HomeUncategorizedಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

ಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

- Advertisement -
- Advertisement -

ಹಣದುಬ್ಬರ ಅಥವಾ ಇನಫ್ಲೇಷನ್ ಅನ್ನೋದನ್ನ ಕೇಳಿಕೇಳಿ ಸಾಕಾಗಿಹೋಗೇದ. ಅದರ ಬಗ್ಗೆ ಸರಕಾರದವರು ಏನೂ ಮಾಡಲಾರದೇ ಇರೋದು ನೋಡಿ-ನೋಡಿ ಸಾಕಾಗಿಹೋಗೇದ. ಅದಕ್ಕ ಹೊಸಾದೊಂದು ಹುಡುಕೋಣ. ಅದರ ಹೆಸರು ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್.

ಅದು ಸ್ಟ್ಯಾಗ್ನೇಷನ್ ಹಾಗೂ ಇನಫ್ಲೇಷನ್ ಸೇರಿದ ಆರ್ಥಿಕ ಮಾರಿ. ವಾರ್ಷಿಕ ಆರ್ಥಿಕ ಬೆಳವಣಿಗೆ 5 ಶೇಕಡಾ ಇದ್ದು ಹಣದುಬ್ಬರ ಶೇ. 8ರ ಆಸುಪಾಸಿಗೆ ಬಂದಿದ್ದಕ್ಕೆ ಭಾರತ ಜಡದುಬ್ಬರವನ್ನು ಎದುರು ನೋಡ್ತಾ ಇದೆ ಅಂತ ತಜ್ಞರ ಅಂಬೋಣ.

ಸರ್ವೇಸಾಮಾನ್ಯವಾಗಿ ಏನಾಗತದ ಅಂದರ ಹಣದುಬ್ಬರ ಇದ್ದಾಗ ಬೇಡಿಕೆ ಹೆಚ್ಚಿತ್ತು ಅಂದರ ಬೆಳವಣಿಗೆ ಇರತದ. ಜನರಿಗೆ ಹಣ ಖರ್ಚು ಆಗೋದು ಹೆಚ್ಚಾದರೂ ಸಹ ಅವರ ವರಮಾನ ಹೆಚ್ಚು ಆಗೋದಕ್ಕ ಜನರಿಗೆ ತೊಂದರೆ ಆಗಂಗಿಲ್ಲ. ಆದರ ಹಣದುಬ್ಬರ ಇದ್ದು, ಸರಕು-ಸೇವೆಗಳಿಗೆ ಬೇಡಿಕೆ ಕಡಿಮೆ ಆಗಿ ಆರ್ಥಿಕ ಹಿಂಜರಿತ ಉಂಟಾದರ, ಅದು ಆ ದೇಶದ ಜನರಿಗೆ ಭಾಳ ಕಿರಿಕಿರಿ ಆಗತದ. ಅವರ ದಿನ ನಿತ್ಯದ ಕೆಲಸನೂ ಆಗದಂಗ ತೊಂದರೆ ಆಗತದ.

ಹಿಂಗ 1973 ರಾಗ ಇಡಿ ಜಗತ್ತಿನೊಳಗ ಆಗಿತ್ತು. ಪೆಟ್ರೋಲು- ಡೀಸಲ್ ಬೆಲೆ ಹೆಚ್ಚಾಗಿ ಸಾಗಾಣಿಕೆ ವೆಚ್ಚ ಹೆಚ್ಚಾಗಿ, ಸರಕುಗಳ ಬೆಲೆ ಜಾಸ್ತಿ ಆತು. ಜನ ನೌಕರಿ ಕಳಕೊಂಡರು, ಸರಕು ಖರೀದಿ ಮಾಡೋದು ಕಡಿಮೆ ಮಾಡಿದರು, ಆದರ ಜನ ಖರೀದಿ ಕಮ್ಮಿ ಮಾಡಿದರು ಅಂತ ವೆಚ್ಚಕಮ್ಮಿ ಆಗಲಿಲ್ಲ. ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಅಲುಗಾಡಿ ಹೋತು.

ಇನ್ನೊಮ್ಮೆ ಹಿಂಗಾಗಿದ್ದು ಯಾವಾಗ ಅಂದರ ಚಂದ್ರಶೇಖರ ಅವರ ಕಾಲದಾಗ. ಸರಕಾರದ ನೀತಿಗಳು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿಲ್ಲ. ಅದರ ಸರಕುಗಳ ಬೆಲೆ ಹೆಚ್ಚಾಗಿ ಕೂತವು. ಮಾರುವವರಿಗೂ ಅನುಕೂಲ ಆಗಲಿಲ್ಲ, ಖರೀದಿ ಮಾಡೋರಿಗೂ ಅನುಕೂಲ ಆಗಲಿಲ್ಲ.

ಇದನ್ನು ಕುಡಿಯಾಗಿದ್ದಾಗ ಚಿವುಟದಿದ್ದರೆ ಇದು ಅತ್ಯಂತ ದೊಡ್ಡ ಸಮಸ್ಯೆ ಆಗಬಹುದು. ಭಾಳ ದಿವಸ ಜಡದುಬ್ಬರ ಮುಂದುವರೆದರ ಅದು ಮಧ್ಯಮ ವರ್ಗದವರನ್ನೆಲ್ಲ ಬಡತನರೇಖೆಯ ಕೆಳಗೆ ದಬ್ಬಿ ಬಿಡತದ. ಆಡಳಿತ ಪಕ್ಷಕ್ಕೂ ಇದು ಒಳ್ಳೇದಲ್ಲ. ಸರಕಾರದ ಇಮೇಜು ಇದರಿಂದ ಕೆಡಬಹುದು. ಜನರನ್ನು ರೊಚ್ಚಿಗೆ ಎಬ್ಬಿಸಬಹುದು.

ಹಂಗಂತ ಅದನ್ನು ಸಂಭಾಳಿಸೋದು ಸರಳ ಇಲ್ಲ. ಸರಕಾರ ಅಥವಾ ರಿಸರ್ವ ಬ್ಯಾಂಕಿನಂಥ ಕೇಂದ್ರ ಬ್ಯಾಂಕು ಬಡ್ಡಿ ದರ ಹೆಚ್ಚು ಮಾಡಿದರ ಸಾಲಗಳು ದುಬಾರಿಯಾಗಿ ಯಾರೂ ತೊಗೊಳ್ಳಲಾರದಂತಾಗಿ, ಅಥವಾ ತೊಗೊಂಡವರು ವಾಪಸು ಕೊಡಲಿಕ್ಕೆ ಆಗಲಾರದಂತಾಗಿ ವ್ಯಾಪಾರ -ವ್ಯವಹಾರಕ್ಕೆ ತೊಂದರೆ ಆಗಬಹುದು. ಬಡ್ಡಿ ದರ ಕಮ್ಮಿ ಮಾಡಿದರ ಹಣದುಬ್ಬರ ಹೆಚ್ಚಾಗಿ ಜನ ಏನನ್ನೂ ಖರೀದಿ ಮಾಡದಂಗಾಗಬಹುದು, ಮಾಡಿದರ ಅವರ ಉಳಿತಾಯ ಕರಗಬಹುದು.

ಈ ವರ್ಷ ಏನಾಗೇದಪಾ ಅಂದರ ಪ್ರವಾಹ- ಬರಗಾಲದಿಂದ ಕೃಷಿ ಉತ್ಪನ್ನ ಕಮ್ಮಿ ಆಗೇದ. ಇದರಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗೇದ. ಇದು ಕೇಂದ್ರದ ಹೊಸ ಆಮದು ನೀತಿಯಿಂದ ಕಮ್ಮಿ ಆದರ, ಅಥವಾ ಆರ್ಥಿಕ ಬೆಳವಣಿಗೆ ಮುಂದಿನ ಎರಡು – ಮೂರು ತಿಂಗಳಲ್ಲಿ ಹೆಚ್ಚಿದರ ಜಡದುಬ್ಬರದ ಬರೋ ಸಾಧ್ಯತೆ ಕಮ್ಮಿ ಆಗಬಹುದು. ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಮಂಡಳಿ ಅವರು ಈಗಿನ ಹಣದುಬ್ಬರ ಕಮ್ಮಿ ಆಗತದ ಅಂತ ಹೇಳ್ಯಾರ.

ದೇಶದ ವರಮಾನ ಅಷ್ಟೇ ಉಳದು ಅಥವಾ ಕಮ್ಮಿ ಆಗುವಾಗ ಖರ್ಚು ಜಾಸ್ತಿ ಆದಂಗನ, ಪ್ರತಿ ಗೃಹಸ್ಥನ ಪರಿಸ್ಥಿತಿನೂ ಆಗಬಹುದು. ಅವನ ನೌಕರಿಗೆ ಖತರಾ ಬಂದು, ಯಾವಾಗ ಕೆಲಸ ಕಳಕೋತೇನಿ ಅನ್ನುವ ಹೆದರಿಕೆಯೊಳಗ ಇರೋವಾಗ, ಅಥವಾ ಅವನಿಗ ವಾರ್ಷಿಕ ಬಡ್ತಿ ಸಿಗಲಾರದೇ, ಸಂಬಳ ಹೆಚ್ಚಾಗಲಾರದೇ ಇದ್ದು, ವಸ್ತುಗಳ ಬೆಲೆ ಜಾಸ್ತಿ ಆಗತಾ ಹೋದರ ಅವನು ಬರೇ ಊಟ, ಮನಿ ಬಾಡಗಿ, ಅರವಿ- ಅಂಚಡಿ, ಸಾಲಿ ಫೀಸು ಇಷ್ಟ ಖರ್ಚು ಮಾಡತಾ ಹೋದಾ ಅಂದರ ಅವನು ದೇಶದ ಆರ್ಥಿಕ ಪರಿಸ್ಥಿತಿಗೆ ಯಾವ ಕೊಡುಗೆ ಕೊಡಲಾರ.

ಹೊಸ ಬಂಡವಾಳ ದೇಶಕ್ಕೆ ಬರಲಾರದು, ಹೊಸ ಉದ್ಯೋಗ ಸೃಷ್ಟಿ ಆಗಲಾರವು. ಜನರ ಕೈಯೊಳಗ ದುಡ್ಡು ನಿಲ್ಲಂಗಿಲ್ಲ. ಜನ ಬ್ಯಾಂಕಿನೊಳಗ, ಷೇರು ಮಾರುಕಟ್ಟೆಯೊಳಗ ಉಳಿತಾಯ ಮಾಡಿದರ ಅದಕ್ಕ ಬೇಕಷ್ಟು ಬಡ್ಡಿ ಬರಂಗಿಲ್ಲ.

ಜಡದುಬ್ಬರವನ್ನ ಸರಕಾರಗಳು ಕಮ್ಮಿ ಮಾಡಲಿಕ್ಕೆ ಕ್ರಮ ಕೈಕೊಳ್ಳಬೇಕು. ಸರಿಯಾದ ನೀತಿ ಪಾಲಿಸಿ ಮತ್ತ ಬರಲಾರದ ಹಂಗ ನೋಡಿಕೊಳ್ಳಬೇಕು. ಇಲ್ಲದಿದ್ದರ ಅನೇಕ ವರ್ಷಗಳ ಬೆಳವಣಿಗಿ ಹೊಳಿಯೊಳಗ ಹುಣಸೀಹಣ್ಣು ತೊಳದಂಗ ಆಗಿ ಬಿಡತದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...