Homeಮುಖಪುಟಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಇವತ್ತಿನ ನಿಯಮ ಏನು? ನಿನ್ನೆಯದು ಏನು? ನಾಳೆಯದು ಏನು ಅಂತ ಯಾರಿಗೂ ಸರಿಯಾಗಿ ಗೊತ್ತೇ ಆಗೋದಿಲ್ಲ. ಆ ಸಂಶಯ, ಅಸ್ಪಷ್ಟತೆ, ಸಂದೇಹ, ಅಪಾರದರ್ಶಕತೆಗಳ ವಾತಾವರಣದಲ್ಲಿಯೇ ಜೀವನ ಮುಂದುವರೆಯುತ್ತದೆ.

- Advertisement -
- Advertisement -

ಕೊರೋನಾ ಪುರಾಣ, ವರ್ಣಕಾರಣ ಕಾಂಡ

ನಾವು ಸಣ್ಣವರಿದ್ದಾಗ ಭಾರತದ ಸ್ವರೂಪದ ಬಗ್ಗೆ ಒಂದು ಹಾಡು ಹೇಳತಿದ್ದೆವಿ- ಕೇಸರಿ -ಬಿಳಿ – ಹಸಿರು ಬಣ್ಣ ನಡುವೆ ಚಕ್ರವು ಅಂತ ಅದರಾಗ ಒಂದು ಸಾಲು ಇತ್ತು.

ಈ ಬಣ್ಣಗಳ ನಡುವೆ ರಾಜಕೀಯ ಹುಟ್ಟತದ ಅಂತ ನಮಗ ಗೊತ್ತಿರಲಿಲ್ಲ. ಇದರ ಬಗ್ಗೆ ಸ್ವಲ್ಪ ತಿಳಕೊಳ್ಳೋಣ.

ಮೊಟ್ಟ ಮೊದಲಿಗೆ, ಅಂದರ ಲಕ್ಷಾಂತರ ಮಂದಿಗೆ ಕೊರೋನಾ ಬಂದು, ಸಾವಿರಾರು ಜನ ಸತ್ತ ಮ್ಯಾಲೆ, ಭಾರತ ಸರಕಾರದ ಕಣ್ಣು ತೆರದು ಲಾಕಡೌನು (ಕೀಲಿ ಕಿಟಕ್) ಘೋಷಿಸಿತು. ಆಮ್ಯಾಲೆ ದೇಶದ 700 ಜಿಲ್ಲೆಗಳನ್ನ ಕೆಂಪು, ಕಿತ್ತಳೆ ಹಾಗೂ ಹಸಿರು ಅಂತ ಹೇಳಿ ವಿಭಜನೆ ಮಾಡಿತು.

ಅದರ ಹಿಂದಿನ ಕಾರಣ ಅಂದರೆ 1. ಯಾವುದೇ ಜಿಲ್ಲೆಯೊಳಗ ಒಂದು ಕೊರೊನಾ ಪ್ರಕರಣ ಇದ್ದರೂ ಅದು ಕೆಂಪು. 2. ಯಾವುದೇ ಪ್ರಕರಣ ಇರದಿದ್ದರ ಅದು ಹಸಿರು ಹಾಗೂ 3. ಕಳೆದ 14 ದಿನದಲ್ಲಿ ಒಂದೂ ಹೊಸ ಪ್ರಕರಣ ಇರಲಿಲ್ಲ ಅಂದರ ಅದು ಕಿತ್ತಳೆ.

ಕೆಂಪು ಜಿಲ್ಲೆಯೊಳಗ ಯಾವುದೇ ಆರ್ಥಿಕ ಚಟುವಟಿಕೆ ಇಲ್ಲ, ಓಡಾಟ ಇಲ್ಲ. ಕಿತ್ತಳೆಯೊಳಗ ಬಹಳ ಮಟ್ಟಿಗೆ ಪ್ರತಿಬಂಧ ಹಾಗೂ ಹಸಿರಿನೊಳಗ ಎಲ್ಲ ರೀತಿಯ ಚಟುವಟಿಕೆ ಹಾಗೂ ಓಡಾಟ ಮುಕ್ತ.

ಆದರ ಸಮಸ್ಯಾ ಏನಪಾ ಅಂದರ ಎಂದಿನಂತೆ ಕೇಂದ್ರ ಸರಕಾರ ಕೀಲಿ ಕಿಟಕ್ ಆಗಲಿ, ಇತರ ಪರಿಹಾರ ಕ್ರಮಗಳನ್ನಾಗಲೀ ಸಾರಾಸಾರ ವಿಚಾರ ಮಾಡಿ ಮಾಡಿರಲಿಲ್ಲ.

ಇದರಿಂದ ದೊಡ್ಡ ಆಭಾಸ ಆತು. ಒಂದು ಸಾವಿರ ಕೇಸು ಇರೋ ಮುಂಬೈ ಕಿತ್ತಳೆ ವಲಯದಾಗ ಬಂದು, ಕರ್ನಾಟದ 14 ಜಿಲ್ಲೆ ಗಳು ಕೆಂಪು ವಲಯದಾಗ ಬಂದವು.

ಕೇಂದ್ರದ ಆಳುವ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ ಕೊಟ್ಟ ಖಾಸಗಿ ಕಂಪನಿಗಳು ಸರಕಾರದ ಮೇಲೆ ಒತ್ತಡ ಹಾಕಿದರು. ಮುಂಬೈ- ಅಹಮದಾಬಾದು- ಸುರತ ಮುಂತಾದ ಕಡೆ ಕಾರಖಾನೆ- ಅಂಗಡಿ ತೆಗೆಯಬಹುದಾದರೆ ನಮ್ಮಲ್ಲೆ ಯಾಕೆ ಬೇಡ ಅಂತ ತಕರಾರು ಮಾಡಿದರು. ಅವರು ತಮ್ಮ ತಮ್ಮ ನೌಕರರಿಗೆ ಸಂಬಳ ಕೊಟ್ಟಿದ್ದರೋ ಇಲ್ಲೋ, ಆದರೆ ಪಿಎಂ ಕೇರ್ಸ ಅನ್ನೋ ಹುಂಡಿಗೆ ರೊಕ್ಕ ಹಾಕಿ ಭಕ್ತಿಯಿಂದ ಕೈ ಮುಗದಿದ್ದರು.

ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದ್ದಕ್ಕ ಜನರಿಗೆ ತೊಂದರೆ ಆಗಿತ್ತು. ಸರಕಾರಕ್ಕೆ ತೆರಿಗೆ ಸಿಗಲಾರದ ಹಂಗ ಆಗಿತ್ತು. ಸರಕಾರಿ ನೌಕರರಿಗೆ ಸಂಬಳ ತಡಾ ಆಗಲಿಕ್ಕೆ ಸುರು ಆಗಿತ್ತು. ವಿಶ್ವಬ್ಯಾಂಕು, ಮೋಡಿ, ಮತ್ತು ಇತರ ಸಂಸ್ಥೆಗಳು ಭಾರತದ ನಿವ್ವಳ ಉತ್ಪನ್ನ ಶೇಕಡಾ 1-2 ರ ಒಳಗೆ ಇಳಿಯಲಿದೆ ಅಂತ ಭವಿಷ್ಯ ಹೇಳಲಿಕ್ಕೆ ಸುರು ಮಾಡಿದರು.

ಅಷ್ಟರೊಳಗೆ ಪಂತ ಪ್ರಧಾನ ನಮೋ ಅವರು ಮೂರನೇ ಕೀಲಿ ಕಿಟಕ್ ಘೋಷಣೆ ಮಾಡಿದ್ದರು. ಇನ್ನು ಅದನ್ನು ಹೆಂಗ ಸರಿ ಮಾಡಬೇಕು ಅಂತ ಯಾರಿಗೂ ಗೊತ್ತಿರಲಿಲ್ಲ.

ಎಪ್ರಿಲ 30 ರಂದು ಕೇಂದ್ರದ ಕೆಲವು ಅಧಿಕಾರಿಗಳು ಒಂದು ಸಭೆ ನಡೆಸಿದರು. ಅದರಾಗ ಈ ಹಿಂದೆ ಮಾಡಿದ ಕಲರ ಕೋಡಿಂಗ (ವರ್ಣಾಧಾರಿತ ವಿಭಜನೆ) ಸರಿ ಇಲ್ಲ. ಅದನ್ನ ಬದಲಾಯಿಸಬೇಕು. ಬರೇ ಪ್ರಕರಣ ಪತ್ತೆ ಆಗೋದು ಮುಖ್ಯ ಅಲ್ಲ. ಅದರ ಸಂಖ್ಯೆ ಎಷ್ಟು ದಿನದೊಳಗ ದುಪ್ಪಟ್ಟು ಆಗತಾವು, ಎಷ್ಟು ಜನ ಗುಣ ಆಗಿದ್ದಾರ, ರಾಜ್ಯ ಹಾಗೂ ಜಿಲ್ಲೆ ಆಡಳಿತ ಎಷ್ಟರ ಮಟ್ಟಿಗೆ ತಯಾರು ಆಗಿದಾರು ಮುಂತಾದ ವಿಷಯಗಳನ್ನ ಆಧರಿಸಿ ಕೆಂಪು ನಿರ್ಧರಿಸೋಣ. ಕಳೆದ 21 ದಿನದೊಳಗ ಪ್ರಕರಣ ಇಲ್ಲಾ ಅಂದರ ಅದು ಹಸಿರು ಅಂತ ಅನ್ನೋಣ. ಇವು ಎರಡೂ ಇಲ್ಲದವು ಕಿತ್ತಳೆ ಜಿಲ್ಲೆಗಳು ಅಂತ ಆಗಲಿ ಅಂತ ಹೇಳಿದರು.

ರಾಜ್ಯ ಸರಕಾರಗಳು ಕೆಂಪು- ಕಿತ್ತಳೆ ಇದ್ದದ್ದನ್ನು ಹಸಿರು ಮಾಡಬಹುದು. ಆದರೆ ಉಲ್ಟಾ ಮಾಡಲು ಬರೋದಿಲ್ಲ. ಪಟ್ಟಿ ಬದಲಾವಣೆ ಮಾಡೋದಾದರ ನಾವು ಮಾಡತೇವಿ ಅಂದರು. ಕರ್ನಾಟಕದಲ್ಲಿ ಇದ್ದ 14 ಕೆಂಪು ಜಿಲ್ಲೆಗಳ ಸಂಖ್ಯೆ ಮೂರಕ್ಕೆ ಇಳಿಯಿತು.

ಹಿಂಗಾಗಿ ಮೂರನೇ ಹಂತದ ಲಾಕ್ ಡೌನ ಇದ್ದರೂ ಕೂಡ ಕಾರ್ಖಾನೆ- ಅಂಗಡಿ ತೆರೆಯಲಾಯಿತು. ಅತಿ ಕಮ್ಮಿ ಪ್ರಕರಣ ಇದ್ದಾಗ ಬಂದು ಮಾಡಿದ ಅಂಗಡಿಗಳು ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮೇಲೆ ತೆರೆದುಕೊಂಡವು. ಇದೇ ನಿರ್ಧಾರ ತೊಗೊಳ್ಳೋದು ಆಗಿದ್ದರ ಇಷ್ಟೆಲ್ಲಾ ಸರ್ಕಸ್ಸು ಯಾಕ ಮಾಡಬೇಕಾಗಿತ್ತು. ಮೊದಲನೇ ದಿವಸವೇ ಈ ನಿರ್ಧಾರ ತೊಗೊಂಡಿದ್ದರ ಅಷ್ಟೊಂದು ಆರ್ಥಿಕ ಹಿನ್ನಡೆ ಆಗತಿರಲಿಲ್ಲ.

ಈ ಬಣ್ಣಗಳ ರಾಜಕಾರಣಕ್ಕೆ ವರ್ಣಕಾರಣ ಅನ್ನಬಹುದು. ಯಾಕ ಹಿಂಗಂದರ, ಸರಕಾರದ ನಿರ್ಧಾರಗಳು ವಿಜ್ಞಾನಿಗಳ ಮಾತು ಕೇಳಿ ನಡೆಯುತ್ತಿಲ್ಲ. ಅವು ಕೆಲವು ಐಎಎಸ್ಸು ಅಧಿಕಾರಿಗಳು ಹಾಗೂ ಕೆಲವೇ ಕೆಲವು ರಾಜಕಾರಣಿಗಳ ಮನಸೋಇಚ್ಛಿ ನಿರ್ಧಾರಗಳು. ಇವುಗಳಿಂದ ಯಾರಿಗೂ ಸ್ಪಷ್ಟತೆ ಇಲ್ಲ. ಯಾರಿಗೂ ಇವು ಸರಿಯಾಗಿ ಅರ್ಥವಾಗಿಲ್ಲ. ಇವುಗಳ ಬಗ್ಗೆ ಯಾರೂ ವೈಯಕ್ತಿಯ ಜವಾಬುದಾರಿ ತೊಗೊಳ್ಳೋದಿಲ್ಲ. ಸಧ್ಯಕ್ಕಂತೂ ಈ ಮುಖ ಇಲ್ಲದ ನಿರ್ಧಾರಗಳಿಂದ ನಮಗ ಮುಕ್ತಿ ಇಲ್ಲವೇನೋ.

ದೂರದರ್ಶಿ ಸಾಹಿತಿ ಭವಿಷ್ಯದಲ್ಲಿ ನಡಿಯೋದನ್ನು ಇಂದೇ ನಡೆದಂತೆ ಚಿತ್ರಿಸಿದ ಜಾರ್ಜ್ ಆರ್ವೆಲ್ ಅವರ ಅತಿ ಜನಪ್ರಿಯ ಕಾದಂಬರಿಯ ಹೆಸರು ʻ1984ʼ. ಅದರೊಳಗೆ ಕೆಲವು ಜನ ತಮ್ಮ ದೇಶದ ಜನರನ್ನ ಕತ್ತಲೆಯೊಳಗೆ ಇಟ್ಟು ಸರಕಾರ ನಡೆಸತಾರ. ಕಾಲ್ಪನಿಕ ʻಹಿರಿಯ ಅಣ್ಣʼನ ಹೆದರಿಕೆಯಿಂದ ಜನರ ಮೇಲೆ ದಬ್ಬಾಳಿಕೆ ನಡಸತಾರ.

ಅದೇ ಲೇಖಕನ ಇನ್ನೊಂದು ಕಾದಂಬರಿ ʻಎನಿಮಲ್ ಫಾರ್ಮʼ.

ರೈತನೊಬ್ಬನ ಮನೆಯ ಹಿತ್ತಲದಲ್ಲಿ ನಡೆಯುವ ಕತೆ ಇದು. ಬರೀ ತಿಂದುಂಡು ಹಾಯಾಗಿ ಮಲಗುವ ಚಾಲಾಕಿ ಹಂದಿಗಳು ಸರಕಾರ ರಚಿಸಿ ತಾವೇ ರಾಜರಾಗಿ ಬಿಡತಾರ. ರೈತನ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ಕುದುರೆಗಳನ್ನು ಕಾರ್ಮಿಕರನ್ನಾಗಿ ಮಾಡಿಕೊಳ್ಳತಾವು. ಆ ತೋಟದ ಮನೆಯಲ್ಲಿ ಒಂದು ಫಲಕ ಇರತೈತಿ. ಅದರ ಮೇಲೆ ಇವತ್ತಿನ ನೀತಿ- ನಿಯಮಗಳು ಅಂತ ಬರದಿರತಾವು. ಅದನ್ನ ಯಾರು ಬರದಿತಾರ ಅಂತ ಯಾರಿಗೂ ಗೊತ್ತಿರೋದಿಲ್ಲ. ಅದರಾಗ ಒಂದು – ಎರಡು ಅಂತ ಹೇಳಿ ನಿಯಮಗಳ ಪಟ್ಟಿನ ಇರತೈತಿ. ಅವನ್ನ ಎಲ್ಲ ಪ್ರಾಣಿಗಳು ಭಕ್ತಿಯಿಂದ ಪಾಲಿಸತಿರತಾವು.

ಆದರ ಅವರ ಮೇಲೆ ದ್ವೇಷ ಸಾಧಿಸೋ ದೃಷ್ಟಿಯಿಂದ ಆ ಹಂದಿಗಳು ಒಂದು ಸಂಚು ರೂಪಿಸತಾವು. ರಾತ್ರಿ ಎಲ್ಲರೂ ಮಲಗಿದಾಗ ಎದ್ದು ಬಂದು ಆ ಪಟ್ಟಿಯ ಕೊನೆಯ ನಿಯಮಗಳನ್ನ ಅಳಿಸಿ ಸಂಪೂರ್ಣ ತದ್ವಿರುದ್ಧ ವಾದ ನಿಯಮಗಳನ್ನ ಬರದು ಬಿಡತಾವು. ಮರು ದಿನ ಬೆಳಿಗ್ಗೆ ಎದ್ದು ನಿನ್ನೆ ಎಲ್ಲರೂ ನಿಯಮ ಉಲ್ಲಂಘಿಸಿದ್ದೀರಿ ಅಂತ ಹೇಳಿ ಶಿಕ್ಷೆ ಕೊಡತಾವು. ಉಳಿದ ಪ್ರಾಣಿಗಳು ʻಇಲ್ಲ. ನಾವು ಇದರಲ್ಲಿ ಬರೆದ ನಿಯಮಗಳನ್ನೇ ಪಾಲನೆ ಮಾಡಿದ್ದೇವೆʼ ಅಂತ ತಿರುಗಿ ವಾದ ಮಾಡಿದರೆ, ಎಲ್ಲಿದೆ ನೋಡಿ? ಇಲ್ಲಿರುವ ನಿಯಮವೇ ಬೇರೆ, ನೀವು ಮಾಡಿದ್ದೇ ಬೇರೆ ಅಂತ ಅವರನ್ನು ಹೆದರಿಸುತ್ತವೆʼ.

ಕೊನೆಗೂ ಇವತ್ತಿನ ನಿಯಮ ಏನು? ನಿನ್ನೆಯದು ಏನು? ನಾಳೆಯದು ಏನು ಅಂತ ಯಾರಿಗೂ ಸರಿಯಾಗಿ ಗೊತ್ತೇ ಆಗೋದಿಲ್ಲ. ಆ ಸಂಶಯ, ಅಸ್ಪಷ್ಟತೆ, ಸಂದೇಹ, ಅಪಾರದರ್ಶಕತೆಗಳ ವಾತಾವರಣದಲ್ಲಿಯೇ ಜೀವನ ಮುಂದುವರೆಯುತ್ತದೆ. ನಿಯಮ ಪಾಲಿಸುವರಿಗೂ, ಆರಕ್ಷಕರಿಗೂ, ನಿಯಮ ಮುರಿಯುವವರಿಗೂ, ಜನಸಾಮಾನ್ಯರಿಗೂ ಎಲ್ಲರಿಗೂ ಭಯದ ವಾತಾವರಣ ಇರುತ್ತದೆ.

ಇವತ್ತಿನ ಆಗುಹೋಗುಗಳು ನಮಗ ಎನಿಮಲ್ ಫಾರ್ಮಿನ ನೆನಪು ಮಾಡಿಕೊಡತಾವು. ಅಚ್ಛೇ ದಿನ್ ಹೋಗಲಿ, ಬೊಹುತ ಬೂರೆ ದಿನ ಆನೆವಾಲೆ ಹೈಂ ಅಂತ ಅನ್ನಿಸತೈತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...