HomeUncategorizedಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

ಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

- Advertisement -
- Advertisement -

ಹಣದುಬ್ಬರ ಅಥವಾ ಇನಫ್ಲೇಷನ್ ಅನ್ನೋದನ್ನ ಕೇಳಿಕೇಳಿ ಸಾಕಾಗಿಹೋಗೇದ. ಅದರ ಬಗ್ಗೆ ಸರಕಾರದವರು ಏನೂ ಮಾಡಲಾರದೇ ಇರೋದು ನೋಡಿ-ನೋಡಿ ಸಾಕಾಗಿಹೋಗೇದ. ಅದಕ್ಕ ಹೊಸಾದೊಂದು ಹುಡುಕೋಣ. ಅದರ ಹೆಸರು ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್.

ಅದು ಸ್ಟ್ಯಾಗ್ನೇಷನ್ ಹಾಗೂ ಇನಫ್ಲೇಷನ್ ಸೇರಿದ ಆರ್ಥಿಕ ಮಾರಿ. ವಾರ್ಷಿಕ ಆರ್ಥಿಕ ಬೆಳವಣಿಗೆ 5 ಶೇಕಡಾ ಇದ್ದು ಹಣದುಬ್ಬರ ಶೇ. 8ರ ಆಸುಪಾಸಿಗೆ ಬಂದಿದ್ದಕ್ಕೆ ಭಾರತ ಜಡದುಬ್ಬರವನ್ನು ಎದುರು ನೋಡ್ತಾ ಇದೆ ಅಂತ ತಜ್ಞರ ಅಂಬೋಣ.

ಸರ್ವೇಸಾಮಾನ್ಯವಾಗಿ ಏನಾಗತದ ಅಂದರ ಹಣದುಬ್ಬರ ಇದ್ದಾಗ ಬೇಡಿಕೆ ಹೆಚ್ಚಿತ್ತು ಅಂದರ ಬೆಳವಣಿಗೆ ಇರತದ. ಜನರಿಗೆ ಹಣ ಖರ್ಚು ಆಗೋದು ಹೆಚ್ಚಾದರೂ ಸಹ ಅವರ ವರಮಾನ ಹೆಚ್ಚು ಆಗೋದಕ್ಕ ಜನರಿಗೆ ತೊಂದರೆ ಆಗಂಗಿಲ್ಲ. ಆದರ ಹಣದುಬ್ಬರ ಇದ್ದು, ಸರಕು-ಸೇವೆಗಳಿಗೆ ಬೇಡಿಕೆ ಕಡಿಮೆ ಆಗಿ ಆರ್ಥಿಕ ಹಿಂಜರಿತ ಉಂಟಾದರ, ಅದು ಆ ದೇಶದ ಜನರಿಗೆ ಭಾಳ ಕಿರಿಕಿರಿ ಆಗತದ. ಅವರ ದಿನ ನಿತ್ಯದ ಕೆಲಸನೂ ಆಗದಂಗ ತೊಂದರೆ ಆಗತದ.

ಹಿಂಗ 1973 ರಾಗ ಇಡಿ ಜಗತ್ತಿನೊಳಗ ಆಗಿತ್ತು. ಪೆಟ್ರೋಲು- ಡೀಸಲ್ ಬೆಲೆ ಹೆಚ್ಚಾಗಿ ಸಾಗಾಣಿಕೆ ವೆಚ್ಚ ಹೆಚ್ಚಾಗಿ, ಸರಕುಗಳ ಬೆಲೆ ಜಾಸ್ತಿ ಆತು. ಜನ ನೌಕರಿ ಕಳಕೊಂಡರು, ಸರಕು ಖರೀದಿ ಮಾಡೋದು ಕಡಿಮೆ ಮಾಡಿದರು, ಆದರ ಜನ ಖರೀದಿ ಕಮ್ಮಿ ಮಾಡಿದರು ಅಂತ ವೆಚ್ಚಕಮ್ಮಿ ಆಗಲಿಲ್ಲ. ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಅಲುಗಾಡಿ ಹೋತು.

ಇನ್ನೊಮ್ಮೆ ಹಿಂಗಾಗಿದ್ದು ಯಾವಾಗ ಅಂದರ ಚಂದ್ರಶೇಖರ ಅವರ ಕಾಲದಾಗ. ಸರಕಾರದ ನೀತಿಗಳು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿಲ್ಲ. ಅದರ ಸರಕುಗಳ ಬೆಲೆ ಹೆಚ್ಚಾಗಿ ಕೂತವು. ಮಾರುವವರಿಗೂ ಅನುಕೂಲ ಆಗಲಿಲ್ಲ, ಖರೀದಿ ಮಾಡೋರಿಗೂ ಅನುಕೂಲ ಆಗಲಿಲ್ಲ.

ಇದನ್ನು ಕುಡಿಯಾಗಿದ್ದಾಗ ಚಿವುಟದಿದ್ದರೆ ಇದು ಅತ್ಯಂತ ದೊಡ್ಡ ಸಮಸ್ಯೆ ಆಗಬಹುದು. ಭಾಳ ದಿವಸ ಜಡದುಬ್ಬರ ಮುಂದುವರೆದರ ಅದು ಮಧ್ಯಮ ವರ್ಗದವರನ್ನೆಲ್ಲ ಬಡತನರೇಖೆಯ ಕೆಳಗೆ ದಬ್ಬಿ ಬಿಡತದ. ಆಡಳಿತ ಪಕ್ಷಕ್ಕೂ ಇದು ಒಳ್ಳೇದಲ್ಲ. ಸರಕಾರದ ಇಮೇಜು ಇದರಿಂದ ಕೆಡಬಹುದು. ಜನರನ್ನು ರೊಚ್ಚಿಗೆ ಎಬ್ಬಿಸಬಹುದು.

ಹಂಗಂತ ಅದನ್ನು ಸಂಭಾಳಿಸೋದು ಸರಳ ಇಲ್ಲ. ಸರಕಾರ ಅಥವಾ ರಿಸರ್ವ ಬ್ಯಾಂಕಿನಂಥ ಕೇಂದ್ರ ಬ್ಯಾಂಕು ಬಡ್ಡಿ ದರ ಹೆಚ್ಚು ಮಾಡಿದರ ಸಾಲಗಳು ದುಬಾರಿಯಾಗಿ ಯಾರೂ ತೊಗೊಳ್ಳಲಾರದಂತಾಗಿ, ಅಥವಾ ತೊಗೊಂಡವರು ವಾಪಸು ಕೊಡಲಿಕ್ಕೆ ಆಗಲಾರದಂತಾಗಿ ವ್ಯಾಪಾರ -ವ್ಯವಹಾರಕ್ಕೆ ತೊಂದರೆ ಆಗಬಹುದು. ಬಡ್ಡಿ ದರ ಕಮ್ಮಿ ಮಾಡಿದರ ಹಣದುಬ್ಬರ ಹೆಚ್ಚಾಗಿ ಜನ ಏನನ್ನೂ ಖರೀದಿ ಮಾಡದಂಗಾಗಬಹುದು, ಮಾಡಿದರ ಅವರ ಉಳಿತಾಯ ಕರಗಬಹುದು.

ಈ ವರ್ಷ ಏನಾಗೇದಪಾ ಅಂದರ ಪ್ರವಾಹ- ಬರಗಾಲದಿಂದ ಕೃಷಿ ಉತ್ಪನ್ನ ಕಮ್ಮಿ ಆಗೇದ. ಇದರಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗೇದ. ಇದು ಕೇಂದ್ರದ ಹೊಸ ಆಮದು ನೀತಿಯಿಂದ ಕಮ್ಮಿ ಆದರ, ಅಥವಾ ಆರ್ಥಿಕ ಬೆಳವಣಿಗೆ ಮುಂದಿನ ಎರಡು – ಮೂರು ತಿಂಗಳಲ್ಲಿ ಹೆಚ್ಚಿದರ ಜಡದುಬ್ಬರದ ಬರೋ ಸಾಧ್ಯತೆ ಕಮ್ಮಿ ಆಗಬಹುದು. ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಮಂಡಳಿ ಅವರು ಈಗಿನ ಹಣದುಬ್ಬರ ಕಮ್ಮಿ ಆಗತದ ಅಂತ ಹೇಳ್ಯಾರ.

ದೇಶದ ವರಮಾನ ಅಷ್ಟೇ ಉಳದು ಅಥವಾ ಕಮ್ಮಿ ಆಗುವಾಗ ಖರ್ಚು ಜಾಸ್ತಿ ಆದಂಗನ, ಪ್ರತಿ ಗೃಹಸ್ಥನ ಪರಿಸ್ಥಿತಿನೂ ಆಗಬಹುದು. ಅವನ ನೌಕರಿಗೆ ಖತರಾ ಬಂದು, ಯಾವಾಗ ಕೆಲಸ ಕಳಕೋತೇನಿ ಅನ್ನುವ ಹೆದರಿಕೆಯೊಳಗ ಇರೋವಾಗ, ಅಥವಾ ಅವನಿಗ ವಾರ್ಷಿಕ ಬಡ್ತಿ ಸಿಗಲಾರದೇ, ಸಂಬಳ ಹೆಚ್ಚಾಗಲಾರದೇ ಇದ್ದು, ವಸ್ತುಗಳ ಬೆಲೆ ಜಾಸ್ತಿ ಆಗತಾ ಹೋದರ ಅವನು ಬರೇ ಊಟ, ಮನಿ ಬಾಡಗಿ, ಅರವಿ- ಅಂಚಡಿ, ಸಾಲಿ ಫೀಸು ಇಷ್ಟ ಖರ್ಚು ಮಾಡತಾ ಹೋದಾ ಅಂದರ ಅವನು ದೇಶದ ಆರ್ಥಿಕ ಪರಿಸ್ಥಿತಿಗೆ ಯಾವ ಕೊಡುಗೆ ಕೊಡಲಾರ.

ಹೊಸ ಬಂಡವಾಳ ದೇಶಕ್ಕೆ ಬರಲಾರದು, ಹೊಸ ಉದ್ಯೋಗ ಸೃಷ್ಟಿ ಆಗಲಾರವು. ಜನರ ಕೈಯೊಳಗ ದುಡ್ಡು ನಿಲ್ಲಂಗಿಲ್ಲ. ಜನ ಬ್ಯಾಂಕಿನೊಳಗ, ಷೇರು ಮಾರುಕಟ್ಟೆಯೊಳಗ ಉಳಿತಾಯ ಮಾಡಿದರ ಅದಕ್ಕ ಬೇಕಷ್ಟು ಬಡ್ಡಿ ಬರಂಗಿಲ್ಲ.

ಜಡದುಬ್ಬರವನ್ನ ಸರಕಾರಗಳು ಕಮ್ಮಿ ಮಾಡಲಿಕ್ಕೆ ಕ್ರಮ ಕೈಕೊಳ್ಳಬೇಕು. ಸರಿಯಾದ ನೀತಿ ಪಾಲಿಸಿ ಮತ್ತ ಬರಲಾರದ ಹಂಗ ನೋಡಿಕೊಳ್ಳಬೇಕು. ಇಲ್ಲದಿದ್ದರ ಅನೇಕ ವರ್ಷಗಳ ಬೆಳವಣಿಗಿ ಹೊಳಿಯೊಳಗ ಹುಣಸೀಹಣ್ಣು ತೊಳದಂಗ ಆಗಿ ಬಿಡತದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...