Homeಮುಖಪುಟನಾವು ನಂಬರ್ ಒನ್... ಯಾವುದರಲ್ಲಿ - ದೇಶ ಮಾರುವುದರಲ್ಲಿ?

ನಾವು ನಂಬರ್ ಒನ್… ಯಾವುದರಲ್ಲಿ – ದೇಶ ಮಾರುವುದರಲ್ಲಿ?

- Advertisement -
- Advertisement -

ನಮ್ಮ ಹುಬ್ಬಳ್ಳಿ ಹುಡುಗರಿಗೆ ರೋಮಾಂಚನ ಆಗೋವಂಥ ಸುದ್ದಿಯೊಂದು ಕಂಪ್ಯೂಟರ್ ಕ್ಲೌಡು ಎಂಬೋ ನೀಲ ಗಗನದೊಳಗ ಓಡಾಡತಾ ಐತಿ.

ಅದು ಏನಪಾ ಅಂದ್ರ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ ಹುಡುಗ ಪ್ರಹ್ಲಾದ ಜೋಶಿ ಅವರಿಗೆ ಅಭಿನಂದನೆ ಹೇಳಿದ ವಿಡಿಯೋ.

ನನ್ಯ ಸಚಿವ ಸಂಪುಟದ ಸದಸ್ಯರಾದ ಪ್ರಹ್ಲಾದಜೀ ಅವರು ಈ ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು, ಕಲ್ಲಿದ್ದಲು ತಯಾರಿ ಕ್ಷೇತ್ರದಲ್ಲಿ ಭಾರತ ಮಹತ್ವಪೂರ್ಣ ಹೆಜ್ಜೆಗಳನ್ನು ಇಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಲಾಕ್‍ಡೌನ್‍ನಲ್ಲಿ ಕಲ್ಲಿದ್ದಲಿಗೆ ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ನಮಗೆ ಹೊಸ ದಾರಿ ತೋರಿಸಿದ್ದಾರೆ. ಸಚಿವರು ಹಾಗೂ ಅವರ ಸಿಬ್ಬಂದಿಗೆ ನಾವು ಏನು ಅಂತಹ ದೊಡ್ಡ ಕೆಲಸ ಮಾಡಿಲ್ಲ ಅಂತ ಅನ್ನಿಸಬಹುದು, ಆದರೆ ನಾನು ಹೇಳುತ್ತೇನೆ. ನೀವು ಮಾಡಿದ್ದು ಅತ್ಯಂತ ಮಹತ್ವಪೂರ್ಣ ಕೆಲಸ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಅಂತ ಎರಡು ಸರತೆ ಚಪ್ಪಾಳೆ ಬಾರಿಸಿದ್ದಾರೆ.

ಇದನ್ನು ಕಲ್ಲಿದ್ದಲು ಸಚಿವರ ಹಿಂಬಾಲಕರು, ವಿರೋಧಿಗಳು ಎಲ್ಲರೂ ಸೇರಿ ಸಾವಿರಾರು ಸಲ ಹಂಚಿಕೊಂಡಾರ. ಇನ್ನ ನಮ್ಮ ಜೋಶಿ ಸಾಹೇಬರಿಗೆ ಟಿಕೆಟ್ ತಪ್ಪಿಸೋರು ಯಾರೂ ಇಲ್ಲಾ, ಅವರ ಕುರ್ಚಿ ಕಾಯಂ, ಇನ್ನೂ ಸ್ವಲ್ಪ ದಿವಸ ಆದರ ಅವರು ಪ್ರಧಾನಿ ಆಗಬಹುದು, ಉಪ ರಾಷ್ಟ್ರಪತಿ – ರಾಷ್ಟ್ರಪತಿನೂ ಆಗೋ ಛಾನ್ಸ್ ಅದ ಅಂತ ಹೇಳಿ ಅವರ ಬೆಂಬಲಿಗರು ಹೇಳಿಕೊಂಡು ಕುಣದಾಡಲಿಕ್ಕೆ ಹತ್ತಿದಾರು.

ಪ್ರಧಾನಿಯವರು ತಮ್ಮ ಎಂದಿನ ರೂಢಿಯಂತೆ, ಬರೀ ಒಳ್ಳೆ ಸುದ್ದಿ ಹೇಳುವ, ಹುರಿದುಂಬಿಸುವ, ಧನಾತ್ಮಕ ವಿಷಯವನ್ನೇ ತಿಳಿಸುವ ತಮ್ಮ ಇಮೇಜಿಗೆ ತಕ್ಕುದಾಗಿ ಯಾವ ಸಣ್ಣ ಮಾಹಿತಿಯನ್ನೂ ಕೊಡದಂತೆ, ಇದು ಒಳ್ಳೆಯದು ಅಂತ ಅಪ್ಪಣೆ ಕೊಟ್ಟಿದ್ದಾರೆ. ಅವರು ಯಾವ ಅಧ್ಯಯನ ಮಾಡಿದರು, ಅವರ ಯಾವ ನಡೆಗಳು ಭಾರತದ ಭವಿಷ್ಯವನ್ನು ನಿರ್ಧರಿಸುತ್ತವೆ, ಅದರಿಂದ ಈ ದೇಶದ ಜನರಿಗೆ ಯಾವ ರೀತಿಯಲ್ಲಿ ಅನುಕೂಲ ಆಗುತ್ತದೆ ಅಂತ ಅವರು ತಿಳಿಸಿ ಹೇಳಲಿಲ್ಲ.

ಬರೀ ಒಳ್ಳೆ ಮಾತಾಡುವ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಕೋಚ್ ಗೋಡ್ಬೋಲೆ (ಸವಿ ಮಾತಾಡುವ) ಅವರಂತೆ `ನಾ ಬ್ರೂಯಾತ ಅಪ್ರಿಯಂ ಸತ್ಯಂ’ ಅಂತ ಕೆಲವು ವಿಷಯ ಹೇಳದೇ ಬಿಟ್ಟರು, ನಾವು `ಇದಮಿತ್ಥಂ’ ಅಂತ ನಂಬಿಬಿಟ್ಟಿವಿ.

ಹಂಗಾರ ನಮ್ಮ ಸಚಿವರು ಮಾಡಿದ್ದಾದರೂ ಏನು ?

ಅದನ್ನು ಕಂಡುಹಿಡಿಯುವುದು ಅಷ್ಟೇನೂ ಕಷ್ಟವಿಲ್ಲ. ಈ ಅಭಿನಂದನೆ ನೀಡಿದ ಸಭೆಯಲ್ಲಿಯೇ ಅವರು ಒಂದು ಘೋಷಣೆ ಮಾಡಿದರು. ಭಾರತ ವಿಶ್ವದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರ. ನಾವು ಎರಡನೇ ಸ್ಥಾನದಲ್ಲಿ ಯಾಕೆ ಇರಬೇಕು? ಮೊದಲನೇ ಸ್ಥಾನದಲ್ಲಿ ಯಾಕ ಇರಬಾರದು? ಅಂತ ಪ್ರಶ್ನೆ ಕೇಳಿದರು.

ಜೋಶಿಜಿ ಅವರು ಆ ಮೊದಲನೇ ಸ್ಥಾನದ ದಾರಿ ತೋರಿಸಿಕೊಟ್ಟರು.

ಜೂನ್ ತಿಂಗಳ ಲಾಕ್‍ಡೌನ್‍ದಾಗ, ಲೋಕಸಭೆ- ರಾಜ್ಯಸಭೆ ಎರಡೂ ನಡೆಯದಾಗ, ರಾಜ್ಯಗಗಳ ವಿಧಾನ ಸಭೆ -ವಿಧಾನ ಪರಿಷತ್ತು ಬಂದ್ ಆದಾಗ, ಕೇಂದ್ರ ಸರಕಾರ ಈ ದೇಶದ 41 ಕಡೆಗಳಲ್ಲಿ ಭೂ ಗರ್ಭದಾಗ ಇರೋ ಕಲ್ಲಿದ್ದಲು ಗಣಿಗಳನ್ನು ಖಾಸಗಿಕರಣ ಮಾಡೋ ನಿರ್ಧಾರ ತೊಗೋಂಡಿತು. ಅದಕ್ಕ ಬೇಕಾದ ಪರಿಸರ ಇಲಾಖೆ, ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಇಲಾಖೆ ಸಮ್ಮತಿಯನ್ನು ಗಡಿಬಿಡಿಯಿಂದ ತೊಗೊಂಡು ಇನ್ನೂ ಗಡಿಬಿಡಿಯಿಂದ ಘೋಷಿಸಿತು.

ಇವುಗಳಲ್ಲಿ ಶೇಕಡಾ 80 ರಷ್ಟು ಆದಿವಾಸಿಗಳು ಇರೋ ಪ್ರದೇಶಗಳು. ಆದರೆ ಅಲ್ಲಿನ ಜನರನ್ನ ಕೇಳಲಿಲ್ಲ. ಅವರ ಗ್ರಾಮಸಭೆ, ಗ್ರಾಮ ಅರಣ್ಯ ಸಮಿತಿ ಸಭೆ ನಡೆಸಲಿಲ್ಲ. ಸುಪ್ರೀಂ ಕೋರ್ಟ್‍ನ ಹಲವಾರು ಆದೇಶಗಳನ್ನು ಅಡವಿಯ ಕುಳಿರ್ ಗಾಳಿಗೆ ತೂರಿ ಬಿಟ್ಟು, ಟೆಂಡರ್ ಕರೆಯಲು ಸಜ್ಜಾದರು.

ಕಳೆದ ನೇಹರೂವಿನ್ ದಶಕಗಳಲ್ಲಿ, ಸುಮಾರು ಆರು ಕೋಟಿ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಲಾಗಿದೆ. ಅವರಲ್ಲಿ ಸುಮಾರು 25 ಶೇಕಡಾ ಜನರಿಗೆ ಪರಿಹಾರ ಸಿಕ್ಕರೂ ಅವರ ಪುನರ್ವಸತಿ ಸರಿಯಾಗಿ ಆಗಿಲ್ಲ. ಅಲ್ಲಿನ ಜಲಮೂಲ, ವನ್ಯ ಜೀವಿ, ಹಕ್ಕಿ, ಇತರ ಪರಿಸರ ಕಲುಷಿತ ಆದ ನಂತರ ಅರಣ್ಯ ಪ್ರದೇಶದ ಯೋಜನೆಗಳಿಗೆ ಒಪ್ಪಿಗೆ ಕೊಡೋ ವೇಗ ಕಮ್ಮಿ ಆಯಿತು.

ಆಗಿನ ಸರ್ಕಾರಗಳು ತಮ್ಮ ಯಂತ್ರಾತ್ಮಕ್ಕೆ ಅಂಜದೇ ಇದ್ದರೂ ಜನರಿಗೆ, ಮಾಧ್ಯಮಗಳಿಗೆ, ನ್ಯಾಯಾಲಯಕ್ಕೆ, ಹೆದರುತ್ತಿದ್ದರು.

ಇವು ಯಾವುದಕ್ಕೂ ಹೆದರದೇ ಇರೋದು ಅಂದ್ರ ಅದು ಯಾ ಪರಿ ಧೈರ್ಯ ಇರಬೇಕು ನಮ್ಮ ಸಚಿವರಿಗೆ ಇರಬೇಕು? ನೀವೇ ನೋಡ್ರಿ.

ಈ 41 ಗಣಿಗಳು, ಐದು ರಾಜ್ಯಗಳ ಹಸಿರು ಪಟ್ಟಿಗಳಲ್ಲಿ ಬರತಾವು. ಅಲ್ಲಿ ಅರಣ್ಯ ಅಭಿವೃದ್ಧಿ ಚಟುವಟಿಕೆ ಬಿಟ್ಟು ಬೇರೆ ಏನೂ ಮಾಡಬಾರದು ಅಂತ ಒಂದು ತೀರ್ಪು ಐತಿ. ಸರ್ಕಾರವಾಗಲಿ, ಖಾಸಗಿ ಕಂಪನಿ ಆಗಲಿ, ಯಾವ ಕೆಲಸ ಮಾಡಿದರೂ ಕೂಡ, ಆದಿವಾಸಿಗಳ ಭಾಗೀದಾರಿಕೆಯಲ್ಲಿಯೇ ಮಾಡಬೇಕು ಅಂತ ಒಂದು ತೀರ್ಪು ಐತಿ. ಪರಿಸರ ಅಂದ್ರ ಬರೇ ಮಣ್ಣು, ನೀರು ಅಲ್ಲ, ಅಲ್ಲಿನ ಜನರ ಹಿತರಕ್ಷಣೆಯೂ ಆದರಾಗ ಸೇರೇತಿ ಅಂತ ಮತ್ತೊಂದು ತೀರ್ಪು ಐತಿ. ಅರಣ್ಯ, ಸಹಜ ಬೆಳೆ ಅಥವಾ ಬಹು ಬೆಳೆ ಜಮೀನನ್ನು ಭೂ ಸ್ವಾಧೀನ ಕಾಯಿದೆಯೊಳಗೆ ಸರಕಾರ ತೊಗೊಳಿಕ್ಕೆ ಬರೋದಿಲ್ಲ ಅಂತ ಇನ್ನೊಂದು ಐತಿ.

ಇವು ಯಾವುವೂ ಕೇಂದ್ರದ ಕಲ್ಲಿದ್ದಲು ಹಾಗೂ ಸಂಸದೀಯ ಖಾತೆ ಸಚಿವರಿಗೆ ನೆನಪು ಬರಲಿಲ್ಲ. ಬಂದರೂ ಸಹಿತ ತಮ್ಮ ಅಗಾಧ ಮರೆವಿನ ಶಕ್ತಿಯಿಂದ ಅದನ್ನು ಅವರು ಗೆದ್ದಿರಬಹುದು.

ಪರಿಶಿಷ್ಟ ಪಂಗಡಗಳ ರಕ್ಷಣೆಗಾಗಿ ಇರೋ ಸಂವಿಧಾನದ ಏಳನೇ ಭಾಗದ ಕಲಂಗಳಾಗಲಿ, ಪೆಸಾ ಕಾಯಿದೆಯಾಗಲಿ, ಸುಪ್ರೀಂ ಕೋರ್ಟಿನ ಸಮಾತಾ ತೀರ್ಪು, ಆದಿವಾಸಿ ಸಲಹಾ ಸಮಿತಿ ರಚನೆ, ಅಥವಾ ನೆಲದ ಒಡೆಯನೇ ನೆಲದಾಳದ ಅದಿರಿನ ಒಡೆಯ ಎನ್ನುವ 2013ರ ತೀರ್ಪು ಆಗಲಿ, ಅವರಿಗೆ ಮುಖ್ಯ ಅನ್ನಿಸಲಿಲ್ಲ.

ಇಷ್ಟು ದಿನ ಅರಣ್ಯ ಅಧಿಕಾರಿಗಳು ಯಾವುದು ಯಾವುದೋ ತೀರ್ಪಿನ ಹೆಸರು ಹೇಳಿ ಅಡವಿಯಲ್ಲಿ ಅಡುಗೆ ಮನೆಗೆ ಬೇಕಾದ ಕಟ್ಟಿಗೆ ತರಲು ಹೋಗುತ್ತಿದ್ದವರನ್ನು ಜೈಲಿಗೆ ಹಾಕುತ್ತಿದ್ದರು. ಅಂತಾದ್ದರಲ್ಲಿ ಇಷ್ಟು ಧಾಡಸಿತನದಿಂದ, ಪರಿಸರಕ್ಕೆ ಆಗಬಹುದಾದ ಹಾನಿಯನ್ನು ಕಲ್ಲು ಮನಸಿನಿಂದ ಸಹಿಸಿಕೊಂಡು ರಾಷ್ಟ್ರದ ಆರ್ಥಿಕತೆಗೆ ಕುಮ್ಮಕ್ಕು ಕೊಡೋ ದೃಷ್ಟಿಯಿಂದ ಕಲ್ಲಿದ್ದಲು ಗಣಿಗಾರಿಕೆಗೆ ಅನುವು ಮಾಡಿಕೊಡೋದು ಅಂದರೆ ಸುಮ್ಮನೇ ಏನು?

ಅದಕ್ಕೇ ಅವರು ಅವರನ್ನ ಅಭಿನಂದಿಸಿದ್ದು.


ಇದನ್ನು ಓದಿ: ದಲಿತ ಚಿಂತಕರನ್ನು ಮುಗಿಸಲು ಎಲ್ಗರ್ ಪರಿಷತ್ ಪ್ರಕರಣ ವರ್ಗಾವಣೆ: ಬಾಂಬೆ ಹೈಕೋರ್ಟ್‌‌ನಲ್ಲಿ ಅರ್ಜಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...