Homeಮುಖಪುಟವಾಟ್ಸ್‌ಅಪ್‌ ವಂಚನೆ ಜಾಲ: ನಾಲ್ವರು ಖದೀಮರು ಅರೆಸ್ಟ್‌

ವಾಟ್ಸ್‌ಅಪ್‌ ವಂಚನೆ ಜಾಲ: ನಾಲ್ವರು ಖದೀಮರು ಅರೆಸ್ಟ್‌

ಯೂಟ್ಯೂಬ್‌ ವಿಡಿಯೊ ಲೈಕ್ ಮಾಡಿದರೆ ದುಡ್ಡುಕೊಡುತ್ತೇವೆ ಎನ್ನುವ ಸಂದೇಶಗಳ ಕುರಿತು ಎಚ್ಚರವಿರಲಿ!

- Advertisement -
- Advertisement -

ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡಿದರೆ ದುಡ್ದು ಕೊಡುತ್ತೇವೆ, ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ಸಿಗುತ್ತದೆ ಎಂಬ ಭರವಸೆ ನೀಡಿ ವಾಟ್ಸ್‌ಅಪ್‌ ಮೂಲಕ ದೇಶಾದ್ಯಂತ ಜನರನ್ನು ವಂಚಿಸುತ್ತಿದ್ದ ಗ್ಯಾಂಗ್‌ನ ನಾಲ್ವರನ್ನು ಮುಂಬೈನ ಚುನಭಟ್ಟಿ ಪೊಲೀಸರು ಬಂಧಿಸಿದ್ದಾರೆ.

“ಅರೆಕಾಲಿಕ ಉದ್ಯೋಗದ ಆಫರ್‌ ಬಂದಿತ್ತು, ಯೂಟ್ಯೂಬ್ ವಿಡಿಯೊಗಳನ್ನು ಲೈಕ್‌ ಮಾಡಿದರೆ ಹಣ ಕೊಡುವುದಾಗಿ ಹೇಳಿದ್ದರು” ಎಂದು ಮಾರ್ಚ್‌ನಲ್ಲಿ ದಾಖಲಾದ ದೂರಿನಲ್ಲಿ ಮಹಿಳೆಯೊಬ್ಬರು ವಿವರಿಸಿದ್ದಾರೆ.

ಮೆಸೇಜ್‌ ಕಳಿಸಿದವರು ಈ ಮಹಿಳೆಗೆ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಕೊಳ್ಳಲು ಸೂಚಿಸಿದ್ದರು. ಜೊತೆಗೆ ಈ ಮಹಿಳೆಗೆ ಲಿಂಕ್‌ ಕಳುಹಿಸಿದ್ದರು. ಸದರಿ ಮಹಿಳೆಯು ಲಿಂಕ್ ಕ್ಲಿಕ್ ಮಾಡಿದಾಗ, ಅದು ಮತ್ತೊಂದು ವೆಬ್‌ಸೈಟ್‌ಗೆ ಕರೆದೊಯ್ಯಿತು. ಬ್ಯಾಂಕ್ ವಿವರಗಳನ್ನು ಮತ್ತು ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನೀಡುವಂತೆ ಆ ವೆಬ್‌ಸೈಟ್‌ನಲ್ಲಿ ಸೂಚಿಸಲಾಗಿತ್ತು.

“ಮಹಿಳೆಗೆ ಕಳುಹಿಸಲಾದ ಯೂಟ್ಯೂಬ್ ವೀಡಿಯೊ ಲೈಕ್‌ ಮಾಡಿದ್ದಕ್ಕೆ ಪ್ರತಿ ಲೈಕ್‌ಗೆ 150 ರೂ. ನೀಡಲಾಯಿತು” ಎಂದು ವಲಯ 6ರ ಡಿಸಿಪಿ ಹೇಮರಾಜ್ ರಜಪೂತ್ ಮಾಹಿತಿ ನೀಡಿದ್ದಾರೆ.

“ನೀವು ರೂ. 1,300 ಗಳಿಸಿದ್ದೀರಿ. 7,500 ರೂ. ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಡೆಬಿಟ್ ಮಾಡಲಾಗುತ್ತದೆ ಎಂಬ ಸಂದೇಶಗಳನ್ನು ಆರೋಪಿಗಳು ಕಳುಹಿಸಿದ್ದರು. ನಂತರ ಆರೋಪಿಗಳು ರೂ. 12,000 ನಂತರ 25,000 ಮತ್ತು ರೂ. 50,000 ಹೂಡಿಕೆ ಮಾಡಲು ಹೇಳಿದರು. ಹೆಚ್ಚಿನ ಆದಾಯದ ಭರವಸೆ ನೀಡಿದರು, ಆದರೆ ಮಹಿಳೆಯು 4.3 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಹೀಗೆಯೇ ಮೋಸಹೋದ ಇನ್ನು ಮೂವರನ್ನು ಚುನಭಟ್ಟಿ ಪೊಲೀಸ್ ಠಾಣೆಯ ಸೈಬರ್ ಸೆಲ್, ತನಿಖೆಯ ಸಮಯದಲ್ಲಿ ಪತ್ತೆ ಹಚ್ಚಿದೆ. ಘಾಟ್ಕೋಪರ್‌ನ ಪಂತ್ ನಗರ, ಮಾಟುಂಗಾ ಮತ್ತು ಚುನಾಭಟ್ಟಿಯಲ್ಲಿ ಮೋಸಹೋದ ವ್ಯಕ್ತಿಗಳನ್ನು ಗುರುತಿಸಲಾಗಿದೆ.

ಪೋನ್‌ ಕರೆಗಳ ವಿವರ, ಐಪಿ ವಿಳಾಸ ಮತ್ತು ಹಣವನ್ನು ವರ್ಗಾಯಿಸಿದ ಬ್ಯಾಂಕ್ ಖಾತೆಗಳ ವಿವರಗಳನ್ನು ಬೆನ್ನು ಹತ್ತಿದ ಪೊಲೀಸರು, ಪಿಯೂಸ್ ಸೋನಿ, ರಾಜ್‌ಕುಮಾರ್ ಸೋನಿ, ಅರ್ಜುನ್ ಸೋನಿ ಮತ್ತು 17 ವರ್ಷದ ಯುವಕನನ್ನು ರಾಜಸ್ಥಾನದ ಅಲ್ವಾರ್‌ನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. 30 ಫೋನುಗಳು ಮತ್ತು 30 ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 97 ಲಕ್ಷ ರೂ.ಗಳೊಂದಿಗೆ 24 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ.

ವಾಟ್ಸ್‌ಅಪ್‌ ಮೂಲಕ ಹೇಗೆ ವಂಚಿಸುತ್ತಾರೆ?

ಸಾಮಾಜಿಕ ಮಾಧ್ಯಮಗಳನ್ನು ಬಳಸಿ ವಂಚನೆ ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಈ ವಂಚನೆಯ ಜಾಲಗಳು ಕಾಲಕಾಲಕ್ಕೆ ಹೊಸ ಹೊಸ ರೂಪದಲ್ಲಿ ಬರುತ್ತವೆ. ಈಗ ಯೂಟ್ಯೂಬ್‌ ವಿಡಿಯೊ ಲೈಕ್ ಮಾಡಿದರೆ ಹಣ ನೀಡುತ್ತೇವೆ ಎಂಬ ಆಮಿಷದೊಂದಿಗೆ ವಂಚನೆಯ ಜಾಲ ಹಬ್ಬುತ್ತಿದೆ.

ಉದ್ಯೋಗ ಕಡಿತದಿಂದಲೋ ಅಥವಾ ಉದ್ಯೋಗವಕಾಶಗಳಿಲ್ಲದೆಯೋ ತೊಂದರೆ ಸಿಲುಕಿರುವವರು ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ವಿಡಿಯೊವನ್ನು ಲೈಕ್ ಮಾಡಿದರೆ, ತಲಾ ಒಂದು ಲೈಕ್‌ಗೆ 50 ರೂಪಾಯಿ ನೀಡುತ್ತೇವೆ ಎಂಬ ಆಮಿಷದೊಂದಿಗೆ ಸ್ಕ್ಯಾಮರ್‌ಗಳು (ವಂಚಕರು) ನಿಮ್ಮನ್ನು ಸಂಪರ್ಕಿಸುತ್ತಾರೆ, ಈ ಕುರಿತು ಎಚ್ಚರ ವಹಿಸಬೇಕಿದೆ. ಇಲ್ಲವಾದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ ಗೋತಾ ಹೊಡೆಯುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ‘ದಿ ಎಕನಾಮಿಕ್ ಟೈಮ್ಸ್‌’ ವರದಿ ಮಾಡಿದೆ.

ದಿನಕ್ಕೆ ರೂ. 5000ವರೆಗೆ ನೀವು ಗಳಿಸಬಹುದು ಎಂಬ ಆಮಿಷದೊಂದಿಗೆ ವಾಟ್ಸ್‌ಅಪ್‌, ಲಿಂಕ್ಡ್‌ಇನ್‌ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ವಂಚಕರು ನಿಮ್ಮನ್ನು ಸಂಪರ್ಕಿಸುತ್ತಾರೆ. ಪಾವತಿಯನ್ನು ಮುಂದುವರಿಸಲು, ಅವರು ಆಗಾಗ್ಗೆ ವೈಯಕ್ತಿಕ ಮಾಹಿತಿಯನ್ನು ನೀಡುವಂತೆ ಕೋರುತ್ತಾರೆ. ಸಾಂದರ್ಭಿಕವಾಗಿ ನಿಮ್ಮೊಂದಿಗೆ ವ್ಯವಹರಿಸುತ್ತಾ ಅಸ್ತಿತ್ವದಲ್ಲಿಯೇ ಇಲ್ಲದಿರುವ ಉದ್ಯೋಗಕ್ಕೆ ಪ್ರವೇಶ ಪಡೆಯುವಂತೆ ಅವರು ನಿಮ್ಮನ್ನು ಕಾಡಲಾರಂಭಿಸುತ್ತಾರೆ.

ಈ ವಂಚಕರು ಹೇಗೆ ಕಾರ್ಯನಿರ್ವಹಿಸುತ್ತಾರೆ?

ಕೆಲವೇ ಕೆಲವರಿಗೆ ಉದ್ಯೋಗವಕಾಶಗಳಿವೆ ಎಂಬ ಮಾಹಿತಿಯೊಂದಿಗೆ ವಂಚಕರು ನಿಮಗೆ ಸಂದೇಶ ಕಳುಹಿಸುವ ಮೂಲಕ ಸಂಪರ್ಕ ಸಾಧಿಸುತ್ತಾರೆ. ನಿಮ್ಮ ಉದ್ಯೋಗವನ್ನು ಕಾಯ್ದಿರಿಸಲು ನೀವು ಪ್ರತಿಕ್ರಿಯಿಸಬೇಕಾಗುತ್ತದೆ.

ಬಲಿಪಶುವಾಗಲಿರುವ ವ್ಯಕ್ತಿ, “ಏನು ಕೆಲಸ?” ಎಂದು ಕೇಳಿದಾಗ, “ನೀವು ಇಲ್ಲಿ ಮಾಡಬೇಕಾಗಿರುವ ಕೆಲಸವಿಷ್ಟೇ. ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಲೈಕ್ ಮಾಡಬೇಕು. ನೀವು ಲೈಕ್ ಮಾಡಿದ ಪ್ರತಿ ವಿಡಿಯೊಗೆ ರೂ. ಐವತ್ತು ರೂಪಾಯಿ ಪಾವತಿಸುತ್ತೇವೆ” ಎಂದು ವಂಚಕರು ತಿಳಿಸುತ್ತಾರೆ.

ಈ ಮಾದರಿಯಲ್ಲಿ ನಿಮಗೆ ಸಂದೇಶ ಬರುತ್ತವೆ

ನಕಲಿ ಖಾತೆಗಳ ಮೂಲಕ ಬೋಟ್ ಫಾರ್ಮ್‌ಗಳನ್ನು ಬಳಸಿಕೊಂಡು ನಕಲಿ ಯೂಟ್ಯೂಬ್‌ ಲೈಕ್‌ಗಳನ್ನು ಸೃಷ್ಟಿಸುವುದು ಈ ವಂಚಕರ ವ್ಯವಹಾರ ಮಾದರಿಯಾಗಿದೆ. ಆದರೆ, ಈ ಮಾಹಿತಿಯ ಕೊರತೆಯಿಂದ ಜನರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

ಜಾಗತಿಕ ಸಾಮಾಜಿಕ ಮಾಧ್ಯಮ ಅಥವಾ ಇಂಟರ್ನೆಟ್ ಕಂಪನಿಯಲ್ಲಿ ನಮ್ಮ ಕೆಲಸ ನಡೆಯುತ್ತಿದೆ ಎಂದು ನಿಮ್ಮನ್ನು ನಂಬಿಸಲು ಈ ವಂಚಕರು ಪ್ರಯತ್ನಿಸುತ್ತಾರೆ.

ಹೀಗೆ ನಿಮ್ಮನ್ನು ಸಂಪರ್ಕಿಸಿದವರು 150 ರೂಪಾಯಿಯಂತಹ ಸಣ್ಣ ಮೊತ್ತವನ್ನು ಮೊದಲು ನಿಮಗೆ ನೀಡುತ್ತಾರೆ. “ಮೂರು ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿ” ಈ ಹಣವನ್ನು ನಿಮಗೆ ಪಾವತಿಸಿರುತ್ತಾರೆ. ಅವರು ನಿಮಗೆ ಮೂರು ಯೂಟ್ಯೂಬ್‌ ವೀಡಿಯೊಗಳ ಲಿಂಕ್‌ಗಳನ್ನು ಕಳುಹಿಸುತ್ತಾರೆ, ಅವುಗಳನ್ನು ಲೈಕ್‌ ಮಾಡುವಂತೆ ಕೇಳುತ್ತಾರೆ. ನಂತರ ನೀವು ಲೈಕ್‌ ಮಾಡಿರುವ ಸಾಕ್ಷಿಗಾಗಿ ಸ್ಕ್ರೀನ್‌ಶಾಟ್ ಕಳುಹಿಸುವಂತೆ ತಿಳಿಸುತ್ತಾರೆ.

ಈ ಸ್ಕ್ಯಾಮ್‌ ನಂತರದಲ್ಲಿ ಎರಡನೇ ಹಂತಕ್ಕೆ ಹೋಗುತ್ತದೆ. ಇಲ್ಲಿಂದ ನೀವು ತೊಂದರೆ ಸಿಲುಕಿಕೊಳ್ಳಲು ಆರಂಭಿಸುತ್ತೀರಿ. “ನಿಮಗೆ ಹಣ ವರ್ಗಾವಣೆ ಮಾಡಲು ತೊಂದರೆಯಾಗುತ್ತಿದೆ” ಎಂಬ ಉತ್ತರವನ್ನು ಅವರು ನೀಡುತ್ತಾರೆ. ನಿಮಗೆ ಹಣ ವರ್ಗಾಯಿಸಲು ಸುಲಭವಾಗುವಂತೆ ಅಪ್ಲಿಕೇಷನ್‌ ಒಂದನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿಮ್ಮಲ್ಲಿ ತಿಳಿಸುತ್ತಾರೆ.

ಈ ಅಪ್ಲಿಕೇಷನ್‌ ಇದೆಯಲ್ಲ- ಅದರ ಮೂಲಕ ನಿಮ್ಮ ಮೊಬೈಲ್‌ ಅಥವಾ ಇನ್ನ್ಯಾವುದೇ ಡಿವೈಸ್‌ ಒಳಗೆ ಈ ವಂಚಕರು ಸುಲಭವಾಗಿ ಪ್ರವೇಶಿಸುತ್ತಾರೆ. ಇದು ಒಂದು ರೀತಿಯಲ್ಲಿ ಮಾಲ್‌ವೇರ್‌ ಸಾಫ್ಟ್‌ವೇರ್‌ ಆಗಿದೆ. ನಿಮಗೆ ಹಣವನ್ನು ಪಾವತಿಸುವ ಕನ್ಫರ್ಮೇಷನ್‌ಗಾಗಿ ಒಂದು ರೂಪಾಯಿ ಕಳಿಹಿಸಲು ಸೂಚಿಸುತ್ತಾರೆ. ಈ ಹಣ ಪಡೆಯುವುದು ಪರಿಶೀಲನೆಗಾಗಿಯಷ್ಟೇ ಎಂದು ನಂಬಿಸುತ್ತಾರೆ. ನೀವಿಷ್ಟು ಮಾಡಿದರೆ ಸಾಕು, ನಿಮ್ಮ ಒಟಿಪಿಗಳಿಗೆ, ಇಮೇಲ್‌ಗೆ, ಬ್ಯಾಂಕ್‌ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ಗೆ ಸಂಪೂರ್ಣವಾಗಿ ಪ್ರವೇಶವನ್ನು ಅವರು ಪಡೆಯುತ್ತಾರೆ. ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ಖೋತಾ ಹೊಡೆಯುತ್ತದೆ.

ಇದನ್ನೂ ಓದಿರಿ: ‘ಎದ್ದೇಳು ಕರ್ನಾಟಕ’ ಅಭಿಯಾನಕ್ಕೆ ಕರೆ; ವಾಟ್ಸ್‌ಅಪ್‌ ಮೂಲಕ ಸಂಪರ್ಕಿಸಲು ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...

ವಾರಣಾಸಿಯಲ್ಲಿ ಆಚರಿಸುವ ಪ್ರಸಿದ್ಧ ‘ಭಸ್ಮ ಹೋಳಿ’ಗೆ ಸಂಸ್ಕೃತ ವಿದ್ವಾಂಸರು ಮತ್ತು ಕಾಶಿ ವಿದ್ವತ್ ಪರಿಷತ್ ವಿರೋಧ 

ವಾರಣಾಸಿ (ಉತ್ತರ ಪ್ರದೇಶ): ನಗರದ ಸ್ಮಶಾನ ಭೂಮಿಗಳಾದ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳಲ್ಲಿ 'ಮಸಾನೆ ಕಿ ಹೋ ಲಿ ' ನುಡಿಸುವ ಸಂಪ್ರದಾಯವನ್ನು ಸಂಸ್ಕೃತ ವಿದ್ವಾಂಸರು ಮತ್ತು ಹಿಂದೂ ಧರ್ಮಗ್ರಂಥಗಳ ತಜ್ಞರ ಪರಿಷತ್ತು...

ಮುಸ್ಲಿಮರೆಂದು ತಿಳಿದು ಮಹಿಳೆಯರಿಗೆ ವಿತರಿಸಿದ್ದ ಕಂಬಳಿ ವಾಪಸ್ ಪಡೆದ ಬಿಜೆಪಿ ಮಾಜಿ ಸಂಸದ

ಬಿಜೆಪಿಯ ಮಾಜಿ ಸಂಸದ ಸುಖ್‌ವೀರ್ ಸಿಂಗ್ ಜೌನ್‌ಪುರಿಯಾ ಅವರು, ಮುಸ್ಲಿಮರೆಂದು ಗೊತ್ತಾದ ಬಳಿಕ ಮಹಿಳೆಯರಿಗೆ ವಿತರಿಸಿದ್ದ ಕಂಬಳಿಯನ್ನು ವಾಪಸ್ ಪಡೆದಿದ್ದಾರೆ ಎಂದು ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಟಿಕರಾಮ್ ಜುಲ್ಲಿ ಭಾನುವಾರ...