Homeಮುಖಪುಟನಮ್ಮ ಕರ್ನಾಟಕ ಅಮಾನವೀಯ ನಾಡಾಗುವುದು ಸರಿಯೇ?

ನಮ್ಮ ಕರ್ನಾಟಕ ಅಮಾನವೀಯ ನಾಡಾಗುವುದು ಸರಿಯೇ?

ಸೋಂಕಿನಿಂದ ಸಾಯುವವರು ಶೇ.2-3 ಇರಬಹುದು. ಹಸಿವಿನಿಂದ ಅವಮಾನದಿಂದ ಸಾಯುವವರ ಪ್ರಮಾಣ ಶೇ.10 ಆಗಿಬಿಟ್ಟರೆ ಅದನ್ನು ಮನುಷ್ಯ ಸಮಾಜವೆನ್ನಲಾಗದು.

- Advertisement -
- Advertisement -

ಬಹಳ ಹಿಂದೆ ಬೆಂಗಳೂರಿನಲ್ಲಿ ತಮಿಳು ವಿರೋಧಿ ಭಾವನೆ ಒಂದಷ್ಟು ಜನರಲ್ಲಿ ಗಾಢವಾಗಿಯೇ ಇತ್ತು. ಆಗಾಗ ಅದು ಬಡತಮಿಳರ ವಿರುದ್ಧ ತಿರುಗಿಬಿಡುತ್ತಿತ್ತು. ಯಾವುದೋ ಒಂದು ರೀತಿಯಲ್ಲಿ ದಕ್ಷಿಣ ಭಾರತದ ಆರ್ಥಿಕತೆ, ಕೇಂದ್ರ ಸರ್ಕಾರೀ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಕಂಪೆನಿಗಳು ಹಾಗೂ ಚಿತ್ರರಂಗದಲ್ಲಿದ್ದ ತಮಿಳುನಾಡಿನ ಯಜಮಾನಿಕೆಯ ವಿರುದ್ಧದ ಸಿಟ್ಟೂ ಅದರಲ್ಲಿ ವ್ಯಕ್ತವಾಗುತ್ತಿತ್ತು. ಆದರೆ, ಅದು ಕೆಲವೊಮ್ಮೆ ಅತಾರ್ತಿಕವಾಗುತ್ತಿತ್ತು ಮತ್ತು ಕರ್ನಾಟಕದ ಅಸಲೀ ಶೋಷಕರನ್ನು ಗುರುತಿಸುವುದನ್ನು ತಪ್ಪಿಸಲೆಂದೂ ಬಳಕೆಯಾಗುತ್ತಿತ್ತು.

ಬೆಂಗಳೂರೆಂಬುದು ಕರ್ನಾಟಕದ ಎಷ್ಟೋ ಭಾಗಗಳಿಗಿಂತ ತಮಿಳುನಾಡು ಮತ್ತು ಆಂಧ್ರದ ಕೆಲವು ಜಿಲ್ಲೆಗಳಿಗೆ ಭೌಗೋಳಿಕವಾಗಿ ಹತ್ತಿರವಿದೆ. ಹಾಗಾಗಿಯೇ ಬೆಂಗಳೂರಿನಿಂದ ದೂರವಿದ್ದ ಉತ್ತರ ಕರ್ನಾಟಕದ ಬಡಜನರು ಮುಂಬಯಿ, ಗೋವಾಗಳಿಗೆ ವಲಸೆ ಹೋಗುತ್ತಿದ್ದರು. ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದೇ ಕೇವಲ ಭಾಷಿಕ ನೆಲೆಯಲ್ಲಿ ಇದನ್ನು ನೋಡುವುದರಿಂದ ಆಗುತ್ತಿದ್ದ ಎಡವಟ್ಟುಗಳು ಸಾವು ನೋವುಗಳಿಗೂ ಕಾರಣವಾಗಿದ್ದಿದೆ. ಕಾವೇರಿ ವಿವಾದವು ತೀವ್ರಗೊಂಡ ಒಂದು ಸಂದರ್ಭದಲ್ಲಿ ಇದು ಸಾವಿರಾರು ತಮಿಳು ಭಾಷಿಕರು ಕರ್ನಾಟಕವನ್ನು ತೊರೆಯುವಂತೆಯೂ ಮಾಡಿತ್ತು.

ಆದರೆ, ಈ ಸಾರಿ ನಡೆಯುತ್ತಿರುವುದು ಬೇರೆ. ಕರ್ನಾಟಕದಲ್ಲಿ ದುಡಿಯುತ್ತಿದ್ದ ಉತ್ತರ ಮತ್ತು ಪೂರ್ವ ಭಾರತದ ಬಡವರು ಬೆಂಗಳೂರು ಬಿಟ್ಟು ಹೋಗಬಾರದೆಂದು ಸರ್ಕಾರವೇ ದೊಡ್ಡ ರಿಯಲ್ ಎಸ್ಟೇಟ್ ಕುಳಗಳ ಪರವಾಗಿ ಸಂಚು ನಡೆಸಿತು. ಲಾಕ್‌ಡೌನ್ ಸಡಿಲಿಸಿ ಉತ್ತರ ಕರ್ನಾಟಕದ ಕಾರ್ಮಿಕರನ್ನು ಕಳಿಸಿಕೊಟ್ಟ ಸರ್ಕಾರವು, ಉತ್ತರ ಭಾರತೀಯರಿಗಾಗಿ ಬುಕ್ ಮಾಡಿದ್ದ ರೈಲನ್ನು ರದ್ದುಗೊಳಿಸಿ ಅವರನ್ನು ಇಲ್ಲೇ ಕೂಡಿ ಹಾಕಲು ಯೋಜಿಸಿತು. ಇದನ್ನು ಬರೆಯುವ ಹೊತ್ತಿಗೆ ಮತ್ತೆ ರೈಲು ಶುರು ಮಾಡುವ ಕುರಿತ ಸುದ್ದಿ ಬಂದಿದೆ.

ಇದೇ ವಿಚಾರವನ್ನು ಕೇರಳ ನಿಭಾಯಿಸಿದ ರೀತಿಯನ್ನೊಮ್ಮೆ ಇದರ ಜೊತೆಗೆ ಹೋಲಿಸಿ ನೋಡಬೇಕು. ವಲಸೆ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಅಲ್ಲಿನ ರಾಜ್ಯ ಸರ್ಕಾರವು ಕರೆಯಲು ಅಲ್ಲಿ ಕಮ್ಯುನಿಸ್ಟ್ ಪಕ್ಷದ ಆಡಳಿತವಿರುವುದು ಒಂದು ಕಾರಣ. ಎರಡನೆಯ ಕಾರಣ, ಕೇರಳದಿಂದ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಬದುಕನ್ನು ಉತ್ತಮಪಡಿಸಿಕೊಳ್ಳಲು ಲಕ್ಷಾಂತರ ಜನರು ವಲಸೆ ಹೋಗಿದ್ದು, ವಲಸೆಯನ್ನು ನಿರಾಕರಿಸುವ ಸ್ಥಿತಿಯಲ್ಲಿ ಅವರಿಲ್ಲ. ಮೂರನೆಯದಾಗಿ ಸ್ಥಳೀಯವಾಗಿ ಕಷ್ಟದ ಕೆಲಸಗಳನ್ನು ಮಾಡುವ ಜನರು ಕಡಿಮೆಯಾಗಿದ್ದು ಅಲ್ಲಿನ ಯಂತ್ರವು ನಡೆಯಲು ಇನ್ನಷ್ಟು ಬಡಜನರ ಅಗತ್ಯ ಅವರಿಗಿದೆ. ಅದೇನೇ ಇದ್ದರೂ, ವಲಸೆ ಕಾರ್ಮಿಕರನ್ನು ಕೇರಳವು ಅತ್ಯುತ್ತಮವಾಗಿ ನಡೆಸಿಕೊಂಡಿತು. ದೇಶದಲ್ಲಿದ್ದ ಒಟ್ಟೂ ವಲಸೆ ಕಾರ್ಮಿಕರ ಕೇಂದ್ರಗಳ ಪೈಕಿ ಶೇ.60ಕ್ಕೂ ಹೆಚ್ಚು ಶಿಬಿರಗಳನ್ನು ಅಲ್ಲೊಂದೇ ಕಡೆ ತೆರೆಯಲಾಗಿತ್ತು. ಆ ಶಿಬಿರಗಳಲ್ಲಿ ಉತ್ತಮ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ, ಆ ಕಾರ್ಮಿಕರು ವಾಪಸ್ಸು ತೆರಳುವ ಸಂದರ್ಭ ಬಂದಾಗ ಅತ್ಯಂತ ಗೌರವಯುತವಾಗಿ ಬೀಳ್ಕೊಟ್ಟರು. ಹೋಗುವವರಿಗೆ ಉಚಿತ ಬಸ್ಸು, ರೈಲು ವ್ಯವಸ್ಥೆ ಮಾಡಿ ತಲಾ ಒಂದು ರೇಷನ್ ಕಿಟ್ ಸಹಾ ಕೊಟ್ಟು ಕಳಿಸಿದರು. ಅಂದರೆ ಹೋದವರಿಗೆ ಮತ್ತೆ ವಾಪಸ್ಸು ಬರಬೇಕು ಎನ್ನಿಸುವ ಹಾಗೆ. ಕರ್ನಾಟಕದ ಸರ್ಕಾರವು ನಡೆದುಕೊಂಡ ರೀತಿ ಹೇಗಿತ್ತೆಂದರೆ, ಇಲ್ಲಿದ್ದವರು ನಡೆದುಕೊಂಡು ವಾಪಸ್ಸು ಹೋಗಿಬಿಡಲೇಬೇಕು ಮತ್ತು ಈ ಕಡೆಗೆ ಎಂದಿಗೂ ತಿರುಗಿನೋಡಬಾರದು, ಆ ರೀತಿ.

ಆ ನಂತರ ಹೊರಬಂದ ಸಂಗತಿಗಳು ಇನ್ನೂ ಭೀಕರವಾಗಿದ್ದವು. ಮೈಸೂರಿನಲ್ಲಿ ಕೂಡಿಹಾಕಲ್ಪಟ್ಟಿದ್ದ ಕಾರ್ಮಿಕರು, ದೇವನಹಳ್ಳಿ, ಗುಬ್ಬಿಗಳಲ್ಲಿ ಇದ್ದ ಶೆಡ್ಡುಗಳಿಂದಲೂ ಹೊರದಬ್ಬಲು ಪ್ರಯತ್ನಿಸುತ್ತಿದ್ದ ಗುತ್ತಿಗೆದಾರರು, ಮಗುವಿಗೆ ನೀಡಲು ಎದೆಹಾಲೂ ಇಲ್ಲದೇ ಕಂಗೆಟ್ಟಿದ್ದ ಕಾರ್ಮಿಕ ಮಹಿಳೆಯರು – ಇದು ನಮ್ಮದೇ ರಾಜ್ಯದಲ್ಲಿ ನಡೆಯಿತೆಂಬುದಕ್ಕೆ ನಾವು ಅವಮಾನದಿಂದ ತಲೆ ತಗ್ಗಿಸುವಂತಹ ಘಟನೆಗಳು. ಸೋಂಕಿನಿಂದ ಸಾಯುವವರು ಶೇ.2-3 ಇರಬಹುದು. ಹಸಿವಿನಿಂದ ಅವಮಾನದಿಂದ ಸಾಯುವವರ ಪ್ರಮಾಣ ಶೇ.10 ಆಗಿಬಿಟ್ಟರೆ ಅದನ್ನು ಮನುಷ್ಯ ಸಮಾಜವೆನ್ನಲಾಗದು. ಅಂತಹ ಸ್ಥಿತಿ ಏಕೆ ಬಂದಿತೆಂಬುದನ್ನು ಲಾಕ್‌ಡೌನ್ ಹೇರಿದ ತಕ್ಷಣ ಎಲ್ಲ ಬಗೆಯ ಪರ್ಯಾಯ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕಿದ್ದ ಕೇಂದ್ರ ಸರ್ಕಾರವೂ ಮತ್ತು ಕರ್ನಾಟಕದಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಬೇಕಿದ್ದ ರಾಜ್ಯ ಸರ್ಕಾರವೂ ಯೋಚಿಸಬೇಕು. ವಿಮಾನಗಳಲ್ಲಿ ಓಡಾಡುವವರು ತಂದಿದ್ದ ರೋಗದ ಕಾರಣಕ್ಕೆ ಹೇರಿದ್ದ ಲಾಕ್‌ಡೌನ್‌ನಿಂದ ಹಸಿದು ಕಂಗೆಟ್ಟಿದ್ದ ಕಾರ್ಮಿಕರಿಗೆ ಕಳಿಸಿಕೊಡುವ ಬಸ್ಸುಗಳಿಗೆ ಮೂರು ಪಟ್ಟು ದರ ನಿಗದಿ ಮಾಡುವಷ್ಟು ಹೀನ ಸ್ಥಿತಿಯಲ್ಲಿ ಈ ರಾಜ್ಯದ ಸರ್ಕಾರವಿದೆ.

ಇನ್ನು ಕೇಂದ್ರದ ವಿಚಾರಕ್ಕೆ ಬರುವುದಾದರೆ, ಪಿಎಂ ಕೇರ್ಸ್ ಎಂಬ ನಿಧಿಗೆ 150 ಕೋಟಿ ಕೊಟ್ಟಿದ್ದ ರೈಲ್ವೇ ಇಲಾಖೆಯು 60 ಕೋಟಿ ವೆಚ್ಚ ಮಾಡಿ ಕಾರ್ಮಿಕರನ್ನು ಕಳಿಸಿಕೊಡಲು ಮುಂದಾಗಲಿಲ್ಲ. ಅಂದರೆ ಅಲ್ಲಿನ ಮೇಲ್ಪಂಕ್ತಿಯೇ ಎಲ್ಲರಿಗೂ ಮಾದರಿಯಾಗಿದೆ. ‘ಎಲ್ಲರ ಒಳಿತಿನ ದೃಷ್ಟಿಯಿಂದಲೇ’ ಹೇರಲಾದ ಲಾಕ್‌ಡೌನ್ ಇದಿರಬಹುದಾದರೂ, ಅದರಲ್ಲಿ ಈ ಜನರ ತಪ್ಪೇನೂ ಇರಲಿಲ್ಲ ಎಂಬುದೂ ಕಾಣದಷ್ಟು ಕಣ್ಣುಗಳು ಇಂಗಿ ಹೋಗಿದ್ದವೇ? ಎಲ್ಲ ಸಿದ್ಧಾಂತಗಳಾಚೆ ಕನಿಷ್ಠ ಮಾನವೀಯತೆ ನಾಗರಿಕವೆನಿಸಿಕೊಳ್ಳುವ ಸರ್ಕಾರಗಳಿಗೆ ಇರಬೇಕಿತ್ತಲ್ಲವೇ? ಅಥವಾ ಸಿದ್ಧಾಂತದ ಕಾರಣಕ್ಕೇ ಈ ಸರ್ಕಾರಗಳು ಹೀಗೆ ನಡೆದುಕೊಳ್ಳುತ್ತಿವೆಯೇ?

ಈ ಬರಹ ಶುರುವಾದ ಕಡೆಗೆ ಮತ್ತೆ ಬರುವುದಾದರೆ, ಇಂದು ವಲಸೆ ಬೇಡ ಎಂದು ಹೇಳುವ ಸ್ಥಿತಿಯಲ್ಲಿ ಯಾವ ರಾಜ್ಯವೂ, ದೇಶವೂ ಇಲ್ಲ. ಕೆಲವೆಡೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಲಾಗದೇ ಬೇರೆ ಕಡೆಗೆ ಹೋದರೆ ಸಾಕು ಎಂಬ ಪರಿಸ್ಥಿತಿಯಿದ್ದರೆ, ಇನ್ನು ಕೆಲವೆಡೆ ಸ್ಥಳೀಯ ಜನರು ಹಲವು ರೀತಿಯ ದೈಹಿಕ ಶ್ರಮದ ಕೆಲಸಗಳನ್ನು ಮಾಡುವ ಮನಸ್ಥಿತಿಯಲ್ಲಿಲ್ಲ. ಹಾಗಿಲ್ಲದೇ ಹೋಗಿದ್ದರೆ ಬಿಲ್ಡರ್‌ಗಳು ಸರ್ಕಾರದ ಬಳಿ ಹೋಗಿ, ಕಾರ್ಮಿಕರನ್ನು ‘ಹೇಗಾದರೂ ಮಾಡಿ’ ಇಲ್ಲಿಯೇ ಉಳಿಸಿ ಎಂದು ಒತ್ತಡ ಹಾಕುತ್ತಿರಲಿಲ್ಲ. ಹಾಗಾಗಿ ಇನ್ನೂ ಭಿನ್ನ ರೀತಿಯಲ್ಲಿ ಈ ವಿದ್ಯಮಾನವನ್ನು ನೋಡುವ ಅಗತ್ಯವನ್ನು ನಾವೆಲ್ಲರೂ ಮನಗಾಣಬೇಕಿದೆ.


ಇದನ್ನೂ ಓದಿ: ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...