ ಸರಕಾರವನ್ನು ಬಿಟ್ಟುಹೋಗುತ್ತಿದ್ದಾರೆ. ಕಳೆದ ಕಾರ್ಯಾವಧಿಯಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಬಿಟ್ಟುಹೋದರು. ನಂತರ ಉರ್ಜಿತ್ ಪಟೇಲ್ ನಡುರಸ್ತೆಯಲ್ಲೇ ಬಿಟ್ಟುಹೋದರು. ಅರವಿಂದ ಸುಬ್ರಹ್ಮಣ್ಯಮ್ ಅವರೂ ಕೂಡ ತಮ್ಮ ಕಾರ್ಯಾವಧಿ ಪೂರ್ಣಗೊಳಿಸುವ ಮುನ್ನವೇ ಸರಕಾರವನ್ನು ಬಿಟ್ಟುಹೋದರು. ಹಾಗೂ ಈಗ ಆರ್ಥಿಕ ಸಲಹಾಕಾರ ಸಮಿತಿಯ ಅಧ್ಯಕ್ಷ ವಿವೇಕ್ ದೇಬರಾಯ್ ಕೂಡ ದೂರ ಹೋಗುತ್ತಿದ್ದಾರೆ. ನಿಸ್ಸಂಶಯವಾಗಿಯೂ ಪ್ರಧಾನಿ ನರೇಂದ್ರ ಮೋದಿ ರಾಜಕಾರಣದ ನಿಪುಣ ಆಟಗಾರರಾಗಿದ್ದಾರೆ ಹಾಗೂ ತಮಗೆ ಬೇಕಾದ ಫಲಿತಾಂಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಅರ್ಥವ್ಯವಸ್ಥೆ ಒಂದು ಬೇರೆಯದೇ ವಿಷಯವಾಗಿದೆ. ನೋಟುರದ್ದತಿಯ ಪ್ರಕರಣವು ವಿವೇಚನೆಯುಳ್ಳ ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು ಪಡೆಯದೇ ಕೆಲಸ ಮಾಡುವುದರಿಂದ ಎಂತಹ ದುಃಸ್ಥಿತಿಯನ್ನು ಎದುರಿಸಬೇಕಾಯಿತು ಎನ್ನುವುದನ್ನು ತೋರಿಸಿಕೊಟ್ಟಿತು. ಒಬ್ಬ ನಾಯಕದ ಅಜ್ಞಾನ ಮತ್ತು ಅಹಂಕಾರದ ಬೆಲೆಯನ್ನು ಸಂಪೂರ್ಣ ದೇಶ ಭರಿಸಬೇಕಾಗುತ್ತದೆ.

ರೋಗಿಯ ದೇಹ ಜ್ವರದಿಂದ ತಪಿಸುತ್ತಿದೆ. ಕೆಲಸ ಮಾಡಬೇಕಿರುವವರು ಬೇರೆಡೆ ಮುಖ ತಿರುಗಿಸಿ ಕುಳಿತಿದ್ದಾರೆ. ಥರ್ಮಾಮೀಟರ್ ಅನ್ನು ಒಡೆದುಹಾಕಲಾಗಿದೆ. ಹಾಗೂ ಈಗ ಡಾಕ್ಟರ್ ಗಳನ್ನೂ ಒದ್ದೋಡಿಸಲಾಗಿದೆ. ಇದರ ಪರಣಾಮ ಏನಾಗುವುದು ಎನ್ನುವುದನ್ನು ನೀವೇ ಯೋಚಿಸಿನೋಡಿ.

ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...