Homeಎಕಾನಮಿಆರ್ಥಿಕ ಕುಸಿತವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಗಂಭೀರ ಸಮಸ್ಯೆಯತ್ತ ನಡೆಯುತ್ತಿದ್ದೇವೆ; ಯೋಗೇಂದ್ರ ಯಾದವ್

ಆರ್ಥಿಕ ಕುಸಿತವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಗಂಭೀರ ಸಮಸ್ಯೆಯತ್ತ ನಡೆಯುತ್ತಿದ್ದೇವೆ; ಯೋಗೇಂದ್ರ ಯಾದವ್

- Advertisement -
- Advertisement -

ನಮ್ಮ ದೇಶ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆಯೇ? ಇನ್ನು ಈ ಪ್ರಶ್ನೆಯನ್ನು ಕೇಳದೇ ಇರಲು ಆಗುವುದಿಲ್ಲ. ಒಂದು ಕಡೆ ಇಡೀ ದೇಶವೇ ಜಮ್ಮು ಮತ್ತು ಕಾಶ್ಮೀರದ ಪ್ರಶ್ನೆಯಲ್ಲಿ ಸಿಲುಕಿಕೊಂಡಿದ್ದರೆ ಅದೇ ಸಮಯದಲ್ಲಿ ದೇಶದ ಅರ್ಥವ್ಯವಸ್ಥೆಯು ನಿಧಾನವಾಗಿ ಕುಸಿಯುತ್ತಿದೆ. ಮೊದಲು ಸಮಸ್ಯೆಯಾಗಿ ಕಂಡುಬಂದಿದ್ದು, ಈಗ ಸಂಕಟದ ರೂಪ ಪಡೆದುಕೊಳ್ಳುತ್ತಿದೆ.

ಇತ್ತೀಚಿಗೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಆರ್ಥಿಕ ಹಿಂಜರಿತದ ಲಕ್ಷಣಗಳು ಚಿಂತಾಜನಕವಾಗಿವೆ, ಇದಕ್ಕೆ ತುರ್ತಾಗಿ ಏನಾದರೂ ಮಾಡಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಇದೇ ರಘುರಾಮ್ ರಾಜನ್ ಅವರು ವಿಶ್ವದಲ್ಲಿ 2008ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಮುಂದೆ ಹೀಗಾಗುವುದಿದೆ ಎನ್ನುವ ಭವಿಷ್ಯವಾಣಿ ನುಡಿದಿದ್ದ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಹಾಗಾಗಿ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಕಳೆದ ಕೆಲವು ದಿನಗಳಲ್ಲಿ ಅರ್ಥವ್ಯವಸ್ಥೆಯ ಭಿನ್ನಭಿನ್ನ ಕ್ಷೇತ್ರಗಳಿಂದ ಕೆಟ್ಟ ಸುದ್ದಿಗಳು ಬರುತ್ತಿವೆ. ಆಟೋ ಉದ್ಯಮದಲ್ಲಿ ಹಿಂಜರಿತ ಮತ್ತು ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕುವ ವಿಷಯ ಈಗ ಸಾಮಾನ್ಯ ವಿಷಯವಾಗಿಬಿಟ್ಟಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ರಾಹುಲ್ ಬಜಾಜ್‍ರಂತಹ ಉದ್ಯಮಿಯೇ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಇಲ್ಲ ಹಾಗೂ ಹೂಡಿಕೆಯೂ ಇಲ್ಲದಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕೇಳಬೇಕಾಯಿತು. ರೈತರ ಸಂಘಟನೆಗಳು ಹಾಗೂ ಡೇರಿ ಉತ್ಪಾದಕರೂ ಸಹ ಅನೇಕ ದಿನಗಳಿಂದ ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ. ಈಗ ಬಟ್ಟೆ ತಯಾರಕರು ಆ ಕ್ಷೇತ್ರದಲ್ಲಿ ಪರಿಸ್ಥಿತಿ ದಿನೇದಿನೆ ಕೆಡುತ್ತಿದೆ ಎಂದು ನಿರ್ದಿಷ್ಟವಾಗಿ ಜಾಹೀರಾತನ್ನೇ ಪ್ರಕಟಿಸಿದ್ದಾರೆ. ಪ್ರಾಪರ್ಟಿಯ ವ್ಯಾಪಾರ ಹಲವು ವರ್ಷಗಳಿಂದ ನಿಧಾನವಾಗಿದೆ. ನೋಟುರದ್ದತಿಯ ಸಮಯದಿಂದಲೇ ಚಿಲ್ಲರೆ ವ್ಯಾಪಾರಿಗಳು ತಮ್ಮ ವ್ಯಾಪಾರ ಹದಗಟ್ಟಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆದಾಗ್ಯೂ ಜನರ ಹೇಳಿಕೆಯ ಮೇಲೆ ಭರವಸೆ ಮಾಡುವುದರ ಬದಲಿಗೆ ನಿಜವಾದ ಅಂಕಿಅಂಶಗಳ ಆಧಾರದ ಮೇಲೆಯೇ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ. ಇತ್ತೀಚಿಗೆ ಹಿಂಜರಿತವನ್ನು ಪುಷ್ಟೀಕರಿಸುವಂತಹ ಅನೇಕ ಅಂಕಿಅಂಶಗಳು ಬಂದಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರಕಾರ ಅರ್ಥವ್ಯವಸ್ಥೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಕಳೆದ 9 ತಿಂಗಳಿಂದ ಈ ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಅರ್ಥಿಕ ವೃದ್ಧಿಯ ದರ ಕಡಿಮೆಯಾಗುತ್ತಿದೆ. 9% ರಿಂದ 10% ದರದಲ್ಲಿ ವೃದ್ಧಿಯಾಗುತ್ತಿದ್ದ ನಮ್ಮ ಅರ್ಥವ್ಯವಸ್ಥೆ ಈಗ 5.8% ರ ದರಕ್ಕೆ ಕುಸಿದಿದೆ. ಕಳೆದ 20 ವರ್ಷಗಳಲ್ಲಿ ಸತತ ಮೂರು ತ್ರೈಮಾಸಿಕಗಳಲ್ಲೂ (quarterly) ಅಭಿವೃದ್ಧಿ ದರದಲ್ಲಿ ಕುಸಿತ ಕಂಡಿದ್ದು ಕೇವಲ ಮೂರು ಬಾರಿ. ನಿಸ್ಸಂಶಯವಾಗಿಯೂ ಆರ್ಥಿಕ ವೃದ್ಧಿಯ ವಾರ್ಷಿಕ ದರದಲ್ಲಿ ಇಳಿತ ಕಂಡುಬಂದಿದೆಯೇ ಹೊರತು ವೃದ್ಧಿ ನಿಂತಿಲ್ಲ, ಅಥವಾ ಅರ್ಥವ್ಯವಸ್ಥೆಯ ಸಂಕುಚಿತ ಇನ್ನೂ ಶುರು ಆಗಿಲ್ಲ. ಆದರೆ ಭಾರತೀಯ ಅರ್ಥವ್ಯವಸ್ಥೆಗೆ ವೃದ್ಧಿಯ ದರ ಹೆಚ್ಚುತ್ತ ಇರುವುದು ಅತ್ಯಂತ ಅವಶ್ಯಕವಾಗಿದೆ ಹಾಗಾಗಿ ಈ ಸುದ್ದಿಗಳು ಚಿಂತಾಜನಕವಾಗಿವೆ.

ಒಂದು ವೇಳೆ ಕಳೆದ ವರ್ಷ 2018ರಲ್ಲಿ ಜನೆವರಿಯಿಂದ ಮಾರ್ಚ್‍ತನಕದ ತ್ರೈಮಾಸಿಕ ಹಾಗೂ ಈ ವರ್ಷದ ಇವೇ ಮೂರು ತಿಂಗಳ ಹೋಲಿಕೆ ಮಾಡಿದರೆ ಸ್ಪಷ್ಟವಾಗುವುದೇನೆಂದರೆ ಸುಮಾರಾಗಿ ಎಲ್ಲಾ ಮಹತ್ವಪೂರ್ಣ ಕ್ಷೇತ್ರಗಳ ಅರ್ಥವ್ಯವಸ್ಥೆಯಲ್ಲಿ ಕುಸಿತ ಕಂಡುಬಂದಿದೆ. ಕಾರುಗಳು ಮಾರಾಟದಲ್ಲಿ ಕಳೆದ ಬಾರಿ 18% ವೃದ್ಧಿ ಆಗಿತ್ತು, ಈ ಬಾರಿ 23% ಕುಸಿತ ದಾಖಲೆಯಾಗಿದೆ. ಸ್ಕೂಟರ್ ಮತ್ತು ಇತರ ದ್ವೀಚಕ್ರ ವಾಹನಗಳಲ್ಲಿ ಕಳೆದ ಬಾರಿ 16% ಹೆಚ್ಚಳವಿತ್ತು ಆದರೆ ಈ ಬಾರಿ 12% ಕುಸಿತ ಕಾಣಿಸಿಕೊಂಡಿದೆ. ದೈನಂದಿಕ ಬಳಕೆಯ ಉಪಭೋಗದ ವಸ್ತುಗಳ ಮಾರಾಟದಲ್ಲಿ ಕಳೆದ ಬಾರಿಯ 12% ಹೆಚ್ಚಳದ ಹೋಲಿಕೆಯಲ್ಲಿ ಈ ಬಾರಿ ಕೇವಲ 5% ಹೆಚ್ಚಳವಾಗಿದೆ.

ಹೂಡಿಕೆಯಲ್ಲೂ ಇದೇ ಪ್ರವೃತ್ತಿಯನ್ನು ಕಾಣಬಹುದಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊಸ ಹೂಡಿಕೆಯ ಪ್ರೊಜೆಕ್ಟ್ ಗಳ ಮೊತ್ತದಲ್ಲಿ 13% ಹೆಚ್ಚಳವಾಗಿತ್ತು, ಆದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 80% ಕಡಿಮೆ ಆಗಿದೆ. ಆರ್ಥಿಕ ಹಿಂಜರಿತವನ್ನು ಎದರುರಿಸುವುದರಲ್ಲಿ ಸರಕಾರಿ ವೆಚ್ಚದ ಮಹತ್ವಪೂರ್ಣ ಪಾತ್ರ ಇರುತ್ತದೆ. ಆದರೆ ಅದರಲ್ಲೂ ಕುಸಿತವೇ ಕಂಡುಬಂದಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಕಾರದ ಟ್ಯಾಕ್ಸ್ ಆದಾಯ 22% ಹೆಚ್ಚಾಗಿತ್ತು ಆದರೆ ಈ ವರ್ಷ ಕೇವಲ 1.5% ಹೆಚ್ಚಳ ಕಂಡಿದೆ. ರಫ್ತು ಮತ್ತು ಆಮದಿನ ಅಂತರ ಕಳೆದ ಬಾರಿ 15% ಹೆಚ್ಚಾಗಿತ್ತು ಆದರೆ ಈ ಬಾರಿ 1% ಕಡಿಮೆ ಆಗಿದೆ. ಈ ಎಲ್ಲ ಅಂಕಿಅಂಶಗಳು ಹೇಳುವುದೇನೆಂದರೆ ಆರ್ಥಿಕ ಹಿಂಜರಿತದ ಸತ್ಯವನ್ನು ಅಲ್ಲಗೆಳೆಯಲಾಗುವುದಿಲ್ಲ. ಒಂದು ವೇಳೆ ಇದೇ ಪ್ರವೃತ್ತಿ ಇನ್ನೆರಡು ತ್ರೈಮಾಸಿಕಳವರೆಗೆ ಮುಂದುವರೆದರೆ ಕಳೆದ ಮೂರು ದಶಕಗಳ ಅತ್ಯಂತ ಗಂಭೀರ ಸ್ಥಿತಿ ಎದುರಿಸಬೇಕಾಗುವುದು.

ಆರ್ಥಿಕ ಹಿಂಜರಿತವನ್ನು ನಿಭಾಯಿಸಲು ಸಾಧ್ಯವಿದೆ ಆದರೆ ಹಾಗೆ ಮಾಡಲು ಎಲ್ಲಕ್ಕಿಂತ ಮುಂಚೆ ಈ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ದುರದೃಷ್ಟವಷಾತ್, ಸರಕಾರವು ಇಲ್ಲಿಯತನಕ ಈ ಸತ್ಯವನ್ನು ನೋಡಲು ನಿರಾಕರಿಸುತ್ತಿದೆ. ಜ್ವರದ ಚಿಕಿತ್ಸೆ ಮಾಡುವ ಬದಲಿಗೆ ಥರ್ಮಾಮೀಟರ್ ಅನ್ನು ಒಡೆದುಹಾಕುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಭಾರತದ ಅಂಕಿಅಂಶಗಳ ವಿಭಾಗ ಸಾಧನೆ ಎಷ್ಟಿದೆಯೆಂದರೆ, ವಿಶ್ವಾದ್ಯಂತ ಅದರ ಅಂಕಿಅಂಶಗಳನ್ನು ವಿಶ್ವಾಸಾರ್ಹ ಎಂದು ಪರಿಗಣಿಸಲಾಗುತ್ತದೆ. ಸ್ವತಃ ಮೋದಿ ಸರಕಾರದ ಮುಖ್ಯ ಆರ್ಥಿಕ ಸಲಹಾಕಾರರಾಗಿದ್ದ ಅರವಿಂದ್ ಸುಬ್ರಹ್ಮಣ್ಯಮ್ ಅವರು ಹೇಳುವುದೇನೆಂದರೆ ಭಾರತದ ಜಿಡಿಪಿ ಕನಿಷ್ಠಪಕ್ಷ ಶೇಕಡಾ ಎರಡರಿಂದ ಎರಡೂವರೆವಷ್ಟು ಹೆಚ್ಚಿಸಿ ತೋರಿಸಲಾಗುತ್ತಿದೆ ಎಂದು.

ಇಂತಹದರಲ್ಲಿ ಇನ್ನಷ್ಟು ಚಿಂತೆಯ ವಿಷಯವೇನೆಂದರೆ, ನಿಧಾನವಾಗಿ ಎಲ್ಲಾ ಒಳ್ಳೆಯ ಅರ್ಥಶಾಸ್ತ್ರಜ್ಞರು ಈ ಸರಕಾರವನ್ನು ಬಿಟ್ಟುಹೋಗುತ್ತಿದ್ದಾರೆ. ಕಳೆದ ಕಾರ್ಯಾವಧಿಯಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಬಿಟ್ಟುಹೋದರು. ನಂತರ ಉರ್ಜಿತ್ ಪಟೇಲ್ ನಡುರಸ್ತೆಯಲ್ಲೇ ಬಿಟ್ಟುಹೋದರು. ಅರವಿಂದ ಸುಬ್ರಹ್ಮಣ್ಯಮ್ ಅವರೂ ಕೂಡ ತಮ್ಮ ಕಾರ್ಯಾವಧಿ ಪೂರ್ಣಗೊಳಿಸುವ ಮುನ್ನವೇ ಸರಕಾರವನ್ನು ಬಿಟ್ಟುಹೋದರು. ಹಾಗೂ ಈಗ ಆರ್ಥಿಕ ಸಲಹಾಕಾರ ಸಮಿತಿಯ ಅಧ್ಯಕ್ಷ ವಿವೇಕ್ ದೇಬರಾಯ್ ಕೂಡ ದೂರ ಹೋಗುತ್ತಿದ್ದಾರೆ. ನಿಸ್ಸಂಶಯವಾಗಿಯೂ ಪ್ರಧಾನಿ ನರೇಂದ್ರ ಮೋದಿ ರಾಜಕಾರಣದ ನಿಪುಣ ಆಟಗಾರರಾಗಿದ್ದಾರೆ ಹಾಗೂ ತಮಗೆ ಬೇಕಾದ ಫಲಿತಾಂಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಅರ್ಥವ್ಯವಸ್ಥೆ ಒಂದು ಬೇರೆಯದೇ ವಿಷಯವಾಗಿದೆ. ನೋಟುರದ್ದತಿಯ ಪ್ರಕರಣವು ವಿವೇಚನೆಯುಳ್ಳ ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು ಪಡೆಯದೇ ಕೆಲಸ ಮಾಡುವುದರಿಂದ ಎಂತಹ ದುಃಸ್ಥಿತಿಯನ್ನು ಎದುರಿಸಬೇಕಾಯಿತು ಎನ್ನುವುದನ್ನು ತೋರಿಸಿಕೊಟ್ಟಿತು. ಒಬ್ಬ ನಾಯಕದ ಅಜ್ಞಾನ ಮತ್ತು ಅಹಂಕಾರದ ಬೆಲೆಯನ್ನು ಸಂಪೂರ್ಣ ದೇಶ ಭರಿಸಬೇಕಾಗುತ್ತದೆ.

ರೋಗಿಯ ದೇಹ ಜ್ವರದಿಂದ ತಪಿಸುತ್ತಿದೆ. ಕೆಲಸ ಮಾಡಬೇಕಿರುವವರು ಬೇರೆಡೆ ಮುಖ ತಿರುಗಿಸಿ ಕುಳಿತಿದ್ದಾರೆ. ಥರ್ಮಾಮೀಟರ್ ಅನ್ನು ಒಡೆದುಹಾಕಲಾಗಿದೆ. ಹಾಗೂ ಈಗ ಡಾಕ್ಟರ್ ಗಳನ್ನೂ ಒದ್ದೋಡಿಸಲಾಗಿದೆ. ಇದರ ಪರಣಾಮ ಏನಾಗುವುದು ಎನ್ನುವುದನ್ನು ನೀವೇ ಯೋಚಿಸಿನೋಡಿ.

ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....