Homeಕರ್ನಾಟಕಪುಲ್ವಾಮಾ: ಮೌನ ಮತ್ತು ಕಿರುಚಾಟ

ಪುಲ್ವಾಮಾ: ಮೌನ ಮತ್ತು ಕಿರುಚಾಟ

- Advertisement -
- Advertisement -

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರು ಪುಲ್ವಾಮಾ ಘಟನೆಯ ಬಗ್ಗೆ ಆಸ್ಪೋಟಿಸಿದ ಭೀಕರ ಸತ್ಯವು ಎರಡು ಕಾರಣಗಳಿಂದ ಕರ್ನಾಟಕದಲ್ಲಿ ಚರ್ಚೆಗೆ ಒಳಗಾಗಲಿಲ್ಲ. ಮೊದಲನೆಯದು ಕರ್ನಾಟಕದ ಚುನಾವಣೆಯ ಗದ್ದಲ. ಎರಡನೆಯದು ಬಹುತೇಕ ಮಾರಾಟವಾಗಿರುವ ಮತ್ತು ಮತೀಕರಣಗೊಂಡಿರುವ ಮಾಧ್ಯಮಗಳು, ಇದರ ಚರ್ಚೆಯಲ್ಲಿ ಆಸಕ್ತಿ ತೋರದೆ ಹೋಗಿರುವುದು. ಈ ಚರ್ಚೆ ಮಾಡಿದರೆ, ತಾವು ಬೆಂಬಲಿಸುವ ಪಕ್ಷ ಮತ್ತು ಸರ್ಕಾರಗಳೇ ದೋಷದ ಕಟಕಟೆಯಲ್ಲಿ ನಿಂತುಬಿಡುವುದೆಂದು ಅವುಗಳಿಗೆ ತಿಳಿದಿರುವುದು. ಮೂರನೆಯದು ಜನರೂ ಈ ಬಗ್ಗೆ ಸಂವೇದನಾಶೀಲತೆ ಕಳೆದುಕೊಂಡಿರುವುದು.

ಸತ್ಯಪಾಲ್ ಮಲಿಕ್, (ಅವರ ಹೆಸರಲ್ಲಿ ಸತ್ಯ ಎಂಬ ಶಬ್ದವಿರುವುದು ಮಾರ್ಮಿಕ) ತಮ್ಮ ‘ದಿ ವೈರ್’ ಸಂದರ್ಶನದಲ್ಲಿ ಬಾಯಿಬಿಟ್ಟಿರುವ ಎರಡು ಸಂಗತಿಗಳೆಂದರೆ, 1. ನಮ್ಮ ಸೈನಿಕರನ್ನು ಪುಲ್ವಾಮಾದ ನಿರ್ದಿಷ್ಟ ರಸ್ತೆಯಲ್ಲಿ ಸಾಗಿಸುವುದು ಅಪಾಯಕರ; ಆಕ್ರಮಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರೂ, ಅವರನ್ನು ಸಾಗಿಸಲು ಯಾವುದೇ ವಿಮಾನವನ್ನು ಒದಗಿಸಲಿಲ್ಲ. 2. ಪುಲ್ವಾಮಾ ದುರಂತದಲ್ಲಿ 40 ಸೈನಿಕರು ಜೀವ ಕಳೆದುಕೊಂಡ ಬಳಿಕ, ಇದು ಸರ್ಕಾರದ ಪ್ರಮಾದದಿಂದಾದ ದುರಂತ ಎಂದು ಪ್ರಧಾನಮಂತ್ರಿಯವರಿಗೆ ಹೇಳಿದಾಗ, ಅವರು ನೀನು ಈ ಬಗ್ಗೆ ಮಾತಾಡಬೇಡ, ಸುಮ್ಮನಿರು ಎಂದು ಬಾಯಿ ಮುಚ್ಚಿಸಿದರು ಎಂಬುದು.

ಈ ಸಂಗತಿಗಳು ದಿಟವೇ ಆಗಿದ್ದರೆ ಎರಡು ಸಂಶಯಗಳಿಗೆ ಅನುವು ಮಾಡಿಕೊಡುತ್ತಿದೆ. 1. ಅವು ಚುನಾವಣೆಯ ದಿನಗಳಾಗಿದ್ದರಿಂದ, ಸರ್ಕಾರವು ಈ ದುರ್ಘಟನೆ ಆಗುವುದಕ್ಕೆ ಅನುವು ಮಾಡಿಕೊಟ್ಟಿತ್ತು. 2. ದುರ್ಘಟನೆ ಆದ ಬಳಿಕ ಅದರ ಭಾವನಾತ್ಮಕ ಫಾಯದೆಯನ್ನು ಎತ್ತಿಕೊಂಡು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬಯಸಿತ್ತು. ಈ ಶಂಕೆಗೆ ಪೂರಕವಾದ ಸಂಗತಿಯೆಂದರೆ, ಬಿಜೆಪಿಯ ಬೆಂಬಲಿಗ ಮಾಧ್ಯಮಕರ್ತನಾದ ಆರ್ನಾಬ್, ಪುಲ್ವಾಮಾ ಘಟನೆಯ ಸುದ್ದಿ ಬಂದಾಗ ಸಂತೋಷದಿಂದ ಕೇಕೆ ಹಾಕುವಂತಹ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದು. ಹೀಗೆ ಈ ಪ್ರಕರಣದಲ್ಲಿ ಗುಪ್ತವಾದ ಮೌನ ಮತ್ತು ಕೇಕೆಯ ಎರಡು ಆಯಾಮಗಳಿವೆ.

ನನಗೆ ಈ ಸಂದರ್ಶನದಲ್ಲಿ ಎದ್ದು ಕಂಡ ಸಂಗತಿಯೆಂದರೆ, ಈ ಆಸ್ಫೋಟಕ ಸತ್ಯವನ್ನು ಹೇಳುವಾಗ, ಮೂಲತಃ ಬಿಜೆಪಿಯಿಂದ ಬಂದವರಾದ ಸತ್ಯಪಾಲ್ ಮಲಿಕರ ಮುಖದಲ್ಲಿ ಕಂಡ ವಿಷಾದಕರ ದೃಢತೆ. ಪ್ರಭುತ್ವಕ್ಕೆ ಅಪ್ರಿಯವಾದ ಸತ್ಯವನ್ನು ಹೇಳುವವರಲ್ಲಿ ಇಂದು ಹಲವು ನ್ಯಾಯಾಧೀಶರು ಅಧಿಕಾರಿಗಳು ಎದುರಾಳಿಗಳು ಕೊಲೆಯಾಗುತ್ತಿರುವ ಸನ್ನಿವೇಶದಲ್ಲಿ, ಸಂವಿಧಾನದ ಪ್ರತಿನಿಧಿಯಾಗಿದ್ದ ಒಬ್ಬ ರಾಜ್ಯಪಾಲ ಈ ಭೀಕರವಾದ ಸತ್ಯವನ್ನು ಬಹಿರಂಗಗೊಳಿಸುತ್ತಿದ್ದಾರೆ. ಬಹಿರಂಗಗೊಳಿಸಿದ ಬಳಿಕ ಬರಲಿರುವ ಪರಿಣಾಮಗಳ ಬಗ್ಗೆ ತಿಳಿದಿದ್ದರೂ ಹೆದರದೆ ಹೇಳುತ್ತಿದ್ದಾರೆ. ಸತ್ಯಪಾಲರು ಈ ಹಿಂದೆ ಕೂಡ ಸರ್ಕಾರವು ರೈತವಿರೋಧಿ ಕಾಯಿದೆಗಳನ್ನು ತಂದಾಗ ಇದು ತಪ್ಪು ಎಂದು ರಾಜ್ಯಪಾಲ ಪದವಿಯಲ್ಲಿದ್ದೇ ಹೇಳಿದವರು. ಅವರ ಈ ಸತ್ಯವನ್ನು ಬಲಿಷ್ಠ ಪ್ರಭುತ್ವಕ್ಕೆ ಮುಖದ ಮೇಲೆ ಹೇಳುವ ಈ ದೃಢತೆಯು ಪಂಪಭಾರತದಲ್ಲಿ ಕರ್ಣನ ರಹಸ್ಯವನ್ನು ದುರ್ಯೋಧನನಿಗೆ ಹೇಳುವ ಸತ್ಯಂತಪ ಋಷಿಯ ಪ್ರಕರಣವನ್ನು ನೆನಪಿಸುತ್ತದೆ. ದ್ರೌಪದಿಗೆ ಮಾಡುವ ಅಪಮಾನ ಮತ್ತು ಬರಲಿರುವ ಯುದ್ಧದಿಂದ ಆಗುವ ಅನಾಹುತವನ್ನು ಚಕ್ರವರ್ತಿ ದುರ್ಯೋಧನನಿಗೂ, ಅದಕ್ಕೆ ನೈತಿಕವಾಗಿ ಬೆಂಬಲಕೊಟ್ಟ ಧೃತರಾಷ್ಟ್ರನಿಗೂ, ಕೌರವ ಪಕ್ಷದಲ್ಲೇ ಇದ್ದ ಸಂಜಯ ಮತ್ತು ವಿದುರರು ಹೇಳುವ ಪ್ರಸಂಗಗಳನ್ನು ಸಹ ನೆನಪಿಸುತ್ತದೆ. ವಾಸ್ತವವಾಗಿ ಆಳುವ ಸರ್ಕಾರಗಳು ಜನಬೆಂಬಲ ಗಳಿಸಲು ದೇಶಕ್ಕೆ ಹಾನಿಯಾಗುವಂತಹ ಕಾರ್ಯ ಮಾಡಿದರೆ, ಅದು ತಪ್ಪೆಂದು ಸುದ್ದಿಮಾಧ್ಯಮಗಳು ಅಧಿಕಾರಕ್ಕೆ ಸತ್ಯವನ್ನು ನುಡಿಯಬೇಕು. ಆದರೆ ಈ ಪ್ರಸಂಗದಲ್ಲಿರುವ ವೈರುಧ್ಯವೆಂದರೆ, ಪ್ರಭುತ್ವದ ಪಿತೂರಿ ಮತ್ತು ದೇಶಕ್ಕಾಗುವ ನಷ್ಟವನ್ನು ಆಳುವ ಪಕ್ಷದಲ್ಲಿರುವ ವ್ಯಕ್ತಿಯೇ ಹೇಳಿದ್ದು ಮತ್ತು ಪತ್ರಕರ್ತರು ಇದನ್ನು ಹೇಳದೆ ಹೋಗಿದ್ದು. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳನೋಡುವ, ಬಡ ಕುಟುಂಬಗಳಿಂದ ಹೋದ ಸೈನಿಕರನ್ನು ಬಲಿಗೊಟ್ಟು ಅಧಿಕಾರ ಉಳಿಸಿಕೊಳ್ಳುವ ಈ ನೀತಿಯು, ಹೃದಯಹೀನತೆ ಮಾತ್ರವಲ್ಲ, ಅದನ್ನು ಮುಚ್ಚಿಟ್ಟು ಭಾರತದ ಮಾಧ್ಯಮಗಳ ಅಪ್ರಾಮಾಣಿಕತೆ ಕ್ರೌರ್ಯವೂ ಆಗಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ

ಜಗತ್ತಿನಾದ್ಯಂತ ಆಳುವ ಪ್ರಭುತ್ವಗಳು, ತಮ್ಮ ಹಿತಾಸಕ್ತಿಗಾಗಿ ಸೈನಿಕರನ್ನು ಬಲಿಗೊಡುವ ರಾಜಕಾರಣಕ್ಕೆ ಸುದೀರ್ಘ ಚರಿತ್ರೆಯಿದೆ. ಸಾಮಾನ್ಯವಾಗಿ ಅವು ಬಡವರ ರೈತರ ಕೂಲಿಕಾರರ ಮಕ್ಕಳನ್ನು ಸೈನ್ಯಕ್ಕೆ ನೇಮಿಸಿಕೊಳ್ಳುತ್ತಿದ್ದವು. ಅವರಿಗೆ ಒಂದು ಶತ್ರುವನ್ನು ಕಟ್ಟಿಕೊಡುತ್ತಿದ್ದವು. ಶತ್ರುವಿನ ವಿರುದ್ಧ ಹೋರಾಡುವುದು ಧರ್ಮಕ್ಕೆ ಜನಾಂಗಕ್ಕೆ ರಾಷ್ಟ್ರಕ್ಕೆ ಸಲ್ಲಿಸುವ ಪವಿತ್ರ ಕರ್ತವ್ಯ ಎಂದು ನಂಬಿಸುತ್ತಿದ್ದವು. ಒಂದೊಮ್ಮೆ ಹೋರಾಟದಲ್ಲಿ ಸಾವು ಸಂಭವಿಸಿದರೆ ಅದು ದೈವಸ್ವರೂಪಿಯಾದ ದೊರೆಯ ಧರ್ಮದ ದೇಶದ ಜನಾಂಗದ ರಕ್ಷಣೆಗೆ ಸಲ್ಲಿಕೆಯಾದ ಬಲಿದಾನ ಎಂದು ವೈಭವೀಕರಿಸುತ್ತಿದ್ದವು. ಊಳಿಗಮಾನ್ಯ ರಾಜಪ್ರಭುತ್ವಗಳಲ್ಲಿ ಮಾಡಲಾಗುವ ಈ ಸೈನಿಕ ರಾಜಕಾರಣವು ಪ್ರಜಾಪ್ರಭುತ್ವದಲ್ಲೂ ನಡೆಯುತ್ತದೆ ಎನ್ನುವುದೇ ದುರಂತದ ಸಂಗತಿ. ಇದಕ್ಕೆ ಪೂರಕವಾಗಿ ನಮ್ಮ ರಾಜಕೀಯ ಪಕ್ಷಗಳ ಹೆಸರಲ್ಲಿ ಸೇನೆ ದಳ ಎಂಬ ಸೈನಿಕ ಶಬ್ದಗಳೂ ಇವೆ. ಸಾಲದೆಂಬಂತೆ, ಜನರು ತಮ್ಮ ಜತೆ ವಾಸಿಸುವ ಸಹನಾಗರಿಕರನ್ನು ಧರ್ಮ ಭಾಷೆ ಸಂಸ್ಕೃತಿ ಆಹಾರದ ಭಿನ್ನತೆಗಾಗಿ ದ್ವೇಷಿಸುವ, ಕೊಲ್ಲುವ ಅರೆಸೈನಿಕರೂ ಆಗುತ್ತಿರುವುದು ಈ ಯುಗಧರ್ಮದ ದುರಂತ.

ಜರ್ಮನಿ ಪಾಕಿಸ್ತಾನ ಅಮೆರಿಕ ಭಾರತವನ್ನು ಒಳಗೊಂಡಂತೆ, ಯಾವತ್ತೂ ಬಲಪಂಥೀಯ ಪ್ರಭುತ್ವಗಳು ತಮ್ಮ ದುರಾಡಳಿತದಿಂದ ಚುನಾವಣೆ ಸೋಲುವ ಮತ್ತು ಜನಪ್ರಿಯತೆ ತೀವ್ರವಾಗಿ ಕುಗ್ಗಿದ್ದ ಸನ್ನಿವೇಶದಲ್ಲಿ ಯುದ್ಧ ಕೊಲೆ ಹೆಣ ರಕ್ತ ಸಾವುಗಳನ್ನು ಬಯಸುತ್ತವೆ. ಆ ಸಾವು ಸೈನಿಕರದಾಗಿರಬಹುದು, ಪಕ್ಷದ ಕಾರ್ಯಕರ್ತರದಾಗಿರಬಹುದು, ಇಲ್ಲವೇ ಪ್ರಜೆಗಳದ್ದಾಗಿರಬಹುದು. ಇವು ಬಲಪಂಥೀಯ ರಾಷ್ಟ್ರೀಯತೆಗೆ ಯಾವಾಗಲೂ ಪ್ರಬಲವಾದ ಅಸ್ತ್ರಗಳು. ಹೀಗಾಗಿಯೇ ಈಗಲೂ ಚುನಾವಣೆ ಸನ್ನಿವೇಶದಲ್ಲಿ ಆಗುವ ನಿರ್ದಿಷ್ಟ ಧರ್ಮದ ವ್ಯಕ್ತಿಯ ಕೊಲೆ, ಚುನಾವಣೆಯ ಫಲಿತಾಂಶವನ್ನೇ ಬದಲಿಸುತ್ತದೆ. ಕವಿಯೊಬ್ಬ ಹೇಳಿದಂತೆ ‘ರಾಜಕೀಯ ನಾಯಕರು ಧರ್ಮ ದೇಶ ಖತರೇಮೇ ಹೈ ಎಂದು ಬೊಬ್ಬೆ ಹಾಕುತ್ತಿದ್ದಾರಾ? ಹಾಗಿದ್ದಲ್ಲಿ ಬಹುಶಃ ಚುನಾವಣೆಗಳು ಬಂದಿರಬೇಕು’ ಎಂಬುದು ಇಂದಿಗೂ ವಾಸ್ತವವೇ. ತಮ್ಮದೇ ದೇಶದ ಜನರನ್ನು ದಮನಿಸಿ, ಸೈನಿಕರನ್ನು ಯುದ್ಧಕ್ಕೆ ಮತ್ತಿತರ ಅಪಾಯಕ್ಕೆ ದೂಡಿ, ಕೊಲ್ಲಿಸಿ, ತಾನು ಅಧಿಕಾರ ಜನಪ್ರಿಯತೆ ಅನುಭವಿಸುವ ಈ ಸಂಸ್ಕೃತಿ ಪ್ರಜಾಪ್ರಭುತ್ವದ ಘೋರವಾದ ಸತ್ಯವಾಗಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...